ಅಪ್ರಸ್ತುತ ಯೋಜನೆಗಳನ್ನು ವಿಲೀನಗೊಳಿಸುವಂತೆ – 2ನೇ ಆಡಳಿತ ಸುಧಾರಣಾ ಆಯೋಗ

ಅಪ್ರಸ್ತುತ ಯೋಜನೆಗಳನ್ನು ವಿಲೀನಗೊಳಿಸುವಂತೆ – 2ನೇ ಆಡಳಿತ ಸುಧಾರಣಾ ಆಯೋಗ

ಇದೀಗ ಸುದ್ದಿಯಲ್ಲಿದೆ: 

  • ಹೆಚ್ಚುತ್ತಿರುವ ಹಣಕಾಸಿನ ಕೊರತೆಯನ್ನು ನಿಭಾಯಿಸಲು ರಾಜಸ್ವ ವೆಚ್ಚವನ್ನು ತರ್ಕಬದ್ಧಗೊಳಿಸುವಂತೆ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಶಿಫಾರಸು ಮಾಡಿದೆ.

ಈ ಆಯೋಗದ ಶಿಫಾರಸು ಮತ್ತು ಉದ್ದೇಶ:

  • ಪ್ರಸ್ತಾಪಿಸಿದವರು:- ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರ ನೇತೃತ್ವದ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ.
  • ಮೂಲ ಉದ್ದೇಶ:- ಕಳೆದ 2 ಆರ್ಥಿಕ ವರ್ಷಗಳಲ್ಲಿ ಹೆಚ್ಚಿರುವ ರಾಜಸ್ವ ಕೊರತೆಯನ್ನು ಸರಿದೂಗಿಸಲು ರಾಜಸ್ವ ವೆಚ್ಚವನ್ನು ಆದ್ಯತೆ ಮತ್ತು ತರ್ಕಬದ್ಧಗೊಳಿಸುವುದು.
  • ಆದ್ಯತೆಯ ಕ್ರಮ:- 
  • ಕಾರ್ಯಚಟುವಟಿಕೆಗೆ ಅಪ್ರಸ್ತುತವಾಗಿರುವ ಹುದ್ದೆಗಳನ್ನು ರದ್ದುಗೊಳಿಸಲು ಮತ್ತು 
  • ದೀರ್ಘಕಾಲದಿಂದ ಬಾಕಿ ಉಳಿದಿರುವ ಮುಂಚೂಣಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲು. 

ಪ್ರಮುಖ ಶಿಫಾರಸುಗಳು:

    • ಯೋಜನೆಗಳ ಪರಿಷ್ಕರಣೆ:- ಹಳೆಯದಾದ, ಅನುದಾನವಿಲ್ಲದ ಅಥವಾ ಸಾಲ ನಿರ್ವಹಣೆಯ ಭಾಗವಾಗಿರುವ ಸುಮಾರು 1,000 ಲೆಕ್ಕ ಶೀರ್ಷಿಕೆಗಳು ಅಥವಾ ಯೋಜನೆಗಳನ್ನು (ಒಟ್ಟು 2,874) ಕೊನೆಗೊಳಿಸಲು ಅಥವಾ ವಿಲೀನಗೊಳಿಸಲು ಆಯೋಗವು ಶಿಫಾರಸು ಮಾಡಿದೆ.
    • ನೇಮಕಾತಿ ಸುಧಾರಣೆಗಳು:-
  • ಹೊಸ ಹುದ್ದೆಗಳ ಸೃಜನೆಯನ್ನು ನಿರ್ಬಂಧಿಸುವುದು.
      • ವಾರ್ಷಿಕ ನೇಮಕಾತಿ ಯೋಜನೆಯನ್ನು ಜಾರಿಗೊಳಿಸುವುದು.
  • ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಹೊರಗುತ್ತಿಗೆಯನ್ನು ಸ್ಥಗಿತಗೊಳಿಸುವುದು.

ಸಿಬ್ಬಂದಿ ಅಂಕಿಅಂಶಗಳು:

  • ಖಾಲಿ ಹುದ್ದೆಗಳು:- 42 ಇಲಾಖೆಗಳಲ್ಲಿ ಮಂಜೂರಾದ 8.16 ಲಕ್ಷ ಹುದ್ದೆಗಳ ಪೈಕಿ 2.94 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ಆಯೋಗವು ಗುರುತಿಸಿದೆ.

ಪ್ರಸ್ತುತ ಸ್ಥಿತಿ:- ಪ್ರಸ್ತುತ ಕೇವಲ 5.18 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಮತ್ತು ಸುಮಾರು 70,000 ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts