ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)
ಸಾಮಾನ್ಯ ಅಧ್ಯಯನ- 3/ಕೃಷಿ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಕೃಷಿ ಸಚಿವಾಲಯವು ಪ್ರಸ್ತುತ ಜಾರಿಯಲ್ಲಿರುವ ಮೂರು ಪ್ರತ್ಯೇಕ ಯೋಜನೆಗಳನ್ನು, ತನ್ನ ಪ್ರಮುಖ ಯೋಜನೆಯಾದ ‘ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ (PM-RKVY)ಯೊಂದಿಗೆ ವಿಲೀನಗೊಳಿಸಲು ಪ್ರಸ್ತಾಪಿಸಿದೆ.
PM-RKVY ಯೋಜನೆಯೊಂದಿಗೆ ವಿಲೀನಗೊಳ್ಳಲಿರುವ ಯೋಜನೆಗಳು:
- ಕೃಷೋನ್ನತಿ ಯೋಜನೆ (KY) – ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಕಾರ್ಯಯೋಜನೆ (NMNF). ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- ರಾಷ್ಟ್ರೀಯ ಜೇನು ಮತ್ತು ಜೇನುತುಪ್ಪ ಕಾರ್ಯಯೋಜನೆ (NBHM). ಕೇಂದ್ರ ವಲಯದ ಯೋಜನೆಯಾಗಿದೆ.
|
ಗಮನಿಸಿ: ಕೇಂದ್ರ ಪ್ರಾಯೋಜಿತ ಯೋಜನೆ:- ಇವುಗಳಿಗೆ ಕೇಂದ್ರ ಮತ್ತು ರಾಜ್ಯಗಳೆರಡೂ ಜಂಟಿಯಾಗಿ ನಿಧಿಯನ್ನು ಒದಗಿಸುತ್ತವೆ ಹಾಗೂ ರಾಜ್ಯ ಸರ್ಕಾರಗಳು ಇವುಗಳನ್ನು ಅನುಷ್ಠಾನಗೊಳಿಸುತ್ತವೆ. ಕೇಂದ್ರ ವಲಯದ ಯೋಜನೆ:- ಇದಕ್ಕೆ ಸಂಪೂರ್ಣ ನಿಧಿ ಮತ್ತು ಅನುಷ್ಠಾನವನ್ನು ಕೇಂದ್ರ ಸರ್ಕಾರವೇ ನಿರ್ವಹಿಸುತ್ತದೆ. |
ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)ಯ ಬಗ್ಗೆ:
- 2007 ರಲ್ಲಿ ಪ್ರಾರಂಭವಾದ ಸಮಗ್ರ ಯೋಜನೆ:- ಕೃಷಿ ಮತ್ತು ಅದರ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಾರಂಭಿಸಲಾಗಿದೆ.
- ನೋಡಲ್ ಸಚಿವಾಲಯ:- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ.
- ಹಣಕಾಸಿನ ಹಂಚಿಕೆ:- ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಉದ್ದೇಶ:- ಇದು ಜಿಲ್ಲಾ ಅಥವಾ ರಾಜ್ಯ ಕೃಷಿ ಯೋಜನೆಯ ಪ್ರಕಾರ, ತಮ್ಮದೇ ಆದ ಕೃಷಿ ಮತ್ತು ಪೂರಕ ವಲಯದ ಅಭಿವೃದ್ಧಿ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ರಾಜ್ಯಗಳಿಗೆ ಅನುವು ಮಾಡಿಕೊಡುತ್ತದೆ.



ನಿಮ್ಮದೊಂದು ಉತ್ತರ