ಬಾಡಿಗೆ ತಾಯ್ತನ ಕಾಯ್ದೆಯ ಪೂರ್ವಾನ್ವಯದ ಅನ್ವಯಿಸುವಿಕೆ ಕುರಿತು ಸುಪ್ರೀಂ ಕೋರ್ಟ್ ನ ತೀರ್ಪು
ಸಾಮಾನ್ಯ ಅಧ್ಯಾಯನ 2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ಸುಪ್ರೀಂ ಕೋರ್ಟ್, ತನ್ನ ಒಂದು ಮಹತ್ವದ ತೀರ್ಪಿನಲ್ಲಿ, ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ, 2021 ರ ಅಡಿಯಲ್ಲಿ ವಯಸ್ಸಿನ ನಿರ್ಬಂಧಗಳನ್ನು, ಕಾಯ್ದೆ ಜಾರಿಗೆ ಬರುವ ಮೊದಲು ಭ್ರೂಣಗಳನ್ನು ಹೆಪ್ಪುಗಟ್ಟಿಸಿ ಬಾಡಿಗೆ ತಾಯ್ತನದ ಪ್ರಕ್ರಿಯೆಯನ್ನು ಪ್ರಾರಂಭಿಸಿದ ದಂಪತಿಗಳಿಗೆ ಅನ್ವಯಿಸಲಾಗುವುದಿಲ್ಲ ಎಂದು ತೀರ್ಪು ನೀಡಿದೆ.
ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ, 2021 ಯ ಬಗ್ಗೆ:
-
- ಬಾಡಿಗೆ ತಾಯ್ತನ ಎಂದರೆ, ಹೆರಿಗೆಯ ನಂತರ ಮಗುವನ್ನು ಉದ್ದೇಶಿತ ದಂಪತಿಗಳಿಗೆ ಹಸ್ತಾಂತರಿಸುವ ಉದ್ದೇಶದಿಂದ ಮಹಿಳೆಯು ಮಗುವಿಗೆ ಜನ್ಮ ನೀಡುವ ಕ್ರಮ.
- ಇದನ್ನು ಪರಹಿತಚಿಂತನೆಯ ಉದ್ದೇಶಗಳಿಗಾಗಿ ಅಥವಾ ಸಾಬೀತಾದ ಬಂಜೆತನ ಅಥವಾ ಕಾಯಿಲೆಯಿಂದ ಬಳಲುತ್ತಿರುವ ದಂಪತಿಗಳಿಗೆ ಮಾತ್ರ ಅನುಮತಿಸಲಾಗಿದೆ.
- ಮಾರಾಟ, ವೇಶ್ಯಾವಾಟಿಕೆ ಅಥವಾ ಯಾವುದೇ ರೀತಿಯ ಶೋಷಣೆ ಸೇರಿದಂತೆ ವಾಣಿಜ್ಯ ಉದ್ದೇಶಗಳಿಗಾಗಿ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಗಿದೆ.
- ಗರ್ಭಪಾತ: ಅಂತಹ ಭ್ರೂಣದ ಗರ್ಭಪಾತವನ್ನು ಬಾಡಿಗೆ ತಾಯಿ ಮತ್ತು ಅಧಿಕಾರಿಗಳ ಒಪ್ಪಿಗೆಯೊಂದಿಗೆ ಮಾತ್ರ ಅನುಮತಿಸಲಾಗುತ್ತದೆ ಮತ್ತು ವೈದ್ಯಕೀಯ ಗರ್ಭಧಾರಣೆಯ ಮುಕ್ತಾಯ ಕಾಯ್ದೆಯ ನಿಬಂಧನೆಗಳನ್ನು ಪಾಲಿಸಬೇಕು.
- ದಂಪತಿಗಳಿಗೆ ಅರ್ಹತೆ ಮತ್ತು ಷರತ್ತುಗಳು: ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ದಂಪತಿಗಳು ಅರ್ಹತೆ ಮತ್ತು ಅವಶ್ಯಕತೆಯ ಪ್ರಮಾಣಪತ್ರಗಳನ್ನು ಪಡೆಯಬೇಕು. ಅವು ಈ ಕೆಳಗಿನಂತಿವೆ:
- ದಂಪತಿಗಳು ಮದುವೆಯಾಗಿ 5 ವರ್ಷಗಳಾಗಿದ್ದರೆ, ಪತ್ನಿ 23-50 ವರ್ಷ ವಯಸ್ಸಿನವರಾಗಿದ್ದರೆ ಮತ್ತು ಪತಿ 26-55 ವರ್ಷ ವಯಸ್ಸಿನವರಾಗಿದ್ದರೆ ಅವರನ್ನು ‘ಅರ್ಹರು’ ಎಂದು ಪರಿಗಣಿಸಲಾಗುತ್ತದೆ.
- ದಂಪತಿಗಳು ಯಾವುದೇ ಜೀವಂತ ಮಗುವನ್ನು ಹೊಂದಿರಬಾರದು (ಜೈವಿಕ, ದತ್ತು ಅಥವಾ ಬಾಡಿಗೆ ತಾಯಿಯಿಂದ).
- ಮಾನಸಿಕ ಅಥವಾ ದೈಹಿಕ ಅಂಗವೈಕಲ್ಯ ಹೊಂದಿರುವ ಮಗು ಅಥವಾ ಮಾರಣಾಂತಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಗುವನ್ನು ಮೇಲಿನ ಮಾನದಂಡದಿಂದ ವಿನಾಯಿತಿ ನೀಡಲಾಗಿದೆ.
- ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪ್ರಮಾಣೀಕರಿಸಲ್ಪಟ್ಟ ಯಾವುದೇ ಸಂಗಾತಿಯ ಸಾಬೀತಾದ ಬಂಜೆತನದಿಂದ ಬಳಲುತ್ತಿದ್ದರೆ ದಂಪತಿಗಳು ‘ಅಗತ್ಯ’ ಪ್ರಮಾಣಪತ್ರವನ್ನು ಪಡೆಯಬಹುದು .
- ಬಾಡಿಗೆ ತಾಯಿಗೆ 16 ತಿಂಗಳ ವಿಮಾ ರಕ್ಷಣೆಯನ್ನು ಅವರು ಒದಗಿಸಬೇಕು, ಪ್ರಸವಾನಂತರದ ಯಾವುದೇ ತೊಡಕುಗಳನ್ನು ಒಳಗೊಳ್ಳಬೇಕು.
- ಬಾಡಿಗೆ ತಾಯಿಯಾಗುವ ಅರ್ಹತೆಗಳು: ಬಾಡಿಗೆ ತಾಯಿಯು
- ದಂಪತಿಗಳ ಹತ್ತಿರದ ಸಂಬಂಧಿಯಾಗಿರಬೇಕು,
- 25-35 ವರ್ಷ ವಯಸ್ಸಿನವಾರಗಿರಬೇಕು,
- ಸ್ವಂತ ಮಗುವನ್ನು ಹೊಂದಿರುವ ವಿವಾಹಿತ ಮಹಿಳೆಯಾಗಿರಬೇಕು,
- ಅವರು ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ ಬಾಡಿಗೆ ತಾಯಿಯಾಗಿರುತ್ತಾರೆ,
- ಬಾಡಿಗೆ ತಾಯ್ತನದ ವೈದ್ಯಕೀಯ ಮತ್ತು ಮಾನಸಿಕ ಸದೃಢತೆಯ ಪ್ರಮಾಣಪತ್ರವನ್ನು ಸಹ ಹೊಂದಿರಬೇಕು .
- ನಿಯಂತ್ರಣ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ರಾಷ್ಟ್ರೀಯ ಬಾಡಿಗೆ ತಾಯ್ತನದ ಮಂಡಳಿ (NSB) ಮತ್ತು ರಾಜ್ಯ ಬಾಡಿಗೆ ತಾಯ್ತನದ ಮಂಡಳಿಗಳನ್ನು (SSB) ರಚಿಸುತ್ತವೆ .
- ಅಪರಾಧಗಳು: ವಾಣಿಜ್ಯಕ್ಕಾಗಿ ಬಾಡಿಗೆ ತಾಯ್ತನ, ಭ್ರೂಣಗಳ ಮಾರಾಟ, ಶೋಷಣೆ ಮತ್ತು ಬಾಡಿಗೆ ಮಗುವನ್ನು ತೊರೆಯುವುದು ಇತ್ಯಾದಿ ಸೇರಿವೆ.
- ಅಪರಾಧವೆಂದು ಸಾಬಿತಾದರೆ: 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ಗಳವರೆಗೆ ದಂಡವನ್ನು ವಿಧಿಸಬಹುದು .
- ಪ್ರಾಮುಖ್ಯತೆ: ವೈದ್ಯಕೀಯ ಕಾರಣಗಳಿಂದಾಗಿ ಗರ್ಭಧರಿಸಲು ಅಥವಾ ಗರ್ಭಧಾರಣೆಯನ್ನು ಹೊಂದಲು ಸಾಧ್ಯವಾಗದ ವ್ಯಕ್ತಿಗಳು ಮತ್ತು ದಂಪತಿಗಳಿಗೆ ಸಂತಾನೋತ್ಪತ್ತಿ ಆಯ್ಕೆಗಳ ಪ್ರವೇಶವನ್ನು ಈ ಕಾಯಿದೆಯು ವಿಸ್ತರಿಸುತ್ತದೆ.
ವಿಶ್ವ ಮಾನಸಿಕ ಆರೋಗ್ಯ ದಿನ
ಸಾಮಾನ್ಯ ಅಧ್ಯಾಯನ 2/ಆರೋಗ್ಯ
ಸಂದರ್ಭ:
- ಪ್ರತಿ ವರ್ಷ ಅಕ್ಟೋಬರ್ 10 ರಂದು, ವಿಶ್ವ ಮಾನಸಿಕ ಆರೋಗ್ಯ ದಿನವು ಜಗತ್ತಿನಲ್ಲಿ ಮಾನಸಿಕ ಅಸ್ವಸ್ಥತೆಯ ವ್ಯಾಪ್ತಿಯನ್ನು ಎತ್ತಿ ತೋರಿಸುತ್ತದೆ.
- ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕ ಮಾನಸಿಕ ಆರೋಗ್ಯ ಸಮಸ್ಯೆಯು ಒಂದು ಶತಕೋಟಿಗೂ ಹೆಚ್ಚು ಜನರು ಮಾನಸಿಕ ಆರೋಗ್ಯ ಅಸ್ವಸ್ಥತೆಗಳೊಂದಿಗೆ ಬದುಕುತ್ತಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಬಗ್ಗೆ:
- ಸಾಮಾನ್ಯ ಮಾನಸಿಕ ಆರೋಗ್ಯ ಅಸ್ವಸ್ಥತೆಗಳು: -2021 ರಲ್ಲಿ ಎಲ್ಲಾ ಮಾನಸಿಕ ಆರೋಗ್ಯ ಅಸ್ವಸ್ಥತೆಗಳಲ್ಲಿ ಮೂರನೇ ಎರಡರಷ್ಟು ಭಾಗಕ್ಕಿಂತ ಹೆಚ್ಚಿನವು ಆತಂಕ ಮತ್ತು ಖಿನ್ನತೆಯ ಅಸ್ವಸ್ಥತೆಗಳಿಂದ ಉಂಟಾಗಿವೆ.
- ಭಾರತದಲ್ಲಿ ಮಾನಸಿಕ ಆರೋಗ್ಯ : ಭಾರತದಲ್ಲಿ ಜೀವಿತಾವಧಿಯಲ್ಲಿ ಮಾನಸಿಕ ಅಸ್ವಸ್ಥತೆಗಳ ಪ್ರಮಾಣ ಶೇ. 13.7 ರಷ್ಟು ಇದೆ.
- ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (NCRB) ಯ ದತ್ತಾಂಶದ ಪ್ರಕಾರ, 2023 ರಲ್ಲಿ ಭಾರತದಲ್ಲಿ 1,71,418 ಆತ್ಮಹತ್ಯೆಗಳು ವರದಿಯಾಗಿವೆ , ಇದು 2022 ಕ್ಕೆ ಹೋಲಿಸಿದರೆ 0.3% ಹೆಚ್ಚಳವಾಗಿದ್ದು. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ದಾಖಲಾಗಿವೆ .
- ಇನ್ನೂ ಆತಂಕಕಾರಿ ಸಂಗತಿಯೆಂದರೆ, ವಿದ್ಯಾರ್ಥಿಗಳ ಆತ್ಮಹತ್ಯೆಗಳು 13,892 ಕ್ಕೆ ತಲುಪಿದ್ದು, ಕಳೆದ ದಶಕದಲ್ಲಿ ಇದು 64.9% ರಷ್ಟು ಹೆಚ್ಚಾಗಿದೆ.
ಯುವಕರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಏರಿಕೆ:
- ಅತಿಯಾದ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಬಳಕೆ: -ಆತಂಕ, ನಿದ್ರೆಯ ಅಸ್ವಸ್ಥತೆಗಳು ಮತ್ತು ಗಮನಹರಿಸುವ ಸಮಸ್ಯೆಗಳು.
- ಕುಟುಂಬದಲ್ಲಿ ತೊಡಗಿಸಿಕೊಳ್ಳುವಿಕೆಯ ಕೊರತೆ:– ದುರ್ಬಲ ಸಾಮಾಜಿಕ ಬೆಂಬಲವು ಭಾವನಾತ್ಮಕ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
- ಪ್ರತಿಕೂಲ ಕೆಲಸದ ಸ್ಥಳಗಳು ಮತ್ತು ದೀರ್ಘ ಕೆಲಸದ ಅವಧಿ: -ಆಯಾಸ, ಒತ್ತಡ ಮತ್ತು ಉತ್ಪಾದಕತೆ ಕಡಿಮೆಯಾಗಲು ಕಾರಣವಾಗುತ್ತದೆ.
- ಅನಾರೋಗ್ಯಕರ ಜೀವನಶೈಲಿ ಆಯ್ಕೆಗಳು : ಅತಿಯಾಗಿ ಸಂಸ್ಕರಿಸಿದ ಆಹಾರಗಳು ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹದಗೆಡಿಸುತ್ತದೆ.
ಹೀಗೆ ಮಾನಸಿಕ ಯೋಗಕ್ಷೇಮವನ್ನು ಅರ್ಥಮಾಡಿಕೊಳ್ಳುವುದು:- ಭಾರತದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯು ಮಾನಸಿಕ ಯೋಗಕ್ಷೇಮವನ್ನು ಬಹು ಆಯಾಮದ ಪರಿಕಲ್ಪನೆಯಾಗಿ ವ್ಯಾಖ್ಯಾನಿಸುತ್ತದೆ, ಅದು ಇವುಗಳನ್ನು ಒಳಗೊಂಡಿದೆ:
- ಭಾವನಾತ್ಮಕ ಆರೋಗ್ಯ:- ಒತ್ತಡ ಮತ್ತು ಭಾವನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
- ಸಾಮಾಜಿಕ ಆರೋಗ್ಯ:- ಆರೋಗ್ಯಕರ ಸಂಬಂಧಗಳು ಮತ್ತು ಬೆಂಬಲ ನೀಡುವ ಸಮುದಾಯವನ್ನು ನಿರ್ಮಿಸುವುದು.
- ಅರಿವಿನ ಆರೋಗ್ಯ:- ಗಮನ, ನಿರ್ಧಾರ ತೆಗೆದುಕೊಳ್ಳುವ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯಗಳನ್ನು ಹೆಚ್ಚಿಸುವುದು.
- ದೈಹಿಕ ಆರೋಗ್ಯ:- ಆರೋಗ್ಯಕರ ಜೀವನಶೈಲಿಯ ಮೂಲಕ ಒಟ್ಟಾರೆ ಯುಕ್ತತೆಯನ್ನು ಕಾಪಾಡಿಕೊಳ್ಳುವುದು.
ಭಾರತ ಸರ್ಕಾರದ ಪ್ರಮುಖ ಉಪಕ್ರಮಗಳು:
- ಮಾನಸಿಕ ಆರೋಗ್ಯ ಕಾಯ್ದೆ, 2017:- ಈ ಕಾಯ್ದೆಯು ಭಾರತದಲ್ಲಿ ಆತ್ಮಹತ್ಯೆ ಪ್ರಯತ್ನಗಳನ್ನು ಅಪರಾಧವಲ್ಲ ಎಂದು ಹೇಳುತ್ತದೆ ಮತ್ತು ಮಾನಸಿಕ ಅಸ್ವಸ್ಥತೆಗಳ ವರ್ಗೀಕರಣದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಸಹ ಒಳಗೊಂಡಿತ್ತು.
- “ಮುಂಗಡ ನಿರ್ದೇಶನಗಳು”, ಇದು ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ತಮ್ಮ ಚಿಕಿತ್ಸೆಯನ್ನು ನಿರ್ಧರಿಸಲು ಅವಕಾಶ ಮಾಡಿಕೊಟ್ಟಿತು.
- ಇದು ವಿದ್ಯುತ್ ಆಘಾತ ಚಿಕಿತ್ಸೆ (ಎಲೆಕ್ಟ್ರೋ-ಕನ್ವಲ್ಸಿವ್ ಥೆರಪಿ – ECT) ಯ ಬಳಕೆಯನ್ನು ನಿರ್ಬಂಧಿಸಿತು ಮತ್ತು ಅಪ್ರಾಪ್ತ ವಯಸ್ಕರ ಮೇಲೆ ಅದರ ಬಳಕೆಯನ್ನು ನಿಷೇಧಿಸಿತು, ಭಾರತೀಯ ಸಮಾಜದಲ್ಲಿನ ಕಳಂಕವನ್ನು ನಿಭಾಯಿಸಲು ಕ್ರಮಗಳನ್ನು ಪರಿಚಯಿಸಿತು.
- ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2017:– ಈ ಕಾಯ್ದೆಯು ಮಾನಸಿಕ ಅಸ್ವಸ್ಥತೆಯನ್ನು ಅಂಗವೈಕಲ್ಯವೆಂದು ಒಪ್ಪಿಕೊಳ್ಳುತ್ತದೆ ಮತ್ತು ಅಂಗವಿಕಲರ ಹಕ್ಕುಗಳು ಮತ್ತು ಅರ್ಹತೆಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.
- ಸುಖದೇವ್ ಸಹಾ vs ಆಂಧ್ರಪ್ರದೇಶ ರಾಜ್ಯ ಪ್ರಕರಣದಲ್ಲಿ , ಸುಪ್ರೀಂ ಕೋರ್ಟ್ ಮಾನಸಿಕ ಆರೋಗ್ಯವನ್ನು ವಿಧಿ 21 ರ ಅಡಿಯಲ್ಲಿ ಮೂಲಭೂತ ಹಕ್ಕಾಗಿ ಬಲಪಡಿಸಿತು.
- ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (DMHP):- 767 ಜಿಲ್ಲೆಗಳಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ, ಒತ್ತಡ ನಿರ್ವಹಣೆ ಮತ್ತು ಸಮಾಲೋಚನೆಯಂತಹ ಸೇವೆಗಳನ್ನು ನೀಡಲಾಗುತ್ತಿದೆ .
- ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ (NTMHP): 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 53 ಟೆಲಿ ಮಾನಸ್ ಕೋಶಗಳ ಮೂಲಕ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲು 2022 ರಲ್ಲಿ ಪ್ರಾರಂಭಿಸಲಾಯಿತು .
ಅಟಕಾಮಾ ಮರುಭೂಮಿ
ಸಾಮಾನ್ಯ ಅಧ್ಯಾಯನ 1/ ಭೂಗೋಳಶಾಸ್ತ್ರ

ಇದೀಗ ಸುದ್ದಿಯಲ್ಲಿದೆ:
- ಚಿಲಿಯ ಅಟಕಾಮಾ ಮರುಭೂಮಿಯಲ್ಲಿ ಅಪರೂಪದ ಚಳಿಗಾಲದ ಮಳೆಯಾಗಿದೆ.
ಅಟಕಾಮಾ ಮರುಭೂಮಿಯ ಬಗ್ಗೆ:
- ಸ್ಥಳ: ಇದು ಉತ್ತರ ಚಿಲಿಯಲ್ಲಿರುವ ವಿಶ್ವದ ಅತ್ಯಂತ ಒಣ ಮರುಭೂಮಿಯಾಗಿದೆ.
- ಪೂರ್ವದಲ್ಲಿ ಆಂಡಿಸ್ ಪರ್ವತಗಳು ಮತ್ತು ಪಶ್ಚಿಮದಲ್ಲಿ ಪೆಸಿಫಿಕ್ ಮಹಾಸಾಗರದ ನಡುವೆ ನೆಲೆಗೊಂಡಿದೆ .
- ಇದು ಚಿಲಿಯ ಉತ್ತರದ ಮೂರನೇ ಭಾಗದ ಕಿರಿದಾದ ಕರಾವಳಿಯಲ್ಲಿ ಸುಮಾರು 1,000 ಕಿ.ಮೀ.ಗಳವರೆಗೆ ನಿರಂತರವಾಗಿ ಪಟ್ಟಿಯನ್ನು ರೂಪಿಸುತ್ತದೆ.
- ಗಡಿರೇಖೆ: ಇದು ಅರ್ಜೆಂಟೀನಾ, ಪೆರು ಮತ್ತು ಬೊಲಿವಿಯಾಗಳಿಂದ ಸುತ್ತುವರೆದಿದೆ.
- ಇದು 12 ಜ್ವಾಲಾಮುಖಿಗಳನ್ನು ಸಹ ಹೊಂದಿದೆ, ಮುಖ್ಯವಾಗಿ ಆಂಡಿಸ್ನ ಪಶ್ಚಿಮ ಹೊರವಲಯದಲ್ಲಿದೆ.
- ಮಳೆ: ಈ ಪ್ರದೇಶದಲ್ಲಿ ಸರಾಸರಿ ಮಳೆ ವರ್ಷಕ್ಕೆ ಸುಮಾರು 1 ಮಿ.ಮೀ.. ಮರುಭೂಮಿಯೊಳಗಿನ ಕೆಲವು ಸ್ಥಳಗಳಲ್ಲಿ ಇದುವರೆಗೆ ಮಳೆಯಾಗಿಲ್ಲ.
- ತಾಪಮಾನ: ವರ್ಷವಿಡೀ ತಾಪಮಾನವು ತುಲನಾತ್ಮಕವಾಗಿ ಸೌಮ್ಯವಾಗಿರುತ್ತದೆ. ಮರುಭೂಮಿಯಲ್ಲಿ ಸರಾಸರಿ ತಾಪಮಾನವು ಸುಮಾರು 63 ಡಿಗ್ರಿ ಫ್ಯಾರನ್ಹೀಟ್ (18 ಡಿಗ್ರಿ ಸೆಲ್ಸಿಯಸ್).
- ನೈಸರ್ಗಿಕ ಸಂಪನ್ಮೂಲಗಳು: ಈ ಪ್ರದೇಶವು ಸೋಡಿಯಂ ನೈಟ್ರೇಟ್ನ ಅತಿದೊಡ್ಡ ನೈಸರ್ಗಿಕ ಪೂರೈಕೆಯನ್ನು ಹೊಂದಿದೆ , ಇದನ್ನು ರಸಗೊಬ್ಬರಗಳು ಮತ್ತು ಸ್ಫೋಟಕಗಳನ್ನು ಉತ್ಪಾದಿಸಲು ಬಳಸಬಹುದು.
- ಚಿಂಚೊರೊ ಮಮ್ಮಿಗಳು:- ಅಟಕಾಮಾ ಮರುಭೂಮಿಯಲ್ಲಿ ಅತ್ಯಂತ ಹಳೆಯ ಕೃತಕ ಮಮ್ಮಿ ಮಾಡಲಾದ ಮಾನವ ಅವಶೇಷಗಳು ಕಂಡುಬಂದಿವೆ.
ಆಫ್ರಿಕಾದ ದೊಡ್ಡದಾದ ಹಸಿರು ಗೋಡೆ (ಗ್ರೇಟ್ ಗ್ರೀನ್ ವಾಲ್) ಯೋಜನೆ
ಸಾಮಾನ್ಯ ಅಧ್ಯಾಯನ 2/ ಅಂತರರಾಷ್ಟ್ರೀಯ ಸಂಬಂಧಗಳು


ಇದೀಗ ಸುದ್ದಿಯಲ್ಲಿದೆ:
- ಆಫ್ರಿಕಾದಾದ್ಯಂತ ಹತ್ತು ಕೋಟಿ ಹೆಕ್ಟೇರ್ ಭೂಮಿಯನ್ನು ಪುನಃಸ್ಥಾಪಿಸುವ ಮಹತ್ವಾಕಾಂಕ್ಷೆಯ ಗುರಿಗಳ ಹೊರತಾಗಿಯೂ, ದೊಡ್ಡದಾದ ಹಸಿರು ಗೋಡೆ ಯೋಜನೆಯು ಸೆನೆಗಲ್ನಲ್ಲಿ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ.
ಆಫ್ರಿಕಾದ ದೊಡ್ಡದಾದ ಹಸಿರು ಗೋಡೆ (ಗ್ರೇಟ್ ಗ್ರೀನ್ ವಾಲ್) ಯೋಜನೆಯ ಬಗ್ಗೆ:
- 2007 ರಲ್ಲಿ ಆಫ್ರಿಕಾದ ಒಕ್ಕೂಟದಿಂದ ಪ್ರಾರಂಭಿಸಲಾಯಿತು.
- ಉದ್ದೇಶ:- ಹಸಿರು ಮತ್ತು ಉತ್ಪಾದಕ ಭೂದೃಶ್ಯಗಳ ಮೊಸಾಯಿಕ್ ಅನ್ನು ರಚಿಸುವ ಮೂಲಕ ಸಹೇಲ್ ಪ್ರದೇಶದಾದ್ಯಂತ ಮರುಭೂಮೀಕರಣ ಮತ್ತು ಭೂ ಅವನತಿಯನ್ನು ಎದುರಿಸುವ ಗುರಿಯನ್ನು ಇದು ಹೊಂದಿದೆ .
ದೊಡ್ಡದಾದ ಹಸಿರು ಗೋಡೆಯ ಪ್ರಮುಖ ಅಂಶಗಳು:
- ಸ್ಥಳ : ಈ ಯೋಜನೆಯು ಆಫ್ರಿಕಾದಾದ್ಯಂತ ವ್ಯಾಪಿಸಿರುವ ಅರೆ-ಶುಷ್ಕ ವಲಯವಾದ ಸಹೇಲ್ ಪ್ರದೇಶದ ಮೇಲೆ ಕೇಂದ್ರೀಕರಿಸುತ್ತದೆ, ಇದು ಉತ್ತರಕ್ಕೆ ಸಹಾರಾ ಮರುಭೂಮಿ ಮತ್ತು ದಕ್ಷಿಣಕ್ಕೆ ಸವನ್ನಾಗಳ ನಡುವೆ ಪರಿವರ್ತನೆಯನ್ನು ರೂಪಿಸುತ್ತದೆ .
- ಒಳಗೊಂಡಿರುವ ದೇಶಗಳು:- ಮೂಲತಃ 11 ದೇಶಗಳನ್ನು ಒಳಗೊಂಡಿದ್ದ ಈ ಉಪಕ್ರಮವು ಈಗ ಆಫ್ರಿಕಾದಾದ್ಯಂತ 20 ಕ್ಕೂ ಹೆಚ್ಚು ರಾಷ್ಟ್ರಗಳನ್ನು ಒಳಗೊಂಡಿದೆ, ಪಶ್ಚಿಮದಲ್ಲಿ ಸೆನೆಗಲ್ನಿಂದ ಪೂರ್ವದಲ್ಲಿ ಜಿಬೌಟಿವರೆಗೆ. ಭಾಗವಹಿಸುವ ಪ್ರಮುಖ ದೇಶಗಳಲ್ಲಿ ಬುರ್ಕಿನಾ ಫಾಸೊ, ಚಾಡ್, ಜಿಬೌಟಿ, ಎರಿಟ್ರಿಯಾ, ಇಥಿಯೋಪಿಯಾ, ಮಾಲಿ, ಮೌರಿಟಾನಿಯಾ, ನೈಜರ್, ನೈಜೀರಿಯಾ ಮತ್ತು ಸುಡಾನ್ ಸೇರಿವೆ.
ಉದ್ದೇಶಗಳು:
- ಭೂ ಪುನಃಸ್ಥಾಪನೆ:- 2030 ರ ವೇಳೆಗೆ ಹತ್ತು ಕೋಟಿ (100 ಮಿಲಿಯನ್) ಹೆಕ್ಟೇರ್ ಕ್ಷೀಣಿಸಿದ ಭೂಮಿಯನ್ನು ಪುನಃಸ್ಥಾಪಿಸುವುದು.
- ಹವಾಮಾನ ಬದಲಾವಣೆ ತಗ್ಗಿಸುವಿಕೆ: ವಾತಾವರಣದಿಂದ 250 ಮಿಲಿಯನ್ ಟನ್ ಇಂಗಾಲವನ್ನು ಬೇರ್ಪಡಿಸುವುದು.
- ಜೀವನೋಪಾಯ ಸುಧಾರಣೆ: ಸ್ಥಳೀಯ ಸಮುದಾಯಗಳಿಗೆ 1 ಕೋಟಿ (10 ಮಿಲಿಯನ್) ಹಸಿರು ಉದ್ಯೋಗಗಳನ್ನು ಸೃಷ್ಟಿಸುವುದು, ಆಹಾರ ಭದ್ರತೆಯನ್ನು ಹೆಚ್ಚಿಸುವುದು ಮತ್ತು ಬಡತನವನ್ನು ಕಡಿಮೆ ಮಾಡುವುದು.
ಆಫ್ರಿಕಾದ ಒಕ್ಕೂಟದ ಬಗ್ಗೆ:
- ಇದು ಆಫ್ರಿಕಾ ಖಂಡದ ದೇಶಗಳನ್ನು ರೂಪಿಸುವ 55 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಒಂದು ಭೂಖಂಡದ ಸಂಸ್ಥೆಯಾಗಿದೆ .
- ಇದನ್ನು ಅಧಿಕೃತವಾಗಿ 2002 ರಲ್ಲಿ ಆಫ್ರಿಕಾದ ಅಖಂಡತೆ ಸಂಘಟನೆಯ (OAU, 1963-1999) ಉತ್ತರಾಧಿಕಾರಿಯಾಗಿ ಪ್ರಾರಂಭಿಸಲಾಯಿತು.
- ಗುರಿ: ಆಫ್ರಿಕಾದ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಆಫ್ರಿಕಾ ದೇಶಗಳ ಏಕೀಕರಣ.
ವಿಶ್ವಸಂಸ್ಥೆಯು ತನ್ನ ಜಾಗತಿಕ ಶಾಂತಿಪಾಲನಾ ಪಡೆಯ 25% ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಲಿದೆ
ಸಾಮಾನ್ಯ ಅಧ್ಯಾಯನ 2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ವಿಶ್ವಸಂಸ್ಥೆಯು ತನ್ನ ಜಾಗತಿಕ ಶಾಂತಿಪಾಲನಾ ಪಡೆಯನ್ನು ಶೇ.25 ರಷ್ಟು ಕಡಿಮೆ ಮಾಡಲಿದೆ, ಅಮೆರಿಕದ ನಿಧಿ ಕಡಿತದಿಂದಾಗಿ ಒಂಬತ್ತು ಕಾರ್ಯಾಚರಣೆಗಳಿಂದ 13,000–14,000 ಸಿಬ್ಬಂದಿ ಹಿಂದೆ ಸರಿಯುವ ನಿರೀಕ್ಷೆಯಿದೆ.
ವಿಶ್ವಸಂಸ್ಥೆಯ ಶಾಂತಿಪಾಲಕರ ಬಗ್ಗೆ:
- “ನೀಲಿ ಶಿರಸ್ತರ (ಬ್ಲೂ ಹೆಲ್ಮೆಟ್ಗಳು)” ಎಂದು ಸಾಮಾನ್ಯವಾಗಿ ಕರೆಯಲ್ಪಡುತ್ತಾರೆ.
- ಅವರು ವಿಶ್ವಸಂಸ್ಥೆಯಿಂದ ನಿಯೋಜಿಸಲ್ಪಟ್ಟ ಸೇನೆ, ಆರಕ್ಷಣೆ ಮತ್ತು ನಾಗರಿಕ ಸಿಬ್ಬಂದಿ.
- ಉದ್ದೇಶ:- ದೇಶಗಳು ಸಂಘರ್ಷದಿಂದ ಶಾಂತಿಯತ್ತ ಪರಿವರ್ತನೆಗೊಳ್ಳಲು ಸಹಾಯ ಮಾಡುವುದು.
- ಕರ್ತವ್ಯಗಳು:- ಇದು ನಾಗರಿಕರನ್ನು ರಕ್ಷಿಸುವುದು, ಸಂಘರ್ಷವನ್ನು ತಡೆಗಟ್ಟುವುದು, ಭದ್ರತೆಯನ್ನು ಬಲಪಡಿಸುವುದು ಮತ್ತು ಶಾಂತಿ ಪ್ರಕ್ರಿಯೆಗಳನ್ನು ಬೆಂಬಲಿಸುವುದನ್ನು ಒಳಗೊಂಡಿದೆ.
- ಶಾಂತಿಪಾಲನಾ ಕಾರ್ಯಾಚರಣೆಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಧಿಕೃತಗೊಳಿಸಿದೆ ಮತ್ತು ಸದಸ್ಯ ರಾಷ್ಟ್ರಗಳಿಂದ ಬೆಂಬಲಿತವಾಗಿದೆ, ಪ್ರಪಂಚದಾದ್ಯಂತದ ಅನೇಕ ದೇಶಗಳಿಂದ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ.
ಸಕ್ಷಮ್
ಸಾಮಾನ್ಯ ಅಧ್ಯಾಯನ 3/ರಕ್ಷಣಾ ವ್ಯವಸ್ಥೆ

ಇದೀಗ ಸುದ್ದಿಯಲ್ಲಿದೆ:
- ಭಾರತೀಯ ಸೇನೆಯು ಸಕ್ಷಮ್ (ಚಲನಶೀಲ ಮೃದು ಮತ್ತು ಕಠಿಣವಾಗಿ ಕೊಲ್ಲುವ ಸ್ವತ್ತುಗಳ ನಿರ್ವಹಣೆಗಾಗಿ ಸಾಂದರ್ಭಿಕ ಅರಿವು) ಖರೀದಿಯನ್ನು ಪ್ರಾರಂಭಿಸಿದೆ.
ಸಕ್ಷಾಮ್ (Saksham) ನ ಬಗ್ಗೆ:
- ಇದು ಉದಯೋನ್ಮುಖ ಡ್ರೋನ್ ಬೆದರಿಕೆಗಳ ವಿರುದ್ಧ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಪ್ರತಿ -ಮಾನವರಹಿತ ವೈಮಾನಿಕ ವ್ಯವಸ್ಥೆ (CUAS) ಜಾಲದ ವ್ಯವಸ್ಥೆಯಾಗಿದೆ.
- ಇದು ಮಾದರಿ ಆಜ್ಞೆ ಮತ್ತು ನಿಯಂತ್ರಣ (C2) ವ್ಯವಸ್ಥೆಯಾಗಿದ್ದು, ಇದು ಯುದ್ಧತಂತ್ರದ ಯುದ್ಧಭೂಮಿ ಸ್ಥಳ (TBS) ಅನ್ನು ಸುರಕ್ಷಿತವಾಗಿರಿಸಲು ನೈಜ-ಸಮಯದ ಸಂವೇದಕ ದತ್ತಾoಶ, AI-ಚಾಲಿತ ವಿಶ್ಲೇಷಣೆ ಮತ್ತು ಕೌಂಟರ್-ಡ್ರೋನ್ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ .
- ಭಾರತ ಎಲೆಕ್ಟ್ರಾನಿಕ್ಸ್ ನಿಯಮಿತ (BEL) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.



ನಿಮ್ಮದೊಂದು ಉತ್ತರ