ಮೆಂಟರಿಂಗ್ ಸಮ್ಮಿಟ್ ಇಂಡಿಯಾ (ಭಾರತ ಮಾರ್ಗದರ್ಶನ ಶೃಂಗಸಭೆ), 2025 | ಬೆಳಗಾವಿ ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವು; ಸೋಂಕಿನ ಶಂಕೆ

ಮೆಂಟರಿಂಗ್ ಸಮ್ಮಿಟ್ ಇಂಡಿಯಾ (ಭಾರತ ಮಾರ್ಗದರ್ಶನ ಶೃಂಗಸಭೆ), 2025

ಇದೀಗ ಸುದ್ದಿಯಲ್ಲಿದೆ:

  • ‘ಮೆಂಟರ್ ಟುಗೆದರ್’ ಸಂಸ್ಥೆಯ ವತಿಯಿಂದ, ಬೆಂಗಳೂರಿನಲ್ಲಿರುವ ‘ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ’ದಲ್ಲಿ ‘ಮೆಂಟರಿಂಗ್ ಸಮ್ಮಿಟ್ ಇಂಡಿಯಾ 2025’ ಆಯೋಜನೆಗೊಳ್ಳಲಿದೆ.

ಮೆಂಟರಿಂಗ್ ಸಮ್ಮಿಟ್ ಇಂಡಿಯಾ, 2025 ರ ಬಗ್ಗೆ: 

  • ದಿನಾಂಕ:- ನವೆಂಬರ್ 19-20, 2025.
  • ಸ್ಥಳ:- ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ, ಬೆಂಗಳೂರು.
  • ಆಯೋಜಕರು:- ಮೆಂಟರ್ ಟುಗೆದರ್ ಸಂಸ್ಥೆ.
  • ಉದ್ದೇಶ:- ಮಾರ್ಗದರ್ಶನ ಪ್ರಕ್ರಿಯೆಯನ್ನು ಒಂದು “ಸಾರ್ವಜನಿಕ ಸರಕು”  ಎಂದು ಪರಿಗಣಿಸಿ, ಆ ದೃಷ್ಟಿಕೋನವನ್ನು ಮುನ್ನಡೆಸುವುದು ಈ ಶೃಂಗಸಭೆಯ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ, ಮಾರ್ಗದರ್ಶನ ನೀಡುವ ಪರಿಣಿತರು, ಸಂಶೋಧಕರು ಮತ್ತು ಬದಲಾವಣೆಯ ಹರಿಕಾರರನ್ನು ಒಂದೇ ವೇದಿಕೆಯಡಿ ತರುವುದು ಹಾಗೂ ದೇಶಾದ್ಯಂತ ಯುವಜನರನ್ನು ಬೆಂಬಲಿಸಲು ಪರಸ್ಪರ ಸಹಯೋಗವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.

ಬೆಳಗಾವಿ ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವು; ಸೋಂಕಿನ ಶಂಕೆ

ಇದೀಗ ಸುದ್ದಿಯಲ್ಲಿದೆ:

  • ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿಯಲ್ಲಿರುವ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಮೃತಪಟ್ಟಿವೆ. 
  • ಪ್ರಾಥಮಿಕ ಮಾಹಿತಿಯ ಪ್ರಕಾರ, ಬ್ಯಾಕ್ಟೀರಿಯಾ ಸೋಂಕಿನಿಂದ ಈ ಪ್ರಾಣಿಗಳು ಸಾವನ್ನಪ್ಪಿರುವ ಶಂಕೆ ಇದ್ದು, ಹೆಚ್ಚಿನ ತಪಾಸಣೆಗಾಗಿ ಆಂತರಿಕ ಅಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೃಷ್ಣಮೃಗ (ಆಂಟಿಲೋಪ್ ಸರ್ವಿಕಾಪ್ರಾ) ಗಳ ಬಗ್ಗೆ:

  • ದೈಹಿಕ ಲಕ್ಷಣಗಳು: 
  • ಗಂಡು ಕೃಷ್ಣಮೃಗಗಳು ಆಕರ್ಷಕವಾದ ಮತ್ತು ಸುರುಳಿಯಾಕಾರದ ಕೊಂಬುಗಳನ್ನು ಹೊಂದಿದ್ದು, ಇವು 75 ಸೆಂ.ಮೀ (30 ಇಂಚು) ವರೆಗೆ ಬೆಳೆಯುತ್ತವೆ. ಗಂಡು ಕೃಷ್ಣಮೃಗಗಳ ಮೈಬಣ್ಣ ಗಾಢ ಕಂದು ಬಣ್ಣದಿಂದ ಕಪ್ಪು ಬಣ್ಣದಲ್ಲಿರುತ್ತದೆ. 
  • ಹೆಣ್ಣು ಕೃಷ್ಣಮೃಗಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಕೋಡುಗಳಿರುವುದಿಲ್ಲ ಮತ್ತು ಕೆಂಪು-ಕಂದು ಬಣ್ಣವನ್ನು ಹೊಂದಿರುತ್ತವೆ.
    • ಆವಾಸಸ್ಥಾನ: ಇವು ಸಾಮಾನ್ಯವಾಗಿ ಹುಲ್ಲುಗಾವಲುಗಳು, ಸವನ್ನಾಗಳು ಮತ್ತು ತೆರೆದ ಅರಣ್ಯಗಳಲ್ಲಿ ಕಂಡುಬರುತ್ತವೆ. ಮೇಯಲು ಕಡಿಮೆ ಎತ್ತರದ ಹುಲ್ಲು ಇರುವ ಪ್ರದೇಶಗಳನ್ನು ಇವು ಹೆಚ್ಚು ಇಷ್ಟಪಡುತ್ತವೆ.
    • ಬೆದರಿಕೆಗಳು : ಐತಿಹಾಸಿಕವಾಗಿ ಭಾರತದ ದೇಶೀಯ ಸಂಸ್ಥಾನಗಳಲ್ಲಿ ಇವುಗಳ ಅತಿಯಾದ ಬೇಟೆ ನಡೆಯುತ್ತಿತ್ತು. ಪ್ರಸ್ತುತ, ಆವಾಸಸ್ಥಾನಗಳ ನಾಶ ಮತ್ತು ವಾಣಿಜ್ಯ/ಆರ್ಥಿಕ ಬಳಕೆಗಾಗಿ ನಡೆಯುವ ಅಕ್ರಮ ಬೇಟೆ ಇವುಗಳ ಅಸ್ತಿತ್ವಕ್ಕೆ ಪ್ರಮುಖ ಬೆದರಿಕೆಗಳಾಗಿವೆ.
  • ಸಂರಕ್ಷಣಾ ಸ್ಥಾನಮಾನ:
  • IUCN ಕೆಂಪು ಪಟ್ಟಿ: ಕನಿಷ್ಠ ಕಾಳಜಿ (LC)
  • CITES: ಅನುಬಂಧ III
  • ವನ್ಯಜೀವಿ (ಸಂರಕ್ಷಣಾ) ಕಾಯಿದೆ, 1972: ಅನುಸೂಚಿ I 

ಇತರೆ ಪ್ರಮುಖ ಅಂಶಗಳು

  • ರಾಜ್ಯ ಪ್ರಾಣಿ: ಕೃಷ್ಣಮೃಗವನ್ನು ಪಂಜಾಬ್, ಹರಿಯಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ‘ರಾಜ್ಯ ಪ್ರಾಣಿ’ಯನ್ನಾಗಿ ಘೋಷಿಸಲಾಗಿದೆ.
  • ಸಾಂಸ್ಕೃತಿಕ ಮಹತ್ವ: ಹಿಂದೂ ಧರ್ಮದಲ್ಲಿ, ಕೃಷ್ಣಮೃಗವನ್ನು ಪಾವಿತ್ರ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಇದರ ಚರ್ಮ ಮತ್ತು ಕೊಂಬುಗಳನ್ನು ಪವಿತ್ರ ವಸ್ತುಗಳಾಗಿ ಪೂಜಿಸಲಾಗುತ್ತದೆ. ಬೌದ್ಧ ಧರ್ಮದಲ್ಲಿ, ಇದನ್ನು ಅದೃಷ್ಟದ ಸಂಕೇತವೆಂದು ನಂಬಲಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts