ನಮಸ್ತೆ (NAMASTE) ಯೋಜನೆ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ NAMASTE (‘ನಮಸ್ತೆ’- ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾಯೋಜನೆ) ಯೋಜನೆಯ ಅಡಿಯಲ್ಲಿ ತ್ಯಾಜ್ಯ ಸಂಗ್ರಹಿಸುವವರ ರಾಷ್ಟ್ರಮಟ್ಟದ ಗಣತಿ ದತ್ತಾಂಶವನ್ನು ಬಿಡುಗಡೆ ಮಾಡಿದೆ.
ನಮಸ್ತೆ (NAMASTE) ಯೋಜನೆಯ ಬಗ್ಗೆ:
- NAMASTE ಸಂಕ್ಷಿಪ್ತ ರೂಪ:- ನ್ಯಾಷನಲ್ ಆಕ್ಷನ್ ಫಾರ್ ಮೆಕ್ಯಾನೈಸ್ಡ್ ಸ್ಯಾನಿಟೇಷನ್ ಏಕೋಸಿಸ್ಟಮ್ (ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾಯೋಜನೆ).
- ಪ್ರಾರಂಭ:- ಜುಲೈ 2023.
- ಹಣಕಾಸು:- ಕೇಂದ್ರ ವಲಯದ ಯೋಜನೆಯಾಗಿದೆ.
- ಅನುಷ್ಠಾನ ಸಚಿವಾಲಯ:- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ.
- ಉದ್ದೇಶಗಳು:-
- ನೈರ್ಮಲ್ಯ ಕಾರ್ಯಗಳಲ್ಲಿ ಶೂನ್ಯ ಮರಣ ಪ್ರಮಾಣವನ್ನು ಖಚಿತಪಡಿಸುವುದು.
- ಎಲ್ಲಾ ನೈರ್ಮಲ್ಯ ಕಾರ್ಯಾಚರಣೆಗಳನ್ನು ಕೌಶಲ್ಯಯುತ ಕಾರ್ಮಿಕರಿಂದಲೇ ನಿರ್ವಹಿಸುವುದು.
- ಮಾನವ ತ್ಯಾಜ್ಯದೊಂದಿಗೆ ಯಾರಿಗೂ ನೇರ ಸಂಪರ್ಕ ಇರದಂತೆ ನೋಡುವುದು.
- ಮಲಹೊರುವ ಪದ್ಧತಿಯಲ್ಲಿ ತೊಡಗಿರುವವರಿಗೆ ಪುನರ್ವಸತಿ ಕಲ್ಪಿಸುವುದು.
- ಮಹತ್ವ: ಇದು ಸುಸ್ಥಿರ ಅಭಿವೃದ್ಧಿ ಗುರಿ 6 (SDG 6 – ಶುದ್ಧ ನೀರು ಮತ್ತು ನೈರ್ಮಲ್ಯ) ರೊಂದಿಗೆ ಅನುಗುಣವಾಗಿದೆ ಮತ್ತು ನೈರ್ಮಲ್ಯ ಕಾರ್ಮಿಕರ ಘನತೆ ಹಾಗೂ ಸುರಕ್ಷತೆಯನ್ನು ಉತ್ತೇಜಿಸುತ್ತದೆ.
ಪ್ರಮುಖ ಉಪಕ್ರಮಗಳು:
- ವಿವರ ಸಂಗ್ರಹ:- ಒಳಚರಂಡಿ ಮತ್ತು ಮಲತ್ಯಾಜ್ಯ ತೊಟ್ಟಿ ಕಾರ್ಮಿಕರ (SSWs) ಡಿಜಿಟಲ್ ವಿವರಗಳನ್ನು ಸಂಗ್ರಹಿಸುವುದು..
- ಸುರಕ್ಷತೆ:- ಕಾರ್ಮಿಕರಿಗೆ ವೈಯಕ್ತಿಕ ರಕ್ಷಣಾ ಕವಚಗಳು (ಪಿಪಿಇ ಕಿಟ್ಗಳು), ಸುರಕ್ಷತಾ ಸಾಧನಗಳು ಮತ್ತು ತರಬೇತಿಯನ್ನು ಒದಗಿಸುವುದು.
- ಸಬಲೀಕರಣ:- ನೈರ್ಮಲ್ಯ ಯಂತ್ರೋಪಕರಣಗಳನ್ನು ಖರೀದಿಸಲು ಬಂಡವಾಳ ಸಹಾಯಧನ ನೀಡುವ ಮೂಲಕ ಅವರನ್ನು “ನೈರ್ಮಲ್ಯ ಉದ್ಯಮಿಗಳನ್ನಾಗಿ” ಮಾಡುವುದು.
- ಆರೋಗ್ಯ:- ವೃತ್ತಿಪರ ಸುರಕ್ಷತಾ ತರಬೇತಿ ಮತ್ತು ಆರೋಗ್ಯ ವಿಮೆಯನ್ನು ಒದಗಿಸುವುದು.
ಉರ್ಮಿಯಾ ಸರೋವರ (Lake Urmia)
ಸುದ್ದಿಯಲ್ಲಿರುವ ಸ್ಥಳಗಳು

ಇದೀಗ ಸುದ್ದಿಯಲ್ಲಿದೆ:
- ದಶಕಗಳಲ್ಲೇ ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ಅಧಿಕಾರಿಗಳು ಉರ್ಮಿಯಾ ಸರೋವರದ ಜಲಾನಯನ ಪ್ರದೇಶದಲ್ಲಿ ಕೃತಕ ಮಳೆಯನ್ನು ಉಂಟುಮಾಡಲು ‘ಮೋಡ ಬಿತ್ತನೆ’ ತಂತ್ರಜ್ಞಾನದ ಮೊರೆಹೋಗಿದ್ದಾರೆ.
‘ಉರ್ಮಿಯಾ ಸರೋವರ’ ದ ಬಗ್ಗೆ:
- ಇದು ವಾಯುವ್ಯ ಇರಾನಿನ ಅಜರ್ಬೈಜಾನ್ ಪ್ರದೇಶದಲ್ಲಿದೆ ಮತ್ತು ಪೂರ್ವ ಅಜರ್ಬೈಜಾನ್ ಹಾಗೂ ಪಶ್ಚಿಮ ಅಜರ್ಬೈಜಾನ್ ಪ್ರಾಂತ್ಯಗಳ ನಡುವೆ ನೆಲೆಗೊಂಡಿದೆ.
- ಅಧಿಕ ಬಾಷ್ಪೀಕರಣದ ದರವು ಇದನ್ನು ತೀವ್ರವಾಗಿ ಲವಣಯುಕ್ತವಾಗಿಸಿವೆ.
- ವೈಶಿಷ್ಟ್ಯ:- ಇದು ಮಧ್ಯಪ್ರಾಚ್ಯದ ಅತಿದೊಡ್ಡ ಸರೋವರವಾಗಿದೆ.
- ರಾಮ್ಸರ್ ಜೌಗು ಪ್ರದೇಶ ಮತ್ತು ಯುನೆಸ್ಕೋ ಜೀವಗೋಳ ಮೀಸಲು ತಾಣವಾಗಿ ಗುರುತಿಸಲ್ಪಟ್ಟಿರುವ ಈ ಸರೋವರವು, 1990 ರ ದಶಕದಿಂದೀಚೆಗೆ ಗಣನೀಯವಾಗಿ ಕ್ಷೀಣಿಸಿದೆ.
ರಫಾ ಗಡಿ (Rafah border)
ಸುದ್ದಿಯಲ್ಲಿರುವ ಸ್ಥಳಗಳು

ಇದೀಗ ಸುದ್ದಿಯಲ್ಲಿದೆ:
-
- ಅನೇಕ ತಿಂಗಳುಗಳ ಕಾಲ ಮುಚ್ಚಲ್ಪಟ್ಟಿದ್ದ ಗಾಜಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿ ದ್ವಾರ (ಕ್ರಾಸಿಂಗ್) ವನ್ನು, ಸೀಮಿತ ನಾಗರಿಕ ಸಂಚಾರಕ್ಕಾಗಿ ಇಸ್ರೇಲ್ ಮರುತೆರೆದಿದೆ.
- ಮೇ 2024 ರಲ್ಲಿ ಗಾಜಾದ ಕಡೆಯ ಭಾಗವನ್ನು ಇಸ್ರೇಲ್ ಪಡೆಗಳು ವಶಪಡಿಸಿಕೊಂಡ ನಂತರ, ಈ ಗಡಿ ದ್ವಾರವು ಬಹುತೇಕ ಮುಚ್ಚಲ್ಪಟ್ಟಿತ್ತು.
ಗಾಜಾಗೆ ರಫಾ ಗಡಿ ಏಕೆ ಮುಖ್ಯವಾಗಿದೆ?
- ಸ್ಥಾನ:- ರಫಾ ಗಡಿಯು ಗಾಜಾ-ಈಜಿಪ್ಟ್ ಗಡಿಯಲ್ಲಿದೆ; ಇದು 1979 ರ ಈಜಿಪ್ಟ್-ಇಸ್ರೇಲ್ ಶಾಂತಿ ಒಪ್ಪಂದದ ಮೂಲಕ ಮಾನ್ಯತೆ ಪಡೆದಿದೆ.
- ಮಹತ್ವ:- ರಫಾ ಗಡಿ ದ್ವಾರ ಅಥವಾ ರಫಾ ಗಡಿ ದಾಟುವ ತಾಣವು, ಈಜಿಪ್ಟ್ ಮತ್ತು ಗಾಜಾ ಪಟ್ಟಿಯ ನಡುವಿನ ಏಕೈಕ ಸಂಪರ್ಕ ದ್ವಾರವಾಗಿದೆ.
ಫೋರ್ಜ್ (FORGE) ಉಪಕ್ರಮ
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕ ಆಯೋಜಿಸಿದ್ದ ಮೊದಲ ‘ನಿರ್ಣಾಯಕ ಖನಿಜಗಳ ಸಚಿವ ಮಟ್ಟದ ಸಭೆ’ಯಲ್ಲಿ, ಭಾರತವು ‘ಫೋರ್ಜ್’ (FORGE) ಉಪಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಫೋರ್ಜ್ (FORGE) ಉಪಕ್ರಮದ ಬಗ್ಗೆ:
- ಬಹುಪಕ್ಷೀಯ ಅಂತರರಾಷ್ಟ್ರೀಯ ಸಹಕಾರ ಚೌಕಟ್ಟಾಗಿದೆ:- ಸಮಾನ ಮನಸ್ಕ ದೇಶಗಳನ್ನು ಒಗ್ಗೂಡಿಸುವ ಮೂಲಕ ಜಾಗತಿಕ ‘ನಿರ್ಣಾಯಕ ಖನಿಜ ಪೂರೈಕೆ ಸರಪಳಿ’ಯ ಅಪಾಯಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
- ಇದನ್ನು ‘ಖನಿಜ ಭದ್ರತಾ ಪಾಲುದಾರಿಕೆ’ಯ (MSP) ಮುಂದುವರಿದ ಉಪಕ್ರಮವಾಗಿ ರೂಪಿಸಲಾಗಿದೆ.
- ಮಹತ್ವ:- ಕೆಲವೇ ಪ್ರಬಲ ಪೂರೈಕೆದಾರರ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸುವುದು ಮತ್ತು ವಿಶ್ವಾಸಾರ್ಹ, ಪಾರದರ್ಶಕ ಹಾಗೂ ಸ್ಥಿತಿಸ್ಥಾಪಕತ್ವವುಳ್ಳ ನಿರ್ಣಾಯಕ ಖನಿಜ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.
ಸಾರಸ್ ಕೊಕ್ಕರೆಗಳು (Sarus cranes)
ಪರಿಸರ

ಇದೀಗ ಸುದ್ದಿಯಲ್ಲಿದೆ:
- ಸರ್ಕಾರದ ಗಣತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಸಾರಸ್ ಕೊಕ್ಕರೆಗಳ ಸಂಖ್ಯೆಯು ಒಂದು ವರ್ಷದಲ್ಲಿ 634 ಅಥವಾ 3.1% ರಷ್ಟು ಏರಿಕೆಯಾಗಿದೆ.
‘ಸಾರಸ್ ಕೊಕ್ಕರೆ’ಯ ಬಗ್ಗೆ:
- ವಿಶ್ವದ ಅತಿ ಎತ್ತರದ ಹಾರುವ ಪಕ್ಷಿಯಾಗಿದೆ:- 152-156 ಸೆಂ.ಮೀ. ಎತ್ತರ ಮತ್ತು 240 ಸೆಂ.ಮೀ. ರೆಕ್ಕೆಗಳ ವಿಸ್ತಾರವನ್ನು ಹೊಂದಿದೆ.
- ಸಂಘಜೀವಿ ಪಕ್ಷಿಯಾಗಿದೆ:- ಹೆಚ್ಚಾಗಿ ಜೋಡಿಗಳಲ್ಲಿ ಅಥವಾ ಮೂರು-ನಾಲ್ಕು ಪಕ್ಷಿಗಳ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತದೆ.
- ಸರ್ವಭಕ್ಷಕ ಪಕ್ಷಿಯಾಗಿದೆ:- ಮೀನು ಮತ್ತು ಕೀಟಗಳು ಹಾಗೂ ಬೇರುಗಳು ಮತ್ತು ಸಸ್ಯಗಳನ್ನು ಆಹಾರವಾಗಿ ಸೇವಿಸುತ್ತದೆ.
- ಜೀವನಪರ್ಯಂತ ಒಂದೇ ಸಂಗಾತಿಯೊಂದಿಗೆ ಬೆರೆಯುವುದಕ್ಕೆ ಹೆಸರುವಾಸಿಯಾಗಿದೆ:- ಇದರ ಸಂತಾನೋತ್ಪತ್ತಿ ಋತುವು ಮುಂಗಾರು ಮಳೆಯ ಧಾರಾಕಾರ ಅವಧಿಯೊಂದಿಗೆ ಹೊಂದಿಕೆಯಾಗುತ್ತದೆ.
- ಆವಾಸಸ್ಥಾನ:- ಸಂರಕ್ಷಿತ ಪ್ರದೇಶಗಳ ಹೊರಭಾಗದಲ್ಲಿದ್ದು, ಇವು ಕಡಿಮೆ ಆಳದ ನೀರಿರುವ ನೈಸರ್ಗಿಕ ಜೌಗು ಪ್ರದೇಶಗಳು, ಕೆಸರುಮಯ ಮತ್ತು ಪಾಳು ಬಿದ್ದ ಪ್ರದೇಶಗಳು ಹಾಗೂ ಕೃಷಿ ಭೂಮಿಗಳಲ್ಲಿ ಕಂಡುಬರುತ್ತವೆ.
- ಹಂಚಿಕೆ:- ಸಾರಸ್ ಕೊಕ್ಕರೆಯು 3 ಪ್ರತ್ಯೇಕ ನೆಲೆಗಳನ್ನು ಹೊಂದಿದೆ. ಅವುಗಳೆಂದರೆ, ಭಾರತೀಯ ಉಪಖಂಡ, ಆಗ್ನೇಯ ಏಷ್ಯಾ ಮತ್ತು ಉತ್ತರ ಆಸ್ಟ್ರೇಲಿಯಾ.
- ಭಾರತೀಯ ಉಪಖಂಡದಲ್ಲಿ, ಇದು ಉತ್ತರ ಮತ್ತು ಮಧ್ಯ ಭಾರತ, ನೇಪಾಳದ ತೆರೈ ಪ್ರದೇಶ ಮತ್ತು ಪಾಕಿಸ್ತಾನದಲ್ಲಿ ಕಂಡುಬರುತ್ತದೆ.
- ಇದು ಒಂದು ಕಾಲದಲ್ಲಿ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ ಮತ್ತು ಅಸ್ಸಾಂನ ಭತ್ತದ ಗದ್ದೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಪಕ್ಷಿಯಾಗಿತ್ತು.
- ಆದರೆ ಪ್ರಸ್ತುತ ಇದು ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಮಾತ್ರ ಕೇಂದ್ರೀಕೃತವಾಗಿದೆ.
- ಪರಿಸರ ಸಮತೋಲನ:- ಹಾನಿಕಾರಕ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಇವು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
- ಸಂರಕ್ಷಣಾ ಸ್ಥಾನ:-
- ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 – ಅನುಸೂಚಿ IV
- IUCN ಕೆಂಪು ಪಟ್ಟಿಯಲ್ಲಿ – ‘ದುರ್ಬಲ’ (VU)
‘ಖಂಜರ್’ ಸಮರಾಭ್ಯಾಸ (Exercise KHANJAR)
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ಭಾರತ ಮತ್ತು ಕಿರ್ಗಿಸ್ತಾನ ನಡುವಿನ 13ನೇ ಆವೃತ್ತಿಯ ಜಂಟಿ ಸೇನಾ ಸಮರಾಭ್ಯಾಸ ‘ಖಂಜರ್’ (KHANJAR) ಪ್ರಾರಂಭವಾಗಿದೆ.
‘ಖಂಜರ್’ ಸಮರಾಭ್ಯಾಸದ ಬಗ್ಗೆ:
- ಭಾರತ ಮತ್ತು ಕಿರ್ಗಿಸ್ತಾನ್ ನಡುವೆ ನಡೆಸಲಾಗುತ್ತಿರುವ ವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ:- ಇದು 2011 ರಿಂದ ಪರ್ಯಾಯ ಕ್ರಮದಲ್ಲಿ ನಡೆಸಲಾಗುತ್ತಿದೆ.
- ಉದ್ದೇಶ:- ವಿಶ್ವಸಂಸ್ಥೆಯ ಧ್ಯೇಯೋಧ್ಯೆಶದ ಪ್ರಕಾರ, ನಗರ ಪ್ರದೇಶದ ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹ ಸನ್ನಿವೇಶಗಳಲ್ಲಿನ ಜಂಟಿ ಕಾರ್ಯಾಚರಣೆಗಳ ಮೇಲೆ ಗಮನಹರಿಸುವ ಮೂಲಕ, ಎರಡೂ ರಾಷ್ಟ್ರಗಳ ವಿಶೇಷ ಪಡೆಗಳ ನಡುವಿನ ಅಂತರ್-ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.



ನಿಮ್ಮದೊಂದು ಉತ್ತರ