ಕಾವೇರಿ ವನ್ಯಜೀವಿ ಧಾಮ

ಇದೀಗ ಸುದ್ದಿಯಲ್ಲಿದೆ:
- ಕಾವೇರಿ ವನ್ಯಜೀವಿ ಧಾಮದೊಳಗೆ ನಿರ್ಮಿಸಲಾದ ನೀರು ಕೊಯ್ಲು ಹೊಂಡಗಳಿಂದಾಗಿ ಹುಲ್ಲುಗಾವಲುಗಳು ನಾಶವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪ್ರಮುಖ ಅಂಶಗಳು:
- ಆರೋಪ:- ಅರಣ್ಯ ಇಲಾಖೆಯು ಅಗೆದಿರುವ ನೀರು ಕೊಯ್ಲು ಹೊಂಡಗಳು ನೈಸರ್ಗಿಕ ಹುಲ್ಲುಗಾವಲುಗಳ ನಾಶಕ್ಕೆ ಕಾರಣವಾಗುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.
- ಸ್ಥಳ:- ಕಾವೇರಿ ವನ್ಯಜೀವಿ ಧಾಮದೊಳಗೆ, ನಿರ್ದಿಷ್ಟವಾಗಿ ಸಂಗಮ, ಹಲಗೂರು ಮತ್ತು ಮುಗ್ಗುರು ವಲಯಗಳ ಮೇಲೆ ಈ ಚಟುವಟಿಕೆಯು ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ.
- ವಿಧಾನ:- ಪರಿಸರವಾದಿಗಳು ವರದಿ ಮಾಡಿರುವಂತೆ, ಈ ಹೊಂಡಗಳನ್ನು ಅಗೆಯಲು ಭಾರೀ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದ್ದು, ಇದು ಭೂದೃಶ್ಯದ ನಾಶಕ್ಕೆ ಕಾರಣವಾಗುತ್ತಿದೆ.
- ಪರಿಸರ ಪ್ರಭಾವ:- ಈ ಹುಲ್ಲುಗಾವಲುಗಳು ಆನೆಗಳು, ಕಡವೆ, ಚುಕ್ಕೆ ಜಿಂಕೆ ಮತ್ತು ಕಾಡೆಮ್ಮೆಗಳಂತಹ ಸಸ್ಯಾಹಾರಿ ಪ್ರಾಣಿಗಳಿಗೆ ಮೇವು ಒದಗಿಸುವಲ್ಲಿ ನಿರ್ಣಾಯಕವಾಗಿವೆ.
- ಪರಿಣಾಮ:- ನೈಸರ್ಗಿಕ ಹುಲ್ಲುಗಾವಲುಗಳ ನಾಶವು ಕಾಡು ಪ್ರಾಣಿಗಳಿಗೆ ಮೇವಿನ ಲಭ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಇದು ಮಾನವ-ವನ್ಯಜೀವಿ ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕಾವೇರಿ ವನ್ಯಜೀವಿ ಧಾಮದ ಬಗ್ಗೆ:
- ಸ್ಥಳ:- ಇದು ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹರಡಿದೆ. ಇದು 2 ಉಪ-ವಿಭಾಗಗಳನ್ನು (ಹನೂರು ಮತ್ತು ಕನಕಪುರ) ಮತ್ತು 7 ವಲಯಗಳನ್ನು (ಕೊತ್ತನೂರು, ಹನೂರು, ಕೌದಳ್ಳಿ, ಗೋಪಿನಾಥಂ, ಹಲಗೂರು, ಸಂಗಮ ಮತ್ತು ಮುಗ್ಗುರು) ಒಳಗೊಂಡಿದೆ.
- ವಿಸ್ತೀರ್ಣ:- ಪ್ರಸ್ತುತ 1,027 ಚದರ ಕಿ.ಮೀ ವರೆಗೆ ವಿಸ್ತರಿಸಲಾಗಿದೆ (ಮೂಲತಃ 1987 ರಲ್ಲಿ 510 ಚದರ ಕಿ.ಮೀ ಎಂದು ಅಧಿಸೂಚಿಸಲಾಗಿತ್ತು).
- ಸಂಚಾರ ಪಥ:- ಇದು ಉತ್ತರದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು, ದಕ್ಷಿಣದಲ್ಲಿ ಬಿಳಿಗಿರಿ ರಂಗನ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದೊಂದಿಗೆ ಸಂಪರ್ಕಿಸುವ ಪ್ರಮುಖ ವನ್ಯಜೀವಿ ಸಂಚಾರ ಪಥವಾಗಿ ಕಾರ್ಯನಿರ್ವಹಿಸುತ್ತದೆ.
- ನದಿ ವ್ಯವಸ್ಥೆಗಳು:- ಕಾವೇರಿ, ಅರ್ಕಾವತಿ ಮತ್ತು ಶಿಂಶಾ ಎಂಬ ಮೂರು ಪ್ರಮುಖ ನದಿಗಳು ಹಾಗೂ ಹಲವಾರು ಸಣ್ಣ ತೊರೆಗಳು.
- ಅರಣ್ಯ ವಿಧಗಳು:- ಇದು ಪ್ರಮುಖವಾಗಿ ಒಣ ಎಲೆ ಉದುರುವ ಕಾಡುಗಳು ಮತ್ತು ಕುರುಚಲು ಕಾಡುಗಳನ್ನು ಒಳಗೊಂಡಿದೆ. ಇದರೊಂದಿಗೆ, ವಿವಿಧ ಎತ್ತರಗಳಲ್ಲಿ ಕಮ್ಮರ (ಹಾರ್ಡ್ವಿಕ್ಯಾ) ಕಾಡುಗಳು, ನದಿ ತೀರದ ಕಾಡುಗಳು, ಶೋಲಾ, ತೇವಾಂಶವುಳ್ಳ ಎಲೆ ಉದುರುವ ಹಾಗೂ ನಿತ್ಯಹರಿದ್ವರ್ಣ ಕಾಡುಗಳಂತಹ ವೈವಿಧ್ಯಮಯ ಅರಣ್ಯ ಪ್ರಕಾರಗಳು ಇಲ್ಲಿ ಕಂಡುಬರುತ್ತವೆ.
- ಪ್ರಮುಖ ಪ್ರಾಣಿ ಪ್ರಭೇದಗಳು:- ಹುಲಿ, ಆನೆ, ಚಿರತೆ, ತೇವಾಂಕಿ/ಜೇನು ಬ್ಯಾಜರ್ (ರಾಟೆಲ್) ಮತ್ತು ಕೊಳ್ಳೇಗಾಲದ ನೆಲದ ಹಲ್ಲಿ, ಕಾಡೆಮ್ಮೆ , ಕಾಡು ನಾಯಿ, ಕೂರೆ (ಇಲಿ ಜಿಂಕೆ) ಮತ್ತು ಮಲಬಾರ್ ದೈತ್ಯ ಅಳಿಲು ಸೇರಿವೆ.



ನಿಮ್ಮದೊಂದು ಉತ್ತರ