ಜಲ ಸ್ಥಿತಿಸ್ಥಾಪಕತ್ವ ಯೋಜನೆ

ಜಲ ಸ್ಥಿತಿಸ್ಥಾಪಕತ್ವ ಯೋಜನೆ

ಇದೀಗ ಸುದ್ದಿಯಲ್ಲಿದೆ:

  • ವಿಶ್ವಬ್ಯಾಂಕ್ ನಿಂದ ಅನುದಾನಿತ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಗಾಗಿ ಭಾರತೀಯ ವಿಜ್ಞಾನ ಸಂಸ್ಥೆ- ಬೆಂಗಳೂರು, ಭಾರತೀಯ ತಂತ್ರಜ್ಞಾನ ಸಂಸ್ಥೆ- ಮದ್ರಾಸ, ಮಹಾ ಬೆಂಗಳೂರು ಪ್ರಾಧಿಕಾರ (GBA) ದೊಂದಿಗೆ ಕೈಜೋಡಿಸುತ್ತವೆ.
  • ಈ ಯೋಜನೆಯು ವಿಶ್ವಬ್ಯಾಂಕ್‌ನಿಂದ ₹3,500 ಕೋಟಿಗೂ ಹೆಚ್ಚು ಹಣವನ್ನು ಪಡೆಯಲಿದ್ದು, ಇದರಲ್ಲಿ ಮಹಾ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಜಲ ಮಂಡಳಿ (BWSSB), ಸಣ್ಣ ನೀರಾವರಿ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ಸೇರಿದಂತೆ ಪ್ರಮುಖ ಪಾಲುದಾರರು ಭಾಗವಹಿಸಲಿದ್ದಾರೆ.

ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ (ಬೆಂಗಳೂರು):

  • ಉದ್ದೇಶ:- ಇದು ಸುಧಾರಿತ ನೀರಿನ ನಿರ್ವಹಣೆಯ ಮೂಲಕ ಬೆಂಗಳೂರಿನಲ್ಲಿ ನೀರಿನ ಕೊರತೆ ಮತ್ತು ನಗರ ಪ್ರವಾಹವನ್ನು ಪರಿಹರಿಸಲು ವಿಶ್ವಬ್ಯಾಂಕ್ ನಿಂದ ಬೆಂಬಲಿತ ಉಪಕ್ರಮವಾಗಿದೆ.
  • ಇದರಲ್ಲಿ 183 ಕೆರೆಗಳನ್ನು ಪುನರುಜ್ಜೀವನಗೊಳಿಸುವುದು, ಮಳೆನೀರಿನ ಚರಂಡಿಗಳನ್ನು ನವೀಕರಿಸುವುದು, ಒಳಚರಂಡಿ ಸಂಸ್ಕರಣಾ ಘಟಕಗಳನ್ನು ನಿರ್ಮಿಸುವುದು, ಸ್ಮಾರ್ಟ್ ಮೀಟರ್‌ಗಳಂತಹ ಹೊಸ ತಂತ್ರಜ್ಞಾನದ ಮೂಲಕ ನೀರಿನ ಸೋರಿಕೆಯನ್ನು ಕಡಿಮೆ ಮಾಡುವುದು ಮತ್ತು ವಿಪತ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಹೆಚ್ಚಿಸುವುದು ಸೇರಿವೆ.
  • ಈ ಕಾರ್ಯಕ್ರಮವನ್ನು ಏಪ್ರಿಲ್ 2025 ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.
  • ಅನುಷ್ಠಾನ ಸಂಸ್ಥೆ: ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಾಥಮಿಕ ಅನುಷ್ಠಾನ ಸಂಸ್ಥೆಯಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts