ಜೈವಿಕ ವೈದ್ಯಕೀಯ (ಬಯೋಮೆಡಿಕಲ್) ಸಂಶೋಧನಾ ವೃತ್ತಿ ಕಾರ್ಯಕ್ರಮ
ಸಾಮಾನ್ಯ ಅಧ್ಯಾಯನ 3/ವಿಜ್ಞಾನ ಮತ್ತು ತಂತ್ರಜ್ಞಾನ
ಸಂದರ್ಭ:
- ಕೇಂದ್ರ ಸಚಿವ ಸಂಪುಟವು ಜೈವಿಕ ವೈದ್ಯಕೀಯ ಸಂಶೋಧನಾ ವೃತ್ತಿ ಕಾರ್ಯಕ್ರಮ (BRCP) ದ ಹಂತ III ಅನ್ನು ಅನುಮೋದಿಸಿದೆ.
ಜೈವಿಕ ವೈದ್ಯಕೀಯ ಸಂಶೋಧನಾ ವೃತ್ತಿ ಕಾರ್ಯಕ್ರಮ (BRCP) ದ ಬಗ್ಗೆ:
- ಇದು ಭಾರತದ ಆರೋಗ್ಯ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಒಂದು ಕಾರ್ಯತಂತ್ರದ ಹೂಡಿಕೆಯಾಗಿದ್ದು, ಜಾಗತಿಕ ಪರಿಣತಿಯನ್ನು ರಾಷ್ಟ್ರೀಯ ಆದ್ಯತೆಗಳೊಂದಿಗೆ ಜೋಡಿಸುವ ₹1,500 ಕೋಟಿ ಮೌಲ್ಯದ ಭಾರತ- ಯುನೈಟೆಡ್ ಕಿಂಗ್ಡಮ್ ಪಾಲುದಾರಿಕೆಯಿಂದ ಬೆಂಬಲಿತವಾಗಿದೆ.
- ಗುರಿ: ಜೈವಿಕ ವೈದ್ಯಕೀಯ ವಿಜ್ಞಾನಗಳು, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಯಲ್ಲಿ ವಿಶ್ವ ದರ್ಜೆಯ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.
- ನಿರೀಕ್ಷಿತ ಫಲಿತಾಂಶಗಳು : ಈ ಉಪಕ್ರಮವು 2,000 ಕ್ಕಿಂತ ಹೆಚ್ಚು ಸಂಶೋಧಕರಿಗೆ ತರಬೇತಿ ನೀಡುವುದು, ಹೆಚ್ಚಿನ ಪ್ರಭಾವ ಬೀರುವ ಪ್ರಕಟಣೆಗಳು, ಹಕ್ಕುಸ್ವಾಮ್ಯ ಪಡೆಯಬಹುದಾದ ಸಂಶೋಧನೆಗಳು ಮತ್ತು ಸಮಾನಸ್ಕಂದರ ಗುರುತಿಸುವಿಕೆ.
ಪ್ರಪಂಚದ ವಿಶ್ವವಿದ್ಯಾಲಯ ಶ್ರೇಯಾಂಕಗಳು 2026
ಪಠ್ಯಕ್ರಮ: ಇತರೆ
ಸಂದರ್ಭ:
- ಟೈಮ್ಸ್ ಉನ್ನತ ಶಿಕ್ಷಣ (THE) ದ ಪ್ರಪಂಚದ ವಿಶ್ವವಿದ್ಯಾಲಯ ಶ್ರೇಯಾಂಕಗಳು 2026 ರ ಪ್ರಕಾರ, ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಸತತ ಹತ್ತನೇ ವರ್ಷವೂ ತನ್ನ ಜಾಗತಿಕವಾಗಿ ಪ್ರಥಮ ಶ್ರೇಯಾಂಕವನ್ನು ಕಾಯ್ದುಕೊಂಡಿದೆ.
ಪ್ರಪಂಚದ ವಿಶ್ವವಿದ್ಯಾಲಯ ಶ್ರೇಯಾಂಕಗಳು, 2026 ರ ಬಗ್ಗೆ:
- ಪ್ರಕಟಣೆ: – ಟೈಮ್ಸ್ ಉನ್ನತ ಶಿಕ್ಷಣ
- ಉದ್ದೇಶ:- ಇದು ಬೋಧನೆ, ಸಂಶೋಧನಾ ಪರಿಸರ, ಸಂಶೋಧನಾ ಗುಣಮಟ್ಟ, ಅಂತರರಾಷ್ಟ್ರೀಯ ದೃಷ್ಟಿಕೋನ ಮತ್ತು ಉದ್ಯಮದ ಪ್ರಭಾವ ಎಂಬ ಐದು ಕ್ಷೇತ್ರಗಳಲ್ಲಿ 18 ಕಾರ್ಯಕ್ಷಮತೆ ಸೂಚಕಗಳಲ್ಲಿ 115 ದೇಶಗಳು ಮತ್ತು ಪ್ರಾಂತ್ಯಗಳ 2,191 ವಿಶ್ವವಿದ್ಯಾಲಯಗಳನ್ನು ಮೌಲ್ಯಮಾಪನ ಮಾಡುತ್ತದೆ.
- ಅಗ್ರ 100ರ ಆಚೆಗಿರುವ ವಿಶ್ವವಿದ್ಯಾನಿಲಯಗಳಿಗೆ ನಿರ್ದಿಷ್ಟ ಸ್ಥಾನಗಳ ಬದಲಿಗೆ “ಶ್ರೇಯಾಂಕ ಬ್ಯಾಂಡ್ಗಳನ್ನು” ನಿಗದಿಪಡಿಸಲಾಗಿದೆ.
2026 ರ ವಿಶ್ವವಿದ್ಯಾಲಯ ಶ್ರೇಯಾಂಕಗಳ ಮುಖ್ಯಾಂಶಗಳು:
- ಭಾರತ: ಅಮೆರಿಕ ನಂತರ, ದಾಖಲೆಯ 128 ಸಂಸ್ಥೆಗಳೊಂದಿಗೆ ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿರುವ ಎರಡನೇ ದೇಶವಾಗಿ ಸ್ಥಾನ ಪಡೆದಿದೆ (ಕಳೆದ ವರ್ಷ 107 ಮತ್ತು 2016 ರಲ್ಲಿ ಕೇವಲ 19 ರಿಂದ ಹೆಚ್ಚಾಗಿದೆ).
- ಭಾರತೀಯ ವಿಜ್ಞಾನ ಸಂಸ್ಥೆಯು 201–250 ಶ್ರೇಯಾಂಕದಲ್ಲಿ ಸ್ಥಾನ ಪಡೆದಿದೆ , ನಂತರ ಸವಿತಾ ವೈದ್ಯಕೀಯ ಮತ್ತು ತಾಂತ್ರಿಕ ವಿಜ್ಞಾನ ಸಂಸ್ಥೆಯು 351–400 ಸ್ಥಾನದಲ್ಲಿದೆ.
- ಚೀನಾ: ಐದು ವಿಶ್ವವಿದ್ಯಾಲಯಗಳು ಅಗ್ರ 40 ರಲ್ಲಿ ಸ್ಥಾನ ಪಡೆದಿದ್ದು, ಕಳೆದ ವರ್ಷ ಮೂರು ವಿಶ್ವವಿದ್ಯಾಲಯಗಳ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. 12ನೇ ಸ್ಥಾನದಲ್ಲಿರುವ ತ್ಸಿಂಗುವಾ ವಿಶ್ವವಿದ್ಯಾಲಯವು ಏಷ್ಯಾದ ಅಗ್ರ ವಿಶ್ವವಿದ್ಯಾಲಯವಾಗಿ ಮುಂದುವರೆದಿದೆ.
- ಅಮೆರಿಕ:- ಅಗ್ರ 10 ಸ್ಥಾನಗಳಲ್ಲಿ ಏಳು ಸ್ಥಾನಗಳನ್ನು ಅಮೆರಿಕ ಆಕ್ರಮಿಸಿಕೊಂಡಿದೆ .
ಭಾರತಕ್ಕೆ ಅಧಿಕೃತವಾಗಿ ಭೇಟಿ ನೀಡಿದ ಯುನೈಟೆಡ್ ಕಿಂಗ್ಡಮ್ ಪ್ರಧಾನ ಮಂತ್ರಿ
ಸಾಮಾನ್ಯ ಅಧ್ಯಾಯನ 2/ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ ಯುನೈಟೆಡ್ ಕಿಂಗ್ಡಮ್ ಪ್ರಧಾನಿಯವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಎರಡು ಕಡೆಯ ಪ್ರಧಾನ ಮಂತ್ರಿಗಳು ಭಾರತ-ಯುನೈಟೆಡ್ ಕಿಂಗ್ಡಮ್ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಪುನರುಚ್ಚರಿಸಿದ್ದಾರೆ.
ಪ್ರಮುಖ ಫಲಿತಾಂಶಗಳು:
-
- ಆರ್ಥಿಕತೆ ಮತ್ತು ವ್ಯಾಪಾರ: ಯುಕೆ-ಭಾರತ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (ಸಿಇಟಿಎ) ವನ್ನು ಬಲಪಡಿಸುವುದು , ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುತ್ತದೆ, ಸುಂಕಗಳನ್ನು ಕಡಿಮೆ ಮಾಡುತ್ತದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. .
- ಹವಾಮಾನ ಮತ್ತು ಇಂಧನ: ಕೃತಕ ಬುದ್ಧಿಮತ್ತೆ ಮತ್ತು ಹವಾಮಾನ ಬದಲಾವಣೆಯಲ್ಲಿ ಮುಂದುವರಿದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಮತ್ತು ಐಐಟಿ-ಐಎಸ್ಎಂ ಧನ್ಬಾದ್ನಲ್ಲಿ ಹೊಸ ಕ್ಯಾಂಪಸ್ ಸೇರಿದಂತೆ ನಿರ್ಣಾಯಕ ಖನಿಜಗಳ ಸರಬರಾಜು ಸರಪಳಿ ವೀಕ್ಷಣಾಲಯದ ಪ್ರಾರಂಭ.
- ಕಡಲಾಚೆಯ ಮಾರುತ ಮತ್ತು ಜಾಗತಿಕ ಸ್ವಚ್ಛ ಇಂಧನ ಒಕ್ಕೂಟದ (GCPA) ಮೂಲಕ ಸಹಕರಿಸಲು ಒಪ್ಪಿಕೊಂಡರು.
- ಭಾರತ–ಯುಕೆ ಹವಾಮಾನ ಹಣಕಾಸು ಉಪಕ್ರಮವನ್ನು ಪ್ರಾರಂಭಿಸಲಾಯಿತು.
- ರಕ್ಷಣೆ ಮತ್ತು ಭದ್ರತೆ: ಭಾರತದ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮದ ಅಡಿಯಲ್ಲಿ ಪ್ರಾದೇಶಿಕ ಕಡಲ ಭದ್ರತಾ ಶ್ರೇಷ್ಠತಾ ಕೇಂದ್ರ (RMSCE) ಸ್ಥಾಪನೆ ಸೇರಿದಂತೆ ಇಂಡೋ-ಪೆಸಿಫಿಕ್ನಲ್ಲಿ ಕಡಲ ಭದ್ರತೆಯ ಕುರಿತು ವರ್ಧಿತ ಸಹಕಾರ.
- ಭಾರತ–ಯುಕೆ ಸಂಪರ್ಕ ಮತ್ತು ನಾವೀನ್ಯತೆ ಕೇಂದ್ರ.
ಜಿಲ್ಲಾ ನ್ಯಾಯಾಧೀಶರ ನೇಮಕಾತಿ
ಸಾಮಾನ್ಯ ಅಧ್ಯಾಯನ 2/ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ದೇಶದ ಸರ್ವೋಚ್ಚ ನ್ಯಾಯಾಲಯವು ತನ್ನ ಒಂದು ತೀರ್ಪಿನಲ್ಲಿ, ಸೇವೆಗೆ ಸೇರುವ ಮೊದಲು ಏಳು ವರ್ಷಗಳ ವಕೀಲ ವೃತ್ತಿಯನ್ನು ಪೂರ್ಣಗೊಳಿಸಿದ ನ್ಯಾಯಾಂಗ ಅಧಿಕಾರಿಗಳು ವಿಧಿ 233 ರ ಅಡಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇರ ನೇಮಕಾತಿಗೆ ಅರ್ಹರಾಗಿರುತ್ತಾರೆ ಎಂದು ತೀರ್ಪು ನೀಡಿದೆ.
ಜಿಲ್ಲಾ ನ್ಯಾಯಾಧೀಶರಾಗಲು ಅರ್ಹತೆಯ ವಿಸ್ತರಣೆ:
- ಹಿಂದೆ, ಏಳು ವರ್ಷಗಳ ಸೇವಾನುಭವ ಹೊಂದಿರುವ ವಕೀಲರನ್ನು ಮಾತ್ರ ನೇರವಾಗಿ ನೇಮಿಸಬಹುದಿತ್ತು; ಸೇವೆಯಲ್ಲಿರುವ ನ್ಯಾಯಾಂಗ ಅಧಿಕಾರಿಗಳನ್ನು ಹೊರಗಿಡಲಾಗಿತ್ತು.
- 233(2) ನೇ ವಿಧಿಯು ವಕೀಲರಿಗೆ ಅರ್ಹತೆಯನ್ನು ಒದಗಿಸುತ್ತದೆ ಆದರೆ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಯಾವುದೇ ಪ್ರತ್ಯೇಕ ಅರ್ಹತೆಯನ್ನು ನಿರ್ದಿಷ್ಟಪಡಿಸುವುದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಜಿಲ್ಲಾ ನ್ಯಾಯಾಧೀಶರ ನೇಮಕಾತಿಯು ಹೀಗೆ ನಡೆಯುತ್ತದೆ:
- ನೇಮಕಾತಿ ಅಧಿಕಾರ: ರಾಜ್ಯದ ರಾಜ್ಯಪಾಲರು, ಆ ರಾಜ್ಯದ ಉಚ್ಚ ನ್ಯಾಯಾಲಯದೊಂದಿಗೆ ಸಮಾಲೋಚಿಸಿದ ನಂತರವೇ ನೇಮಕ ಮಾಡುತ್ತಾರೆ.
- ಇದು ನ್ಯಾಯಾಂಗ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತದೆ, ಆಯ್ಕೆಯಲ್ಲಿ ಉಚ್ಚ ನ್ಯಾಯಾಲಯಗಳಿಗೆ ಮಹತ್ವದ ಪಾತ್ರವನ್ನು ನೀಡುತ್ತದೆ.
- ಅರ್ಹತೆ: ಸಾಂಪ್ರದಾಯಿಕವಾಗಿ, ನೇಮಕಾತಿಗಳನ್ನು ಇವರಿಂದ ಮಾಡಲಾಗುತ್ತಿತ್ತು:
- ರಾಜ್ಯ ನ್ಯಾಯಾಂಗ ಸೇವೆಯ ಸದಸ್ಯರು (ಅಧೀನ ನ್ಯಾಯಾಂಗ ಅಧಿಕಾರಿಗಳು), ಅಥವಾ ಕನಿಷ್ಠ 7 ವರ್ಷಗಳ ಸೇವಾನುಭವ ಹೊಂದಿರುವ ವಕೀಲರನ್ನು ನೇಮಿಸಿಕೊಳ್ಳಬೇಕು.
- ನ್ಯಾಯಾಂಗ ಸೇವೆಗೆ ಸೇರುವ ಮೊದಲು 7 ವರ್ಷಗಳ ಹಿಂದಿನ ಬಾರ್ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿಗಳು ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಪಡೆಯಲು ಅರ್ಹರು ಎಂದು ಇತ್ತೀಚಿನ ನ್ಯಾಯಾಂಗ ವ್ಯಾಖ್ಯಾನಗಳು ಸ್ಪಷ್ಟಪಡಿಸಿವೆ.



ನಿಮ್ಮದೊಂದು ಉತ್ತರ