ಕ್ರಿಸ್ ಗೋಪಾಲಕೃಷ್ಣನ್ ಸಮಿತಿ – ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (AI)
ಇದೀಗ ಸುದ್ದಿಯಲ್ಲಿದೆ:
- ಕರ್ನಾಟಕ ಸರ್ಕಾರವು ಇನ್ಫೋಸಿಸ್ನ ಸಹ-ಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ‘ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ ಕುರಿತಾದ ಸಮಿತಿಯನ್ನು ರಚಿಸಿದೆ.
ಈ ಸಮಿತಿಯ ಪ್ರಮುಖ ಉದ್ದೇಶಗಳು:
- ಪ್ರಮುಖ ಉದ್ದೇಶ:- ಸಾರ್ವಜನಿಕ ಸೇವೆಗಳಲ್ಲಿ ಸುರಕ್ಷಿತ, ನೈತಿಕ ಮತ್ತು ಪಾರದರ್ಶಕವಾದ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಅಳವಡಿಕೆಗಾಗಿ ಸೂಕ್ತ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು.
- ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಉದ್ಯಮ ತಜ್ಞರು ಮತ್ತು ಅಧಿಕಾರಿಗಳನ್ನು ಒಳಗೊಂಡ ಈ ಸಮಿತಿಯು ಇತ್ತೀಚಿಗೆ ಬೆಂಗಳೂರಿನಲ್ಲಿ ಸಭೆ ಸೇರಿತು. ಈ ಸಭೆಯಲ್ಲಿ AI ನೈತಿಕತೆ, ಅಪಾಯದ ವರ್ಗೀಕರಣ ಮತ್ತು ದತ್ತಾಂಶ ಗೌಪ್ಯತೆಯ ಕುರಿತು ವಿವರವಾಗಿ ಚರ್ಚಿಸಲಾಯಿತು.
ಜವಾಬ್ದಾರಿಯುತ AI ಸಮಿತಿಯ ಪ್ರಮುಖ ಅಂಶಗಳು:
- ಸದಸ್ಯ ಕಾರ್ಯದರ್ಶಿ:- ‘ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ’ಯ (KITS) ವ್ಯವಸ್ಥಾಪಕ ನಿರ್ದೇಶಕರು.
- ಕಾರ್ಯಾದೇಶ:- ಸರ್ಕಾರಿ ಆಡಳಿತದಲ್ಲಿ ಜವಾಬ್ದಾರಿಯುತವಾಗಿ AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು, ಕೇವಲ 90 ದಿನಗಳೊಳಗೆ ಸೂಕ್ತ ನೀತಿ ಮತ್ತು ಅನುಷ್ಠಾನದ ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಕಡ್ಡಾಯವಾಗಿದೆ.
- ಆದ್ಯತಾ ಕ್ಷೇತ್ರಗಳು:- AI ತತ್ವಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಹಾಗೂ ಸರ್ಕಾರದ AI ಅನ್ವಯಿಕೆಗಳಿಗೆ ಸಂಬಂಧಿಸಿದಂತೆ ಅಪಾಯದ ವರ್ಗೀಕರಣಗಳನ್ನು ರಚಿಸುವುದು ಇದರ ಆದ್ಯತೆಯಾಗಿದೆ. ಅಲ್ಲದೆ, ದತ್ತಾಂಶ ಆಡಳಿತ, ಗೌಪ್ಯತೆ ಮತ್ತು ಸೈಬರ್ ಭದ್ರತೆಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಇದು ಹೊಂದಿದೆ.
- ಪ್ರಮುಖ ನಾಗರಿಕ-ಕೇಂದ್ರಿತ ವಲಯಗಳು:- ಈ ಹೊಸ ಚೌಕಟ್ಟು ಆರೋಗ್ಯ, ಶಿಕ್ಷಣ, ಕಲ್ಯಾಣ ಯೋಜನೆಗಳ ವಿತರಣೆ ಮತ್ತು ಪೊಲೀಸ್ ವ್ಯವಸ್ಥೆಯಂತಹ ನಾಗರಿಕ-ಕೇಂದ್ರಿತ ವಲಯಗಳಲ್ಲಿ AI ತಂತ್ರಜ್ಞಾನದ ಬಳಕೆಯನ್ನು ಒಳಗೊಂಡಿರುತ್ತದೆ.



ನಿಮ್ಮದೊಂದು ಉತ್ತರ