ಮಂಡ್ಯದಲ್ಲಿ ಎಆರ್ಎಐ (ARAI) ಸಂಶೋಧನಾ ಕೇಂದ್ರ ಸ್ಥಾಪನೆ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ವಿಶ್ವದರ್ಜೆಯ ‘ಭಾರತದ ಮೋಟಾರು ವಾಹನ (ಆಟೋಮೋಟಿವ್) ಸಂಶೋಧನಾ ಸಂಸ್ಥೆ’ (ARAI) ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಯೋಜನೆಯ ಪ್ರಮುಖ ವಿವರಗಳು:
- ಸ್ಥಳ:- ಮಂಡ್ಯದಿಂದ ಸುಮಾರು 30 ಕಿ.ಮೀ ಮತ್ತು ಮಂಡ್ಯ-ನಾಗಮಂಗಲ ರಾಜ್ಯ ಹೆದ್ದಾರಿಯಿಂದ 500 ಮೀಟರ್ ದೂರದಲ್ಲಿರುವ ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡಿತಿಹಳ್ಳಿ ಗ್ರಾಮಗಳಲ್ಲಿ ಈ ಯೋಜನೆಗಾಗಿ ಕರ್ನಾಟಕ ಸರ್ಕಾರವು 105 ಎಕರೆ ಭೂಮಿಯನ್ನು ಗುರುತಿಸಿದೆ.
- ವಿಶೇಷತೆ:- ಈ ಕೇಂದ್ರವು ವಿಶಾಲವಾದ ಮೋಟಾರು ವಾಹನೋದ್ಯಮ ವಲಯಕ್ಕೆ ಸೇವೆ ಸಲ್ಲಿಸಿದರೂ, ಇದನ್ನು ಭಾರತದ ಮೊಟ್ಟಮೊದಲ ಮೀಸಲಾದ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ ಎಂದು ಪ್ರಸ್ತಾಪಿಸಲಾಗಿದೆ.
- ಪ್ರಾದೇಶಿಕ ಪ್ರಭಾವ:- ಈ ಸಂಶೋಧನಾ ಕೇಂದ್ರವು ಕರ್ನಾಟಕದಾದ್ಯಂತ ವಾಹನ ಕೈಗಾರಿಕಾ ವಲಯವನ್ನು ಉತ್ತೇಜಿಸುವ ನಿರೀಕ್ಷೆಯಿದ್ದು, ನಿರ್ದಿಷ್ಟವಾಗಿ ಮಂಡ್ಯ ಮತ್ತು ಮೈಸೂರು ಭಾಗಗಳ ಆರ್ಥಿಕತೆಗೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
- ಹೂಡಿಕೆ:- ಈ ಯೋಜನೆಯನ್ನು ಒಟ್ಟು ₹500 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು.



ನಿಮ್ಮದೊಂದು ಉತ್ತರ