ಕರ್ನಾಟಕ ದರ್ಶನ ಮತ್ತು ಇತರೆ : ಬಹು ಆಯ್ಕೆಯ ಪ್ರಶ್ನೋತ್ತರಗಳು
1). ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗಾಗಿ ರಚಿಸಲಾದ ಉನ್ನತ ಮಟ್ಟದ ಸಮಿತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ನಗರದಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣಾ (SWM) ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತು ತ್ಯಾಜ್ಯ ವಿಲೇವಾರಿ ಸೇವೆಗಳನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲು ಈ ಸಮಿತಿಯನ್ನು ರಚಿಸಲಾಗಿದೆ.
- ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಈ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ?
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3 ಎಲ್ಲವೂ
2). ‘ಫ್ರೆಂಡ್ಸ್ ಆಫ್ ಪೊಲೀಸ್’ ಮಿಷನ್ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
- ಇದು ಸಮುದಾಯ ಪೊಲೀಸಿಂಗ್ ಮತ್ತು ಅಪರಾಧ ತಡೆಗಟ್ಟುವಿಕೆಯಲ್ಲಿ ಯುವಜನರ ಸಹಭಾಗಿತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
- ಪೊಲೀಸರಿಗೆ ನೆರವು ನೀಡಲು ಎರಡು ಲಕ್ಷ ವಿದ್ಯಾರ್ಥಿಗಳನ್ನು ಈ ಉಪಕ್ರಮದ ಅಡಿಯಲ್ಲಿ ನೋಂದಾಯಿಸುವ ಗುರಿ ಹೊಂದಲಾಗಿದೆ.
- ಇದು ಕೇವಲ ಜಾಗೃತಿ ಕಾರ್ಯಕ್ರಮವಾಗಿದ್ದು, ಪೊಲೀಸರಿಗೆ ನೆರವು ನೀಡುವಲ್ಲಿ ಯಾವುದೇ ಸಕ್ರಿಯ ಪಾತ್ರವನ್ನು ಹೊಂದಿಲ್ಲ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3 ಎಲ್ಲವೂ
3). ಪ್ರತಿಪಾದನೆ (A): ‘ಇ-ಸ್ವತ್ತು 2.0’ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಪಾರದರ್ಶಕ ಆಸ್ತಿ ತೆರಿಗೆ ಸಂಗ್ರಹವನ್ನು ಬಲಪಡಿಸುತ್ತದೆ.
ಕಾರಣ (R): ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಮತ್ತು ಇ-ಖಾತಾವನ್ನು ವಿತರಿಸುವ ಮೂಲಕ, ಈ ವ್ಯವಸ್ಥೆಯು ವಿವಾದಗಳನ್ನು ಕಡಿಮೆ ಮಾಡುತ್ತದೆ ಮತ್ತು ಆಸ್ತಿಗಳ ಸುಲಭ ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ.
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- A ಮತ್ತು R ಎರಡೂ ಸರಿ, ಹಾಗೂ R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ.
- A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ.
- A ಸರಿಯಾಗಿದೆ, ಆದರೆ R ತಪ್ಪಾಗಿದೆ.
- A ತಪ್ಪಾಗಿದೆ, ಆದರೆ R ಸರಿಯಾಗಿದೆ.
4). ಕರ್ನಾಟಕ ಸರ್ಕಾರವು ರಚಿಸಿರುವ ‘ಮೈಕೆಲ್ ಕುನ್ಹಾ ಆಯೋಗ’ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
- ಇದು ‘ವಿಚಾರಣಾ ಆಯೋಗಗಳ ಕಾಯ್ದೆ, 1952’ ರ ಅಡಿಯಲ್ಲಿ ನೇಮಕಗೊಂಡ ನ್ಯಾಯಾಂಗ ತನಿಖಾ ಆಯೋಗವಾಗಿದೆ.
- ಇದು ಆರ್ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ 2025ರ ಜೂನ್ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತುಳಿತಕ್ಕೊಳಗಾದ ಘಟನೆಯ ಬಗ್ಗೆ ತನಿಖೆ ನಡೆಸಿತು.
- ಈ ಆಯೋಗದ ವರದಿಯು ಭಾರತದ ಸರ್ವೋಚ್ಚ ನ್ಯಾಯಾಲಯದಿಂದ ಕ್ರೀಡಾಂಗಣ ಸಮಿತಿಯನ್ನು ರಚಿಸಬೇಕು ಎಂಬ ಶಿಫಾರಸಿಗೆ ಕಾರಣವಾಯಿತು.
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
A. 1 ಮತ್ತು 3 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 2 ಮಾತ್ರ
D. 1, 2 ಮತ್ತು 3 ಎಲ್ಲವೂ
5). ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ೯ಬೆಂಗಳೂರು ಜಲಮಂಡಳಿ)ಯು ಜಲ ನಿರ್ವಹಣೆಗಾಗಿ ‘ಜಿಯೋಸ್ಪೇಷಿಯಲ್ ಎಕ್ಸಲೆನ್ಸ್ ಪ್ರಶಸ್ತಿ’ಗೆ ಭಾಜನವಾಗಿದೆ.
- ಈ ಪ್ರಶಸ್ತಿಯನ್ನು ‘ಜಿಯೋಸ್ಮಾರ್ಟ್ ಇಂಡಿಯಾ’ವತಿಯಿಂದ ನೀಡಲಾಗಿದೆ.
- ಈ ಪ್ರಶಸ್ತಿಯು ನಗರದ ಘನತ್ಯಾಜ್ಯ ನಿರ್ವಹಣೆಯಲ್ಲಿನ ಅತ್ಯುತ್ತಮ ಉಪಕ್ರಮಗಳನ್ನು ಗುರುತಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 1, 2 ಮತ್ತು 3
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1 ಮತ್ತು 2 ಮಾತ್ರ
6). ‘ಹೈಜೀನ್ ಆನ್ ಗೋ’ ಉಪಕ್ರಮದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಬೆಂಗಳೂರು ಪೊಲೀಸ್ ಸಿಬ್ಬಂದಿಗೆ ಮಾತ್ರ ಮೀಸಲಾದ ಸಂಚಾರಿ ನೈರ್ಮಲ್ಯ ವಾಹನವಾಗಿದೆ.
- ಇದನ್ನು ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಪ್ರಾರಂಭಿಸಿದೆ.
- ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿಯ ಕೆಲಸದ ಸ್ಥಿತಿಗತಿಗಳನ್ನು ಸುಧಾರಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3 ಎಲ್ಲವೂ
7). ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯಕ್ಕೆ (CFTRI) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR)ಯ ಅಡಿಯಲ್ಲಿರುವ ಒಂದು ಪ್ರಯೋಗಾಲಯವಾಗಿದೆ.
- ಈ ಸಂಸ್ಥೆಯು ಕರ್ನಾಟಕದ ಮೈಸೂರಿನಲ್ಲಿದೆ.
- ಸಿಎಫ್ಟಿಆರ್ಐ ಇತ್ತೀಚೆಗೆ ಗಗನಯಾತ್ರಿಗಳು, ಕ್ರೀಡಾಪಟುಗಳು ಮತ್ತು ಹಿರಿಯ ನಾಗರೀಕರಿಗಾಗಿ ಸುಧಾರಿತ ಆಹಾರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 1, 2 ಮತ್ತು 3 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1 ಮತ್ತು 2 ಮಾತ್ರ
8). ‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’ ಅನ್ನು ಜಂಟಿಯಾಗಿ ಯಾರು ನಿರ್ವಹಿಸುತ್ತಿದ್ದಾರೆ?
- ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ.
- ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯ (ORI) ಮತ್ತು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ.
- ಭಾರತದ ರಾಷ್ಟ್ರೀಯ ಪತ್ರಾಗಾರ ಮತ್ತು ಸಾಹಿತ್ಯ ಅಕಾಡೆಮಿ.
- ಮೈಸೂರು ವಿಶ್ವವಿದ್ಯಾಲಯ ಮತ್ತು ಸಿಎಸ್ಐಆರ್.
9). ಭಾರತದ ಸೆಮಿಕಂಡಕ್ಟರ್ ಮತ್ತು ಇಎಸ್ಡಿಎಂ (ESDM) ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕದ ಪಾತ್ರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತದ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಕರ್ನಾಟಕವು ಸುಮಾರು 10% ರಷ್ಟು ಕೊಡುಗೆ ನೀಡುತ್ತದೆ.
- ರಾಜ್ಯವು 100 ಕ್ಕೂ ಹೆಚ್ಚು ಫ್ಯಾಬ್ಲೆಸ್ ಚಿಪ್ ವಿನ್ಯಾಸ ಕೇಂದ್ರಗಳನ್ನು ಹೊಂದಿದೆ.
- ಭಾರತದ ಸೆಮಿಕಂಡಕ್ಟರ್ ತಯಾರಿಕೆ ಸ್ಥಾವರಗಳಲ್ಲಿ ಕರ್ನಾಟಕವು ಅತಿ ದೊಡ್ಡ ಪಾಲನ್ನು ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮಾತ್ರ
D. 1, 2 ಮತ್ತು 3 ಎಲ್ಲವೂ
10). ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025 ಕ್ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಮಸೂದೆಯು ದ್ವೇಷ ಭಾಷಣದ ಅಪರಾಧ ಮತ್ತು ಅದರ ಪ್ರಯತ್ನ ಇವೆರಡನ್ನೂ ಅಪರಾಧೀಕರಿಸುತ್ತದೆ.
- ಈ ಮಸೂದೆಯ ಅಡಿಯಲ್ಲಿ ದ್ವೇಷದ ಅಪರಾಧವು ಕೇವಲ ಜೀವಂತ ವ್ಯಕ್ತಿಗಳ ವಿರುದ್ಧದ ಕೃತ್ಯಗಳಿಗೆ ಮಾತ್ರ ಅನ್ವಯಿಸುತ್ತದೆ.
- ಈ ಮಸೂದೆಯು ಮೊದಲ ಬಾರಿಯ ಅಪರಾಧಕ್ಕೆ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 2 ಮತ್ತು 3 ಮಾತ್ರ
B. 1 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3 ಎಲ್ಲವೂ
11). ಕರ್ನಾಟಕದ ಒಟ್ಟು ರಾಜ್ಯ ಮೌಲ್ಯವರ್ಧನೆಗೆ (GSVA) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ರಾಜ್ಯದ ಒಟ್ಟು ರಾಜ್ಯ ಮೌಲ್ಯವರ್ಧನೆಗೆ (GSVA) ಸೇವಾ ವಲಯವು ಮೂರನೇ ಎರಡಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ.
- ಒಟ್ಟು ರಾಜ್ಯ ಮೌಲ್ಯವರ್ಧನೆಯಲ್ಲಿ (GSVA) ಕೈಗಾರಿಕಾ ವಲಯಕ್ಕಿಂತ ಕೃಷಿ ವಲಯವು ಹೆಚ್ಚಿನ ಪಾಲನ್ನು ಹೊಂದಿದೆ.
- ಕರ್ನಾಟಕದ ಒಟ್ಟು ರಾಜ್ಯ ಆಂತರಿಕ ಉತ್ಪನ್ನಕ್ಕೆ (GSDP) ಬೆಂಗಳೂರು ನಗರ ಜಿಲ್ಲೆಯು ಏಕೈಕ ಅತಿದೊಡ್ಡ ಕೊಡುಗೆದಾರನಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
12). ಈ ಕೆಳಗಿನವುಗಳಲ್ಲಿ ಯಾವುದು ‘ಶುಚಿ’ ಯೋಜನೆಯ ಫಲಾನುಭವಿಗಳ ವಿವರವನ್ನು ಸರಿಯಾಗಿ ವಿವರಿಸುತ್ತದೆ?
- ಕರ್ನಾಟಕದ 10–18 ವರ್ಷ ವಯಸ್ಸಿನ ಎಲ್ಲಾ ಕಿಶೋರಿಯರು.
- ಖಾಸಗಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಿಶೋರಿಯರು.
- ಋತುಚಕ್ರದ ಆರಂಭದಿಂದ ಮುಟ್ಟು ನಿಲ್ಲುವ ಹಂತದವರೆಗಿನ ಎಲ್ಲಾ ಮಹಿಳೆಯರು.
- ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10–18 ವರ್ಷ ವಯಸ್ಸಿನ ಕಿಶೋರಿಯರು.
13). ಭಾರತದಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ನಾಯಕತ್ವದ ರಚನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರು ವಹಿಸುತ್ತಾರೆ.
- ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷತೆಯನ್ನು ರಾಜ್ಯದ ರಾಜ್ಯಪಾಲರು ವಹಿಸುತ್ತಾರೆ.
- ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಅಧ್ಯಕ್ಷತೆಯನ್ನು ಆಯಾ ಜಿಲ್ಲೆಯ ಚುನಾಯಿತ ಮೇಯರ್ ವಹಿಸುತ್ತಾರೆ.
ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- ಕೇವಲ ಒಂದು ಹೇಳಿಕೆ ಮಾತ್ರ
- ಕೇವಲ ಎರಡು ಹೇಳಿಕೆಗಳು ಮಾತ್ರ
- ಎಲ್ಲಾ ಮೂರು ಹೇಳಿಕೆಗಳು
- ಮೇಲಿನ ಯಾವುದೂ ಅಲ್ಲ
14). ‘ಕೆಎಸ್ಆರ್ಟಿಸಿ’ಯ ‘ಅಪಘಾತ ತುರ್ತು ಸ್ಪಂದನಾ ವಾಹನಗಳ’ ಉಪಕ್ರಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ರಾಜ್ಯ ಸಾರಿಗೆ ಬಸ್ಗಳಿಗೆ ಸಂಬಂಧಿಸಿದ ರಸ್ತೆ ಅಪಘಾತಗಳು ಮತ್ತು ವಾಹನಗಳ ಸ್ಥಗಿತದ ಸಮಯದಲ್ಲಿ ಕ್ಷಿಪ್ರ ನೆರವು ನೀಡುವುದು ಈ ಉಪಕ್ರಮದ ಗುರಿಯಾಗಿದೆ.
- ತುರ್ತು ಸ್ಪಂದನಾ ವಾಹನಗಳನ್ನು ‘ಸಂಚಾರಿ ಕಾರ್ಯಾಗಾರಗಳಾಗಿ’ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.
- ಇದರ ಆರಂಭಿಕ ಹಂತದಲ್ಲಿ, ಈ ಉಪಕ್ರಮವು ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳನ್ನು ಒಳಗೊಂಡಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
15). ‘ಟ್ರಾವೆಲರ್ ನೂಕ್ಸ್’ ಯೋಜನೆಗೆ ಸಂಬಂಧಿಸಿದಂತೆ ಯಾವ ಏಜೆನ್ಸಿಯನ್ನು ರಾಜ್ಯ ಅನುಷ್ಠಾನ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ?
- ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI).
- ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಯಮಿತ(KTIL).
- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
- ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ.
16). ‘ಟ್ರಾನ್ಸ್ಲೇಶನಲ್ ಎಐ ಫಾರ್ ನೆಟ್ವರ್ಕ್ಡ್ ಯುನಿವರ್ಸಲ್ ಹೆಲ್ತ್ಕೇರ್’ (TANUH) ಫೌಂಡೇಶನ್ ಅನ್ನು ಎಲ್ಲಿ ಸ್ಥಾಪಿಸಲಾಗಿದೆ?
- ಐಐಟಿ ,ಮದ್ರಾಸ್
- ಏಮ್ಸ್, ದೆಹಲಿ
- ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
- ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ
17). ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ (KKHRAC) ಸಂಘದಲ್ಲಿನ ಅಕ್ರಮಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ನೇಮಿಸಿದ ತನಿಖಾ ಸಮಿತಿಯ ನೇತೃತ್ವವನ್ನು ಯಾರು ವಹಿಸಿದ್ದರು?
- ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
- ಸುಧೀರ್ ಕುಮಾರ್
- ಟಿ.ಎಂ. ವಿಜಯ್ ಭಾಸ್ಕರ್
- ಆರ್.ಎಸ್. ಶರ್ಮಾ
18). ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಉಪ ಯೋಜನೆ (SCSP) ಮತ್ತು ಪಂಗಡಗಳ ಉಪ ಯೋಜನೆಗಳನ್ನು (TSP) ಯಾವ ಶಾಸನದ ಮೂಲಕ ನಿಯಂತ್ರಿಸಲಾಗುತ್ತದೆ?
- ಕರ್ನಾಟಕ ಸಾಮಾಜಿಕ ನ್ಯಾಯ ಕಾಯ್ದೆ, 2010
- ಕರ್ನಾಟಕ ಬಜೆಟ್ ಹಂಚಿಕೆ ಕಾಯ್ದೆ, 2017
- ರಾಷ್ಟ್ರೀಯ ಎಸ್ಸಿ/ಎಸ್ಟಿ ಹಣಕಾಸು ಕಾಯ್ದೆ, 2014
- ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ ಹಂಚಿಕೆ ಮತ್ತು ಪಂಗಡಗಳ ಉಪ ಹಂಚಿಕೆ ಕಾಯ್ದೆ, 2013
19). ಮೇಕೆದಾಟು ಯೋಜನೆಗಾಗಿ ರಚಿಸಲಾದ ತಾಂತ್ರಿಕ ತಂಡದ ಮುಖ್ಯಸ್ಥರಾಗಿ ಯಾರನ್ನು ನೇಮಿಸಲಾಗಿದೆ?
- ಕೆ.ಜಿ. ಮಹೇಶ್
- ಸುಧೀರ್ ಕುಮಾರ್
- ಆರ್.ಎಸ್. ಶರ್ಮಾ
- ಎಂ.ಬಿ. ಪಾಟೀಲ್
20). ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ಪ್ರತಿಬಂಧ ಮತ್ತು ಪರಿಹಾರ) ಮಸೂದೆ, 2025 ಕ್ಕೆ ಸಂಬಂಧಿಸಿದಂತೆ, ಇದು ಈ ಕೆಳಗಿನ ಯಾವ ಸಾಂವಿಧಾನಿಕ ಮೌಲ್ಯಗಳನ್ನು ಅತ್ಯಂತ ನೇರವಾಗಿ ಎತ್ತಿಹಿಡಿಯಲು ಪ್ರಯತ್ನಿಸುತ್ತದೆ?
- ವಿಧಿ 14 – ಕಾನೂನಿನ ಮುಂದೆ ಸಮಾನತೆ.
- ವಿಧಿ 17 – ಅಸ್ಪೃಶ್ಯತೆಯ ನಿರ್ಮೂಲನೆ.
- ವಿಧಿ 21 – ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಕೇವಲ ಒಂದು ಹೇಳಿಕೆ ಮಾತ್ರ
- ಕೇವಲ ಎರಡು ಹೇಳಿಕೆಗಳು ಮಾತ್ರ
- ಎಲ್ಲಾ ಮೂರು ಹೇಳಿಕೆಗಳು
- ಮೇಲಿನ ಯಾವುದೂ ಅಲ್ಲ
21). ‘ಸೂಪರ್ ಕಂಪ್ಯೂಟಿಂಗ್ ಇಂಡಿಯಾ 2025’ (SCI 2025) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಅನ್ನು ಒಳಗೊಂಡಿರುವ ಭಾರತದ ಮೊದಲ ಸಮಗ್ರ ಸಮ್ಮೇಳನವಾಗಿದೆ.
- ಇದರ ಪ್ರಥಮ ಆವೃತ್ತಿಯನ್ನು ಯಲಹಂಕದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಆಯೋಜಿಸಲಾಗಿತ್ತು.
- ಈ ಸಮ್ಮೇಳನವನ್ನು ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ ಅಡಿಯಲ್ಲಿ ಸಿ-ಡಾಕ್ (C-DAC) ಸಂಸ್ಥೆಯು ಹಮ್ಮಿಕೊಂಡಿತ್ತು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
- 2 ಮತ್ತು 3 ಮಾತ್ರ
22). ‘ಕರ್ನಾಟಕ ಪ್ಲಾಟ್ ಫಾರ್ಮ್/ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025’ ರ ಅನ್ವಯವಾಗುವ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಕಾಯ್ದೆಯು ಕರ್ನಾಟಕದೊಳಗೆ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ ಸೇವೆಗಳನ್ನು ಒದಗಿಸುವ ಪ್ರತಿಯೊಬ್ಬ ಅಗ್ರಿಗೇಟರ್ ಅಥವಾ ಪ್ಲಾಟ್ ಫಾರ್ಮ್ ಗೆ ಅನ್ವಯಿಸುತ್ತದೆ.
- ಇದು ನೋಂದಣಿಯನ್ನು ಲೆಕ್ಕಿಸದೆ, ಪ್ಲಾಟ್ ಫಾರ್ಮ್ ಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಗಿಗ್ ಕಾರ್ಮಿಕರಿಗೆ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ.
- ಈ ಕಾಯ್ದೆಯ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಕಲ್ಯಾಣ ಮಂಡಳಿಯಲ್ಲಿ ಗಿಗ್ ಕಾರ್ಮಿಕರ ನೋಂದಣಿಯು ಕಡ್ಡಾಯ ಪೂರ್ವಾಪೇಕ್ಷಿತವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
23). 2025 ರ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಧ್ಯೇಯವಾಕ್ಯ ಯಾವುದು?
- “ವಾಯು ಮಾಲಿನ್ಯವನ್ನು ಸೋಲಿಸಿ”
- “ಸ್ವಚ್ಛ ಪರಿಸರ, ಆರೋಗ್ಯಕರ ಜೀವನ”
- “ಹಸಿರು ಭವಿಷ್ಯಕ್ಕಾಗಿ ಸುಸ್ಥಿರ ಜೀವನ”
- “ಶೂನ್ಯ ಇಂಗಾಲದ ಭಾರತ”
24). ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ಮಿಲಿಟರಿ ಸಮರಾಭ್ಯಾಸ |
ಭಾರತದೊಂದಿಗೆ ಭಾಗವಹಿಸುವ ದೇಶಗಳು |
|
1. ಹರಿಮೌ ಶಕ್ತಿ |
ಮಲೇಷ್ಯಾ |
|
2. ಎಕುವೆರಿನ್ |
ಮಾರಿಷಸ್ |
|
3. ಸೂರ್ಯ ಕಿರಣ |
ನೇಪಾಳ |
|
4. ಡೆಸರ್ಟ್ ಸೈಕ್ಲೋನ್ |
ಸೌದಿ ಅರೇಬಿಯಾ |
|
5. ಏವಿಯಾ ಇಂದ್ರ |
ರಷ್ಯಾ |
ಮೇಲಿನ ಜೋಡಿಗಳಲ್ಲಿ ಎಷ್ಟು ಸರಿಯಾಗಿ ಹೊಂದಿಕೆಯಾಗಿವೆ?
- ಕೇವಲ ಎರಡು
- ಕೇವಲ ಮೂರು
- ಕೇವಲ ನಾಲ್ಕು
- ಎಲ್ಲವೂ
25). 2025 ರ ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಪ್ರಶಸ್ತಿಯನ್ನು ಇಂಧನ ಸಚಿವಾಲಯದ ಅಡಿಯಲ್ಲಿನ ಇಂಧನ ದಕ್ಷತೆ ಬ್ಯೂರೋ (BEE) ಪ್ರದಾನ ಮಾಡುತ್ತದೆ.
- ಈ ಪ್ರಶಸ್ತಿಯು ಕೇವಲ ಬೃಹತ್ ಪ್ರಮಾಣದ ಕೈಗಾರಿಕಾ ಘಟಕಗಳನ್ನು ಮಾತ್ರ ಗುರುತಿಸುತ್ತದೆ ಮತ್ತು ಸಾರಿಗೆ ಅಥವಾ ರೈಲ್ವೆ ವಲಯಗಳನ್ನು ಒಳಗೊಂಡಿರುವುದಿಲ್ಲ.
- ಮಿಯಾನಾ ರೈಲ್ವೆ ನಿಲ್ದಾಣವು ಎಲ್ಇಡಿ ದೀಪಗಳು, ಇಂಧನ ದಕ್ಷತೆಯ ಬಿಎಲ್ಡಿಸಿ ಫ್ಯಾನ್ಗಳು ಮತ್ತು ಸ್ಮಾರ್ಟ್ ಲೈಟಿಂಗ್ ಸರ್ಕ್ಯೂಟ್ಗಳನ್ನು ಅಳವಡಿಸುವ ಮೂಲಕ 9,687 ಯುನಿಟ್ ವಿದ್ಯುತ್ ಉಳಿಸಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
26). ಜೈವಿಕ ವೈವಿಧ್ಯತೆ ಪರಂಪರೆ ತಾಣಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
- ಜೈವಿಕ ವೈವಿಧ್ಯತೆ ಪರಂಪರೆ ತಾಣವನ್ನು ಅಧಿಸೂಚಿಸುವ ಅಧಿಕಾರವು ರಾಜ್ಯ ಸರ್ಕಾರದ ಬಳಿ ಇರುತ್ತದೆ. ಭಾರತದ ಪ್ರಥಮ ಜೈವಿಕ ವೈವಿಧ್ಯತೆ ಪರಂಪರೆ ತಾಣವಾದ ‘ನಲ್ಲೂರು ಹುಣಸೆ ತೋಪು’ ತೆಲಂಗಾಣದಲ್ಲಿದೆ.
- ಜೈವಿಕ ವೈವಿಧ್ಯತೆ ಕಾಯ್ದೆ, 2002 ಇವುಗಳ ಘೋಷಣೆಗೆ ಶಾಸನಬದ್ಧ ಆಧಾರವನ್ನು ಒದಗಿಸುತ್ತದೆ. ಇವುಗಳು ಭೂಚರ, ಒಳನಾಡು ಜಲಮೂಲ, ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿರಬಹುದು.
- ರಾಷ್ಟ್ರೀಯ ಜೈವಿಕ ವೈವಿಧ್ಯತೆ ಪ್ರಾಧಿಕಾರವು ಎಲ್ಲಾ ಅಧಿಸೂಚಿತ ಜೈವಿಕ ವೈವಿಧ್ಯತೆ ಪರಂಪರೆ ತಾಣಗಳನ್ನು ನೇರವಾಗಿ ನಿರ್ವಹಿಸುತ್ತದೆ.
- ಜೈವಿಕ ವೈವಿಧ್ಯತೆ ನಿರ್ವಹಣಾ ಸಮಿತಿಗಳ ಮೂಲಕ ಸಮುದಾಯದ ಭಾಗವಹಿಸುವಿಕೆಯು ಇವುಗಳ ನಿರ್ವಹಣೆಯಲ್ಲಿ ಅವಿಭಾಜ್ಯವಾಗಿದೆ.
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 3 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
27). ಈ ಕೆಳಗಿನ ಜೈವಿಕ ವೈವಿಧ್ಯತೆ ಪರಂಪರೆ ತಾಣಗಳನ್ನು (BHS) ಅವುಗಳ ಸ್ಥಳ ಮತ್ತು ಮಹತ್ವದೊಂದಿಗೆ ಹೊಂದಿಸಿ:
|
ಜೈವಿಕ ವೈವಿಧ್ಯತೆ ಪರಂಪರೆ ತಾಣ (BHS) |
ಸ್ಥಳ |
ಮಹತ್ವ |
|
i. ನಲ್ಲೂರು ಹುಣಸೆ ತೋಪು |
1. ಶಿವಮೊಗ್ಗ |
a. ಕುದುರೆಮುಖ ಮತ್ತು ಭದ್ರಾ ನಡುವಿನ ವನ್ಯಜೀವಿ ಕಾರಿಡಾರ್. |
|
ii. ಹೊಗ್ರೆಕಾನ್ ಶೋಲಾ ಅರಣ್ಯ |
2. ಬೆಂಗಳೂರು |
b. ಭಾರತದ ಪ್ರಥಮ ಜೈವಿಕ ವೈವಿಧ್ಯತೆ ಪರಂಪರೆ ತಾಣ. |
|
iii. ಅಂಬರಗುಡ್ಡ |
3. ಚಿಕ್ಕಮಗಳೂರು |
c. ಸ್ಥಳೀಯ ಪ್ರಭೇದಗಳಿಂದ ಸಮೃದ್ಧವಾಗಿರುವ ಶೋಲಾ-ಹುಲ್ಲುಗಾವಲು ಪರಿಸರ ವ್ಯವಸ್ಥೆ. |
|
iv. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (GKVK) |
4. ಶಿವಮೊಗ್ಗ |
d. ನಗರ ಜೈವಿಕ ವೈವಿಧ್ಯತೆಯ ಬಿಸಿತಾಣ. |
ಸರಿಯಾದ ಉತ್ತರವನ್ನು ಆರಿಸಿ:
- i-2-b, ii-3-a, iii-1-c, iv-2-d
- i-2-b, ii-3-a, iii-4-c, iv-2-d
- i-1-b, ii-3-a, iii-4-c, iv-2-d
- i-2-d, ii-3-c, iii-4-a, iv-1-b
28). ‘ಶುಚಿ-ನನ್ನ ಮೈತ್ರಿ’ ಉಪಕ್ರಮದ ಅಡಿಯಲ್ಲಿ ಈ ಕೆಳಗಿನ ಯಾವ ಮುಟ್ಟಿನ (ಋತುಚಕ್ರದ) ನೈರ್ಮಲ್ಯ ಉತ್ಪನ್ನವನ್ನು ವಿತರಿಸಲಾಗುತ್ತದೆ?
- ವಿಲೇವಾರಿ ಮಾಡಬಹುದಾದ ಸ್ಯಾನಿಟರಿ ಪ್ಯಾಡ್ಗಳು
- ಜೈವಿಕ ವಿಘಟನೀಯ ನ್ಯಾಪ್ಕಿನ್ಗಳು
- ಮುಟ್ಟಿನ ಕಪ್ಗಳು
- ಬಟ್ಟೆಯ ಪ್ಯಾಡ್ಗಳು
29). ‘ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025’ ರ ಅಡಿಯಲ್ಲಿನ ಉಪ-ವರ್ಗೀಕರಣದ ಚೌಕಟ್ಟಿಗೆ ಸಂಬಂಧಿಸಿದಂತೆ ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ವರ್ಗ (ಉಪ-ವರ್ಗೀಕರಣ) |
ಮೀಸಲಾತಿ ಪಾಲು |
|
1. ಎ (A) – ಮಾದಿಗ ಮತ್ತು ಸಂಬಂಧಿತ ಸಮುದಾಯಗಳು |
7% |
|
2. ಬಿ (B) – ಹೊಲೆಯ ಮತ್ತು ಸಂಬಂಧಿತ ಸಮುದಾಯಗಳು |
6% |
|
3. ಸಿ (C) – ಸ್ಪೃಶ್ಯರು (Touchables) |
5% |
ಮೇಲಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ/ಗಿವೆ?
- 1 ಮಾತ್ರ
- 1 ಮತ್ತು 2 ಮಾತ್ರ
- 1, 2 ಮತ್ತು 3
- 2 ಮತ್ತು 3 ಮಾತ್ರ
30). ‘ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025’ ಕ್ಕೆ ಆಧಾರವಾಗಿರುವ ಶಿಫಾರಸುಗಳನ್ನು ನೀಡಿದ ಸಮಿತಿಯ ನೇತೃತ್ವವನ್ನು ಯಾರು ವಹಿಸಿದ್ದರು?
- ಕೆ.ಜಿ. ಬಾಲಕೃಷ್ಣನ್
- ಉಷಾ ಮೆಹ್ರಾ
- ಎಚ್.ಎನ್. ನಾಗಮೋಹನ್ ದಾಸ್
- ಬಿ.ಪಿ. ಜೀವನ್ ರೆಡ್ಡಿ
31). ಭಾರತದ ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರ (CAG) ಲೆಕ್ಕಪರಿಶೋಧನಾ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಸಂಸ್ಥೆಗಳನ್ನು ಪರಿಗಣಿಸಿ:
- ಕೇಂದ್ರ ಸರ್ಕಾರದ ಇಲಾಖೆಗಳು
- ರಾಜ್ಯ ಸರ್ಕಾರದ ಇಲಾಖೆಗಳು
- ಸಾರ್ವಜನಿಕ ವಲಯದ ಉದ್ದಿಮೆಗಳು
- ಸಾರ್ವಜನಿಕ ಧನಸಹಾಯ ಪಡೆಯುವ ಸರ್ಕಾರೇತರ ಸಂಸ್ಥೆಗಳು
ಮೇಲಿನವುಗಳಲ್ಲಿ ಎಷ್ಟು ಸಂಸ್ಥೆಗಳು ‘ಸಿಎಜಿ’ಯಿಂದ ಲೆಕ್ಕಪರಿಶೋಧನೆಗೆ ಒಳಪಡುತ್ತವೆ?
- ಕೇವಲ ಎರಡು ಮಾತ್ರ
- ಕೇವಲ ಮೂರು ಮಾತ್ರ
- ಮೇಲಿನ ಎಲ್ಲವೂ
- ಮೇಲಿನ ಯಾವುದೂ ಅಲ್ಲ
32). ತುಂಗಭದ್ರಾ ಆಣೆಕಟ್ಟಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ತುಂಗಭದ್ರಾ ನದಿಯು ಕರ್ನಾಟಕದ ಕೃಷ್ಣಾ ನದಿಯ ಅತಿದೊಡ್ಡ ಉಪನದಿಯಾಗಿದೆ.
- ಇದು ಕರ್ನಾಟಕದ ಹೊಸಪೇಟೆ ಮತ್ತು ಕೊಪ್ಪಳ ಜಿಲ್ಲೆಗಳ ಸಂಗಮದಲ್ಲಿ ನೆಲೆಸಿದೆ.
- ಈ ಆಣೆಕಟ್ಟಿನಿಂದ ನಿರ್ಮಿಸಲಾದ ಜಲಾಶಯವನ್ನು ‘ಪಂಪಾ ಸಾಗರ’ ಎಂದೂ ಕರೆಯಲಾಗುತ್ತದೆ.
- ಈ ಆಣೆಕಟ್ಟು ಭಾರತದ ಅತಿ ಎತ್ತರದ ಕಲ್ಲುಗಾರೆ (ಕಲ್ಲಿನ ಕಟ್ಟಡದ) ಆಣೆಕಟ್ಟಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
33). ಕರ್ನಾಟಕದ ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳ ಉಪಕ್ರಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ದೂರದ, ಅರಣ್ಯ ಮತ್ತು ಬೆಟ್ಟಗಾಡು ಪ್ರದೇಶಗಳಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
- ಈ ಉಪಕ್ರಮವನ್ನು ಸಂಪೂರ್ಣವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಜಾರಿಗೊಳಿಸಲಾಗಿದೆ.
- ಇದು ಪ್ರಮುಖವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿದೆ.
- ಇದು ವಿಕೇಂದ್ರೀಕೃತ, ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಚೌಕಟ್ಟನ್ನು ಅನುಸರಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
34). ಇತ್ತೀಚೆಗೆ ಸುದ್ದಿಯಲ್ಲಿದ್ದ ‘ವಿಜ್ ಎಐ ಪಥ’ (VijAIpatha) ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಮತ್ತು STEM ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿರುವ ಪ್ರಾಯೋಗಿಕ ಉಪಕ್ರಮವಾಗಿದೆ.
- ಈ ಕಾರ್ಯಕ್ರಮವನ್ನು ಕೇವಲ ಕರ್ನಾಟಕದ ಶಿಕ್ಷಣ ಇಲಾಖೆಯು ಜಾರಿಗೊಳಿಸುತ್ತಿದೆ.
- ಇದು ರೋಬೋಟಿಕ್ಸ್, ಕೋಡಿಂಗ್ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿ ತರಬೇತಿಯನ್ನು ಒಳಗೊಂಡಿದೆ.
- ಇದನ್ನು ಹೊಸಪೇಟೆ ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಲಾಯಿತು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 3 ಮತ್ತು 4 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
35). ಕೆಎಮ್ಎಫ್ (KMF) ಪ್ರಸ್ತುತ ತನ್ನ ಪ್ರೀಮಿಯಂ ನಂದಿನಿ ಉತ್ಪನ್ನಗಳನ್ನು ಈ ಕೆಳಗಿನ ಯಾವ ದೇಶಗಳಿಗೆ ರಫ್ತು ಮಾಡುತ್ತಿದೆ?
- ಕೆನಡಾ, ಯುಕೆ, ಇಟಲಿ, ಫ್ರಾನ್ಸ್ ಮತ್ತು ಜರ್ಮನಿ.
- ಕತಾರ್, ಬ್ರೂನೈ, ಮಾಲ್ಡೀವ್ಸ್, ಸಿಂಗಾಪುರ, ಯುಎಇ, ಯುಎಸ್ಎ ಮತ್ತು ಆಸ್ಟ್ರೇಲಿಯಾ.
- ಕತಾರ್, ಬ್ರೂನೈ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಸಿಂಗಾಪುರ.
- ಜಪಾನ್, ಚೀನಾ, ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್.
36). ಕರ್ನಾಟಕದ “ಗೃಹ ಆರೋಗ್ಯ” ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಅಸಾಂಕ್ರಾಮಿಕ ರೋಗಗಳ (NCDs) ಆರಂಭಿಕ ಪತ್ತೆ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ.
- ಇದನ್ನು ಸಂಪೂರ್ಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಂತಹ (CHCs) ಸ್ಥಿರ ಆರೋಗ್ಯ ಸೌಲಭ್ಯಗಳ ಮೂಲಕ ಜಾರಿಗೊಳಿಸಲಾಗುತ್ತದೆ.
- ಇದು 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದೆ.
- ಇದನ್ನು ಆರಂಭದಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 2, 3 ಮತ್ತು 4 ಮಾತ್ರ
- 1 ಮತ್ತು 2 ಮಾತ್ರ
- 1, 3 ಮತ್ತು 4 ಮಾತ್ರ
- 1, 2, 3 ಮತ್ತು 4
37). ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸೇರಿಸಲಾದ ಯಾವುದೇ ಭಾಷೆಗೆ ಕೊಡುಗೆ ನೀಡುವ ಲೇಖಕರಿಗೆ ಇದನ್ನು ನೀಡಲಾಗುತ್ತದೆ.
- ಈ ಪ್ರಶಸ್ತಿಯನ್ನು ಪ್ರತಿವರ್ಷ ಕುವೆಂಪು ಅವರ ಜನ್ಮದಿನಾಚರಣೆಯಂದು ಪ್ರದಾನ ಮಾಡಲಾಗುತ್ತದೆ.
- ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ಸ್ಥಾಪಿಸಿದೆ ಮತ್ತು ಪ್ರದಾನ ಮಾಡುತ್ತದೆ.
- 2025 ರಲ್ಲಿ ಈ ಪ್ರಶಸ್ತಿಯನ್ನು ಕೊಂಕಣಿ ಲೇಖಕ ಮಹಾಬಲೇಶ್ವರ ಸೈಲ್ ಅವರಿಗೆ ನೀಡಲಾಯಿತು; ಇದು 5 ಲಕ್ಷ ರೂಪಾಯಿ ನಗದು ಬಹುಮಾನ, ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 2 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 1, 2, 3 ಮತ್ತು 4
38). ಈ ಕೆಳಗಿನವುಗಳಲ್ಲಿ ಯಾವುದು ಮಹಾಬಲೇಶ್ವರ ಸೈಲ್ ಅವರ ಸಾಹಿತ್ಯ ಕೃತಿಯಾಗಿದೆ?
- ಗೋದಾನ
- ಹಾವುಥಣ್
- ಮಾಲ್ಗುಡಿ ಡೇಸ್
- ಗೀತಾಂಜಲಿ
39). ಡಿಜಿಟಲ್ ಸಂಚಾರಿ ತಾರಾಲಯ ಕಾರ್ಯಕ್ರಮವನ್ನು _______ಕಾರ್ಯಗತಗೊಳಿಸಿದೆ:
- ಇಸ್ರೋ (ISRO)
- ಎನ್ಸಿಇಆರ್ಟಿ (NCERT)
- ಕೆಎಸ್ಟಿಇಪಿಎಸ್ (KSTePS)
- ವಿಜ್ಞಾನ ಪ್ರಸಾರ (Vigyan Prasar)
40). ಕರ್ನಾಟಕದ ಈ ಕೆಳಗಿನ ಬಂದರುಗಳನ್ನು ಪರಿಗಣಿಸಿ:
- ಕಾರವಾರ
- ಬೇಲೆಕೇರಿ
- ಮಂಗಳೂರು
- ತದಡಿ
- ಕುಂದಾಪುರ
- ಬೈಂದೂರು
ಕರ್ನಾಟಕದ ಕಿರು ಬಂದರುಗಳ ಕಬ್ಬಿಣದ ಅದಿರು ನಿರ್ವಹಣಾ ನೀತಿ, 2025 ರ ಅಡಿಯಲ್ಲಿ ಮೇಲಿನವುಗಳಲ್ಲಿ ಯಾವುವು ಸೇರುತ್ತವೆ?
- 1, 2, 4, 5 ಮತ್ತು 6 ಮಾತ್ರ
- 1, 2, 3, 4 ಮತ್ತು 5 ಮಾತ್ರ
- 2, 3, 4 ಮತ್ತು 6 ಮಾತ್ರ
- 1, 2, 3, 4 ಮತ್ತು 6 ಮಾತ್ರ
41). ರಾಜ್ಯ ಶಿಕ್ಷಣ ನೀತಿ (SEP) ಆಯೋಗದ ನೇತೃತ್ವವನ್ನು ಯಾರು ವಹಿಸಿದ್ದರು?
- ರೋಮಿಲಾ ಥಾಪರ್
- ಸುಖದೇವ್ ಥೋರಟ್
- ಬಿಬೆಕ್ ಡೆಬ್ರಾಯ್
- ಯಶ್ ಪಾಲ್
42). ಕರ್ನಾಟಕದಲ್ಲಿ ಜಾರಿಗೆ ತರಲಾದ ಕೃತಕ ಬುದ್ಧಿಮತ್ತೆ (AI) ಆಧಾರಿತ ‘ಸ್ಮಾರ್ಟ್ ಲಾಕ್’ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಚಾಲನಾ ಪರವಾನಗಿ ಅರ್ಜಿದಾರರ ಗುರುತನ್ನು ದೃಢೀಕರಿಸಲು ಕೃತಕ ಬುದ್ಧಿಮತ್ತೆ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸುತ್ತದೆ.
- ಇದನ್ನು ಕರ್ನಾಟಕ ಸಾರಿಗೆ ಇಲಾಖೆಯು ತನ್ನ ಆಂತರಿಕ ತಾಂತ್ರಿಕ ಪರಿಹಾರವಾಗಿ ಅಭಿವೃದ್ಧಿಪಡಿಸಿದೆ.
- ಇದನ್ನು ಸಾರಥಿ ಪರಿವಾಹನ ಸೇವಾ ಪೋರ್ಟಲ್ನಲ್ಲಿ ಹೆಚ್ಚುವರಿ ಭದ್ರತಾ ಹಂತವಾಗಿ ಸಂಯೋಜಿಸಲಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
43). ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025 ರ ಅಡಿಯಲ್ಲಿನ ಹಣಕಾಸಿನ ಸಂಯುಕ್ತ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆ (CSS) ಎಂದು ಪ್ರಸ್ತಾಪಿಸಲಾಗಿದೆ.
- ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಹೆಚ್ಚಿನ ಪಾಲಿನ ಧನಸಹಾಯವನ್ನು ಭರಿಸುತ್ತದೆ.
- ಒಮ್ಮೆ ಕೇಂದ್ರದಿಂದ ನಿಧಿ ಹಂಚಿಕೆಯಾದ ನಂತರ, ರಾಜ್ಯದೊಳಗಿನ ನಿಧಿ ಹಂಚಿಕೆಯಲ್ಲಿ ರಾಜ್ಯಗಳಿಗೆ ಯಾವುದೇ ಪಾತ್ರವಿರುವುದಿಲ್ಲ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
44). ಈ ಕೆಳಗಿನ ಪ್ರಮುಖ ದಿನಗಳನ್ನು ಅವುಗಳನ್ನು ಆಚರಿಸುವ ಸಂಸ್ಥೆಗಳು ಮತ್ತು ಧ್ಯೇಯವಾಕ್ಯಗಳೊಂದಿಗೆ ಹೊಂದಿಸಿ:
|
ಪ್ರಮುಖ ದಿನಗಳು |
ಆಚರಿಸುವ ಸಂಸ್ಥೆಗಳು |
ಧ್ಯೇಯವಾಕ್ಯ |
|
i. ವಿಶ್ವ ಏಡ್ಸ್ ದಿನ |
1. ಎಫ್ಎಒ (FAO) |
a. “ಸಮರ ಸನ್ನದ್ಧ, ಸುಸಂಘಟಿತ, ಸ್ವಾವಲಂಬಿ”. |
|
ii. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ |
2. ಡಬ್ಲ್ಯೂಎಚ್ಒ / ವಿಶ್ವಸಂಸ್ಥೆ |
b. “ಹಸಿರು ಭವಿಷ್ಯಕ್ಕಾಗಿ ಸುಸ್ಥಿರ ಜೀವನ”. |
|
iii. ಅಂತರರಾಷ್ಟ್ರೀಯ ವಿಕಲಚೇತನರ ದಿನ |
3. ಭಾರತೀಯ ನೌಕಾಪಡೆ |
c. “ಸಾಮಾಜಿಕ ಪ್ರಗತಿಯನ್ನು ಉತ್ತೇಜಿಸಲು ವಿಕಲಚೇತನರ ಒಳಗೊಳ್ಳುವಿಕೆಯ ಸಮಾಜಗಳನ್ನು ಪೋಷಿಸುವುದು” |
|
iv. ಭಾರತೀಯ ನೌಕಾಪಡೆ ದಿನ |
4. ಸಿಪಿಸಿಬಿ (CPCB) |
d. ಅಡಚಣೆಯನ್ನು ದಾಟಿ (ಮೀರಿ), ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು. |
|
v. ವಿಶ್ವ ಮಣ್ಣಿನ ದಿನ |
5. ವಿಶ್ವಸಂಸ್ಥೆ |
e. “ಆರೋಗ್ಯಕರ ನಗರಗಳಿಗಾಗಿ ಆರೋಗ್ಯಕರ ಮಣ್ಣು”. |
ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾದ ಗುಂಪಾಗಿದೆ?
- i–2–d, ii–4–b, iii–5–c, iv–3–a, v–1–e
- i–5–d, ii–4–e, iii–2–c, iv–3–a, v–1–b
- i–2–c, ii–1–b, iii–5–d, iv–3–a, v–4–e
- i–2–d, ii–1–b, iii–5–c, iv–4–a, v–3–e
45). ಭಾರತದಲ್ಲಿನ ರಾಷ್ಟ್ರೀಯ ಇಂಧನ ಸಂರಕ್ಷಣೆ ದಿನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇಂಧನ ಸಂರಕ್ಷಣೆ ಕಾಯ್ದೆ, 2001 ರ ಜಾರಿಯ ನೆನಪಿಗಾಗಿ ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
- ಇಂಧನ ದಕ್ಷತೆ ಬ್ಯೂರೋ (BEE) ವಿದ್ಯುತ್ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
- ವಿವಿಧ ವಲಯಗಳಲ್ಲಿ ಬೇಡಿಕೆ-ಪರ ನಿರ್ವಹಣೆ ಮತ್ತು ಇಂಧನದ ದಕ್ಷ ಬಳಕೆಯನ್ನು ಉತ್ತೇಜಿಸುವುದು ಈ ಆಚರಣೆಯ ಗುರಿಯಾಗಿದೆ.
- 2025 ರ ಧ್ಯೇಯವಾಕ್ಯವು ಕೇವಲ ನವೀಕರಿಸಬಹುದಾದ ಇಂಧನ ನಿಯೋಜನೆಯ ಮೂಲಕ ಪಳೆಯುಳಿಕೆ ಇಂಧನ ಬಳಕೆಯ ಕಡಿತಕ್ಕೆ ಒತ್ತು ನೀಡುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 2 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
46). 2025 ರ ರಾಷ್ಟ್ರೀಯ ಗಣಿತ ದಿನದ ಧ್ಯೇಯವಾಕ್ಯವು ಪ್ರಮುಖವಾಗಿ ಯಾವುದರ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ?
- ಪ್ರಾಚೀನ ಭಾರತೀಯ ಗಣಿತದ ಪಠ್ಯಗಳು
- ಬಾಹ್ಯಾಕಾಶ ಪರಿಶೋಧನೆಯಲ್ಲಿ ಗಣಿತ
- ನಾವೀನ್ಯತೆ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ ಮತ್ತು ಸಮಸ್ಯೆಗಳ ಪರಿಹಾರದಲ್ಲಿ ಗಣಿತದ ಪಾತ್ರ
- ಹಣಕಾಸು ಲೆಕ್ಕಪತ್ರ ನಿರ್ವಹಣೆಯಲ್ಲಿ ಗಣಿತ
47). 2025 ರ ಉತ್ತಮ ಆಡಳಿತ ದಿನದ ಧ್ಯೇಯವಾಕ್ಯವಾದ “ಪ್ರಶಾಸನ ಗಾಂವ್ ಕಿ ಓರ್” (ಗ್ರಾಮದೆಡೆಗೆ ಆಡಳಿತ) ಉತ್ತಮ ಆಡಳಿತದ ಯಾವ ತತ್ವಗಳನ್ನು ಪ್ರತಿಬಿಂಬಿಸುತ್ತದೆ?
- ವಿಕೇಂದ್ರೀಕರಣ
- ಭಾಗವಹಿಸುವಿಕೆಯ ಆಡಳಿತ
- ತಳಮಟ್ಟದಲ್ಲಿ ಪಾರದರ್ಶಕತೆ
- ಕೇವಲ ಉನ್ನತ ಮಟ್ಟದಿಂದ ಕೆಳಮಟ್ಟದವರೆಗಿನ ಆಡಳಿತ
ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- 1 ಮತ್ತು 2 ಮಾತ್ರ
- 1, 2 ಮತ್ತು 3 ಮಾತ್ರ
- 3 ಮತ್ತು 4 ಮಾತ್ರ
- 1, 2, 3 ಮತ್ತು 4
48). ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ನೆಲ, ಜಲ ಮತ್ತು ವಾಯು ವೇದಿಕೆಗಳಿಂದ ಉಡಾವಣೆ ಮಾಡಬಹುದಾದ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ.
- ಇದನ್ನು ಭಾರತದ ಡಿಆರ್ಡಿಒ (DRDO) ಮತ್ತು ರಷ್ಯಾದ ಎನ್ಪಿಒಎಂ (NPOM) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
- ಇದನ್ನು ಕೇವಲ ಭೂ-ದಾಳಿ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
- ಇದನ್ನು ಭಾರತೀಯ ಭೂಸೇನೆ ಮತ್ತು ಭಾರತೀಯ ನೌಕಾದಳ ಎರಡರಲ್ಲೂ ಸೇವೆಗೆ ನಿಯೋಜಿಸಿಕೊಳ್ಳಲಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
49). ಐಎನ್ಎಸ್ ಅರಿದಮನ್ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತದ ಮೂರನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿಯಾಗಿದೆ.
- ಇದು ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾಟ್ನಂತೆಯೇ ಅದೇ ಹಲ್ (Hull) ವಿನ್ಯಾಸವನ್ನು ಹೊಂದಿದೆ.
- ಇದನ್ನು K-4 ಜಲಾಂತರ್ಗಾಮಿ-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಗಳೊಂದಿಗೆ (SLBM ಗಳು) ಶಸ್ತ್ರಸಜ್ಜಿತಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ.
- ಇದು ತನ್ನ ಹಿಂದಿನ ಜಲಾಂತರ್ಗಾಮಿಗಳಿಗಿಂತ ದುಪ್ಪಟ್ಟು ಸಾಮರ್ಥ್ಯದ ಅಂದರೆ 8 ಕ್ಷಿಪಣಿ ಉಡಾವಣಾ ಟ್ಯೂಬ್ಗಳನ್ನು ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
(a) 1, 3 ಮತ್ತು 4 ಮಾತ್ರ
(b) 1 ಮತ್ತು 2 ಮಾತ್ರ
(c) 2, 3 ಮತ್ತು 4 ಮಾತ್ರ
(d) 1, 2, 3 ಮತ್ತು 4
50). ಫಿಫಾ ಶಾಂತಿ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು 2025 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದರ ಉದ್ಘಾಟನಾ ಪ್ರಶಸ್ತಿಯನ್ನು ಡಿಸೆಂಬರ್ 5, 2025 ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಲಾಯಿತು.
- ಈ ಪ್ರಶಸ್ತಿಯು ಶಾಂತಿ, ಸಂಘರ್ಷದ ಪರಿಹಾರ ಮತ್ತು ಜಾಗತಿಕ ಏಕತೆಗೆ ನೀಡಿದ ಅಸಾಧಾರಣ ಕೊಡುಗೆಗಳನ್ನು ಗುರುತಿಸುತ್ತದೆ.
- ಈ ಪ್ರಶಸ್ತಿಯನ್ನು ಫಿಫಾ ಸಹಯೋಗದೊಂದಿಗೆ ವಿಶ್ವಸಂಸ್ಥೆಯ ಅಡಿಯಲ್ಲಿ ನೀಡಲಾಗುತ್ತದೆ.
- ಈ ಪ್ರಶಸ್ತಿಯು ಫಿಫಾದ ಘೋಷವಾಕ್ಯವಾದ “ಫುಟ್ಬಾಲ್ ಜಗತ್ತನ್ನು ಒಂದುಗೂಡಿಸುತ್ತದೆ” ಎಂಬುದಕ್ಕೆ ಅನುಗುಣವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 2, 3 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 1, 2, 3 ಮತ್ತು 4
51). ಅನಂತ್ ಅಂಬಾನಿ ಅವರು ಸ್ವೀಕರಿಸಿದ ‘ಜಾಗತಿಕ ಮಾನವತಾವಾದಿ ಪ್ರಶಸ್ತಿ’ಯನ್ನು ಈ ಕೆಳಗಿನ ಯಾವ ಸಂಸ್ಥೆಯು ನೀಡಿದೆ?
- ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)
- ವರ್ಲ್ಡ್ ವೈಲ್ಡ್ಲೈಫ್ ಫಂಡ್ (WWF)
- ಗ್ರೀನ್ಪೀಸ್ ಇಂಟರ್ನ್ಯಾಷನಲ್
- ಗ್ಲೋಬಲ್ ಹ್ಯೂಮನ್ ಸೊಸೈಟಿ
52). 2025 ರ ‘ವಿಶ್ವ ಅಥ್ಲೆಟಿಕ್ಸ್ ವರ್ಷದ ಕ್ರೀಡಾಪಟು’ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸಿಡ್ನಿ ಮೆಕ್ಲಾಫ್ಲಿನ್-ಲೆವ್ರೋನ್ ಅವರು ಒಟ್ಟಾರೆ ಮಹಿಳಾ ಪ್ರಶಸ್ತಿ ಮತ್ತು ಮಹಿಳಾ ಟ್ರ್ಯಾಕ್ ವಿಭಾಗ ಎರಡನ್ನೂ ಗೆದ್ದಿದ್ದಾರೆ.
- ಮೊಂಡೊ ಡುಪ್ಲಾಂಟಿಸ್ ಅವರು ಒಟ್ಟಾರೆ ಪುರುಷರ ಪ್ರಶಸ್ತಿ ಮತ್ತು ಪುರುಷರ ಫೀಲ್ಡ್ ವಿಭಾಗ ಎರಡನ್ನೂ ಗೆದ್ದಿದ್ದಾರೆ.
- ಈ ಪ್ರಶಸ್ತಿ ಪ್ರದಾನ ಸಮಾರಂಭವು ಸ್ವಿಟ್ಜರ್ಲೆಂಡ್ನ ಲೌಸನ್ನೆಯಲ್ಲಿ ನಡೆಯಿತು.
- ಈ ಪ್ರಶಸ್ತಿಗಳನ್ನು ಕೇವಲ ಒಲಿಂಪಿಕ್ ಸಾಧನೆಗಳಿಗಾಗಿ ಮಾತ್ರ ನೀಡಲಾಗುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 1, 2 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
53). ಟಿ20 ಕ್ರಿಕೆಟ್ನಲ್ಲಿ ಸುನಿಲ್ ನರೈನ್ ಅವರ ಸಾಧನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇವರು ಸ್ಪರ್ಧಾತ್ಮಕ ಟಿ20 ಕ್ರಿಕೆಟ್ನಲ್ಲಿ 600 ವಿಕೆಟ್ಗಳನ್ನು ಪಡೆದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡರು.
- ಇವರು ವಿಶ್ವ ILT20 ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ಪರ ಆಡುವಾಗ ಈ ಮೈಲಿಗಲ್ಲನ್ನು ಸಾಧಿಸಿದರು.
- ಇವರಿಗಿಂತ ಮೊದಲು ರಶೀದ್ ಖಾನ್ ಮತ್ತು ಡ್ವೇನ್ ಬ್ರಾವೋ ಮಾತ್ರ 600 ವಿಕೆಟ್ಗಳ ಸಾಧನೆ ಮಾಡಿದ ಇತರ ಇಬ್ಬರು ಬೌಲರ್ಗಳಾಗಿದ್ದಾರೆ.
- ಇವರು ಈ ಮೈಲಿಗಲ್ಲನ್ನು ಡಿಸೆಂಬರ್ 3, 2025 ರಂದು ಸಾಧಿಸಿದರು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 2 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
- 2, 3 ಮತ್ತು 4 ಮಾತ್ರ
54). 2025 ರ ಫಾರ್ಮುಲಾ ಒನ್ ಸೀಸನ್ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಲ್ಯಾಂಡೋ ನಾರಿಸ್ 2025 ರಲ್ಲಿ ತಮ್ಮ ಚೊಚ್ಚಲ ಚಾಲಕರ ಚಾಂಪಿಯನ್ಶಿಪ್ ಗೆದ್ದಿದ್ದಾರೆ.
- ಮೆಕ್ಲಾರೆನ್ ತಂಡವು 2008 ರ ನಂತರ ತನ್ನ ಮೊದಲ ಚಾಲಕರ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
- ಮ್ಯಾಕ್ಸ್ ವರ್ಸ್ಟಪ್ಪೆನ್ ಅವರು ಚಾಲಕರ ಚಾಂಪಿಯನ್ಶಿಪ್ನಲ್ಲಿ ರನ್ನರ್-ಅಪ್ (ಎರಡನೇ ಸ್ಥಾನ) ಆಗಿ ಹೊರಹೊಮ್ಮಿದರು.
- ಮೆಕ್ಲಾರೆನ್ ತಂಡವು 2025 ರಲ್ಲಿ ಕನ್ಸ್ಟ್ರಕ್ಟರ್ಸ್ ಚಾಂಪಿಯನ್ಶಿಪ್ ಅನ್ನು ಸಹ ಗೆದ್ದುಕೊಂಡಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
- 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
55). 2025 ರಲ್ಲಿ ವಿಶ್ವದ ಅತ್ಯಂತ ಕಿರಿಯ ಫಿಡೆ-ರೇಟೆಡ್ (FIDE-rated) ಚೆಸ್ ಆಟಗಾರರಾದವರು ಯಾರು?
- ಅನೀಶ್ ಸರ್ಕಾರ್
- ರಮೇಶ್ಬಾಬು ಪ್ರಜ್ಞಾನಂದ
- ಸರ್ವಜ್ಞ ಸಿಂಗ್ ಕುಶ್ವಾಹ
- ನಿಹಾಲ್ ಸರಿನ್
56). 2025 ರ ಸ್ಕ್ವಾಷ್ ವಿಶ್ವಕಪ್ನಲ್ಲಿ ಭಾರತದ ವಿಜಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತವು ಹಾಂಗ್ ಕಾಂಗ್ ಅನ್ನು 3-0 ಅಂತರದಿಂದ ಸೋಲಿಸುವ ಮೂಲಕ ತನ್ನ ಚೊಚ್ಚಲ ಸ್ಕ್ವಾಷ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
- ವಿಶ್ವದ 79ನೇ ಶ್ರೇಯಾಂಕದ ಜೋಶ್ನಾ ಚಿನಪ್ಪ ಅವರು ತಮಗಿಂತ 42 ಸ್ಥಾನಗಳಷ್ಟು ಮುಂದಿದ್ದ ಕಾ ಯಿ ಲೀ ಅವರ ವಿರುದ್ಧದ ಪಂದ್ಯವನ್ನು ಗೆದ್ದರು.
- ಈ ಫೈನಲ್ ಪಂದ್ಯವು ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಹಾಂಗ್ ಕಾಂಗ್ ನಡುವಿನ ಮೊದಲ ಮುಖಾಮುಖಿಯಾಗಿತ್ತು.
- ಭಾರತವು 2025 ರಲ್ಲಿ ಮೊದಲ ಬಾರಿಗೆ ಸ್ಕ್ವಾಷ್ ವಿಶ್ವಕಪ್ಗೆ ಆತಿಥ್ಯ ವಹಿಸಿತ್ತು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 1, 2, 3 ಮತ್ತು 4
- 2 ಮತ್ತು 3 ಮಾತ್ರ
57). 2025 ರ ಫಿಡೆ (FIDE) ಸರ್ಕ್ಯೂಟ್ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು 2026 ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ಗೆ ಫಿಡೆ ಪರಿಚಯಿಸಿದ ಕಾರ್ಯಕ್ಷಮತೆ ಆಧಾರಿತ ಅರ್ಹತಾ ಮಾರ್ಗವಾಗಿದೆ.
- ಆರ್. ಪ್ರಜ್ಞಾನಂದ ಅವರು 2025 ರ ಫಿಡೆ ಸರ್ಕ್ಯೂಟ್ ಮೂಲಕ ಅರ್ಹತೆ ಪಡೆದ ಏಕೈಕ ಪುರುಷ ಆಟಗಾರರಾಗಿದ್ದಾರೆ.
- ಈ ಸರ್ಕ್ಯೂಟ್ ಫಿಡೆ ಮುಂಚಿತವಾಗಿ ಅಧಿಸೂಚಿಸಿದ ಸ್ಥಿರವಾದ ಪಂದ್ಯಾವಳಿಗಳ ಗುಂಪನ್ನು ಒಳಗೊಂಡಿರುತ್ತದೆ.
- ಈ ಸರ್ಕ್ಯೂಟ್ ಕ್ಯಾಲೆಂಡರ್ ವರ್ಷದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 1, 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
58). ತಮಿಳುನಾಡಿನಲ್ಲಿ ನಡೆದ 2025 ರ ಎಫ್ಐಎಚ್ (FIH) ಪುರುಷರ ಜೂನಿಯರ್ ಹಾಕಿ ವಿಶ್ವಕಪ್ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸ್ಪೇನ್ ತಂಡವನ್ನು ಸೋಲಿಸುವ ಮೂಲಕ ಜರ್ಮನಿ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಜರ್ಮನಿಯು ತನ್ನ ಹಿಂದಿನ ಆವೃತ್ತಿಯಲ್ಲಿ ಗೆದ್ದಿದ್ದ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ.
- ಇದು ಪಂದ್ಯಾವಳಿಯ ಫೈನಲ್ನಲ್ಲಿ ಜರ್ಮನಿಯ 10ನೇ ಪ್ರವೇಶವಾಗಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ತನ್ನ ದಾಖಲೆಯ 10ನೇ ಪ್ರಶಸ್ತಿಯನ್ನು ಗೆದ್ದಿದೆ.
- ಚೆನ್ನೈ ಮತ್ತು ಮಧುರೈ ಜಂಟಿಯಾಗಿ ಈ ಪಂದ್ಯಾವಳಿಗೆ ಆತಿಥ್ಯ ವಹಿಸಿದ್ದವು.
- ಭಾರತವು ಅರ್ಜೆಂಟೀನಾವನ್ನು ಸೋಲಿಸಿ ಮೂರನೇ ಸ್ಥಾನವನ್ನು ಪಡೆದುಕೊಂಡಿತು ಮತ್ತು ಜೂನಿಯರ್ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ವೇದಿಕೆ ಏರಿದ ಸಾಧನೆ ಮಾಡಿತು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ?
- 1 ಮತ್ತು 2 ಮಾತ್ರ
- 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
59). 2025 ರ ಫಿಫಾ (FIFA) ಅತ್ಯುತ್ತಮ ಫುಟ್ಬಾಲ್ ಪ್ರಶಸ್ತಿಗಳು ಮತ್ತು ಅದರ ವಿಜೇತರ ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
- ಫಿಫಾ ವರ್ಷದ ಪುರುಷ ಆಟಗಾರ – ಔಸ್ಮಾನೆ ಡೆಂಬೆಲೆ
- ಫಿಫಾ ವರ್ಷದ ಮಹಿಳಾ ಆಟಗಾರ್ತಿ – ಐಟಾನಾ ಬೊನ್ಮಾಟಿ
- ಪುಸ್ಕಾಸ್ ಪ್ರಶಸ್ತಿ – ಸ್ಯಾಂಟಿಯಾಗೊ ಮೊಂಟಿಯಲ್
- ಫಿಫಾ ಅಭಿಮಾನಿಗಳ ಪ್ರಶಸ್ತಿ – ಜಖೋ ಎಸ್ಸಿ ಬೆಂಬಲಿಗರು
ಮೇಲಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
- 2 ಮತ್ತು 4 ಮಾತ್ರ
60). 2025 ರ ಫಿಫಾ (FIFA) ಅತ್ಯುತ್ತಮ ಫುಟ್ಬಾಲ್ ಪ್ರಶಸ್ತಿ ವಿಭಾಗಗಳು ಮತ್ತು ಅದರ ವಿಜೇತರ ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
- ಪುರುಷರ ಗೋಲ್ಕೀಪರ್ – ಜಿಯಾನ್ಲುಯಿಗಿ ಡೊನ್ನಾರುಮ್ಮಾ
- ಮಹಿಳಾ ಗೋಲ್ಕೀಪರ್ – ಹನ್ನಾ ಹ್ಯಾಂಪ್ಟನ್
- ಪುರುಷರ ತರಬೇತುದಾರ – ಲೂಯಿಸ್ ಎನ್ರಿಕ್
- ಮಹಿಳಾ ತರಬೇತುದಾರ – ಐಟಾನಾ ಬೊನ್ಮಾಟಿ
ಮೇಲಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ/ಗಿವೆ?
- 1, 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
61). ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) 2025–26 ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಹರಿಯಾಣ ತಂಡವನ್ನು ಸೋಲಿಸುವ ಮೂಲಕ ಜಾರ್ಖಂಡ್ ತನ್ನ ಚೊಚ್ಚಲ SMAT ಪ್ರಶಸ್ತಿಯನ್ನು ಗೆದ್ದುಕೊಂಡಿತು.
- ಅನುಕುಲ್ ರಾಯ್ ಅವರು ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು; ಅವರು ಈ ಪಂದ್ಯಾವಳಿಯಲ್ಲಿ ಒಟ್ಟು 303 ರನ್ ಗಳಿಸಿದರು ಮತ್ತು 18 ವಿಕೆಟ್ ಪಡೆದರು.
- ಇಶಾನ್ ಕಿಶನ್ ಅವರನ್ನು ‘ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು; ಇವರು ಫೈನಲ್ ಪಂದ್ಯದಲ್ಲಿ 49 ಎಸೆತಗಳಲ್ಲಿ 101 ರನ್ ಗಳಿಸಿದರು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮಾತ್ರ
- 1, 2 ಮತ್ತು 3
62). 2030 ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಅಹಮದಾಬಾದ್ ಕಾಮನ್ವೆಲ್ತ್ ಕ್ರೀಡಾಕೂಟದ ಶತಮಾನೋತ್ಸವದ ಆವೃತ್ತಿಯನ್ನು ಆಯೋಜಿಸಲಿದೆ. ಈ ಕ್ರೀಡಾಕೂಟವು 20 ವರ್ಷಗಳ ಸುದೀರ್ಘ ಅವಧಿಯ ನಂತರ ಭಾರತಕ್ಕೆ ಮರಳಲಿದೆ.
- ಮೊದಲ ಕಾಮನ್ವೆಲ್ತ್ ಕ್ರೀಡಾಕೂಟವು ಯುನೈಟೆಡ್ ಕಿಂಗ್ಡಮ್ನಲ್ಲಿ ನಡೆಯಿತು ಮತ್ತು ಇದನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ.
- ಭಾರತವು ಕೊನೆಯದಾಗಿ 2010 ರಲ್ಲಿ ನವದೆಹಲಿಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು ಮತ್ತು ಈ ಹಿಂದೆ ಒಂದಕ್ಕಿಂತ ಹೆಚ್ಚು ಬಾರಿ ಇದನ್ನು ಆಯೋಜಿಸಿದೆ.
- ಕಾಮನ್ವೆಲ್ತ್ ಕ್ರೀಡಾಕೂಟದ ಕೊನೆಯ ಆವೃತ್ತಿಯು ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿತ್ತು ಮತ್ತು ಇದು ಒಲಿಂಪಿಕ್ ಹಾಗೂ ಒಲಿಂಪಿಕ್ ಅಲ್ಲದ ಕ್ರೀಡೆಗಳೆರಡನ್ನೂ ಒಳಗೊಂಡಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?
- 1 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 3 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
ಕರ್ನಾಟಕ ದರ್ಶನ ಮತ್ತು ಇತರೆ
ಉತ್ತರಗಳು
1) B
2) A
3) A
4) C
5) D
6) D
7) A
8) B
9) A
10) C
11) C
12) D
13) A
14) A
15) B
16) C
17) B
18) D
19) A
20) C
21) C
22) B
23) C
24) B
25) B
26) D
27) B
28) C
29) D
30) C
31) C
32) A
33) B
34) A
35) B
36) C
37) A
38) B
39) C
40) A
41) B
42) B
43) A
44) A
45) B
46) C
47) B
48) A
49) A
50) C
51) D
52) A
53) C
54) B
55) C
56) A
57) B
58) B
59) C
60) A
61) C
62) A



ನಿಮ್ಮದೊಂದು ಉತ್ತರ