ಗಂಗಾ ನದಿ ಒಪ್ಪಂದ | ಸಂಗೀತ ಕಲಾನಿಧಿ ಪ್ರಶಸ್ತಿ

ಗಂಗಾ ನದಿ ಒಪ್ಪಂದ

ಸಾಮಾನ್ಯ ಅಧ್ಯಯನ – 2/ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ: 

  • ಗಂಗಾ ನದಿ ನೀರು ಹಂಚಿಕೆ ಒಪ್ಪಂದವು ಡಿಸೆಂಬರ್ 2026ರಲ್ಲಿ ಮುಕ್ತಾಯಗೊಳ್ಳಲಿದ್ದು, ತನ್ನ ಅಂತಿಮ ವರ್ಷವನ್ನು ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತ ಮತ್ತು ಬಾಂಗ್ಲಾದೇಶಗಳು ಗಂಗಾ ಮತ್ತು ಪದ್ಮಾ ನದಿಗಳಲ್ಲಿ ಜಂಟಿ ನೀರಿನ ಮಾಪನ ಉಪಕ್ರಮವನ್ನು ಆರಂಭಿಸಿವೆ.

ಗಂಗಾ ನದಿ ನೀರು ಹಂಚಿಕೆ ಒಪ್ಪಂದ, 1996 ರ ಬಗ್ಗೆ:

  • ಈ ಒಪ್ಪಂದಕ್ಕೆ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಡಿಸೆಂಬರ್ 12, 1996 ರಂದು ಸಹಿ ಹಾಕಲಾಯಿತು.
  • ಇದು ಬಾಂಗ್ಲಾದೇಶದ ಗಡಿಯಿಂದ ಸುಮಾರು 18 ಕಿ.ಮೀ. ಮೇಲ್ಭಾಗದಲ್ಲಿ, ಪಶ್ಚಿಮ ಬಂಗಾಳದಲ್ಲಿರುವ ಫರಕ್ಕಾ ಆಣೆಕಟ್ಟಿನಲ್ಲಿ ಗಂಗಾ ನದಿ ನೀರಿನ ಹಂಚಿಕೆಯನ್ನು ನಿಯಂತ್ರಿಸುತ್ತದೆ.

ಗಂಗಾ ನದಿ ನೀರಿನ ವಿವಾದದ ಹಿನ್ನೆಲೇ:

  • ಭಾರತದಿಂದ ಫರಕ್ಕಾ ಆಣೆಕಟ್ಟು ನಿರ್ಮಾಣ (1975):- ಹೂಗ್ಲಿ ನದಿಗೆ ನೀರನ್ನು ತಿರುಗಿಸಲು 1975 ರಲ್ಲಿ ಫರಕ್ಕಾ ಆಣೆಕಟ್ಟನ್ನು ಪೂರ್ಣಗೊಳಿಸಿತು.
  • ಉದ್ದೇಶ:- ಹೂಳನ್ನು ಹೊರಹಾಕುವುದು ಮತ್ತು ಕೋಲ್ಕತ್ತಾ ಬಂದರಿನ ನೌಕಾಯಾನ ಸಾಮರ್ಥ್ಯವನ್ನು ಸುಧಾರಿಸುವುದಾಗಿತ್ತು.
    • ಬಾಂಗ್ಲಾದೇಶದ ಕಳವಳ:- ನದಿ ಪಾತ್ರದ ಕೆಳಭಾಗದ ರಾಷ್ಟ್ರವಾಗಿ, ಹರಿವು ಕಡಿಮೆಯಾಗಿರುವುದರಿಂದ ಈ ಕೆಳಗಿನ ಸಮಸ್ಯೆಗಳು ಉಂಟಾಗುತ್ತವೆ ಎಂದು ಬಾಂಗ್ಲಾದೇಶ ವಾದಿಸಿತು:
  • ಕೃಷಿ ಮತ್ತು ಮೀನುಗಾರಿಕೆಗೆ ಹಾನಿ.
  • ನದಿ ನೌಕಾಯಾನಕ್ಕೆ ಅಡಚಣೆ.
  • ಕರಾವಳಿ ಪ್ರದೇಶಗಳಲ್ಲಿ ಉಪ್ಪಿನಂಶದ ನುಗ್ಗುವಿಕೆ ಹೆಚ್ಚಳ.
  • ಸುಂದರಬನ್ಸ್ ಪರಿಸರ ವ್ಯವಸ್ಥೆಗೆ ಹಾನಿ.
  • ಈ ಭಿನ್ನಾಭಿಪ್ರಾಯವು ದಕ್ಷಿಣ ಏಷ್ಯಾದ ಅತ್ಯಂತ ದೀರ್ಘಕಾಲದ ಗಡಿಯಾಚೆಗಿನ ಜಲ ವಿವಾದಗಳಲ್ಲಿ ಒಂದಾಗಿದೆ.

ಕೈಗೊಂಡ ಕ್ರಮಗಳು:

  • 5 ವರ್ಷಗಳ ಗಂಗಾ ಒಪ್ಪಂದ (ಮಧ್ಯಂತರ), 1977.
  • 1982 ಮತ್ತು 1985 ರಲ್ಲಿ ನೀರಿನ ಹರಿವು ಹಂಚಿಕೆ ಕುರಿತು ತಿಳುವಳಿಕಾ ಒಪ್ಪಂದಗಳು (MoUs).
  • ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ, 2011; ಪ್ರಸ್ತಾಪಿಸಲಾಗಿದೆ ಆದರೆ ಸಹಿ ಹಾಕಲಾಗಿಲ್ಲ.

ಗಂಗಾ ನದಿಯ ಬಗ್ಗೆ:

  • ಉಗಮ:- ಉತ್ತರಾಖಂಡದ ಗಂಗೋತ್ರಿ ಹಿಮನದಿ.
  • ಉದ್ದ:- ಸುಮಾರು 2,525 ಕಿ.ಮೀ.
  • ಜಲಾನಯನ ಪ್ರದೇಶ:- ಇದು ಭಾರತದಲ್ಲಿ ಸುಮಾರು 8,61,452 ಚ. ಕಿ.ಮೀ. ಪ್ರದೇಶವನ್ನು ಆವರಿಸಿದ್ದು, 11 ಭಾರತದ ರಾಜ್ಯಗಳ ಮೂಲಕ ಭಾರತದ ಭೂಪ್ರದೇಶದ ಸುಮಾರು 27% ರಷ್ಟು ಜಲಾನಯನ ಪ್ರದೇಶವನ್ನು ಹೊಂದಿದೆ.
  • ಮಹತ್ವ:- ಇದು ಭಾರತದ ಜನಸಂಖ್ಯೆಯ 45% ಕ್ಕೂ ಹೆಚ್ಚು ಜನರನ್ನು ಪೋಷಿಸುತ್ತದೆ.
  • ಒಳಪಡುವ ರಾಜ್ಯಗಳು:- ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಇತರ ಕೆಲವು ರಾಜ್ಯಗಳ ಭಾಗಗಳು.
  • ಗಂಗಾ ನದಿಯ ಪ್ರಮುಖ ಉಪನದಿಗಳು:
    • ಎಡದಂಡೆಯ ಉಪನದಿಗಳು:- ರಾಮಗಂಗಾ, ಗೋಮತಿ, ಘಾಘ್ರಾ, ಗಂದಕ್, ಬುರ್ಹಿ ಗಂದಕ್, ಕೋಸಿ, ಮಹಾನಂದಾ.
    • ಬಲದಂಡೆಯ ಉಪನದಿಗಳು: ಯಮುನಾ, ತೊನ್ಸ್, ಕರ್ಮನಾಸಾ, ಸೋನ್, ಪುನ್‌ಪುನ್, ಫಲ್ಗು, ಕಿಯುಲ್, ಚಂದನ್, ಅಜಯ್, ದಾಮೋದರ್, ರೂಪನಾರಾಯಣ್.
  • ‘ಪದ್ಮಾ’ ನದಿಯಾಗಿ ಬಾಂಗ್ಲಾದೇಶ ಪ್ರವೇಶ:- ಗಂಗಾ ನದಿಯು ಫರಕ್ಕಾ ಆಣೆಕಟ್ಟಿನ ಕೆಳಭಾಗದಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸುತ್ತದೆ. 
  • ಬಂಗಾಳ ಕೊಲ್ಲಿಯನ್ನು ಸೇರುತ್ತದೆ:- ಅಂತಿಮವಾಗಿ ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳೊಂದಿಗೆ ವಿಲೀನಗೊಂಡು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
  • ವಿಶ್ವದ ಅತಿದೊಡ್ಡ ನದಿ ಮುಖಜಭೂಮಿ ಸುಂದರಬನ್ಸ್: ಇದು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹಂಚಿಕೆಯಾಗಿರುವ ಸುಂದರಬನ್ಸ್ ಅನ್ನು ರೂಪಿಸುತ್ತದೆ.

ಸಂಗೀತ ಕಲಾನಿಧಿ ಪ್ರಶಸ್ತಿ

ಸಾಮಾನ್ಯ ಅಧ್ಯಯನ – 1/ಕಲೆ ಮತ್ತು ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:

  • ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಪಿಟೀಲು ವಾದಕ ಆರ್.ಕೆ. ಶ್ರೀರಾಮ್‌ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು.

‘ಸಂಗೀತ ಕಲಾನಿಧಿ ಪ್ರಶಸ್ತಿ’ ಯ ಬಗ್ಗೆ:

  • ಇದನ್ನು 1942ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯು ಸ್ಥಾಪಿಸಿತು.
  • ಈ ಪ್ರಶಸ್ತಿಯನ್ನು ಕರ್ನಾಟಕ ಸಂಗೀತದಲ್ಲಿನ ಶ್ರೇಷ್ಠತೆಗಾಗಿ ನೀಡುವ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗಿದೆ. 
  • ಕರ್ನಾಟಕ ಸಂಗೀತದ “ನೊಬೆಲ್ ಪ್ರಶಸ್ತಿ”:- ಎಂದು ಸಾಮಾನ್ಯವಾಗಿ ಇದನ್ನು ಕರೆಯಲಾಗುತ್ತದೆ.
  • ಈ ಪ್ರಶಸ್ತಿಯು ಚಿನ್ನದ ಪದಕ ಮತ್ತು ಬಿರುದು ಪತ್ರವನ್ನು ಒಳಗೊಂಡಿದೆ.
  • 2005ರಿಂದ, ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತರು ‘ದಿ ಹಿಂದೂ’ ಸಂಸ್ಥೆಯು ಸ್ಥಾಪಿಸಿದ ‘ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ’ಯನ್ನು ಸಹ ಪಡೆಯುತ್ತಿದ್ದಾರೆ.

ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪರಂಪರೆ ಮತ್ತು ಸಾಧನೆಗಳು:

ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯ ಅತ್ಯುನ್ನತ ಹಾಗೂ ಮೇರು ಗಾಯಕಿಯಾಗಿದ್ದರು. ಅವರ ಐತಿಹಾಸಿಕ ಸಾಧನೆಗಳು ಈ ಕೆಳಗಿನಂತಿವೆ:

  • 1974ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ:- ಇವರು ಈ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ಸಂಗೀತ ಕಲಾವಿದೆಯಾಗಿದ್ದಾರೆ.
  • 1966ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ:- ಸಂಗೀತ ಪ್ರದರ್ಶನವನ್ನು ನೀಡಿದ ಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
  • 1998ರಲ್ಲಿ ‘ಭಾರತ ರತ್ನ’ ಪ್ರಶಸ್ತಿ:- ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ಸಂಗೀತಗಾರ್ತಿ ಎಂಬ ಕೀರ್ತಿ ಇವರಿಗೆ ಸಲ್ಲುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts