ಭಾರತ-ಫ್ರಾನ್ಸ್: ‘ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ’
ಅಂತರರಾಷ್ಟ್ರೀಯ ಸಂಬಂಧಗಳು (IR)
ಇದೀಗ ಸುದ್ದಿಯಲ್ಲಿದೆ:
- ನವದೆಹಲಿಯಲ್ಲಿ ನಡೆಯುತ್ತಿರುವ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ ಪಾಲ್ಗೊಳ್ಳಲು ಫ್ರಾನ್ಸ್ ಅಧ್ಯಕ್ಷರು 3 ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ.
ಪ್ರಮುಖ ಬೆಳವಣಿಗೆಗಳು / ಫಲಿತಾಂಶಗಳು:
- ಪ್ರಧಾನಿ ಮೋದಿಯವರು ಫ್ರಾನ್ಸ್ನೊಂದಿಗೆ ‘ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ’ಯನ್ನು ಸ್ಥಾಪಿಸುವುದಾಗಿ ಘೋಷಿಸಿದರು.
- ‘ಭಾರತ-ಫ್ರಾನ್ಸ್ ನಾವೀನ್ಯತಾ ವರ್ಷ’ ಮತ್ತು ‘ಭಾರತ-ಫ್ರಾನ್ಸ್ ನಾವೀನ್ಯತಾ ಜಾಲ’ಕ್ಕೆ ಚಾಲನೆ ನೀಡಲಾಯಿತು.
- ಕರ್ನಾಟಕದ ವೇಮಗಲ್ನಲ್ಲಿ ‘H125 ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ’ವನ್ನು ಉದ್ಘಾಟಿಸಲಾಯಿತು.
- ಭಾರತದಲ್ಲಿ ‘ಹ್ಯಾಮರ್’ ಕ್ಷಿಪಣಿಗಳನ್ನು ಉತ್ಪಾದಿಸಲು ಬಿಇಎಲ್ ಮತ್ತು ಸಫ್ರಾನ್ ಕಂಪನಿಗಳ ನಡುವೆ ಜಂಟಿ ಉದ್ಯಮವನ್ನು ಸ್ಥಾಪಿಸಲಾಗುತ್ತಿದೆ.
- ರಫೇಲ್ ಯುದ್ಧವಿಮಾನಗಳಲ್ಲಿ ಶೇಕಡಾ 50 ರಷ್ಟು “ಸ್ಥಳೀಯ ಪರಿಕರಗಳ” ಬಳಕೆಯನ್ನು ಹೆಚ್ಚಿಸಲು ಹಾಗೂ ಭಾರತದಲ್ಲಿಯೇ ರಫೇಲ್ ನಿರ್ವಹಣೆ, ದುರಸ್ತಿ ಮತ್ತು ನವೀಕರಣ (MRO) ಸೌಲಭ್ಯವನ್ನು ವಿಸ್ತರಿಸಲು ಭಾರತವು ಫ್ರಾನ್ಸ್ಗೆ ಮನವಿ ಮಾಡಿದೆ.
ಭಾರತ-ಫ್ರಾನ್ಸ್ ಸಂಬಂಧಗಳು:
- ಕಾರ್ಯತಂತ್ರದ ಪಾಲುದಾರಿಕೆ:– ಇದು ಜನವರಿ 26, 1998 ರಂದು ಪ್ರಾರಂಭವಾಯಿತು ಮತ್ತು ಇದು ಭಾರತದ ಮೊಟ್ಟಮೊದಲ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ.
- ರಫೇಲ್ ಯುದ್ಧವಿಮಾನಗಳು:- ಭಾರತವು ಡಸಾಲ್ಟ್ ಏವಿಯೇಷನ್ ಕಂಪನಿಯಿಂದ 36 ರಫೇಲ್ ವಿಮಾನಗಳನ್ನು ಖರೀದಿಸಿದೆ.
- ಸ್ಕಾರ್ಪೀನ್ ಜಲಾಂತರ್ಗಾಮಿಗಳು (ಪ್ರಾಜೆಕ್ಟ್ P-75):- ಫ್ರಾನ್ಸ್ನ ನೇವಲ್ ಗ್ರೂಪ್ ನ ಸಹಯೋಗದೊಂದಿಗೆ ಭಾರತದಲ್ಲಿಯೇ 6 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ; ಇದರಲ್ಲಿ ಐಎನ್ಎಸ್ ವಾಗ್ಶೀರ್ ಇತ್ತೀಚಿನದಾಗಿದೆ.
- ರಫೇಲ್-ಎಂ:- ಇತ್ತೀಚಿಗೆ, ಭಾರತೀಯ ನೌಕಾಪಡೆಗಾಗಿ 26 ರಫೇಲ್-ಎಂ ಯುದ್ಧವಿಮಾನಗಳನ್ನು ಖರೀದಿಸಲು ಉಭಯ ದೇಶಗಳು ಅಧಿಕೃತವಾಗಿ ‘ಅಂತರ-ಸರ್ಕಾರಿ ಒಪ್ಪಂದ’ಕ್ಕೆ (IGA) ಸಹಿ ಹಾಕಿವೆ.
- ಜಂಟಿ ಸಮರಾಭ್ಯಾಸಗಳು:- ಶಕ್ತಿ, ವರುಣ, ಮತ್ತು ಫ್ರಿಂಜೆಕ್ಸ್-23.
- ಯುಪಿಐ (UPI):- ಫ್ರಾನ್ಸ್ನಲ್ಲಿ ‘ಏಕೀಕೃತ ಪಾವತಿ ವ್ಯವಸ್ಥೆ’ (UPI) ಯನ್ನು ಅಳವಡಿಸುವ ಪ್ರಕ್ರಿಯೆಯು ಯಶಸ್ವಿಯಾಗಿದೆ.
- ಬಾಹ್ಯಾಕಾಶ ಕಾರ್ಯಾಚರಣೆಗಳು:- ತೃಷ್ಣಾ (TRISHNA – ಉಪಗ್ರಹ ಮಿಷನ್), ಎಂಡಿಎ (MDA) ವ್ಯವಸ್ಥೆಗಳು ಮತ್ತು ಭೂ-ಕೇಂದ್ರ(ಗ್ರೌಂಡ್ ಸ್ಟೇಷನ್)ದ ಬೆಂಬಲ.
- ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA):-
‘ಸಾಹಿ’ (SAHI) ಮತ್ತು ‘ಬೋಧ್’ (BODH) ಉಪಕ್ರಮಗಳು
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇತ್ತೀಚೆಗೆ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026’ ಯಲ್ಲಿ ‘ಸಹಿ’ – ಆರೋಗ್ಯ ರಕ್ಷಣೆಗಾಗಿ ಸುರಕ್ಷಿತ ಕೃತಕ ಬುದ್ಧಿಮತ್ತೆ ಉಪಕ್ರಮ (SAHI – ಸೆಕ್ಯೂರ್ ಫಾರ್ ಹೆಲ್ತ್ ಇನಿಟಿಯಟಿವ್) ಮತ್ತು ‘ಬೋಧ್’ – ಆರೋಗ್ಯ ಕ್ಷೇತ್ರದ ಕೃತಕ ಬುದ್ಧಿಮತ್ತೆಗೆ ಮಾನದಂಡ ನಿಗದಿಪಡಿಸುವ ಮುಕ್ತ ದತ್ತಾಂಶ ವೇದಿಕೆ (BODH- ಬೆಂಚ್ಮಾರ್ಕಿಂಗ್ ಓಪನ್ ಡೇಟಾ ಪ್ಲಾಟ್ ಫಾರಂ ಫಾರ್ ಹೆಲ್ತ್ ಎಐ ) ಎಂಬ ಎರಡು ಪ್ರಮುಖ ಡಿಜಿಟಲ್ ಆರೋಗ್ಯ ಉಪಕ್ರಮಗಳಿಗೆ ಚಾಲನೆ ನೀಡಿದರು.
ಸಹಿ – ಆರೋಗ್ಯ ರಕ್ಷಣೆಗಾಗಿ ಸುರಕ್ಷಿತ ಕೃತಕ ಬುದ್ಧಿಮತ್ತೆ ಉಪಕ್ರಮ (SAHI):
- SAHI ಸಂಪೂರ್ಣ ರೂಪ:- ಸೆಕ್ಯೂರ್ ಫಾರ್ ಹೆಲ್ತ್ ಇನಿಟಿಯಟಿವ್.
- ಈ ಉಪಕ್ರಮವನ್ನು ‘ಭಾರತದ ಆರೋಗ್ಯ ರಕ್ಷಣಾ ವಲಯದಲ್ಲಿ ಕೃತಕ ಬುದ್ಧಿಮತ್ತೆಯ ಕಾರ್ಯತಂತ್ರ’ ಎಂದೂ ಕರೆಯಲಾಗುತ್ತದೆ.
- ಉದ್ದೇಶ:- ದೇಶದ ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಸುರಕ್ಷಿತವಾಗಿ, ನೈತಿಕವಾಗಿ, ಹಾಗೂ ಸಾಕ್ಷ್ಯಾಧಾರಿತವಾಗಿ ಅಳವಡಿಸಿಕೊಳ್ಳುವುದನ್ನು ಖಾತರಿಪಡಿಸುವುದು.
ಬೋಧ್ -ಆರೋಗ್ಯ ಕ್ಷೇತ್ರದ ಕೃತಕ ಬುದ್ಧಿಮತ್ತೆಗೆ ಮಾನದಂಡ ನಿಗದಿಪಡಿಸುವ ಮುಕ್ತ ದತ್ತಾಂಶ ವೇದಿಕೆ (BODH)
- ಬೋಧನೆಯನ್ನ ಸಂಪೂರ್ಣ ರೂಪ:- ಬೆಂಚ್ಮಾರ್ಕಿಂಗ್ ಓಪನ್ ಡೇಟಾ ಪ್ಲಾಟ್ ಫಾರಂ ಫಾರ್ ಹೆಲ್ತ್ ಎಐ.
- ಅಭಿವೃದ್ಧಿಪಡಿಸಿದವರು:- ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (NHA) ಸಹಯೋಗದೊಂದಿಗೆ ‘ಐಐಟಿ ಕಾನ್ಪುರ್’ ಅಭಿವೃದ್ಧಿಪಡಿಸಿದೆ.
- ಉದ್ದೇಶ:- ಇದೊಂದು ವಿಶಿಷ್ಟ ಡಿಜಿಟಲ್ ಮೂಲಸೌಕರ್ಯವಾಗಿದೆ. ಕೃತಕ ಬುದ್ಧಿಮತ್ತೆಯ (AI) ಮಾದರಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸುವ ಮುನ್ನ, ಅವುಗಳ ನಿಖರತೆ ಮತ್ತು ಸುರಕ್ಷತೆಯನ್ನು ಮೌಲ್ಯೀಕರಿಸಲು ಈ ವೇದಿಕೆಯನ್ನು ಬಳಸಲಾಗುತ್ತದೆ.
ಎಐ-ಪ್ರೆನ್ಯೂರ್ಸ್ ಆಫ್ ಇಂಡಿಯಾ (ಭಾರತದ ಕೃತಕ ಬುದ್ದಿಮತ್ತೆ ಉದ್ಯಮಿಗಳು)
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
- “ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ, 2026” ರಲ್ಲಿ ಅಟಲ್ ಇನ್ನೋವೇಶನ್ ಮಿಷನ್ (AIM) ‘ಎಐ-ಪ್ರೆನ್ಯೂರ್ಸ್ ಆಫ್ ಇಂಡಿಯಾ’ ಎಂಬ ವಿನೂತನ ಉಪಕ್ರಮಕ್ಕೆ ಚಾಲನೆ ನೀಡಿದೆ.
- ಈ ವೇದಿಕೆಯು ಭಾರತದ ಉದ್ದೇಶ-ಪ್ರೇರಿತ ಕೃತಕ ಬುದ್ಧಿಮತ್ತೆ (AI) ಪರಿಸರ ವ್ಯವಸ್ಥೆಯ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುತ್ತದೆ.
ಎಐ-ಪ್ರೆನ್ಯೂರ್ಸ್ ಆಫ್ ಇಂಡಿಯಾ ಉಪಕ್ರಮದ ಬಗ್ಗೆ:
- ಇದು ನೀತಿ ಆಯೋಗದ (NITI Aayog) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟಲ್ ಇನ್ನೋವೇಶನ್ ಮಿಷನ್ (AIM) ಆರಂಭಿಸಿರುವ ಒಂದು ಮಹತ್ವಾಕಾಂಕ್ಷೆಯ ಉಪಕ್ರಮವಾಗಿದೆ.
- ಉದ್ದೇಶ:- ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರವರ್ತಕ ಉದ್ಯಮಿಗಳ ಯಶೋಗಾಥೆಯನ್ನು ಗೌರವಿಸುವುದು ಮತ್ತು ಅವರ ನವೋದ್ಯಮದ ಪಯಣವನ್ನು ಅಧಿಕೃತವಾಗಿ ದಾಖಲಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ಉಪಕ್ರಮದ ಪ್ರಮುಖ ಲಕ್ಷಣಗಳು:
- ಪ್ರಕಟಣೆ:- ಇದೊಂದು ಪ್ರಮುಖ ‘ಕಾಫಿ ಟೇಬಲ್ ಪುಸ್ತಕ’ ಆಗಿದ್ದು, ದೇಶದ 45 ಪ್ರವರ್ತಕ ಎಐ ನವೋದ್ಯಮಗಳ ಬೆಳವಣಿಗೆಯ ಇತಿಹಾಸವನ್ನು ದಾಖಲಿಸಿದೆ.
- ಸಂಸ್ಥಾಪಕ-ಕೇಂದ್ರಿತ ಕಥನ:- ಈ ಉಪಕ್ರಮವು ಕೇವಲ ತಾಂತ್ರಿಕ ವರದಿಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ನವೋದ್ಯಮ ಸಂಸ್ಥಾಪಕರ ಪ್ರೇರಣೆ, ಅವರು ಎದುರಿಸಿದ ಸವಾಲುಗಳು ಮತ್ತು ಅವರ ದೃಢನಿಶ್ಚಯದಂತಹ ‘ಮಾನವೀಯ ಅಂಶಗಳ’ ಮೇಲೆ ಇದು ವಿಶೇಷ ಬೆಳಕು ಚೆಲ್ಲುತ್ತದೆ.
- ವಲಯಗಳ ವೈವಿಧ್ಯತೆ:- ಈ ಪುಸ್ತಕದಲ್ಲಿ ಸ್ಥಾನ ಪಡೆದಿರುವ ನವೋದ್ಯಮಗಳು ಆರೋಗ್ಯ, ಕೃಷಿ, ಸುಸ್ಥಿರತೆ, ಶಿಕ್ಷಣ, ಸಾರಿಗೆ ಮತ್ತು ಡೀಪ್ ಟೆಕ್ ಸೇರಿದಂತೆ 30ಕ್ಕೂ ಹೆಚ್ಚು ವಿವಿಧ ವಲಯಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.
- ಭೌಗೋಳಿಕ ಪ್ರಜಾಸತ್ತಾತ್ಮಕೀಕರಣ:- ಈ ಉಪಕ್ರಮವು ಕೇವಲ ಬೆಂಗಳೂರು ಮತ್ತು ಮುಂಬೈನಂತಹ ಸಾಂಪ್ರದಾಯಿಕ ತಂತ್ರಜ್ಞಾನ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. 2ನೇ ಮತ್ತು 3ನೇ (ಟೈಯರ್ 2 ಮತ್ತು ಟೈಯರ್ 3) ಹಂತದ ನಗರಗಳನ್ನು ಒಳಗೊಂಡಂತೆ, ದೇಶಾದ್ಯಂತ ಇರುವ ಅಟಲ್ ಇನ್ಕ್ಯುಬೇಶನ್ ಕೇಂದ್ರಗಳ (AICs) ಜಾಲದಿಂದ ಹೊರಹೊಮ್ಮಿದ ಆವಿಷ್ಕಾರಕರನ್ನು ಇದು ಗುರುತಿಸಿ ಪ್ರೋತ್ಸಾಹಿಸುತ್ತದೆ.
ಜೇನುನೊಣಗಳ ಪರಿಸರ ಮಾರ್ಗ (Bee Corridor)
ಪರಿಸರ
ಇದೀಗ ಸುದ್ದಿಯಲ್ಲಿದೆ:
- ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ದೇಶದ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಮೀಸಲಾದ “ಜೇನುನೊಣಗಳ ಪರಿಸರ ಮಾರ್ಗಗಳನ್ನು” ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿದೆ. ಇದು ದೇಶದಲ್ಲೇ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿರುವ ವಿಶಿಷ್ಟ ಉಪಕ್ರಮವಾಗಿದೆ.
ಜೇನುನೊಣಗಳ ಪರಿಸರ ಮಾರ್ಗ ಎಂದರೇನು?
- ಉದ್ದೇಶ:- ಜೇನುನೊಣಗಳಿಗೆ ಸೂಕ್ತವಾದ ಆಯ್ದ ಹೂಬಿಡುವ ಮರಗಳು ಮತ್ತು ಸಸ್ಯಗಳನ್ನು ಒಳಗೊಂಡ ‘ಜೇನು ನೋಣ-ಸ್ನೇಹಿ ಸಸ್ಯವರ್ಗದ’ ನಿರಂತರ ಮಾರ್ಗಗಳನ್ನು ನಿರ್ಮಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
- ಸಾಂಪ್ರದಾಯಿಕ ಅಲಂಕಾರಿಕ ಗಿಡಗಳನ್ನು ನೆಡುವ ಪದ್ಧತಿಗಿಂತ ಇದು ಭಿನ್ನವಾಗಿದೆ.
- ಈ ಹೊಸ ಮಾರ್ಗಗಳನ್ನು ವರ್ಷಪೂರ್ತಿ ಮಕರಂದ ಮತ್ತು ಪರಾಗವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗುವುದು.
- ಈ ಮೂಲಕ ಪರಾಗಸ್ಪರ್ಶಿಗಳಿಗೆ ಸುಸ್ಥಿರ ಆಹಾರದ ಮೂಲವನ್ನು ಇದು ಖಚಿತಪಡಿಸುತ್ತದೆ.
- NHAI 2026-27ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಸುಮಾರು 40 ಲಕ್ಷ ಮರಗಳನ್ನು ನೆಡಲು ಯೋಜಿಸಿದೆ. ಇದರಲ್ಲಿ ಶೇಕಡ 60ರಷ್ಟು ಸಸಿಗಳನ್ನು ‘ಜೇನುನೊಣಗಳ ಪರಿಸರ ಮಾರ್ಗ’ ಉಪಕ್ರಮದ ಅಡಿಯಲ್ಲಿಯೇ ನೆಡಲಾಗುತ್ತದೆ.
- ಪ್ರಾಮುಖ್ಯತೆ:- ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಿ ಜೀವಿಗಳು ಪ್ರಸ್ತುತ ಎದುರಿಸುತ್ತಿರುವ ಪರಿಸರ ಒತ್ತಡವನ್ನು ತಗ್ಗಿಸಲು ಈ ಉಪಕ್ರಮವು ಅತ್ಯಂತ ಸಹಕಾರಿಯಾಗಲಿದೆ.



ನಿಮ್ಮದೊಂದು ಉತ್ತರ