ಬೆಂಗಳೂರು ವ್ಯಾಪಾರ ಕಾರಿಡಾರ್ (BBC) ಗೆ ಸಚಿವ ಸಂಪುಟದ ಅನುಮೋದನೆ
ಇದೀಗ ಸುದ್ದಿಯಲ್ಲಿದೆ:
ಎಲೆಕ್ಟ್ರಾನಿಕ್ಸ್ ಸಿಟಿಯನ್ನು ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆಯೊಂದಿಗೆ ಸಂಪರ್ಕಿಸಲು 117-ಕಿಮೀ ಉದ್ದದ ಬೆಂಗಳೂರು ವ್ಯಾಪಾರ ಕಾರಿಡಾರ್ (BBC), (ಹಿಂದೆ ನಗರದ ಹೊರಭಾಗದ ವರ್ತುಲ ರಸ್ತೆ ಎಂದು ಕರೆಯಲಾಗುತ್ತಿದ್ದ) ರಸ್ತೆಗೆ ಸಚಿವ ಸಂಪುಟದ ಅನುಮೋದನೆ ದೊರೆತಿದೆ.
ಬೆಂಗಳೂರು ವ್ಯಾಪಾರ ಕಾರಿಡಾರ್ ನ ಬಗ್ಗೆ:
ಅನುಷ್ಠಾನ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವು ಅಭಿವೃದ್ಧಿಪಡಿಸುತ್ತದೆ.
ಇದು ಎಲೆಕ್ಟ್ರಾನಿಕ್ಸ್ ಸಿಟಿಯನ್ನು ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆಯೊಂದಿಗೆ ಸಂಪರ್ಕಿಸುತ್ತದೆ.
ಪ್ರಾಮುಖ್ಯತೆ – ಮುಖ್ಯ ರಸ್ತೆಗಳ ಮೂಲಕ ಹೋಗುವ ವಾಹನಗಳ ಹೊರತಾಗಿ ಸಂಚಾರ ದಟ್ಟಣೆಯನ್ನು ವಿಭಜಿಸಿ, ಪ್ರಮುಖ ವರ್ತುಲ ಹೆದ್ದಾರಿಗಳನ್ನು ಸಂಪರ್ಕಿಸುವ ಮೂಲಕ ವಾಹನಗಳ ಸಂಚಾರ ದಟ್ಟಣೆಯನ್ನು 40% ವರೆಗೆ ಕಡಿಮೆ ಮಾಡುತ್ತದೆ; ನೈಸ್ ರಸ್ತೆಗೆ ಪರ್ಯಾಯ/ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಬೆಂಗಳೂರು ನಗರಕ್ಕೆ ನಮೋ ಭಾರತ ರೈಲುಗಳು ಬರುವ ಸಾಧ್ಯತೆ ಇದೆ.
ನಮೋ ಭಾರತ ರೈಲುಗಳ ಬಗ್ಗೆ:
ಇದು ಭಾರತದ ಮೊದಲ ಅರೆ-ಅತೀ-ವೇಗದ ಪ್ರಾದೇಶಿಕ ರೈಲು ಸೇವೆ (ಹಿಂದೆ RapidX ಎಂದು ಕರೆಯಲಾಗುತ್ತಿತ್ತು), ಇದು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಮತ್ತು ಇತರ ನಗರ ಪ್ರದೇಶಗಳಲ್ಲಿನ ನಗರಾಂತರ ಪ್ರಯಾಣವನ್ನು ವೇಗವಾಗಿ, ಆರಾಮದಾಯಕವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲು ವಿನ್ಯಾಸಗೊಳಿಸಲಾಗಿದೆ.
ಇದು ಪ್ರಸ್ತುತ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅತ್ಯಂತ ವೇಗದ ರೈಲಾಗಿದ್ದು, ಮೀಸಲಾದ ಕಾರಿಡಾರ್ಗಳಲ್ಲಿ ಗಂಟೆಗೆ 160 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸುತ್ತದೆ.
ಇದರಿಂದ ಭಾರತದ ಮೊದಲ ಪ್ರಾದೇಶಿಕ ಕ್ಷಿಪ್ರ ರೈಲು ವ್ಯವಸ್ಥೆ (RRTS) ಯ ಸೇವೆ ಪ್ರಾರಂಭವಾಯಿತು. ಆರಂಭದಲ್ಲಿ ಇದನ್ನು RapidX ಎಂಬ ಬ್ರಾಂಡ್ನಲ್ಲಿ ಪರಿಚಯಿಸಲಾಯಿತು ಮತ್ತು ಉದ್ಘಾಟನೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ನಮೋ ಭಾರತ ಎಂಬ ಹೆಸರಿನಲ್ಲಿ ಪರಿಚಯಿಸಲಾಯಿತು
ಒಂದು ಮಹತ್ವದ ಕಾರ್ಮಿಕ ಸುಧಾರಣೆಯಲ್ಲಿ, ಸೌದಿ ಅರೇಬಿಯಾ ದಶಕಗಳಷ್ಟು ಹಳೆಯದಾದ ಕಫಲಾ (ಪ್ರಾಯೋಜಕತ್ವ) ವ್ಯವಸ್ಥೆಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ.
ಕಫಲಾ (ಪ್ರಾಯೋಜಕತ್ವ) ವ್ಯವಸ್ಥೆಯ ಬಗ್ಗೆ:
ಕಫಲಾ ವ್ಯವಸ್ಥೆಯು ಸೌದಿ ಅರೇಬಿಯಾದ ಪ್ರಾಯೋಜಕರು, ಸಾಮಾನ್ಯವಾಗಿ ಅವರ ಉದ್ಯೋಗದಾತರು, ವಿದೇಶಿ ಕಾರ್ಮಿಕರಿಗೆ ಅವರ ವೀಸಾ ಮತ್ತು ಕಾನೂನು ಸ್ಥಿತಿಯನ್ನು ನಿಯಂತ್ರಿಸುವ ಅಗತ್ಯವಾಗಿತ್ತು.
ಇದರರ್ಥ ಕಾರ್ಮಿಕರು ಪ್ರಾಯೋಜಕರ ಒಪ್ಪಿಗೆಯಿಲ್ಲದೆ ಉದ್ಯೋಗಗಳನ್ನು ಬದಲಾಯಿಸಲು, ದೇಶವನ್ನು ತೊರೆಯಲು ಅಥವಾ ಅವರ ನಿವಾಸ ಪರವಾನಗಿಯನ್ನು ನವೀಕರಿಸಲು ಸಾಧ್ಯವಾಗುವುದಿಲ್ಲ.
ಸೌದಿ ಅರೇಬಿಯಾ ಈ ವ್ಯವಸ್ಥೆಯನ್ನು ಏಕೆ ರದ್ದುಗೊಳಿಸಿತು?
ಉದ್ಯೋಗದಾತರು ಸಂಬಳ ಅಥವಾ ಪಾಸ್ಪೋರ್ಟ್ಗಳನ್ನು ತಡೆಹಿಡಿದರೆ ಉದ್ಯೋಗಿಗಳಿಗೆ ಕಾನೂನುಬದ್ಧವಾಗಿ ಯಾವುದೇ ಮಾರ್ಗ ಸಿಗುವುದಿಲ್ಲವಾದ್ದರಿಂದ, ಈ ವ್ಯವಸ್ಥೆಯು ಕಾರ್ಮಿಕರ ಶೋಷಣೆ ಮತ್ತು ನಿಂದನೆಗೆ ಕಾರಣವಾಗುತ್ತದೆ ಎಂದು ಮಾನವ ಹಕ್ಕುಗಳ ಸಂಸ್ಥೆಗಳು ಬಹಳ ಹಿಂದಿನಿಂದಲೂ ವಾದಿಸುತ್ತಿವೆ.
ಈ ಸುಧಾರಣೆಯು ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ವಿಷನ್ 2030 ಕ್ಕೆ ಅನುಗುಣವಾಗಿದೆ, ಇದು ಆರ್ಥಿಕತೆಯನ್ನು ಆಧುನೀಕರಿಸುವುದು, ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದು ಮತ್ತು ತೈಲದ ಮೇಲಿನ ಸಾಮ್ರಾಜ್ಯದ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಸಾಗರ ಆಕಾಶ ಸಮರಾಭ್ಯಾಸ, 2025
ಸಾಮಾನ್ಯ ಅಧ್ಯಾಯನ -3 / ರಕ್ಷಣೆ ವ್ಯವಸ್ಥೆ
ಸಂದರ್ಭ:
ಭಾರತೀಯ ವಾಯುಪಡೆ (IAF) ಸ್ಪೇನ್ನ ಗ್ಯಾಂಡೋ ವಾಯುನೆಲೆಯಲ್ಲಿ ಸ್ಪೇನ್ನ ವಾಯುಪಡೆಯು ಆಯೋಜಿಸಿರುವ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸವಾದ ಸಾಗರ ಆಕಾಶ 2025 ರಲ್ಲಿ ಭಾಗವಹಿಸುತ್ತಿದೆ.
ಸಾಗರ ಆಕಾಶ ಸಮರಾಭ್ಯಾಸ, 2025 ರ ಬಗ್ಗೆ:
ಉದ್ದೇಶ:- ಈ ಸಮರಾಭ್ಯಾಸವು ಪರಸ್ಪರ ಕಲಿಕೆಯನ್ನು ಬೆಳೆಸುವುದು, ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು, ವಾಯು ಯುದ್ಧ ಕೌಶಲ್ಯಗಳನ್ನು ತೀಕ್ಷ್ಣಗೊಳಿಸುವುದು ಮತ್ತು ಸ್ನೇಹಪರ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಕಾರವನ್ನು ಬಲಪಡಿಸುವುದು.
ಭಾರತದ Su-30MKI ಫೈಟರ್ ಜೆಟ್ಗಳು ಸೇರಿದಂತೆ ಸ್ಪೇನ್, ಜರ್ಮನಿ, ಗ್ರೀಸ್, ಪೋರ್ಚುಗಲ್, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ನ 50 ಕ್ಕೂ ಹೆಚ್ಚು ವಿಮಾನಗಳನ್ನು ಒಟ್ಟುಗೂಡಿಸುತ್ತದೆ.
ಅರುಣಾಂಕ ಯೋಜನೆ
ಸಾಮಾನ್ಯ ಅಧ್ಯಾಯನ 3/ರಕ್ಷಣೆ ವ್ಯವಸ್ಥೆ
ಇದೀಗ ಸುದ್ದಿಯಲ್ಲಿದೆ:
ಅರುಣಾಚಲ ಪ್ರದೇಶದ ನಹರ್ಲಗುನ್ನಲ್ಲಿ ಗಡಿ ರಸ್ತೆಗಳ ಸಂಸ್ಥೆ (ಬಾರ್ಡರ್ ರೋಡ್ಸ್ ಆರ್ಗನೈಸೇಶನ್) ಯ ಯೋಜನೆ ಅರುಣಾಂಕ ತನ್ನ 18 ನೇ ಸಂಸ್ಥಾಪನಾ ದಿನವನ್ನು ಆಚರಿಸಿತು.
ಅರುಣಾಂಕ ಯೋಜನೆಯ ಬಗ್ಗೆ:
ಇದನ್ನು 2008 ರಲ್ಲಿ ಸ್ಥಾಪಿಸಲಾಯಿತು.
ಈ ಯೋಜನೆಯು 696 ಕಿ.ಮೀ.ಗೂ ಹೆಚ್ಚು ರಸ್ತೆ ಮತ್ತು 1.18 ಕಿ.ಮೀ. ಪ್ರಮುಖ ಸೇತುವೆಗಳನ್ನು ನಿರ್ಮಿಸಿದೆ, ದೂರದ ಪ್ರದೇಶಗಳಿಗೆ ಸಂಪರ್ಕವನ್ನು ಹೆಚ್ಚಿಸಿದೆ ಮತ್ತು ಸಶಸ್ತ್ರ ಪಡೆಗಳ ಕಾರ್ಯಾಚರಣೆಗಳನ್ನು ಬೆಂಬಲಿಸಿದೆ.
ಮೂಲಸೌಕರ್ಯ ಬಾಳಿಕೆ ಸುಧಾರಿಸಲು ಇದು ಉಕ್ಕಿನ ತ್ಯಾಜ್ಯ ಅವಶೇಷ, ಭೂಮಿಯ ಬಲವರ್ಧಕ ಕೋಶಗಳು ಮತ್ತು ಉಕ್ಕಿನ ಭಟ್ಟಿಯ ತ್ಯಾಜ್ಯ ಅವಶೇಷದ ಸಣ್ಣ ಕಣಗಳ ಗಟ್ಟಿಮಿಶ್ರಣದಂತಹ ಸುಸ್ಥಿರ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.
ಪರಿಸರ ಸಂರಕ್ಷಣೆಗಾಗಿ ‘ಏಕ್ ಪೆಡ್ ಮಾ ಕೆ ನಾಮ್’ ಉಪಕ್ರಮದಡಿಯಲ್ಲಿ 23,850 ಮರಗಳನ್ನು ನೆಡುವುದು ಸಹ ಸೇರಿದೆ.
ಗಡಿ ರಸ್ತೆಗಳ ಸಂಸ್ಥೆ (BRO) ಯ ಬಗ್ಗೆ:
ಇದನ್ನು 1960 ರಲ್ಲಿ ಪಂಡಿತ್ ಜವಾಹರಲಾಲ್ ನೆಹರು ಸ್ಥಾಪಿಸಿದ್ದಾರೆ.
ಉದ್ದೇಶ:- ದೇಶದ ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶಗಳಲ್ಲಿ ರಸ್ತೆಗಳ ಸಮರ್ಪಕ ರಸ್ತೆಸಂವಹನ ಜಾಲದ ತ್ವರಿತ ಅಭಿವೃದ್ಧಿಯನ್ನು ಸಂಘಟಿಸುವುದು.
ಆಡಳಿತ ನಿಯಂತ್ರಣ:- ಇದು ರಕ್ಷಣಾ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
ಮಹತ್ವ:- ಸಶಸ್ತ್ರ ಪಡೆಗಳು ತಮ್ಮ ಕಾರ್ಯತಂತ್ರದ ಅಗತ್ಯಗಳನ್ನು ಪೂರೈಸಲು ಬದ್ಧತೆ, ಸಮರ್ಪಿತ ಮತ್ತು ವೆಚ್ಚ-ಪರಿಣಾಮಕಾರಿ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಪೋಷಣೆಯನ್ನು ಬೆಂಬಲಿಸುವುದು.
ಇತ್ತೀಚಿನ ಮತ್ತು ಮುಂಬರುವ ಯೋಜನೆಗಳು : ಇದರಲ್ಲಿ ಅರುಣಾಚಲ ಪ್ರದೇಶದಲ್ಲಿ ಬಲಿಪರಾ-ಚಾರಿದೂರ್-ತವಾಂಗ್ ರಸ್ತೆಯಲ್ಲಿ ಸೆಲಾ ಸುರಂಗದ ನಿರ್ಮಾಣವೂ ಸೇರಿದೆ.
ಭಾರತೀಯ ಕರಾವಳಿ ರಕ್ಷಣಾ ಹಡಗು (ICGS) ಅಜಿತ್ ಮತ್ತು ಅಪರಾಜಿತ್
ಸಾಮಾನ್ಯ ಅಧ್ಯಾಯನ 3/ರಕ್ಷಣಾ
ಇದೀಗ ಸುದ್ದಿಯಲ್ಲಿದೆ:
ಭಾರತೀಯ ಕರಾವಳಿ ರಕ್ಷಣಾ ಪಡೆಯು, ಗೋವಾ ಬಂದರು ನಿಯಮಿತ (GSL) ನಲ್ಲಿ ಎರಡು ಸುಧಾರಿತ ವೇಗದ ಗಸ್ತು ಹಡಗುಗಳಾದ ಅಜಿತ್ ಮತ್ತು ಅಪರಾಜಿತ್ ಅನ್ನು ಪ್ರಾರಂಭಿಸಿತು.
ಭಾರತೀಯ ಕರಾವಳಿ ರಕ್ಷಣಾ ಹಡಗು (ICGS) ಅಜಿತ್ ಮತ್ತು ಅಪರಾಜಿತ್ ಬಗ್ಗೆ:
ಈ ಹಡಗುಗಳು ದೇಶೀಯವಾಗಿ ನಿರ್ಮಿಸಲಾದ ಎಂಟು ವೇಗದ ಗಸ್ತು ಹಡಗುಗಳ ಸರಣಿಯಲ್ಲಿ ಏಳನೇ ಮತ್ತು ಎಂಟನೆಯವುಗಳಾಗಿವೆ.
ಇವುಗಳನ್ನು ಗೋವಾ ಶಿಪ್ಯಾರ್ಡ್ ಲಿಮಿಟೆಡ್ (GSL) ನಿರ್ಮಿಸಿದೆ.
ಮಹತ್ವ:- ವೇಗದ ಗಸ್ತು ಹಡಗುಗಳನ್ನು ಮೀನುಗಾರಿಕೆ ರಕ್ಷಣೆ, ಕರಾವಳಿ ಗಸ್ತು, ಕಳ್ಳಸಾಗಣೆ ವಿರೋಧಿ, ಕಡಲ್ಗಳ್ಳತನ ವಿರೋಧಿ, ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಂತಹ ಬಹು-ಗುರಿಯ ಪಾತ್ರಗಳಿಗಾಗಿ ವಿನ್ಯಾಸಗೊಳಿಸಲಾಗಿದೆ, ವಿಶೇಷವಾಗಿ ಭಾರತದ ದ್ವೀಪ ಪ್ರದೇಶಗಳು ಮತ್ತು ವಿಶೇಷ ಆರ್ಥಿಕ ವಲಯದ ಸುತ್ತಮುತ್ತ ಬಳಸಲಾಗುತ್ತವೆ.
ಭಾರತ-ಟಿಬೆಟ್ ಗಡಿ ಪೊಲೀಸ್ ಪಡೆ ಸ್ಥಾಪನಾ ದಿನ
ಸಾಮಾನ್ಯ ಅಧ್ಯಾಯನ 3/ ಭದ್ರತಾ ಸಂಸ್ಥೆಗಳು
ಇದೀಗ ಸುದ್ದಿಯಲ್ಲಿದೆ:
ಭಾರತ-ಟಿಬೆಟ್ ಗಡಿ ಪೊಲೀಸ್ ಪಡೆ (ITBP) ಯ 64 ನೇ ಸ್ಥಾಪನಾ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಭಾರತ-ಟಿಬೆಟ್ ಗಡಿ ಪೊಲೀಸ್ ಪಡೆ (ITBP) ಯ ಬಗ್ಗೆ:
ಈ ಪಡೆ ಅಕ್ಟೋಬರ್ 24, 1962 ಸ್ಥಾಪನೆಯಾಯಿತು.
ಇದು 3,488 ಕಿಲೋಮೀಟರ್ ಉದ್ದದ ಭಾರತ–ಚೀನಾ ಗಡಿಯನ್ನು ರಕ್ಷಿಸುತ್ತದೆ, ಈ ಗಡಿ ಲಡಾಖ್ನ ಕರಾಕೊರಂ ದಾಟುವಿನಿಂದ ಪ್ರಾರಂಭವಾಗಿ, ಅರುಣಾಚಲ ಪ್ರದೇಶದ ಜಾಚೆಪ್ ಲಾ ವರೆಗೆ ವಿಸ್ತರಿಸಿದೆ.
ಇದು ಛತ್ತೀಸ್ಗಢದಲ್ಲಿ ನಕ್ಸಲ್ ವಿರೋಧಿ ಕರ್ತವ್ಯಗಳು ಸೇರಿದಂತೆ ಆಂತರಿಕ ಭದ್ರತಾ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಹಲವು ಗಡಿ ಹೊರಠಾಣೆಗಳು 9,000 ರಿಂದ 18,800 ಅಡಿ ಎತ್ತರದಲ್ಲಿವೆ, ಚಳಿಗಾಲದಲ್ಲಿ ತಾಪಮಾನವು -45 ಡಿಗ್ರಿ ಸೆಲ್ಸಿಯಸ್ಗೆ ಇಳಿಯಬಹುದು .
ಪ್ರಸ್ತುತತೆ:
ಇದನ್ನು ವಿಶೇಷ ಸಶಸ್ತ್ರ ಪೊಲೀಸ್ ಪಡೆ ಎಂದು ಗುರುತಿಸಲಾಗಿದೆ.
ಇದು ತನ್ನ ಸಿಬ್ಬಂದಿಗೆ ಪರ್ವತಾರೋಹಣ, ಹಿಮದಲ್ಲಿ ಜಾರಾಟ (ಸ್ಕೀಯಿಂಗ್) ಮತ್ತು ಯುದ್ಧತಂತ್ರದ ಬಗ್ಗೆ ತರಬೇತಿ ನೀಡುತ್ತದೆ.
ಹಿಮಾಲಯ ಪ್ರದೇಶದಲ್ಲಿ ವಿಪತ್ತು ಪ್ರತಿಕ್ರಿಯೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಸಿದ್ಧತೆಯನ್ನು ಕಾಯ್ದುಕೊಳ್ಳುವುದು.
ಕ್ಯಾರಬಿಡ್ ಜೀರುಂಡೆಗಳು
ಸಾಮಾನ್ಯ ಅಧ್ಯಾಯನ -3 / ಪರಿಸರ ಅಧ್ಯಾಯನ
ಸಂದರ್ಭ:
ಇಟಲಿಯಲ್ಲಿ ನಡೆದ ಇತ್ತೀಚಿನ ಸಂಶೋಧನೆಯು ಕ್ಯಾರಬಿಡ್ ನೆಲದ ಜೀರುಂಡೆಗಳು ಮಣ್ಣಿನಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ಮಾಲಿನ್ಯದ ಸಂಭಾವ್ಯ ಜೈವಿಕ ಸೂಚಕಗಳಾಗಿ ಕಾರ್ಯನಿರ್ವಹಿಸುತ್ತವೆ.
ಕ್ಯಾರಬಿಡ್ ಜೀರುಂಡೆಗಳ ಬಗ್ಗೆ:
ಇವು ಕ್ಯಾರಬಿಡೆ ಕುಟುಂಬಕ್ಕೆ ಸೇರಿವೆ.
ಅವು ರಾತ್ರಿಯ ಪರಭಕ್ಷಕಗಳಾಗಿದ್ದು, ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ಭೂಮಿಯ ಪರಿಸರ ವ್ಯವಸ್ಥೆಗಳಲ್ಲಿ ವಾಸಿಸುತ್ತವೆ.
ಪ್ರಭೇಧಗಳ ವೈವಿಧ್ಯತೆ:- ಜಾಗತಿಕವಾಗಿ ಸುಮಾರು 34,000 ಪ್ರಭೇಧಗಳು ಮತ್ತು ಭಾರತದಲ್ಲಿ 1,000 ಕ್ಕೂ ಹೆಚ್ಚು ಪ್ರಭೇಧಗಳು ದಾಖಲಾಗಿವೆ.
ದೈಹಿಕ ಲಕ್ಷಣಗಳು: ಚಪ್ಪಟೆಯಾದ, ಉದ್ದವಾದ ದೇಹಗಳು (ಹೆಚ್ಚಾಗಿ ಗಾಢ ಅಥವಾ ಲೋಹೀಯ-ಹೊಳೆಯುವ), ಮತ್ತು ಬೇಟೆಯಾಡಲು ಎದ್ದು ಕಾಣುವ ದವಡೆಗಳು.
ಪರಿಸರದಲ್ಲಿ ಇದರ ಪಾತ್ರ:
ನೈಸರ್ಗಿಕ ಕೀಟ ನಿಯಂತ್ರಕಗಳು:– ಮರಿಹುಳುಗಳು, ಗೊಂಡೆಹುಳುಗಳು, ಗಿಡಹೇನುಗಳು, ಜೀರುಂಡೆಗಳು ಮತ್ತು ಬಸವನ ಹುಳಗಳಂತಹ ವಿವಿಧ ಕೃಷಿ ಕೀಟಗಳನ್ನು ತಿನ್ನುತ್ತವೆ.
ಮಣ್ಣಿನ ಗುಣಮಟ್ಟದ ಸೂಚಕ:- ಹೆಚ್ಚಿನ ಕ್ಯಾರಬಿಡ್ ವೈವಿಧ್ಯತೆಯು ಕಡಿಮೆ ಕೀಟನಾಶಕ ಬಳಕೆ, ಉತ್ತಮ ಸಾವಯವ ವಸ್ತು ಮತ್ತು ಸಮತೋಲಿತ ಮಣ್ಣಿನ ತೇವಾಂಶವನ್ನು ಪ್ರತಿಬಿಂಬಿಸುತ್ತದೆ.
ಪೈಲಟ್ ತಿಮಿಂಗಿಲಗಳು
ಸಾಮಾನ್ಯ ಅಧ್ಯಾಯನ 3/ಸುದ್ದಿಯಲ್ಲಿರುವ ಪ್ರಭೇಧಗಳು
ಸಂದರ್ಭ:
ನ್ಯೂಜಿಲೆಂಡ್ನ ದೂರದ ಕಡಲತೀರದಲ್ಲಿ ಸಿಲುಕಿ ಎರಡು ಡಜನ್ಗೂ ಹೆಚ್ಚು ಪೈಲಟ್ ತಿಮಿಂಗಿಲಗಳು ಸಾವನ್ನಪ್ಪಿವೆ.
ಅವುಗಳ ಹೆಸರಿನ ಹೊರತಾಗಿಯೂ, ಅವು ನಿಜವಾದ ತಿಮಿಂಗಿಲಗಳಲ್ಲ, ಬದಲಾಗಿ ಸಾಗರದ ದೊಡ್ಡ ಡಾಲ್ಫಿನ್ಗಳಾಗಿವೆ.
ಅವುಗಳನ್ನು “ಪೈಲಟ್ ತಿಮಿಂಗಿಲಗಳು” ಎಂದು ಕರೆಯಲು ಕಾರಣ:- ಪ್ರತಿ ಗುಂಪು (pod) ಒಂದು ಮುಖ್ಯ ನಾಯಕರಾದ ‘ಪೈಲಟ್’ ತಿಮಿಂಗಿಲವನ್ನು ಅನುಸರಿಸುತ್ತವೆ ಎಂದು ನಂಬಲಾಗುತ್ತಿತ್ತು.
ದೈಹಿಕ ಲಕ್ಷಣಗಳು: ಪೈಲಟ್ ತಿಮಿಂಗಿಲಗಳು ವಿಶಿಷ್ಟವಾದ ಕಾಣಿಕೆಯುಳ್ಳವು- ಅವುಗಳ ಮುಂಭಾಗ ಉಬ್ಬಿದ ತಲೆ, ಉದ್ದವಾದ ಕಪ್ಪು ದೇಹ, ಮತ್ತು ಮೇಲಿನ ಪಕ್ಕದ ರೆಕ್ಕೆ ಹಿಂದಿನ ಭಾಗದಲ್ಲಿ ಕಾಣುವ ಬಿಳಿ ಅಥವಾ ಹಗುರ ಬೂದು ಬಣ್ಣದ ಪಟ್ಟೆ ಇರುತ್ತದೆ.
ಆವಾಸಸ್ಥಾನ ಮತ್ತು ಹಂಚಿಕೆ:
ಉದ್ದನೆಯ ರೆಕ್ಕೆಯುಳ್ಳ ಪೈಲಟ್ ತಿಮಿಂಗಿಲ:- ಇವು ತಂಪಾದ ನೀರನ್ನು ಬಯಸುತ್ತವೆ (ಉತ್ತರ ಅಟ್ಲಾಂಟಿಕ್, ದಕ್ಷಿಣ ಸಾಗರಗಳಲ್ಲಿ ವಾಸಿಸುತ್ತವೆ).
ಉದ್ದವಲ್ಲದ ರೆಕ್ಕೆಯುಳ್ಳ ಪೈಲಟ್ ತಿಮಿಂಗಿಲ:- ಇವು ಬೆಚ್ಚಗಿನ ಉಷ್ಣವಲಯದ ಮತ್ತು ಉಪೋಷ್ಣವಲಯದ ನೀರನ್ನು (ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರದಲ್ಲಿ ವಾಸಿಸುತ್ತವೆ) ಬಯಸುತ್ತವೆ.
ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಸಂರಕ್ಷಣಾ ಸ್ಥಿತಿ:
ಉದ್ದನೆಯ ರೆಕ್ಕೆಯುಳ್ಳ ಪೈಲಟ್ ತಿಮಿಂಗಿಲ:- ದತ್ತಾಂಶ ಕೊರತೆ (DD).
ಉದ್ದವಲ್ಲದ ರೆಕ್ಕೆಯುಳ್ಳ ಪೈಲಟ್ ತಿಮಿಂಗಿಲ:- ಕನಿಷ್ಠ ಕಾಳಜಿ(LC).
ರಾಜ್ಯ ಸರ್ಕಾರವು ಹಸಿ ತ್ಯಾಜ್ಯದಿಂದ ಅನಿಲ ಉತ್ಪಾದಿಸಲು ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (GAIL) ದೊಂದಿಗೆ ಒಪ್ಪಂದಕ್ಕೇ ಸಹಿ ಮಾಡಿದೆ
ಇದೀಗ ಸುದ್ದಿಯಲ್ಲಿದೆ:
ಬೆಂಗಳೂರಿನಲ್ಲಿ ಹಸಿ ತ್ಯಾಜ್ಯದಿಂದ ಅನಿಲ ಉತ್ಪಾದಿಸಲು ಕರ್ನಾಟಕ ಸರ್ಕಾರವು ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (GAIL) ದೊಂದಿಗೆ ಒಪ್ಪಂದಕ್ಕೇ ಸಹಿ ಮಾಡಿದೆ.
ಇದು ಬೆಂಗಳೂರಿನಲ್ಲಿ ತ್ಯಾಜ್ಯದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅನಿಲವನ್ನು ಕೈಗಾರಿಕೆಗಳು ಮತ್ತು ಹೋಟೆಲ್ಗಳಿಗೆ ವಿತರಿಸಲಾಗುತ್ತದೆ.
ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಮತ್ತು ನಿರ್ವಹಿಸುವ ತ್ಯಾಜ್ಯದ ವಿಧಗಳು:
ಸಾವಯವ ತ್ಯಾಜ್ಯ – ಅಡುಗೆಮನೆಯ ತ್ಯಾಜ್ಯಗಳಾದ ಆಹಾರದ ಉಳಿಕೆಗಳು, ತರಕಾರಿ ಸಿಪ್ಪೆಗಳು, ಹಣ್ಣಿನ ತ್ಯಾಜ್ಯ, ಚಹಾ/ಕಾಫಿ ಉಳಿಕೆಗಳು, ಮೊಟ್ಟೆಯ ಚಿಪ್ಪುಗಳು, ತೋಟದ ಶೇಷಗಳು ಮತ್ತು ಹಸಿರು ತ್ಯಾಜ್ಯ.
ಸಾವಯವವಲ್ಲದ (ಒಣ) ತ್ಯಾಜ್ಯ – ಪ್ಲಾಸ್ಟಿಕ್ಗಳು (ಚೀಲಗಳು, ಬಾಟಲಿಗಳು, ಪಾತ್ರೆಗಳು), ಲೋಹಗಳು (ಪಾತ್ರೆಗಳು, ತಂತಿಗಳು, ಬ್ಯಾಟರಿಗಳು), ಗಾಜು (ಬಾಟಲಿಗಳು/ಕಪ್ಗಳು), ಕಾಗದ (ಪತ್ರಿಕೆಗಳು, ಕಾರ್ಡ್ಬೋರ್ಡ್) ಮತ್ತು ಮರದಂತಹ ಮರುಬಳಕೆ ಮಾಡಬಹುದಾದ ಘನತ್ಯಾಜ್ಯ.
ಅಪಾಯಕಾರಿ ತ್ಯಾಜ್ಯ – ಕೀಟ ಸ್ಪ್ರೇಗಳು, ರಾಸಾಯನಿಕಗಳು, ವೈದ್ಯಕೀಯ ತ್ಯಾಜ್ಯ (ಸಿರಿಂಜ್ಗಳು, ಜೈವಿಕ-ವೈದ್ಯಕೀಯ ತ್ಯಾಜ್ಯ), ಇ-ತ್ಯಾಜ್ಯ, ಬ್ಯಾಟರಿಗಳು ಮತ್ತು ನೈರ್ಮಲ್ಯ ಉತ್ಪನ್ನಗಳಂತಹ ವಸ್ತುಗಳು.
ಜಡ ತ್ಯಾಜ್ಯ – ಮರಳು, ಕಾಂಕ್ರೀಟ್, ಜೇಡಿಮಣ್ಣು, ಭೂಗತ ಮಣ್ಣು, ಕಲ್ಲುಗಳು ಮತ್ತು ಕಲ್ಲುಮಣ್ಣುಗಳಂತಹ ನಿರ್ಮಾಣ ಮತ್ತು ಧ್ವಂಸ ಶಿಲಾಚೂರುರಾಶಿಗಳು.
ಘನತ್ಯಾಜ್ಯ ನಿರ್ವಹಣಾ ನಿಯಮಗಳು, 2016:
ಕಡ್ಡಾಯ ಮೂಲ ವಿಂಗಡಣೆ: ತ್ಯಾಜ್ಯ ಉತ್ಪಾದಕರು ತ್ಯಾಜ್ಯವನ್ನು ಮೂರು ವಿಧಗಳಾಗಿ ವಿಂಗಡಿಸಬೇಕು: ಆರ್ದ್ರ (ಜೈವಿಕ ವಿಘಟನೀಯ), ಒಣ (ಪ್ಲಾಸ್ಟಿಕ್, ಕಾಗದ, ಲೋಹ, ಇತ್ಯಾದಿ) ಮತ್ತು ದೇಶೀಯ ಅಪಾಯಕಾರಿ ತ್ಯಾಜ್ಯ.
ವಿಸ್ತೃತ ಉತ್ಪಾದಕರ ಜವಾಬ್ದಾರಿ (EPR): ಕೆಲವು ಉತ್ಪನ್ನಗಳ (ಉದಾ: ಪ್ಲಾಸ್ಟಿಕ್ ಪ್ಯಾಕೇಜಿಂಗ್, ಇ-ತ್ಯಾಜ್ಯ, ಬ್ಯಾಟರಿಗಳು) ತಯಾರಕರು/ಬ್ರಾಂಡ್ ಮಾಲೀಕರು ತಮ್ಮ ಗ್ರಾಹಕ-ನಂತರದ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಲು ಆರ್ಥಿಕವಾಗಿ ಜವಾಬ್ದಾರರಾಗಿರುತ್ತಾರೆ.
ನಗರ ಸ್ಥಳೀಯ ಸಂಸ್ಥೆಗಳ ಪಾತ್ರ (ULBs): ಮನೆ-ಮನೆಗೆ ಸಂಗ್ರಹಣೆ, ಸಾಗಣೆ, ಸಂಸ್ಕರಣೆ ಮತ್ತು ವಿಲೇವಾರಿಗೆ ಜವಾಬ್ದಾರರು.
ಬಳಕೆದಾರ ಶುಲ್ಕ ಮತ್ತು ನಿಂತಲ್ಲೇ ದಂಡ: ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ಸೇವೆಗಳಿಗೆ ಬಳಕೆದಾರ ಶುಲ್ಕವನ್ನು ಮತ್ತು ಕಸ ಹಾಕುವುದಕ್ಕೆ ಅಥವಾ ವಿಂಗಡಿಸದಿದ್ದಕ್ಕಾಗಿ ನಿಂತಲ್ಲೇ ದಂಡವನ್ನು ವಿಧಿಸಬಹುದು.
ತ್ಯಾಜ್ಯ ಸಂಸ್ಕರಣೆಗೆ ಉತ್ತೇಜನ: ಭೂಮಿಅವನತರಣಿಕೆ ಮೇಲ್ಮೇಲೆ, ಮಿಶ್ರಣ, ಬಯೋಮಿಥನೆಶನ್, ಮರುಚಕ್ರಣ, ಹಾಗೂ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಸಸ್ಯಗಳು ಮೇಲೆ ಪ್ರಧಾನ್ಯವನ್ನು ನೀಡಲಾಗುತ್ತಿದೆ.
ಸರ್ಕಾರಿ ಉಪಕ್ರಮಗಳು:
ಸ್ವಚ್ಛ ಭಾರತ ಗುರಿ (ನಗರ ಮತ್ತು ಗ್ರಾಮೀಣ): ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಮೂಲಕ “ಕಸ ಮುಕ್ತ ನಗರಗಳು” (SBM-U 2.0) ಸಾಧಿಸುವತ್ತ ಗಮನಹರಿಸುವ ಪ್ರಮುಖ ಸ್ವಚ್ಛತಾ ಅಭಿಯಾನ.
ತ್ಯಾಜ್ಯದಿಂದ ಸಂಪತ್ತಿನ ಗುರಿ: ತ್ಯಾಜ್ಯವನ್ನು ಶಕ್ತಿ, ಗೊಬ್ಬರ ಮತ್ತು ಇತರ ಅಮೂಲ್ಯ ಉತ್ಪನ್ನಗಳಾಗಿ ಪರಿವರ್ತಿಸುವುದನ್ನು ಉತ್ತೇಜಿಸುತ್ತದೆ.
ಗೋಬರ್-ಧನ್ ಯೋಜನೆ: ಗ್ರಾಮೀಣ ಪ್ರದೇಶಗಳಲ್ಲಿ ಸಾವಯವ ತ್ಯಾಜ್ಯ ಮತ್ತು ದನದ ಸಗಣಿಗಳನ್ನು ಜೈವಿಕ ಅನಿಲ, ಜೈವಿಕ-ಸಿಎನ್ಜಿ ಮತ್ತು ಸಾವಯವ ಗೊಬ್ಬರವಾಗಿ ಪರಿವರ್ತಿಸುವತ್ತ ಗಮನಹರಿಸುತ್ತದೆ.
ನಮಸ್ತೆ (NAMASTE) ಯೋಜನೆ:ಅನೌಪಚಾರಿಕ ತ್ಯಾಜ್ಯ ಆಯ್ದುಕೊಳ್ಳುವವರನ್ನು ಔಪಚಾರಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಔಪಚಾರಿಕಗೊಳಿಸಿ ಸಂಯೋಜಿಸುವ ಮೂಲಕ ಅವರಿಗೆ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವ ಒಂದು ಯೋಜನೆ.
ಕಾಶ್ಮೀರದ ಹೊಸ ಸೇವಂತಿಗೆ ಉದ್ಯಾನವನ, ಬಾಗ್-ಎ-ಗುಲ್-ಎ-ದಾವೂದ್ ಜಬರ್ವಾನ್ ಶ್ರೇಣಿಯ ಬಳಿ ತೆರೆಯಲಿದ್ದು, ಇದರಲ್ಲಿ 50+ ಪ್ರಭೇದಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಒಳಗೊಂಡಿದೆ.
ಸೇವಂತಿಗೆ ಹೂವುಗಳು ಬಗ್ಗೆ:
ಇದು ಆಸ್ಟರೇಸಿ ಕುಟುಂಬದಿಂದ ಬಂದ ದೀರ್ಘಕಾಲಿಕ ಹೂಬಿಡುವ ಸಸ್ಯವಾಗಿದೆ.
ಇದರ ಔಷಧೀಯ ಗುಣಗಳು ಮತ್ತು ಸುಗಂಧಭರಿತ ಪಾನೀಯಗಳ ಬಳಕೆಗಾಗಿ ಇದನ್ನು ಚೀನಾ, ಜಪಾನ್, ಯುರೋಪ್ ಮತ್ತು ಅಮೆರಿಕದಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ.
ವಿಶಿಷ್ಟತೆ:- ಇದು ಫೀನಾಲಿಕ್ ಸಂಯುಕ್ತಗಳಿಂದ ಸಮೃದ್ಧವಾಗಿದೆ ಮತ್ತು ಪ್ರಬಲವಾದ ಆಮ್ಲಜನಕ ವಿರೋಧಕ, ಸೂಕ್ಷ್ಮಾಣು ವಿರೋಧಕ, ಉರಿಯೂತ ವಿರೋಧಕ, ಕ್ಯಾನ್ಸರ್ ವಿರೋಧಕ ಮತ್ತು ಇತರ ಚಿಕಿತ್ಸಕ ಚಟುವಟಿಕೆಗಳನ್ನು ಪ್ರದರ್ಶಿಸುತ್ತದೆ .
ಕ್ರೀಡೆಯಲ್ಲಿ ಮದ್ದಿನ ದುರುಪಯೋಗದ (ಉದ್ದೀಪನ ಮದ್ದು/ಡೋಪಿಂಗ್ ) ವಿರುದ್ಧದ ಅಂತರರಾಷ್ಟ್ರೀಯ ಒಪ್ಪಂದ
ಇತರೆ
ಇದೀಗ ಸುದ್ದಿಯಲ್ಲಿದೆ:
ಪ್ಯಾರಿಸ್ನಲ್ಲಿ ನಡೆದ ಕ್ರೀಡೆಯಲ್ಲಿ ಮದ್ದಿನ ದುರುಪಯೋಗದ ವಿರುದ್ಧದ ಯುನೆಸ್ಕೋದ ಅಂತರರಾಷ್ಟ್ರೀಯ ಸಮಾವೇಶದ 10 ನೇ ಅಧಿವೇಶನದಲ್ಲಿ ಭಾರತವನ್ನು ಏಷ್ಯಾ-ಪೆಸಿಫಿಕ್ ಪ್ರತಿನಿಧಿಸುವ ಸಂಸ್ಥೆಯ ಉಪಾಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಲಾಯಿತು.
ಉದ್ದೀಪನ ಮದ್ದು ಮತ್ತು ಅದರ ಕಾಳಜಿಗಳ ಬಗ್ಗೆ:
ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯವನ್ನು ಕೃತಕವಾಗಿ ಹೆಚ್ಚಿಸಲು ನಿಷೇಧಿತ ರಾಸಾಯನಿಕ ಪದಾರ್ಥಗಳನ್ನು ಬಳಸುವ ಪದ್ಧತಿ. ಇದನ್ನು ಕಾರ್ಯಕ್ಷಮತೆ ಹೆಚ್ಚಿಸುವ ಔಷಧಗಳು (PEDs) ಎಂದು ಕರೆಯಲಾಗುತ್ತದೆ.
ಉದ್ದೀಪನ ಮದ್ದಿನ ವಿರೋಧಿಗೆ ಸಂಬಂಧಿಸಿದ ಮುಖ್ಯ ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಘೋಷಣೆಗಳು:
ಕೋಪನ್ ಹ್ಯಾಗನ್ ಘೋಷಣೆ:
2003 ರಲ್ಲಿ ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ ನಡೆದ ಎರಡನೇ ವಿಶ್ವ ಕ್ರೀಡೆಯಲ್ಲಿ ಉದ್ದೀಪನ ಮದ್ದಿನ ಕುರಿತ ಸಮ್ಮೇಳನದಲ್ಲಿ ಸರ್ಕಾರಗಳು ಕ್ರೀಡೆಯಲ್ಲಿ ಉದ್ದೀಪನ ಮದ್ದಿನ ವಿರೋಧಿ ಘೋಷಣೆಯನ್ನು ಕೋಪನ್ಹೇಗನ್ನಲ್ಲಿ ನಡೆಸಲಾಯಿತು .
ಉದ್ದೇಶ:- ಈ ಘೋಷಣೆಯು ಸರ್ಕಾರಗಳು ವಿಶ್ವ ಉದ್ದೀಪನ ಮದ್ದಿನ ವಿರೋಧಿ ಸಂಹಿತೆಯನ್ನು ಔಪಚಾರಿಕವಾಗಿ ಗುರುತಿಸುವ ಮತ್ತು ಕಾರ್ಯಗತಗೊಳಿಸುವ ಉದ್ದೇಶವನ್ನು ಸೂಚಿಸುವ ರಾಜಕೀಯ ದಾಖಲೆಯಾಗಿತ್ತು .
ಮಹತ್ವ:- “ಕ್ರೀಡೆಗಳಲ್ಲಿ ಉದ್ದೀಪನ ಮದ್ದಿನ ವಿರುದ್ಧ ಯುನೆಸ್ಕೋ ಅಂತರರಾಷ್ಟ್ರೀಯ ಸಮಾವೇಶ” ವನ್ನು ಸಿದ್ಧಪಡಿಸುವತ್ತ ಈ ಘೋಷಣೆಯು ಮೊದಲ ಹೆಜ್ಜೆಯಾಗಿತ್ತು.
2003 ರಲ್ಲಿ ಭಾರತವು ಈ ಘೋಷಣೆಯನ್ನು ಒಪ್ಪಿಕೊಂಡಿತು.
ಕ್ರೀಡೆಯಲ್ಲಿ ಉದ್ದೀಪನ ಮದ್ದಿನ ವಿರುದ್ಧ ಅಂತರರಾಷ್ಟ್ರೀಯ ಸಮಾವೇಶ:
ಇದನ್ನು ‘ಯುನೆಸ್ಕೋ ಉದ್ದೀಪನ ಮದ್ದಿನ ವಿರುದ್ಧ ಸಮಾವೇಶ’ ಎಂತಲು ಕರೆಯುತ್ತಾರೆ.
ಇದನ್ನು 2005 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಯುನೆಸ್ಕೋದ ಸಾಮಾನ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು. ಇದು 2007 ರಲ್ಲಿ ಜಾರಿಗೆ ಬಂದಿತು.
ಉದ್ದೇಶ:- ಕ್ರೀಡೆಗಳಲ್ಲಿ ಉದ್ದೀಪನ ಮದ್ದು ತಡೆಗಟ್ಟುವಿಕೆ ಮತ್ತು ಅದರ ವಿರುದ್ಧದ ಹೋರಾಟವನ್ನು ಉತ್ತೇಜಿಸಲು, ಅದರ ನಿರ್ಮೂಲನೆ.
2007 ರಲ್ಲಿ ಭಾರತವು ಈ ಸಮಾವೇಶವನ್ನು ಅಂಗೀಕರಿಸಿತು.
ಗಮನಿಸಿ:- ಯುವ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆಯು ಭಾರತದಲ್ಲಿ ಉದ್ದೀಪನ ಮದ್ದು ವಿರೋಧಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ, ಅನುಷ್ಠಾನಗೊಳಿಸುವ ಮತ್ತು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.
ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಆಡಳಿತವನ್ನು ಬಲಪಡಿಸುವುದು
ಸಾಮಾನ್ಯ ಅಧ್ಯಾಯನ 2/ ಆಡಳಿತ. ಸಾಮಾನ್ಯ ಅಧ್ಯಾಯನ 3/ ವಿಜ್ಞಾನ ಮತ್ತು ತಂತ್ರಜ್ಞಾನ
ಸಂದರ್ಭ:
ರಾಷ್ಟ್ರೀಯ ಬ್ಲಾಕ್ಚೈನ್ ಚೌಕಟ್ಟಿ (NBF) ನ ಮೂಲಕ ಆಡಳಿತವನ್ನು ಪರಿವರ್ತಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಡಿಜಿಟಲ್ ವಿಶ್ವಾಸವನ್ನು ಬಲಪಡಿಸಲು ಭಾರತವು ಬ್ಲಾಕ್ಚೈನ್ ತಂತ್ರಜ್ಞಾನದ ಅಳವಡಿಕೆಯನ್ನು ವೇಗಗೊಳಿಸುತ್ತಿದೆ.
ಬ್ಲಾಕ್ಚೈನ್ ತಂತ್ರಜ್ಞಾನದ ಬಗ್ಗೆ:
ಬ್ಲಾಕ್ಚೈನ್ ಎನ್ನುವುದು ವಿತರಿತ, ಪಾರದರ್ಶಕ, ಸುರಕ್ಷಿತ ಮತ್ತು ಅಮಾರ್ಜನೀಯ ದತ್ತಾoಶವಾಗಿದ್ದು, ಇದು ದಾಖಲೆ ಅಥವಾ ವ್ಯವಹಾರಗಳ ಡಿಜಿಟಲ್ ದಾಖಲೆ (ಲೆಡ್ಜರ್) ಯಂತೆ ಕಾರ್ಯನಿರ್ವಹಿಸುತ್ತದೆ, ತಿದ್ದುಪಡಿ ನಿರೋಧಕವಾಗಿದೆ ಮತ್ತು ಕಂಪ್ಯೂಟರ್ಗಳ ನೆಟ್ವರ್ಕ್ನಲ್ಲಿ ಪ್ರವೇಶಿಸಬಹುದು.
ಬ್ಲಾಕ್ಚೈನ್ ತಂತ್ರಜ್ಞಾನದ ಅನ್ವಯಗಳು: ಬ್ಲಾಕ್ಚೈನ್ ತಂತ್ರಜ್ಞಾನವು ಅದರ ಸುರಕ್ಷಿತ, ಪಾರದರ್ಶಕ ಮತ್ತು ವಿಕೇಂದ್ರೀಕೃತ ಸ್ವಭಾವದಿಂದಾಗಿ ವಿವಿಧ ಕೈಗಾರಿಕೆಗಳಲ್ಲಿ ಹಲವಾರು ಅನ್ವಯಿಕೆಗಳನ್ನು ಹೊಂದಿದೆ.
ಕ್ರಿಪ್ಟೋಕರೆನ್ಸಿಗಳು (ಸಂಕೇತಿತ ಡಿಜಿಟಲ್ ಕರೆನ್ಸಿ):-ಬಿಟ್ಕಾಯಿನ್ ಮತ್ತು ಇಥೀರಿಯಂ ನಂತಹ ಸುರಕ್ಷಿತ ಡಿಜಿಟಲ್ ಕರೆನ್ಸಿಗಳನ್ನು ಸಕ್ರಿಯಗೊಳಿಸುವುದು.
ಸ್ಮಾರ್ಟ್ ಒಪ್ಪಂದಗಳು:- ಮಧ್ಯವರ್ತಿಗಳಿಲ್ಲದೆ ಒಪ್ಪಂದಗಳನ್ನು ಸ್ವಯಂಚಾಲಿತಗೊಳಿಸುವುದು.
ಪೂರೈಕೆ ಸರಪಳಿ ನಿರ್ವಹಣೆ:– ಪಾರದರ್ಶಕತೆ ಮತ್ತು ಪತ್ತೆಹಚ್ಚುವಿಕೆಯನ್ನು ಹೆಚ್ಚಿಸುವುದು.
ಆರೋಗ್ಯ ರಕ್ಷಣೆ:- ರೋಗಿಗಳ ದಾಖಲೆಗಳನ್ನು ಸುರಕ್ಷಿತಗೊಳಿಸುವುದು ಮತ್ತು ದತ್ತಾಂಶ ಹಂಚಿಕೆಯನ್ನು ಸುಧಾರಿಸುವುದು.
ಬ್ಯಾಂಕಿಂಗ್ ಮತ್ತು ಹಣಕಾಸು:- ಗಡಿಯಾಚೆಗಿನ ಪಾವತಿಗಳನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ವಂಚನೆ ಪತ್ತೆ.
ಮತದಾನ ವ್ಯವಸ್ಥೆ:- ಪಾರದರ್ಶಕ ಮತ್ತು ಅಕ್ರಮ-ನಿರೋಧಕ ಚುನಾವಣೆಗಳನ್ನು ಖಚಿತಪಡಿಸುವುದು.
ಗುರುತಿನ ನಿರ್ವಹಣೆ:- ಸುರಕ್ಷಿತ, ಪರಿಶೀಲಿಸಬಹುದಾದ ಡಿಜಿಟಲ್ ಗುರುತುಗಳನ್ನು ನೀಡುವುದು.
ಸ್ಥಿರಾಸ್ತಿ (ರಿಯಲ್ ಎಸ್ಟೇಟ್):- ಟೋಕನ್ ಮಾಡಿದ ಸ್ವತ್ತುಗಳೊಂದಿಗೆ ಆಸ್ತಿ ವರ್ಗಾವಣೆಯನ್ನು ಸರಳಿಕರಣ ಗೊಳಿಸುವುದು.
ಗೇಮಿಂಗ್:– ಆಟದಲ್ಲಿನ ಸ್ವತ್ತುಗಳು ಮತ್ತು ಅಪ್ರತಿವಿನಿಮಯ ಟೋಕನ್ (NFT) ಗಳ ಮಾಲೀಕತ್ವವನ್ನು ಸಕ್ರಿಯಗೊಳಿಸುವುದು.
ಇಂಧನ ವಲಯ:- ಸಹಭಾಗಿಗಳಿಂದ ಸಹಭಾಗಿಗಳಿಗೆ ಇಂಧನ ವ್ಯಾಪಾರವನ್ನು ಬೆಂಬಲಿಸುವುದು.
ರಾಷ್ಟ್ರೀಯ ಬ್ಲಾಕ್ಚೈನ್ ಚೌಕಟ್ಟಿ (NBF) ನ ಬಗ್ಗೆ:
ಇದು 2024 ರಲ್ಲಿ ಪ್ರಾರಂಭವಾಯಿತು.
ಅಭಿವೃದ್ಧಿಪಡಿಸಿದವರು – ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY).
ಉದ್ದೇಶ:- ಅನುಮತಿಸಲಾದ ಬ್ಲಾಕ್ಚೈನ್ ಆಧಾರಿತ ಬಳಕೆಯ ಅಭಿವೃದ್ಧಿ ಮತ್ತು ನಿಯೋಜನೆಯನ್ನು ವೇಗಗೊಳಿಸುವುದು.
ಮಖಾನಾನೋಮಿಕ್ಸ್
ಸಾಮಾನ್ಯ ಅಧ್ಯಾಯನ 3/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಸದಾಗಿ ಪ್ರಾರಂಭಿಸಲಾದ ರಾಷ್ಟ್ರೀಯ ಮಖಾನಾ ಮಂಡಳಿಯನ್ನು ಈ ವಲಯಕ್ಕೆ ಒಂದು ಪರಿವರ್ತನಾತ್ಮಕ “ಕ್ರಾಂತಿ” ಎಂದು ಬಣ್ಣಿಸಿದರು.
ಮಖಾನ (ಯೂರ್ಯೇಲ್ ಫೆರಾಕ್ಸ್) ಕುರಿತು:
ಇದು “ಜಲಪದ್ಮ ಕುಲ” (ನಿಂಫೇಸಿಯೇ) ಕ್ಕೇ ಸೇರಿರುವ ಒಂದು ಹೂ ಬೀರುವ ಸಸ್ಯವಾಗಿದೆ.
ಹವಾಮಾನ ಪರಿಸ್ಥಿತಿ:- ತಾಪಮಾನ 20-35°C ಮತ್ತು ವಾರ್ಷಿಕ 100-250 ಸೆಂ.ಮೀ. ಮಳೆಯ ಅಗತ್ಯವಿರುತ್ತದೆ.
ಇದು ಸಂಪೂರ್ಣವಾಗಿ ಸಾವಯವ ಧಾನ್ಯೇತರ ಆಹಾರವಾಗಿದ್ದು, ಮುಖ್ಯವಾಗಿ ಭಾರತದಲ್ಲಿ ಮಾತ್ರವಲ್ಲದೆ ಕೊರಿಯಾ, ಜಪಾನ್ ಮತ್ತು ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ.
ಭಾರತದ ಮಖಾನಾ ಉತ್ಪಾದನೆಯಲ್ಲಿ ಬಿಹಾರವು ~90% ರಷ್ಟು ಪಾಲನ್ನು ಹೊಂದಿದೆ.
ಭೌಗೋಳಿಕ ಸೂಚ್ಯಂಕ (GI) ಪಟ್ಟಿ:- 2022 ರಲ್ಲಿ, “ಮಿಥಿಲಾ ಮಖಾನಾ” ಗೆ GI ಟ್ಯಾಗ್ ನೀಡಲಾಯಿತು.
ಮೋಡ ಬಿತ್ತನೆ
ಸಾಮಾನ್ಯ ಅಧ್ಯಾಯನ 3/ಪರಿಸರ ಅಧ್ಯಾಯನ
ಇದೀಗ ಸುದ್ದಿಯಲ್ಲಿದೆ:
ಚಳಿಗಾಲದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಯಂತ್ರಿಸುವಲ್ಲಿ ಮೋಡ ಬಿತ್ತನೆ ಪ್ರಮುಖ ಪಾತ್ರ ವಹಿಸುವುದರಿಂದ ರಾಷ್ಟ್ರ ರಾಜಧಾನಿಗೆ ಅದು ಅತ್ಯಗತ್ಯ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಮೋಡ ಬಿತ್ತನೆ ಅಥವಾ ಕೃತಕ ಮಳೆಯ ಬಗ್ಗೆ:
ವ್ಯಾಖ್ಯಾನ:- ಕೃತಕ ಮಳೆ ಎಂದರೆ ಮಳೆಹನಿಗಳ ರಚನೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಮೋಡಗಳಿಗೆ ಕೆಲವು ರಾಸಾಯನಿಕಗಳನ್ನು ಒಳಸೇರಿಸುವುದರ ಮೂಲಕ ಮಳೆಯನ್ನು ಪ್ರೇರೇಪಿಸುವುದು.
ಮೋಡ ಬಿತ್ತನೆಯು ಈ ಕೆಳಗಿನ ವಸ್ತುಗಳನ್ನು ಚದುರಿಸುವುದನ್ನು ಒಳಗೊಂಡಿರುತ್ತದೆ:
ಸಿಲ್ವರ್ ಅಯೋಡೈಡ್ (AgI)
ಪೊಟ್ಯಾಸಿಯಮ್ ಅಯೋಡೈಡ್
ಸೋಡಿಯಂ ಕ್ಲೋರೈಡ್
ಡ್ರೈ ಐಸ್ (CO₂)
ಅಗತ್ಯವಿರುವ ಷರತ್ತುಗಳು:- ಮಳೆ ತರಿಸುವ ಮೋಡಗಳು, ಸಾಕಷ್ಟು ಆರ್ದ್ರತೆ, ವಾತಾವರಣದ ಅಸ್ಥಿರತೆ, ಅನುಕೂಲಕರ ಗಾಳಿ ಮತ್ತು ತಾಪಮಾನದ ಪರಿಸ್ಥಿತಿಗಳನ್ನು ಒಳಗೊಂಡಿದೆ.
ಮೋಡ ಬಿತ್ತನೆಯ ಪ್ರಯೋಜನಗಳು:
ವಾಯು ಮಾಲಿನ್ಯ ತಗ್ಗಿಸುವಿಕೆ:- ದೆಹಲಿಯಂತಹ ನಗರಗಳಲ್ಲಿ, ಕೃತಕ ಮಳೆಯು ಕಣಗಳು ಮತ್ತು ಇತರ ಮಾಲಿನ್ಯಕಾರಕಗಳನ್ನು ತೊಳೆಯಬಹುದು, ಇದು ತೀವ್ರ ವಾಯು ಮಾಲಿನ್ಯದಿಂದ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ.
ಬರ ನಿವಾರಣೆ ಮತ್ತು ಜಲ ಸಂಪನ್ಮೂಲ ವೃದ್ಧಿ:– ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳು ನೀರಿನ ಕೊರತೆಯನ್ನು ನಿಗಿಸಲು ಮೋಡ ಬಿತ್ತನೆಯನ್ನು ಬಳಸಿಕೊಂಡಿವೆ (ಉದಾ, “ಮೇಘದೂತ್ ಯೋಜನೆ” ಮತ್ತು “ವರ್ಷಧಾರಿ”).
ಕಾಡಿನ ಬೆಂಕಿ ನಿಯಂತ್ರಣ:- ತೇವಾಂಶದ ಮಟ್ಟವನ್ನು ಹೆಚ್ಚಿಸುವ ಮೂಲಕ, ಮೋಡ ಬಿತ್ತನೆಯು ಕಾಡ್ಗಿಚ್ಚಿನ ಅಪಾಯ ಮತ್ತು ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಶ್ರೀ ನಾರಾಯಣ ಗುರು
ಸಾಮಾನ್ಯ ಅಧ್ಯಾಯನ 1/ ಆಧುನಿಕ ಇತಿಹಾಸ
ಸಂದರ್ಭ:
ಕೇರಳದ ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ಶತಮಾನೋತ್ಸವದ ಆಚರಣೆಯನ್ನು ಭಾರತದ ರಾಷ್ಟ್ರಪತಿಗಳು ಉದ್ಘಾಟಿಸಿದರು.
ಶ್ರೀ ನಾರಾಯಣ ಗುರು (1856–1928) ಗಳ ಬಗ್ಗೆ:
ಇವರು 1856 ರಲ್ಲಿ ಕೇರಳದ ಈಳವ (ಈಜ್ಹವ) ಸಮುದಾಯದಲ್ಲಿ ಜನಿಸಿದರು, ಈ ಸಮುದಾಯವು ತೀವ್ರ ಜಾತಿ ತಾರತಮ್ಯವನ್ನು ಎದುರಿಸಿತು.
ಇವರು ಸಂತರು, ತತ್ವಜ್ಞಾನಿಗಳು ಮತ್ತು ಆಧುನಿಕ ಭಾರತದ ಪ್ರಮುಖ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದರು, ಅವರು ಜಾತಿ ದಬ್ಬಾಳಿಕೆಯನ್ನು ಪ್ರಶ್ನಿಸಿದರು ಮತ್ತು ಸಾಮಾಜಿಕ ಸುಧಾರಣೆಗೆ ಆಧ್ಯಾತ್ಮಿಕ ಸುಧಾರಣೆಯೇ ಮಾರ್ಗವೆಂದು ಒತ್ತಿ ಹೇಳಿದರು.
ಶ್ರೀ ನಾರಾಯಣ ಗುರುಗಳು ಅದ್ವೈತ ವೇದಾಂತವನ್ನು ಸಾಮಾಜಿಕ ನ್ಯಾಯದ ಕರೆಯೊಂದಿಗೆ ಸಮಿಕರಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಪ್ರಮುಖ ಕೊಡುಗೆಗಳು:
ಸಾಮಾಜಿಕ ತತ್ವಶಾಸ್ತ್ರ:- “ಮನುಷ್ಯನಿಗೆ ಒಂದು ಜಾತಿ, ಒಂದು ಧರ್ಮ, ಒಬ್ಬನೇ ದೇವರು” ಎಂಬ ಮೂಲಭೂತ ಸಂದೇಶವನ್ನು ಪ್ರಚಾರ ಮಾಡಿದರು.
ಜನ್ಮ ಆಧಾರಿತ ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿದರು ಮತ್ತು ಶ್ರಮ ಜೀವಿಗಳ ಘನತೆಯನ್ನು ಉತ್ತೇಜಿಸಿದರು.
ಸಂಸ್ಥೆ ನಿರ್ಮಾಣ:- ಶಿಕ್ಷಣ, ಸಾಮಾಜಿಕ ಸಬಲೀಕರಣ ಮತ್ತು ಸುಧಾರಣೆಯನ್ನು ಮುನ್ನಡೆಸಲು “ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಮ್” (SNDP) ಅನ್ನು 1903 ರಲ್ಲಿ ಸ್ಥಾಪಿಸಿದರು.
ಅರುವಿಪುರಂ ಚಳುವಳಿ (1888):- ದೇವಾಲಯದ ಆಚರಣೆಗಳ ಮೇಲಿನ ಬ್ರಾಹ್ಮಣರ ಏಕಸ್ವಾಮ್ಯವನ್ನು ಕೊನೆಗೊಳಿಸಿ ಸ್ವತಃ ಶಿವನ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಸಮಾನತೆಯ ಪ್ರವೇಶದೊಂದಿಗೆ ಸಾಮಾನ್ಯ ಜನರಿಗೆ ದೇವಾಲಯಗಳು, ಶಾಲೆಗಳು ಮತ್ತು ಆಶ್ರಮಗಳನ್ನು ನಿರ್ಮಿಸಿದರು .
ರಾಜಕೀಯ ಮತ್ತು ಸಾಮಾಜಿಕ ಚಳುವಳಿಗಳು:- ಕೆಳಜಾತಿಗಳ ದೇವಾಲಯ ಪ್ರವೇಶ ಹಕ್ಕುಗಳಿಗಾಗಿ ನಡೆದ ವೈಕo ಸತ್ಯಾಗ್ರಹಕ್ಕೆ (1924–25) ವಿಸ್ತೃತ ನೈತಿಕ ಮತ್ತು ಸೈದ್ಧಾಂತಿಕ ಬೆಂಬಲವಾಗಿತ್ತು .
ಶೈಕ್ಷಣಿಕ ಉನ್ನತಿ:– ಸಬಲೀಕರಣ ಮತ್ತು ಉನ್ನತಿಯ ಅಡಿಪಾಯವಾಗಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
ಜ್ಞಾನ ಭಾರತಂ ಗುರಿ
ಸಾಮಾನ್ಯ ಅಧ್ಯಾಯನ 1/-ಸಂಸ್ಕೃತಿ
ಸಂದರ್ಭ:
ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಬರುವ ಹಸ್ತಪ್ರತಿಗಳ ಕುರಿತಾದ ಜ್ಞಾನ ಭಾರತಂ ಗುರಿ, ಹಸ್ತಪ್ರತಿಗಳ ಸಂರಕ್ಷಣೆ, ನಿರ್ವಹಣೆ ಮತ್ತು ಡಿಜಿಟಲೀಕರಣಕ್ಕಾಗಿ ಸುಮಾರು 20 ಸಂಸ್ಥೆಗಳೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಜ್ಞಾನ ಭಾರತಂ ಗುರಿಯ ಬಗ್ಗೆ:
ಗುರಿ:- ದೇಶಾದ್ಯಂತ ಕಂಡುಬರುವ ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಮತ್ತು ರಕ್ಷಿಸುವುದು.
ಉದ್ದೇಶ:- ಶೈಕ್ಷಣಿಕ ಸಂಸ್ಥೆಗಳು, ವಸ್ತು ಸಂಗ್ರಹಾಲಯಗಳು, ಗ್ರಂಥಾಲಯಗಳು ಇತ್ಯಾದಿಗಳಲ್ಲಿರುವ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿ ಪರಂಪರೆಯ “ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆ”ಯನ್ನು ಕೈಗೊಳ್ಳುವುದು.
ಮಹತ್ವ:- ಐತಿಹಾಸಿಕ ಮೌಲ್ಯವನ್ನು ಸಂರಕ್ಷಿಸುವುದು , ಪ್ರಾಚೀನ ಭಾರತದ ಜ್ಞಾನವನ್ನು ಜಗತ್ತಿಗೆ ಅನಾವರಣಗೊಳಿಸುವುದು, ದೀರ್ಘಾಯುಷ್ಯವನ್ನು ಖಚಿತಪಡಿಸುವುದು ಮತ್ತು ಹಸ್ತಪ್ರತಿಗಳಿಗೆ ದಿನದ 24 ಗಂಟೆಗಳ ಪ್ರವೇಶ ಇತ್ಯಾದಿ.
ಹಸ್ತಪ್ರತಿಗಳ ಬಗ್ಗೆ:
ಹಸ್ತಪ್ರತಿಗಳು ಅಂದರೆ, ಕಾಗದ, ತೊಗಟೆ, ತಾಳೆ ಎಲೆ ಮುಂತಾದ ವಸ್ತುಗಳ ಮೇಲೆ ಕೈಯಿಂದ ಬರೆಯಲ್ಪಟ್ಟ ಬರಹಗಳು, ಇವು ಕನಿಷ್ಠ 75 ವರ್ಷ ಹಳೆಯದು ಆಗಿರುತ್ತವೆ ಹಾಗೂ ವೈಜ್ಞಾನಿಕ, ಐತಿಹಾಸಿಕ ಅಥವಾ ಸೌಂದರ್ಯಾತ್ಮಕ ಮಹತ್ವ ಹೊಂದಿರುತ್ತವೆ.
ಉದಾಹರಣೆಗೆ:- ಬಕ್ಷಾಲಿ ಹಸ್ತಪ್ರತಿ (ಕ್ರಿ.ಶ. 3ನೇ ಅಥವಾ 4ನೇ ಶತಮಾನ), ಇದು ಪ್ರಾಚೀನ ಭಾರತದ ಗಣಿತ ಗ್ರಂಥವಾಗಿದ್ದು, “ಭೋಜಪತ್ರ” ದ ಮೇಲೆ ಬರೆಯಲ್ಪಟ್ಟಿದೆ. ಇದು ಶೂನ್ಯದ ಬಳಕೆಯ ಅತ್ಯಂತ ಪ್ರಾಚೀನ ದಾಖಲಾಗಿರುವ ಉದಾಹರಣೆ ಎಂದು ಪರಿಗಣಿಸಲಾಗುತ್ತದೆ.
ಭಾರತವು ಬ್ರಾಹ್ಮಿ, ಕುಶಾನ, ಗೌಡಿ, ಲೆಪ್ಚಾ ಮತ್ತು ಮೈಥಿಲಿ ಮುಂತಾದ 80 ಪ್ರಾಚೀನ ಲಿಪಿಗಳಲ್ಲಿ ಅಂದಾಜು 1 ಕೋಟಿ ಹಸ್ತಪ್ರತಿಗಳನ್ನು ಹೊಂದಿದೆ.
ಭಾರತದಲ್ಲಿ ಹಸ್ತಪ್ರತಿ ಸಂರಕ್ಷಣೆಗಾಗಿ ಇತರ ಉಪಕ್ರಮಗಳು:
ರಾಷ್ಟ್ರೀಯ ಹಸ್ತಪ್ರತಿ ಗುರಿ (NMM):- ಹಸ್ತಪ್ರತಿಗಳನ್ನು ಪತ್ತೆಹಚ್ಚಲು ಮತ್ತು ಸಂರಕ್ಷಿಸಲು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2003 ರಲ್ಲಿ ಪ್ರಾರಂಭಿಸಿತು.
ಕೋಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯ:– ಇದು ಸುಮಾರು 3600 ಅಪರೂಪದ ಮತ್ತು ಐತಿಹಾಸಿಕವಾಗಿ ಪ್ರಮುಖವಾದ ಹಸ್ತಪ್ರತಿಗಳನ್ನು ಹೊಂದಿದೆ.
ಬಂಗಾಳದ ಏಷ್ಯಾಟಿಕ್ ಸೊಸೈಟಿ: ಇದನ್ನುಜನವರಿ 15, 1784 ರಂದು ಸರ್ ವಿಲಿಯಂ ಜೋನ್ಸ್ ಸ್ಥಾಪಿಸಿದರು. ಇದು ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣವನ್ನು ಕೈಗೊಳ್ಳುತ್ತದೆ.
ರಾಜ್ಯ ಸರ್ಕಾರವು ತಾವರೇಕೆರೆ ಪ್ರದೇಶದಲ್ಲಿ ದತ್ತಾoಶ ಕೇಂದ್ರ ಪಾರ್ಕ್ (ಡೇಟಾ ಸೆಂಟರ್ ಪಾರ್ಕ್) ನಿರ್ಮಾಣಕ್ಕೆ ಸಜ್ಜಾಗುತ್ತಿದೆ
ಇದೀಗ ಸುದ್ದಿಯಲ್ಲಿದೆ:
ಕರ್ನಾಟಕ ಸರ್ಕಾರವು ಹೊಸಕೋಟೆ ಮತ್ತು ಕೋಲಾರದ ಗಡಿಯಲ್ಲಿರುವ ಕೈಗಾರಿಕಾ ಪ್ರದೇಶವಾದ ತಾವರೆಕೆರೆಯಲ್ಲಿ ಮೀಸಲಾದ ಡೇಟಾ ಸೆಂಟರ್ ಪಾರ್ಕ್ ನಿರ್ಮಾಣಕ್ಕೆ ಸಜ್ಜಾಗುತ್ತಿದೆ.
ತಾವರೆಕೆರೆಯಲ್ಲಿ ಮೀಸಲಾದ ದತ್ತಾoಶ ಕೇಂದ್ರ (ಡೇಟಾ ಸೆಂಟರ್) ಪಾರ್ಕ್ ನ ಬಗ್ಗೆ:
ಗುರಿ – ರಾಜ್ಯದಲ್ಲಿ ಬೃಹತ್ ದತ್ತಾoಶ ಕೇಂದ್ರ ಮೂಲಸೌಕರ್ಯದ ಅಗತ್ಯವನ್ನು ಪೂರೈಸುವುದು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಶೀಘ್ರದಲ್ಲೇ ತಾವರೆಕೆರೆಯಲ್ಲಿ (ಬೆಂಗಳೂರಿನ ಕೇಂದ್ರ ವ್ಯಾಪಾರ ಪ್ರದೇಶದಿಂದ ಸುಮಾರು 46 ಕಿ.ಮೀ ದೂರದಲ್ಲಿರುವ) 1,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ.
ಸಾಮಾನ್ಯ ಅಧ್ಯಾಯನ 2/ ಆರೋಗ್ಯ, ಸಾಮಾನ್ಯ ಅಧ್ಯಾಯನ 3/ ಆಡಳಿತ
ಸಂದರ್ಭ:
ಹೆಚ್ಚಿನ ಅಪಾಯದ ದ್ರಾವಕಗಳ ಪೂರೈಕೆ ಸರಪಳಿಯನ್ನು ಪತ್ತೆಹಚ್ಚಲು ಆನ್ಲೈನ್ ರಾಷ್ಟ್ರೀಯ ಔಷಧ ಪರವಾನಗಿ ವ್ಯವಸ್ಥೆ (ONDLS) ಯ ಮೇಲೆ ಡಿಜಿಟಲ್ ಮೇಲ್ವಿಚಾರಣೆಯನ್ನು ನಡೆಸಲು ಭಾರತದ ಔಷಧ ನಿಯಂತ್ರಕ ಮಹಾನಿರ್ದೇಶಕ (DCGI) ರು ನಿರ್ದೇಶಿಸಿದ್ದಾರೆ.
ಆನ್ಲೈನ್ ರಾಷ್ಟ್ರೀಯ ಔಷಧ ಪರವಾನಗಿ ವ್ಯವಸ್ಥೆಯ ಬಗ್ಗೆ:
ಭಾರತದ ಔಷಧ ನಿಯಂತ್ರಕ ಮಹಾನಿರ್ದೇಶಕ (DCGI) ರ ಅಡಿಯಲ್ಲಿದೆ, ಇದು ಉತ್ಪಾದನೆ, ಮಾರಾಟ ಪರವಾನಗಿಗಳು ಮತ್ತು ವಿವಿಧ ಪ್ರಮಾಣಪತ್ರಗಳಿಗಾಗಿ ಔಷಧ ಮತ್ತು ಸೌಂದರ್ಯವರ್ಧಕ ಸಂಬಂಧಿತ ಅನ್ವಯಿಕೆಗಳನ್ನು ಸಂಸ್ಕರಿಸುತ್ತದೆ.
ಅಭಿವೃದ್ಧಿಪಡಿಸಿದವರು:- ಉನ್ನತ ಗಣಕಯಂತ್ರ ಅಭಿವೃದ್ಧಿ ಕೇಂದ್ರ (CDAC) ಮತ್ತು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (CDSCO).
ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (CDSCO) ಯ ಬಗ್ಗೆ:
ಸ್ಥಾಪನೆ:- ಇದು ಕೇಂದ್ರ ಔಷಧ ಪ್ರಾಧಿಕಾರವಾಗಿದ್ದು,ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ, 1940 ರ ಮೂಲಕ ನೀಡಲ್ಪಟ್ಟ ಕರ್ತವ್ಯಗಳನ್ನು ನಿರ್ವಹಿಸುತ್ತದೆ.
ಜವಾಬ್ದಾರಿಗಳು:
ಔಷಧಿಗಳ ಅಳವಡಿಕೆ.
ವೈದ್ಯಕೀಯ ಪ್ರಯೋಗಗಳು.
ಔಷಧಗಳಿಗೆ ಮಾನದಂಡಗಳನ್ನು ಹಾಕುವುದು.
ದೇಶವು ಆಮದು ಮಾಡಿಕೊಳ್ಳುವ ಔಷಧಗಳ ಗುಣಮಟ್ಟದ ಮೇಲೆ ನಿಯಂತ್ರಣ.
ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳ ಪ್ರಯತ್ನಗಳ ಜೊತೆ ಸಮನ್ವಯ .
ಭಾರತದಲ್ಲಿರುವ ಇತರ ಔಷಧ ನಿಯಂತ್ರಣ ಸಂಸ್ಥೆಗಳು:
ಭಾರತದ ಔಷಧ ನಿಯಂತ್ರಕ ಮಹಾನಿರ್ದೇಶಕ (DCGI):- ಇವರು ನಿರ್ದಿಷ್ಟ ರೀತಿಯ ಔಷಧಗಳಿಗೆ ಪರವಾನಗಿಯನ್ನು ಅನುಮೋದಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಇವರು ಭಾರತ ಸರ್ಕಾರದ ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (CDSCO) ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಾರೆ.
ಔಷಧ ಬೆಲೆ ನಿಯಂತ್ರಣ ಆದೇಶ (DPCO):– ಭಾರತದಲ್ಲಿ ಕೆಲವು ಅಗತ್ಯ ಔಷಧಗಳನ್ನು ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡಲು, ಅವುಗಳ ಬೆಲೆಗಳನ್ನು ನಿಯಂತ್ರಿಸುತ್ತದೆ.
ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ, 1940:- ಈ ಕಾಯ್ದೆಯು ದೇಶೀಯ ಔಷಧ ಬಳಕೆಯನ್ನು ನಿಯಂತ್ರಿಸುತ್ತದೆ.
ಮರಗೆಣಸು/ ಮರಗುಜ್ಜೆ ಬೆಳೆಗಳು
ಸಾಮಾನ್ಯ ಅಧ್ಯಾಯನ 3/ಕೃಷಿ
ಸಂದರ್ಭ:
ಮರಗುಜ್ಜೆ ತೋಟಗಳಲ್ಲಿ ಆಕ್ರಮಣಕಾರಿ ಮರಗೆಣಸಿನ ಮಂದದ ಹುಳು (ಮೀಲಿಬಗ್) ವಿನ ಜೈವಿಕ ನಿಯಂತ್ರಣಕ್ಕಾಗಿ ಅನಗೈರಸ್ ಲೋಪೆಜಿ ಎಂಬ ಸೂಕ್ಷ್ಮ ಪರಾವಲಂಬಿ ಕೀಟವನ್ನು ಯಶಸ್ವಿಯಾಗಿ ಬಳಸಲಾಗಿದೆ.
ಇದನ್ನು ‘ಯುಕಾ’ ಅಥವಾ ‘ಮ್ಯಾನಿಯೋಕ್’ ಎಂತಲು ಕರೆಯಲಾಗುತ್ತದೆ.
ಇದು ಕಾಂಡದ ಕತ್ತರಿಗಳ ಮೂಲಕ ಬೆಳೆಯುವ ಒಂದು ಬೇರು ತರಕಾರಿ.
ಇದು ದಕ್ಷಿಣ ಅಮೆರಿಕಾಕ್ಕೆ ಸ್ಥಳೀಯವಾಗಿರುವಎತ್ತರದ ಅರೆ-ಮರದ ದೀರ್ಘಕಾಲಿಕ ಪೊದೆ ಅಥವಾ ಮರವಾಗಿದ್ದು, ಇದನ್ನು ಪೋರ್ಚುಗೀಸ್ ನಾವಿಕರು ಆಫ್ರಿಕಾ ಮತ್ತು ಏಷ್ಯಾದಲ್ಲಿ ಪರಿಚಯಿಸಿದರು.
ನೈಜೀರಿಯಾ ವಿಶ್ವದ ಅತಿ ದೊಡ್ಡ ಮರಗೆಣಸಿನ ಉತ್ಪಾದಕ ರಾಷ್ಟ್ರ.
ಇದು ಶಕ್ತಿ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿರುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಮಹತ್ವ: – ಭಾರತದ ರಾಷ್ಟ್ರೀಯ ಜೈವಿಕ ಇಂಧನ ನೀತಿ (2018) ಯ ಅಡಿಯಲ್ಲಿ, ಮರಗೆಣಸನ್ನು ಎಥೆನಾಲ್ ಉತ್ಪಾದನೆಗೆ ಕಚ್ಚಾ ವಸ್ತುವಾಗಿ ಬಳಸಲು ಗುರುತಿಸಲಾಗಿದೆ, ಇದು ಆಹಾರ ಭದ್ರತೆಯನ್ನು ಮೀರಿ ಅದರ ಮಹತ್ವವನ್ನು ಹೆಚ್ಚಿಸುತ್ತದೆ.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ 5 ನೇ ಆವೃತ್ತಿಯ “ಮೀಥೇನ್ ಮೇಲೆ ಒಂದು ಕಣ್ಣು: ಅಳತೆಯಿಂದ ಆವೇಗಕ್ಕೆ”
ಸಾಮಾನ್ಯ ಅಧ್ಯಾಯನ 3 / ಪರಿಸರ ಅಧ್ಯಯನ
ಇದೀಗ ಸುದ್ದಿಯಲ್ಲಿದೆ?
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ವು ತನ್ನ ಪ್ರಮುಖ ಪ್ರಕಟಣೆಯ ಐದನೇ ಆವೃತ್ತಿಯಾದ “ಮೀಥೇನ್ ಮೇಲೆ ಒಂದು ಕಣ್ಣು: ಅಳತೆಯಿಂದ ಆವೇಗಕ್ಕೆ” ವರದಿಯನ್ನು ಬಿಡುಗಡೆ ಮಾಡಿದೆ.
2025 ರ ವರದಿಯ ಪ್ರಮುಖ ಮುಖ್ಯಾಂಶಗಳು:
ವೆಚ್ಚ-ಪರಿಣಾಮಕಾರಿ ತಗ್ಗಿಸುವಿಕೆ ತಂತ್ರಜ್ಞಾನಗಳು ಲಭ್ಯವಿದ್ದರೂ, ಇಂಧನ, ಕೃಷಿ ಮತ್ತು ತ್ಯಾಜ್ಯ ವಲಯಗಳಿಂದ ಮೀಥೇನ್ ಹೊರಸೂಸುವಿಕೆ ಹೆಚ್ಚಾಗಿರುತ್ತದೆ.
20 ವರ್ಷಗಳಲ್ಲಿ ಮೀಥೇನ್ ಇಂಗಾಲದ ಡೈ ಆಕ್ಸೈಡ್ ಗಿಂತ 80 ಪಟ್ಟು ಹೆಚ್ಚು ತಾಪಮಾನ ಏರಿಕೆಯ ಸಾಮರ್ಥ್ಯವನ್ನು ಹೊಂದಿದೆ.
ಪ್ರಸ್ತುತ ಮೀಥೇನ್ ಹೊರಸೂಸುವಿಕೆಯಲ್ಲಿ ಸರಿಸುಮಾರು 60% ಮಾನವ ಚಟುವಟಿಕೆಗಳಿಂದ ಹುಟ್ಟಿಕೊಳ್ಳುತ್ತದೆ, ಇದರಲ್ಲಿ ಕೃಷಿ, ಪಳೆಯುಳಿಕೆ ಇಂಧನ ಹೊರತೆಗೆಯುವಿಕೆ ಮತ್ತು ಬಳಕೆ ಮತ್ತು ಕಸದ ತ್ಯಾಜ್ಯವು ಅತಿದೊಡ್ಡ ಕೊಡುಗೆ ನೀಡುತ್ತದೆ.
ಈ ವರದಿಯು ಜಾಗತಿಕ ಮೀಥೇನ್ ಪ್ರತಿಜ್ಞೆ (GMP)ಯಲ್ಲಿ ಭಾರತದ ಪರಿಣಾಮಕಾರಿ ಪಾತ್ರವನ್ನು ಮತ್ತು SATAT, ರಾಷ್ಟ್ರೀಯ ಜೈವಿಕ ಅನಿಲ ಗುರಿ ಮತ್ತು ತ್ಯಾಜ್ಯದಿಂದ ಇಂಧನ ಯೋಜನೆಗಳ ಮೂಲಕ ಅದರ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ.
ಅಂತರರಾಷ್ಟ್ರೀಯ ಹಿಮ ಚಿರತೆ ದಿನ 2025
ಸಾಮಾನ್ಯ ಅಧ್ಯಾಯನ 3 / ಪರಿಸರ ಅಧ್ಯಾಯನ
ಸಂದರ್ಭ:
ಭಾರತವು ಅಕ್ಟೋಬರ್ 23 ರಂದು “#23for23” ಎಂಬ ರಾಷ್ಟ್ರವ್ಯಾಪಿ ಅಭಿಯಾನದೊಂದಿಗೆ ಅಂತರರಾಷ್ಟ್ರೀಯ ಹಿಮ ಚಿರತೆ ದಿನವನ್ನು ಆಚರಿಸಿತು.
ಅಂತರರಾಷ್ಟ್ರೀಯ ಹಿಮ ಚಿರತೆ ದಿನ 2025:
2024 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯುಅಕ್ಟೋಬರ್ 23 ಅನ್ನು ಅಂತರರಾಷ್ಟ್ರೀಯ ಹಿಮ ಚಿರತೆ ದಿನವೆಂದು ಘೋಷಿಸಿತು.
ಉದ್ದೇಶ:- ಹಿಮ ಚಿರತೆ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವುದು.
‘#23for23’ ಅಭಿಯಾನವು ಜಾಗತಿಕ ಹಿಮ ಚಿರತೆ ಮತ್ತು ಪರಿಸರ ವ್ಯವಸ್ಥೆ ಸಂರಕ್ಷಣಾ ಕಾರ್ಯಕ್ರಮ (GSLEP) ಮತ್ತು ವಿಶ್ವದಾದ್ಯಂತ ಹಿಮ ಚಿರತೆ ಟ್ರಸ್ಟ್ನ ಒಂದು ಉಪಕ್ರಮವಾಗಿದೆ .
ಹಿಮ ಚಿರತೆಯ ಬಗ್ಗೆ:
ವೈಜ್ಞಾನಿಕ ಹೆಸರು:- ಪ್ಯಾಂಥೆರಾ ಉನ್ಸಿಯಾ
ಆವಾಸಸ್ಥಾನ:- ಮಧ್ಯ ಮತ್ತು ದಕ್ಷಿಣ ಏಷ್ಯಾದಕಡಿದಾದ ಪರ್ವತ ಪ್ರದೇಶಗಳಲ್ಲಿ ಮತ್ತು ಅತ್ಯಂತ ಶೀತಪ್ರದೇಶಗಳಲ್ಲಿ ವಾಸಿಸುತ್ತವೆ.
ವ್ಯಾಪಿಸಿರುವ ರಾಜ್ಯಗಳು:- ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ.
ಪರ್ವತಗಳ ಭೂತ:- ಹಿಮ ಚಿರತೆಯನ್ನು ಪರ್ವತಗಳ ಭೂತ ಎಂದೂ ಕರೆಯುತ್ತಾರೆ.
ಜೈವಿಕ ಸೂಚಕ:– ಇದು ಪರ್ವತ ಪರಿಸರ ವ್ಯವಸ್ಥೆಯ ಆರೋಗ್ಯದ ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ.
ಹಿಮ ಚಿರತೆಗಳ ವಿಶ್ವದ ರಾಜಧಾನಿ:- ಹೆಮಿಸ್, ಲಡಾಖ್.
ಅಂತರರಾಷ್ಟ್ರೀಯ ಹಿಮ ಚಿರತೆ ದಿನ:-ಅಕ್ಟೋಬರ್ 23 ರಂದು ಆಚರಿಸಲಾಗುತ್ತದೆ.
ಸಂರಕ್ಷಣಾ ಸ್ಥಿತಿ:
IUCN ಕೆಂಪು ಪಟ್ಟಿಯಲ್ಲಿ:- ದುರ್ಬಲ (Vu)
CITES ಸಮಾವೇಶ:- ಅನುಬಂಧ ಇ
ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972:- ಅನುಸೂಚಿ I
ಭಾರತದಿಂದ ಪ್ರಾರಂಭವಾದ ಸಂರಕ್ಷಣಾ ಪ್ರಯತ್ನಗಳ ಬಗ್ಗೆ:
ಪ್ರಾಜೆಕ್ಟ್ ಸ್ನೋ ಲೆಪರ್ಡ್ (ಹಿಮ ಚಿರತೆ ಯೋಜನೆ):
ಪ್ರಾರಂಭ- 2009 ರಲ್ಲಿ ಪ್ರಾರಂಭಿಸಲಾಯಿತು.
ಉದ್ದೇಶ – ಹಿಮ ಚಿರತೆಗಳು ಮತ್ತು ಅವುಗಳ ಆವಾಸಸ್ಥಾನವನ್ನು ಸಂರಕ್ಷಿಸಲು ಎಲ್ಲರನ್ನೂ ಒಳಗೊಂಡ ಮತ್ತು ಭಾಗವಹಿಸುವಿಕೆಯ ವಿಧಾನವನ್ನು ಉತ್ತೇಜಿಸುವುದು.
2. ಪ್ರಭೇದಗಳ ಚೇತರಿಕೆ ಕಾರ್ಯಕ್ರಮ:- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪುನರ್ವಸತಿ ಕಾರ್ಯಕ್ರಮಕ್ಕಾಗಿ ಹಿಮ ಚಿರತೆಯನ್ನು, ತೀವ್ರವಾಗಿ ಅಳಿವಿನಂಚಿನಲ್ಲಿರುವ 21 ಪ್ರಭೇದಗಳ ಪಟ್ಟಿಯಲ್ಲಿಟ್ಟಿದ್ದಾರೆ.
3. ಹಿಮ ಚಿರತೆ ಸಂರಕ್ಷಣಾ ಸಂತಾನೋತ್ಪತ್ತಿ ಕಾರ್ಯಕ್ರಮ: – ಇದನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿರುವ ಅಡ್ಮಜಾ ನಾಯ್ಡು ಹಿಮಾಲಯ ಪ್ರಾಣಿಶಾಸ್ತ್ರ ಉದ್ಯಾನವನದಲ್ಲಿ ಕೈಗೊಳ್ಳಲಾಗಿದೆ.
4. ಹಿಮಲ್ ಸಂರಕ್ಷಕ್:- ಇದು ಹಿಮ ಚಿರತೆಗಳನ್ನು ಸಂರಕ್ಷಿಸುವ ಸಮುದಾಯ ಸ್ವಯಂಸೇವಕ ಕಾರ್ಯಕ್ರಮವಾಗಿದ್ದು , ಇದನ್ನು ಅಕ್ಟೋಬರ್ 23, 2020 ರಂದು ಪ್ರಾರಂಭಿಸಲಾಯಿತು.
5. ಮೊದಲ ರಾಷ್ಟ್ರೀಯ ಶಿಷ್ಟಾಚಾರ: – 2019 ರಲ್ಲಿ ಜಾರಿಗೆ ಬಂದಿತು .
6. ಸುರಕ್ಷಿತ (SECURE) ಹಿಮಾಲಯ:- ಜಾಗತಿಕ ಪರಿಸರ ಸೌಲಭ್ಯ (GEF), ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಎತ್ತರದ ಜೀವವೈವಿಧ್ಯ ಸಂರಕ್ಷಣೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಯ ಮೇಲೆ ಸ್ಥಳೀಯ ಸಮುದಾಯಗಳ ಅವಲಂಬನೆಯನ್ನು ಕಡಿಮೆ ಮಾಡುವ ಯೋಜನೆಗೆ ಹಣಕಾಸು ಒದಗಿಸಿದವು .
ಅಂತರರಾಷ್ಟ್ರೀಯ ಸಂರಕ್ಷಣಾ ಪ್ರಯತ್ನಗಳ ಬಗ್ಗೆ:
ಹಿಮ ಚಿರತೆ ಪರಿಸರ ವ್ಯವಸ್ಥೆ ಸಂರಕ್ಷಣಾ ಕಾರ್ಯಕ್ರಮ:- ಇದು ಅಳಿವಿನಂಚಿನಲ್ಲಿರುವ ಹಿಮ ಚಿರತೆಯ ಸಂರಕ್ಷಣೆಯನ್ನು ಪ್ರಮುಖ ಕಾರ್ಯಕ್ರಮವಾಗಿ ಬಳಸಿಕೊಂಡು ಎತ್ತರದ ಪರ್ವತ ಅಭಿವೃದ್ಧಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ.
ಬಿಷ್ಕೆಕ್ ಘೋಷಣೆ:- 2013 ರಲ್ಲಿ, 12 ಹಿಮ ಚಿರತೆ ವ್ಯಾಪ್ತಿಯ ದೇಶಗಳು2020 ರ ವೇಳೆಗೆ ಕನಿಷ್ಠ 20 ಹಿಮ ಚಿರತೆ ನೆಲೆಗಳನ್ನು ಸುರಕ್ಷಿತಗೊಳಿಸಲು ಸಹಿ ಹಾಕಿದವು ಮತ್ತು ಒಪ್ಪಿಕೊಂಡವು.
ಅಂತರರಾಷ್ಟ್ರೀಯ ಹಿಮ ಚಿರತೆ ವರ್ಷ:- ವರ್ಷ ‘2015’ ಅನ್ನು ಅಂತರರಾಷ್ಟ್ರೀಯ ಹಿಮ ಚಿರತೆ ವರ್ಷವೆಂದು ಗೊತ್ತುಪಡಿಸಲಾಗಿದೆ.
ಇತ್ತೀಚಿನ ಹಿಮ ಚಿರತೆ ಗಣತಿ:
ಭಾರತದಲ್ಲಿ 718 ಹಿಮ ಚಿರತೆಗಳನ್ನು ವರದಿ ಮಾಡಿದೆ.
ಇದನ್ನು 2019 ರಿಂದ 2023 ರವರೆಗೆ ನಡೆಸಲಾಯಿತು.
ಗಣತಿ ನಡೆಸಿದವರು:- ಈ ಕಾರ್ಯಕ್ರಮವನ್ನು ಭಾರತೀಯ ವನ್ಯಜೀವಿ ಸಂಸ್ಥೆ (WII) ಎಲ್ಲಾ ಹಿಮ ಚಿರತೆ ವ್ಯಾಪ್ತಿಯ ರಾಜ್ಯಗಳು ಮತ್ತು ಎರಡು ಸಂರಕ್ಷಣಾ ಪಾಲುದಾರರಾದ ಪ್ರಕೃತಿ ಸಂರಕ್ಷಣಾ ಪ್ರತಿಷ್ಠಾನ, ಮೈಸೂರು (ಕರ್ನಾಟಕ), ಮತ್ತು ಭಾರತದ ವಿಶ್ವ ವನ್ಯಜೀವಿ ನಿಧಿ (WWF-I) ಸಹಾಯದಿಂದ ನಡೆಯಿತು.
ದತ್ತಾಂಶ ವಿಶ್ಲೇಷಣೆಯ ಆಧಾರದ ಮೇಲೆ, ವಿವಿಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂದಾಜು 718 ಹಿಮ ಚಿರತೆಗಳ ಸಂಖ್ಯೆ ಹೀಗಿದೆ – ಲಡಾಖ್ (477), ಉತ್ತರಾಖಂಡ (124), ಹಿಮಾಚಲ ಪ್ರದೇಶ (51), ಅರುಣಾಚಲ ಪ್ರದೇಶ (36), ಸಿಕ್ಕಿಂ (21), ಮತ್ತು ಜಮ್ಮು ಮತ್ತು ಕಾಶ್ಮೀರ (9).
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ಬೆಂಗಳೂರು ಪ್ರಾದೇಶಿಕ ಕಚೇರಿಯು, ತುಮಕೂರು ಜಿಲ್ಲೆಯ ಒಂದು ಗಣಿಗಾರಿಕಾ ಯೋಜನೆಗಾಗಿ 48.2 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಪ್ರಸ್ತಾವನೆಯನ್ನು ನಿರಾಕರಿಸಿದೆ.
ಈ ಪರಿಶೀಲನೆ ಸಾರಂಗಪಾಣಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಯ ಯೋಜನೆಗೆ ಅನುಮೋದನೆ ಪಡೆಯುವ ಉದ್ದೇಶದ ಪ್ರಸ್ತಾವನೆಗೆ ಸಂಬಂಧಿಸಿದುದಾಗಿತ್ತು.
ಈ ಗಣಿಗಾರಿಕೆ ಯೋಜನೆ ತುಮಕೂರು ಜಿಲ್ಲೆಯ ಚಿಕ್ಕನಾಯಿಕನಹಳ್ಳಿ ತಾಲ್ಲೂಕಿನ ತೀರ್ಥರಾಮಪುರ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಇದು ಗೊಳ್ಳರಹಳ್ಳಿ, ಹೊಸಹಳ್ಳಿ, ಕೊಡಿಹಳ್ಳಿ, ಟೋನಲಪುರ ಹಾಗೂ ಲಕ್ಷ್ಮೇಣಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.
ಈ ನಿರಾಕರಣೆಯ ಕಾರಣವೆಂದರೆ, ಬುಕ್ಕಪಟ್ಟಣ ವನ್ಯಜೀವಿ ಅಭಯಾರಣ್ಯದ ಘೋಷಿತ ಪರಿಸರ – ಸೂಕ್ಷ್ಮವಲಯದಲ್ಲಿ ವಾಣಿಜ್ಯ ಗಣಿಗಾರಿಕೆ ನಿಷೇಧಿತ ಚಟುವಟಿಕೆಯಾಗಿದೆ.
ಬುಕ್ಕಪಟ್ಟಣ ಭಾರತೀಯ ಕಿರುಕಾಡು ಜಿಂಕೆ (ಚಿಂಕಾರ) ವನ್ಯಜೀವಿ ಅಭಯಾರಣ್ಯದ ಬಗ್ಗೆ:
ಸ್ಥಳ – ಇದು ಕರ್ನಾಟಕದ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿದೆ.
ಇದು 2019 ರಲ್ಲಿ ಅಧಿಸೂಚನೆಯಾದ, ಸಂರಕ್ಷಿತ ಪ್ರದೇಶವಾಗಿದೆ.
ಉದ್ದೇಶ – ಭಾರತದ ಗಸೆಲ್ (ಚಿಂಕಾರ) ಮತ್ತು ಇತರ ಒಣ ಪ್ರದೇಶದ ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು.
ಸಸ್ಯ ಮತ್ತು ಪ್ರಾಣಿಸಂಕುಲ:
ಈ ಅಭಯಾರಣ್ಯವು ಅರಣ್ಯ ಆವರಿತ ಸಾವನ್ನಾ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಇಲ್ಲಿ ವ್ಯಾಪಕವಾದ ಹುಲ್ಲುಗಾವಲು ಪ್ರದೇಶಗಳು ಮತ್ತು ವಿರಳವಾಗಿ ಹರಡಿರುವ ಸ್ಥಳೀಯ ಮರಗಳ ಪ್ರಭೇದಗಳು ಕಂಡುಬರುತ್ತವೆ.
ಪ್ರಾಣಿವರ್ಗ: ಈ ಅಭಯಾರಣ್ಯವು ಪ್ರಾಥಮಿಕವಾಗಿ ಭಾರತೀಯ ಕಿರುಕಾಡು ಜಿಂಕೆಗಳಿಗೆ ಹೆಸರುವಾಸಿಯಾಗಿದೆ, ಮತ್ತು ಇಲ್ಲಿ ಕೃಷ್ಣಮೃಗಗಳು, ನಾಲ್ಕು ಕೊಂಬಿನ ಹುಲ್ಲೆಗಳು, ಚಿರತೆಗಳು, ಕರಡಿಗಳು, ಕತ್ತೆಕಿರುಬಗಳು ಮತ್ತು ಕಾಡುಹಂದಿಗಳು ಸಹ ಇವೆ . 160 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಸಹ ದಾಖಲಿಸಲಾಗಿದೆ.
ಸಸ್ಯ ವರ್ಗ: ಇಲ್ಲಿನ ಪ್ರಮುಖ ಮರಗಳ ಪ್ರಭೇದಗಳಲ್ಲಿ ಹಾರ್ಡ್ವಿಕಿಯಾ ಬಿನಾಟಾ (ಅಂಜನ್), ಫಿಲಾಂಥಸ್ ಎಂಬ್ಲಿಕಾ (ಆವಳೆ/ಆಮ್ಲಾ) ಮತ್ತು ಟಮರಿಂಡಸ್ ಇಂಡಿಕಾ (ಹುಣಸೆ) ಸೇರಿವೆ.
ಬೆಲಾರಸ್ನ ಆಂಡ್ರೆಜ್ ಪೊಕ್ಜೊಬಟ್ ಮತ್ತು ಜಾರ್ಜಿಯಾದ ಎಂಜಿಯಾ ಅಮಾಗ್ಲೋಬೆಲಿ ಎಂಬ ಇಬ್ಬರು ಜೈಲಿನಲ್ಲಿರುವ ಪತ್ರಕರ್ತರು 2025 ರ ಸಖರೋವ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸಖರೋವ್ ಪ್ರಶಸ್ತಿಯ ಬಗ್ಗೆ:
ಈ ಪ್ರಶಸ್ತಿ 1988 ರಲ್ಲಿ ಸ್ಥಾಪನೆಯಾಯಿತು.
ಸೋವಿಯತ್ ನ ಭಿನ್ನಮತೀಯ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಆಂಡ್ರೇ ಸಖರೋವ್ ಅವರ ಸ್ಮರಣಾರ್ಥ ಈ ಹೆಸರನ್ನು ಇಡಲಾಗಿದೆ.
ಇದು ಯುರೋಪಿನ ಒಕ್ಕೂಟದ ಅತ್ಯುನ್ನತ ಮಾನವ ಹಕ್ಕುಗಳ ಪ್ರಶಸ್ತಿಯಾಗಿದೆ.
ಉದ್ದೇಶ: – ಇದು ಮಾನವ ಹಕ್ಕುಗಳುಮತ್ತುಮೂಲಭೂತ ಸ್ವಾತಂತ್ರ್ಯಗಳನ್ನು ರಕ್ಷಿಸುವ ವ್ಯಕ್ತಿಗಳು ಅಥವಾ ಗುಂಪುಗಳನ್ನು ಗೌರವಿಸುತ್ತದೆ.
ನಿಮಗಿದು ಗೊತ್ತೇ?
ನೆಲ್ಸನ್ ಮಂಡೇಲಾ, ಮಲಾಲಾ ಯೂಸಫ್ಜೈ, ಡೆನಿಸ್ ಮುಕ್ವೇಜ್ ಮತ್ತು ನಾಡಿಯಾ ಮುರಾದ್ ಸೇರಿದಂತೆ ಹಲವಾರು ಸಖರೋವ್ ಪ್ರಶಸ್ತಿ ವಿಜೇತರಾಗಿದ್ದಾರೆ, ನಂತರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕುತೂಹಲಕಾರಿಯಾಗಿ, ಈ ತಿಂಗಳ ಆರಂಭದಲ್ಲಿ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ಕಳೆದ ವರ್ಷ ಸಖರೋವ್ ಪ್ರಶಸ್ತಿಯನ್ನು ಪಡೆದಿದ್ದರು.
ಸರ್ವೋಚ್ಚ ನ್ಯಾಯಾಲಯದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ
ಸಾಮಾನ್ಯ ಅಧ್ಯಾಯನ 2/ ಆಡಳಿತ, ಸಾಮಾನ್ಯ ಅಧ್ಯಯನ 3/ ಪರಿಸರ ಅಧ್ಯಾಯನ
ಸಂದರ್ಭ:
ಕೇಂದ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ (FRA), 2006 ಅನ್ನು ಸಮರ್ಥಿಸಿಕೊಂಡಿದೆ.
ಈ ಕಾಯ್ದೆಯು ಭಾರತದಲ್ಲಿ ಅರಣ್ಯವನ್ನು ಅವಲಂಬಿಸಿರುವ ಸಮುದಾಯಗಳ ಘನತೆ, ಜೀವನೋಪಾಯ ಮತ್ತು ಸಾಂಸ್ಕೃತಿಕ ಗುರುತನ್ನು ಪುನಃಸ್ಥಾಪಿಸುತ್ತಿದೆ ಎಂದು ಹೇಳುತ್ತದೆ.
ಅರಣ್ಯ ಹಕ್ಕುಗಳ ಕಾಯ್ದೆ, 2006 ಯ ಬಗ್ಗೆ:
ಈ ಕಾಯ್ದೆಯನ್ನು, ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ, 2006 ಎಂತಲೂ ಕರೆಯುತ್ತಾರೆ.
ಇದು ಅರಣ್ಯವಾಸಿ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಅರಣ್ಯ ಭೂಮಿ ಮತ್ತು ಅವರು ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಬಳಸುತ್ತಿರುವ ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ಕಾನೂನುಬದ್ಧವಾಗಿ ಗುರುತಿಸುತ್ತದೆ.
ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)
ಸಾಮಾನ್ಯ ಅಧ್ಯಾಯನ 2/ಆಡಳಿತ ; ಸಾಮಾನ್ಯ ಅಧ್ಯಾಯನ 3/ ಆರ್ಥಿಕತೆ
ಸಂದರ್ಭ:
ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅನುಷ್ಠಾನಗೊಳಿಸುವ ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM) ಯು, ವಿಶ್ವದ ಅತಿದೊಡ್ಡ ಬಡತನ ನಿರ್ಮೂಲನಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ದೀನದಯಾಳ ಅಂತ್ಯೋದಯ ಯೋಜನೆಯ ಬಗ್ಗೆ:
ಆರಂಭ:- ಹಿಂದಿನ ಸ್ವರ್ಣಜಯಂತಿ ಗ್ರಾಮ ಸ್ವರೋಜ್ಗಾರ್ ಯೋಜನೆ (SGSY)ಯನ್ನು ಪುನರ್ರಚಿಸುವ ಮೂಲಕ ಇದನ್ನು 2010 ರಲ್ಲಿ ಪ್ರಾರಂಭಿಸಲಾಯಿತು, ಈ ಉಪಕ್ರಮವನ್ನು 2016 ರಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM) ಎಂದು ಮರುನಾಮಕರಣ ಮಾಡಲಾಯಿತು.
ಹಣಕಾಸು:- ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಉದ್ದೇಶ:- ಸ್ವ-ಉದ್ಯೋಗ ಮತ್ತು ಕೌಶಲ್ಯಪೂರ್ಣ ವೇತನ ಉದ್ಯೋಗದ ಮೂಲಕ ಗ್ರಾಮೀಣ ಭಾಗದಲ್ಲಿರುವ ಬಡತನವನ್ನು ಕಡಿಮೆ ಮಾಡುವುದು.
ಮಹಿಳಾ ಕೇಂದ್ರಿತ ಮಾದರಿ:- ಈ ಗುರಿಯು ಮಹಿಳೆಯರನ್ನು ಸ್ವಸಹಾಯ ಗುಂಪುಗಳು ಮತ್ತು ಒಕ್ಕೂಟಗಳ ಮೂಲಕ ಸಾಲ, ಮಾರುಕಟ್ಟೆ ಮತ್ತು ತಂತ್ರಜ್ಞಾನಕ್ಕೆ ಸಂಪರ್ಕಿಸುವ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತದೆ.
ವಿಶ್ವಸಂಸ್ಥೆಯ ಎಲ್ಲರಿಗೂ ಮುನ್ನೆಚ್ಚರಿಕೆ (EW4All) ಯ ಉಪಕ್ರಮ
ಸಾಮಾನ್ಯ ಅಧ್ಯಾಯನ 3/ಪರಿಸರ ಅಧ್ಯಾಯನ
ಇದೀಗ ಸುದ್ದಿಯಲ್ಲಿದೆ:
ವಿಶ್ವ ಹವಾಮಾನ ಸಂಸ್ಥೆ (WMO) ಯು ತನ್ನ 193 ಸದಸ್ಯ ರಾಷ್ಟ್ರಗಳಿಗೆ 2027 ರ ವೇಳೆಗೆ ಸಾರ್ವತ್ರಿಕ ಮುನ್ನೆಚ್ಚರಿಕೆ ವ್ಯಾಪ್ತಿಗೆ ಬದ್ಧವಾಗುವಂತೆ ವಿಶ್ವಸಂಸ್ಥೆಯ ಎಲ್ಲರಿಗೂ ಮುನ್ನೆಚ್ಚರಿಕೆ (EW4All) ಉಪಕ್ರಮದ ಅಡಿಯಲ್ಲಿ ಒಟ್ಟುಗೂಡಿಸಿತು.
ಮುನ್ನೆಚ್ಚರಿಕೆ ವ್ಯವಸ್ಥೆ (EWS) ಯ ಬಗ್ಗೆ:
ಇದು ಅಪಾಯದ ಮೇಲ್ವಿಚಾರಣೆ, ಮುನ್ಸೂಚನೆ, ವಿಪತ್ತು ಅಪಾಯದ ಮೌಲ್ಯಮಾಪನ, ಸಂವಹನ ಮತ್ತು ಸನ್ನದ್ಧತೆಯನ್ನು ಸಂಯೋಜಿಸುವ ವಿಧಾನವಾಗಿದ್ದು, ಅಪಾಯದಲ್ಲಿರುವ ಜೀವ, ಜೀವನೋಪಾಯ ಮತ್ತು ಸ್ವತ್ತುಗಳನ್ನು ಉಳಿಸಲು ಸಕಾಲಿಕ ಕ್ರಮವನ್ನು ಸಕ್ರಿಯಗೊಳಿಸುತ್ತದೆ.
ವಿಶ್ವಸಂಸ್ಥೆಯ ಎಲ್ಲರಿಗೂ ಮುನ್ನೆಚ್ಚರಿಕೆ (EW4All) ಯ ಉಪಕ್ರಮ:
ಇದನ್ನು 2022 ರಲ್ಲಿ ಪ್ರಾರಂಭಿಸಲಾಯಿತು.
ಸಹ-ನೇತೃತ್ವದಲ್ಲಿ: – ವಿಶ್ವ ಹವಾಮಾನ ಸಂಸ್ಥೆ (WMO), ವಿಶ್ವಸಂಸ್ಥೆಯ ವಿಪತ್ತು ಅಪಾಯ ಕಡಿತ ಕಚೇರಿ (UNDRR), ಅಂತರರಾಷ್ಟ್ರೀಯ ದೂರಸಂಪರ್ಕ ಸಂಘಟನೆ (ITU), ಮತ್ತು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಹಾಗೂ ರೆಡ್ ಕ್ರೆಸೆಂಟ್ ಸಮಾಜಗಳ ಒಕ್ಕೂಟ (IFRC).
ಉದ್ದೇಶ: – ಚಂಡಮಾರುತ, ಪ್ರವಾಹ, ಶಾಖದ ಅಲೆ ಅಥವಾ ಬರಗಾಲದಂತಹ ಅಪಾಯಗಳ ವಿರುದ್ಧ ಜೀವ ಉಳಿಸುವ ಎಚ್ಚರಿಕೆಗಳ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಎಲ್ಲೇ ವಾಸಿಸುತ್ತಿದ್ದರೂ ರಕ್ಷಿಸಲ್ಪಡುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ.
ಬೆಂಗಳೂರಿಗೆ ಆಧುನಿಕ ಗಣನ ಅಭಿವೃದ್ಧಿ ಕೇಂದ್ರದಿಂದ (C-DAC) 35-ಪೆಟಾಫ್ಲಾಪ್ ಸಾಮರ್ಥ್ಯದ ಸೂಪರ್ಕಂಪ್ಯೂಟರ್ ದೊರೆಯಲಿದೆ
ಇದೀಗ ಸುದ್ದಿಯಲ್ಲಿದೆ:
ಬೆಂಗಳೂರಿಗೆ ಶೀಘ್ರದಲ್ಲೇ 35-ಪೆಟಾಫ್ಲಾಪ್ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ ದೊರೆಯಲಿದೆ, ಇದು ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟಿಂಗ್ ಯಂತ್ರವಾಗಿದ್ದು, ಇದನ್ನು ಪ್ರಸ್ತುತ ಆಧುನಿಕ ಗಣನ ಅಭಿವೃದ್ಧಿ ಕೇಂದ್ರ (C-DAC) ನಿರ್ಮಿಸುತ್ತಿದೆ.
ಪೆಟಾಫ್ಲಾಪ್ ಎನ್ನುವುದು ಕಂಪ್ಯೂಟರ್ನ ಪ್ರಕ್ರಿಯಾ ವೇಗವನ್ನು ಅಳೆಯುವ ಘಟಕವಾಗಿದ್ದು, ಅದು ಪ್ರತಿ ಸೆಕೆಂಡಿಗೆ ಒಂದು ಕ್ವಾಡ್ರಿಲಿಯನ್ (10¹⁵) ಫ್ಲೋಟಿಂಗ್-ಪಾಯಿಂಟ್ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ.
ರಾಷ್ಟ್ರೀಯ ಸೂಪರ್ಕಂಪ್ಯೂಟಿಂಗ್ ಗುರಿ (NSM) ಯ ಬಗ್ಗೆ:
ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
ಉದ್ದೇಶ – ಭಾರತದ ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಭಾರತ ಸರ್ಕಾರದ ಧ್ಯೇಯವಾಗಿದೆ.
ಪ್ರಮುಖ ಲಕ್ಷಣಗಳು:
ಈ ಗುರಿಯು ಭಾರತದಲ್ಲಿ 73 ಸೂಪರ್ಕಂಪ್ಯೂಟರ್ಗಳನ್ನು ವಿನ್ಯಾಸಗೊಳಿಸುವುದು ಮತ್ತು ತಯಾರಿಸುವುದನ್ನು ಒಳಗೊಂಡಿದೆ.
ಈ ಸೂಪರ್ಕಂಪ್ಯೂಟರ್ಗಳ ಸಮೂಹಗಳು ಭಾರತದಾದ್ಯಂತ ವಿವಿಧ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಸಂಪರ್ಕಗೊಳ್ಳುತ್ತವೆ.
ಈ ಜಾಲoದ್ರವನ್ನು ರಾಷ್ಟ್ರೀಯ ಜ್ಞಾನ ಜಾಲಕ್ಕೆ (NKN) ಸಂಪರ್ಕಿಸಲಾಗುತ್ತದೆ.
ಅನುಷ್ಠಾನಗೊಳಿಸುವ ಸಂಸ್ಥೆಗಳು:
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ (DeitY)
ಆಧುನಿಕ ಗಣನ ಅಭಿವೃದ್ಧಿ ಕೇಂದ್ರದಿಂದ (C-DAC)
ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು.
ಸೂಪರ್ಕಂಪ್ಯೂಟರ್ಗಳ ನವಯುಗದ ಅನ್ವಯಿಕೆಗಳು:
ಹವಾಮಾನ ಮುನ್ಸೂಚನೆ
ನೈಸರ್ಗಿಕ ವಿಕೋಪದ ಮುನ್ಸೂಚನೆಗಳು
ಔಷಧ ಸಂಶೋಧನೆ
ಬಾಹ್ಯಾಕಾಶ ಅನ್ವಯಿಕೆಗಳು
ವಾಯುಗತಿಶಾಸ್ತ್ರ ಸಂಶೋಧನೆ
3D ಪರಮಾಣು ಪರೀಕ್ಷಾ ಅನುಕರಣೆಗಳು
ಸೂಪರ್ಕಂಪ್ಯೂಟರ್ಗಳ ಬಗ್ಗೆ ಸಂಗತಿಗಳು:
ಭಾರತದ ಮೊದಲ ಸೂಪರ್ಕಂಪ್ಯೂಟರ್ – PARAM 8000, ಪುಣೆಯ ಆಧುನಿಕ ಗಣನ ಅಭಿವೃದ್ಧಿ ಕೇಂದ್ರ (C-DAC) ದಲ್ಲಿ ಅಭಿವೃದ್ಧಿಪಡಿಸಿ 1991 ರಲ್ಲಿ ಪ್ರಾರಂಭಿಸಲಾಯಿತು.
“ರುದ್ರ” ಭಾರತದಲ್ಲಿ ಸಂಪೂರ್ಣ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮೊದಲ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ಸರ್ವರ್ ಆಗಿದ್ದು, ಇದು ಜಾಗತಿಕ ಮಟ್ಟದ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಶ್ರೇಣಿಯ ಸರ್ವರ್ಗಳ ಸಮಾನ ಮಟ್ಟದ ಸಾಮರ್ಥ್ಯವನ್ನು ಹೊಂದಿದೆ.
ಭಾರತದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್ – AIRAWAT, ಇದು ದೇಶದ ಅತಿದೊಡ್ಡ ಮತ್ತು ವೇಗದ AI ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆಯಾಗಿದೆ.ಇದು 13,170 ಟೆರಾಫ್ಲಾಪ್ಗಳ ವೇಗವನ್ನು ಹೊಂದಿದೆ ಮತ್ತು 2023 ರಲ್ಲಿ ಟಾಪ್ 500 ಪಟ್ಟಿಯಲ್ಲಿ ಜಾಗತಿಕವಾಗಿ 75 ನೇ ಸ್ಥಾನದಲ್ಲಿತ್ತು.