ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ: ಸರ್ವೋಚ್ಚ ನ್ಯಾಯಾಲಯ (SC) | “ಮಿಷನ್ 40+” – ಕಲ್ಯಾಣ ಕರ್ನಾಟಕ ಶಿಕ್ಷಣದ ಉಪಕ್ರಮ

ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ: ಸರ್ವೋಚ್ಚ ನ್ಯಾಯಾಲಯ (SC)

ಇದೀಗ ಸುದ್ದಿಯಲ್ಲಿದೆ:

  • 134 ಎಕರೆ ಅರಣ್ಯ ಭೂಮಿಯ ಗುತ್ತಿಗೆ ವಿಸ್ತರಣೆಯನ್ನು ಕೋರಿದ್ದ ‘ಗಾಂಧಿ ಜೀವನ್ ಸಾಮೂಹಿಕ ಕೃಷಿ ಸಹಕಾರ ಸಂಘ,’ v/s ಕರ್ನಾಟಕ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಪೀಠವು ಎತ್ತಿಹಿಡಿದಿದೆ.

ಪ್ರಮುಖ ಅಂಶಗಳು:

  • ತೀರ್ಪು ನೀಡಿದವರು:- ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಭಾರತದ ಸರ್ವೋಚ್ಚ ನ್ಯಾಯಾಲಯದ ಪೀಠವು ಈ ತೀರ್ಪನ್ನು ನೀಡಿದೆ.
  • ತೀರ್ಪು:- ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ನ್ಯಾಯಾಲಯವು ದೃಢವಾಗಿ ಹೇಳಿದೆ. ಕೃಷಿಯು ಮೂಲಭೂತವಾಗಿ ಕಾಡುಗಳನ್ನು ಕಡಿಯುವುದನ್ನು ಒಳಗೊಂಡಿರುವುದರಿಂದ, ಅದು ಈ ನಿಷೇಧದ ಅಡಿಯಲ್ಲಿ ಬರುತ್ತದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ತಿಳಿಸಿದೆ.
  • ಪ್ರಕರಣದ ಹಿನ್ನೆಲೆ:- ‘ಗಾಂಧಿ ಜೀವನ್ ಸಾಮೂಹಿಕ ಕೃಷಿ ಸಹಕಾರ ಸಂಘ,’ v/s ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಈ ತೀರ್ಪು ಎತ್ತಿಹಿಡಿದಿದೆ. ಈ ಸಂಘವು 134 ಎಕರೆ ಅರಣ್ಯ ಭೂಮಿಯ ಗುತ್ತಿಗೆ ವಿಸ್ತರಣೆಯನ್ನು ಕೋರಿತ್ತು ಮತ್ತು ಇದನ್ನು ಆರಂಭದಲ್ಲಿ ಕೃಷಿಗಾಗಿ ಅವರಿಗೆ “ಅಕ್ರಮವಾಗಿ ನೀಡಲಾಗಿತ್ತು” ಎಂದು ನ್ಯಾಯಾಲಯವು ಗಮನಿಸಿದೆ.
  • ಅರಣ್ಯ (ಸಂರಕ್ಷಣೆ) ಕಾಯ್ದೆ, 1980 ರ ಸೆಕ್ಷನ್ 2 ರ ಅಡಿಯಲ್ಲಿ:- ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೆ ಅರಣ್ಯ ಭೂಮಿಯ ಮೀಸಲಾತಿಯನ್ನು ರದ್ದುಪಡಿಸುವುದನ್ನು ಅಥವಾ ಅರಣ್ಯೇತರ ಉದ್ದೇಶಗಳಿಗೆ ಬಳಸುವುದನ್ನು ತಡೆಯುವ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 
  • ಸರ್ವೋಚ್ಚ ನ್ಯಾಯಾಲಯ ಅನುಮತಿ ಅಗತ್ಯ:- ಅರಣ್ಯ ಭೂಮಿಯ ಮೀಸಲಾತಿಯನ್ನು ರದ್ದುಪಡಿಸಲು ಸರ್ವೋಚ್ಚ ನ್ಯಾಯಾಲಯ ಅನುಮತಿ ಅಗತ್ಯ ಎಂದು ಹೇಳುವ 2000 ಇಸವಿಯ ತೀರ್ಪನ್ನು ಪೀಠವು ಪುನರುಚ್ಚರಿಸಿತು.
  • ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ:- ಭೂಮಿಯನ್ನು ಹಿಂಪಡೆಯಲು ಮತ್ತು ಸ್ಥಳೀಯ ಮರಗಳೊಂದಿಗೆ ಅರಣ್ಯವನ್ನು ಮರುಸ್ಥಾಪಿಸಲು ರಾಜ್ಯಕ್ಕೆ ನಿರ್ದೇಶನ ನೀಡಿತು.
  • ರಾಜ್ಯದ ನಿಲುವು:- ವಿವಾದಿತ ಭೂ ಪ್ರದೇಶಗಳು “ಅರಣ್ಯ” ವರ್ಗದ ಅಡಿಯಲ್ಲಿ ಬರುತ್ತವೆ ಮತ್ತು ಅವು ರಾಜ್ಯ ಅರಣ್ಯ ಇಲಾಖೆಯ ಮಾಲೀಕತ್ವ ಮತ್ತು ಸ್ವಾಧೀನದಲ್ಲಿವೆ ಎಂದು ಕರ್ನಾಟಕ ಸರ್ಕಾರವು ಪ್ರಮಾಣ ಪತ್ರ (ಅಫಿಡವಿಟ್)ದ ಮೂಲಕ ದೃಢಪಡಿಸಿದೆ.

“ಮಿಷನ್ 40+” – ಕಲ್ಯಾಣ ಕರ್ನಾಟಕ ಶಿಕ್ಷಣದ ಉಪಕ್ರಮ

ಇದೀಗ ಸುದ್ದಿಯಲ್ಲಿದೆ: 

  • ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶಗಳನ್ನು ಸುಧಾರಿಸುವ ಉದ್ದೇಶದಿಂದ ವಿಶೇಷ (ಪರಿಹಾರ ಬೋಧನಾ) ತರಗತಿಗಳನ್ನು ಕೈಗೊಳ್ಳಲಾಗಿದೆ.

“ಮಿಷನ್ 40+” – ಕಲ್ಯಾಣ ಕರ್ನಾಟಕ ಶಿಕ್ಷಣದ ಉಪಕ್ರಮದ ಬಗ್ಗೆ:

  • ಪರಿಹಾರ ಬೋಧನಾ ಕಾರ್ಯಕ್ರಮವನ್ನು:- ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಾದ– ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಯ ಫಲಿತಾಂಶಗಳನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.
  • ಪ್ರಾರಂಭಿಸಿದವರು:- ‘ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ‘ (KKRDB) ಮತ್ತು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ.
  • ಗುರಿ:- ವಿದ್ಯಾರ್ಥಿಗಳು ತೇರ್ಗಡೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಈ ಜಿಲ್ಲೆಗಳಲ್ಲಿ ಒಟ್ಟಾರೆ 90% ರಷ್ಟು ಉತ್ತೀರ್ಣ ಫಲಿತಾಂಶವನ್ನು ಸಾಧಿಸುವುದು ಇದರ ನಿರ್ದಿಷ್ಟ ಗುರಿಯಾಗಿದೆ.
  • ವಿಶೇಷ ತರಗತಿಗಳು:- “ನಿಧಾನವಾಗಿ ಕಲಿಯುವವರಿಗಾಗಿ” ಅಥವಾ ಹೆಚ್ಚಿನ ಸಹಾಯದ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ ಜನವರಿಯಿಂದ ಮಾರ್ಚ್‌ವರೆಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ.
  • ಹಣಕಾಸು:- ಈ ತರಗತಿಗಳನ್ನು ನಡೆಸುವ ಶಿಕ್ಷಕರು ತಿಂಗಳಿಗೆ ₹1,000 ಹೆಚ್ಚುವರಿ ಗೌರವಧನವನ್ನು ಪಡೆಯುತ್ತಾರೆ ಮತ್ತು ವಿದ್ಯಾರ್ಥಿಗಳ ಪ್ರಯಾಣ ವೆಚ್ಚವನ್ನು ಭರಿಸಲು ಶಾಲೆಗಳು ₹6,000 ಹಣವನ್ನು  ಪಡೆಯುತ್ತವೆ.
  • ಮೇಲ್ವಿಚಾರಣೆ:- ಏಳು ದಿನಗಳಿಗಿಂತ ಹೆಚ್ಚು ಕಾಲ ಗೈರುಹಾಜರಾದ ವಿದ್ಯಾರ್ಥಿಗಳನ್ನು ಮತ್ತೆ ತರಗತಿಗೆ ಕರೆತರಲು ಮನೆ ಭೇಟಿಗಳನ್ನು ನೀಡುವುದನ್ನು ಇದು ಒಳಗೊಂಡಿದೆ.
  • ರಾಜ್ಯ ಸರ್ಕಾರವು ಈ ಯೋಜನೆಗಾಗಿ ₹3.44 ಕೋಟಿ ಹಣವನ್ನು ಮೀಸಲಿಟ್ಟಿದೆ ಮತ್ತು ಇದನ್ನು ‘ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ’ (KKRDB) ಭರಿಸಲಿದೆ.

ಹೆಚ್ಚಿನ ಮಾಹಿತಿ: 2024-25 ನೇ ಸಾಲಿನಲ್ಲಿ, ಕಲಬುರಗಿ ಜಿಲ್ಲೆಯು 41.35% ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿತ್ತು. ರಾಯಚೂರು (50.76%), ಬಳ್ಳಾರಿ (50.91%), ಬೀದರ್ (52.3%), ಕೊಪ್ಪಳ (56.57%), ಯಾದಗಿರಿ (59.6%) ಮತ್ತು ವಿಜಯಪುರ (66.78%) ಜಿಲ್ಲೆಗಳೂ ಸಹ ಕಳಪೆ ಫಲಿತಾಂಶಗಳನ್ನು ಹೊಂದಿದ್ದವು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts