ಆಪರೇಷನ್ ಪವನ್
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಶ್ರೀಲಂಕಾದಲ್ಲಿ ನಡೆದ ‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಅವಧಿಯಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಭಾರತೀಯ ಭೂಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಗೌರವ ನಮನ ಸಲ್ಲಿಸಿದರು.
‘ಆಪರೇಷನ್ ಪವನ್’ (1987–1990) ಕಾರ್ಯಾಚರಣೆಯ ಬಗ್ಗೆ:
- ಭಾರತ-ಶ್ರೀಲಂಕಾ ಒಪ್ಪಂದಕ್ಕೆ ಸಹಿ ಹಾಕಿದ ನಂತರ, 1987 ರಲ್ಲಿ ಅಂದಿನ ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ಈ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು.
- ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳು ಸಮುದಾಯ ಮತ್ತು ಸಿಂಹಳೀಯ ಬಹುಸಂಖ್ಯಾತ ಸರ್ಕಾರದ ನಡುವೆ ನಡೆಯುತ್ತಿದ್ದ ಅಂತರ್ಯುದ್ಧದ ವೇಳೆ, ಶಾಂತಿ ಸ್ಥಾಪನೆಗಾಗಿ ಭಾರತವು ತನ್ನ ‘ಭಾರತೀಯ ಶಾಂತಿ ಪಾಲನಾ ಪಡೆ’ (IPKF)ಯನ್ನು ನಿಯೋಜಿಸಿತ್ತು.
ಭಾರತದ ತೀವ್ರ ಕಳವಳಕ್ಕೆ ಕಾರಣಗಳು:
- ತಮಿಳುನಾಡಿನೊಂದಿಗೆ ತಮಿಳು ಸಮುದಾಯಕ್ಕಿದ್ದ ಜನಾಂಗೀಯ ಮತ್ತು ಸಾಂಸ್ಕೃತಿಕ ಬಾಂಧವ್ಯ.
- ದ್ವೀಪರಾಷ್ಟ್ರದಲ್ಲಿ ಮಿತಿಮೀರುತ್ತಿದ್ದ ಹಿಂಸಾಚಾರ.
- ಭಾರತಕ್ಕೆ ನಿರಾಶ್ರಿತರ ಒಳಹರಿವು ನಿರಂತರವಾಗಿ ಹೆಚ್ಚಾಗುತ್ತಿರುವುದು.
|
ನಿಮಗಿದು ತಿಳಿದಿದೆಯೇ?
|



ನಿಮ್ಮದೊಂದು ಉತ್ತರ