ವೆನೆಜುವೆಲಾ ಮೇಲೆ ಅಮೆರಿಕದ ದಾಳಿಗಳು
ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ವೆನೆಜುವೆಲಾ ದೇಶದ ಮೇಲಿನ ಅಮೆರಿಕದ ದಾಳಿಗಳು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ, ರಾಷ್ಟ್ರೀಯ ಸಾರ್ವಭೌಮತ್ವದ ಭಂಗ ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಯ ಬಗೆಗಿನ ಕಳವಳಗಳನ್ನು ಮುನ್ನೆಲೆಗೆ ತಂದಿವೆ.
- ಆದಾಗ್ಯೂ, ದತ್ತಾಂಶಗಳ ಪ್ರಕಾರ, ವೆನೆಜುವೆಲಾ ಮೇಲಿನ ಅಮೆರಿಕದ ಈ ಕ್ರಮವು ಭಾರತದ ಇಂಧನ ಭದ್ರತೆಯ ಮೇಲೆ ಯಾವುದೇ ನೇರ ಪರಿಣಾಮ ಬೀರುವ ಸಾಧ್ಯತೆಯಿಲ್ಲ.
ವೆನೆಜುವೆಲಾ ದೇಶದ ಮೇಲಿನ ಅಮೆರಿಕದ ದಾಳಿಗೆ ಸಂಭವನೀಯ ಕಾರಣಗಳು:
- ತೈಲ ನಿಕ್ಷೇಪಗಳು:- ವೆನೆಜುವೆಲಾ ವಿಶ್ವದ 18% ರಷ್ಟು ತೈಲ ನಿಕ್ಷೇಪಗಳನ್ನು ಹೊಂದಿದೆ. ಇದು ಸೌದಿ ಅರೇಬಿಯಾ (ಸುಮಾರು 16%), ರಷ್ಯಾ (ಸುಮಾರು 5-6%) ಅಥವಾ ಅಮೆರಿಕಕ್ಕಿಂತ (ಸುಮಾರು 4%) ಹೆಚ್ಚಾಗಿದೆ.
- ಎರಡು ಪಟ್ಟಿಗಿಂತ ಹೆಚ್ಚು ಕಚ್ಚಾ ತೈಲ ನಿಕ್ಷೇಪ:- ಕೇವಲ ವೆನೆಜುವೆಲಾ ಒಂದೇ, ಅಮೆರಿಕ ಮತ್ತು ರಷ್ಯಾ ಎರಡೂ ಸೇರಿ ಹೊಂದಿರುವುದಕ್ಕಿಂತ ಹೆಚ್ಚಿನ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿದೆ.
- ಲ್ಯಾಟಿನ್ ಅಮೆರಿಕದಲ್ಲಿ ಚೀನಾದ ವಿಸ್ತರಣೆಯನ್ನು ಎದುರಿಸುವುದು:– ವಿಶ್ವದ ಅತಿದೊಡ್ಡ ಕಚ್ಚಾ ತೈಲ ಆಮದುದಾರ ರಾಷ್ಟ್ರವಾದ ಚೀನಾ, ವೆನೆಜುವೆಲಾ ತೈಲದ ಅತಿದೊಡ್ಡ ಖರೀದಿದಾರನಾಗಿ ಹೊರಹೊಮ್ಮಿದೆ.
- ಚೀನಾ ಭೂರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿದೆ:- ಚೀನಾದ ಇಂಧನ ಭದ್ರತೆ ಮತ್ತು ಜಾಗತಿಕ ಪ್ರಭಾವದಲ್ಲಿ ವೆನೆಜುವೆಲಾ ಒಂದು ಕಾರ್ಯತಂತ್ರದ ಕೇಂದ್ರವಾಗಿದೆ. ಇದರಿಂದಾಗಿ ಇದು ಅಮೆರಿಕಕ್ಕೆ ಭೂರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿದೆ.
- ಅಮೆರಿಕದ ಒಪ್ಪಂದಗಳು:– ಅಮೆರಿಕವು ಯುರೋಪಿಯನ್ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಕಿಂಗ್ಡಮ್ನಂತಹ ಪಾಲುದಾರರೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ತಾನು ಸಾಕಷ್ಟು ಕಚ್ಚಾ ತೈಲ ಅಥವಾ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿಲ್ಲದಿದ್ದರೂ, ಅಮೆರಿಕದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ಎನ್ಜಿಯನ್ನು (LNG) ಖರೀದಿಸುವಂತೆ ಈ ದೇಶಗಳಿಂದ ಬದ್ಧತೆಯನ್ನು ಪಡೆದುಕೊಂಡಿದೆ.
- ಮನ್ರೋ ಸಿದ್ಧಾಂತದ ಪುನರುಜ್ಜೀವನ:– ಈ ಕಾರ್ಯಾಚರಣೆಯು ‘ಮನ್ರೋ ಸಿದ್ಧಾಂತ’ ಎಂದು ಕರೆಯಲ್ಪಡುವ ಅಮೆರಿಕದ ವಿದೇಶಾಂಗ ನೀತಿಗೆ ಅನುಗುಣವಾಗಿದೆ ಎಂದು ಅಮೆರಿಕ ವಿವರಿಸಿದೆ.
- ಇತರ ಘೋಷಿತ ಮತ್ತು ಅಘೋಷಿತ ಉದ್ದೇಶಗಳು:
- ರಾಷ್ಟ್ರ-ಪ್ರಾಯೋಜಿತ ಮಾದಕವಸ್ತು ಕಳ್ಳಸಾಗಣೆ ಆರೋಪಗಳು.
- ಸಮಾಜವಾದಿ ರಾಜಕೀಯ ಸಿದ್ಧಾಂತವನ್ನು ನಿಯಂತ್ರಿಸುವುದು.
- ಅಮೆರಿಕದ ಕಡೆಗೆ ಸಾಗುವ ಸಾಮೂಹಿಕ ವಲಸೆ ಹರಿವನ್ನು ತಡೆಯುವುದು.
ತೈಲ ಪೂರೈಕೆಯಲ್ಲಿ ವೆನೆಜುವೆಲಾದ ಪಾಲು:
- OPEC ಸದಸ್ಯ ರಾಷ್ಟ್ರ:- ಇದು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ (OPEC) ಸದಸ್ಯ ರಾಷ್ಟ್ರವಾಗಿದ್ದು, ಈ ರಾಷ್ಟ್ರಗಳ ಗುಂಪು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ.
ಭಾರತದ ಮೇಲೆ ಪರಿಣಾಮ:
- 2025ರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತವು ವೆನೆಜುವೆಲಾದಿಂದ $ 255.3 ದಶಲಕ್ಷ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿಕೊಂಡಿದೆ. ಇದು ಈ ಅವಧಿಯ ಒಟ್ಟು ತೈಲ ಆಮದಿನ 0.3% ರಷ್ಟು ಮಾತ್ರವಾಗಿದೆ.
ಸೋಮನಾಥ ಸ್ವಾಭಿಮಾನ ಪರ್ವ
ಸಾಮಾನ್ಯ ಅಧ್ಯಯನ-1 / ಇತಿಹಾಸ ಮತ್ತು ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
- ಕ್ರಿ. ಶ. 1026ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಪ್ರಥಮ ಆಕ್ರಮಣಕ್ಕೆ 1,000 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಈ ಐತಿಹಾಸಿಕ ಘಟನೆಯನ್ನು ಸ್ಮರಿಸಿದರು.
- ಅವರು ಈ ಪವಿತ್ರ ದೇಗುಲವನ್ನು ಭಾರತೀಯ ನಾಗರಿಕತೆಯ ಸ್ಥಿತಿಸ್ಥಾಪಕತ್ವ ಹಾಗೂ ಅಚಲ ಚೈತನ್ಯದ ‘ಕಾಲಾತೀತ ಪ್ರತೀಕ’ ಎಂದು ಬಣ್ಣಿಸಿದ್ದಾರೆ.
ಸೋಮನಾಥ ದೇವಾಲಯದ ಬಗ್ಗೆ:
- ಮೊದಲನೆಯ ಜ್ಯೋತಿರ್ಲಿಂಗ:- ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರದಲ್ಲಿ ಉಲ್ಲೇಖಿಸಿರುವಂತೆ, ಸೋಮನಾಥ ದೇವಾಲಯದ ಜ್ಯೋತಿರ್ಲಿಂಗವನ್ನು ಭಗವಾನ್ ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಎಂದು ಪೂಜಿಸಲಾಗುತ್ತದೆ.
- ಸ್ಥಳ:- ಈ ದೇವಾಲಯವು ಗುಜರಾತ್ನ ಪಶ್ಚಿಮ ಕರಾವಳಿಯ ಪ್ರಭಾಸ ಪಾಟನ್ನಲ್ಲಿದೆ. ಈ ಪ್ರದೇಶವು ಐತಿಹಾಸಿಕವಾಗಿ ಕಡಲ ವ್ಯಾಪಾರ, ಸಾಂಸ್ಕೃತಿಕ ವಿನಿಮಯ ಮತ್ತು ಸಮೃದ್ಧಿಯೊಂದಿಗೆ ನಂಟು ಹೊಂದಿದೆ.
- ಘಜ್ನಿ ಮೊಹಮ್ಮದನು 1026ರ ಜನವರಿಯಲ್ಲಿ, ಈ ದೇಗುಲದ ಮೇಲೆ ಮೊದಲ ಬಾರಿಗೆ ದಾಳಿ ನಡೆಸಿದನು. ಇದು ಭಾರತೀಯ ನಾಗರಿಕತೆಯ ಸಂಕೇತಗಳನ್ನು ನಾಶಮಾಡುವ ಗುರಿಯನ್ನು ಹೊಂದಿದ್ದ ಸರಣಿ ಆಕ್ರಮಣಗಳ ಆರಂಭವಾಗಿತ್ತು.
- ಪದೇ ಪದೇ ಧ್ವಂಸಗೊಳಿಸಿದರೂ, ಈ ದೇವಾಲಯವನ್ನು ಹಲವು ಬಾರಿ ಪುನರ್ನಿರ್ಮಿಸಲಾಯಿತು.
ದೇವಾಲಯದ ಪುನರ್ನಿರ್ಮಾಣ/ ಜೀರ್ಣೋದ್ಧಾರ:
- ಅಹಲ್ಯಾಬಾಯಿ ಹೋಳ್ಕರ್:- ಸಾಂಸ್ಕೃತಿಕ ಪುನರುಜ್ಜೀವನದಲ್ಲಿ ದೇಶೀಯ ಆಡಳಿತಗಾರರ ಪಾತ್ರವನ್ನು ಎತ್ತಿಹಿಡಿಯುವ ಮೂಲಕ, 18ನೇ ಶತಮಾನದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರು ದೇವಾಲಯದ ಜೀರ್ಣೋದ್ಧಾರದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
- ಸರ್ದಾರ್ ವಲ್ಲಭಭಾಯಿ ಪಟೇಲ್:- ಸ್ವಾತಂತ್ರ್ಯದ ನಂತರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಸಂಕಲ್ಪ ಮಾಡಿದರು.
- ಡಾ. ರಾಜೇಂದ್ರ ಪ್ರಸಾದ್ ಉದ್ಘಾಟನೆ:- ಪ್ರಸ್ತುತ ಕಟ್ಟಡವನ್ನು ಪೂರ್ಣಗೊಳಿಸಿ, ಮೇ 11, 1951ರಂದು ಡಾ. ರಾಜೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು. ಇದು ಸಾಂಸ್ಕೃತಿಕ ಸ್ವಾತಂತ್ರ್ಯದ ಸಾಂವಿಧಾನಿಕ ಆಶಯವನ್ನು ಪ್ರತಿಬಿಂಬಿಸುತ್ತದೆ.
- ಕೆ.ಎಂ. ಮುನ್ಷಿ ಮಹತ್ವದ ಪಾತ್ರ:- ದೇವಾಲಯದ ಪುನರ್ನಿರ್ಮಾಣದಲ್ಲಿ ಕೆ.ಎಂ. ಮುನ್ಷಿ ಅವರು ಮಹತ್ವದ ಪಾತ್ರ ವಹಿಸಿದ್ದರು.
- ಸ್ವಾಮಿ ವಿವೇಕಾನಂದರು ಸೋಮನಾಥವನ್ನು, ಎಷ್ಟೇ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ಮತ್ತೆ ಪುನರ್ ಸ್ಥಾಪನೆಗೊಳ್ಳುವ ಭಾರತದ ರಾಷ್ಟ್ರೀಯ ಚೈತನ್ಯದ ಸಂಕೇತವಾಗಿ ಕಂಡಿದ್ದರು.
ದೆಹಲಿಯಲ್ಲಿ ಮಾನವ ರೇಬಿಸ್: ಅಧಿಸೂಚಿತ ರೋಗ ಎಂದು ಘೋಷಿಸಲು ನಿರ್ಧಾರ
ಸಾಮಾನ್ಯ ಅಧ್ಯಯನ-2 / ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- “ಸಾಂಕ್ರಾಮಿಕ ರೋಗಗಳ ಕಾಯ್ದೆ”ಯ ಅಡಿಯಲ್ಲಿ, ದೆಹಲಿ ಸರ್ಕಾರವು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ‘ಮಾನವ ರೇಬಿಸ್’ ಅನ್ನು ‘ಅಧಿಸೂಚಿತ ರೋಗ’ ಎಂದು ಘೋಷಿಸಲು ನಿರ್ಧರಿಸಿದೆ.
‘ಅಧಿಸೂಚಿತ (ಕಡ್ಡಾಯ ವರದಿ) ರೋಗ’ ದ ಬಗ್ಗೆ:
- ಕಾನೂನುಬದ್ಧವಾಗಿ ವರದಿ:- ರೋಗ ನಿರ್ಣಯವಾದಾಗ ಅಥವಾ ಸೋಂಕಿನ ಶಂಕೆ ಕಂಡುಬಂದಾಗ, ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಕಾನೂನುಬದ್ಧವಾಗಿ ವರದಿ ಮಾಡಲೇಬೇಕಾದ ರೋಗವನ್ನು ‘ಅಧಿಸೂಚಿತ ರೋಗ’ ಎನ್ನಲಾಗುತ್ತದೆ.
- ರೋಗದ ಕುರಿತಾದ ಕಡ್ಡಾಯ ವರದಿಯು ನೈಜ-ಸಮಯದ ಕಣ್ಗಾವಲು, ಆರಂಭಿಕ ಪತ್ತೆ, ತ್ವರಿತ ಪ್ರತಿಕ್ರಿಯೆ ಮತ್ತು ಸಾಕ್ಷ್ಯಾಧಾರಿತ ಯೋಜನೆಗೆ ಅನುವು ಮಾಡಿಕೊಡುತ್ತದೆ.
‘ರೇಬಿಸ್’ ರೋಗದ ಬಗ್ಗೆ:
- ಝೂನೋಟಿಕ್ ವೈರಲ್ ಕಾಯಿಲೆ:- ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಾಣುವಿನಿಂದ ಉಂಟಾಗುವ ರೋಗ.
- ರೋಗಕಾರಕ:- ಇದು ‘ರಾಬ್ಡೋವಿರಿಡೆ’ ಕುಟುಂಬದ ‘ಲಿಸ್ಸಾವೈರಸ್’ ಕುಲಕ್ಕೆ ಸೇರಿದ ರೇಬಿಸ್ ವೈರಸ್ನಿಂದ ಉಂಟಾಗುತ್ತದೆ.
- RNA ವೈರಾಣು:- ಇದು ರೈಬೋನ್ಯೂಕ್ಲಿಯಿಕ್ ಆಮ್ಲ (RNA) ವೈರಸ್ ಆಗಿದ್ದು, ರೇಬಿಸ್ ಪೀಡಿತ ಪ್ರಾಣಿಯ (ನಾಯಿ, ಬೆಕ್ಕು, ಕೋತಿ ಇತ್ಯಾದಿ) ಲಾಲಾರಸದಲ್ಲಿ ಇರುತ್ತದೆ.
- ಲಸಿಕೆಯ ಮೂಲಕ ತಡೆಗಟ್ಟಬಹುದು:- ರೇಬಿಸ್ 100% ರಷ್ಟು ಮಾರಣಾಂತಿಕವಾಗಿದೆ, ಆದರೆ ಲಸಿಕೆಯ ಮೂಲಕ 100% ರಷ್ಟು ತಡೆಗಟ್ಟಬಹುದಾಗಿದೆ.
- ಸಾವುಗಳ ಸಂಖ್ಯೆಯಲ್ಲಿ ಭಾರತ ಅಗ್ರ ಸ್ಥಾನ:- ಜಾಗತಿಕವಾಗಿ ರೇಬಿಸ್ನಿಂದ ಸಂಭವಿಸುವ ಸಾವುಗಳಲ್ಲಿ 33% ರಷ್ಟು ಸಾವುಗಳು ಭಾರತದಲ್ಲಿಯೇ ದಾಖಲಾಗುತ್ತವೆ.
ವೈರಸ್ನ ಸಾಮಾನ್ಯ ವಾಹಕಗಳು ಮತ್ತು ಆಶ್ರಯದಾತರುಗಳು:-
- ಬಹುತೇಕ ಸಸ್ತನಿಗಳು ಈ ವೈರಸ್ನ ವಾಹಕಗಳಾಗಿ ಕಾರ್ಯನಿರ್ವಹಿಸಬಲ್ಲವು ಮತ್ತು ಈ ಮೂಲಕ ರೋಗವನ್ನು ಉಂಟುಮಾಡಬಲ್ಲವು.
- ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಲ್ಲಿ, ಸಾಕು ಹಾಗೂ ಬೀದಿ ನಾಯಿಗಳು ಈ ವೈರಸ್ನ ಅತ್ಯಂತ ಸಾಮಾನ್ಯ ವಾಹಕಗಳಾಗಿವೆ.
- ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಾವಲಿಗಳು, ನರಿಗಳು, ರಕೂನ್ಗಳು ಮತ್ತು ಸ್ಕಂಕ್ಗಳು ರೇಬಿಸ್ ರೋಗವನ್ನು ಹರಡುವ ಪ್ರಮುಖ ಪ್ರಾಣಿಗಳಾಗಿವೆ.
‘ರೇಬಿಸ್’ ರೋಗದ ಲಕ್ಷಣಗಳು:
- ಆತಂಕ, ಗೊಂದಲ, ಲಾಲಾರಸ ಸ್ರವಿಸುವಿಕೆ, ಸೆಳವು, ಭ್ರಮೆ ಮತ್ತು ಪಾರ್ಶ್ವವಾಯು.
ನಾಯಿಗಳಿಂದ ಹರಡುವ ರೇಬಿಸ್ ನಿರ್ಮೂಲನೆಗಾಗಿ ರಾಷ್ಟ್ರೀಯ ಕಾರ್ಯಯೋಜನೆ (NAPRE), 2030ರ ಬಗ್ಗೆ:
- ಇದರ ಅಡಿಯಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರೇಬಿಸ್ ಅನ್ನು ಅಧಿಸೂಚಿತ ರೋಗವನ್ನಾಗಿ ಮಾಡುವಂತೆ ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತದೆ.
- ಸರ್ಕಾರಿ ಅಧಿಕಾರಿಗಳಿಗೆ ವರದಿ ಮಾಡುವುದನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಲಾದ ಯಾವುದೇ ರೋಗವನ್ನು ಅಧಿಸೂಚಿತ ರೋಗ ಎನ್ನಲಾಗುತ್ತದೆ.
- 2030ರ ವೇಳೆಗೆ ಭಾರತದಿಂದ ನಾಯಿಗಳ ಮೂಲಕ ಹರಡುವ ರೇಬಿಸ್ ಅನ್ನು ನಿರ್ಮೂಲನೆ ಮಾಡಲು “ಜಂಟಿ ಅಂತರ-ಸಚಿವಾಲಯ ಘೋಷಣೆ ಬೆಂಬಲ ಹೇಳಿಕೆ”ಯನ್ನು ಸಹ ಬಿಡುಗಡೆ ಮಾಡಲಾಯಿತು.
‘ವಿಶ್ವ ರೇಬಿಸ್ ದಿನ’ದ ಬಗ್ಗೆ:
- ಆಚರಣೆ:– ಲೂಯಿಸ್ ಪಾಶ್ಚರ್ ಅವರ ಪುಣ್ಯತಿಥಿಯ ಸ್ಮರಣಾರ್ಥವಾಗಿ ಸೆಪ್ಟೆಂಬರ್ 28 ರಂದು ಇದನ್ನು ಆಚರಿಸಲಾಗುತ್ತದೆ.
- ಲೂಯಿಸ್ ಪಾಶ್ಚರ್ ಅವರು ಫ್ರೆಂಚ್ ರಸಾಯನಶಾಸ್ತ್ರಜ್ಞ ಮತ್ತು ಸೂಕ್ಷ್ಮಜೀವಿ ವಿಜ್ಞಾನಿಯಾಗಿದ್ದು, ಇವರು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದರು.
- ಇವರು ಪಾಶ್ಚರೀಕರಣ, ಆಂಥ್ರಾಕ್ಸ್ ಮತ್ತು ಕಾಲರಾ ಲಸಿಕೆಗಳು ಹಾಗೂ ಚೇಂಬರ್ಲ್ಯಾಂಡ್ ಶೋಧಕಗಳನ್ನು ಸಹ ಕಂಡುಹಿಡಿಡಿದ್ದಾನೆ.



ನಿಮ್ಮದೊಂದು ಉತ್ತರ