Blog

  • “ಆಪರೇಷನ್ ಹಿಂಟರ್‌ಲ್ಯಾಂಡ್ ಬ್ರೂ” ಕಾರ್ಯಾಚರಣೆ | ಗಾಜಾ ಪ್ರದೇಶದ ಹೊಸ ಗಡಿಯನ್ನು ನಿರ್ದಿಷ್ಟಗೊಳಿಸುವ “ಹಳದಿ ರೇಖೆ” (Yellow Line) | ಭಾರತದ ಅಕ್ಕಿಯ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ | ಬ್ಲೂ ಕಾರ್ನರ್ ನೋಟಿಸ್ | ಭಾರತ್ 6ಜಿ ಮೈತ್ರಿಕೂಟ (B6GA) | ಆಫ್ರಿಕಾದ ಪೆಂಗ್ವಿನ್‌ಗಳು

    “ಆಪರೇಷನ್ ಹಿಂಟರ್‌ಲ್ಯಾಂಡ್ ಬ್ರೂ” ಕಾರ್ಯಾಚರಣೆ

    ಸಾಮಾನ್ಯ ಅಧ್ಯಯನ- 2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • ಕಂದಾಯ ಗುಪ್ತಚರ ನಿರ್ದೇಶನಾಲಯವು, “ಹಿಂಟರ್‌ಲ್ಯಾಂಡ್ ಬ್ರೂ” ಕಾರ್ಯಾಚರಣೆ ಎಂಬ ಸಂಕೇತನಾಮದ ತಂತ್ರಾತ್ಮಕ ಕಾರ್ಯಾಚರಣೆಯ ಮೂಲಕ, ಮಹಾರಾಷ್ಟ್ರದ ವಾರ್ಧಾದಲ್ಲಿ ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಮೆಫೆಡ್ರೋನ್ ಉತ್ಪಾದನಾ ಘಟಕವನ್ನು ಯಶಸ್ವಿಯಾಗಿ ಭೇದಿಸಿದೆ.

    ಮೆಫೆಡ್ರೋನ್ ನ ಬಗ್ಗೆ:

      • ಇದನ್ನು ‘4-ಮೀಥೈಲ್‌ಮೆಥ್ ಕ್ಯಾಥಿನೋನ್’ (4-MMC) ಅಥವಾ ‘4-ಮೀಥೈಲ್ ಎಫೆಡ್ರೋನ್’ ಎಂದು ಕರೆಯಲಾಗುತ್ತದೆ.
      • ಇದನ್ನು ‘ಹೊಸ ಮನೋಕ್ರಿಯಾತ್ಮಕ ವಸ್ತು’ (‘ನ್ಯೂ ಸೈಕೋಆಕ್ಟಿವ್ ಸಬ್‌ಸ್ಟೆನ್ಸ್’ -NPS) ಎಂದು ವರ್ಗೀಕರಿಸಲಾಗಿದೆ.
    • ಎನ್‌ಡಿಪಿಎಸ್ (NDPS) ಕಾಯ್ದೆ, 1985ರ ಅಡಿಯಲ್ಲಿ ಮೆಫೆಡ್ರೋನ್ ಅನ್ನು ನಿಷೇಧಿಸಲಾಗಿದೆ.

    ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಚೌಕಟ್ಟು:

    • ನಶಾ ಮುಕ್ತ ಭಾರತ ಅಭಿಯಾನ (ಆಗಸ್ಟ್ 15, 2020).
    • ಮಾದಕ ದ್ರವ್ಯಗಳ ಬೇಡಿಕೆ ಕಡಿತದ ರಾಷ್ಟ್ರೀಯ ಕ್ರಿಯಾ ಯೋಜನೆ (NAPDDR).

    ಗಾಜಾ ಪ್ರದೇಶದ ಹೊಸ ಗಡಿಯನ್ನು ನಿರ್ದಿಷ್ಟಗೊಳಿಸುವ “ಹಳದಿ ರೇಖೆ” (Yellow Line)

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟ 2025ರ ಕದನ ವಿರಾಮ ಒಪ್ಪಂದದ ಹಂತ-1ರ ವೇಳೆ ಅಂಗೀಕರಿಸಲಾದ, ಸೇನಾ ಪಡೆಗಳ ತಾತ್ಕಾಲಿಕ ಹಿಂತೆಗೆತದ ರೇಖೆಯಾಗಿರುವ “ಹಳದಿ ರೇಖೆ”ಯನ್ನು, ಇಸ್ರೇಲ್ ಸೇನೆಯು “ಹೊಸ ಗಡಿ” ಎಂದು ವಿವರಿಸಿದೆ.

    “ಹಳದಿ ರೇಖೆ” (Yellow Line) ಯ ಬಗ್ಗೆ:

    • ‘ಹಳದಿ ರೇಖೆ’ಯು ಗಾಜಾ ಪಟ್ಟಿಯ ಒಳಭಾಗದಲ್ಲಿ ಗುರುತಿಸಲಾದ ಒಂದು ತಾತ್ಕಾಲಿಕ “ಸೇನೆಯ ಸೀಮಾ ನಿರ್ಣಯ ರೇಖೆ”ಯಾಗಿದೆ.
    • ಈ ರೇಖೆಯ ಪೂರ್ವಕ್ಕಿರುವ ಪ್ರದೇಶವು ಇಸ್ರೇಲ್‌ನ ನೇರ ಕಾರ್ಯಾಚರಣೆಯ ನಿಯಂತ್ರಣದಲ್ಲಿ ಮುಂದುವರಿಯುತ್ತದೆ.

    ಇಸ್ರೇಲ್ ನಿಯಂತ್ರಣದಲ್ಲಿರುವ ಪ್ರದೇಶ:

    • ಗಾಜಾದ ಅರ್ಧಕ್ಕಿಂತ ಹೆಚ್ಚು ಭಾಗ (ಶೇ. 53–58 ರಷ್ಟು) ಇಸ್ರೇಲ್‌ನ ನಿಯಂತ್ರಣದಲ್ಲಿ ಉಳಿದಿದೆ. ಇದು ಬಹುಪಾಲು ಕೃಷಿ ಭೂಮಿ ಮತ್ತು ಈಜಿಪ್ಟ್‌ನೊಂದಿಗಿನ “ರಫಾ ಗಡಿ ದಾಟುವ” ಪ್ರದೇಶವನ್ನು ಒಳಗೊಂಡಿದೆ.

    ಭಾರತದ ಅಕ್ಕಿಯ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ

    ಸಾಮಾನ್ಯ ಅಧ್ಯಯನ -3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ವ್ಯಾಪಾರದ ಮಾತುಕತೆಗಳ ಯಾವುದೇ ಪ್ರಮುಖ ಪ್ರಗತಿಯಿಲ್ಲದೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಅಮೇರಿಕಾದ ಅಧ್ಯಕ್ಷರು ಕೃಷಿ ಆಮದುಗಳ ಮೇಲೆ, ವಿಶೇಷವಾಗಿ ಭಾರತದಿಂದ ಆಮದಾಗುವ ಅಕ್ಕಿಯ ಮೇಲೆ ಹೊಸ ಸುಂಕಗಳನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಭಾರತದ ಅಕ್ಕಿ ರಫ್ತಿನ ಬಗ್ಗೆ:

    • ಅಕ್ಕಿ ಉತ್ಪಾದನೆಯಲ್ಲಿ ಚೀನಾ ವಿಶ್ವದ ಅತಿದೊಡ್ಡ ರಾಷ್ಟ್ರವಾಗಿದ್ದು, ನಂತರದ ಸ್ಥಾನಗಳಲ್ಲಿ ಭಾರತ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ದೇಶಗಳಿವೆ.
    • ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ರಾಷ್ಟ್ರವಾಗಿದ್ದು, 2023ರ ಅವಧಿಯಲ್ಲಿ ಜಾಗತಿಕ ಅಕ್ಕಿ ರಫ್ತಿನಲ್ಲಿ 33% ರಷ್ಟು ಪಾಲನ್ನು ಹೊಂದಿತ್ತು.
    • ಭಾರತವು 179 ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತದೆ.

    ಅಕ್ಕಿಯ ಬಗ್ಗೆ ಪ್ರಮುಖ ಸಂಗತಿಗಳು ಮತ್ತು ಪರಿಸ್ಥಿತಿಗಳು:

    • ಪ್ರಾಥಮಿಕ ಪ್ರಧಾನ ಆಹಾರ:- ಭಾರತದ ಬಹುಪಾಲು ಜನಸಂಖ್ಯೆಗೆ ಅಕ್ಕಿಯು ಪ್ರಾಥಮಿಕ ಪ್ರಧಾನ ಆಹಾರವಾಗಿದೆ.
    • ಉತ್ಪಾದನೆಯಲ್ಲಿ ಮುಂಚೂಣಿ:- ಭಾರತವು ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ದೇಶವಾಗಿದೆ ಮತ್ತು ಜಾಗತಿಕವಾಗಿ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ.
    • ವಾಯುಗುಣದ ಪರಿಸ್ಥಿತಿಗಳು:- ಇದೊಂದು ಖಾರಿಫ್ (ಮುಂಗಾರು) ಬೆಳೆಯಾಗಿದ್ದು, ಇದಕ್ಕೆ ಉಷ್ಣ ಮತ್ತು ತೇವಾಂಶಯುಕ್ತ ವಾಯುಗುಣದ ಅಗತ್ಯವಿದೆ.
    • ತಾಪಮಾನ:- ಈ ಬೆಳೆಗೆ ಹೆಚ್ಚಿನ ತಾಪಮಾನದ ಅಗತ್ಯವಿದ್ದು, ಸಾಮಾನ್ಯವಾಗಿ 25°C ಗಿಂತ ಅಧಿಕ ಉಷ್ಣಾಂಶವಿರಬೇಕು.
    • ಮಳೆ:- ಇದಕ್ಕೆ ಅಧಿಕ ವಾರ್ಷಿಕ ಮಳೆಯ, ಸಾಮಾನ್ಯವಾಗಿ 100 ಸೆಂ .ಮೀ ಗಿಂತ ಹೆಚ್ಚು ಅಗತ್ಯವಿರುತ್ತದೆ. (ಸಾಮಾನ್ಯವಾಗಿ 150-300 ಸೆಂ .ಮೀ). ಪಂಜಾಬ್ ಮತ್ತು ಹರಿಯಾಣದಂತಹ ಕಡಿಮೆ ಮಳೆಬೀಳುವ ಪ್ರದೇಶಗಳಲ್ಲಿ ಇದನ್ನು ನೀರಾವರಿ ಸೌಲಭ್ಯದೊಂದಿಗೆ ಬೆಳೆಯಲಾಗುತ್ತದೆ.
    • ಮಣ್ಣು:- ನೀರನ್ನು ಹಿಡಿದಿಟ್ಟುಕೊಳ್ಳಲು ಸಾಮರ್ಥ್ಯವಿರುವ ಫಲವತ್ತಾದ ಜೇಡಿ ಮಣ್ಣು ಅಥವಾ ಮಿಶ್ರ (ಲೋಮಿ) ಮಣ್ಣಿನಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತದೆ. ನದಿ ಕಣಿವೆಗಳು, ಪ್ರವಾಹ ಬಯಲುಗಳು, ಮುಖಜ ಭೂಮಿಗಳು ಮತ್ತು ಕರಾವಳಿ ಮೈದಾನಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.
    • ಪ್ರಮುಖ ಉತ್ಪಾದಕ ರಾಜ್ಯಗಳು:- ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಪಂಜಾಬ್.
    • ಅಧಿಕ ಇಳುವರಿ ನೀಡುವ ರಾಜ್ಯಗಳು:- ಪಂಜಾಬ್, ತಮಿಳುನಾಡು ಮತ್ತು ಹರಿಯಾಣ.

    ಬ್ಲೂ ಕಾರ್ನರ್ ನೋಟಿಸ್

    ಸಾಮಾನ್ಯ ಅಧ್ಯಯನ- 2/ಅಂತರರಾಷ್ಟ್ರೀಯ ಸಂಬಂಧಗಳು/ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಗೋವಾದ ನೈಟ್‌ಕ್ಲಬ್ ಒಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 25 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ನೈಟ್‌ಕ್ಲಬ್ ಗಳ ಮಾಲೀಕರನ್ನು ಪತ್ತೆಹಚ್ಚಲುಇಂಟರ್‌ಪೋಲ್” ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.
    • ಇಂಟರ್‌ಪೋಲ್‌ನಿಂದ ಈ ನೋಟಿಸ್ ಜಾರಿಗೊಳಿಸುವಂತೆ ಕೋರಿ ಗೋವಾ ಪೊಲೀಸರು “ಕೇಂದ್ರೀಯ ತನಿಖಾ ದಳಕ್ಕೆ” (CBI) ಮನವಿ ಸಲ್ಲಿಸಿದ್ದರು.

    ಇಂಟರ್‌ಪೋಲ್ ನೋಟಿಸ್‌ಗಳ ವಿಧಗಳು:

    • ರೆಡ್ ನೋಟಿಸ್:- ವಿಚಾರಣೆಗೆ ಒಳಪಡಬೇಕಾದ ಅಥವಾ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳ ಇರುವಿಕೆಯ ಸ್ಥಳವನ್ನು ಪತ್ತೆಹಚ್ಚಲು ಮತ್ತು ಅವರನ್ನು ಬಂಧಿಸಲು ಇದನ್ನು ಹೊರಡಿಸಲಾಗುತ್ತದೆ.
    • ಯೆಲ್ಲೋ ನೋಟಿಸ್:- ಕಾಣೆಯಾದ ವ್ಯಕ್ತಿಗಳನ್ನು (ಸಾಮಾನ್ಯವಾಗಿ ಅಪ್ರಾಪ್ತ ವಯಸ್ಕರು) ಪತ್ತೆಹಚ್ಚಲು ಅಥವಾ ತಮ್ಮನ್ನು ತಾವು ಗುರುತಿಸಿಕೊಳ್ಳಲು ಅಸಮರ್ಥರಾದ ವ್ಯಕ್ತಿಗಳನ್ನು ಗುರುತಿಸಲು ನೆರವಾಗುವಂತೆ ಇದನ್ನು ಬಳಸಲಾಗುತ್ತದೆ.
    • ಬ್ಲೂ ನೋಟಿಸ್:- ಅಪರಾಧ ತನಿಖೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಗುರುತು, ಇರುವ ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಇದನ್ನು ನೀಡಲಾಗುತ್ತದೆ.
    • ಬ್ಲ್ಯಾಕ್ ನೋಟಿಸ್:ಗುರುತಿಸಲಾಗದ ಮೃತದೇಹಗಳ ಕುರಿತು ಮಾಹಿತಿಯನ್ನು ಕೋರಲು ಇದನ್ನು ಹೊರಡಿಸಲಾಗುತ್ತದೆ.
    • ಗ್ರೀನ್ ನೋಟಿಸ್:- ಸಾರ್ವಜನಿಕ ಸುರಕ್ಷತೆಗೆ ಸಂಭವನೀಯ ಬೆದರಿಕೆ ಎಂದು ಪರಿಗಣಿಸಲಾದ ವ್ಯಕ್ತಿಯೊಬ್ಬರ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು ಇದನ್ನು ಬಳಸಲಾಗುತ್ತದೆ.
    • ಆರೆಂಜ್ ನೋಟಿಸ್:- ಸಾರ್ವಜನಿಕ ಸುರಕ್ಷತೆಗೆ ಗಂಭೀರ ಮತ್ತು ಸನ್ನಿಹಿತ ಬೆದರಿಕೆಯನ್ನು ಒಡ್ಡುವ ಘಟನೆ, ವ್ಯಕ್ತಿ, ವಸ್ತು ಅಥವಾ ಪ್ರಕ್ರಿಯೆಯ ಬಗ್ಗೆ ಎಚ್ಚರಿಕೆ ನೀಡಲು ಇದನ್ನು ಹೊರಡಿಸಲಾಗುತ್ತದೆ.
    • ಪರ್ಪಲ್ ನೋಟಿಸ್:ಅಪರಾಧಿಗಳು ಬಳಸುವ ಕಾರ್ಯವಿಧಾನ, ವಸ್ತುಗಳು, ಸಾಧನಗಳು ಮತ್ತು ಮರೆಮಾಚುವ ವಿಧಾನಗಳ ಕುರಿತು ಮಾಹಿತಿಯನ್ನು ಕೋರಲು ಅಥವಾ ಒದಗಿಸಲು ಇದನ್ನು ಬಳಸಲಾಗುತ್ತದೆ.
    • ಇಂಟರ್‌ಪೋಲ್–ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ನೋಟಿಸ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಗಳಿಗೆ  ಒಳಪಟ್ಟಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗಾಗಿ ಇದನ್ನು ನೀಡಲಾಗುತ್ತದೆ.

    ಭಾರತ್ 6ಜಿ ಮೈತ್ರಿಕೂಟ (B6GA)

    ಸಾಮಾನ್ಯ ಅಧ್ಯಯನ- 3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸಂವಹನ ಸಚಿವರು, ‘ಭಾರತ್ 6ಜಿ ಮಿಷನ್’ ಅಡಿಯಲ್ಲಿನ ಸರ್ವೋಚ್ಚ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು ಹಾಗೂ ಭಾರತ್ 6ಜಿ ಮೈತ್ರಿಕೂಟ (B6GA) ದ ಪ್ರಗತಿಯನ್ನು ಪರಿಶೀಲಿಸಿದರು.

    ಭಾರತ್ 6ಜಿ ಮೈತ್ರಿಕೂಟದ ಬಗ್ಗೆ:

    • ಇದು ‘ಭಾರತ್ 6ಜಿ ವಿಷನ್’ನ ಅನುಷ್ಠಾನದ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. 2030ರ ವೇಳೆಗೆ 6ಜಿ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ಮುಂಚೂಣಿ ರಾಷ್ಟ್ರವನ್ನಾಗಿ ರೂಪಿಸಲು ಮಾರ್ಚ್ 2023ರಲ್ಲಿ ಇದನ್ನು ಅನಾವರಣಗೊಳಿಸಲಾಯಿತು.

    6ಜಿ ತಂತ್ರಜ್ಞಾನದ ಕುರಿತು:

    • 6ಜಿ ತಂತ್ರಜ್ಞಾನವು ನಿಸ್ತಂತು (ವೈರ್‌ಲೆಸ್) ಸಂವಹನ ತಂತ್ರಜ್ಞಾನದ ಮುಂದಿನ ಬೆಳವಣಿಗೆಯನ್ನು  ಪ್ರತಿನಿಧಿಸುತ್ತದೆ. ಇದು ಮೊಬೈಲ್ ನೆಟ್‌ವರ್ಕ್‌ಗಳ ಆರನೇ ತಲೆಮಾರಾಗಿದ್ದು, 5ಜಿಯ ನಂತರದ ತಂತ್ರಜ್ಞಾನವಾಗಿದೆ.
    • 6ಜಿ ತಂತ್ರಜ್ಞಾನವು ಪ್ರತಿ ಸೆಕೆಂಡಿಗೆ 1 ಟೆರಾಬಿಟ್  ಗರಿಷ್ಠ ಡೇಟಾ ದರಗಳನ್ನು ಒದಗಿಸಲಿದೆ. 10 Gbps ವೇಗವನ್ನು ನೀಡುವ 5ಜಿಗಿಂತ ಇದು ಸುಮಾರು 100 ಪಟ್ಟು ಹೆಚ್ಚು ವೇಗವಾಗಿರುತ್ತದೆ.
    • 6ಜಿ ತಂತ್ರಜ್ಞಾನವು 5ಜಿಯ 1 ಮಿಲಿಸೆಕೆಂಡ್‌ಗೆ ಹೋಲಿಸಿದರೆ  0.1 ಮಿಲಿಸೆಕೆಂಡ್‌ಗಳ ‘ಅಲ್ಟ್ರಾ-ಲೋ ಲೇಟೆನ್ಸಿ’ಯನ್ನು (ಅತ್ಯಲ್ಪ ವಿಳಂಬ) ಸಾಧಿಸಲಿದೆ.

    ಆಫ್ರಿಕಾದ ಪೆಂಗ್ವಿನ್‌ಗಳು

    ಸಾಮಾನ್ಯ ಅಧ್ಯಯನ- 3/ಪರಿಸರ; ಸುದ್ದಿಯಲ್ಲಿರುವ ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ: 

    • ದಕ್ಷಿಣ ಆಫ್ರಿಕಾದಲ್ಲಿ ಸಾರ್ಡೀನ್ ಮೀನುಗಳ ಅತಿಯಾದ ಮೀನುಗಾರಿಕೆಯಿಂದಾಗಿ, 2004 ರಿಂದ 2011ರ ನಡುವೆ, ವಿಶೇಷವಾಗಿ ಡಾಸೆನ್ ಮತ್ತು ರಾಬೆನ್ ದ್ವೀಪಗಳ ಸುತ್ತಮುತ್ತ, 60,000ಕ್ಕೂ ಹೆಚ್ಚು ಆಫ್ರಿಕಾದ ಪೆಂಗ್ವಿನ್‌ಗಳು ಸಾವನ್ನಪ್ಪಿವೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ.

    ಆಫ್ರಿಕಾದ ಪೆಂಗ್ವಿನ್‌ಗಳ ಬಗ್ಗೆ:

    • ವೈಜ್ಞಾನಿಕ ಹೆಸರು: ಸ್ಫೆನಿಸ್ಕಸ್ ಡೆಮರ್ಸಸ್.
    • ಇವು ಅತ್ಯಂತ ಚಿಕ್ಕ ಪೆಂಗ್ವಿನ್ ಪ್ರಭೇದಗಳಲ್ಲಿ ಒಂದಾಗಿದ್ದು, ವೇಗವಾಗಿ ಈಜುವ ಸಾಮರ್ಥ್ಯ ಹೊಂದಿವೆ. ಇವು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಕರಾವಳಿ ತೀರಗಳಲ್ಲಿ ವಾಸಿಸುತ್ತವೆ.
    • ಅಂಟಾರ್ಕ್ಟಿಕ್ ಪೆಂಗ್ವಿನ್‌ಗಳಿಗಿಂತ ಭಿನ್ನವಾಗಿ, ಇವು ಮಂಜುಗಡ್ಡೆಯ ಮೇಲೆ ವಾಸಿಸದೆ, ಮರಳು ತುಂಬಿದ ಕಡಲತೀರಗಳು ಮತ್ತು ಕಲ್ಲಿನ ದಡಗಳಲ್ಲಿ ವಾಸಿಸುತ್ತವೆ.
    • ಸ್ವರೂಪ: ದೇಹದ ಉಷ್ಣತೆಯನ್ನು ನಿಯಂತ್ರಿಸಲು ಕಣ್ಣುಗಳ ಮೇಲೆ ಗುಲಾಬಿ ಬಣ್ಣದ ಬೋಳು ಕಲೆ ಅಥವಾ ಚರ್ಮದ ಭಾಗವನ್ನು ಹೊಂದಿರುತ್ತವೆ. ಮಾನವರ ಬೆರಳಚ್ಚುಗಳಂತೆ, ಪ್ರತಿ ಪೆಂಗ್ವಿನ್ ತನ್ನ ಎದೆಯ ಮೇಲೆ ವಿಶಿಷ್ಟವಾದ ಚುಕ್ಕೆಗಳ ವಿನ್ಯಾಸವನ್ನು ಹೊಂದಿರುತ್ತದೆ.
    • IUCN ಕೆಂಪುಪಟ್ಟಿ 2024:- ‘ತೀವ್ರವಾಗಿ ಅಳಿವಿನಂಚಿನಲ್ಲಿರುವ’ (CR).

    ನಿಮಗಿದು ತಿಳಿದಿದೆಯೇ? 

    • ಜಾಗತಿಕವಾಗಿ 18 ಪೆಂಗ್ವಿನ್ ಪ್ರಭೇದಗಳಿವೆ — ಇವುಗಳಲ್ಲಿ ರಾಜ, ಚಕ್ರವರ್ತಿ ಮತ್ತು ರಾಕ್‌ಹಾಪ್ಪರ್ ಪೆಂಗ್ವಿನ್‌ಗಳು ಅತ್ಯಂತ ಚಿರ ಪರಿಚಿತವಾಗಿವೆ.
  • ಕಂಟೋನ್ಮೆಂಟ್ ರೈಲ್ವೆ ಕಾಲೋನಿ

    ಕಂಟೋನ್ಮೆಂಟ್ ರೈಲ್ವೆ ಕಾಲೋನಿ

    ಇದೀಗ ಸುದ್ದಿಯಲ್ಲಿದೆ:

    • ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಸಮೀಪವಿರುವ 8.61 ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶಕ್ಕೆ ನೀಡಲಾಗಿದ್ದ ‘ಜೈವಿಕ ವೈವಿಧ್ಯತೆ ಪರಂಪರೆ ತಾಣ’ (BHS) ಎಂಬ ಮಾನ್ಯತೆಯನ್ನು ರಾಜ್ಯ ಸರ್ಕಾರವು ಹಿಂತೆಗೆದುಕೊಂಡಿದೆ.

    ಜೈವಿಕ ವೈವಿಧ್ಯತೆ ಪರಂಪರೆ ತಾಣಗಳ (BHS) ಬಗ್ಗೆ:

    • ವ್ಯಾಖ್ಯಾನ:- ಇವು ಭೂಮಂಡಲ, ಕರಾವಳಿ, ಒಳನಾಡು ಅಥವಾ ಸಮುದ್ರ ಪ್ರದೇಶಗಳನ್ನು ಒಳಗೊಂಡಿರುವ ಸಮೃದ್ಧ, ವಿಶಿಷ್ಟ ಮತ್ತು ಪರಿಸರ ಸೂಕ್ಷ್ಮ ಪರಿಸರ ವ್ಯವಸ್ಥೆಗಳನ್ನು ಹೊಂದಿರುವ ನಿರ್ದಿಷ್ಟ ಸ್ಥಳಗಳಾಗಿವೆ.
    • ಅಧಿಸೂಚನೆ:- ಈ ಪ್ರದೇಶಗಳನ್ನು “ಜೈವಿಕ ವೈವಿಧ್ಯತೆ ಕಾಯ್ದೆ, 2002” ರ ಅಡಿಯಲ್ಲಿ ರಾಜ್ಯ ಸರ್ಕಾರಗಳು ಅಧಿಸೂಚಿಸುತ್ತವೆ.
    • ಕರ್ನಾಟಕದ ‘ನಲ್ಲೂರು ಹುಣಸೆ ತೋಪು:- 2007ರಲ್ಲಿ ಭಾರತದ ಮೊಟ್ಟಮೊದಲ ಜೈವಿಕ ವೈವಿಧ್ಯತೆ ಪರಂಪರೆ ತಾಣವಾಗಿ ಘೋಷಿಸಲ್ಪಟ್ಟಿತು.
    • ಉದ್ದೇಶ:- “ಜೈವಿಕ ವೈವಿಧ್ಯತೆ ನಿರ್ವಹಣಾ ಸಮಿತಿ”ಗಳ (BMCs) ಮೂಲಕ ಸಮುದಾಯದ ಸಹಭಾಗಿತ್ವದೊಂದಿಗೆ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವುದು ಮತ್ತು ಸ್ಥಳೀಯ ಜೀವನೋಪಾಯವನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಕರ್ನಾಟಕದ ಜೈವಿಕ ವೈವಿಧ್ಯತೆ ಪರಂಪರೆ ತಾಣಗಳು (BHS):

    ಜೈವಿಕ ವೈವಿಧ್ಯತೆ ಪರಂಪರೆ ತಾಣ

    ಸ್ಥಳ

    ಮಾನ್ಯತೆ ನೀಡಿದ ವರ್ಷ

    ವಿಸ್ತೀರ್ಣ/ವಿವರಗಳು

    ಮಹತ್ವ

    ನಲ್ಲೂರು ಹುಣಸೆ ತೋಪು

    ಬೆಂಗಳೂರು

    2007

    54 ಎಕರೆ

    ಭಾರತದ ಪ್ರಥಮ ಜೈವಿಕ ವೈವಿಧ್ಯತೆ ಪರಂಪರೆ ತಾಣ; ಇದು ಪ್ರಾಚೀನ ಹುಣಸೆ ಮರಗಳು ಹಾಗೂ ಸಮೃದ್ಧ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿದೆ.

    ಹೊಗ್ರೆಕಾನ್ ಶೋಲಾ ಅರಣ್ಯ

    ಚಿಕ್ಕಮಗಳೂರು

    2020ಕ್ಕಿಂತ ಮೊದಲು

    ಶೋಲಾ ಅರಣ್ಯಗಳ ಭಾಗ, ವನ್ಯಜೀವಿ ಕಾರಿಡಾರ್

    ಇದು ಕುದುರೆಮುಖ ಮತ್ತು ಭದ್ರಾ ಅಭಯಾರಣ್ಯಗಳನ್ನು ಸಂಪರ್ಕಿಸುತ್ತದೆ ಹಾಗೂ ವೈವಿಧ್ಯಮಯ ಸಸ್ಯವರ್ಗವನ್ನು ಹೊಂದಿದೆ.

    ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (GKVK)

    ಬೆಂಗಳೂರು

    2020ಕ್ಕಿಂತ ಮೊದಲು

    ವಿಶಾಲ ಹಸಿರು ಆವರಣ

    ಪರಿಸರ ದೃಷ್ಟಿಯಿಂದ ಮಹತ್ವದ ನಗರ ಜೈವಿಕ ವೈವಿಧ್ಯತೆಯ ತಾಣವಾಗಿದೆ.

    ಅಂಬರಗುಡ್ಡ

    ಶಿವಮೊಗ್ಗ

    2020ಕ್ಕಿಂತ ಮೊದಲು

    ಶೋಲಾ ಅರಣ್ಯ ಮತ್ತು ಹುಲ್ಲುಗಾವಲು

    ಇದು ಸ್ಥಳೀಯ ಪ್ರಭೇದಗಳ ಸಂರಕ್ಷಣೆಗೆ ಅತ್ಯಂತ ಪ್ರಮುಖವಾಗಿದೆ.

    ಮಮದಾಪುರ ಮೀಸಲು ಅರಣ್ಯ

    ವಿಜಯಪುರ

    2024

    ಸುಮಾರು 1494 ಎಕರೆ

    ಇದನ್ನು ‘ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜೈವಿಕ ವೈವಿಧ್ಯತೆ ಪರಂಪರೆ ತಾಣ’ ಎಂದೂ ಕರೆಯಲಾಗುತ್ತದೆ; ಇದು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿರುವ ಪತನಶೀಲ ಅರಣ್ಯ ಪ್ರದೇಶವಾಗಿದೆ.

  • ವಂದೇ ಮಾತರಂಗೆ 150 ವರ್ಷಗಳು | ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷ | IMF ನಿಂದ UPI ಗೆ ವಿಶ್ವದ ಅತಿದೊಡ್ಡ ‘ನೈಜ-ಸಮಯದ ಪಾವತಿ ವ್ಯವಸ್ಥೆ’ ಎಂಬ ಮನ್ನಣೆ ದೊರೆತಿದೆ | ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) | ಸಿ. ರಾಜಗೋಪಾಲಾಚಾರಿ | ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನ

    ವಂದೇ ಮಾತರಂಗೆ 150 ವರ್ಷಗಳು

    ಸಾಮಾನ್ಯ ಅಧ್ಯಯನ -1 / ಆಧುನಿಕ ಇತಿಹಾಸ

    ಇದೀಗ ಸುದ್ದಿಯಲ್ಲಿದೆ: 

    • ಭಾರತವು ತನ್ನ ರಾಷ್ಟ್ರೀಯ ಹಾಡು (National Song) ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

    ‘ವಂದೇ ಮಾತರಂ’ ಹಾಡಿನ ಐತಿಹಾಸಿಕ ಹಿನ್ನೆಲೆ:

    • ‘ವಂದೇ ಮಾತರಂ’ ಹಾಡನ್ನು “ಬಂಕಿಮಚಂದ್ರ ಚಟ್ಟೋಪಾಧ್ಯಾಯರು” ಸಂಸ್ಕೃತದಲ್ಲಿ ತಮ್ಮ 1882ರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲು ಪ್ರಕಟಿಸಲಾಯಿತು.
    • ರವೀಂದ್ರನಾಥ ಟ್ಯಾಗೋರ್ ಅವರು 1896ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಿದರು, ಇದು ಈ ಹಾಡಿಗೆ ರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತು.
    • ಈ ಹಾಡು ಮಾತೃಭೂಮಿಯನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವಾಗಿ ಬಣ್ಣಿಸುತ್ತದೆ ಹಾಗೂ ಭಾರತದ ಜಾಗೃತವಾಗುತ್ತಿರುವ ರಾಷ್ಟ್ರೀಯ ಪ್ರಜ್ಞೆಗೆ ಕಾವ್ಯಾತ್ಮಕ ಧ್ವನಿಯನ್ನು ನೀಡಿತು.

    ರಾಷ್ಟ್ರೀಯ ಪ್ರಜ್ಞೆಯ ಉದಯ:

    • 1905ರ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ, ‘ವಂದೇ ಮಾತರಂ’ ನಾಗರಿಕ ಪ್ರತಿರೋಧದ ಗೀತೆ ಅಥವಾ ಮಂತ್ರವಾಗಿ ಹೊರಹೊಮ್ಮಿತು.
    • ‘ವಂದೇ ಮಾತರಂ’ ಅನ್ನು ರಾಜಕೀಯ ಘೋಷಣೆಯಾಗಿ 1905ರ ಆಗಸ್ಟ್ 7 ರಂದು ಪ್ರಪ್ರಥಮ ಬಾರಿಗೆ ಬಳಸಲಾಯಿತು.
    • ಗಲ್ಲುಶಿಕ್ಷೆಯನ್ನು ಎದುರಿಸುತ್ತಿದ್ದ ಅನೇಕ ಯುವ ಕ್ರಾಂತಿಕಾರಿಗಳಿಗೆ, ಹುತಾತ್ಮರಾಗುವ ಮುನ್ನ ‘ವಂದೇ ಮಾತರಂ’ ಎಂಬುದು ಕೊನೆಯ ಉದ್ಘೋಷವಾಗಿತ್ತು; ಇದು ಈ ಹಾಡನ್ನು ತ್ಯಾಗದ ಸಂಕೇತವನ್ನಾಗಿ ಪರಿವರ್ತಿಸಿತು.
    • 1907ರಲ್ಲಿ, ಮೇಡಂ ಭಿಕಾಜಿ ಕಾಮಾ ಅವರು ಬರ್ಲಿನ್‌ನ ಸ್ಟಟ್‌ಗಾರ್ಟ್‌ನಲ್ಲಿ ಭಾರತದ ಹೊರಗೆ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಆ ಧ್ವಜದ ಮೇಲೆ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು.
    • ಮಾತೃಭೂಮಿಯ ಪರಿಕಲ್ಪನೆಯನ್ನು ಒಂದು ಧ್ಯೇಯ ಮತ್ತು ಧಾರ್ಮಿಕ ಭಾವನೆಯಾಗಿ ಉತ್ತೇಜಿಸಲು, 1905ರ ಅಕ್ಟೋಬರ್‌ನಲ್ಲಿ ಉತ್ತರ ಕಲ್ಕತ್ತಾದಲ್ಲಿ ‘ಬಂದೇ ಮಾತರಂ ಸಂಪ್ರದಾಯ’ವನ್ನು ಸ್ಥಾಪಿಸಲಾಯಿತು.
    • 1906ರಲ್ಲಿ, ಬಿಪಿನ್ ಚಂದ್ರ ಪಾಲ್ ಅವರ ಸಂಪಾದಕತ್ವದಲ್ಲಿ ‘ಬಂದೇ ಮಾತರಂ’ ಎಂಬ ಶೀರ್ಷಿಕೆಯ ಇಂಗ್ಲಿಷ್ ದಿನಪತ್ರಿಕೆಯನ್ನು ಪ್ರಾರಂಭಿಸಲಾಯಿತು; ನಂತರ ಅರವಿಂದೋ ಅವರು ಜಂಟಿ ಸಂಪಾದಕರಾಗಿ ಇದಕ್ಕೆ ಜೊತೆಯಾದರು.

    ರಾಷ್ಟ್ರೀಯ ಹಾಡು (National Song):

    • ಸ್ವಾತಂತ್ರ್ಯದ ನಂತರ, ಸಂವಿಧಾನ ರಚನಾ ಸಭೆಯು ‘ವಂದೇ ಮಾತರಂ’ನ ಸ್ಥಾನಮಾನದ ಕುರಿತು ಚರ್ಚಿಸಿತು.
    • 1950ರ ಜನವರಿ 24ರಂದು, ಇದರ ಮೊದಲ ಎರಡು ಚರಣಗಳನ್ನು ಭಾರತದ ‘ರಾಷ್ಟ್ರೀಯ ಹಾಡು’ ಎಂದು ಅಂಗೀಕರಿಸಲಾಯಿತು.

    ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಬಗ್ಗೆ:

    • ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ಆಧುನಿಕ ಭಾರತೀಯ ಸಾಹಿತ್ಯದ ನಿರ್ಮಾತೃಗಳಲ್ಲಿ ಒಬ್ಬರಾಗಿದ್ದಾರೆ.
    • ಪ್ರಖ್ಯಾತ ಕಾದಂಬರಿಕಾರ, ಕವಿ ಮತ್ತು ಪ್ರಬಂಧಕಾರರಾಗಿದ್ದ ಇವರ ಕೊಡುಗೆಗಳು, ಆಧುನಿಕ ಬಂಗಾಳಿ ಗದ್ಯದ ಬೆಳವಣಿಗೆ ಮತ್ತು ಉದಯೋನ್ಮುಖ ಭಾರತೀಯ ರಾಷ್ಟ್ರೀಯತೆಯ ಅಭಿವ್ಯಕ್ತಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದವು.
    • ಕೃತಿಗಳು: ದುರ್ಗೇಶನಂದಿನಿ (1865), ಕಪಾಲಕುಂಡಲ (1866), ಆನಂದಮಠ (1882) ಮತ್ತು ದೇವಿ ಚೌಧುರಾಣಿ (1884). ಇತ್ಯಾದಿ

    ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷ

    ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ಥೈಲ್ಯಾಂಡ್ ದೇಶವು ಕಾಂಬೋಡಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳನ್ನು ನಡೆಸಿತು.

    ಹಿನ್ನೆಲೆ:

    • ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷವು 1907ರಲ್ಲಿ ಫ್ರೆಂಚರು ಕೈಗೊಂಡ ವಸಾಹತುಶಾಹಿ ಕಾಲದ ‘ಗಡಿ ನಿರ್ಣಯಗಳಿಗೆ’ ಸಂಬಂಧಿಸಿದ ದೀರ್ಘಕಾಲದ ಪ್ರಾದೇಶಿಕ ವಿವಾದವನ್ನು ಆಧರಿಸಿದೆ.
    • ಈ ವಿವಾದದ ಕೇಂದ್ರಬಿಂದು ‘ಪ್ರಿಹ ವಿಹಾರ್ ದೇವಾಲಯ’ವಾಗಿದೆ. ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದ 11-12ನೇ ಶತಮಾನದ ಈ ಖಮೇರ್ ದೇಗುಲದ ಮೇಲೆ ಎರಡೂ ರಾಷ್ಟ್ರಗಳು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿವೆ.
    • ಅಂತರರಾಷ್ಟ್ರೀಯ ನ್ಯಾಯಾಲಯವು (ICJ) 1962ರಲ್ಲಿ (ಮತ್ತು 2013ರಲ್ಲಿ ಮರುದೃಢೀಕರಿಸಿ), ಕಾಂಬೋಡಿಯಾದ ಸಾರ್ವಭೌಮತ್ವವನ್ನು ಎತ್ತಿಹಿಡಿದಿದೆ. ಆದಾಗ್ಯೂ, ಥೈಲ್ಯಾಂಡ್ ಈ ತೀರ್ಪುಗಳನ್ನು ತಿರಸ್ಕರಿಸಿದ್ದು, ಈ ಪ್ರದೇಶವು ತೀವ್ರವಾಗಿ ಸೈನ್ಯದ ನಿಯಂತ್ರಣಕ್ಕೆ ಒಳಪಡಿಸಲಾಗಿದೆ.

    IMF ನಿಂದ UPI ಗೆ ವಿಶ್ವದ ಅತಿದೊಡ್ಡ ‘ನೈಜ-ಸಮಯದ ಪಾವತಿ ವ್ಯವಸ್ಥೆ’ ಎಂಬ ಮನ್ನಣೆ ದೊರೆತಿದೆ

    ಸಾಮಾನ್ಯ ಅಧ್ಯಯನ- 3/ಅರ್ಥವ್ಯವಸ್ಥೆ

    ಇದೀಗ ಸುದ್ದಿಯಲ್ಲಿದೆ: 

    • ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೂನ್ 2025 ರ ತನ್ನ “ಬೆಳೆಯುತ್ತಿರುವ ಚಿಲ್ಲರೆ ಡಿಜಿಟಲ್ ಪಾವತಿಗಳ (ಪರಸ್ಪರ ಕಾರ್ಯಸಾಧ್ಯತೆಯ ಮೌಲ್ಯ)” ವರದಿಯಲ್ಲಿ, ವಹಿವಾಟಿನ ಪ್ರಮಾಣದ ಆಧಾರದ ಮೇಲೆ ‘ಏಕೀಕೃತ ಪಾವತಿ ವ್ಯವಸ್ಥೆ’ (UPI) ಯನ್ನು ವಿಶ್ವದ ಅತಿದೊಡ್ಡ ‘ಚಿಲ್ಲರೆ ತ್ವರಿತ ಪಾವತಿ ವ್ಯವಸ್ಥೆ’ ಎಂದು ಗುರುತಿಸಿದೆ.

    ಏಕೀಕೃತ ಪಾವತಿ ವ್ಯವಸ್ಥೆ (UPI) ಯ ಬಗ್ಗೆ: 

    • ಆರಂಭ: UPI ಅನ್ನು ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) 2016 ರಲ್ಲಿ ವಿನ್ಯಾಸಗೊಳಿಸಿ, ಜಾರಿಗೆ ತಂದಿತು.
    • ಉದ್ದೇಶ: ಇದೊಂದು ಏಕೀಕೃತ ವ್ಯವಸ್ಥೆಯಾಗಿದ್ದು, ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ (ಯಾವುದೇ ಪಾಲ್ಗೊಳ್ಳುವ ಬ್ಯಾಂಕ್‌ನ) ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದು ವಿವಿಧ ಬ್ಯಾಂಕಿಂಗ್ ವೈಶಿಷ್ಟ್ಯಗಳು, ಸುಗಮ ಹಣ ವರ್ಗಾವಣೆ ಮತ್ತು ವ್ಯಾಪಾರ ಪಾವತಿ  ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ.
    • ಕಾರ್ಯನಿರ್ವಹಿಸುತ್ತಿರುವ ಅಥವಾ ಯೋಜಿತ ‘ಪರಸ್ಪರ ಕಾರ್ಯಸಾಧ್ಯತೆ’ಯನ್ನು ಹೊಂದಿರುವ ದೇಶಗಳು: ಸಿಂಗಾಪುರ (PayNow), ಯುಎಇ, ಫ್ರಾನ್ಸ್, ನೇಪಾಳ, ಭೂತಾನ್, ಮಾರಿಷಸ್, ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಇತರೆ.

    ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ದ ಬಗ್ಗೆ:

    • ಸ್ಥಾಪನೆ: ಇದು ಭಾರತದಲ್ಲಿನ ಚಿಲ್ಲರೆ ಪಾವತಿಗಳ ಕಾರ್ಯಾವನ್ನು ನಿರ್ವಹಿಸುವ ಒಂದು ‘ಸರ್ವೋಚ್ಚ (ಪ್ರಧಾನ) ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ.
    • ಸ್ಥಾಪಿಸಿದವರು: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಜಂಟಿಯಾಗಿ ಇದನ್ನು ಸ್ಥಾಪಿಸಿವೆ.
    • ಇದನ್ನು ‘ಪಾವತಿ ಮತ್ತು ನಿವಾರಣ ವ್ಯವಸ್ಥೆಗಳ ಕಾಯ್ದೆ, 2007’ ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ.

    NPCI ನ ಉತ್ಪನ್ನಗಳು: 

    • ರುಪೇ (RuPay)
    • ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)
    • ಭಾರತ್ ಇಂಟರ್‌ಫೇಸ್ ಫಾರ್ ಮನಿ (BHIM)
    • ಏಕೀಕೃತ ಪಾವತಿ ವ್ಯವಸ್ಥೆ (UPI)
    • ಭಾರತ್ ಬಿಲ್ ಪಾವತಿ ವ್ಯವಸ್ಥೆ

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA)

    ಸಾಮಾನ್ಯ ಅಧ್ಯಯನ – 3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA) ದ  ಅಡಿಯಲ್ಲಿನ ‘ದೊಡ್ಡ ಬೆಕ್ಕುಗಳ ಸಂರಕ್ಷಣೆಗಾಗಿ ಸಹಯೋಗದ ಉಪಕ್ರಮ’ದ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಮಾತನಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ : ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ : 2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:- ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.

    ಸದಸ್ಯ ರಾಷ್ಟ್ರಗಳು:- ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ.

    ದೊಡ್ಡ ಬೆಕ್ಕುಗಳು 

    ದೈಹಿಕ ನೋಟ

    IUCN ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ

    ಪೂಮಾ (ಪೂಮಾ ಕಾನ್ಕಲರ್)

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ

    ಸಿ. ರಾಜಗೋಪಾಲಾಚಾರಿ

    ಸಾಮಾನ್ಯ ಅಧ್ಯಯನ-1/ಇತಿಹಾಸ

    ಇದೀಗ ಸುದ್ದಿಯಲ್ಲಿ: 

    • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ‘ರಾಜಾಜಿ’ ಎಂದೇ ಜನಪ್ರಿಯರಾಗಿದ್ದ ಸಿ. ರಾಜಗೋಪಾಲಾಚಾರಿ ಅವರ ಜನ್ಮ ದಿನವಾದ ಡಿಸೆಂಬರ್ 10 ರಂದು ಅವರಿಗೆ ಗೌರವ ನಮನ ಸಲ್ಲಿಸಿದರು.

    ಸಿ. ರಾಜಗೋಪಾಲಾಚಾರಿ ಅವರ ಬಗ್ಗೆ:

    ಆರಂಭಿಕ ಜೀವನ ಮತ್ತು ಶಿಕ್ಷಣ:

    • ಇವರು ಮಹಾತ್ಮ ಗಾಂಧೀಜಿಯವರ ಆಪ್ತ ಸಹವರ್ತಿಯಾಗಿದ್ದರು.
    • ಕಾನೂನು ಪದವಿಯನ್ನು (1899) ಪೂರೈಸಿ, ಸೇಲಂನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
    • ಲಾರ್ಡ್ ಕರ್ಜನ್‌ನ 1905ರ ಬಂಗಾಳ ವಿಭಜನೆ ನೀತಿ ಮತ್ತು ತಿಲಕರ “ಸ್ವರಾಜ್ಯ”ದ ಕರೆಯು ಇವರ ಆರಂಭಿಕ ರಾಜಕೀಯ ಪ್ರಜ್ಞೆಯನ್ನು ರೂಪಿಸಿತು.

    ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು:

      • 1919ರಲ್ಲಿ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದ ರಾಜಗೋಪಾಲಾಚಾರಿ ಅವರು, ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು, ಅಸಹಕಾರ ಚಳವಳಿ, ವೈಕೋಮ್ ಸತ್ಯಾಗ್ರಹ ಮತ್ತು ನಾಗರಿಕ ಅಸಹಕಾರ ಚಳುವಳಿ ಸೇರಿದಂತೆ ಹಲವು ಪ್ರಮುಖ ಹೋರಾಟಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
    • ಗಾಂಧೀಜಿಯವರ ದಂಡಿ ಯಾತ್ರೆಗೆ ಸಮಾಂತರವಾಗಿ ಮದ್ರಾಸ್ ಪ್ರಾಂತ್ಯದಲ್ಲಿ 1930ರ ವೇದಾರಣ್ಯಂ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದರು.
    • “ಭಾರತ ಬಿಟ್ಟು ತೊಲಗಿ” ಚಳುವಳಿಯ ನಂತರ, ಪಾಕಿಸ್ತಾನದ ವಿಷಯವಾಗಿ ಮುಸ್ಲಿಂ ಲೀಗ್‌ನೊಂದಿಗೆ ಉಂಟಾಗಿದ್ದ ಸಾಂವಿಧಾನಿಕ ಬಿಕ್ಕಟ್ಟನ್ನು ಪರಿಹರಿಸಲು ಸಿ.ಆರ್. ಸೂತ್ರವನ್ನು ಪ್ರಸ್ತಾಪಿಸುವ “ದಿ ವೇ ಔಟ್” ಕೃತಿಯನ್ನು ಪ್ರಕಟಿಸಿದರು.

    ಸ್ವಾತಂತ್ರ್ಯಾ ನಂತರದ ಕೊಡುಗೆಗಳು:

    • ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡರು ಮತ್ತು ತದನಂತರ ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ (1947–1950) ಆಗಿ ಸೇವೆ ಸಲ್ಲಿಸಿದರು.
    • ಭಾರತದ ಜಾತ್ಯತೀತ ಸ್ವರೂಪವನ್ನು ಕಾಪಾಡಲು ಮತ್ತು ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರಿಸಲು ಶ್ರಮಿಸಿದರು.
    • ಸರ್ದಾರ್ ಪಟೇಲ್ ಅವರ ನಿಧನದ ನಂತರ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು; ರಾಷ್ಟ್ರೀಯ ಏಕೀಕರಣ ಮತ್ತು ಮೊದಲ ಪಂಚವಾರ್ಷಿಕ ಯೋಜನೆ ಸೇರಿದಂತೆ ದೇಶದ ಆರಂಭಿಕ ಯೋಜನಾ ಪ್ರಕ್ರಿಯೆಗಳಿಗೆ ಮಹತ್ವದ ಕೊಡುಗೆ ನೀಡಿದರು.
    • ‘ಭಾರತ ರತ್ನ’:- ರಾಜಕೀಯ, ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಅನನ್ಯ ಕೊಡುಗೆಗಳಿಗಾಗಿ ಇವರಿಗೆ 1954ರಲ್ಲಿ ‘ಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.

    ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನ

    ಸಾಮಾನ್ಯ ಅಧ್ಯಯನ-2/ಆಡಳಿತ + ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದರು.

    ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದ ಬಗ್ಗೆ:

    • ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನವು ಒಂದು ಮಹತ್ವಾಕಾಂಕ್ಷೆಯ ಉಪಕ್ರಮವಾಗಿದ್ದು, ಅಕ್ಟೋಬರ್ 2025ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
    • ನಾಗರಿಕರು ತಮ್ಮ ಹಕ್ಕಿನ ಸ್ವತ್ತುಗಳನ್ನು ಮರುಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • ಗುರಿ:- ಹಕ್ಕು ಕೋರದ ಠೇವಣಿಗಳು, ವಿಮಾ ಮೊತ್ತಗಳು, ಲಾಭಾಂಶಗಳು ಮತ್ತು ಇತರ ಹಣಕಾಸಿನ ಸ್ವತ್ತುಗಳನ್ನು ಮರುಪಡೆಯಲು ಜನರಿಗೆ ನೆರವಾಗುವ ಗುರಿಯನ್ನು ಇದು ಹೊಂದಿದೆ.
    • ಮಹತ್ವ:- ಇದು ವ್ಯಕ್ತಿಗಳಿಗೆ ತಮ್ಮ ಮರೆತುಹೋದ ಹಣಕಾಸಿನ ಸ್ವತ್ತುಗಳನ್ನು, ಬಳಸಬಹುದಾದ ನಿಧಿಗಳನ್ನಾಗಿ ಪರಿವರ್ತಿಸಲು ಒಂದು ಅವಕಾಶವನ್ನು ಕಲ್ಪಿಸುತ್ತದೆ.

    ಇದು ನಿಮಗೆ ತಿಳಿದಿದೆಯೇ?

    • ಪ್ರಸ್ತುತವಾಗಿ, ಭಾರತೀಯ ಬ್ಯಾಂಕುಗಳು ಸುಮಾರು ₹78,000 ಕೋಟಿ ಮೊತ್ತದ ಹಕ್ಕು ಕೋರದ ಠೇವಣಿಗಳನ್ನು ಹೊಂದಿವೆ.
    • ವಿಮಾ ಕಂಪನಿಗಳಲ್ಲಿ ಸುಮಾರು ₹14,000 ಕೋಟಿ, ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಸುಮಾರು ₹3,000 ಕೋಟಿ ಹಾಗೂ ಹಕ್ಕು ಕೋರದ ಲಾಭಾಂಶಗಳ ಮೊತ್ತವು ಸ್ಥೂಲವಾಗಿ ₹9,000 ಕೋಟಿಯಷ್ಟಿದೆ.

    ವಿವಿಧ ಉಪಕ್ರಮಗಳು

    ನಿಧಿಗಳ ಸುಲಭ ಪತ್ತೆ ಮತ್ತು ಹಕ್ಕು ಕೋರುವಿಕೆಯನ್ನು ಸಕ್ರಿಯಗೊಳಿಸಲು ಈ ಕೆಳಗಿನ ಮೀಸಲಾದ ಆನ್‌ಲೈನ್ ಪೋರ್ಟಲ್‌ಗಳನ್ನು ರಚಿಸಲಾಗಿದೆ:

    • ಹಕ್ಕು ಕೋರದ ಬ್ಯಾಂಕ್ ಠೇವಣಿಗಳಿಗಾಗಿ ಆರ್‌ಬಿಐ ನ ಉದ್ಗಮ್ ಪೋರ್ಟಲ್.
    • ಹಕ್ಕು ಕೋರದ ವಿಮಾ ಮೊತ್ತಗಳಿಗಾಗಿ ಐಆರ್‌ಡಿಎಐ ನ ಬಿಮಾ ಭರೋಸಾ ಪೋರ್ಟಲ್.
    • ಹಕ್ಕು ಕೋರದ ಮ್ಯೂಚುವಲ್ ಫಂಡ್ ಮೊತ್ತಗಳಿಗಾಗಿ ಸೆಬಿಯ ಮಿತ್ರ ಪೋರ್ಟಲ್.
    • ಪಾವತಿಯಾಗದ ಲಾಭಾಂಶಗಳು ಮತ್ತು ಹಕ್ಕು ಕೋರದ ಷೇರುಗಳಿಗಾಗಿ ಐಇಪಿಎಫ್‌ಎ ಪೋರ್ಟಲ್ (IEPFA Portal).

    ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮೇಲೆ ವಿಶೇಷ ಗಮನಹರಿಸಿ, ದೇಶದಾದ್ಯಂತ 477 ಜಿಲ್ಲೆಗಳಲ್ಲಿ ಸೌಲಭ್ಯ ಶಿಬಿರಗಳನ್ನು ಆಯೋಜಿಸಲಾಗಿದೆ.

  • ಕರ್ನಾಟಕವು ಭಾರತದ ಸೇವಾ ರಫ್ತು ಕ್ಷೇತ್ರದ ಶಕ್ತಿಕೇಂದ್ರ-  ಬೆಂಗಳೂರು ಇದರ ಪ್ರಧಾನ ಚಾಲಕ ಶಕ್ತಿ

    ಕರ್ನಾಟಕವು ಭಾರತದ ಸೇವಾ ರಫ್ತು ಕ್ಷೇತ್ರದ ಶಕ್ತಿಕೇಂದ್ರ-  ಬೆಂಗಳೂರು ಇದರ ಪ್ರಧಾನ ಚಾಲಕ ಶಕ್ತಿ

    ಇದೀಗ ಸುದ್ದಿಯಲ್ಲಿದೆ: 

    • 2024-25ನೇ ಸಾಲಿನ ಭಾರತದ ಸೇವಾ ರಫ್ತು ವಲಯದಲ್ಲಿ ಬೆಂಗಳೂರು ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದು, $78.64 ಶತಕೋಟಿ ಕೊಡುಗೆ ನೀಡುವ ಮೂಲಕ ದೇಶದ ಒಟ್ಟು ಸೇವಾ ರಫ್ತಿನಲ್ಲಿ ಸುಮಾರು 35% ರಷ್ಟು ಪಾಲನ್ನು ಹೊಂದಿದೆ.
    • ಕರ್ನಾಟಕದ ರಫ್ತು ಸುಗಮಗೊಳಿಸುವ ಘಟಕವಾದ “ವಿಶ್ವೇಶ್ವರಯ್ಯ ವ್ಯಾಪಾರ ಪ್ರೋತ್ಸಾಹಕ ಕೇಂದ್ರ” (VTPC)ದ ಪ್ರಕಾರ, 2021–22 ರ ಆರ್ಥಿಕ ವರ್ಷದಲ್ಲಿ ಕರ್ನಾಟಕವು ಭಾರತದ ಸೇವಾ ರಫ್ತುಗಳಲ್ಲಿ 41% ರಷ್ಟು ಕೊಡುಗೆ ನೀಡಿದ್ದು, ಇದರ ಮೌಲ್ಯ $254.4 ಶತಕೋಟಿಗಳಷ್ಟಿತ್ತು.
    • ಕರ್ನಾಟಕ ರಾಜ್ಯದ ಆರ್ಥಿಕತೆಯು ಪ್ರಧಾನವಾಗಿ ಸೇವಾ ವಲಯದ ಮೇಲೆ ಅವಲಂಬಿತವಾಗಿದೆ. ‘ಕರ್ನಾಟಕ ಆರ್ಥಿಕ ಸಮೀಕ್ಷೆ, 2024-25’ರ ವರದಿಯ ಅನ್ವಯ, ರಾಜ್ಯದ ಒಟ್ಟು ಮೌಲ್ಯವರ್ಧನೆಯಲ್ಲಿ (GSVA) ಸೇವಾ ವಲಯದ ಪಾಲು 68.1% ರಷ್ಟಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (GSDP) ಏಕೈಕ ಅತಿದೊಡ್ಡ ಕೊಡುಗೆ ನೀಡುವ ಜಿಲ್ಲೆಯಾಗಿ ಹೊರಹೊಮ್ಮಿದೆ.
  • ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆ (TDF) | ರಫ್ತು ಉತ್ತೇಜನಾ ಗುರಿ (EPM)

    ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆ (TDF)

    ಸಾಮಾನ್ಯ ಅಧ್ಯಯನ – 2/ಆಡಳಿತ; ಸಾಮಾನ್ಯ ಅಧ್ಯಯನ- 3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯು, ‘ತಂತ್ರಜ್ಞಾನ ಅಭಿವೃದ್ಧಿ ನಿಧಿ’ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಏಳು ತಂತ್ರಜ್ಞಾನಗಳನ್ನು ಮೂರು ರಕ್ಷಣಾ ಪಡೆಗಳಿಗೆ ಹಸ್ತಾಂತರಿಸಿದೆ.

    ‘ತಂತ್ರಜ್ಞಾನ ಅಭಿವೃದ್ಧಿ ನಿಧಿ’ ಯೋಜನೆಯ ಬಗ್ಗೆ:

    • ಈ ಯೋಜನೆಯು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಡಿಆರ್‌ಡಿಒ ಮೂಲಕ ಅನುಷ್ಠಾನಗೊಳ್ಳುತ್ತಿರುವ ರಕ್ಷಣಾ ಸಚಿವಾಲಯದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ.
    • ಉದ್ದೇಶ:- ಇದು ಭಾರತೀಯ ಕೈಗಾರಿಕೆಗಳಿಗೆ, ವಿಶೇಷವಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSMEs) ಹಾಗೂ ನವೋದ್ಯಮಗಳಿಗೆ, ಸ್ವದೇಶಿ ರಕ್ಷಣಾ ಮತ್ತು ದ್ವಿ-ಬಳಕೆಯ ತಂತ್ರಜ್ಞಾನಗಳನ್ನು ಆವಿಷ್ಕರಿಸಲು, ಸಂಶೋಧಿಸಲು, ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಅನುದಾನವನ್ನು ಒದಗಿಸುತ್ತದೆ.

    ರಫ್ತು ಉತ್ತೇಜನಾ ಗುರಿ (EPM)

    ಸಾಮಾನ್ಯ ಅಧ್ಯಯನ –  3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ರಫ್ತುನ್ನು ಉತ್ತೇಜಿಸಲು, ವಿಶೇಷವಾಗಿ ಎಂಎಸ್ಎಂಇ ಗಳು ಮತ್ತು ಹೆಚ್ಚು ಕಾರ್ಮಿಕಾಧಾರಿತ ವಲಯಗಳಿಗೆ ಉತ್ತೇಜನ ನೀಡಲು, ಸರ್ಕಾರವು ₹25,060 ಕೋಟಿ ಮೊತ್ತದ “ರಫ್ತು ಉತ್ತೇಜನಾ ಗುರಿ” ಗೆ ಅನುಮೋದನೆ ನೀಡಿದೆ.

    ರಫ್ತು ಉತ್ತೇಜನಾ ಮಿಷನ್ ಬಗ್ಗೆ:

    • ಪ್ರಾರಂಭ:- 2025-26ರ ಕೇಂದ್ರ ಮುಂಗಡಪತ್ರದಲ್ಲಿ, ಹಣಕಾಸು ಸಚಿವರು ರಫ್ತು ಉತ್ತೇಜನಾ ಗುರಿ ಅನ್ನು ಘೋಷಿಸಿದರು.
    • ಉದ್ದೇಶ:- ಇದು ರಫ್ತು ಸಾಲಕ್ಕೆ ಸುಲಭ ಲಭ್ಯತೆಯನ್ನು, ಗಡಿಯಾಚೆಗಿನ ಅಪವರ್ತನೀಕರಣ (ಫ್ಯಾಕ್ಟರಿಂಗ್) ಬೆಂಬಲವನ್ನು ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿನ ಸುಂಕ ರಹಿತ ಕ್ರಮಗಳನ್ನು ನಿಭಾಯಿಸಲು ಎಂಎಸ್ಎಂಇ ಗಳಿಗೆ ಬೆಂಬಲವನ್ನು ಒದಗಿಸಲು ಸಹಕಾರಿಯಾಗುತ್ತದೆ.
    • ಅವಧಿ:- 2025-26 ರಿಂದ 2030-31ರ ಆರ್ಥಿಕ ವರ್ಷದವರೆಗೆ.
    • ಎರಡು ಸಮಗ್ರ ಉಪ-ಯೋಜನೆಗಳು:– 
    • ನಿರ್ಯಾತ್ ಪ್ರೋತ್ಸಾಹನ್  
    • ನಿರ್ಯಾತ್ ದಿಶಾ
    1. “ನಿರ್ಯಾತ್ ಪ್ರೋತ್ಸಾಹನ್”- ಹಣಕಾಸಿನ ಬೆಂಬಲ:
    • ರಫ್ತುದಾರರಿಗಾಗಿ ಸಾಲ ಖಾತರಿ ಯೋಜನೆ (CGSE): ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪನಿ ನಿಯಮಿತ (NCGTC) ದಿಂದ 100% ರಕ್ಷಣೆಯನ್ನು (ವ್ಯಾಪ್ತಿ) ಒದಗಿಸುತ್ತದೆ.
    • ಅರ್ಹ ರಫ್ತುದಾರರಿಗೆ (‘ಎಂಎಸ್ಎಂಇ’ಗಳು ಸೇರಿದಂತೆ) ₹20,000 ಕೋಟಿಯವರೆಗೆ ಹೆಚ್ಚುವರಿ ಸಾಲ ಸೌಲಭ್ಯಗಳು.
    • ಇದು ಮೇಲಾಧಾರ-ರಹಿತ ಸಾಲವನ್ನು ಸಕ್ರಿಯಗೊಳಿಸುತ್ತದೆ ಹಾಗೂ ದ್ರವ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ.
    1. “ನಿರ್ಯಾತ್ ದಿಶಾ”- ಹಣಕಾಸೇತರ ಬೆಂಬಲ:
    • ಸುಂಕ ರಹಿತ ಅಡೆತಡೆಗಳ (NTBs) ನಿವಾರಣೆ: ನಿಯಮಗಳ ಅನುಸರಣೆ, ಪ್ರಮಾಣೀಕರಣ ಮತ್ತು ತಾಂತ್ರಿಕ ಮಾನದಂಡಗಳಿಗೆ ಧನಸಹಾಯ ಒದಗಿಸುವುದು.
    • ಮಾರುಕಟ್ಟೆ ಸ್ವಾಧೀನ ಮತ್ತು ಬ್ರ್ಯಾಂಡಿಂಗ್: ಅಂತರರಾಷ್ಟ್ರೀಯ ಪ್ರದರ್ಶನ, ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್‌ಗಾಗಿ ನೆರವು ನೀಡುವುದು.
    • ಸರಕು ಸಾಗಣೆ ಮತ್ತು ಪೂರೈಕೆ ನಿರ್ವಹಣೆ ವೆಚ್ಚ ಕಡಿತ: ಪೂರೈಕೆ ಸರಪಳಿ ದಕ್ಷತೆ ಮತ್ತು ವ್ಯಾಪಾರ ಸೌಲಭ್ಯಕ್ಕಾಗಿ ಬೆಂಬಲ ನೀಡುವುದು.
  • ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025

    ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯ ಸಚಿವ ಸಂಪುಟವು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025’ ಕ್ಕೆ ಅನುಮೋದನೆ ನೀಡಿದೆ.

    ಈ ಮಸೂದೆಯ ಪ್ರಮುಖ ಲಕ್ಷಣಗಳು:

    • ಉದ್ದೇಶ:- ಸಮಾಜದಲ್ಲಿ ಅಸಾಮರಸ್ಯ ಮತ್ತು ದ್ವೇಷಕ್ಕೆ ಕಾರಣವಾಗುವ ದ್ವೇಷ ಭಾಷಣ ಹಾಗೂ ದ್ವೇಷದ ಅಪರಾಧಗಳ ಪ್ರಸಾರ, ಪ್ರಕಟಣೆ ಅಥವಾ ಪ್ರೋತ್ಸಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದು ಮತ್ತು ನಿಯಂತ್ರಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.
    • ಗುರಿ:- ವ್ಯಕ್ತಿಗಳು, ಗುಂಪುಗಳು ಅಥವಾ ಸಂಸ್ಥೆಗಳ ವಿರುದ್ಧ ಹಾನಿ, ಅಸಾಮರಸ್ಯ, ಹಗೆತನ ಅಥವಾ ದ್ವೇಷವನ್ನು ಉಂಟುಮಾಡುವ ಕೃತ್ಯಗಳನ್ನು ನಿಯಂತ್ರಿಸುವ ಗುರಿಯನ್ನು ಇದು ಹೊಂದಿದೆ.
    • ಅನ್ವಯ:- ಇದು ವ್ಯಕ್ತಿಗಳು ಮತ್ತು ಸಂಸ್ಥೆಗಳೆರಡಕ್ಕೂ ಅನ್ವಯಿಸುತ್ತದೆ.
    • ದ್ವೇಷ ಭಾಷಣದ ವ್ಯಾಖ್ಯಾನ: ಪೂರ್ವಾಗ್ರಹ ಪೀಡಿತ ಹಿತಾಸಕ್ತಿಯನ್ನು ಪೂರೈಸಲು, ಜೀವಂತವಾಗಿರುವ ಅಥವಾ ಮೃತರಾದ ವ್ಯಕ್ತಿ, ವ್ಯಕ್ತಿಗಳ ವರ್ಗ ಅಥವಾ ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ಹಗೆತನದ ಭಾವನೆಗಳು ಅಥವಾ ದ್ವೇಷ ಅಥವಾ ಅಸೂಯೆಯನ್ನು ಉಂಟುಮಾಡುವ ಉದ್ದೇಶದಿಂದ, ಸಾರ್ವಜನಿಕವಾಗಿ ಆಡಿದ ಅಥವಾ ಬರೆದ ಪದಗಳು, ಚಿಹ್ನೆಗಳು ಅಥವಾ ದೃಶ್ಯ ಪ್ರಾತಿನಿಧ್ಯಗಳ ಮೂಲಕ ಅಥವಾ ಎಲೆಕ್ಟ್ರಾನಿಕ್ ಸಂವಹನದ ಮೂಲಕ ವ್ಯಕ್ತಪಡಿಸುವ, ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಯಾವುದೇ ಅಭಿವ್ಯಕ್ತಿಯನ್ನು ಇದು ಒಳಗೊಂಡಿದೆ.
    • ಪೂರ್ವಾಗ್ರಹ ಪೀಡಿತ ಹಿತಾಸಕ್ತಿ:- ಇದು ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ನಿವಾಸ, ಭಾಷೆ, ಅಂಗವೈಕಲ್ಯ ಅಥವಾ ಬುಡಕಟ್ಟನ್ನು ಒಳಗೊಂಡಿರುತ್ತದೆ.
    • ಶಿಕ್ಷೆ ಮತ್ತು ದಂಡ:- 1 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡವನ್ನು ಒಳಗೊಂಡಿರುತ್ತದೆ.
    • ಸಂಜ್ಞೇಯ ಮತ್ತು ಜಾಮೀನುರಹಿತ:- ಈ ಅಪರಾಧಗಳು ಸಂಜ್ಞೇಯ (Cognisable) ಮತ್ತು ಜಾಮೀನುರಹಿತವಾಗಿದ್ದು, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಂದ ವಿಚಾರಣೆಗೆ ಒಳಪಡುತ್ತವೆ.
    • ಕೇಂದ್ರ ಕಾನೂನುಗಳೊಂದಿಗೆ ಸಮನ್ವಯ:- ಕಾರ್ಯವಿಧಾನದ ಏಕರೂಪತೆಗಾಗಿ ಈ ಮಸೂದೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ರ ನಿಬಂಧನೆಗಳನ್ನು ಒಳಗೊಂಡಿದೆ.

    ಸಾಂವಿಧಾನಿಕ ನಿಬಂಧನೆಗಳು:

    • ವಿಧಿ 19(2):- ಇದು ವಿಧಿ 19(1)(a) ಅಡಿಯಲ್ಲಿ ಲಭ್ಯವಿರುವ ಮೂಲಭೂತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ವಿಧಿಸಬಹುದಾದ ಸಮಂಜಸವಾದ ನಿರ್ಬಂಧಗಳ ಬಗ್ಗೆ ವ್ಯವಹರಿಸುತ್ತದೆ.
    • ರಾಜ್ಯವು ಭಾಷಣವನ್ನು ನಿರ್ಬಂಧಿಸಬಹುದಾದ ಸಂದರ್ಭಗಳು:- ರಾಜ್ಯದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆ, ನ್ಯಾಯಾಲಯದ ನಿಂದನೆ, ಮಾನಹಾನಿ ಮತ್ತು ಅಪರಾಧಕ್ಕೆ ಪ್ರಚೋದನೆ.

    ದ್ವೇಷ ಭಾಷಣವನ್ನು ಎದುರಿಸಲು ಕೈಗೊಂಡ ಕ್ರಮಗಳು:

    • ಭಾರತೀಯ ದಂಡ ಸಂಹಿತೆ (IPC) / ಭಾರತೀಯ ನ್ಯಾಯ ಸಂಹಿತೆ (BNS), 2023:- ದಂಡ ಸಂಹಿತೆಗಳ ಸೆಕ್ಷನ್ 153A, ಸೆಕ್ಷನ್ 295A ನಂತಹ ನಿರ್ದಿಷ್ಟ ಸೆಕ್ಷನ್‌ಗಳು ಗುಂಪುಗಳ ನಡುವೆ (ಧರ್ಮ, ಜನಾಂಗ, ಭಾಷೆ) ಹಗೆತನವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಅಥವಾ ಸಾರ್ವಜನಿಕರಲ್ಲಿ ಭೀತಿ/ಅಶಾಂತಿಯನ್ನು ಪ್ರಚೋದಿಸುವುದನ್ನು ಅಪರಾಧೀಕರಿಸುತ್ತವೆ.
    • ಜನಪ್ರತಿನಿಧಿ ಕಾಯ್ದೆ, 1951:- ಸೆಕ್ಷನ್ 123(3), 123(3A): ಚುನಾವಣೆಯ ಸಮಯದಲ್ಲಿ ದ್ವೇಷವನ್ನು ಪ್ರಚೋದಿಸುವ ಅಥವಾ ಧರ್ಮ, ಜಾತಿ, ಸಮುದಾಯದ ಹೆಸರಿನಲ್ಲಿ ಮನವಿ ಮಾಡುವ ರಾಜಕೀಯ ಭಾಷಣಗಳನ್ನು ನಿಷೇಧಿಸುತ್ತವೆ.
    • ಪ್ರವಾಸಿ ಭಲೈ ಸಂಘಟನ್ ವಿರುದ್ಧ ಭಾರತ ಒಕ್ಕೂಟ, 2014:- ಸರ್ವೋಚ್ಚ ನ್ಯಾಯಾಲಯವು ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾನೂನಿನ ಕೊರತೆಯನ್ನು ಒಪ್ಪಿಕೊಂಡಿತು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಕಾನೂನನ್ನು ರೂಪಿಸುವಂತೆ ಸಂಸತ್ತಿಗೆ ಶಿಫಾರಸು ಮಾಡಿತು.
    • ಅಮಿಶ್ ದೇವಗನ್ ವಿರುದ್ಧ ಭಾರತ ಒಕ್ಕೂಟ, 2020:- ಸರ್ವೋಚ್ಚ ನ್ಯಾಯಾಲಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ (ವಿಧಿ 19) ಮತ್ತು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಲು ದ್ವೇಷ ಭಾಷಣವನ್ನು ನಿರ್ಬಂಧಿಸುವ ಅಗತ್ಯತೆಯ ನಡುವಿನ ಸಮತೋಲನದ ಬಗ್ಗೆ ವಿವರಿಸಿದೆ.
  • ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) | ‘ಹರಿಮಾವು ಶಕ್ತಿ’ ಸಮರಾಭ್ಯಾಸ

    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)

    ಸಾಮಾನ್ಯ ಅಧ್ಯಯನ – 2/ ಶಾಸನಬದ್ಧ ಸಂಸ್ಥೆಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಯೊಂದು ಬೃಹತ್ ಪ್ರಮಾಣದಲ್ಲಿ ವಿಮಾನಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ‘ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ’ವು (DGCA), ಹೊಸದಾಗಿ ಜಾರಿಗೆ ತಂದಿರುವ “ವಿಮಾನ ಸಿಬ್ಬಂದಿಯ ಕರ್ತವ್ಯ ಅವಧಿ ಮಿತಿಗಳ” (FDTL) ನಿಯಮಗಳಿಂದ ಒಂದು ಬಾರಿಯ ವಿನಾಯಿತಿಯನ್ನು ನೀಡಿದೆ.

    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ದ ಬಗ್ಗೆ:

    • ಸ್ಥಾಪನೆ: ಇದನ್ನು 1927 ರಲ್ಲಿ ಒಂದು ಸರ್ಕಾರಿ ಸಂಸ್ಥೆಯಾಗಿ ಸ್ಥಾಪಿಸಲಾಯಿತು.
    • ಕಾನೂನು ಸ್ಥಾನಮಾನ: ಇದು “ವಿಮಾನ ಕಾಯ್ದೆ”ಯ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಒಂದು ‘ಶಾಸನಬದ್ಧ ಸಂಸ್ಥೆ’ಯಾಗಿದೆ.
    • ಆಡಳಿತಾತ್ಮಕ ನಿಯಂತ್ರಣ: ಇದು ನಾಗರಿಕ ವಿಮಾನಯಾನ ಸಚಿವಾಲಯದ (MoCA) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಗುರಿ: ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಯ ಮಾನದಂಡಗಳ ಮೂಲಕ ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಿಮಾನ ಸಾರಿಗೆಯನ್ನು ಉತ್ತೇಜಿಸುವುದು.

    ‘ಹರಿಮಾವು ಶಕ್ತಿ’ ಸಮರಾಭ್ಯಾಸ

    ಸಾಮಾನ್ಯ ಅಧ್ಯಯನ -3 / ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಭಾರತ ಮತ್ತು ಮಲೇಷ್ಯಾ ದೇಶಗಳು, ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ‘ಹರಿಮೌ ಶಕ್ತಿ, 2025’ ಸಮರಾಭ್ಯಾಸದ 5ನೇ ಆವೃತ್ತಿಯನ್ನು ಪ್ರಾರಂಭಿಸಿವೆ.

    ಹರಿಮಾವು ಶಕ್ತಿ ಸಮರಾಭ್ಯಾಸದ ಬಗ್ಗೆ:

    • ಇದು ಭಾರತೀಯ ಸೇನೆ ಮತ್ತು ಮಲೇಷ್ಯಾ ಸೇನೆಗಳ ನಡುವಿನ ‘ದ್ವಿಪಕ್ಷೀಯ ಸೇನಾ ಸಮರಾಭ್ಯಾಸ’ವಾಗಿದೆ.

    ಈ ಸಮರಾಭ್ಯಾಸವು ಅರಣ್ಯ ಯುದ್ಧ, ಬಂಡಾಯ ನಿಗ್ರಹ ಕಾರ್ಯಾಚರಣೆಗಳು ಮತ್ತು ಅರೆ-ನಗರ ಪ್ರದೇಶದ ಯುದ್ಧ ಸನ್ನಿವೇಶಗಳಲ್ಲಿ ಎರಡೂ ಪಡೆಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಜೊತೆಗೆ, ಭವಿಷ್ಯದ ಕಾರ್ಯಾಚರಣೆಗಳಲ್ಲಿ ‘ಸುಗಮ ಸಹಕಾರ’ವನ್ನು ಸಾಧ್ಯವಾಗಿಸುವುದು ಇದರ ಉದ್ದೇಶವಾಗಿದೆ.

  • ರಾಜ್ಯದಲ್ಲಿ ‘ಭಾರತ-ತೈವಾನ್ ಕೈಗಾರಿಕಾ ಪಾರ್ಕ್’

    ರಾಜ್ಯದಲ್ಲಿ ‘ಭಾರತ-ತೈವಾನ್ ಕೈಗಾರಿಕಾ ಪಾರ್ಕ್’

    ಇದೀಗ ಸುದ್ದಿಯಲ್ಲಿದೆ:

    • ತೈವಾನ್‌ನ ‘ಅಲೇಜಿಯನ್ಸ್ ಇಂಟರ್‌ನ್ಯಾಷನಲ್‌ ಕಂಪನಿ ಲಿಮಿಟೆಡ್‌’, ಕರ್ನಾಟಕದಲ್ಲಿ ₹1,000 ಕೋಟಿ ಹೂಡಿಕೆಯೊಂದಿಗೆ ‘ಭಾರತ-ತೈವಾನ್ ಕೈಗಾರಿಕಾ ಪಾರ್ಕ್’ (ITIP) ಅನ್ನು ಸ್ಥಾಪಿಸಲಿದೆ.
    • ಮಹತ್ವ:- ಈ ಸಹಯೋಗವು ‘ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳ ವಿನ್ಯಾಸ ಮತ್ತು ಉತ್ಪಾದನೆ’ (ESDM) ಕ್ಷೇತ್ರದಲ್ಲಿ ಭಾರತದ ಮುಂಚೂಣಿ ತಾಣವಾಗಿ ಕರ್ನಾಟಕ ಹೊಂದಿರುವ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ.

    ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್ (KDEM) ನ ಬಗ್ಗೆ:

    • ಸ್ಥಾಪನೆ:- ಇದು ಕರ್ನಾಟಕ ಸರ್ಕಾರವು 2021 ರಲ್ಲಿ ಸ್ಥಾಪಿಸಿದ ಲಾಭರಹಿತ ಸಂಸ್ಥೆಯಾಗಿದೆ.
    • ಉದ್ದೇಶ:- ಇದು ಡಿಜಿಟಲ್ ಬೆಳವಣಿಗೆ ಮತ್ತು ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯ ಸರ್ಕಾರ ಮತ್ತು ತಂತ್ರಜ್ಞಾನ ಉದ್ಯಮದ ನಡುವೆ ‘ಜ್ಞಾನ ಸೇತುವೆ’ಯಾಗಿ ಕಾರ್ಯನಿರ್ವಹಿಸುತ್ತದೆ.

    KDEM ನ ಪ್ರಮುಖ ಉದ್ದೇಶಗಳು:

    • ಆರ್ಥಿಕ ಪರಿಣಾಮ:- 2030 ರ ವೇಳೆಗೆ ಭಾರತವು ಹೊಂದಿರುವ $1 ಟ್ರಿಲಿಯನ್ ಡಿಜಿಟಲ್ ಆರ್ಥಿಕತೆಯ ಗುರಿಯಲ್ಲಿ ಕರ್ನಾಟಕವು $300 ಬಿಲಿಯನ್ ಕೊಡುಗೆ ನೀಡುವಂತೆ ಮಾಡುವುದು ಇದರ ಉದ್ದೇಶವಾಗಿದೆ.
    • ನವೋದ್ಯಮಗಳ ಬೆಳವಣಿಗೆ:- 2030 ರ ವೇಳೆಗೆ ಪ್ರಾದೇಶಿಕ ಸಮೂಹಗಳಲ್ಲಿ (ಬೆಂಗಳೂರಿನ ಹೊರತಾಗಿ) 10,000 ನವೋದ್ಯಮಗಳನ್ನು ಆರಂಭಿಸುವ ಗುರಿಯನ್ನು ಹೊಂದಿದೆ.
    • ಉದ್ಯೋಗಾವಕಾಶ:- ಡಿಜಿಟಲ್ ವಲಯದಲ್ಲಿ 50 ಲಕ್ಷ ನುರಿತ ಮತ್ತು ಅರೆ-ನುರಿತ ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನಹರಿಸಿದೆ.

    KDEM ನ ಪ್ರಮುಖ ಕಾರ್ಯಕ್ಷೇತ್ರಗಳು:

    • ನಾವೀನ್ಯತೆ ಮತ್ತು ನವೋದ್ಯಮಗಳು:– ಆರಂಭಿಕ ಹಂತದ ಕಂಪನಿಗಳಿಗೆ ಬಂಡವಾಳ ಲಭ್ಯತೆ, ಮಾರ್ಗದರ್ಶನ ಮತ್ತು ಜನಸಂಪರ್ಕ ಸೌಲಭ್ಯಗಳನ್ನು ಒದಗಿಸುವುದು.
    • ಬಿಯಾಂಡ್ ಬೆಂಗಳೂರು:- ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ, ಕಲಬುರಗಿ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೈಗಾರಿಕಾ ಸಮೂಹಗಳನ್ನು ಅಭಿವೃದ್ಧಿಪಡಿಸುವ ಮೂಲಕ ತಂತ್ರಜ್ಞಾನ ಉದ್ಯಮವನ್ನು ವಿಕೇಂದ್ರೀಕರಿಸುವುದು.
    • ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳ ವಿನ್ಯಾಸ ಮತ್ತು ಉತ್ಪಾದನೆ (ESDM):- ಅರೆವಾಹಕ (ಸೆಮಿಕಂಡಕ್ಟರ್) ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಕರ್ನಾಟಕವನ್ನು ಉತ್ತೇಜಿಸುವುದು.
    • ಪ್ರತಿಭೆಗಳ ಉತ್ತೇಜನ:- ‘ಭವಿಷ್ಯದ  ಡಿಜಿಟಲ್ ಉದ್ಯೋಗಗಳು’ ಮತ್ತು ‘ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್’ ನಂತಹ ಉಪಕ್ರಮಗಳ ಮೂಲಕ ಕೌಶಲದ ಕೊರತೆಯನ್ನು ನೀಗಿಸುವುದು.
    • ಮಾಹಿತಿ ತಂತ್ರಜ್ಞಾನ/ಮಾಹಿತಿ ತಂತ್ರಜ್ಞಾನ ಸಕ್ರಿಯಗೊಳಿಸಿದ ಸೇವೆಗಳು, ವ್ಯವಹಾರ ಪ್ರಕ್ರಿಯೆ ನಿರ್ವಹಣೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು:- ರಾಜ್ಯದಾದ್ಯಂತ ತಮ್ಮ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಮತ್ತು ಮಧ್ಯಮ ಗಾತ್ರದ ಐಟಿ ಸಂಸ್ಥೆಗಳನ್ನು ಆಕರ್ಷಿಸುವುದು.
  • 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ | 70ನೇ ಮಹಾಪರಿನಿರ್ವಾಣ ದಿವಸ | ಭಾರತದ ಅಂತರ್ಜಲ ಮಾಲಿನ್ಯ ಬಿಕ್ಕಟ್ಟು

    23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ

    ಸಾಮಾನ್ಯ ಅಧ್ಯಯನ -2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತ ಮತ್ತು ರಷ್ಯಾ ತಮ್ಮ 23ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯನ್ನು ನಡೆಸಿದವು. ಇದು 2000ನೇ ಇಸವಿಯ ‘ಕಾರ್ಯತಂತ್ರದ  ಪಾಲುದಾರಿಕೆಯ ಮೇಲೆ ಘೋಷಣೆ’ಯ 25 ವರ್ಷಗಳ ಆಚರಣೆಯನ್ನು ಗುರುತಿಸುವ ಪ್ರಮುಖ ಮೈಲಿಗಲ್ಲಾಗಿದೆ.

    ಭಾರತ -ರಷ್ಯಾ ಭೇಟಿಯ ಪ್ರಮುಖ ಫಲಿತಾಂಶಗಳು:

    • ಆರ್ಥಿಕ ಕಾರ್ಯಕ್ರಮ 2030: 2030 ರವರೆಗಿನ ಭಾರತ-ರಷ್ಯಾ ಆರ್ಥಿಕ ಸಹಕಾರದ ಕಾರ್ಯತಂತ್ರದ ಕ್ಷೇತ್ರಗಳ ಅಭಿವೃದ್ಧಿಗಾಗಿನ ಕಾರ್ಯಕ್ರಮದ (‘ಕಾರ್ಯಕ್ರಮ 2030’) ಅಳವಡಿಕೆಯನ್ನು ಉಭಯ ನಾಯಕರು ಸ್ವಾಗತಿಸಿದರು.
    • ವ್ಯಾಪಾರ ಗುರಿ, 2030: 2030 ರ ವೇಳೆಗೆ 100 ಶತಕೋಟಿ ಅಮೆರಿಕನ್ ಡಾಲರ್‌ಗಳ ಪರಿಷ್ಕೃತ ದ್ವಿಪಕ್ಷೀಯ ವ್ಯಾಪಾರ ಗುರಿಯನ್ನು ನಿಗದಿತ ಅವಧಿಯೊಳಗೆ ಸಾಧಿಸುವುದು.
    • ಸಹಿ ಹಾಕಲಾದ ಕಾರ್ಯತಂತ್ರದ ಒಪ್ಪಂದಗಳು: ರಕ್ಷಣೆ, ವ್ಯಾಪಾರ, ಆರ್ಥಿಕತೆ, ಆರೋಗ್ಯ ಸೇವೆ, ಶಿಕ್ಷಣ, ಸಂಸ್ಕೃತಿ ಮತ್ತು ಮಾಧ್ಯಮಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಭಾರತ ಮತ್ತು ರಷ್ಯಾ 16 ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡವು.
    • ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಒತ್ತು: ‘ಯುರೇಷಿಯನ್ ಆರ್ಥಿಕ ಒಕ್ಕೂಟ’ದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎರಡೂ ಕಡೆಯವರು ಕಾರ್ಯನಿರತರಾಗಿದ್ದಾರೆ.
    • ವಲಸೆ ಸಹಕಾರ: ರಷ್ಯಾದ ನಾಗರಿಕರಿಗಾಗಿ ಭಾರತವು ಶೀಘ್ರದಲ್ಲೇ ಉಚಿತ 30 ದಿನಗಳ ಇ-ಪ್ರವಾಸಿ ವೀಸಾ ಮತ್ತು 30 ದಿನಗಳ ‘ಗುಂಪು ಪ್ರವಾಸಿ ವೀಸಾ’ವನ್ನು ಜಾರಿಗೆ ತರಲಿದೆ.
    • ಜಾಗತಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ: ರಷ್ಯಾವು “ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ” (IBCA) ಕ್ಕೆ ಸೇರಲು ನಿರ್ಧರಿಸಿದೆ.

    70ನೇ ಮಹಾಪರಿನಿರ್ವಾಣ ದಿವಸ

    ಸಾಮಾನ್ಯ ಅಧ್ಯಯನ -1/ ಇತಿಹಾಸ

    ಇದೀಗ ಸುದ್ದಿಯಲ್ಲಿದೆ:

    • ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಸಂಸತ್ತಿನ ಆವರಣದಲ್ಲಿ, ಮಹಾಪರಿನಿರ್ವಾಣ  ದಿವಸ’ದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

    ಮಹಾಪರಿನಿರ್ವಾಣ ದಿವಸದ ಬಗ್ಗೆ:

    • ಅರ್ಥ: “ಪರಿನಿರ್ವಾಣ” ಎಂಬ ಪದವು ಬೌದ್ಧ ಧರ್ಮದ ಪ್ರಮುಖ ತತ್ವ ಹಾಗೂ ಗುರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಸಂಸ್ಕೃತ ಮೂಲದ ಪದವಾಗಿದ್ದು, ಇದು ಮರಣಾನಂತರದ ವಿಮೋಚನೆ ಅಥವಾ ಮುಕ್ತಿಯನ್ನು ಸೂಚಿಸುತ್ತದೆ.
    • ಬೌದ್ಧರ ಗ್ರಂಥವಾದ ಮಹಾಪರಿನಿಬ್ಬಾಣ ಸುತ್ತ’ ದ ಪ್ರಕಾರ, 80ನೇ ವಯಸ್ಸಿನಲ್ಲಿ ಸಂಭವಿಸಿದ ಭಗವಾನ್ ಗೌತಮ ಬುದ್ಧನ ಮರಣವನ್ನು ಮೂಲ ‘ಮಹಾಪರಿನಿರ್ವಾಣ’ ಎಂದು ಪರಿಗಣಿಸಲಾಗುತ್ತದೆ.
    • ಆಚರಣೆ: ಡಾ. ಭೀಮರಾವ್ ಅಂಬೇಡ್ಕರ್ ಅವರು ಸಮಾಜಕ್ಕೆ ಸಲ್ಲಿಸಿದ ಅನನ್ಯ ಸೇವೆ ಮತ್ತು ಅವರ ಸಾಧನೆಗಳನ್ನು ಸ್ಮರಿಸಲು ಪ್ರತಿವರ್ಷ ಡಿಸೆಂಬರ್ 6 ರಂದು ಈ ದಿನವನ್ನು ಆಚರಿಸಲಾಗುತ್ತದೆ.
    • ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮದ ಅಗ್ರಗಣ್ಯ ನಾಯಕರಾಗಿದ್ದರಿಂದ, ಅವರ ಪುಣ್ಯತಿಥಿಯನ್ನು ‘ಮಹಾಪರಿನಿರ್ವಾಣ ದಿವಸ’ ಎಂದು ಕರೆಯಲಾಗುತ್ತದೆ.

    ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ಅವರ ಕುರಿತು: 

    • ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಶ್ರೇಷ್ಠ ಸಮಾಜ ಸುಧಾರಕ, ಕಾನೂನು ತಜ್ಞ, ಅರ್ಥಶಾಸ್ತ್ರಜ್ಞ, ಲೇಖಕ, ಬಹುಭಾಷಾ ಪಂಡಿತ, ವಾಗ್ಮಿ, ವಿದ್ವಾಂಸ ಮತ್ತು ಧಾರ್ಮಿಕ ಚಿಂತಕರಾಗಿದ್ದರು.
    • ಜನನ: ಇವರು 1891 ರಲ್ಲಿ ಸೆಂಟ್ರಲ್ ಪ್ರಾವಿನ್ಸ್‌ (ಪ್ರಸ್ತುತ  ಮಧ್ಯಪ್ರದೇಶ) ನ ಮಹೂವಿನಲ್ಲಿ (Mhow) ಜನಿಸಿದರು.
    • ಇವರನ್ನು ‘ಭಾರತೀಯ ಸಂವಿಧಾನದ ಪಿತಾಮಹ’ ಎಂದು ಕರೆಯಲಾಗುತ್ತದೆ. ಇವರು ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾಗಿದ್ದರು.
    • ಇವರು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು.
    • ಇವರು ದಲಿತರು ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಪ್ರಖ್ಯಾತ ಮುತ್ಸದ್ದಿಯಾಗಿದ್ದರು.

    ಪ್ರಮುಖ ಕೊಡುಗೆಗಳು:

    • ಮಹಾಡ್ ಸತ್ಯಾಗ್ರಹ, 1927: ಅಸ್ಪೃಶ್ಯರಿಗೆ ಮಹಾಡ್ ನಲ್ಲಿರುವ ಚೌಡರ ಕೆರೆಯ ನೀರನ್ನು ಬಳಸಲು ನಿರಾಕರಿಸಿದ ಮುನ್ಸಿಪಲ್ ಬೋರ್ಡ್‌ನ ಕ್ರಮ ಮತ್ತು ಅದನ್ನು ಬೆಂಬಲಿಸಿದ ಸವರ್ಣೀಯರ ವಿರುದ್ಧ, ಮಾರ್ಚ್ 1927 ರಲ್ಲಿ ಇವರು ‘ಮಹಾಡ್ ಸತ್ಯಾಗ್ರಹ’ದ ನೇತೃತ್ವ ವಹಿಸಿದರು. (1926 ರಲ್ಲೇ ಮಹಾಡ್ ಮುನ್ಸಿಪಲ್ ಬೋರ್ಡ್ ಕೆರೆಯನ್ನು ಎಲ್ಲರಿಗೂ ಮುಕ್ತಗೊಳಿಸಲು ಆದೇಶಿಸಿತ್ತು).
    • ಇವರು ಮೂರೂ ದುಂಡು ಮೇಜಿನ ಸಮ್ಮೇಳನಗಳಲ್ಲಿಭಾಗವಹಿಸಿದರು.
    • ಪೂನಾ ಒಪ್ಪಂದ, 1932: ಡಾ. ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿಯವರೊಂದಿಗೆ “ಪೂನಾ ಒಪ್ಪಂದ”ಕ್ಕೆ ಸಹಿ ಹಾಕಿದರು. ಇದರ ಅನ್ವಯ ಶೋಷಿತ ವರ್ಗಗಳಿಗೆ ನೀಡಲಾದ ಪ್ರತ್ಯೇಕ ಮತಕ್ಷೇತ್ರಗಳ (ಕೋಮು ತೀರ್ಪು) ಕಲ್ಪನೆಯನ್ನು ಕೈಬಿಡಲಾಯಿತು.
    • ಬದಲಾಗಿ, ಪ್ರಾಂತೀಯ ಶಾಸಕಾಂಗಗಳಲ್ಲಿ ಶೋಷಿತ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳನ್ನು 71 ರಿಂದ 147 ಕ್ಕೆ ಮತ್ತು ಕೇಂದ್ರ ಶಾಸಕಾಂಗದಲ್ಲಿ ಒಟ್ಟು ಸ್ಥಾನಗಳ 18% ಕ್ಕೆ ಹೆಚ್ಚಿಸಲಾಯಿತು.
    • ಆರ್‌ಬಿಐ ಸ್ಥಾಪನೆ: ಹಿಲ್ಟನ್ ಯಂಗ್ ಆಯೋಗದ ಮುಂದೆ ಇವರು ಮಂಡಿಸಿದ ಆರ್ಥಿಕ ಪರಿಕಲ್ಪನೆಗಳು ‘ಭಾರತೀಯ ರಿಸರ್ವ್ ಬ್ಯಾಂಕ್’ ನ ಸ್ಥಾಪನೆಗೆ ಬುನಾದಿಯಾದವು. ಈ ಬ್ಯಾಂಕ್ “ದಿ ಪ್ರಾಬ್ಲಮ್ ಆಫ್ ದಿ ರುಪೀ: ಇಟ್ಸ್ ಒರಿಜಿನ್ ಅಂಡ್ ಇಟ್ಸ್ ಸೊಲ್ಯೂಷನ್” ಎಂಬ ಅವರ ಪ್ರಬಂಧದ ಆಧಾರದ ಮೇರೆಗೆ ಸ್ಥಾಪನೆಯಾಯಿತು.

    ಚುನಾವಣೆ ಮತ್ತು ಹುದ್ದೆ:

    • 1937 ರಲ್ಲಿ, ಇವರು ಬಾಂಬೆ ಶಾಸನ ಸಭೆಗೆ ಶಾಸಕರಾಗಿ ಆಯ್ಕೆಯಾದರು.
    • 1942 ರಲ್ಲಿ ವೈಸ್‌ರಾಯ್ ಅವರ ಕಾರ್ಯಕಾರಿ ಮಂಡಳಿಗೆ ಕಾರ್ಮಿಕ ಸದಸ್ಯರಾಗಿ ನೇಮಕಗೊಂಡರು.
    • 1947 ರಲ್ಲಿ, ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಲು ಪ್ರಧಾನಿ ನೆಹರು ನೀಡಿದ ಆಹ್ವಾನವನ್ನು ಡಾ. ಅಂಬೇಡ್ಕರ್ ಒಪ್ಪಿಕೊಂಡರು.

    ಬೌದ್ಧ ಧರ್ಮಕ್ಕೆ ಮತಾಂತರ:

    • ‘ಹಿಂದೂ ಕೋಡ್ ಬಿಲ್’ ಮೇಲಿನ ಭಿನ್ನಾಭಿಪ್ರಾಯಗಳಿಂದಾಗಿ 1951 ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. 1956 ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
    • 1990 ರಲ್ಲಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ವನ್ನು (ಮರಣೋತ್ತರವಾಗಿ) ನೀಡಲಾಯಿತು.

    ಪ್ರಮುಖ ಪತ್ರಿಕೆಗಳು ಮತ್ತು ಕೃತಿಗಳು:

      • ಪತ್ರಿಕೆಗಳು: ಮೂಕನಾಯಕ (1920), ಬಹಿಷ್ಕೃತ ಭಾರತ (1927), ಸಮತಾ (1929), ಜನತಾ (1930).
      • ಕೃತಿಗಳು:
    • ಅನಿಹಿಲೇಷನ್ ಆಫ್ ಕಾಸ್ಟ್
        • ಬುದ್ಧ ಆರ್ ಕಾರ್ಲ್ ಮಾರ್ಕ್ಸ್
        • ದಿ ಅನ್ ಟಚೇಬಲ್ಸ್ : ಹೂ ಆರ್ ದೇ ಅಂಡ್ ವೈ ದೇ ಹ್ಯಾವ್ ಬಿಕಮ್ ಅನ್ ಟಚೇಬಲ್ಸ್ 
    • ಬುದ್ಧ ಅಂಡ್ ಹಿಸ್ ಧಮ್ಮ 
      • ದಿ ರೈಸ್ ಅಂಡ್ ಫಾಲ್ ಆಫ್ ಹಿಂದೂ ವುಮೆನ್

    ಸಂಘಟನೆಗಳು:

    • ಬಹಿಷ್ಕೃತ ಹಿತಕಾರಿಣಿ ಸಭೆ (1923)
    • ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಸ್ವತಂತ್ರ ಕಾರ್ಮಿಕ ಪಕ್ಷ – 1936)
    • ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್ (ಪರಿಶಿಷ್ಟ ಜಾತಿಗಳ ಒಕ್ಕೂಟ – 1942)

    ನಿಧನ:

    • ಡಾ. ಅಂಬೇಡ್ಕರ್ ಅವರು ಡಿಸೆಂಬರ್ 6, 1956 ರಂದು ನಿಧನರಾದರು.
    • ಮುಂಬೈನಲ್ಲಿರುವ ‘ಚೈತ್ಯ ಭೂಮಿ’ ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕವಾಗಿದೆ.

    ಪ್ರಸ್ತುತ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರ ಪ್ರಸ್ತುತತೆ: 

    • ಭಾರತದಲ್ಲಿ ಜಾತಿ ಆಧಾರಿತ ಅಸಮಾನತೆ ಇನ್ನೂ ಜೀವಂತವಾಗಿದೆ. ಮೀಸಲಾತಿ ಮತ್ತು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ಸಂಘಟಿಸಿಕೊಳ್ಳುವ ಮೂಲಕ ದಲಿತರು ರಾಜಕೀಯ ಅಸ್ಮಿತೆಯನ್ನು ಕಂಡುಕೊಂಡಿದ್ದರೂ, ಸಾಮಾಜಿಕ (ಆರೋಗ್ಯ ಮತ್ತು ಶಿಕ್ಷಣ) ಮತ್ತು ಆರ್ಥಿಕ ಆಯಾಮಗಳಲ್ಲಿ ಅವರು ಇನ್ನೂ ಹಿಂದುಳಿದಿದ್ದಾರೆ.

    ಭಾರತದ ಅಂತರ್ಜಲ ಮಾಲಿನ್ಯ ಬಿಕ್ಕಟ್ಟು

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ಜಲಧಾರಗಳಲ್ಲಿ ವಿಷಕಾರಿ ಮಾಲಿನ್ಯಕಾರಕಗಳ ಪ್ರಮಾಣವು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದನ್ನು ‘ಕೇಂದ್ರ ಅಂತರ್ಜಲ ಮಂಡಳಿ’ (CGWB) ಎತ್ತಿ ತೋರಿಸಿದೆ.

    ಭಾರತದ ಅಂತರ್ಜಲ ಮಾಲಿನ್ಯ ಬಿಕ್ಕಟ್ಟಿನ ಬಗ್ಗೆ:

    • ಭಾರತವು ವಿಶ್ವದ ಜನಸಂಖ್ಯೆಯ 18% ರಷ್ಟನ್ನು ಹೊಂದಿದ್ದರೂ, ಕೇವಲ 4% ರಷ್ಟು ಸಿಹಿನೀರಿನ ಸಂಪನ್ಮೂಲಗಳನ್ನು ಹೊಂದಿದೆ. ಇದು ಲಭ್ಯವಿರುವ ನೀರಿನ ವ್ಯವಸ್ಥೆಗಳ ಮೇಲೆ ಭಾರೀ ಒತ್ತಡವನ್ನು ಹೇರುತ್ತಿದೆ.
    • ಭಾರತವು ತನ್ನ ಗ್ರಾಮೀಣ ಕುಡಿಯುವ ನೀರಿನ ಅಗತ್ಯಗಳಿಗಾಗಿ ಸುಮಾರು 85% ರಷ್ಟು ಮತ್ತು ನೀರಾವರಿಗಾಗಿ ಸುಮಾರು 60% ರಷ್ಟು ಅಂತರ್ಜಲವನ್ನೇ ಅವಲಂಬಿಸಿದೆ.
    • ಭಾರತದ ಜಲಧಾರಗಳು ಆರ್ಸೆನಿಕ್, ಫ್ಲೋರೈಡ್, ನೈಟ್ರೇಟ್, ಯುರೇನಿಯಂ, ಲವಣಾಂಶ ಮತ್ತು ಭಾರ ಲೋಹಗಳಿಂದ ಏಕಕಾಲದಲ್ಲಿ ಕಲುಷಿತಗೊಳ್ಳುತ್ತಿವೆ.

    ಸರ್ಕಾರಿ ಉಪಕ್ರಮಗಳು:

    • ಜಲ ಶಕ್ತಿ ಅಭಿಯಾನ, 2019:- ಇದು ನೀರಿನ ಸಂರಕ್ಷಣೆ ಮತ್ತು ನೀರಿನ ಅಭಾವವಿರುವ ಜಿಲ್ಲೆಗಳಲ್ಲಿ ಅಂತರ್ಜಲ ಮರುಪೂರಣದ/ ಪುನರ್‌ಭರ್ತಿ ಮೇಲೆ ಕೇಂದ್ರೀಕರಿಸುತ್ತದೆ.
    • ಅಮೃತ್ ಸರೋವರ್ ಮಿಷನ್: ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.
    • ರಾಷ್ಟ್ರೀಯ ಜಲಧಾರ ನಕ್ಷೆ ತಯಾರಿಕೆ ಮತ್ತು ನಿರ್ವಹಣಾ ಕಾರ್ಯಕ್ರಮ (NAQUIM): ಸುಸ್ಥಿರ ನಿರ್ವಹಣೆಗಾಗಿ ಜಲಧರಗಳ ವ್ಯಾಪ್ತಿಯನ್ನು ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
    • ಅಟಲ್ ಭೂಜಲ್ ಯೋಜನೆ: ನಿರ್ಣಾಯಕ ಮತ್ತು ಅತಿಯಾಗಿ ಬಳಸಿಕೊಂಡ ವಲಯಗಳನ್ನು ಹೊಂದಿರುವ ಆದ್ಯತೆಯ ಪ್ರದೇಶಗಳಲ್ಲಿ, ಅಂತರ್ಜಲ ನಿರ್ವಹಣೆಯನ್ನು ಸುಧಾರಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
  • ‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’

    ‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’

    ಇದೀಗ ಸುದ್ದಿಯಲ್ಲಿದೆ: 

    • ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ಸರ್ಕಾರವು ‘ಡಿಜಿಟಲ್ ಪರಂಪರೆ ಪೋರ್ಟಲ್’ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

    ‘ಡಿಜಿಟಲ್ ಪರಂಪರೆ ಪೋರ್ಟಲ್’ ನ ಬಗ್ಗೆ:

    • ಉದ್ದೇಶ:- ಏಕೀಕೃತ ‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’ ಸ್ಥಾಪಿಸುವ ಪ್ರಸ್ತಾವನೆಯ ಮೂಲಕ, ಡಿಜಿಟಲ್ ಪರಂಪರೆ ಸಂರಕ್ಷಣೆಯಲ್ಲಿ ಕರ್ನಾಟಕವನ್ನು ರಾಷ್ಟ್ರಮಟ್ಟದ ಮುಂಚೂಣಿ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ.
    • ಪಾತ್ರ:- ಇದು ಹಸ್ತಪ್ರತಿಗಳು, ಅಪರೂಪದ ಮುದ್ರಿತ ಕೃತಿಗಳು, ಪತ್ರಾಗಾರ ದಾಖಲೆಗಳು ಮತ್ತು ಇತರ ಸಾಂಸ್ಕೃತಿಕ ಸಂಪನ್ಮೂಲಗಳನ್ನು ಒಂದೇ ವೇದಿಕೆಯಡಿ ಸಂಯೋಜಿಸುವ ಕಾರ್ಯವಾಗಿ ನಿರ್ವಹಿಸಲಿದೆ.
    • ಆರಂಭಿಸಿದವರು:ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆ (ORI) ಮತ್ತು ಕರ್ನಾಟಕ ರಾಜ್ಯ ದಾಖಲೆಗಳ/ಪತ್ರಾಗಾರ ಸಂಗ್ರಹಾಲಯ ಜಂಟಿಯಾಗಿ ಕೈಗೊಂಡಿವೆ.
    • ಈ ಯೋಜನೆಯು ಕೇಂದ್ರ ಸರ್ಕಾರದ ‘ಡಿಜಿಟಲ್ ಇಂಡಿಯಾ ಮಿಷನ್’ ಮತ್ತು ‘ರಾಷ್ಟ್ರೀಯ ಹಸ್ತಪ್ರತಿ ಮಿಷನ್’ನ ಗುರಿಗಳಿಗೆ ಪೂರಕವಾಗಿದೆ.

    ನಿಮಗಿದು ತಿಳಿದಿದೆಯೇ?

    • ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆಯು (ORI) ಅರ್ಥಶಾಸ್ತ್ರ, ಆರ್ಯಭಟೀಯ, ನಾಟ್ಯಶಾಸ್ತ್ರ ಮತ್ತು ಶ್ರೀತತ್ತ್ವನಿಧಿ ಸೇರಿದಂತೆ 70,000 ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಹಾಗೂ 45,000 ಕ್ಕೂ ಅಧಿಕ ಅಪರೂಪದ ಮುದ್ರಿತ ಕೃತಿಗಳನ್ನು ಒಳಗೊಂಡಿದೆ.
    • “ಬೆಂಗಳೂರು ಮೈಥಿಕ್ ಸೊಸೈಟಿ” ಮತ್ತು “ಸೇವ್ ಅವರ್ ಕಂಟ್ರಿ ಫೌಂಡೇಶನ್” ಸಹಯೋಗದೊಂದಿಗೆ ₹2.15 ಕೋಟಿಗೂ ಅಧಿಕ ವೆಚ್ಚದ ಡಿಜಿಟಲೀಕರಣದ ಯೋಜನೆಗಳನ್ನು ಕೈಗೊಳ್ಳಲಾಗಿದೆ.
    • ಗಮನಿಸಿ: ಬೆಂಗಳೂರು ಮೈಥಿಕ್ ಸೊಸೈಟಿಯನ್ನು 1909 ರಲ್ಲಿ ಸ್ಥಾಪಿಸಲಾಯಿತು (PSI 402 ಪರೀಕ್ಷೆಯಲ್ಲಿ ಈ ಅಂಶದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು).