ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, 2024
ಇದೀಗ ಸುದ್ದಿಯಲ್ಲಿದೆ:
- 2024ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು.
ಪ್ರಶಸ್ತಿ ಪುರಸ್ಕೃತರು –
- ಶೂದ್ರ ಶ್ರೀನಿವಾಸ್
- ಪ್ರತಿಭಾ ನಂದಕುಮಾರ್
- ಎಂ. ಬಸವಣ್ಣ
- ಡಿ.ಬಿ. ನಾಯಕ್
- ವಿಶ್ವನಾಥ ಕಾರ್ನಾಡ್
‘ಸಾಹಿತ್ಯ ಶ್ರೀ’ ಪ್ರಶಸ್ತಿ – 10 ಬರಹಗಾರರಿಗೆ ‘ಸಾಹಿತ್ಯ ಶ್ರೀ’ ಪ್ರಶಸ್ತಿ ನೀಡಲಾಗುತ್ತಿದೆ.
- ಕೆ.ವೈ. ನಾರಣಸ್ವಾಮಿ
- ಬಿ.ಎಂ. ಪುಟ್ಟಯ್ಯ
- ಪದ್ಮಾಲಯ ನಾಗರಾಜ್
- ಬಿ ಯು ಸುಮಾ
- ಮಮತಾ ಸಾಗರ
- ಸಬಿತಾ ಬನ್ನಾಡಿ
- ಅಬ್ದುಲ್ ಹೈ ತೋರಣಗಲ್
- ಗುರುಲಿಂಗಪ್ಪ ದಾಬಳೆ
- ಎಚ್.ಎಸ್. ಅನುಪಮಾ
- ಅಮರೇಶ ಯಾತಗಲ್
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಬಗ್ಗೆ:
- ಸ್ಥಾಪನೆಯಾದದ್ದು – 1983
- ಇದು ಕನ್ನಡದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಗೌರವಗಳಲ್ಲಿ ಒಂದಾಗಿದೆ.
- ಕ್ಷೇತ್ರ – ಕಾವ್ಯ, ಕಾದಂಬರಿ, ವಿಮರ್ಶೆ, ಪ್ರವಾಸ ಕಥನ, ಅನುವಾದ, ಮಕ್ಕಳ ಸಾಹಿತ್ಯ ಮತ್ತು ಇನ್ನೂ ಹಲವಾರು ಕ್ಷೇತ್ರಕ್ಕೇ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
- ಉದ್ದೇಶ – ಇದು ಕನ್ನಡ ಸಾಹಿತ್ಯಕ್ಕೆ ನೀಡಿದ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಉತ್ತೇಜಿಸಲು ಕರ್ನಾಟಕ ಸರ್ಕಾರದಿಂದ ಪ್ರತಿವರ್ಷ ಪ್ರದಾನ ಮಾಡಲಾಗುವ ಗೌರವಾನ್ವಿತ ಸಾಹಿತ್ಯ ಪ್ರಶಸ್ತಿಯಾಗಿದೆ.
ಪ್ರಶಸ್ತಿಗಳನ್ನು ಹಲವಾರು ವಿಭಾಗಗಳಲ್ಲಿ ನೀಡಲಾಗುತ್ತದೆ:
- ವಾರ್ಷಿಕ ಗೌರವ ಪ್ರಶಸ್ತಿಗಳು: ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಸೇವೆಗಾಗಿ ಪ್ರತಿ ವರ್ಷ ಐದು ಶ್ರೇಷ್ಠ ಸಾಹಿತಿಗಳನ್ನು ಗೌರವಿಸಲಾಗುತ್ತದೆ.
- ಪುಸ್ತಕ ಬಹುಮಾನಗಳು : ಕಾವ್ಯ, ಕಾದಂಬರಿ, ಸಣ್ಣ ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸ ಕಥನ, ಅನುವಾದ, ಮಕ್ಕಳ ಸಾಹಿತ್ಯ ಮತ್ತು ವಿಜ್ಞಾನ ಬರವಣಿಗೆ ಸೇರಿದಂತೆ ಸುಮಾರು 18 ವಿಭಿನ್ನ ಸಾಹಿತ್ಯ ಪ್ರಕಾರಗಳ ಅತ್ಯುತ್ತಮ ಪುಸ್ತಕಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
- “ಸಾಹಿತ್ಯಶ್ರೀ” ಪ್ರಶಸ್ತಿಗಳು: ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಹಲವಾರು ಬರಹಗಾರರಿಗೆ ನೀಡಲಾಗುತ್ತದೆ .



ನಿಮ್ಮದೊಂದು ಉತ್ತರ