ಮೈಸೂರಿನ ಹೊರವಲಯದಲ್ಲಿ ಗಂಗರ ಕಾಲದ 10ನೇ ಶತಮಾನದ ಶಾಸನ ಪತ್ತೆಯಾಗಿದೆ

ಇದೀಗ ಸುದ್ದಿಯಲ್ಲಿದೆ:
- ಮೈಸೂರಿನ ಹೊರವಲಯದಲ್ಲಿರುವ ನಾಡನಹಳ್ಳಿಯ ಮಹಾಲಿಂಗೇಶ್ವರ ದೇವಾಲಯದ ಒಳಗೆ ಗಂಗರ ಕಾಲದ 10ನೇ ಶತಮಾನದ ಶಾಸನವೊಂದು ಪತ್ತೆಯಾಗಿದೆ.
ಈ ಶಾಸನದ ಬಗ್ಗೆ ಹೆಚ್ಚಿನ ಮಾಹಿತಿ:
- ಇದು ಕ್ರಿ.ಶ. 948 ರ ಗಂಗರ ದೊರೆ ಇಮ್ಮಡಿ ಬೂತುಗನ ಕಾಲದ ಕನ್ನಡ ಶಾಸನವಾಗಿದೆ.
- ಇಮ್ಮಡಿ ಬೂತುಗನ ಆಳ್ವಿಕೆಯ ಸಮಯದಲ್ಲಿ, ಅವನ ಅಂಗರಕ್ಷಕಿಯಾದ ಮಾರೆಮ್ಮಳು ತೋಟವನ್ನು ದೇವಾಲಯಕ್ಕೆ ತೆರಿಗೆ ರಹಿತವಾಗಿ ದಾನ ನೀಡಿರಬಹುದು ಮತ್ತು ಅದರ ನಿರ್ವಹಣೆಯನ್ನು ಗ್ರಾಮದ ಮುಖ್ಯಸ್ಥ ವಿಜಕೇತ ಗಾವುಂಡನಿಗೆ ಒಪ್ಪಿಸಿರಬಹುದು ಎಂದು ನಂಬಲಾಗಿದೆ.
ಕರ್ನಾಟಕ ನವೋದ್ಯಮ ನೀತಿ, 2025-30
ಇದೀಗ ಸುದ್ದಿಯಲ್ಲಿದೆ:
- ‘ಕರ್ನಾಟಕ ನವೋದ್ಯಮ ನೀತಿ, 2025-30’ ಕ್ಕೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಇದು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 25,000 ಹೊಸ ನವೋದ್ಯಮಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿದೆ.
ಕರ್ನಾಟಕ ನವೋದ್ಯಮ ನೀತಿ, 2025-30 ರ ಬಗ್ಗೆ:
- ಗುರಿ:- ಒಟ್ಟು ಉದ್ದೇಶಿತ 25,000 ನವೋದ್ಯಮಗಳ ಪೈಕಿ, ಕನಿಷ್ಠ 10,000 ನವೋದ್ಯಮಗಳನ್ನು ಬೆಂಗಳೂರಿನ ಆಚೆಗೆ ಸ್ಥಾಪನೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಈ ನೀತಿಯ ಪ್ರಮುಖ ಗುರಿಯಾಗಿದೆ.
ದೃಷ್ಟಿಕೋನ:
- ಜಾಗತಿಕ ನಾವೀನ್ಯತಾ ಕೇಂದ್ರ: ಕರ್ನಾಟಕವನ್ನು ‘ಜಾಗತಿಕ ನಾವೀನ್ಯತಾ ಕೇಂದ್ರವನ್ನಾಗಿ’ ರೂಪಿಸುವುದು ಮತ್ತು ನವೋದ್ಯಮಗಳ ಸಂಪೂರ್ಣ ಅವಧಿಯಲ್ಲಿ ಅವುಗಳನ್ನು ಪೋಷಿಸಲು ಪೂರಕವಾದ ಹಾಗೂ ಚೈತನ್ಯದಾಯಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.
- ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಸಂಪನ್ಮೂಲ: ಸುಸ್ಥಿರ ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಯನ್ನು ಸಾಧಿಸಲು ಅತ್ಯಗತ್ಯವಾದ ಸಂಪನ್ಮೂಲಗಳು, ಮಾರ್ಗದರ್ಶನ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು.
ಧ್ಯೇಯ:
- ಬೆಂಗಳೂರಿನ ಆಚೆಗಿನ ವಲಯಗಳು: ಈ ನೀತಿಯ ಅಡಿಯಲ್ಲಿ 25,000 ಹೆಚ್ಚುವರಿ ಹೊಸ ನವೋದ್ಯಮಗಳನ್ನು ಸ್ಥಾಪಿಸಲು ರಾಜ್ಯವು ಬದ್ಧವಾಗಿದೆ. ಇದರಲ್ಲಿ 10,000 ನವೋದ್ಯಮಗಳು ‘ಬೆಂಗಳೂರಿನ ಆಚೆಗಿನ’ ವಲಯಗಳಲ್ಲಿ ಆರಂಭವಾಗಲಿವೆ.
- ಉದ್ಯಮಶೀಲತೆಯ ವಿಸ್ತರಣೆ: ಉದ್ಯಮಶೀಲತೆಯ ಹೆಜ್ಜೆಗುರುತುಗಳನ್ನು ರಾಜ್ಯದಾದ್ಯಂತ ವಿಸ್ತರಿಸುವ ಮೂಲಕ, ಪ್ರಮುಖ ನಾವೀನ್ಯತಾ ಕೇಂದ್ರವಾಗಿ ಕರ್ನಾಟಕದ ಸ್ಥಾನಮಾನವನ್ನು ಮತ್ತಷ್ಟು ಉನ್ನತೀಕರಿಸುವುದು.
- ಬೆಂಬಲಿತ ವ್ಯವಸ್ಥೆ: ವಿವಿಧ ಪ್ರದೇಶಗಳಲ್ಲಿ ಉದ್ಯಮಿಗಳಿಗೆ ಉತ್ತೇಜನ ನೀಡಲು ನಾವೀನ್ಯತಾ ಕೇಂದ್ರಗಳು, ಇನ್ಕ್ಯುಬೇಷನ್ ಕೇಂದ್ರಗಳು ಮತ್ತು ಸಹ-ಕೆಲಸದ ಸ್ಥಳಗಳನ್ನು ವಿಸ್ತರಿಸುವುದು.
- ಜಾಗತಿಕ ಸಂಪರ್ಕ: ನವೋದ್ಯಮಗಳು ತಮ್ಮ ವ್ಯಾಪ್ತಿಯನ್ನು ವಿಶ್ವಮಟ್ಟದಲ್ಲಿ ವಿಸ್ತರಿಸಿಕೊಳ್ಳಲು, ಅಂತರರಾಷ್ಟ್ರೀಯ ಸಹಯೋಗಗಳು, ವಾಣಿಜ್ಯ ಪಾಲುದಾರಿಕೆಗಳು ಮತ್ತು ಜಾಗತಿಕ ಸಂಪರ್ಕ ಜಾಲದ ಅವಕಾಶಗಳನ್ನು ಬಲಪಡಿಸುವುದು



ನಿಮ್ಮದೊಂದು ಉತ್ತರ