ಭಾರತ-ಸೌದಿ ಅರೇಬಿಯಾ ಭದ್ರತಾ ಕಾರ್ಯಪಡೆ
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, 3ನೇ ‘ಭಾರತ-ಸೌದಿ ಅರೇಬಿಯಾ ಭದ್ರತಾ ಕಾರ್ಯಪಡೆ’ಯ ಸಭೆಯು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ಯಶಸ್ವಿಯಾಗಿ ಜರುಗಿತು.
ಈ ಸಭೆಯ ಪ್ರಮುಖ ಮುಖ್ಯಾಂಶಗಳು:
- ಭಯೋತ್ಪಾದನಾ ನಿಗ್ರಹ:- ಉದಯೋನ್ಮುಖ ಅಪಾಯಗಳು ಸೇರಿದಂತೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಉಭಯ ದೇಶಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.
- ಉಗ್ರವಾದ ತಡೆ:- ಉಗ್ರವಾದ ಮತ್ತು ಮೂಲಭೂತವಾದವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಜಂಟಿ ಕ್ರಮಗಳನ್ನು ಕೈಗೊಳ್ಳಲಾಗುವುದು.
- ಭಯೋತ್ಪಾದಕ ನಿಧಿ ನಿಯಂತ್ರಣ:- ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ನಿರ್ಧರಿಸಲಾಗಿದೆ.
- ತಂತ್ರಜ್ಞಾನದ ದುರ್ಬಳಕೆ ತಡೆ:- ಭಯೋತ್ಪಾದಕ ಉದ್ದೇಶಗಳಿಗಾಗಿ ಆಧುನಿಕ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಸಭೆಯಲ್ಲಿ ಒತ್ತು ನೀಡಲಾಗಿದೆ.
- ಸಂಘಟಿತ ಅಪರಾಧಗಳ ನಿಗ್ರಹ:- ಗಡಿಯಾಚೆಗಿನ ಸಂಘಟಿತ ಅಪರಾಧಗಳು ಮತ್ತು ಭಯೋತ್ಪಾದನೆಯ ನಡುವಿನ ನಂಟನ್ನು ಬೇರುಸಹಿತ ಕಿತ್ತುಹಾಕಲು ಚರ್ಚಿಸಲಾಗಿದೆ.
- ಸಾಂಸ್ಥಿಕ ಚೌಕಟ್ಟು:- ಈ ದ್ವಿಪಕ್ಷೀಯ ಭದ್ರತಾ ಮಾತುಕತೆಯು ‘ಭಾರತ-ಸೌದಿ ಅರೇಬಿಯಾ ಕಾರ್ಯತಂತ್ರದ ಪಾಲುದಾರಿಕಾ ಮಂಡಳಿ’ಯ (SPC) ಅಡಿಯಲ್ಲಿ ನಡೆಯುತ್ತದೆ. ಇದು ಉಭಯ ದೇಶಗಳ ಸಹಕಾರಕ್ಕೆ ನಿರಂತರತೆ ಮತ್ತು ಭವಿಷ್ಯದ ಮುನ್ನೋಟವನ್ನು ಒದಗಿಸುತ್ತದೆ.
ಭಾರತ ಮತ್ತು ಸೌದಿ ಅರೇಬಿಯಾ ಸಂಬಂಧಗಳು:
- ರಾಜಕೀಯ ಸಂಬಂಧಗಳು:- ಎರಡೂ ದೇಶಗಳು 1947 ರಲ್ಲಿ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು.
- 2006 ರ ಸೌದಿ ದೊರೆಯ ಐತಿಹಾಸಿಕ ಭೇಟಿಯ ಪರಿಣಾಮವಾಗಿ ‘ದೆಹಲಿ ಘೋಷಣೆ’ಗೆ ಸಹಿ ಹಾಕಲಾಯಿತು. ತದನಂತರ 2010 ರಲ್ಲಿ ‘ರಿಯಾದ್ ಘೋಷಣೆ’ಯ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ‘ಕಾರ್ಯತಂತ್ರದ ಪಾಲುದಾರಿಕೆ’ಯ ಮಟ್ಟಕ್ಕೆ ಏರಿಸಲಾಯಿತು.
- 2019 ರಲ್ಲಿ ಭಾರತದ ಪ್ರಧಾನಮಂತ್ರಿಯವರ ರಿಯಾದ್ ಭೇಟಿಯ ಸಂದರ್ಭದಲ್ಲಿ ‘ಕಾರ್ಯತಂತ್ರದ ಪಾಲುದಾರಿಕಾ ಮಂಡಳಿ’ (SPC) ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇಂಡೋ-ಸೌದಿ ಸಂಬಂಧವನ್ನು ಉನ್ನತ ಮಟ್ಟದಲ್ಲಿ ಮುನ್ನಡೆಸಲು ಇದು ಒಂದು ಪ್ರಬಲ ಮಂಡಳಿಯನ್ನು ಸ್ಥಾಪಿಸಿದೆ.
- ಆರ್ಥಿಕ ಸಂಬಂಧಗಳು:- ಆರ್ಥಿಕ ವಲಯದಲ್ಲಿ ಭಾರತವು ಸೌದಿ ಅರೇಬಿಯಾದ 2 ನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ ಮತ್ತು ಸೌದಿ ಅರೇಬಿಯಾವು ಭಾರತದ 4 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
- ಇಂಧನ ಸಹಕಾರ:- 2023 ರ ಆರ್ಥಿಕ ವರ್ಷದಲ್ಲಿ (FY23) ಸೌದಿ ಅರೇಬಿಯಾವು ಭಾರತದ 3 ನೇ ಅತಿದೊಡ್ಡ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆದಾರ ರಾಷ್ಟ್ರವಾಗಿತ್ತು.
- ರಕ್ಷಣಾ ಸಹಕಾರ:- ರಕ್ಷಣಾ ವಲಯದಲ್ಲಿ ಸೌದಿ ಅರೇಬಿಯಾವು ಭಾರತದ ‘ಭಾರತ್ ಫೋರ್ಜ್’ ಸಂಸ್ಥೆಯಿಂದ 155 ಎಂಎಂ ‘ಸುಧಾರಿತ ಎಳೆಯುವ ಫಿರಂಗಿ ವ್ಯವಸ್ಥೆ(ATAGS)‘ಯನ್ನು ಖರೀದಿಸಿದೆ.
- ಅನಿವಾಸಿ ಭಾರತೀಯರು:- 2025 ರ ಅಂಕಿ-ಅಂಶಗಳ ಪ್ರಕಾರ, ಸೌದಿ ಅರೇಬಿಯಾದಲ್ಲಿ ಸುಮಾರು 2.7 ದಶಲಕ್ಷ ಭಾರತೀಯರಿದ್ದಾರೆ. ಬಾಂಗ್ಲಾದೇಶದ ನಂತರ ಸೌದಿ ಅರೇಬಿಯಾದಲ್ಲಿರುವ ಅತಿ ದೊಡ್ಡ ವಿದೇಶಿ ಕಾರ್ಮಿಕರ ಗುಂಪು ಇದಾಗಿದೆ.
ಜಂಟಿ ಸಮರಾಭ್ಯಾಸಗಳು:
- ಸದಾ ತನ್ಸೀಕ್:- ಇದು 2024 ರ ಜನವರಿಯಲ್ಲಿ ರಾಜಸ್ಥಾನದಲ್ಲಿ ನಡೆದ ಉಭಯ ದೇಶಗಳ ಚೊಚ್ಚಲ ಜಂಟಿ ಸೇನಾ ಸಮರಾಭ್ಯಾಸವಾಗಿದೆ.
- ತರಂಗ್ ಶಕ್ತಿ:- ಭಾರತದ ಅತಿದೊಡ್ಡ ವಾಯುಪಡೆಯ ಸಮರಾಭ್ಯಾಸವಾದ ಇದರಲ್ಲಿ ಸೌದಿ ಅರೇಬಿಯಾವು ವೀಕ್ಷಕ ರಾಷ್ಟ್ರವಾಗಿ ಭಾಗವಹಿಸಿತ್ತು.
- ಅಲ್ ಮೊಹೆದ್ ಅಲ್ ಹಿಂದಿ:- ಇದು ಉಭಯ ದೇಶಗಳ ನಡುವೆ 2022 ರಲ್ಲಿ ಪ್ರಾರಂಭಿಸಲಾದ ದ್ವಿಪಕ್ಷೀಯ ನೌಕಾಭ್ಯಾಸವಾಗಿದೆ.
ಜಾರಿ ನಿರ್ದೇಶನಾಲಯ (ED)
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಪರಿಹಾರವನ್ನು ಕೋರಿ ಸಾಂವಿಧಾನಿಕ ನ್ಯಾಯಾಲಯಗಳ ‘ರಿಟ್’ (Writ) ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ (ED) ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು ಸಮ್ಮತಿಸಿದೆ.
ಜಾರಿ ನಿರ್ದೇಶನಾಲಯದ ಬಗ್ಗೆ:
-
- ಸ್ಥಾಪನೆ:- 1 ಮೇ 1956 ರಂದು ‘ಜಾರಿ ಘಟಕ’ವನ್ನು (Enforcement Unit) ಅಧಿಕೃತವಾಗಿ ರಚಿಸಲಾಯಿತು. ತದನಂತರ 1957 ರಲ್ಲಿ, ಈ ಘಟಕವನ್ನು ‘ಜಾರಿ ನಿರ್ದೇಶನಾಲಯ’ (ED) ಎಂದು ಮರುನಾಮಕರಣ ಮಾಡಲಾಯಿತು.
- ಆಡಳಿತಾತ್ಮಕ ಕಾರ್ಯನಿರ್ವಾಹಣೆ:- ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ವಿಶೇಷ ಆರ್ಥಿಕ ತನಿಖಾ ಸಂಸ್ಥೆಯಾಗಿದೆ.
- ಪ್ರಮುಖ ಕಾರ್ಯಗಳು:- ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಜಾರಿ ನಿರ್ದೇಶನಾಲಯವು ಈ ಕೆಳಗಿನ ಪ್ರಮುಖ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ:
- ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), 1999
- ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002
ಗೀತಾ ಮಿತ್ತಲ್ ಸಮಿತಿ
ಸಮಾಜ
ಇದೀಗ ಸುದ್ದಿಯಲ್ಲಿದೆ:
- ಮಣಿಪುರ ಹಿಂಸಾಚಾರದ ಸಂತ್ರಸ್ತರಿಗೆ ಮಾನವೀಯ ನೆರವು ಮತ್ತು ಪರಿಹಾರ ಒದಗಿಸುವ ಕಾರ್ಯದ ಮೇಲ್ವಿಚಾರಣೆಯನ್ನು ಮುಂದುವರಿಸಲು, ಭಾರತದ ಸರ್ವೋಚ್ಚ ನ್ಯಾಯಾಲಯವು ‘ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿ’ಯ ಅಧಿಕಾರಾವಧಿಯನ್ನು 2026 ರ ಜುಲೈ 31 ರವರೆಗೆ (6 ತಿಂಗಳ ಕಾಲ) ವಿಸ್ತರಿಸಿದೆ.
‘ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿ’ಯ ಬಗ್ಗೆ:
- ರಚನೆ:- ಈ ಉನ್ನತ ಮಟ್ಟದ ಸಮಿತಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ರಚಿಸಿದೆ.
- ಉದ್ದೇಶ:- ಮಣಿಪುರದಲ್ಲಿ ಹಿಂಸಾಚಾರಕ್ಕೆ ತುತ್ತಾದ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ಹಾನಿಗೊಳಗಾದ ಮನೆಗಳು ಹಾಗೂ ಧಾರ್ಮಿಕ ಪ್ರಾರ್ಥನಾ ಸ್ಥಳಗಳ ಮರುಸ್ಥಾಪನಾ ಕಾರ್ಯಗಳ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಗಿದೆ.
- ಸಮಿತಿಯ ಸದಸ್ಯರು:- ಇದು ಮೂವರು ಸದಸ್ಯರನ್ನೊಳಗೊಂಡ ಸಮಿತಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರು ಇದರ ನೇತೃತ್ವ ವಹಿಸಿದ್ದಾರೆ. ನ್ಯಾಯಮೂರ್ತಿಗಳಾದ ಶಾಲಿನಿ ಫನ್ಸಾಲ್ಕರ್ ಜೋಶಿ ಮತ್ತು ಆಶಾ ಮೆನನ್ ಅವರು ಈ ಸಮಿತಿಯ ಇತರ ಇಬ್ಬರು ಸದಸ್ಯರಾಗಿದ್ದಾರೆ.



ನಿಮ್ಮದೊಂದು ಉತ್ತರ