ಅಪಘಾತ ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳು
ಇದೀಗ ಸುದ್ದಿಯಲ್ಲಿದೆ:
- ರಾಜ್ಯ ಸಾರಿಗೆ ವಾಹನಗಳು (ಬಸ್ ಗಳು) ರಸ್ತೆ ಅಪಘಾತಕ್ಕೀಡಾದಾಗ ಅಥವಾ ತಾಂತ್ರಿಕ ಸ್ಥಗಿತಕ್ಕೆ ಒಳಗಾದ ಸಂದರ್ಭದಲ್ಲಿ ತ್ವರಿತ ನೆರವು ನೀಡುವ ಉದ್ದೇಶದೊಂದಿಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ‘ಅಪಘಾತ ತುರ್ತು ಸ್ಪಂದನಾ ವಾಹನಗಳನ್ನು’ ನಿಯೋಜಿಸಿದೆ.
ತುರ್ತು ಪ್ರತಿಕ್ರಿಯೆ (ಸ್ಪಂದನಾ) ವಾಹನಗಳ ಕುರಿತು:
- ಆರಂಭಿಕ ಹಂತದಲ್ಲಿ, ಇಂತಹ 2 ವಾಹನಗಳನ್ನು ಬೆಂಗಳೂರು ಮತ್ತು ಮೈಸೂರಿನ ಕಾರ್ಯತಂತ್ರದ ಕೇಂದ್ರಗಳಲ್ಲಿ ನಿಯೋಜಿಸಲಾಗುವುದು.
- ಈ ವಿಶೇಷ ಸುಸಜ್ಜಿತ ವಾಹನಗಳು ‘ಸಂಚಾರಿ ಕಾರ್ಯಾಗಾರ’ಗಳಾಗಿ ಕಾರ್ಯನಿರ್ವಹಿಸಲಿವೆ.
- ಇದು ತಾಂತ್ರಿಕ ತಂಡಗಳು ಅಗತ್ಯ ಉಪಕರಣ ಹಾಗೂ ಬಿಡಿಭಾಗಗಳೊಂದಿಗೆ ಮಾರ್ಗಮಧ್ಯೆ ಸ್ಥಗಿತಗೊಂಡ ಬಸ್ಗಳನ್ನು ಶೀಘ್ರವಾಗಿ ತಲುಪಲು ಮತ್ತು ಸಾರಿಗೆ ಕಾರ್ಯಾಚರಣೆಯನ್ನು ಸುಗಮವಾಗಿ ಪುನರಾರಂಭಿಸಲು ನೆರವಾಗಲಿವೆ.



ನಿಮ್ಮದೊಂದು ಉತ್ತರ