ಓಮನ್ ಕೊಲ್ಲಿ
ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು; ಸಾಮಾನ್ಯ ಅಧ್ಯಯನ-1/ ಸುದ್ದಿಯಲ್ಲಿರುವ ಸ್ಥಳಗಳು
ಇದೀಗ ಸುದ್ದಿಯಲ್ಲಿದೆ:
- ಓಮನ್ ಕೊಲ್ಲಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ದಶಲಕ್ಷ ಲೀಟರ್ ಡೀಸೆಲ್ ಹೊಂದಿದ್ದ ವಿದೇಶಿ ತೈಲ ಟ್ಯಾಂಕರ್ ಅನ್ನು ಇರಾನ್ ವಶಪಡಿಸಿಕೊಂಡಿದೆ.
ಓಮನ್ ಕೊಲ್ಲಿಯ ಬಗ್ಗೆ:
- ಓಮನ್ ಕೊಲ್ಲಿಯು ಅರಬ್ಬಿ ಸಮುದ್ರದ ವಾಯುವ್ಯಭಾಗದಲ್ಲಿದೆ.
- ಸಂಪರ್ಕ: ಇದು ಹಾರ್ಮುಜ್ ಜಲಸಂಧಿಯ ಮೂಲಕ ಹಿಂದೂ ಮಹಾಸಾಗರವನ್ನು ಪರ್ಷಿಯನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಅತ್ಯಂತ ಪ್ರಮುಖ ಸಮುದ್ರ ಸಾರಿಗೆ ಮಾರ್ಗವಾಗಿದೆ.
- ವಿಶೇಷತೆ:- ಹಾರ್ಮುಜ್ ಜಲಸಂಧಿಯ ಮೂಲಕ ಪರ್ಷಿಯನ್ ಕೊಲ್ಲಿಗೆ ಪ್ರವೇಶವನ್ನು ಒದಗಿಸುವ ಈ ಮಾರ್ಗವು, ಜಾಗತಿಕ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ವ್ಯಾಪಾರಕ್ಕೆ ಅತ್ಯಂತ ನಿರ್ಣಾಯಕ ಮಾರ್ಗವಾಗಿದೆ.
ASPIRE (ಆಸ್ಪೈರ್) ಯೋಜನೆ
ಸಾಮಾನ್ಯ ಅಧ್ಯಯನ -2/ ಕಲ್ಯಾಣ ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
- ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವ ಉದ್ದೇಶದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು (MSME) ‘ASPIRE’ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ASPIRE (ಆಸ್ಪೈರ್)ಯೋಜನೆಯ ಬಗ್ಗೆ:
- ಆರಂಭ: 2015 ರಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು (MSME) ಪ್ರಾರಂಭಿಸಿತು.
- ಉದ್ದೇಶ: ಸೂಕ್ಷ್ಮ ಉದ್ಯಮಗಳಿಗೆ ಕೌಶಲ್ಯ ಅಭಿವೃದ್ಧಿ, ಇನ್ಕ್ಯುಬೇಷನ್ (ಮಾರ್ಗದರ್ಶನ, ಮೂಲಸೌಕರ್ಯ, ಹಣಕಾಸು ಮತ್ತು ತಾಂತ್ರಿಕ ಸಹಾಯ) ಮತ್ತು ಅಗತ್ಯ ಬೆಂಬಲ ಒದಗಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.
ಪ್ರಮುಖ ಘಟಕಗಳು:
- ಜೀವನೋಪಾಯ ವ್ಯವಹಾರ ಇನ್ಕ್ಯುಬೇಟರ್ಗಳು (LBIs): ಇವು ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು ಮತ್ತು ಗ್ರಾಮೀಣ ವ್ಯಾಪಾರಗಳಲ್ಲಿ ತರಬೇತಿ ನೀಡುವ ಮೂಲಕ ಕೃಷಿ ಆಧಾರಿತ ಉದ್ಯಮಗಳಿಗೆ ಬೆಂಬಲ ನೀಡುತ್ತವೆ. ಈ ಉದ್ದೇಶಕ್ಕಾಗಿ ಅನುದಾನ:
- ಖಾಸಗಿ ಸಂಸ್ಥೆಗಳಿಗೆ ₹75 ಲಕ್ಷದವರೆಗೆ,
- ಸರ್ಕಾರಿ ಸಂಸ್ಥೆಗಳಿಗೆ ₹1 ಕೋಟಿಯವರೆಗೆ ನೀಡಲಾಗುತ್ತಿದೆ.
- ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್ಗಳು (TBIs): ಇವು ಇದೇ ರೀತಿಯ ಧನಸಹಾಯದೊಂದಿಗೆ ತಂತ್ರಜ್ಞಾನ ಆಧಾರಿತ ಗ್ರಾಮೀಣ ನಾವೀನ್ಯತೆಗಳನ್ನು ಉತ್ತೇಜಿಸುವತ್ತ ಗಮನ ಹರಿಸುತ್ತವೆ.
- ನಿಧಿಗಳ ನಿಧಿ: ಕೃಷಿ-ಗ್ರಾಮೀಣ ವಲಯದ ನವೋದ್ಯಮಗಳಿಗೆ ಬೆಂಬಲ ನೀಡಲು SIDBI ಮೂಲಕ ನಿರ್ವಹಿಸಲ್ಪಡುವ ₹200 ಕೋಟಿ ಮೊತ್ತದ ನಿಧಿಯನ್ನು ಇದು ಒಳಗೊಂಡಿದೆ.
|
ಇದು ನಿಮಗೆ ತಿಳಿದಿದೆಯೇ?
|
ವ್ಯಾಪಾರ ಕೊರತೆ
ಸಾಮಾನ್ಯ ಅಧ್ಯಯನ-3/ ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ನವೆಂಬರ್ 2025ರಲ್ಲಿ ಭಾರತದ ವ್ಯಾಪಾರ ಕೊರತೆಯು 61% ಕ್ಕೂ ಅಧಿಕ ಕುಸಿತ ಕಂಡು 660 ಕೋಟಿ ಅಮೇರಿಕ ಡಾಲರ್ಗಳಿಗೆ ತಲುಪಿದೆ.
- ಸರಕು ರಫ್ತಿನಲ್ಲಿನ ಸದೃಢ ಬೆಳವಣಿಗೆ ಮತ್ತು ಸರಕು ಆಮದಿನಲ್ಲಿನ ಇಳಿಕೆಯು ಈ ಗಮನಾರ್ಹ ಸುಧಾರಣೆಗೆ ಪ್ರಮುಖ ಕಾರಣವಾಗಿದೆ.
ವ್ಯಾಪಾರ ಕೊರತೆಯ ಬಗ್ಗೆ:
- ವ್ಯಾಖ್ಯಾನ: ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದ ಆಮದಿನ ಮೌಲ್ಯವು ಅದರ ರಫ್ತಿನ ಮೌಲ್ಯಕ್ಕಿಂತ ಹೆಚ್ಚಾದಾಗ ‘ವ್ಯಾಪಾರ ಕೊರತೆ’ ಸಂಭವಿಸುತ್ತದೆ.
- ಈ ಸ್ಥಿತಿಯು ಋಣಾತ್ಮಕ ವ್ಯಾಪಾರ ಸಮತೋಲನಕ್ಕೇ ಕಾರಣವಾಗುತ್ತದೆ.
- ವ್ಯಾಪಾರ ಸಮತೋಲನ/ಬಾಕಿ (BoT) ಸೂತ್ರ:
|
ವ್ಯಾಪಾರ ಸಮತೋಲನ (BoT) = ಒಟ್ಟು ರಫ್ತುಗಳು – ಒಟ್ಟು ಆಮದುಗಳು |
ವ್ಯಾಪಾರ ಕೊರತೆಯ ವಿಧಗಳು:
- ಸರಕುಗಳ ವ್ಯಾಪಾರ ಕೊರತೆ:- ಇದು ಭೌತಿಕ ಸರಕುಗಳ ರಫ್ತು ಮತ್ತು ಆಮದುಗಳ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ.
- ಸೇವೆಗಳ ವ್ಯಾಪಾರ ಕೊರತೆ / ಹೆಚ್ಚುವರಿ:- ಇದು ಸೇವಾ ರಫ್ತುಗಳು (ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಹಣಕಾಸು) ಮತ್ತು ಸೇವಾ ಆಮದುಗಳ ನಡುವಿನ ವ್ಯತ್ಯಾಸವಾಗಿದೆ.
- ಭಾರತವು ಸಾಮಾನ್ಯವಾಗಿ ಸೇವಾ ವಲಯದಲ್ಲಿ ವ್ಯಾಪಾರ ಹೆಚ್ಚುವರಿಯನ್ನು ಹೊಂದಿರುತ್ತದೆ.
- ದ್ವಿಪಕ್ಷೀಯ ವ್ಯಾಪಾರ ಕೊರತೆ:- ಇದು ಚೀನಾದಂತಹ ಒಂದು ನಿರ್ದಿಷ್ಟ ದೇಶದೊಂದಿಗಿನ ಭಾರತದ ವ್ಯಾಪಾರ ಕೊರತೆಯನ್ನು ಸೂಚಿಸುತ್ತದೆ.
- ನಿವ್ವಳ ಬಾಹ್ಯ ಬೇಡಿಕೆಯ ಸೂಚಕ:- ಇದು ಜಾಗತಿಕ ವ್ಯಾಪಾರದಲ್ಲಿ ಒಂದು ದೇಶವು ನಿವ್ವಳ ಆಮದುದಾರ ಅಥವಾ ನಿವ್ವಳ ರಫ್ತುದಾರ ಎಂಬುದನ್ನು ಪ್ರತಿಬಿಂಬಿಸುವ ಪ್ರಮುಖ ಸೂಚಕವಾಗಿದೆ.
ಜಿಗುಟುವ ವಂಶವಾಹಿಗಳು (Jumping Genes)
ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
- ದಕ್ಷಿಣ ಗ್ರೀನ್ಲ್ಯಾಂಡಿನ ಧ್ರುವ ಕರಡಿಗಳಲ್ಲಿ ‘ಜಿಗಿಯುವ ವಂಶವಾಹಿ’ಗಳಿಗೆ ಸಂಬಂಧಿಸಿದಂತೆ ತ್ವರಿತ ಆನುವಂಶಿಕ ಬದಲಾವಣೆಗಳು ಕಂಡುಬಂದಿವೆ.
- ಈ ಬದಲಾವಣೆಗಳು ಬೆಚ್ಚಗಾಗುತ್ತಿರುವ ಆರ್ಕ್ಟಿಕ್ ಪರಿಸರದಲ್ಲಿ ಅವುಗಳ ಬದುಕುಳಿಯುವಿಕೆಗೆ ಸಹಕಾರಿಯಾಗುವ ಸಾಧ್ಯತೆಯಿದೆ.
ಜಿಗುಟುವ ವಂಶವಾಹಿಗಳ ಬಗ್ಗೆ:
- ವೈಜ್ಞಾನಿಕವಾಗಿ ‘ಟ್ರಾನ್ಸ್ಪೋಸಬಲ್ ಎಲಿಮೆಂಟ್ಸ್’ (ಸ್ಥಾನಾಂತರಗೊಳ್ಳುವ ವಂಶವಾಹಿಗಳ ಅಂಶಗಳು) ಎಂದು ಕರೆಯಲ್ಪಡುವ ಇವು ಜೀನೋಮ್ನ ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಸ್ಥಳಾಂತರಗೊಳ್ಳಬಲ್ಲ ಡಿಎನ್ಎ ಅನುಕ್ರಮಗಳಾಗಿವೆ.
- ಇವುಗಳನ್ನು ಮೆಕ್ಕೆಜೋಳದಲ್ಲಿ ಪತ್ತೆಹಚ್ಚಿದ ವಿಜ್ಞಾನಿ ಬಾರ್ಬರಾ ಮೆಕ್ಲಿಂಟಾಕ್ ಅವರಿಗೆ 1983ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
- ಮಾನವನ ಜೀನೋಮ್ನಲ್ಲಿ ಇವುಗಳ ಪಾಲು ಸುಮಾರು 45% ರಷ್ಟಿದೆ.
ಎಹೆಚ್-64ಇ (AH-64E) ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳು
ಸಾಮಾನ್ಯ ಅಧ್ಯಯನ -3/ ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಭಾರತೀಯ ಭೂಸೇನೆಯು ಮೂರು ಎಹೆಚ್-64ಇ ಅಪಾಚೆ ಅಟ್ಯಾಕ್ (ಅಕ್ರಮಣಕಾರಿ) ಹೆಲಿಕಾಪ್ಟರ್ಗಳ ಅಂತಿಮ ಹಂತದ ಬ್ಯಾಚ್ ಅನ್ನು ಅಮೇರಿಕಾದಿಂದ ಸ್ವೀಕರಿಸಿದೆ.
ಎಹೆಚ್-64ಇ (AH-64E) ಅಪಾಚೆ ಅಟ್ಯಾಕ್ (ಅಕ್ರಮಣಕಾರಿ) ಹೆಲಿಕಾಪ್ಟರ್ಗಳ ಬಗ್ಗೆ:
- ಈ ಅಪಾಚೆ ಹೆಲಿಕಾಪ್ಟರ್ಗಳನ್ನು 2020 ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದೊಂದಿಗೆ ಏರ್ಪಟ್ಟ 600 ದಶ ಲಕ್ಷ ಡಾಲರ್ ಮೊತ್ತದ ಒಪ್ಪಂದದ ಅಡಿಯಲ್ಲಿ ಖರೀದಿಸಲಾಗಿದೆ.
- ಇದನ್ನು ವಿಶ್ವದ ಅತ್ಯಂತ ಸುಧಾರಿತ ‘ಬಹು-ಪಾತ್ರದ ಯುದ್ಧಗಳ ಹೆಲಿಕಾಪ್ಟರ್’ ಎಂದು ಪರಿಗಣಿಸಲಾಗಿದೆ.
- ವಿಶೇಷತೆ:- ಇದು ಅತ್ಯಾಧುನಿಕ ವೈಮಾನಿಕ ತಂತ್ರಜ್ಞಾನ, ಸಂವೇದಕಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದ್ದು, ಯಾವುದೇ ಹವಾಮಾನ ಮತ್ತು ಕಠಿಣ ಭೂಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ದಕ್ಷತೆಯನ್ನು ಹೊಂದಿದೆ.
ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025
ಸಾಮಾನ್ಯ ಅಧ್ಯಯನ-2/ ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಸಚಿವರು ‘ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025′ ಅನ್ನು ಲೋಕಸಭೆಯಲ್ಲಿ ಮಂಡಿಸಿದರು.
ಮಸೂದೆಯ ಪ್ರಮುಖ ಅಂಶಗಳು:
- ಈ ಮಸೂದೆಯು 2005ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA)ಯನ್ನು ಬದಲಿಸಲಿದೆ.
- ಈ ಕ್ರಮವು ಉದ್ಯೋಗ ಖಾತರಿ ವ್ಯವಸ್ಥೆಯನ್ನು ಪ್ರಸ್ತುತ ಇರುವ “ಬೇಡಿಕೆ-ಆಧಾರಿತ ಚೌಕಟ್ಟಿನಿಂದ” “ಪೂರೈಕೆ-ಆಧಾರಿತ ಯೋಜನೆಗೆ” ಪರಿವರ್ತಿಸುತ್ತದೆ.
ಪ್ರಮುಖ ಶಾಸನಬದ್ಧ ನಿಬಂಧನೆಗಳು:
- ಸುಧಾರಿತ ಜೀವನೋಪಾಯ ಖಾತ್ರಿ: ಕೌಶಲ್ಯ ರಹಿತ ದೈಹಿಕ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುವ ವಯಸ್ಕರನ್ನು ಹೊಂದಿರುವ ಪ್ರತಿ ಗ್ರಾಮೀಣ ಕುಟುಂಬಕ್ಕೆ, ಪ್ರತಿ ಆರ್ಥಿಕ ವರ್ಷದಲ್ಲಿ ಶಾಸನಬದ್ಧ ವೇತನ ಸಹಿತ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಈ ಮಸೂದೆಯು ಹೆಚ್ಚಿಸುತ್ತದೆ.
- ಕೇಂದ್ರ ಪ್ರಾಯೋಜಿತ ಯೋಜನೆ: ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾದ ಜವಾಬ್ದಾರಿಗಳೊಂದಿಗೆ ‘ಕೇಂದ್ರ ಪ್ರಾಯೋಜಿತ ಯೋಜನೆ’ಯಾಗಿ ಅನುಷ್ಠಾನಗೊಳಿಸಲಾಗುತ್ತದೆ.
- ನಿಧಿ ಹಂಚಿಕೆ ಮಾದರಿ: ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ನಿಧಿ ಹಂಚಿಕೆಯ ಅನುಪಾತವು 90:10 ರಷ್ಟಿರುತ್ತದೆ. ಉಳಿದ ಎಲ್ಲಾ ರಾಜ್ಯಗಳಿಗೆ ಈ ಅನುಪಾತವು 60:40 ರಷ್ಟಿರುತ್ತದೆ.
- ರಾಜ್ಯಗಳಿಗೆ ನಿಯಮಿತ ಹಂಚಿಕೆ: ಪಂಚಾಯತಿಗಳ ವರ್ಗೀಕರಣ ಮತ್ತು ಸ್ಥಳೀಯ ಅಭಿವೃದ್ಧಿ ಅಗತ್ಯಗಳನ್ನು ಪರಿಗಣಿಸಿ, ರಾಜ್ಯಗಳು ಜಿಲ್ಲೆ ಮತ್ತು ಗ್ರಾಮ ಪಂಚಾಯತ್ಗಳ ನಡುವೆ ಪಾರದರ್ಶಕ ಹಾಗೂ ಅಗತ್ಯ-ಆಧಾರಿತವಾಗಿ ನಿಧಿ ವಿತರಣೆಯನ್ನು ಖಚಿತಪಡಿಸಲಿವೆ.
- ವೇತನ ದರಗಳ ನಿರ್ಧಾರ: ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸುತ್ತದೆ; ಪ್ರತ್ಯೇಕ ದರಗಳನ್ನು ಅಧಿಸೂಚಿಸುವವರೆಗೆ, ಪ್ರಸ್ತುತ ಚಾಲ್ತಿಯಲ್ಲಿರುವ ನರೇಗಾ (MGNREGA) ವೇತನ ದರಗಳೇ ಅನ್ವಯವಾಗುತ್ತವೆ.
- ಕೃಷಿ ಚಟುವಟಿಕೆಗಳ ಗರಿಷ್ಠ ಸಮಯದ ಸಂರಕ್ಷಣೆ: ಬಿತ್ತನೆ ಮತ್ತು ಕೊಯ್ಲಿನಂತಹ ನಿರ್ಣಾಯಕ ಸಮಯಗಳಲ್ಲಿ ಕೃಷಿ ಕಾರ್ಮಿಕರ ಲಭ್ಯತೆಯನ್ನು ಸುಗಮಗೊಳಿಸಲು, ಒಂದು ಆರ್ಥಿಕ ವರ್ಷದಲ್ಲಿ ಒಟ್ಟು 60 ದಿನಗಳವರೆಗೆ ಈ ಮಸೂದೆಯ ಅಡಿಯಲ್ಲಿ ಯಾವುದೇ ಕೆಲಸಗಳನ್ನು ಕೈಗೊಳ್ಳದಂತೆ ಮುಂಚಿತವಾಗಿ ಅಧಿಸೂಚಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.
- ನಿರುದ್ಯೋಗ ಭತ್ಯೆ: ನಿಗದಿತ ಅವಧಿಯೊಳಗೆ ಅರ್ಹ ಅರ್ಜಿದಾರರಿಗೆ ಕೆಲಸ ನೀಡಲು ವಿಫಲವಾದರೆ, ಸಂಬಂಧಿತ ರಾಜ್ಯ ಸರ್ಕಾರಗಳು ನಿರುದ್ಯೋಗ ಭತ್ಯೆಯನ್ನು ಪಾವತಿಸಲು ಬದ್ಧವಾಗಿರುತ್ತವೆ.
- ಆರು ತಿಂಗಳೊಳಗೆ ರಾಜ್ಯ ಸರ್ಕಾರಗಳ ಯೋಜನೆಗಳು: ಈ ಮಸೂದೆಯು ಜಾರಿಗೆ ಬಂದ ಆರು ತಿಂಗಳ ಒಳಗೆ ಪ್ರತಿಯೊಂದು ರಾಜ್ಯ ಸರ್ಕಾರವು ಉದ್ಯೋಗ ಖಾತರಿಯನ್ನು ಕಾರ್ಯಗತಗೊಳಿಸಲು ತನ್ನದೇ ಆದ ಯೋಜನೆಯನ್ನು ಅಧಿಸೂಚಿಸಬೇಕು.
- ವಿಕಸಿತ ಗ್ರಾಮ ಪಂಚಾಯತ್ ಯೋಜನೆ (VGPP) ಆಧಾರಿತ ಯೋಜನೆ: ಗ್ರಾಮ ಪಂಚಾಯತ್ಗಳು ಸಿದ್ಧಪಡಿಸಿದ ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ (VGPP)ಗಳ ಮೂಲಕ ಯೋಜನೆಯನ್ನು ರೂಪಿಸಲಾಗುತ್ತದೆ ಮತ್ತು ಇವುಗಳನ್ನು ರಾಷ್ಟ್ರೀಯ ಪ್ರಾದೇಶಿಕ ಯೋಜನಾ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುತ್ತದೆ.
- ಸಾಂಸ್ಥಿಕ ಮೇಲ್ವಿಚಾರಣೆ: ಶಾಸನದ ನಿಬಂಧನೆಗಳ ಪರಿಶೀಲನೆ, ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯಾ ಹಂತಗಳಲ್ಲಿ ‘ಕೇಂದ್ರ ಗ್ರಾಮೀಣ ಉದ್ಯೋಗ ಖಾತ್ರಿ ಮಂಡಳಿ’ ಮತ್ತು ‘ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಮಂಡಳಿ’ಗಳನ್ನು ರಚಿಸಲಾಗುವುದು.



ನಿಮ್ಮದೊಂದು ಉತ್ತರ