Blog

  • ರಾಜ್ಯ ಸರ್ಕಾರ ನೇಮಿಸಿದ ತನಿಖೆ KKHRAC ಸಂಸ್ಥೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚಿದೆ

    ರಾಜ್ಯ ಸರ್ಕಾರ ನೇಮಿಸಿದ ತನಿಖೆ KKHRAC ಸಂಸ್ಥೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚಿದೆ

    ಇದೀಗ ಸುದ್ದಿಯಲ್ಲಿದೆ: 

    • ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆಯಲ್ಲಿನ (KKHRAC) ಆಡಳಿತಾತ್ಮಕ ಹಾಗೂ ಆರ್ಥಿಕ ಲೋಪದೋಷಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರು ತಮ್ಮ ವರದಿಯನ್ನು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.

    ಮುಖ್ಯಾಂಶಗಳು:

    • ರಾಜ್ಯ ಸರ್ಕಾರವು ನೇಮಿಸಿದ ತನಿಖಾ ಸಮಿತಿಯು ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆ’ (KKHRAC)ಯಲ್ಲಿ ವ್ಯಾಪಕವಾದ ಹಣಕಾಸಿನ ಮತ್ತು ಆಡಳಿತಾತ್ಮಕ ಅಕ್ರಮಗಳನ್ನು ಪತ್ತೆಹಚ್ಚಿದೆ.
    • 2020–21 ರಿಂದ 2022–23 ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಈ ದುರಾಡಳಿತವನ್ನು, ಕರ್ನಾಟಕದಲ್ಲಿ ಸಂಭವಿಸಿದ ನಿಧಿ ದುರ್ಬಳಕೆಯ ಅತಿದೊಡ್ಡ ಪ್ರಕರಣಗಳಲ್ಲಿ ಒಂದು ಎಂದು ತನಿಖಾಧಿಕಾರಿಯು ವಿವರಿಸಿದ್ದಾರೆ.

    ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಬಗ್ಗೆ:

    • ಸ್ವರೂಪ:- ಇದು ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಒಂದು ನೋಂದಾಯಿತ ಸಂಸ್ಥೆಯಾಗಿದ್ದು, ಇದು ಸಾಂವಿಧಾನಿಕ ಅಥವಾ ಶಾಸನಬದ್ಧ ಆಯೋಗವಲ್ಲ.
    • ಕೇಂದ್ರ ಕಚೇರಿ:- ಕಲಬುರಗಿ (ಗುಲ್ಬರ್ಗ).
    • ಧ್ಯೇಯೋದ್ದೇಶ:- ಕಲ್ಯಾಣ ಕರ್ನಾಟಕ ಪ್ರದೇಶದ (ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ) ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಉತ್ತೇಜಿಸುವುದು.
  • ಐಐಎಸ್‌ಸಿ ಯಲ್ಲಿ ಆರೋಗ್ಯ ರಕ್ಷಣೆಗಾಗಿ ‘ಎಐ ಉತ್ಕೃಷ್ಟತಾ ಕೇಂದ್ರ’ ಸ್ಥಾಪನೆ

    ಐಐಎಸ್‌ಸಿ ಯಲ್ಲಿ ಆರೋಗ್ಯ ರಕ್ಷಣೆಗಾಗಿ ‘ಎಐ ಉತ್ಕೃಷ್ಟತಾ ಕೇಂದ್ರ’ ಸ್ಥಾಪನೆ

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ‘ಟ್ರಾನ್ಸ್‌ಲೇಶನಲ್ ಎಐ ಫಾರ್ ನೆಟ್‌ವರ್ಕ್ಡ್ ಯುನಿವರ್ಸಲ್ ಹೆಲ್ತ್‌ಕೇರ್’ (TANUH) ಫೌಂಡೇಶನ್ ಅನ್ನು ಸ್ಥಾಪಿಸಲಾಗಿದೆ.

    IISc ಯಲ್ಲಿರುವ ಆರೋಗ್ಯ ರಕ್ಷಣೆಗಾಗಿ ಎಐ ಉತ್ಕೃಷ್ಟತಾ ಕೇಂದ್ರದ ಬಗ್ಗೆ:

    • ಗುರಿ:- ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಆರೋಗ್ಯ ರಕ್ಷಣಾ ನಾವೀನ್ಯತೆಗಳನ್ನು ಮುಂದುವರಿಸಲು ಸಮರ್ಪಿತ ‘ಆರೋಗ್ಯ ರಕ್ಷಣಾ ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರ’ವಾಗಿ ಕಾರ್ಯನಿರ್ವಹಿಸುವುದು ಇದರ ಗುರಿಯಾಗಿದೆ.
    • ಧ್ಯೇಯೋದ್ದೇಶ:- ಇದನ್ನು ಭಾರತ ಸರ್ಕಾರದ “ಮೇಕ್ ಎಐ ಇನ್ ಇಂಡಿಯಾ” (ಭಾರತದಲ್ಲಿ ಎಐ ಸೃಜಿಸಿ) ಮತ್ತು “ಮೇಕ್ ಎಐ ವರ್ಕ್ ಫಾರ್ ಇಂಡಿಯಾ” (ಭಾರತಕ್ಕಾಗಿ ಎಐ ಕಾರ್ಯನಿರ್ವಹಿಸುವಂತೆ ಮಾಡಿ) ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ಥಾಪಿಸಲಾಗಿದೆ.
    • ಇದು ಲಾಭರಹಿತ ಕಂಪನಿಯಾಗಿದ್ದು, ಅಸಾಂಕ್ರಾಮಿಕ ರೋಗಗಳ (NCD) ಪರಿಣಾಮಕಾರಿ ನಿರ್ವಹಣೆಗಾಗಿ ಚಿಕಿತ್ಸಾ ಸ್ಥಳದಲ್ಲಿಯೇ ಅನ್ವಯಿಸಬಹುದಾದ ಮತ್ತು ವಿಸ್ತರಿಸಬಹುದಾದ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಹಾಗೂ ಅಳವಡಿಸುವತ್ತ ಗಮನಹರಿಸುತ್ತದೆ.
    • ಈ ಕೇಂದ್ರವು ಬಹುವಿಷಯಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ವೈದ್ಯರು, ದತ್ತಾಂಶ ವಿಜ್ಞಾನಿಗಳು ಮತ್ತು ಎಐ ಸಂಶೋಧಕರನ್ನು ಒಂದೇ ವೇದಿಕೆಯಡಿ ಸಂಯೋಜಿಸಲಿದೆ.
  • “ನಾರ್ಕೋ ಪರೀಕ್ಷೆ” | ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆ | ಕೆಂಪು ಕಾಲುಳ್ಳ ಡೌಕ್ ಕೋತಿಗಳು (Red-Shanked Douc Monkeys) | ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆ | ಮೊದಲ ಸ್ವದೇಶಿ ಮುಳುಗುಗಾರರ (ಡೈವಿಂಗ್) ಬೆಂಬಲ ನೌಕೆ (DSC A20)

    “ನಾರ್ಕೋ ಪರೀಕ್ಷೆ”

    ಸಾಮಾನ್ಯ ಅಧ್ಯಯನ-2/ಆಡಳಿತ; ಸಾಮಾನ್ಯ ಅಧ್ಯಯನ-3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಬಲವಂತದ ಅಥವಾ ಅನೈಚ್ಛಿಕ ನಾರ್ಕೋ ಪರೀಕ್ಷೆಗಳು ಅಸಾಂವಿಧಾನಿಕ ಮತ್ತು ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.

    ನಾರ್ಕೋ ಪರೀಕ್ಷೆಯ ಬಗ್ಗೆ:

    • ನಾರ್ಕೋ ಪರೀಕ್ಷೆಯು ತನಿಖೆಯ ಒಂದು ಪ್ರಕ್ರಿಯೆಯಾಗಿದ್ದು, ಇದರಲ್ಲಿ ಪರೀಕ್ಷೆಗೆ ಒಳಗಾಗುವ ಆರೋಪಿಯು ಮುಚ್ಚಿಟ್ಟಿರುವ ಸತ್ಯಗಳನ್ನು ವ್ಯಕ್ತಪಡಿಸುವನೆಂದು ನಿರೀಕ್ಷಿಸಲಾಗುತ್ತದೆ.
    • ಈ ಪರೀಕ್ಷೆಯಲ್ಲಿ, ನಿರ್ದಿಷ್ಟ ವರ್ಗದ ವಸ್ತುಗಳನ್ನು ನೀಡುವ ಮೂಲಕ ಆರೋಪಿಯನ್ನು ಅರೆ ಪ್ರಜ್ಞಾವಸ್ಥೆಗೆ ತಳ್ಳಲಾಗುತ್ತದೆ. ಉದಾಹರಣೆಗೆ – ಸೋಡಿಯಂ ಪೆಂಟೊಥಾಲ್. ಇದು ವ್ಯಕ್ತಿಯ ಪ್ರತಿಬಂಧಕಗಳು ಮತ್ತು ತಾರ್ಕಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
    • ಇದು ಪಾಲಿಗ್ರಾಫ್‌ಗಳು ಅಥವಾ ಬ್ರೈನ್ ಮ್ಯಾಪಿಂಗ್‌ನಂತೆಯೇ ಅಹಿಂಸಾತ್ಮಕ ವಿಧಾನವಾಗಿದೆ.

    ನಾರ್ಕೋ ಪರೀಕ್ಷೆಯ ಕಾನೂನುಬದ್ಧತೆಯ ಬಗ್ಗೆ:

    • ಸೆಲ್ವಿ ಮಾರ್ಗಸೂಚಿಗಳು:ಮುಕ್ತ ಒಪ್ಪಿಗೆಯಿಲ್ಲದೆ ನಡೆಸಿದ ಯಾವುದೇ ಪರೀಕ್ಷೆಯು ಅಸಾಂವಿಧಾನಿಕ ಮತ್ತು ಅದರ ಫಲಿತಾಂಶಗಳನ್ನು ಸಾಕ್ಷಿಯಾಗಿ ಬಳಸಲಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
    • ವಿಧಿ 20:- ಇದು ಪೂರ್ವಾನ್ವಯವಾಗುವ ಕಾನೂನುಗಳು, ಒಂದೇ ಅಪರಾಧಕ್ಕೆ ಎರಡು ಬಾರಿ ಶಿಕ್ಷೆ (ಡಬಲ್ ಜಿಯೋಪಾರ್ಡಿ) ಮತ್ತು ತನ್ನ ವಿರುದ್ಧವೇ ಸಾಕ್ಷಿ ನುಡಿಯುವಂತೆ ಒತ್ತಾಯಿಸುವುದರ ವಿರುದ್ಧ ರಕ್ಷಣೆ ನೀಡುತ್ತದೆ.
    • ವಿಧಿ 21:– ನಾರ್ಕೋ ಪರೀಕ್ಷೆಯು ಸಂವಿಧಾನದ ವಿಧಿ 21 ರ ಅಡಿಯಲ್ಲಿನ “ಗೌಪ್ಯತೆಯ ಹಕ್ಕ”ನ್ನೂ ಉಲ್ಲಂಘಿಸುತ್ತದೆ.
    • ವಿಧಿ 14 ಮತ್ತು 19:- ಇವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುತ್ತವೆ.
    • ಮನೋಜ್ ಕುಮಾರ್ ಸೈನಿ v/s ಮಧ್ಯಪ್ರದೇಶ ರಾಜ್ಯ (2023) ಮತ್ತು ವಿನೋಭಾಯಿ v/s ಕೇರಳ ರಾಜ್ಯ (2025):- ನಾರ್ಕೋ ಪರೀಕ್ಷೆಯ ಫಲಿತಾಂಶಗಳು ಮಾತ್ರವೇ ತಪ್ಪಿತಸ್ಥರೆಂದು ಸಾಬೀತುಪಡಿಸುವುದಿಲ್ಲ ಮತ್ತು ಇತರ ಸಾಕ್ಷ್ಯಾಧಾರಗಳೊಂದಿಗೆ ಅದನ್ನು ದೃಢೀಕರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

    ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆ

    ಸಾಮಾನ್ಯ ಅಧ್ಯಯನ-3/ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಭಾರತವು ವಾರಣಾಸಿಯಲ್ಲಿ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲಾದ ತನ್ನ ಮೊದಲ ಜಲಜನಕ (ಹೈಡ್ರೋಜನ್) ಇಂಧನ ಕೋಶ ಪ್ರಯಾಣಿಕ ನೌಕೆಯನ್ನು ಲೋಕಾರ್ಪಣೆ ಮಾಡಿದೆ. ಇದು ಹಸಿರು ಕಡಲ ಸಾರಿಗೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

    ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆಯ ಬಗ್ಗೆ:

    • ನಿರ್ಮಾಣ ಮತ್ತು ಒಡೆತನ:- ಇದನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದು, ಇದರ ಒಡೆತನವನ್ನು ‘ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ’ವು ಹೊಂದಿದೆ.
    • ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ (ಪ್ರೋಟಾನ್ ವಿನಿಮಯ ಪೊರೆ) ತಂತ್ರಜ್ಞಾನವನ್ನು ಆಧರಿಸಿದ ಜಲಜನಕ ಇಂಧನ ಕೋಶ ವ್ಯವಸ್ಥೆಗಳು, ಭಾರತದ ಶುದ್ಧ ಇಂಧನ ಮತ್ತು ಹಸಿರು ಚಲನಶೀಲತೆಯ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
    • ಕಾರ್ಯವಿಧಾನ: ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ ಫ್ಯೂಯಲ್ ಸೆಲ್ (PEMFC), ದಹನಕ್ರಿಯೆಯಿಲ್ಲದೆ ಜಲಜನಕ ಮತ್ತು ಆಮ್ಲಜನಕದ ನಡುವಿನ ವಿದ್ಯುದ್ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಇದು ಇದನ್ನು ಒಂದು ಶುದ್ಧ ಮತ್ತು ಪರಿಣಾಮಕಾರಿ ಶಕ್ತಿಯ ಮೂಲವನ್ನಾಗಿ ಮಾಡುತ್ತದೆ.

    ಮಹತ್ವ:

    • ಈ ಚಾಲನೆಯು 2070 ರ ವೇಳೆಗೆ ಭಾರತದ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿಯನ್ನು ಬೆಂಬಲಿಸುತ್ತದೆ. ಜೊತೆಗೆ, ಶುದ್ಧ ಮತ್ತು ಸುಸ್ಥಿರ ಜಲಮಾರ್ಗಗಳನ್ನು ಉತ್ತೇಜಿಸುವ ‘ಮ್ಯಾರಿಟೈಮ್ ಇಂಡಿಯಾ ವಿಷನ್ 2030’ ಹಾಗೂ ‘ಮ್ಯಾರಿಟೈಮ್ ಅಮೃತ್ ಕಾಲ್ ವಿಷನ್ 2047’ ನೊಂದಿಗೆ ಇದು ಹೊಂದಿಕೆಯಾಗುತ್ತದೆ.
    • ಈ ನೌಕೆಯು ಶಬ್ದರಹಿತ ಮತ್ತು ಮಾಲಿನ್ಯರಹಿತ ಪ್ರಯಾಣವನ್ನು ಒದಗಿಸುತ್ತದೆ, ರಸ್ತೆ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸಂಪೂರ್ಣ ದೇಶೀಯ ಹಸಿರು ತಂತ್ರಜ್ಞಾನವನ್ನು ಪ್ರದರ್ಶಿಸುತ್ತದೆ.

    ಕೆಂಪು ಕಾಲುಳ್ಳ ಡೌಕ್ ಕೋತಿಗಳು (Red-Shanked Douc Monkeys)

    ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು “ಕೆಂಪು ಕಾಲುಳ್ಳ ಡೌಕ್ ಕೋತಿ”ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ.

    ಕೆಂಪು ಕಾಲುಳ್ಳ ಡೌಕ್ ಕೋತಿಗಳ (ಪೈಗಾಥ್ರಿಕ್ಸ್ ನೆಮಿಯಸ್) ಬಗ್ಗೆ:

    • ಇದು ತನ್ನ ಅತ್ಯಂತ ಆಕರ್ಷಕ ಮತ್ತು ವರ್ಣರಂಜಿತವಾದ ದೇಹ ರಚನೆಯುಳ್ಳ ‘ಹಳೆಯ ಪ್ರಪಂಚದ ಕೋತಿಗಳ’ ಪ್ರಭೇದವಾಗಿದ್ದು, ಇವುಗಳನ್ನು ಸಾಮಾನ್ಯವಾಗಿ “ಸಸ್ತನಿಗಳ ರಾಣಿ” ಎಂದು ಕರೆಯಲಾಗುತ್ತದೆ.
    • ಹಂಚಿಕೆ:- ಈ ಕೋತಿಗಳು ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾದ ಕಾಡುಗಳಿಗೆ ಸ್ಥಳೀಯವಾಗಿರುವ, ಮರಗಳಲ್ಲಿ ವಾಸಿಸುವ ಮತ್ತು ಹಗಲಿನಲ್ಲಿ ಸಕ್ರಿಯವಾಗಿರುವ ಸಸ್ತನಿಗಳಾಗಿವೆ.
    • ಆವಾಸಸ್ಥಾನ:- ಇವು ಸಮುದ್ರಮಟ್ಟದಿಂದ ಸುಮಾರು 2,000 ಮೀಟರ್ (6,600 ಅಡಿ) ಎತ್ತರದವರೆಗಿನ ನಿತ್ಯಹರಿದ್ವರ್ಣ ಮತ್ತು ಅರೆ-ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಭಾಗದಲ್ಲಿ ವಾಸಿಸುತ್ತವೆ.
    • ದೈಹಿಕ ನೋಟ:- ಬೂದು ಬಣ್ಣದ ದೇಹ, ಗಾಢವಾದ ಕಡುಗೆಂಪು- ಕೆಂಪು ಬಣ್ಣದ ಕೆಳಕಾಲುಗಳು, ಬಿಳಿ ಮುಂಗೈಗಳು ಮತ್ತು ಬಾಲ ಹಾಗೂ ತಿಳಿ ನೀಲಿ ಕಣ್ಣುರೆಪ್ಪೆಗಳೊಂದಿಗೆ ಕೂಡಿದ ಕಿತ್ತಳೆ-ಹಳದಿ ಮುಖ – ಇವು ಈ ಪ್ರಭೇಧದ ಮಂಗಗಳ ವಿಶಿಷ್ಟ ಲಕ್ಷಣಗಳಾಗಿವೆ.
    • ಗಂಡು ಕೋತಿಗಳನ್ನು ಅವುಗಳ ಹಿಂಭಾಗದಲ್ಲಿರುವ ಬಿಳಿ ಕಲೆಗಳಿಂದ ಪ್ರತ್ಯೇಕಿಸಬಹುದು.
    • IUCN ಸ್ಥಿತಿಗತಿ: ತೀವ್ರ ಅಳಿವಿನಂಚಿನಲ್ಲಿರುವ (CR).

    ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆ

    ಸಾಮಾನ್ಯ ಅಧ್ಯಯನ-3/ಮೂಲಸೌಕರ್ಯ

    ಇದೀಗ ಸುದ್ದಿಯಲ್ಲಿದೆ: 

    • ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆಗೆ ನಿಧಿ ಸಂಗ್ರಹಿಸಲು, ಅರಣ್ಯ ಭೂಮಿಯಲ್ಲಿರುವ ಆಸ್ತಿಗಳನ್ನು ಭದ್ರತೆಯಾಗಿ ಬಳಸಿಕೊಳ್ಳುವ ಎನ್‌ಎಚ್‌ಪಿಸಿ (NHPC) ಪ್ರಸ್ತಾಪವನ್ನು ಪರಿಸರ ಸಚಿವಾಲಯವು ತಿರಸ್ಕರಿಸಿದೆ.

    ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆಯ ಬಗ್ಗೆ:

    • ಇದು ಬ್ರಹ್ಮಪುತ್ರ ನದಿಯ ಉಪನದಿಯಾದ ಸುಬನ್ಸಿರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಯೋಜನೆಯಾಗಿದೆ.
    • ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಗಡಿಯಲ್ಲಿರುವ ಗೆರುಕಾಮುಖ್‌ನಲ್ಲಿ ಇದು ನೆಲೆಗೊಂಡಿದೆ.
    • ಸಾಮರ್ಥ್ಯ ಮತ್ತು ವಿಧ : ಇದು 2,000 ಮೆಗಾವ್ಯಾಟ್ (8 × 250 ಮೆಗಾವ್ಯಾಟ್) ಒಟ್ಟು ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.
    • ಕಾರ್ಯತಂತ್ರದ ಮಹತ್ವ:
      • ಇದು ಈಶಾನ್ಯ ಭಾರತದಲ್ಲಿ ಶುದ್ಧ ಇಂಧನ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
      • ಇದು ವಿದ್ಯುತ್ ಜಾಲದ ಸ್ಥಿರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಗುರಿಗಳನ್ನು ಬೆಂಬಲಿಸುತ್ತದೆ.

    ಮೊದಲ ಸ್ವದೇಶಿ ಮುಳುಗುಗಾರರ (ಡೈವಿಂಗ್) ಬೆಂಬಲ ನೌಕೆ (DSC A20)

    ಸಾಮಾನ್ಯ ಅಧ್ಯಯನ-3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ನೌಕಾಪಡೆ ಸ್ವದೇಶಿಯಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಮುಳುಗುಗಾರರ ಬೆಂಬಲ ನೌಕಾ (Diving Support Craft – DSC) ಸರಣಿಯ ಮೊದಲ ನೌಕೆ DSC A20 ಅನ್ನು ದಕ್ಷಿಣ ನೌಕಾ ಕಮಾಂಡ್‌ನ ಆಶ್ರಯದಲ್ಲಿ, ಕೊಚ್ಚಿಯಲ್ಲಿ ಸೇವೆಗೆ ಸೇರ್ಪಡೆಗೊಳಿಸಲು ಸಿದ್ಧವಾಗಿದೆ.

    ಡಿಎಸ್‌ಸಿ ಎ20 (DSC A20) ಯ ಬಗ್ಗೆ:

    • ನಿರ್ಮಾಣ:- ಇದನ್ನು ಕೋಲ್ಕತ್ತಾದ ಮೆಸರ್ಸ್ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು ನಿರ್ಮಿಸಿರುವ ಐದು ‘ಮುಳುಗುಗಾರರ ಬೆಂಬಲ ನೌಕೆ”ಗಳಲ್ಲಿ ಮೊದಲನೆಯದಾಗಿದೆ.
    • ತಾಂತ್ರಿಕ ವೈಶಿಷ್ಟ್ಯಗಳು:- ಈ ನೌಕೆಯು ಸುಮಾರು 390 ಟನ್‌ಗಳಷ್ಟು ಸ್ಥಳಾಂತರ ಸಾಮರ್ಥ್ಯ ಹೊಂದಿದೆ.
      • ಇದು ಅತ್ಯುತ್ತಮ ಸ್ಥಿರತೆ, ವಿಸ್ತಾರವಾದ ಹಡಗುಕಟ್ಟೆ (ಡೆಕ್) ಪ್ರದೇಶ ಮತ್ತು ಸುಧಾರಿತ ನೌಕಾ ಸ್ಥಿರತೆಯ (ಕಡಲ ಅಲೆಗಳ ನಡುವೆ ಸುಗಮವಾಗಿ ಚಲಿಸುವ) ಗುಣಲಕ್ಷಣಗಳನ್ನು ಒಳಗೊಂಡಿದೆ.
    • ಕಾರ್ಯಾಚರಣೆಯ ಮಹತ್ವ:- ಇದರ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಯ ಈ ಕೆಳಗಿನ ಸಾಮರ್ಥ್ಯಗಳು ಹೆಚ್ಚಲಿವೆ:
      • ಮುಳುಗುಗಾರರಿಗೆ (ಡೈವಿಂಗ್) ಬೆಂಬಲ
      • ಜಲಾಂತರ್ಗಾಮಿ ತಪಾಸಣೆ
      • ಮುಳುಗಿದ ವಸ್ತುಗಳ ಚೇತರಿಕೆ ಅಥವಾ ರಕ್ಷಣೆ
      • ಕರಾವಳಿ ಕಾರ್ಯಾಚರಣೆಯ ನಿಯೋಜನೆ.
  • ಹಂಪಿಯಲ್ಲಿ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)

    ಹಂಪಿಯಲ್ಲಿ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)

    ಇದೀಗ ಸುದ್ದಿಯಲ್ಲಿದೆ:

    • ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಪ್ರವಾಸಿಗರ ಅನುಭವವನ್ನು ಸುಧಾರಿಸುವ ಉದ್ದೇಶದ ನೂತನ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು) ಕೇಂದ್ರಗಳು ಮಾರ್ಚ್ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)ಗಳ ಬಗ್ಗೆ:

    • ಹಿನ್ನೆಲೆ:- ಈ ಪಾರಂಪರಿಕ ಸ್ಥಳಕ್ಕೇ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಅಗತ್ಯ ಮೂಲಸೌಕರ್ಯ ಮತ್ತು ಮಾಹಿತಿ ನೆರವು ಒದಗಿಸುವುದು.
    • ಗುರಿ:– ಹಂಪಿಯ ಪುರಾತತ್ವ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಧಕ್ಕೆ ಬಾರದಂತೆ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವುದು ಹಾಗೂ ಇ ಮೂಲಕ ಹಂಪಿಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಬೆಂಬಲಿಸುವುದು.
    • ಚಾಲನೆ ನೀಡಿದವರು:- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2024ರಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು.
    • ಸಚಿವಾಲಯ:- ಕೇಂದ್ರ ಪ್ರವಾಸೋದ್ಯಮ ಸಚಿವಾಲಯ
    • ಕೇಂದ್ರ ಯೋಜನೆ:- ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಪ್ರವಾಸಿಗರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ₹25.64 ಕೋಟಿ ವೆಚ್ಚದ ‘ಹಂಪಿಯಲ್ಲಿ ಟ್ರಾವೆಲರ್ ನೂಕ್ಸ್ ಸ್ಥಾಪನೆ’ಗೆ ಮಂಜೂರಾತಿ ನೀಡಿದೆ.
    • ರಾಜ್ಯದಲ್ಲಿ ಅನುಷ್ಠಾನ ಸಂಸ್ಥೆ:- ‘ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಯಮಿತ ’ (KTIL).
    • ಪ್ರಯೋಜನೆಗಳು:- ಈ ‘ಟ್ರಾವೆಲರ್ ನೂಕ್ಸ್’ ಕೇಂದ್ರಗಳು ಪ್ರವಾಸಿಗರ ಸೌಲಭ್ಯಗಳಲ್ಲಿನ ಪ್ರಮುಖ ಕೊರತೆಗಳನ್ನು ನಿವಾರಿಸುವ ಸಲುವಾಗಿ ಕುಡಿಯುವ ನೀರಿನ ಘಟಕಗಳು, ನೈರ್ಮಲ್ಯಯುತ ಶೌಚಾಲಯಗಳು, ಎಟಿಎಂಗಳು, ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ವಿಶ್ರಾಂತಿಗಾಗಿ ನೆರಳಿನ ಆಸರೆಗಳನ್ನು ಒದಗಿಸಲಿವೆ.
  • ರಾಷ್ಟ್ರೀಯ ಮಖಾನಾ ಮಂಡಳಿ | ಕೋಲ್-ಸೇತು ನೀತಿ (CoalSETU Policy) | ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (IFAD) | “ಪ್ರಾಜೆಕ್ಟ್ ಸನ್‌ಕ್ಯಾಚರ್” (Project Suncatcher) | ಪೋಶ್ (POSH) ಕಾಯ್ದೆ, 2013

    ರಾಷ್ಟ್ರೀಯ ಮಖಾನಾ ಮಂಡಳಿ

    ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ರಾಷ್ಟ್ರೀಯ ಮಖಾನಾ ಮಂಡಳಿಯ ಮೊದಲ ಸಭೆಯಲ್ಲಿ ಮಖಾನಾದ ಸಮಗ್ರ ಅಭಿವೃದ್ಧಿಗಾಗಿ ₹476.03 ಕೋಟಿ ಮೊತ್ತದ ‘ಕೇಂದ್ರ ವಲಯದ ಯೋಜನೆ’ಯನ್ನು ಜಾರಿಗೆ ತರಲಾಯಿತು.

    ರಾಷ್ಟ್ರೀಯ ಮಖಾನಾ ಮಂಡಳಿಯ ಬಗ್ಗೆ:

    • ಉದ್ದೇಶ:- ಭಾರತದ ಮಖಾನಾ ವಲಯವನ್ನು ಬಲಪಡಿಸುವುದು ಮತ್ತು ಆಧುನೀಕರಿಸುವುದು.
    • ಪ್ರಧಾನ ಕಚೇರಿ:- ಬಿಹಾರದ ಪೂರ್ಣಿಯಾದಲ್ಲಿದೆ.

    ಮಖಾನಾ (Euryale ferox) ಹೂಬಿಡುವ ಸಸ್ಯದ ಬಗ್ಗೆ: 

    • ಇದು ಜಲ ಕಮಲ (ನೀಲೋತ್ಪಲ) ಕುಟುಂಬಕ್ಕೆ (Nymphaeaceae) ಸೇರಿದ ಒಂದು ಹೂಬಿಡುವ ಸಸ್ಯವಾಗಿದೆ.
    • ಹವಾಮಾನ ಪರಿಸ್ಥಿತಿ:- ಇದಕ್ಕೆ 20-35°C ತಾಪಮಾನ ಶ್ರೇಣಿ ಮತ್ತು 100-250 ಸೆಂ.ಮೀ. ವಾರ್ಷಿಕ ಮಳೆಯ ಅಗತ್ಯವಿದೆ.
    • ಇದು ಸಂಪೂರ್ಣವಾಗಿ ಸಾವಯವ, ಧಾನ್ಯವಲ್ಲದ ಆಹಾರವಾಗಿದ್ದು, ಪ್ರಮುಖವಾಗಿ ಭಾರತದಲ್ಲಿ ಕಂಡುಬರುತ್ತದೆ; ಜೊತೆಗೆ ಕೊರಿಯಾ, ಜಪಾನ್ ಹಾಗೂ ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ.
    • ಭಾರತದ ಮಖಾನಾ ಉತ್ಪಾದನೆಯಲ್ಲಿ ಬಿಹಾರವು ಸುಮಾರು 90% ರಷ್ಟು ಪಾಲನ್ನು ಹೊಂದಿದೆ.
    • ಜಿಐ ಟ್ಯಾಗ್ : 2022 ರಲ್ಲಿ, ‘ಮಿಥಿಲಾ ಮಖಾನಾ’ಕ್ಕೇ ಜಿಐ ಟ್ಯಾಗ್ ನೀಡಲಾಯಿತು.

    ಕೋಲ್-ಸೇತು ನೀತಿ (CoalSETU Policy)

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಕೇಂದ್ರ ಸಚಿವ ಸಂಪುಟವು ‘ಕೋಲ್-ಸೇತು ನೀತಿ’ಗೆ ಅನುಮೋದನೆ ನೀಡಿದೆ.

    ಕೋಲ್-ಸೇತು ನೀತಿಯ ಬಗ್ಗೆ:

    • ಉದ್ದೇಶ:- ಕೈಗಾರಿಕಾ ಬಳಕೆಗಾಗಿ ಕಲ್ಲಿದ್ದಲು ಹಂಚಿಕೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನಮ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ, ಕಲ್ಲಿದ್ದಲು ಸಂಯೋಜನೆ ಹರಾಜಿಗಾಗಿ ಹೊಸ ವ್ಯವಸ್ಥೆಯನ್ನು ಇದು ಪರಿಚಯಿಸುತ್ತದೆ.

    ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (IFAD)

    ಸಾಮಾನ್ಯ ಅಧ್ಯಯನ-3/ ಕೃಷಿ

    ಇದೀಗ ಸುದ್ದಿಯಲ್ಲಿದೆ: 

    • ರೋಮ್‌ನಲ್ಲಿ ನಡೆದ ಐಎಫ್‌ಎಡಿ (IFAD)-ಇಂಡಿಯಾ ಡೇ ದಿನಾಚರಣೆ ಕಾರ್ಯಕ್ರಮದಲ್ಲಿ, ಭಾರತವು ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿಯಲ್ಲಿನ ತನ್ನ ಸಾಧನೆಗಳನ್ನು ಪ್ರದರ್ಶಿಸಿತು.

    ‘ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ’(IFAD) ಉಪಕ್ರಮದ ಬಗ್ಗೆ:

    • ಪ್ರಧಾನ ಕಚೇರಿ:- ಇಟಲಿಯ ರೋಮ್‌ನಲ್ಲಿದೆ.
    • ಇದು 1977 ರಲ್ಲಿ ಸ್ಥಾಪನೆಯಾದ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶ:- ಗುರಿಪಡಿಸಿದ ಹಣಕಾಸಿನ ನೆರವಿನ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮೀಣ ಬಡತನವನ್ನು ನಿವಾರಿಸಲು ಪ್ರಯತ್ನಿಸುವುದು.
    • ಮಹತ್ವ:- ಇದು ಮುಖ್ಯವಾಗಿ ಸಣ್ಣ ಹಿಡುವಳಿದಾರ ರೈತರು, ಪಶುಪಾಲಕರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ರಿಯಾಯಿತಿ ದರದ ಸಾಲಗಳು, ಅನುದಾನಗಳು ಮತ್ತು ತಾಂತ್ರಿಕ ನೆರವನ್ನು ಒದಗಿಸುತ್ತದೆ. ಕೃಷಿ, ಹವಾಮಾನ ಸ್ಥಿತಿಸ್ಥಾಪಕತ್ವ, ಮೌಲ್ಯ ಸರಪಳಿ ಅಭಿವೃದ್ಧಿ ಮತ್ತು ಜೀವನೋಪಾಯದ ವೈವಿಧ್ಯೀಕರಣಕ್ಕೆ ಇದು ಒತ್ತು ನೀಡುತ್ತದೆ.

    “ಪ್ರಾಜೆಕ್ಟ್ ಸನ್‌ಕ್ಯಾಚರ್” (Project Suncatcher)

    ಸಾಮಾನ್ಯ ಅಧ್ಯಯನ-3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಗೂಗಲ್ ಸಿಇಒ ಸುಂದರ್ ಪಿಚೈ ಅವರು 2027 ರ ವೇಳೆಗೆ ಬಾಹ್ಯಾಕಾಶದಲ್ಲಿ ಸೌರಶಕ್ತಿ ಚಾಲಿತ ದತ್ತಾಂಶ ಕೇಂದ್ರ (ಡೇಟಾ ಸೆಂಟರ್‌) ಗಳನ್ನು ನಿಯೋಜಿಸಲು ‘ಪ್ರಾಜೆಕ್ಟ್ ಸನ್‌ಕ್ಯಾಚರ್’ ಎಂಬ ದೀರ್ಘಕಾಲೀನ ಸಂಶೋಧನಾ ಉಪಕ್ರಮವನ್ನು ಘೋಷಿಸಿದ್ದಾರೆ.

    ‘ಪ್ರಾಜೆಕ್ಟ್ ಸನ್‌ಕ್ಯಾಚರ್’ ನ ಬಗ್ಗೆ:

    • ಉಪಗ್ರಹ ನಕ್ಷತ್ರಪುಂಜಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಸೌರಶಕ್ತಿ ಚಾಲಿತ, ಎಐ ಆಧಾರಿತ ದತ್ತಾಂಶ ಕೇಂದ್ರಗಳನ್ನು ನಿರ್ಮಿಸುವುದು ಗೂಗಲ್‌ನ ಮಹತ್ವಾಕಾಂಕ್ಷೆಯ ಉಪಕ್ರಮವಾಗಿದೆ.

    ಪ್ರಯೋಜನಗಳು:

    • ಪರಿಸರ ಅನುಕೂಲ: ಸಾಂಪ್ರದಾಯಿಕ ದತ್ತಾಂಶ ಕೇಂದ್ರಗಳಿಗೆ ಅಗತ್ಯವಿರುವ ಭೂಮಿ, ನೀರು ಮತ್ತು ತಂಪಾಗಿಸುವ ವ್ಯವಸ್ಥೆಗಳ ಅಗತ್ಯವನ್ನು ಇದು ನಿವಾರಿಸುತ್ತದೆ.
    • ನಿರಂತರ ಶಕ್ತಿ: ಸ್ಥಿರ ಕಾರ್ಯಾಚರಣೆಗಾಗಿ ತಡೆರಹಿತ ಸೌರಶಕ್ತಿಯ ಲಭ್ಯತೆ ದೊರೆಯುತ್ತದೆ.
    • ಸ್ಥಿತಿಸ್ಥಾಪಕತ್ವ: ವಿದ್ಯುತ್ ಕಡಿತ, ನೈಸರ್ಗಿಕ ವಿಕೋಪಗಳು ಮತ್ತು ಸಮುದ್ರದಾಳದ ತಂತಿ ವೈಫಲ್ಯಗಳಿಂದ ಉಂಟಾಗುವ ಅಪಾಯಗಳನ್ನು ಇದು ತಪ್ಪಿಸುತ್ತದೆ.

    ಸವಾಲುಗಳು:

    • ತಾಂತ್ರಿಕ ತೊಂದರೆಗಳು: ಅತೀ ವೇಗದ ಲೇಸರ್ ಸಂವಹನಕ್ಕಾಗಿ ಉಪಗ್ರಹಗಳ ನಡುವೆ ಬಿಗಿಯಾದ ಅಂತರವನ್ನು (1 ಕಿ.ಮೀ ಒಳಗೆ) ಕಾಯ್ದುಕೊಳ್ಳುವುದು ಸಂಕೀರ್ಣ ಸವಾಲಾಗಿದೆ.
    • ಕಾರ್ಯಾಚರಣೆಯ ಅಡೆತಡೆಗಳು: ಬಾಹ್ಯಾಕಾಶ ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ತಗಲುವ ಅಧಿಕ ವೆಚ್ಚ ಹಾಗೂ ಕಕ್ಷೆಯಲ್ಲಿನ ದುರಸ್ತಿ ಕಾರ್ಯದ ಕಷ್ಟಕರ ಪರಿಸ್ಥಿತಿಯು ಪ್ರಮುಖ ಕಾಳಜಿಯ ವಿಷಯಗಳಾಗಿವೆ.
    • ಪರಿಸರ ಪರಿಸ್ಥಿತಿಗಳು: ಯಂತ್ರೋಪಕರಣಗಳು ವಿಕಿರಣ-ನಿರೋಧಕವಾಗಿರಬೇಕು ಮತ್ತು ನಿರ್ವಾತದಲ್ಲಿ ಶಾಖವನ್ನು ಪರಿಣಾಮಕಾರಿಯಾಗಿ ಹೊರಹಾಕುವ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿರಬೇಕು

    ಪೋಶ್ (POSH) ಕಾಯ್ದೆ, 2013

    ಸಾಮಾನ್ಯ ಅಧ್ಯಯನ -2/ ರಾಜ್ಯಶಾಸ್ತ್ರ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013’ (ಪೋಸ್ ಕಾಯ್ದೆ) ರ ಅಡಿಯಲ್ಲಿ ‘ಆಂತರಿಕ ದೂರು ಸಮಿತಿಗಳ’ ಅಧಿಕಾರ ವ್ಯಾಪ್ತಿಯನ್ನು ಸರ್ವೋಚ್ಚ ನ್ಯಾಯಾಲಯವು ವಿಸ್ತರಿಸಿದೆ.
    • ಲೈಂಗಿಕ ದೌರ್ಜನ್ಯದ ದೂರುಗಳನ್ನು ಆರೋಪಿಯ ಕೆಲಸದ ಸ್ಥಳದಲ್ಲಿ ಮಾತ್ರವಲ್ಲದೆ, ದೂರುದಾರರ ಕೆಲಸದ ಸ್ಥಳದಲ್ಲಿ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಸ್ಥಳದಲ್ಲಿಯೂ ಸಲ್ಲಿಸಬಹುದು ಎಂದು ನ್ಯಾಯಾಲಯವು ಆದೇಶಿಸಿದೆ.

    ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 ರ ಬಗ್ಗೆ:

    • ಲೈಂಗಿಕ ದೌರ್ಜನ್ಯದ ವ್ಯಾಖ್ಯಾನ:- ನೇರವಾಗಿ ಅಥವಾ ಸೂಚಕವಾಗಿ ಎಸಗಲಾದ ಈ ಕೆಳಗಿನ “ಯಾವುದೇ ಒಂದು ಅಥವಾ ಹೆಚ್ಚಿನ ಅನಪೇಕ್ಷಿತ ಕೃತ್ಯಗಳು ಅಥವಾ ನಡವಳಿಕೆಗಳು” ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಬರುತ್ತವೆ:
      • ದೈಹಿಕ ಸಂಪರ್ಕ ಮತ್ತು ಮುನ್ನುಗ್ಗುವಿಕೆ.
      • ಲೈಂಗಿಕ ಅನುಕೂಲಗಳಿಗಾಗಿ ಬೇಡಿಕೆ ಅಥವಾ ವಿನಂತಿ.
      • ಲೈಂಗಿಕ ಪ್ರೇರಿತ ಅಶ್ಲೀಲ ಟೀಕೆಗಳು.
      • ಅಶ್ಲೀಲ ಚಿತ್ರಗಳನ್ನು ತೋರಿಸುವುದು.
      • ಲೈಂಗಿಕ ಸ್ವರೂಪದ ಯಾವುದೇ ಇತರ ಅನಪೇಕ್ಷಿತ ದೈಹಿಕ, ಮೌಖಿಕ ಅಥವಾ ಮೌಖಿಕವಲ್ಲದ ನಡವಳಿಕೆ.
    • ಬಾಧ್ಯತೆ:- 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಪ್ರತಿಯೊಂದು ಕಚೇರಿ ಅಥವಾ ಶಾಖೆಯಲ್ಲಿ ಉದ್ಯೋಗದಾತರು ಕಡ್ಡಾಯವಾಗಿ ‘ಆಂತರಿಕ ದೂರು ಸಮಿತಿ’  (‘ಐಸಿಸಿ’) ಯನ್ನು ರಚಿಸಬೇಕು.
    • ದೂರು ಸಮಿತಿಗಳು:- ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಕರೆಸುವ (ಸಮನ್ಸ್ ನೀಡುವ), ಪ್ರಮಾಣವಚನದ ಮೇಲೆ ವಿಚಾರಣೆ ನಡೆಸುವ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಲು ಆದೇಶಿಸುವ ವಿಷಯದಲ್ಲಿ ‘ಐಸಿಸಿ’ಯು ಸಿವಿಲ್ ನ್ಯಾಯಾಲಯಕ್ಕೆ ಇರುವಂತಹ ಅಧಿಕಾರಗಳನ್ನು ಹೊಂದಿದೆ.
    • ಸಮಯದ ಮಿತಿ:- ದೌರ್ಜನ್ಯದ ಘಟನೆ ನಡೆದ ದಿನಾಂಕದಿಂದ “3 ತಿಂಗಳೊಳಗೆ” ದೂರನ್ನು ಸಲ್ಲಿಸಬೇಕು.
    • ಸಂಧಾನ:ನೊಂದ ಮಹಿಳೆಯ ಕೋರಿಕೆಯ ಮೇರೆಗೆ, ಐಸಿಸಿಯು ವಿಷಯವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲು ಅನುಮತಿಸಬಹುದು. ಆದರೆ, ಇಲ್ಲಿ ಯಾವುದೇ ಹಣಕಾಸಿನ ಇತ್ಯರ್ಥಕ್ಕೆ ಅವಕಾಶವಿಲ್ಲ.
    • ಶಿಕ್ಷೆ:- ಕಾಯ್ದೆಯ ನಿಬಂಧನೆಗಳನ್ನು ಪಾಲಿಸದ ಉದ್ಯೋಗದಾತರಿಗೆ 50,000 ರೂ.ಗಳವರೆಗೆ ದಂಡ ವಿಧಿಸಲು ಅವಕಾಶವಿದೆ.
  • ಅಪಘಾತ ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳು

    ಅಪಘಾತ ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳು

    ಇದೀಗ ಸುದ್ದಿಯಲ್ಲಿದೆ: 

    • ರಾಜ್ಯ ಸಾರಿಗೆ ವಾಹನಗಳು (ಬಸ್ ಗಳು) ರಸ್ತೆ ಅಪಘಾತಕ್ಕೀಡಾದಾಗ ಅಥವಾ ತಾಂತ್ರಿಕ ಸ್ಥಗಿತಕ್ಕೆ ಒಳಗಾದ ಸಂದರ್ಭದಲ್ಲಿ ತ್ವರಿತ ನೆರವು ನೀಡುವ ಉದ್ದೇಶದೊಂದಿಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ‘ಅಪಘಾತ ತುರ್ತು ಸ್ಪಂದನಾ ವಾಹನಗಳನ್ನು’ ನಿಯೋಜಿಸಿದೆ.

    ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳ ಕುರಿತು:

    • ಆರಂಭಿಕ ಹಂತದಲ್ಲಿ, ಇಂತಹ 2 ವಾಹನಗಳನ್ನು ಬೆಂಗಳೂರು ಮತ್ತು ಮೈಸೂರಿನ ಕಾರ್ಯತಂತ್ರದ ಕೇಂದ್ರಗಳಲ್ಲಿ ನಿಯೋಜಿಸಲಾಗುವುದು.
    • ಈ ವಿಶೇಷ ಸುಸಜ್ಜಿತ ವಾಹನಗಳು ‘ಸಂಚಾರಿ ಕಾರ್ಯಾಗಾರ’ಗಳಾಗಿ ಕಾರ್ಯನಿರ್ವಹಿಸಲಿವೆ.
    • ಇದು ತಾಂತ್ರಿಕ ತಂಡಗಳು ಅಗತ್ಯ ಉಪಕರಣ ಹಾಗೂ ಬಿಡಿಭಾಗಗಳೊಂದಿಗೆ ಮಾರ್ಗಮಧ್ಯೆ ಸ್ಥಗಿತಗೊಂಡ ಬಸ್‌ಗಳನ್ನು ಶೀಘ್ರವಾಗಿ ತಲುಪಲು ಮತ್ತು ಸಾರಿಗೆ ಕಾರ್ಯಾಚರಣೆಯನ್ನು ಸುಗಮವಾಗಿ ಪುನರಾರಂಭಿಸಲು ನೆರವಾಗಲಿವೆ.
  • ‘ಶಾಂತಿ’ (SHANTI) ಮಸೂದೆ | ಭಾರತ-ಓಮನ್ ಮುಕ್ತ ವ್ಯಾಪಾರ ಒಪ್ಪಂದ | ಪ್ಯಾಕ್ಸ್ ಸಿಲಿಕಾ ಉಪಕ್ರಮದಿಂದ ಭಾರತ ಹೊರಕ್ಕೆ | ಪ್ರೀಹ್ ವಿಹಾರ್ ದೇವಾಲಯ | ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (PMGKP)

    ‘ಶಾಂತಿ’ (SHANTI) ಮಸೂದೆ

    ಸಾಮಾನ್ಯ ಅಧ್ಯಯನ -3/ ಶಕ್ತಿ/ಇಂಧನ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸಚಿವ ಸಂಪುಟವು ‘ಶಾಂತಿ’ (SHANTI) ಎಂಬ ಶೀರ್ಷಿಕೆಯ ‘ಪರಮಾಣು ಶಕ್ತಿ ಮಸೂದೆ, 2025’ ಕ್ಕೆ ಅನುಮೋದನೆ ನೀಡಿದೆ.

    ಶಾಂತಿ (SHANTI) ಮಸೂದೆಯ ಬಗ್ಗೆ:

    • ಸಂಕ್ಷಿಪ್ತ ರೂಪ: “SHANTI”- ಸಸ್ಟೈನ್ಏಬಲ್ ಹಾರ್ನೆಸ್ಸಿಂಗ್ ಆಫ್ ಅಡ್ವಾನ್ಸಮೆಂಟ್ ಆಫ್ ನುಕ್ಲಿಯರ್ ಟೆಕ್ನಾಲಜಿ ಫಾರ್ ಇಂಡಿಯಾ (ಭಾರತಕ್ಕಾಗಿ ಪರಮಾಣು ತಂತ್ರಜ್ಞಾನದ ಪ್ರಗತಿಯನ್ನು ಸುಸ್ಥಿರವಾಗಿ ಬಳಸಿಕೊಳ್ಳುವುದು).
    • ಉದ್ದೇಶ: ಈ ಮಸೂದೆಯು ಭಾರತದ ಪರಮಾಣು ವಲಯಕ್ಕಾಗಿ ಏಕೀಕೃತ ಮತ್ತು ಆಧುನಿಕ ಕಾನೂನು ಚೌಕಟ್ಟನ್ನು ರೂಪಿಸಲು ಪ್ರಯತ್ನಿಸುತ್ತದೆ.

    ಭಾರತದ ಪರಮಾಣು ವಲಯದ ನಿರ್ವಹಣೆಯ ಬಗ್ಗೆ:

    • ಸಾಂಪ್ರದಾಯಿಕವಾಗಿ, ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳು ಸರ್ಕಾರಿ ಸ್ವಾಮ್ಯದ ‘ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತ’ ಮತ್ತು ಅದರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ಭಾರತೀಯ ನಾಭಿಕೀಯ ವಿದ್ಯುತ್ ನಿಗಮ’ (BHAVINI) ದ ಒಡೆತನದಲ್ಲಿವೆ ಮತ್ತು ಅವುಗಳಿಂದಲೇ ನಿರ್ವಹಿಸಲ್ಪಡುತ್ತಿವೆ.
    • ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡಲು ಕೇಂದ್ರ ಸರ್ಕಾರವು ಈ ಕೆಳಗಿನ ಪ್ರಮುಖ ಶಾಸನಗಳಿಗೆ ತಿದ್ದುಪಡಿ ತರಬೇಕಿದೆ:
    • ಅಣುಶಕ್ತಿ ಕಾಯ್ದೆ, 1962:- ಇದು ಪರಮಾಣು ಶಕ್ತಿಯ ಅಭಿವೃದ್ಧಿ ಮತ್ತು ನಿಯಂತ್ರಣದ ಚೌಕಟ್ಟಾಗಿದೆ.
    • ಪರಮಾಣುವಿನ ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010:- ಇದು ಪರಮಾಣು ಅವಘಡಗಳಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ.

    ಶಾಂತಿ (SHANTI) ಮಸೂದೆಯ ಪ್ರಮುಖ ನಿಬಂಧನೆಗಳು:

    • ಪರಮಾಣು ಮೌಲ್ಯ ಸರಪಳಿಯ ಭಾಗಶಃ ಮುಕ್ತಗೊಳಿಸುವಿಕೆ:- ಈ ಮಸೂದೆಯು ಖಾಸಗಿ ಮತ್ತು ಜಾಗತಿಕ ಕಂಪನಿಗಳಿಗೆ ಪರಮಾಣು ಖನಿಜಗಳ ಅನ್ವೇಷಣೆ, ಪರಮಾಣು ಉಪಕರಣ ಮತ್ತು ಬಿಡಿಭಾಗಗಳ ತಯಾರಿಕೆಯಲ್ಲಿ ಭಾಗವಹಿಸಲು ಅನುಮತಿಸುತ್ತದೆ.
    • ರಿಯಾಕ್ಟರ್‌ಗಳ (ಕುಲುಮೆಗಳ) ಕಾರ್ಯಾಚರಣೆ ಮತ್ತು ಶಸ್ತ್ರಾಸ್ತ್ರ-ಸಂಬಂಧಿತ ಚಟುವಟಿಕೆಗಳಂತಹ ಪ್ರಮುಖ ಮತ್ತು ಕಾರ್ಯತಂತ್ರದ ಕ್ಷೇತ್ರಗಳು ಸರ್ಕಾರದ ನಿಯಂತ್ರಣದಲ್ಲಿಯೇ ಮುಂದುವರಿಯಲಿವೆ.
    • ಪರಮಾಣು ಸುರಕ್ಷತೆ ಪ್ರಾಧಿಕಾರ:- ಈ ಶಾಸನವು ಸ್ವತಂತ್ರ ಪರಮಾಣು ಸುರಕ್ಷತೆ ಪ್ರಾಧಿಕಾರವನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತದೆ.
    • ವಿಶೇಷ ಪರಮಾಣು ನ್ಯಾಯಮಂಡಳಿ:- ಪರಮಾಣು ಸಂಬಂಧಿತ ವಿವಾದಗಳನ್ನು ನಿರ್ವಹಿಸಲು ಇದು ವಿಶೇಷ ನ್ಯಾಯಮಂಡಳಿಯ ಸ್ಥಾಪನೆಗೆ ಅವಕಾಶ ಒದಗಿಸುತ್ತದೆ. ವಿವಾದಗಳ ಇತ್ಯರ್ಥವನ್ನು ಸುಗಮಗೊಳಿಸುವುದು ಮತ್ತು ಈ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

    ಭಾರತ-ಓಮನ್ ಮುಕ್ತ ವ್ಯಾಪಾರ ಒಪ್ಪಂದ

    ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತ ಮತ್ತು ಓಮನ್ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

    ಭಾರತ ಮತ್ತು ಓಮನ್ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದದ (FTA) ಪ್ರಮುಖ ಅಂಶಗಳು:

    • ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ದೊಂದಿಗೆ, ಭಾರತವು ಓಮನ್‌ನಲ್ಲಿ ತನ್ನ 98% ರಷ್ಟು ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಮತ್ತು ಸೇವೆಗಳಲ್ಲಿಯೂ ಗಮನಾರ್ಹ ಪ್ರವೇಶವನ್ನು ಪಡೆಯಲಿದೆ.

    ಭಾರತ ಮತ್ತು ಓಮನ್ ನಡುವಿನ ಸಂಬಂಧಗಳು:

    • ರಾಜತಾಂತ್ರಿಕ ಸಂಬಂಧ:- ಭಾರತ-ಓಮನ್ ನಡುವೆ 1955 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಔಪಚಾರಿಕಗೊಳಿಸಲಾಯಿತು ಮತ್ತು 2008 ರಲ್ಲಿ ಇದನ್ನು ‘ಕಾರ್ಯತಂತ್ರದ ಪಾಲುದಾರಿಕೆ’ಗೆ ಮೇಲ್ದರ್ಜೆಗೇರಿಸಲಾಯಿತು.
    • ವ್ಯಾಪಾರ ಸಂಬಂಧ:- 2023-2024 ರ ಆರ್ಥಿಕ ವರ್ಷದಲ್ಲಿ 8.947 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಟ್ಟು ವ್ಯಾಪಾರದೊಂದಿಗೆ ಓಮನ್, ಭಾರತದ 30ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. 
    • ಓಮನ್‌ನ ಅಗ್ರ ವ್ಯಾಪಾರ ಪಾಲುದಾರರಲ್ಲಿ ಭಾರತವೂ ಒಂದಾಗಿದೆ ಮತ್ತು ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳ ಪೈಕಿ ಓಮನ್, ಭಾರತದ ಮೂರನೇ ಅತಿದೊಡ್ಡ ರಫ್ತು ತಾಣವಾಗಿದೆ.
    • ದಕ್ಷಿಣ ಕೊರಿಯಾದ ನಂತರ, 2023 ರ ಸಾಲಿನಲ್ಲಿ ಓಮನ್‌ನ ಕಚ್ಚಾ ತೈಲ ರಫ್ತಿಗೆ ಭಾರತವು 4ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.
    • ರಕ್ಷಣಾ ಸಹಕಾರ: ಭಾರತ ಮತ್ತು ಓಮನ್ ಮೂರೂ ಪಡೆಗಳ (ಭೂಸೇನೆ, ವಾಯುಸೇನೆ, ನೌಕಾಪಡೆ) ನಡುವೆ ನಿಯಮಿತವಾಗಿ ದ್ವೈವಾರ್ಷಿಕ ದ್ವಿಪಕ್ಷೀಯ ಸಮರಾಭ್ಯಾಸಗಳು ನಡೆಯುತ್ತವೆ. ಅವುಗಳೆಂದರೆ:
      • ಭೂಸೇನೆ ಸಮರಾಭ್ಯಾಸ: ಅಲ್ ನಜಾಹ್ 
      • ವಾಯುಪಡೆ ಸಮರಾಭ್ಯಾಸ: ಈಸ್ಟರ್ನ್ ಬ್ರಿಡ್ಜ್ 
      • ನೌಕಾಸೇನೆ ಸಮರಾಭ್ಯಾಸ: ನಸೀಮ್ ಅಲ್ ಬಹ್ರ್
    • ಕಡಲ ಸಹಕಾರ: ಓಮನ್ ದೇಶವು ಹೋರ್ಮುಜ್ ಜಲಸಂಧಿಯ ಪ್ರವೇಶದ್ವಾರದಲ್ಲಿ ನೆಲೆಸಿದೆ; ಈ ಮಾರ್ಗದ ಮೂಲಕವೇ ಭಾರತವು ತನ್ನ ಒಟ್ಟು ತೈಲ ಆಮದಿನ ಐದನೇ ಒಂದು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.
    • ಓಮನ್‌ ದೇಶದ ಡುಕ್ಮ್  ಬಂದರನ್ನು ಪ್ರವೇಶಿಸಲು (ಬಳಸಿಕೊಳ್ಳಲು) ಭಾರತವು 2018 ರಲ್ಲಿ ಈ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.
    • ಡುಕ್ಮ್ ಬಂದರು ಓಮನ್‌ ದೇಶದ ಆಗ್ನೇಯ ಕರಾವಳಿಯಲ್ಲಿದ್ದು, ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಚಾಚಿಕೊಂಡಿದೆ. ಇದು ಕಾರ್ಯತಂತ್ರದ ಸ್ಥಳದಲ್ಲಿದ್ದು, ಇರಾನ್‌ನ ಚಬಹಾರ್ ಬಂದರಿಗೆ ಸಮೀಪದಲ್ಲಿದೆ.

    ಗಲ್ಫ್ ಸಹಕಾರ ಮಂಡಳಿ (GCC) ಯ ಬಗ್ಗೆ:

    • ಗಲ್ಫ್ ಸಹಕಾರ ಮಂಡಳಿಯು ಅರೇಬಿಯಾದ ಪರ್ಯಾಯ ದ್ವೀಪದ ಆರು ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.
    • ಸದಸ್ಯ ರಾಷ್ಟ್ರಗಳು: ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE).
    • ಸ್ಥಾಪನೆ: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸಹಿ ಹಾಕಲಾದ ಒಪ್ಪಂದದ ಮೂಲಕ ಮೇ 25, 1981 ರಂದು ಸ್ಥಾಪಿಸಲಾಯಿತು.
    • ಉದ್ದೇಶಗಳು: ಆರ್ಥಿಕ, ಭದ್ರತೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಏಕತೆ ಮತ್ತು ಸಮನ್ವಯವನ್ನು ಸಾಧಿಸುವುದು.
    • ಪ್ರಧಾನ ಕಚೇರಿ: ರಿಯಾದ್ (ಸೌದಿ ಅರೇಬಿಯಾ)

    ಪ್ಯಾಕ್ಸ್ ಸಿಲಿಕಾ ಉಪಕ್ರಮದಿಂದ ಭಾರತ ಹೊರಕ್ಕೆ

    ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಅಮೇರಿಕಾ ನೇತೃತ್ವದ ಹೊಸ ನಿರ್ಣಾಯಕ ಖನಿಜ ವೈವಿಧ್ಯೀಕರಣ ಯೋಜನೆಯಾದ ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮದಿಂದ ಭಾರತವನ್ನು ಹೊರಗಿಡಲಾಗಿದೆ.

    ಪ್ಯಾಕ್ಸ್ ಸಿಲಿಕಾ ಉಪಕ್ರಮದ ಬಗ್ಗೆ:

    • ಉದ್ದೇಶ:- ಈ ಅಮೇರಿಕಾ ನೇತೃತ್ವದ ಕಾರ್ಯತಂತ್ರದ ಉಪಕ್ರಮವು ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ-ಚಾಲಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ನಿರ್ಮಿಸುವುದು ಉದ್ದೇಶವಾಗಿದೆ.
    • ಸದಸ್ಯರು:- ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ (ದಕ್ಷಿಣ ಕೊರಿಯಾ), ಸಿಂಗಾಪುರ, ನೆದರ್ಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾ.

    ನಿರ್ಣಾಯಕ ಖನಿಜಗಳ ಬಗ್ಗೆ:

    • ವ್ಯಾಖ್ಯಾನ:- ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯವಾದ ಖನಿಜಗಳನ್ನು ‘ನಿರ್ಣಾಯಕ ಖನಿಜಗಳು’ ಎಂದು ಕರೆಯಲಾಗುತ್ತದೆ.
    • ಸರ್ಕಾರವು ಭಾರತಕ್ಕಾಗಿ 30 ನಿರ್ಣಾಯಕ ಖನಿಜಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
    • 30 ನಿರ್ಣಾಯಕ ಖನಿಜಗಳು: ಆಂಟಿಮನಿ, ಬೆರಿಲಿಯಮ್, ಬಿಸ್ಮತ್, ಕೋಬಾಲ್ಟ್, ತಾಮ್ರ, ಗ್ಯಾಲಿಯಮ್, ಜರ್ಮೇನಿಯಮ್, ಗ್ರಾಫೈಟ್, ಹ್ಯಾಫ್ನಿಯಮ್, ಇಂಡಿಯಮ್, ಲಿಥಿಯಮ್, ಮಾಲಿಬ್ಡಿನಮ್, ನಿಯೋಬಿಯಮ್, ನಿಕಲ್, ಪಿಜಿಇ, ರಂಜಕ, ಪೊಟ್ಯಾಶ್, ಆರ್‌ಇಇ (REE – ವಿರಳ ಭೂ ಧಾತುಗಳು), ರೇನಿಯಮ್, ಸಿಲಿಕಾನ್, ಸ್ಟ್ರಾಂಷಿಯಮ್, ಟ್ಯಾಂಟಲಮ್, ಟೆಲೂರಿಯಮ್, ತವರ, ಟೈಟಾನಿಯಮ್, ಟಂಗ್‌ಸ್ಟನ್, ವೆನಾಡಿಯಮ್, ಜಿರ್ಕೋನಿಯಮ್, ಸೆಲೆನಿಯಮ್ ಮತ್ತು ಕ್ಯಾಡ್ಮಿಯಮ್.
    • “ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957” (MMDR Act, 1957) ದೇಶದ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳನ್ನು ಗುರುತಿಸಿದೆ.

    ಪ್ರೀಹ್ ವಿಹಾರ್ ದೇವಾಲಯ

    ಸಾಮಾನ್ಯ ಅಧ್ಯಯನ-1/ ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಪ್ರೀಹ್ ವಿಹಾರ್ ದೇವಾಲಯ ಸಂಕೀರ್ಣದಲ್ಲಿನ ಸಂರಕ್ಷಣಾ ಸೌಲಭ್ಯಗಳಿಗೆ ಹಾನಿಯಾಗಿರುವ ವರದಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

    ಪ್ರೀಹ್ ವಿಹಾರ್ ದೇವಾಲಯದ ಬಗ್ಗೆ:

    • ಸ್ಥಳ: ಇದು ಥೈಲ್ಯಾಂಡ್ ಗಡಿಯ ಸಮೀಪವಿರುವ ಕಾಂಬೋಡಿಯಾದಲ್ಲಿ ನೆಲೆಗೊಂಡಿರುವ, ಶಿವನಿಗೆ ಸಮರ್ಪಿತವಾದ ಪುರಾತನ ಹಿಂದೂ ದೇವಾಲಯವಾಗಿದೆ.
    • ಇದನ್ನು ಮುಖ್ಯವಾಗಿ ಖಮೇರ್ ರಾಜರಾದ ಒಂದನೇ ಸೂರ್ಯವರ್ಮನ್ ಮತ್ತು ಎರಡನೇ ಸೂರ್ಯವರ್ಮನ್ ಅವರ ಆಳ್ವಿಕೆಯಲ್ಲಿ (ಕ್ರಿ.ಶ. 9 ರಿಂದ 12 ನೇ ಶತಮಾನ) ನಿರ್ಮಿಸಲಾಯಿತು.
    • ಇದನ್ನು 2008 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (PMGKP)

    ಸಾಮಾನ್ಯ ಅಧ್ಯಯನ-2/ ಕಲ್ಯಾಣ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ಕೋವಿಡ್‌ ಮಹಾಮಾರಿಯಿಂದ ಮೃತಪಟ್ಟ ಎಲ್ಲಾ ವೈದ್ಯರಿಗೆ ₹50 ಲಕ್ಷದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್’ ವಿಮೆಯನ್ನು ವಿಸ್ತರಿಸಲು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನ ಬಗ್ಗೆ:

    • PMGKP ವಿಮಾ ಯೋಜನೆಯು ಮಾರ್ಚ್ 2020 ರಲ್ಲಿ ಪ್ರಾರಂಭಿಸಲಾದ ಬೃಹತ್ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್‌’ನ ಅಡಿಯಲ್ಲಿನ ಒಂದು ನಿರ್ದಿಷ್ಟ ಘಟಕವಾಗಿದೆ.
    • ವ್ಯಾಪ್ತಿ:– ಅರ್ಹ ಆರೋಗ್ಯ ಕಾರ್ಯಕರ್ತರಿಗೆ ತಲಾ ₹50 ಲಕ್ಷದ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಇದು ಒದಗಿಸುತ್ತದೆ.
    • ಒಳಗೊಂಡಿರುವ ಅಪಾಯ:- ಕೋವಿಡ್-19 ಸೋಂಕಿನಿಂದ ಸಂಭವಿಸಿದ ಸಾವುಗಳು.
  • ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)

    ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯದಲ್ಲಿ ಸಾವು-ನೋವು, ಆರ್ಥಿಕ ನಷ್ಟ ಮತ್ತು ಸಾವುಗಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದೊಂದಿಗೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು “ವಿಪತ್ತು-ಪ್ರತಿರೋಧಕ (ಸ್ಥಿತಿಸ್ಥಾಪಕ) ಕರ್ನಾಟಕ” ನಿರ್ಮಾಣಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

    ಕರ್ನಾಟಕ ರಾಜ್ಯ ವಿಪತ್ತು ಅಪಾಯ ಕುಗ್ಗಿಸುವ (KSDRR) ಯೋಜನಾ ರೂಪರೇಖೆ, 2025-30:

    • ಈ ವರದಿಯ ಪ್ರಕಾರ, ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದ 80% ರಷ್ಟು ಭೂ ಪ್ರದೇಶವು ಬರಪೀಡಿತದ ಅಪಾಯಕ್ಕೆ ಒಳಪಡುವ ಸಾಧ್ಯತೆಗಳಿವೆ. 
    • ರಾಜ್ಯದ 22% ರಷ್ಟು ಭೂ ಪ್ರದೇಶವು ಮಧ್ಯಮ ತೀವ್ರತೆಯ ಭೂಕಂಪಗಳಿಗೆ ಮತ್ತು 24% ರಷ್ಟು ಭೂ ಪ್ರದೇಶವು ಚಂಡಮಾರುತ ಹಾಗೂ ತೀವ್ರ ಗಾಳಿಯಂತಹ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ಸಾಧ್ಯತೆಗಳಿವೆ.
    • ಅಪಾಯದ ಮೌಲ್ಯಮಾಪನ ಮತ್ತು ವಿಪತ್ತು ಪರಿಹಾರ ಕ್ರಮಗಳ ಭಾಗವಾಗಿ ರಸ್ತೆ ಹಾಗೂ ಕೈಗಾರಿಕಾ ಅಪಘಾತಗಳಂತಹ ಮಾನವ ಪ್ರೇರಿತ ವಿಪತ್ತುಗಳನ್ನು ಸಹ ಪರಿಗಣಿಸಲಾಗಿದೆ.

    ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)ದ ಬಗ್ಗೆ:

    • ರಾಜ್ಯದ ಅತ್ಯುನ್ನತ ಸಂಸ್ಥೆ:- ಇದು ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಅತ್ಯುನ್ನತ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
    • ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಯಕತ್ವ: ಈ ಪ್ರಾಧಿಕಾರವು ಕರ್ನಾಟಕದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಸುಗಮಗೊಳಿಸುವಿಕೆ ಮತ್ತು ಮೇಲ್ವಿಚಾರಣೆ:- ಇದು ರಾಜ್ಯದ ಸಾಮರ್ಥ್ಯ ವರ್ಧನೆ ಸೇರಿದಂತೆ ವಿಪತ್ತು ಸಂಬಂಧಿತ ಎಲ್ಲಾ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ, ಸಮನ್ವಯಗೊಳಿಸುತ್ತದೆ, ಪರಿಶೀಲಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.
    • ರಾಜ್ಯ ವಿಪತ್ತು ನಿರ್ವಹಣಾ ನೀತಿ ಮತ್ತು ಮಾರ್ಗಸೂಚಿಗಳ ನಿರೂಪಣೆ:- ವಿವಿಧ ಸರ್ಕಾರಿ ಇಲಾಖೆಗಳು ಅನುಸರಿಸಬೇಕಾದ ರಾಜ್ಯ ವಿಪತ್ತು ನಿರ್ವಹಣಾ ನೀತಿ ಮತ್ತು ಮಾರ್ಗಸೂಚಿಗಳನ್ನು ಇದು ರೂಪಿಸುತ್ತದೆ.
    • ರಾಜ್ಯ ವಿಪತ್ತು ನಿರ್ವಹಣಾ ಯೋಜನೆಗಳ ಅನುಮೋದನೆ: ಇದು ರಾಜ್ಯ ವಿಪತ್ತು ನಿರ್ವಹಣಾ ಯೋಜನೆ ಮತ್ತು ಇಲಾಖಾವಾರು ಯೋಜನೆಗಳನ್ನು ಅನುಮೋದಿಸುವುದಲ್ಲದೆ, ಅವುಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಮಾರ್ಗಸೂಚಿಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ.
  • ಸರ್ದಾರ್ ವಲ್ಲಭಭಾಯಿ ಪಟೇಲ್ | ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ ನೃತ್ಯ | “ಗೊನೋರ್ರಿಹಾ” (Gonorrhea) ಚಿಕಿತ್ಸೆ | ಪೊಂಡೂರು ಖಾದಿ | ಮಹಾಕ್ರೈಮ್‌ಒಎಸ್ ಎಐ (MahaCrimeOS AI) | ಲೂನಾರ್‌ ಕ್ರೀಟ್ (Lunarcrete)

    ಸರ್ದಾರ್ ವಲ್ಲಭಭಾಯಿ ಪಟೇಲ್

    ಸಾಮಾನ್ಯ ಅಧ್ಯಯನ -1/ಸುದ್ದಿಯಲ್ಲಿರುವ ವ್ಯಕ್ತಿಗಳು

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 75ನೇ ಪುಣ್ಯತಿಥಿಯಂದು (15 ಡಿಸೆಂಬರ್ 1950), ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅವರಿಗೆ ಗೌರವ ನಮನ ಸಲ್ಲಿಸಿದರು.

    ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ:

    • ಜನನ:- ಅಕ್ಟೋಬರ್ 31, 1875 
    • ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು. 
    • ಅವರನ್ನು ಭಾರತದ “ರಾಷ್ಟ್ರೀಯ ಏಕೀಕರಣದ ಶಿಲ್ಪಿ” ಮತ್ತು “ಆಧುನಿಕ ಭಾರತದ ನಾಗರಿಕ ಸೇವೆಗಳ ಪಿತಾಮಹ” ಅಥವಾ “ಅಖಿಲ ಭಾರತ ಸೇವೆಗಳ ಪಿತಾಮಹ” ಎಂದು ವ್ಯಾಪಕವಾಗಿ ಪ್ರಸಿದ್ಧರಾಗಿದ್ದಾರೆ.
    • ಅವರಿಗೆ 1991 ರಲ್ಲಿ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ಭಾರತ ರತ್ನ”ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.

    ಭಾರತದ ಸ್ವಾತಂತ್ರ‍್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು:

    • ಖೇಡಾ ಸತ್ಯಾಗ್ರಹ, 1917:– ಗುಜರಾತ್‌ನ ಖೇಡಾ ಜಿಲ್ಲೆಯ ಪ್ರಮುಖ ಸ್ಥಳೀಯ ನಾಯಕರಾಗಿ, ಬ್ರಿಟಿಷರು ವಿಧಿಸಿದ ಅನ್ಯಾಯದ ಭೂ ಕಂದಾಯ ತೆರಿಗೆಗಳ ವಿರುದ್ಧ ಸತ್ಯಾಗ್ರಹವನ್ನು ಸಂಘಟಿಸುವಲ್ಲಿ ಪಟೇಲ್ ಅವರು ಮಹಾತ್ಮ ಗಾಂಧಿಯವರನ್ನು ಬೆಂಬಲಿಸಿದರು.
    • ಅಸಹಕಾರ ಚಳವಳಿ, 1920-22:– ಪಟೇಲ್ ಅವರು ಅಸಹಕಾರ ಚಳವಳಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದರು; ಸುಮಾರು 300,000 ಸದಸ್ಯರನ್ನು ಸೇರ್ಪಡೆಗೊಳಿಸಿದರು ಮತ್ತು ಸುಮಾರು 15 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು.
    • ಬಾರ್ಡೋಲಿ ಸತ್ಯಾಗ್ರಹ, 1928: ಪಟೇಲರು ಬಾರ್ಡೋಲಿ ಸತ್ಯಾಗ್ರಹದ ಸಮಯದಲ್ಲಿ, ಕ್ಷಾಮ ಮತ್ತು ಹೆಚ್ಚಿದ ಭೂ ಕಂದಾಯದಿಂದ ಬಳಲುತ್ತಿದ್ದ ಸ್ಥಳೀಯ ಜನಸಮುದಾಯವನ್ನು ಬೆಂಬಲಿಸಿದರು.
    • ಕಾನೂನು ಭಂಗ ಚಳವಳಿ 1930-34: ಬ್ರಿಟಿಷರ ಉಪ್ಪಿನ ಏಕಸ್ವಾಮ್ಯದ ವಿರುದ್ಧದ ಅಹಿಂಸಾತ್ಮಕ ಪ್ರತಿಭಟನೆಯಾದ “ಉಪ್ಪಿನ ಸತ್ಯಾಗ್ರಹದಲ್ಲಿ” ಅವರು ಸಕ್ರಿಯವಾಗಿ ಭಾಗವಹಿಸಿದರು.
    • ಭಾರತ ಬಿಟ್ಟು ತೊಲಗಿ ಚಳವಳಿ, 1942: ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಸಂಘಟಿಸಿದರು. ಭಾರತದಾದ್ಯಂತ ಅತ್ಯಂತ ಪ್ರಭಾವಶಾಲಿ ಮತ್ತು ರೋಮಾಂಚಕ ಭಾಷಣಗಳನ್ನು ಮಾಡುವ ಮೂಲಕ, ಸಾಮೂಹಿಕ ಪ್ರತಿಭಟನೆಗಳಿಗೆ ಸೇರಲು, ಕಾನೂನು ಭಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ತೆರಿಗೆ ಪಾವತಿಗಳನ್ನು ಬಹಿಷ್ಕರಿಸಲು ಮತ್ತು ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲು ಜನರನ್ನು ಪ್ರೇರೇಪಿಸಿದರು ಹಾಗೂ ಸಂಘಟಿಸಿದರು.

    ನಿಮಗಿದು ತಿಳಿದಿದೆಯೇ?

    • 2014 ರಿಂದ, ಸರ್ದಾರ್ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಐಕ್ಯತೆ ದಿನ’ (ನ್ಯಾಷನಲ್ ಯುನಿಟಿ ಡೇ) ವನ್ನು ಆಚರಿಸಲಾಗುತ್ತದೆ.
    • ವಿಶ್ವದ ಅತಿ ಎತ್ತರದ ಪ್ರತಿಮೆಯಾದ “ಐಕ್ಯತೆ ಪ್ರತಿಮೆ” (ಸ್ಟ್ಯಾಚ್ಯೂ ಆಫ್ ಯೂನಿಟಿ) ಯನ್ನು ಗುಜರಾತ್‌ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 143 ನೇ ಜನ್ಮದಿನ ಅಕ್ಟೋಬರ್ 31, 2018 ರಂದು ಅನಾವರಣಗೊಳಿಸಲಾಯಿತು.
    • ಸ್ವತಂತ್ರ ಭಾರತದ ನಾಗರಿಕ ಸೇವಾ ಅಧಿಕಾರಿಗಳ ಮೊದಲ ತಂಡವನ್ನು ಉದ್ದೇಶಿಸಿ 1947 ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಾಡಿದ ಭಾಷಣದ ನೆನಪಿಗಾಗಿ ಏಪ್ರಿಲ್ 21 ರಂದು ‘ನಾಗರಿಕ ಸೇವಾ ದಿನ’ವನ್ನು ಆಚರಿಸಲಾಗುತ್ತದೆ.

    ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ ನೃತ್ಯ

    ಸಾಮಾನ್ಯ ಅಧ್ಯಯನ-1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಛತ್ತೀಸ್‌ಗಢದ ಬಸ್ತಾರ್‌ ಪ್ರದೇಶದ ಜುಡಿಯಾ ಪಾರಾ ಗ್ರಾಮದಲ್ಲಿ ನಡೆದ ಜಾತ್ರೆಯ ಸಂದರ್ಭದಲ್ಲಿ ಸಾಂಪ್ರದಾಯಿಕ “ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ’ ನೃತ್ಯವನ್ನು ಮರಿಯಾ (ಗೋಂಡ್) ಜನಾಂಗದವರು ಪ್ರದರ್ಶಿಸಿದರು.

    “ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ” ನೃತ್ಯದ ಬಗ್ಗೆ:

    • ನೃತ್ಯ ಪ್ರದರ್ಶಿಸುವವರು:- ಛತ್ತೀಸ್‌ಗಢದ ಬಸ್ತಾರ್‌ನ ದಂಡಮಿ ಮಾಡಿಯಾ (ಮರಿಯಾ/ಗೌರ್ ಮರಿಯಾ) ಬುಡಕಟ್ಟು ಜನಾಂಗ.
    • ಮುಖ್ಯ ಲಕ್ಷಣಗಳು:-
    • ಗ್ರಾಮೀಣ ಜಾತ್ರೆ ಮತ್ತು ಪ್ರಮುಖ ಸಾಮುದಾಯಿಕ ಸಂದರ್ಭಗಳಲ್ಲಿ ಪುರುಷರು ಮತ್ತು ಮಹಿಳೆಯರಿಬ್ಬರೂ ಈ ನೃತ್ಯವನ್ನು ಪ್ರದರ್ಶಿಸುತ್ತಾರೆ.
    • ವಸ್ತ್ರವಿನ್ಯಾಸ:- ಪುರುಷ ನೃತ್ಯಗಾರರು ಬಿದಿರಿನಿಂದ ನಿರ್ಮಿಸಿದ ಕಾಡೆಮ್ಮೆಯ ಕೊಂಬುಗಳು, ಗರಿಗಳು, ಕವಡೆಗಳು ಮತ್ತು ವರ್ಣರಂಜಿತ ವಸ್ತ್ರದ ಪಟ್ಟಿಗಳಿಂದ ಅಲಂಕೃತಗೊಂಡ ಕಾಡೆಮ್ಮೆಯ ಕೊಂಬಿನ ಆಕಾರದ ಶಿರಸ್ತ್ರಾಣವನ್ನು ಧರಿಸುತ್ತಾರೆ.
    • ಮಹಿಳೆಯರು ಹಿತ್ತಾಳೆಯ ಶಿರೋಭೂಷಣಗಳನ್ನು ಮತ್ತು ಭಾರವಾದ ಕಂಠಿಹಾರಗಳನ್ನು ಧರಿಸುತ್ತಾರೆ.
    • ವಾದ್ಯಗಳು:- ಕತ್ತಿಗೆಗೆ ತೂಗುಹಾಕಿಕೊಂಡ ಮರದ ಡೋಲುಗಳು ಲಯಬದ್ಧವಾದ ತಾಳವನ್ನು ಒದಗಿಸುತ್ತವೆ.
    • ಪ್ರದರ್ಶನ:- ಪುರುಷರು ಕಾಡೆಮ್ಮೆಯ ಆಕ್ರಮಣ ಮತ್ತು ಬೇಟೆಯಾಡುವಿಕೆಯನ್ನು ಅನುಕರಿಸಿದರೆ, ಮಹಿಳೆಯರು ಕೋಲುಗಳನ್ನು ಹಿಡಿದು, ಅವರೊಂದಿಗೆ ಸಮನ್ವಯ ಮತ್ತು ಆಚರಣಾತ್ಮಕ ರೀತಿಯಲ್ಲಿ ನೃತ್ಯ ಮಾಡುತ್ತಾರೆ.
    • ಈ ನೃತ್ಯವು ಪ್ರಕೃತಿ, ಬೇಟೆ ಮತ್ತು ಸಮುದಾಯ ಜೀವನವನ್ನು ಪ್ರತಿಬಿಂಬಿಸುತ್ತದೆ.
    • ವಿಧಿವಿಧಾನದ ಮಂತ್ರಗಳು ‘ಬುಧದೇವ್’ ಮತ್ತು ‘ದಂತೇಶ್ವರಿ ಮಾಯಿ’ಯಂತಹ ದೇವತೆಗಳನ್ನು ಸ್ತುತಿಸುತ್ತವೆ; ಇದು ಅವರ ಆಧ್ಯಾತ್ಮಿಕ ಪರಂಪರೆಯ ನಿರಂತರತೆಯನ್ನು ಬಲಪಡಿಸುತ್ತದೆ.

    “ಗೊನೋರ್ರಿಹಾ” (Gonorrhea) ಚಿಕಿತ್ಸೆ

    ಸಾಮಾನ್ಯ ಅಧ್ಯಯನ- 2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (FDA) ಗೊನೋರ್ರಿಹಾ ಚಿಕಿತ್ಸೆಗಾಗಿ, ಬಾಯಿಯ ಮೂಲಕ ಸೇವಿಸುವ ಎರಡು ಹೊಸ ಔಷಧಗಳಿಗೆ ಅನುಮೋದನೆ ನೀಡಿದೆ.

    “ಗೊನೋರ್ರಿಹಾ” ಸೋಂಕಿನ ಬಗ್ಗೆ:

    • ರೋಗಕಾರಕ:– ಇದು “ನೆಯಿಸ್ಸೇರಿಯಾ ಗೊನೋರ್ರಿಹಾ” ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ, ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಲೈಂಗಿಕವಾಗಿ ಹರಡುವ ಸೋಂಕಾಗಿದೆ.
    • ಕಳವಳ:- ಗೊನೋರ್ರಿಹಾ ವಿರುದ್ಧ ಆಂಟಿಮೈಕ್ರೊಬಿಯಲ್ ಪ್ರತಿರೋಧವು (ಔಷಧ ನಿರೋಧಕ ಶಕ್ತಿ) ಗಂಭೀರ ಮತ್ತು ಹೆಚ್ಚುತ್ತಿರುವ ಸಮಸ್ಯೆಯಾಗಿದೆ.
    • ಹರಡುವಿಕೆ:- ಗರ್ಭಿಣಿ ತಾಯಿಯಿಂದ ತನ್ನ ಮಗುವಿಗೆ ಗೊನೋರ್ರಿಹಾ ಹರಡುವ ಸಾಧ್ಯತೆ ಇರುತ್ತದೆ.
    • ರೋಗ ನಿರ್ಣಯ:- ಆಣ್ವಿಕ ಪರೀಕ್ಷೆಗಳು, ಗ್ರಾಮ್ ಸ್ಟೇನ್ ಮೈಕ್ರೋಸ್ಕೋಪಿ.

    ಪೊಂಡೂರು ಖಾದಿ

    ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ‘ಪೊಂಡೂರು ಖಾದಿ’ಗೆ ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಮಾನ್ಯತೆ ಲಭಿಸಿದೆ.

    “ಪೊಂಡೂರು ಖಾದಿ”ಯ ಬಗ್ಗೆ:

    • ‘ಪೊಂಡೂರು ಖಾದಿ’ಯು ಸ್ಥಳೀಯವಾಗಿ ಬೆಳೆಯುವ ಗಿಡ್ಡ ಎಳೆಯ, ಬೆಟ್ಟದ ತಳಿಯ, ಕೀಟ ನಿರೋಧಕ ಹತ್ತಿಯಿಂದ ಪ್ರಾಥಮಿಕವಾಗಿ ಉತ್ಪಾದಿಸಲಾದ ಕೈಮಗ್ಗದ ಬಟ್ಟೆಯಾಗಿದೆ.
    • ಈ ಹತ್ತಿಯು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳಿಗೆ ಅನುವು ಮಾಡಿಕೊಡುತ್ತದೆ; ಆ ಮೂಲಕ ಈ ಪ್ರದೇಶಕ್ಕೆ ಸಾಂಪ್ರದಾಯಿಕವಾದ ಸುಸ್ಥಿರ ಕೃಷಿ ಮತ್ತು ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳನ್ನು ಉತ್ತೇಜಿಸುತ್ತದೆ.

    ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಮಾನ್ಯತೆಯ ಬಗ್ಗೆ:

    • ಜಿಐ ಟ್ಯಾಗ್ ಮಾನ್ಯತೆಯು ನಿರ್ದಿಷ್ಟ ಭೌಗೋಳಿಕ ಸ್ಥಳ ಅಥವಾ ಮೂಲಗಳಿಗೆ (ಒಂದು ಪ್ರದೇಶ, ಪಟ್ಟಣ ಅಥವಾ ದೇಶ) ಸಂಬಂಧಿಸಿದ ಕೆಲವು ಉತ್ಪನ್ನಗಳಿಗೆ ನೀಡಲಾಗುವ ಹೆಸರು ಅಥವಾ ಚಿಹ್ನೆಯಾಗಿದೆ.
    • ವಿಶಿಷ್ಟ ಉತ್ಪನ್ನಗಳಿಗೆ ಒಂದು ಪ್ರಮಾಣೀಕರಣ:- ಜಿಐ ಟ್ಯಾಗ್ ಅನ್ನು, ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ಅಥವಾ ತನ್ನ ಭೌಗೋಳಿಕ ಮೂಲದ ಕಾರಣದಿಂದಾಗಿಯೇ ನಿರ್ದಿಷ್ಟ ಖ್ಯಾತಿಯನ್ನು ಹೊಂದಿರುವ ಉತ್ಪನ್ನಕ್ಕೆ ನೀಡುವ ಪ್ರಮಾಣೀಕರಣವೆಂದು ಪರಿಗಣಿಸಬಹುದು.
    • ಮದ್ಯ (ವೈನ್) ಮತ್ತು ಮದ್ಯಪಾನೀಯಗಳು, ಆಹಾರ ಪದಾರ್ಥ, ಕೃಷಿ ಉತ್ಪನ್ನ, ಕರಕುಶಲ ವಸ್ತು ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಜಿಐ ಟ್ಯಾಗ್‌ಗಳನ್ನು ನೀಡಬಹುದು.
    • ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳ (TRIPS):– ಅಂತರರಾಷ್ಟ್ರೀಯ ಮಟ್ಟದಲ್ಲಿ, ಜಿಐ ಟ್ಯಾಗ್ ಅನ್ನು ವಿಶ್ವ ವಾಣಿಜ್ಯ ಸಂಸ್ಥೆಯ (WTO) “ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳ” (TRIPS) ಒಪ್ಪಂದದ ಮೂಲಕ ನಿಯಂತ್ರಿಸಲಾಗುತ್ತದೆ.
    • ಸರಕುಗಳ ಭೌಗೋಳಿಕ ಸೂಚ್ಯಂಕಗಳ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999:- ಭಾರತದಲ್ಲಿ, ಸೆಪ್ಟೆಂಬರ್ 2003 ರಲ್ಲಿ ಜಾರಿಗೆ ಬಂದ ‘ಸರಕುಗಳ ಭೌಗೋಳಿಕ ಸೂಚ್ಯಂಕಗಳ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999’ ರ ಅಡಿಯಲ್ಲಿ ಭೌಗೋಳಿಕ ಸೂಚ್ಯಂಕಗಳ ನೋಂದಣಿಯನ್ನು ನಿರ್ವಹಿಸಲಾಗುತ್ತದೆ.
    • ಡಾರ್ಜಿಲಿಂಗ್ ಚಹಾ:- ಇದು 2004-05 ರಲ್ಲಿ ಜಿಐ ಟ್ಯಾಗ್ ಪಡೆದ ಭಾರತದ ಮೊದಲ ಉತ್ಪನ್ನವಾಗಿದೆ.

    ಮಹಾಕ್ರೈಮ್‌ಒಎಸ್ ಎಐ (MahaCrimeOS AI)

    ಸಾಮಾನ್ಯ ಅಧ್ಯಯನ -2/ಆಡಳಿತ; ಸಾಮಾನ್ಯ ಅಧ್ಯಯನ-3/ಕೃತಕ ಬುದ್ಧಿಮತ್ತೆ

    ಇದೀಗ ಸುದ್ದಿಯಲ್ಲಿದೆ:

    • ಮೈಕ್ರೋಸಾಫ್ಟ್ ಅಧ್ಯಕ್ಷ ಸತ್ಯ ನಾದೆಲ್ಲಾ ಅವರು, ಮಹಾರಾಷ್ಟ್ರದ ಪೊಲೀಸರಿಗಾಗಿ ಅಭಿವೃದ್ಧಿಪಡಿಸಲಾದ ಎಐ-ಚಾಲಿತ ತನಿಖಾ ವೇದಿಕೆಯಾದ ‘ಮಹಾಕ್ರೈಮ್‌ಒಎಸ್ ಎಐ’ ಅನ್ನು ಜಾರಿಗೊಳಿಸುವುದಾಗಿ ಘೋಷಿಸಿದರು.

    “ಮಹಾಕ್ರೈಮ್‌ ಒಎಸ್ ಎಐ” ನ ಬಗ್ಗೆ:

    • ಜಂಟಿ ಅಭಿವೃದ್ಧಿ:- ಮೈಕ್ರೋಸಾಫ್ಟ್ ಮತ್ತು ಮಹಾರಾಷ್ಟ್ರ ಸರ್ಕಾರ ಹಾಗೂ ಅದರ ವಿಶೇಷ ‘ಎಐ ಪೊಲೀಸಿಂಗ್’  ಉಪಕ್ರಮವಾದ ‘ಮಾರ್ವೆಲ್’ (MARVEL – ವರ್ಧಿತ ಕಾನೂನು ಜಾರಿಗಾಗಿ ಮಹಾರಾಷ್ಟ್ರ ಸಂಶೋಧನೆ ಮತ್ತು ಕಣ್ಗಾವಲು ವ್ಯವಸ್ಥೆ) ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ.

    ಪ್ರಮುಖ ವೈಶಿಷ್ಟ್ಯಗಳು ಮತ್ತು ಕಾರ್ಯನಿರ್ವಹಣೆ:

    • ತ್ವರಿತವಾಗಿ ಡಿಜಿಟಲ್ ಪ್ರಕರಣ ದಾಖಲಾತಿ/ರಚಿಸಲು:- ಈ ವ್ಯವಸ್ಥೆಯು ತ್ವರಿತವಾಗಿ ‘ಡಿಜಿಟಲ್ ಪ್ರಕರಣದ ಕಡತಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ; ತನ್ಮೂಲಕ ಮಾನವ ಶ್ರಮವನ್ನು ಕಡಿಮೆ ಮಾಡುತ್ತದೆ.
    • ಬಹು-ಮಾದರಿ ದತ್ತಾಂಶ ಸಂಗ್ರಹಣೆ/ಹೊರತೆಗೆದುಕೊಳ್ಳುವಿಕೆ:– ಇದು ಪಿಡಿಎಫ್‌ಗಳು, ಧ್ವನಿಯ ಕಡತಗಳು, ಕೈಬರಹದ ಟಿಪ್ಪಣಿಗಳು ಅಥವಾ ಚಿತ್ರಗಳಂತಹ ವಿವಿಧ ಸ್ವರೂಪಗಳಲ್ಲಿನ ದೂರುಗಳನ್ನು ಸ್ವೀಕರಿಸಬಲ್ಲದು ಮತ್ತು ವಿಶ್ಲೇಷಣೆಗಾಗಿ ಸಂಬಂಧಿತ ದತ್ತಾಂಶವನ್ನು ಹೊರತೆಗೆಯಬಲ್ಲದು.
    • ಕೃತಕ ಬುದ್ಧಿಮತ್ತೆ (AI)-ಚಾಲಿತ ತನಿಖೆ:- ಎಐ-ಆಧಾರಿತ ‘ರಿಟ್ರೀವಲ್-ಆಗ್ಮೆಂಟೆಡ್ ಜನರೇಷನ್’ (RAG) ತಂತ್ರಜ್ಞಾನವನ್ನು ಬಳಸುವ ಮೂಲಕ, ಸಂಬಂಧಿತ ಪ್ರಕರಣಗಳನ್ನು ಪರಸ್ಪರ ಸಂಪರ್ಕಿಸಲು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ತ್ವರಿತವಾಗಿ ವಿಶ್ಲೇಷಿಸಲು ಇದು ತನಿಖಾಧಿಕಾರಿಗಳಿಗೆ ನೆರವಾಗುತ್ತದೆ.
    • ಕಾನೂನು ನೆರವು:- ಇದು ಭಾರತದ ಅಪರಾಧ ಕಾನೂನುಗಳನ್ನು ಆಧರಿಸಿ, ಸಂದರ್ಭೋಚಿತ ಕಾನೂನು ನೆರವು ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ; ಈ ಮೂಲಕ ಕಾನೂನು ಅನುಸರಣೆ ಮತ್ತು ಪ್ರಕ್ರಿಯೆಗಳಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

    ಲೂನಾರ್‌ ಕ್ರೀಟ್ (Lunarcrete)

    ಸಾಮಾನ್ಯ ಅಧ್ಯಯನ -3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಚಂದ್ರನ ಮೇಲೆ ಸುಸ್ಥಿರ ಮತ್ತು ದೀರ್ಘಕಾಲೀಕ ವಸತಿ ತಾಣಗಳನ್ನು ನಿರ್ಮಿಸುವ ನಿಟ್ಟಿನಲ್ಲಿ, ಚಂದ್ರನ ಮೇಲ್ಮೈ ವಸ್ತುಗಳನ್ನು ಬಳಸಿಕೊಂಡು ಉತ್ಪಾದಿಸಲಾಗುವ ‘ಲೂನಾರ್‌ ಕ್ರೀಟ್’ ಎಂಬ ಕಾಂಕ್ರೀಟ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸುತ್ತಿದ್ದಾರೆ.

    ‘ಲೂನಾರ್‌ಕ್ರೀಟ್’ ನ ಬಗ್ಗೆ:

    • ‘ಲೂನಾರ್‌ಕ್ರೀಟ್’ ಎಂಬುದು ‘ಚಂದ್ರನ ಮೇಲೆ ತಯಾರಿಸಲಾದ ಕಾಂಕ್ರೀಟ್’ ಎನ್ನುವುದನ್ನು ಸೂಚಿಸುವ ಒಂದು ಸಾಮಾನ್ಯ ಪದವಾಗಿದೆ.
    • ಇದು ಭೂಮಿಯ ಮರಳು ಮತ್ತು ಜಲ್ಲಿಕಲ್ಲುಗಳ ಬದಲಿಗೆ, ಚಂದ್ರನ ಮಣ್ಣು (ರೆಗೊಲಿತ್) ನ್ನು ಬಳಸಿಕೊಂಡು ತಯಾರಿಸಲು ಉದ್ದೇಶಿಸಲಾದ ನಿರ್ಮಾಣದ ವಸ್ತುವಾಗಿದೆ.
    • ಉದ್ದೇಶ: ಭೂಮಿಯಿಂದ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಅಗತ್ಯವಿಲ್ಲದೆಯೇ, ಚಂದ್ರನ ಮೇಲೆ ವಸತಿ ತಾಣಗಳು, ಲ್ಯಾಂಡಿಂಗ್ ಪ್ಯಾಡ್‌ಗಳು ಮತ್ತು ರಸ್ತೆಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ಮೂಲಕ, ಇದು ‘ಸ್ಥಳೀಯ ಸಂಪನ್ಮೂಲ ಬಳಕೆ’ಗೆ (ISRU) ಬೆಂಬಲ ನೀಡುತ್ತದೆ.
  • ‘ಶುಚಿ’ ಯೋಜನೆ

    ‘ಶುಚಿ’ ಯೋಜನೆ

    ಇದೀಗ ಸುದ್ದಿಯಲ್ಲಿದೆ: 

    • ‘ಶುಚಿ’ ಯೋಜನೆಯ ಅಡಿಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಸಂಗ್ರಹಣಾ ಪ್ರಕ್ರಿಯೆಯು ಸರ್ಕಾರದಿಂದ ಇನ್ನೂ ಬಾಕಿ ಉಳಿದಿದೆ.

    ‘ಶುಚಿ’ ಯೋಜನೆಯ ಬಗ್ಗೆ:

    • ಉದ್ದೇಶ:- 10 ರಿಂದ 18 ವರ್ಷ ವಯೋಮಿತಿಯ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವುದು.
    • ಆರಂಭ:- 2013-14
    • ಗುರಿ:- ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಲ್ಲಿ ಮಾಸಿಕ ಋತುಚಕ್ರದ ನೈರ್ಮಲ್ಯದ ಕುರಿತು ಅರಿವು ಮೂಡಿಸುವುದು.

    ‘ಶುಚಿ – ನನ್ನ ಮೈತ್ರಿ’ ಯೋಜನೆಯ ಬಗ್ಗೆ:

    • ಇದು 2023 ರಲ್ಲಿ ಚಾಲನೆ ನೀಡಲಾದ ಒಂದು ಪ್ರಾಯೋಗಿಕ ಯೋಜನೆಯಾಗಿದೆ.
    • ಪರಿಸರ ಸ್ನೇಹಿ ನೈರ್ಮಲ್ಯವನ್ನು ಉತ್ತೇಜಿಸುವ ಉದ್ದೇಶದಿಂದ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರದಂತಹ ಆಯ್ದ ಜಿಲ್ಲೆಗಳಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳ ಬದಲಾಗಿ ‘ಮಾಸಿಕ ಋತುಚಕ್ರದ ಕಪ್‌’ಗಳನ್ನು ವಿತರಿಸಲಾಗುತ್ತದೆ.