ಒಡಿಶಾ: ಅರಣ್ಯ ಹಕ್ಕು ಕಾಯ್ದೆ (FRA) ಘಟಕಗಳ ಮುಚ್ಚುವಿಕೆ
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಒಡಿಶಾದಲ್ಲಿ ವಿವಿಧ ಆಡಳಿತಾತ್ಮಕ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಅರಣ್ಯ ಹಕ್ಕು ಕಾಯ್ದೆ’ (FRA) ಘಟಕಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರವು ನಿರ್ದೇಶನ ನೀಡಿತ್ತು.
- ಈ ನಿರ್ದೇಶನಗಳ ಕುರಿತು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಇದೀಗ ತನಿಖೆ ಹಾಗೂ ವಿಚಾರಣೆಯನ್ನು ಆರಂಭಿಸಿದೆ.
ಅರಣ್ಯ ಹಕ್ಕು ಕಾಯ್ದೆ, 2006 ರ ಬಗ್ಗೆ:
- ‘ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ, 2006’ ಅನ್ನು ಜನಪ್ರಿಯವಾಗಿ ‘ಅರಣ್ಯ ಹಕ್ಕು ಕಾಯ್ದೆ’ (FRA) ಎಂದು ಕರೆಯಲಾಗುತ್ತದೆ.
- ಅರಣ್ಯವಾಸಿ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಅವಲಂಬಿಸಿರುವ ಹಾಗೂ ಬಳಸುತ್ತಿರುವ ಅರಣ್ಯ ಭೂಮಿ ಮತ್ತು ಅರಣ್ಯ ಸಂಪನ್ಮೂಲಗಳ ಮೇಲಿನ ಅವರ ಹಕ್ಕುಗಳನ್ನು ಈ ಕಾಯ್ದೆಯು ಕಾನೂನುಬದ್ಧವಾಗಿ ಮಾನ್ಯ ಮಾಡುತ್ತದೆ.
‘ವಾಯ್ಸ್-ಎರಾ’ (VoicERA)
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (DIC) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗ’ವು (DIBD) ಇತ್ತೀಚೆಗೆ ‘ವಾಯ್ಸ್-ಎರಾ’ (VoicERA) ಎಂಬ ನೂತನ ತಂತ್ರಜ್ಞಾನ ವೇದಿಕೆಯನ್ನು ಬಿಡುಗಡೆ ಮಾಡಿದೆ.
ಭಾರತದ ರಾಷ್ಟ್ರೀಯ ವಾಯ್ಸ್ ಎಐ ಸ್ಟ್ಯಾಕ್ (VoicERA) ಬಗ್ಗೆ:
- ಇದು ‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ’ವಾಗಿ (DPI) ವಿನ್ಯಾಸಗೊಳಿಸಲಾದ ಒಂದು ಮುಕ್ತ-ಮೂಲದ ಮತ್ತು ಸಮಗ್ರ ತಾಂತ್ರಿಕ ಚೌಕಟ್ಟಾಗಿದೆ.
- ಸಾರ್ವಜನಿಕ ವೇದಿಕೆ:- ದೇಶದಾದ್ಯಂತ ಬಹುಭಾಷಾ ಧ್ವನಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ, ಇದನ್ನು ರಾಷ್ಟ್ರೀಯ ಕಾರ್ಯಾಚರಣಾ ಹಂತವಾಗಿ ‘ಭಾಷಿಣಿ ರಾಷ್ಟ್ರೀಯ ಭಾಷಾ ಮೂಲಸೌಕರ್ಯ’ದ ಮೇಲೆ ಅಳವಡಿಸಲಾಗಿದೆ.
- ಉದ್ದೇಶ:- ಸರ್ಕಾರಿ ಇಲಾಖೆಗಳು ಮತ್ತು ಆವಿಷ್ಕಾರಕರು ಸ್ಥಳೀಯ ಭಾರತೀಯ ಭಾಷೆಗಳಲ್ಲಿ ‘ಧ್ವನಿ-ಆಧಾರಿತ ನಾಗರಿಕ ಸೇವೆಗಳನ್ನು’ ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವುದು ಇದರ ಪ್ರಮುಖ ಉದ್ದೇಶವಾಗಿದೆ.
- ರೈತರಿಗೆ ಕೃಷಿ ಸಲಹೆಗಳು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ಮತ್ತು ಸಾರ್ವಜನಿಕರ ಕುಂದುಕೊರತೆ ನಿವಾರಣೆಯಂತಹ ಸೇವೆಗಳನ್ನು ಸ್ಥಳೀಯ ಭಾಷೆಗಳಲ್ಲೇ ಒದಗಿಸಲು ಇದು ಸಹಕಾರಿಯಾಗಿದೆ.
ಭಾರತೀಯ ಆಹಾರ ನಿಗಮ (FCI) ಮತ್ತು ವಿಶ್ವ ಆಹಾರ ಕಾರ್ಯಕ್ರಮ (WFP)
ಅರ್ಥಶಾಸ್ತ್ರ
ಇದೀಗ ಸುದ್ದಿಯಲ್ಲಿದೆ:
- ಜಾಗತಿಕ ಮಟ್ಟದಲ್ಲಿ ಹಸಿವಿನ ವಿರುದ್ಧ ಹೋರಾಡುವ ನಿಟ್ಟಿನಲ್ಲಿ, ಮಾನವೀಯ ಕಾರ್ಯಾಚರಣೆಗಳನ್ನು ಬೆಂಬಲಿಸಲು ಅಕ್ಕಿಯನ್ನು ಪೂರೈಸುವ ಉದ್ದೇಶದಿಂದ ‘ಭಾರತೀಯ ಆಹಾರ ನಿಗಮ’ (FCI) ಮತ್ತು ‘ವಿಶ್ವ ಆಹಾರ ಕಾರ್ಯಕ್ರಮ’ (WFP) ನಡುವೆ ಮಹತ್ವದ ತಿಳುವಳಿಕಾ ಒಡಂಬಡಿಕೆ (MoU)ಗೆ ಸಹಿ ಹಾಕಲಾಗಿದೆ.
ವಿಶ್ವ ಆಹಾರ ಕಾರ್ಯಕ್ರಮ (WFP)ದ ಬಗ್ಗೆ:
- ಈ ಸಂಸ್ಥೆಯನ್ನು 1961ರಲ್ಲಿ ಸ್ಥಾಪಿಸಲಾಯಿತು.
- ಕಾರ್ಯಾದೇಶ:- ಇದು ವಿಶ್ವಸಂಸ್ಥೆಯ (UN) ಪ್ರಾಥಮಿಕ ಆಹಾರ ನೆರವು ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ. ಹಸಿವನ್ನು ನೀಗಿಸುವುದು ಮತ್ತು ಜಾಗತಿಕ ಆಹಾರ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವಿಶ್ವದ ಅತಿದೊಡ್ಡ ಮಾನವೀಯ ಸಂಸ್ಥೆ ಇದಾಗಿದೆ.
ಭಾರತೀಯ ಆಹಾರ ನಿಗಮ (FCI)ದ ಬಗ್ಗೆ:
- ಇದು ‘ಆಹಾರ ನಿಗಮಗಳ ಕಾಯ್ದೆ, 1964’ರ ಅಡಿಯಲ್ಲಿ ಸ್ಥಾಪಿಸಲಾದ ಒಂದು ‘ಶಾಸನಬದ್ಧ ಸಂಸ್ಥೆ’ಯಾಗಿದೆ.
- ಈ ಸಂಸ್ಥೆಯ ಪ್ರಧಾನ ಕಚೇರಿಯು ನವದೆಹಲಿಯಲ್ಲಿದೆ.
- ಇದು ಭಾರತ ಸರ್ಕಾರದ ‘ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ’ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಉದ್ದೇಶ:- ರೈತರಿಂದ ಆಹಾರ ಧಾನ್ಯಗಳ ಸಂಗ್ರಹಣೆ, ಶೇಖರಣೆ ಮತ್ತು ‘ಸಾರ್ವಜನಿಕ ವಿತರಣಾ ವ್ಯವಸ್ಥೆ’ಯ (PDS) ಮೂಲಕ ವಿತರಣೆ ಮಾಡುವ ಮುಖಾಂತರ ರಾಷ್ಟ್ರೀಯ ಆಹಾರ ಭದ್ರತೆಯನ್ನು ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ಬರ ಅಥವಾ ಪ್ರವಾಹದಂತಹ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ‘ಮೀಸಲು ದಾಸ್ತಾನು’ (ಕಾಪು ದಾಸ್ತಾನು) ನಿರ್ವಹಣೆಯನ್ನು ಇದು ಮಾಡುತ್ತದೆ.
ಮುನ್ಸಿಪಲ್ ಬಾಂಡ್ಗಳು
ಅರ್ಥಶಾಸ್ತ್ರ
ಇದೀಗ ಸುದ್ದಿಯಲ್ಲಿದೆ:
- ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (MoHUA) ಭಾರತದ ಮುನ್ಸಿಪಲ್ ಬಾಂಡ್ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಇತ್ತೀಚಿಗೆ ಉನ್ನತ ಮಟ್ಟದ ಸಮಾಲೋಚನಾ ಸಭೆಯನ್ನು ಆಯೋಜಿಸಿತ್ತು.
- ನಗರ ಮೂಲಸೌಕರ್ಯ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸುವ ಕಾರ್ಯಗಳಿಗೆ ಉತ್ತೇಜನ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಮುನ್ಸಿಪಲ್ ಬಾಂಡ್ಗಳು ಎಂದರೇನು?
- ಮುನ್ಸಿಪಲ್ ಬಾಂಡ್ಗಳು ನಗರ ಸ್ಥಳೀಯ ಸಂಸ್ಥೆಗಳು (ULBs) ವಿತರಿಸುವ ‘ಮಾರುಕಟ್ಟೆ-ಯೋಗ್ಯ ಸಾಲಪತ್ರಗಳಾಗಿವೆ’.
- ಈ ಬಾಂಡ್ಗಳನ್ನು ನಗರ ಸ್ಥಳೀಯ ಸಂಸ್ಥೆಗಳು ನೇರವಾಗಿ ಅಥವಾ ‘ಕಾರ್ಪೊರೇಟ್ ಮುನ್ಸಿಪಲ್ ಘಟಕಗಳು’ ಹಾಗೂ ‘ವಿಶೇಷ ಉದ್ದೇಶದ ಘಟಕಗ’ಳಂತಹ (SPV) ಮಧ್ಯವರ್ತಿಗಳ ಮೂಲಕ ವಿತರಿಸುತ್ತವೆ.
- ಭಾರತದಲ್ಲಿ ಮೊದಲ ಬಾರಿಗೆ 1997 ರಲ್ಲಿ ಬೆಂಗಳೂರು ನಗರವು ಈ ಮುನ್ಸಿಪಲ್ ಬಾಂಡ್ಗಳನ್ನು ವಿತರಿಸಿತು.
- ಈ ಬಾಂಡ್ಗಳ ಮೂಲಕ ಸಂಗ್ರಹಿಸಿದ ಹಣವನ್ನು ಪ್ರಮುಖ ಬಂಡವಾಳ ಯೋಜನೆಗಳಿಗೆ (ಉದಾಹರಣೆಗೆ: ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ಅಭಿವೃದ್ಧಿ), ಹಳೆಯ ಸಾಲಗಳ ಮರುಪಾವತಿಗೆ ಹಾಗೂ ದೈನಂದಿನ ಕಾರ್ಯಾಚರಣೆಯ ಬಂಡವಾಳದ ಅಗತ್ಯಗಳನ್ನು ಪೂರೈಸಲು ಬಳಸಲಾಗುತ್ತದೆ.
ಪ್ರಾಜೆಕ್ಟ್ ವಾಲ್ಟ್ (Project Vault)
ಅರ್ಥಶಾಸ್ತ್ರ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಅಮೆರಿಕವು ‘ಪ್ರಾಜೆಕ್ಟ್ ವಾಲ್ಟ್’ ಎಂಬ ನೂತನ ಉಪಕ್ರಮವನ್ನು ಅನಾವರಣಗೊಳಿಸಿದೆ. ಇದು ಸ್ವತಂತ್ರ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುವ ಒಂದು ‘ಸಾರ್ವಜನಿಕ-ಖಾಸಗಿ ಸಹಭಾಗಿತ್ವ’ದ ಯೋಜನೆಯಾಗಿದೆ.
ಪ್ರಾಜೆಕ್ಟ್ ವಾಲ್ಟ್ ಎಂದರೇನು?
- ಉದ್ದೇಶ:- ಅಮೆರಿಕದಲ್ಲಿ ‘ನಿರ್ಣಾಯಕ ಖನಿಜಗಳ’ ಕಾರ್ಯತಂತ್ರದ ದೇಶೀಯ ದಾಸ್ತಾನನ್ನು ಸ್ಥಾಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
- ಪ್ರಾಮುಖ್ಯತೆ:- ವಿದೇಶಿ ರಾಷ್ಟ್ರಗಳ ನಿಯಂತ್ರಣದಲ್ಲಿರುವ ಪೂರೈಕೆ ಸರಪಳಿಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ಈ ಉಪಕ್ರಮವು ನೆರವಾಗಲಿದೆ.
ನಿರ್ಣಾಯಕ ಖನಿಜಗಳ ಬಗ್ಗೆ:
- ದೇಶದ ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯವಾಗಿ ಬೇಕಾಗಿರುವ ಖನಿಜಗಳನ್ನು ‘ನಿರ್ಣಾಯಕ ಖನಿಜಗಳು’ ಎಂದು ಕರೆಯಲಾಗುತ್ತದೆ.
- ಈ ಖನಿಜಗಳ ಲಭ್ಯತೆಯಲ್ಲಿ ಕೊರತೆ ಉಂಟಾದರೆ, ಅದು ಪೂರೈಕೆ ಸರಪಳಿಯ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು ಮತ್ತು ಜಾಗತಿಕ ಪೂರೈಕೆಯಲ್ಲಿ ತೀವ್ರ ವ್ಯತ್ಯಯವನ್ನು ಉಂಟುಮಾಡಬಹುದು.
ನಿರ್ಣಾಯಕ ಖನಿಜಗಳ ಪಟ್ಟಿ:
- ಭಾರತದ ಆರ್ಥಿಕತೆಗೆ ಮತ್ತು ಭದ್ರತೆಗೆ ಒಟ್ಟು 30 ಖನಿಜಗಳನ್ನು ಅತ್ಯಂತ ನಿರ್ಣಾಯಕ ಎಂದು ಗುರುತಿಸಲಾಗಿದೆ. ಅವುಗಳೆಂದರೆ: ಆಂಟಿಮನಿ, ಬೆರಿಲಿಯಮ್, ಬಿಸ್ಮತ್, ಕೋಬಾಲ್ಟ್, ತಾಮ್ರ, ಗ್ಯಾಲಿಯಮ್, ಜರ್ಮೇನಿಯಮ್, ಗ್ರಾಫೈಟ್, ಹಾಫ್ನಿಯಮ್, ಇಂಡಿಯಮ್, ಲಿಥಿಯಮ್, ಮಾಲಿಬ್ಡಿನಮ್, ನಿಯೋಬಿಯಮ್, ನಿಕಲ್, ಪಿಜಿಇ (PGE), ರಂಜಕ , ಪೊಟ್ಯಾಶ್, ವಿರಳ ಭೂ-ಧಾತುಗಳು (REEs), ರೀನಿಯಮ್, ಸಿಲಿಕಾನ್, ಸ್ಟ್ರಾಂಷಿಯಮ್, ಟ್ಯಾಂಟಲಮ್, ಟೆಲ್ಯುರಿಯಮ್, ತವರ, ಟೈಟಾನಿಯಮ್, ಟಂಗ್ಸ್ಟನ್, ವೆನಾಡಿಯಮ್, ಜಿರ್ಕೋನಿಯಮ್, ಸೆಲೆನಿಯಮ್ ಮತ್ತು ಕ್ಯಾಡ್ಮಿಯಮ್.
ಖನಿಜ ಪರಿಶೋಧನೆಗೆ ಭಾರತದ ನೀತಿ ನಿಲುವುಗಳು:
- ದೇಶೀಯ ನಿಕ್ಷೇಪಗಳು:- ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನದಲ್ಲಿ ಲಿಥಿಯಂ, ಮತ್ತು ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ವಿರಳ ಭೂ-ಧಾತುಗಳನ್ನು (REEs) ಒಳಗೊಂಡಂತೆ ಭಾರತವು ಅಪಾರವಾದ ಹಾಗೂ ಬಳಕೆಯಾಗದ ಖನಿಜ ಸಾಮರ್ಥ್ಯವನ್ನು ಹೊಂದಿದೆ.
- ನೀತಿ ಉಪಕ್ರಮಗಳು:-
- ‘ರಾಷ್ಟ್ರೀಯ ಖನಿಜ ಪರಿಶೋಧನಾ ನೀತಿ’ (NMEP), 2016.
- ‘ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ’, 2021.
- ಇವು ಖಾಸಗಿ ವಲಯದ ಭಾಗವಹಿಸುವಿಕೆ ಮತ್ತು ಸುಧಾರಿತ ಸಮೀಕ್ಷೆಗಳ ಮೂಲಕ ದೇಶದಲ್ಲಿ ಖನಿಜ ಪರಿಶೋಧನೆಯನ್ನು ವೇಗಗೊಳಿಸಿವೆ.
- ಕಾಬಿಲ್ (KABIL):- ಭಾರತಕ್ಕೆ ನಿರ್ಣಾಯಕ ಖನಿಜಗಳ ಪೂರೈಕೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ‘ಖನಿಜ ಬಿದೇಶ್ ಇಂಡಿಯಾ ಲಿಮಿಟೆಡ್‘ (KABIL) ಸಂಸ್ಥೆಯು ಸಾಗರೋತ್ತರ ಖನಿಜ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
- ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ (NCMM):- ಖನಿಜಗಳ ಪರಿಶೋಧನೆಯಿಂದ ಹಿಡಿದು ಅವುಗಳ ಮರುಪಡೆಯುವಿಕೆಯವರೆಗಿನ ‘ಮೌಲ್ಯ ಸರಪಳಿಯನ್ನು’ ಬಲಪಡಿಸುವುದು ಈ ಮಿಷನ್ನ ಪ್ರಮುಖ ಗುರಿಯಾಗಿದೆ.
ಗೂಗಲ್ನ ‘ಅಮೆರಿಕಾ-ಇಂಡಿಯಾ ಕನೆಕ್ಟ್’ ಉಪಕ್ರಮ
ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ:
- ಗೂಗಲ್ ಸಂಸ್ಥೆಯು ‘ಅಮೆರಿಕಾ-ಇಂಡಿಯಾ ಕನೆಕ್ಟ್’ ಎಂಬ ಹೆಸರಿನ ಸಹಯೋಗದ ಮೂಲಸೌಕರ್ಯ ಉಪಕ್ರಮವನ್ನು ಇತ್ತೀಚಿಗೆ ಘೋಷಿಸಿದೆ.
‘ಅಮೆರಿಕಾ-ಇಂಡಿಯಾ ಕನೆಕ್ಟ್ ಉಪಕ್ರಮ’ದ ಬಗ್ಗೆ:
- ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನೂತನ ಅಂತರರಾಷ್ಟ್ರೀಯ ಜಲಾಂತರ್ಗತ ಪ್ರವೇಶ ದ್ವಾರ (ಗೇಟ್ವೇ) ವನ್ನು ಸ್ಥಾಪಿಸಲಾಗುವುದು.
- ಭಾರತವನ್ನು ಸಿಂಗಾಪುರ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದೊಂದಿಗೆ ನೇರವಾಗಿ ಸಂಪರ್ಕಿಸುವ ಮೂರು ಹೊಸ ಜಲಾಂತರ್ಗತ ಕೇಬಲ್ ಮಾರ್ಗಗಳನ್ನು ಈ ಯೋಜನೆಯಡಿ ನಿರ್ಮಿಸಲಾಗುವುದು.
- ಪ್ರಾಮುಖ್ಯತೆ:- ಈ ಹೊಸ ಮೂಲಸೌಕರ್ಯವು ಭಾರತದಲ್ಲಿ ದಿನೇದಿನೇ ಹೆಚ್ಚುತ್ತಿರುವ ‘ಕ್ಲೌಡ್ ಕಂಪ್ಯೂಟಿಂಗ್’ ಮತ್ತು ಕೃತಕ ಬುದ್ಧಿಮತ್ತೆ (AI) ಸೇವೆಗಳ ಬೃಹತ್ ಬೇಡಿಕೆಯನ್ನು ಪೂರೈಸಲು ಅಗತ್ಯವಾದ ಬೆಂಬಲವನ್ನು ನೀಡಲಿದೆ.
- ಇದರ ಜೊತೆಗೆ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳೊಂದಿಗಿನ ಭಾರತದ ಡಿಜಿಟಲ್ ಸಂಪರ್ಕವನ್ನು ಇದು ಮತ್ತಷ್ಟು ಬಲಪಡಿಸಲಿದೆ.



ನಿಮ್ಮದೊಂದು ಉತ್ತರ