ಅತಿ ದೊಡ್ಡ ಅನಿಲ ವಾಹಕ (VLGC) ಶಿವಾಲಿಕ್
ಸಾಮಾನ್ಯ ಅಧ್ಯಯನ 3/ಆರ್ಥಿಕತೆ

ಸಂದರ್ಭ:
- ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವರು (MoPSW), ಭಾರತದ ಮೂರನೇ ಅತಿ ದೊಡ್ಡ ಅನಿಲ ವಾಹಕ (VLGC) ಶಿವಾಲಿಕ್ ಅವರನ್ನು ಸ್ವೀಕರಿಸಿದರು.
ಅತಿ ದೊಡ್ಡ ಅನಿಲ ವಾಹಕ (VLGC), ಶಿವಾಲಿಕ್ ನ ಕುರಿತು:
-
- ಇದನ್ನು ದಕ್ಷಿಣ ಕೊರಿಯಾದಲ್ಲಿ ನಿರ್ಮಿಸಲಾಗಿದ್ದು, ಹಿಮಾಲಯದ ಶ್ರೇಣಿಯ ಹೆಸರನ್ನು ಇಡಲಾಗಿದೆ.
- ಇದು 82,000 ಘನ ಮೀಟರ್ LPG ವಾಹಕವಾಗಿದ್ದು, ಸುಧಾರಿತ ಸುರಕ್ಷತೆ, ತಾಪಮಾನ ನಿಯಂತ್ರಣ ಮತ್ತು ಕಾರ್ಯಾಚರಣಾ ವ್ಯವಸ್ಥೆಗಳನ್ನು ಹೊಂದಿದೆ.
- ಈ ವಾಹಕ ಭಾರತದ ಶಿಪ್ಪಿಂಗ್ ನಿಗಮ ನಿಯಮಿತ (SCI) ದ ಈಗಿರುವ ಎರಡು ಅತಿ ದೊಡ್ಡ ಅನಿಲ ವಾಹಕಗಳಾದ ಸಾಹ್ಯಾದ್ರಿ ಮತ್ತು ಆನಂದಮಯಿ ವಾಹಕಗಳ ಜೊತೆ ಸೇರುತ್ತದೆ.
- ಮಹತ್ವ:- ಶಿವಾಲಿಕ್ ಆಗಮನವು ಭಾರತದ ಸಮುದ್ರ ಸ್ವಾವಲಂಬನೆಯತ್ತ ಸಾಗುವಿಕೆಯನ್ನು ಸಂಕೇತಿಸುತ್ತದೆ.
ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY)
ಸಾಮಾನ್ಯ ಅಧ್ಯಯನ 3/ ಕೃಷಿ, (ಸಾಮಾನ್ಯ ಅಧ್ಯಯನ-3/ ಪರಿಸರ
ಸಂದರ್ಭ:
- ಭಾರತದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು 2015 ರಲ್ಲಿ ರಾಷ್ಟ್ರೀಯ ಸುಸ್ಥಿರ ಕೃಷಿಯ ಗುರಿ ಅಡಿಯಲ್ಲಿ ಪ್ರಾರಂಭಿಸಲಾದ ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY) ಒಂದು ಪ್ರಮುಖ ಉಪಕ್ರಮವಾಗಿ ಹೊರಹೊಮ್ಮಿದೆ.
ಸಾವಯವ ಕೃಷಿಯ ಕುರಿತಾದ ಮೂಲಭೂತ ಅಂಶಗಳು:
- ಸಾವಯವ ಕೃಷಿಯು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಂತಹ ಸಂಶ್ಲೇಷಿತ ಒಳಹರಿವುಗಳನ್ನು ಹೊರತುಪಡಿಸಿದ ಸುಸ್ಥಿರ ಕೃಷಿ ವ್ಯವಸ್ಥೆಯಾಗಿದೆ.
- ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೀಟ ಮತ್ತು ರೋಗಗಳನ್ನು ನಿರ್ವಹಿಸಲು ಇದು ಬೆಳೆ ಉಳಿಕೆಗಳು, ತೋಟದ ಗೊಬ್ಬರ ಮತ್ತು ಮಿಶ್ರಗೊಬ್ಬರದಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಅವಲಂಬಿಸಿದೆ.
ಭಾರತದಲ್ಲಿ ಸಾವಯವ ಕೃಷಿ:
- ವಿಸ್ತೀರ್ಣದ ದೃಷ್ಟಿಯಿಂದ ಭಾರತವು ಜಾಗತಿಕವಾಗಿ ಸಾವಯವ ಕೃಷಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
- ಮಧ್ಯಪ್ರದೇಶವು ಸಾವಯವ ಪ್ರಮಾಣೀಕರಣದ ಅಡಿಯಲ್ಲಿ ಅತಿ ಹೆಚ್ಚು ಪ್ರದೇಶವನ್ನು ಹೊಂದಿದೆ, ನಂತರ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಮತ್ತು ಕರ್ನಾಟಕ ಇವೆ.
- ಸಿಕ್ಕಿಂ ಭಾರತದ ಮೊದಲ ಸಂಪೂರ್ಣ ಸಾವಯವ ರಾಜ್ಯ.
- ಸಾವಯವ ಕೃಷಿಯನ್ನು ಅನುಸರಿಸುವ ರೈತರ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.
ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY)ಯ ಬಗ್ಗೆ:
- ಇದನ್ನು 2015 ರಲ್ಲಿ ರಾಷ್ಟ್ರೀಯ ಸುಸ್ಥಿರ ಕೃಷಿಯ ಗುರಿ ಅಡಿಯಲ್ಲಿ ಪ್ರಾರಂಭಿಸಲಾಯಿತು.
- ಗುರಿ:- ಸಾವಯವ ಕೃಷಿಯಲ್ಲಿ ತೊಡಗಿರುವ ರೈತರಿಗೆ ಉತ್ಪಾದನೆಯಿಂದ ಸಂಸ್ಕರಣೆ, ಪ್ರಮಾಣೀಕರಣ ಮತ್ತು ಮಾರುಕಟ್ಟೆ ಮತ್ತು ಕೊಯ್ಲಿನ ನಂತರದ ನಿರ್ವಹಣೆಯವರೆಗೆ ಸಂಪೂರ್ಣ ಬೆಂಬಲವನ್ನು ನೀಡುವುದು.
- ಉದ್ದೇಶ:- ಕಡಿಮೆ-ವೆಚ್ಚದ, ರಾಸಾಯನಿಕ-ಮುಕ್ತ ತಂತ್ರಗಳನ್ನು ಸಂಯೋಜಿಸುವ ಪರಿಸರ-ಕೃಷಿಯ ಮಾಪನ ಮಾದರಿಯನ್ನು ಮುನ್ನಡೆಸುವುದು.
- ಮಹತ್ವ:- ಆಹಾರ ಸುರಕ್ಷತೆ, ಆದಾಯ ಗಳಿಕೆ ಮತ್ತು ಪರಿಸರ ಸುಸ್ಥಿರತೆಯನ್ನು ಹೆಚ್ಚಿಸುವುದು.
ರಾಷ್ಟ್ರೀಯ ಹಾಡು “ವಂದೇ ಮಾತರಂ” ಗೆ 150ನೇ ವಾರ್ಷಿಕೋತ್ಸವ
ಸಾಮಾನ್ಯ ಅಧ್ಯಯನ 1/ ಸಂಸ್ಕೃತಿ

ಸಂದರ್ಭ:
- ರಾಷ್ಟ್ರೀಯ ಹಾಡು ‘ವಂದೇ ಮಾತರಂ’ ನ 150 ನೇ ವಾರ್ಷಿಕೋತ್ಸವವನ್ನು ದೇಶದಾದ್ಯಂತ ಆಚರಿಸುವುದಾಗಿ ಕೇಂದ್ರ ಸಚಿವ ಸಂಪುಟ ಘೋಷಿಸಿದೆ.
ವಂದೇ ಮಾತರಂ ನ ಕುರಿತು:
- ವಂದೇ ಮಾತರಂ ಅನ್ನು ಬಂಕಿಮ ಚಂದ್ರ ಚಟರ್ಜಿ ಸಂಸ್ಕೃತದಲ್ಲಿ ರಚಿಸಿದರು ಮತ್ತು ಮೊದಲ ಬಾರಿಗೆ ಆನಂದಮಠ (1882) ಕಾದಂಬರಿಯಲ್ಲಿ ಕಾಣಿಸಿಕೊಂಡಿತು.
- ಕಲ್ಕತ್ತಾ ದಲ್ಲಿ ನಡೆದ 1896 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಮೊದಲ ಸಾರ್ವಜನಿಕ ವಾಚನವು ಇದಕ್ಕೆ ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತು.
- 1950 ರ ರಾಷ್ಟ್ರಪತಿ ಆದೇಶದ ಪ್ರಕಾರ ರಾಷ್ಟ್ರ ಗೀತೆ ಜನ ಗಣ ಮನಕ್ಕೆ ಸಮಾನವಾದ ಸ್ಥಾನಮಾನವನ್ನು ರಾಷ್ಟ್ರೀಯ ಹಾಡು ‘ವಂದೇ ಮಾತರಂ’ ಹೊಂದಿದೆ.
- 51A(a) ವಿಧಿಯು ರಾಷ್ಟ್ರಗೀತೆಗೆ ಗೌರವವನ್ನು ಕಡ್ಡಾಯಗೊಳಿಸುತ್ತದೆ ಆದರೆ ರಾಷ್ಟ್ರೀಯ ಹಾಡಿಗೆ ಅಲ್ಲ, ಇದು ಸೂಕ್ಷ್ಮ ಸಮತೋಲನವನ್ನು ಸೂಚಿಸುತ್ತದೆ.
- ಈ ಹಾಡು ವಸಾಹತುಶಾಹಿ ವಿರೋಧಿ ಕ್ರಾಂತಿಕಾರಿಗಳ ಒಗ್ಗಟ್ಟಿನ ಕೂಗಾಗಿತ್ತು ಮತ್ತು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಸಾಮೂಹಿಕ ಸಂಕಲ್ಪದ ಸಂಕೇತವಾಗಿತ್ತು.
ಭಾರತದಲ್ಲಿ ಕುಷ್ಠರೋಗ
ಸಾಮಾನ್ಯ ಅಧ್ಯಯನ- 2/ ಆರೋಗ್ಯ

ಸಂದರ್ಭ:
- ಭಾರತದಲ್ಲಿ ಕುಷ್ಠರೋಗ ಹರಡುವಿಕೆಯ ಪ್ರಮಾಣವು 1981 ರಲ್ಲಿ 10,000 ಜನಸಂಖ್ಯೆಗೆ 57.2 ರಿಂದ 2025 ರಲ್ಲಿ ಕೇವಲ 0.57 ಕ್ಕೆ ಇಳಿದಿದೆ.
ಕುಷ್ಠರೋಗದ ಬಗ್ಗೆ:
- ಇದನ್ನು ಹ್ಯಾನ್ಸೆನ್ ಕಾಯಿಲೆ ಎಂತಲು ಕರೆಯುತ್ತಾರೆ.
- ಇದು ದೀರ್ಘಕಾಲದ ನರಸ್ನಾಯುಕ ಅಸ್ವಸ್ಥತೆಯಾಗಿದೆ. ಇದು ಮೈಕೋಬ್ಯಾಕ್ಟೀರಿಯಂ ಲೆಪ್ರೇಯ ಹಲವಾರು ತಳಿಗಳಿಂದ ಉಂಟಾಗುತ್ತದೆ.
- ಕುಷ್ಠರೋಗವನ್ನು ಬಹೌಷಧ ಚಿಕಿತ್ಸೆ (ಮಲ್ಟಿ-ಡ್ರಗ್ ಥೆರಪಿ) ಯ ಮೂಲಕ ಗುಣಪಡಿಸಬಹುದು.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮ (NLEP):
-
- ಇದು ರಾಷ್ಟ್ರೀಯ ಆರೋಗ್ಯ ಗುರಿ (NHM) ಅಡಿಯಲ್ಲಿನ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- ಉದ್ದೇಶ:- 2030 ರ ವೇಳೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಕುಷ್ಠರೋಗವನ್ನು ನಿರ್ಮೂಲನೆ ಮಾಡುವುದು.
- ನಿಕುಸ್ತ್ (NIKUSTH) – ಭಾರತದಾದ್ಯಂತ ಅಳವಡಿಸಲಾದ ನೈಜ-ಸಮಯದ ಕುಷ್ಠರೋಗ ವರದಿ ಮಾಡುವ ಸಾಫ್ಟ್ವೇರ್.
ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕ
ಸಾಮಾನ್ಯ ಅಧ್ಯಾಯನ 3 / ಪರಿಸರ ಅಧ್ಯಾಯನ

ಇದೀಗ ಸುದ್ದಿಯಲ್ಲಿದೆ:
- ಅರುಣಾಚಲ ಪ್ರದೇಶವು ತನ್ನ ಮೊದಲ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯನ್ನು ಚಾಂಗ್ಲಾಂಗ್ ಜಿಲ್ಲೆಯ ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕದಲ್ಲಿ ಪ್ರಾರಂಭಿಸಿದೆ.
ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕದ ಬಗ್ಗೆ:
- ಸ್ಥಳ: ಮೇಲಿನ ಅಸ್ಸಾಂ ಕಲ್ಲಿದ್ದಲು ಪಟ್ಟಿ ಪ್ರದೇಶದ ಭಾಗವಾದ ಅರುಣಾಚಲ ಪ್ರದೇಶ ರಾಜ್ಯದ ಚಾಂಗ್ಲಾಂಗ್ ಜಿಲ್ಲೆಯಲ್ಲಿದೆ.
- ಮೀಸಲು: ಅಂದಾಜು 1.5 ಕೋಟಿ ಟನ್ ನಷ್ಟು ಕಲ್ಲಿದ್ದಲು, ದೀರ್ಘಾವಧಿಯ ಉತ್ಪಾದನಾ ಕಾರ್ಯಸಾಧ್ಯತೆಯನ್ನು ಸಕ್ರಿಯಗೊಳಿಸುತ್ತದೆ.
- ಆರ್ಥಿಕ ಪರಿಣಾಮ: ರಾಜ್ಯಕ್ಕೆ ವಾರ್ಷಿಕ ₹100 ಕೋಟಿ ಆದಾಯ ಬರುವ ನಿರೀಕ್ಷೆ.
- ಪರಿಸರ ವೈಶಿಷ್ಟ್ಯಗಳು: ಭೂ ಸುಧಾರಣೆ, ಅರಣ್ಯೀಕರಣ ಮತ್ತು ಪರಿಸರ-ಜವಾಬ್ದಾರಿಯುತ ಗಣಿಗಾರಿಕೆಯ ಮೇಲೆ ಕೇಂದ್ರೀಕರಿಸುವ “ಗುರಿ ಹಸಿರು ಕಲ್ಲಿದ್ದಲು ಪ್ರದೇಶಗಳ” ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಸಾಮಾಜಿಕ ಪರಿಣಾಮ: ಸ್ಥಳೀಯ ಉದ್ಯೋಗ ಸೃಷ್ಟಿ; ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಕಡಿತ.
- ಕಾರ್ಯತಂತ್ರದ ಜೋಡಣೆ : ಸಮತೋಲಿತ ಈಶಾನ್ಯ ಅಭಿವೃದ್ಧಿ ಕಾರ್ಯತಂತ್ರವಾದ PM EAST (ಅಧಿಕಾರ ನೀಡಿ, ಕಾರ್ಯನಿರ್ವಹಿಸಿ, ಬಲಪಡಿಸಿ, ಪರಿವರ್ತಿಸಿ) ದೃಷ್ಟಿಕೋನವನ್ನು ಬೆಂಬಲಿಸುತ್ತದೆ.
ಭಾರತದ ಒಂಟೆಗಳ ಸಂಖ್ಯೆಯಲ್ಲಿ ನಿರಂತರ ಕುಸಿತ
ಸಾಮಾನ್ಯ ಅಧ್ಯಯನ 3/ಸುದ್ದಿಯಲ್ಲಿರುವ ಪ್ರಭೇದ ಗಳು

ಸಂದರ್ಭ:
- ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು, ಭಾರತದ ಒಂಟೆಗಳ ಸಂಖ್ಯೆಯಲ್ಲಿನ ಸ್ಥಿರ ಕುಸಿತವನ್ನು ಹಿಮ್ಮೆಟ್ಟಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಧ್ಯೇಯವಾದ ರಾಷ್ಟ್ರೀಯ ಒಂಟೆ ಸುಸ್ಥಿರತಾ ಉಪಕ್ರಮ (NCSI) ವನ್ನು ಪ್ರಾರಂಭಿಸಲು ಯೋಜಿಸುತ್ತಿದೆ.
ಪ್ರಮುಖ ಸಂಶೋಧನೆಗಳು:-
- ಭಾರತವು ತನ್ನ ಒಂಟೆಗಳ ಸಂಖ್ಯೆಯಲ್ಲಿ, ವಿಶೇಷವಾಗಿ ಸಾಂಪ್ರದಾಯಿಕವಾಗಿ ಒಂಟೆಗಳನ್ನು ಸಾಕುತ್ತಿರುವ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ತ್ವರಿತ ಮತ್ತು ಆತಂಕಕಾರಿ ಕುಸಿತವನ್ನು ಕಾಣುತ್ತಿದೆ.
- 20 ನೇ ಜಾನುವಾರು ಗಣತಿಯ ಪ್ರಕಾರ, 2019 ರಲ್ಲಿ ಭಾರತದಲ್ಲಿರುವ ಒಂಟೆಗಳ ಸಂಖ್ಯೆ 2.52 ಲಕ್ಷಕ್ಕೆ ಇಳಿದಿದೆ, ಇದು 1977 ರಲ್ಲಿ ಸುಮಾರು 11 ಲಕ್ಷ ವಿತ್ತು ಮತ್ತು 2013 ರಲ್ಲಿ 4 ಲಕ್ಷಕ್ಕೆ ಇಳಿದಿದೆ.
- ಸುಮಾರು 90%ರಷ್ಟು ಒಂಟೆಗಳು ರಾಜಸ್ಥಾನ ಮತ್ತು ಗುಜರಾತಗಳಲ್ಲಿವೆ.
ಭಾರತದಲ್ಲಿರುವ ಒಂಟಿ ಗೂನುಳ್ಳ ಒಂಟೆಗಳು/ ಡ್ರೊಮೆಡರಿ ಕ್ಯಾಮೆಲ್ (ಕ್ಯಾಮೆಲಸ್ ಡ್ರೊಮೆಡೇರಿಯಸ್):
- ಭಾರತದಲ್ಲಿ ಮುಖ್ಯವಾಗಿ ಒಂದು ಪ್ರಭೇದದ ಒಂಟೆ ಇದೆ. ಇದು ಒಂಟಿ ಗೂನುಳ್ಳ ಒಂಟೆಯಾಗಿದ್ದು, ಮರುಭೂಮಿಯ ಪರಿಸ್ಥಿತಿಗಳಿಗೆ ಹೊಂದಿಕೊಂಡಿದೆ.
- ಚಿಂಕಾರ ಮತ್ತು ಒಂಟೆ ರಾಜಸ್ಥಾನದ ಎರಡು ರಾಜ್ಯ ಪ್ರಾಣಿಗಳು.
ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ:
- ಸಾರಿಗೆ ಮತ್ತು ಕಾರ್ಮಿಕ: ಸಾಂಪ್ರದಾಯಿಕವಾಗಿ ಮರುಭೂಮಿ ಪ್ರದೇಶಗಳಲ್ಲಿ ಸರಕುಗಳನ್ನು ಸಾಗಿಸಲು, ಉಳುಮೆ ಮಾಡಲು ಮತ್ತು ಸಾಗಣೆಗೆ ಒಂಟೆಗಳನ್ನು ಬಳಸಲಾಗುತ್ತದೆ.
- ಹಾಲು ಉತ್ಪಾದನೆ: ಒಂಟೆ ಹಾಲು ಪೌಷ್ಟಿಕವಾಗಿದ್ದು ಬೇಡಿಕೆಯಲ್ಲಿದೆ.
- ಪ್ರವಾಸೋದ್ಯಮ: ರಾಜಸ್ಥಾನದಲ್ಲಿ ಒಂಟೆ ಪ್ರವಾಸಗಳು ಜನಪ್ರಿಯವಾಗಿವೆ.
- ಸಾಂಸ್ಕೃತಿಕ ಉತ್ಸವಗಳು: ಒಂಟೆ ಮೇಳಗಳು, ವಿಶೇಷವಾಗಿ ಬಿಕಾನೆರ್ ಒಂಟೆ ಉತ್ಸವ ಆಚರಿಸುತ್ತಾರೆ.
- ರಕ್ಷಣಾ ಬಳಕೆ: ಗಡಿ ಭದ್ರತಾ ಪಡೆ (BSF) ಮರುಭೂಮಿ ಗಸ್ತುಗಳಲ್ಲಿ ಒಂಟೆಗಳನ್ನು ಬಳಸುತ್ತದೆ.
ಕೊಂಕಣ -25 ಸಮಾರಾಭ್ಯಾಸ
ಸಾಮಾನ್ಯ ಅಧ್ಯಯನ- 3/ರಕ್ಷಣಾ
ಸಂದರ್ಭ:
- ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ 2025ರ ಕೊಂಕಣ ಸಮರಾಭ್ಯಾಸ ಎಂಬ ವಾರ್ಷಿಕ ದ್ವಿಪಕ್ಷೀಯ ಸಮುದ್ರಯಾನ ಅಭ್ಯಾಸವನ್ನು ನಡೆಸಿವೆ. ಈ ಅಭ್ಯಾಸವು ಮೊಟ್ಟಮೊದಲ ಬಾರಿ 2004ರಲ್ಲಿ ಆರಂಭವಾಯಿತು.
ಕೊಂಕಣ-25 ಸಮರಾಭ್ಯಾಸದ ಬಗ್ಗೆ:
- ಭಾಗವಹಿಸುವ ದೇಶಗಳು:- ಭಾರತ ಮತ್ತು ಯುನೈಟೆಡ್ ಕಿಂಗ್ಡಮ್
- ಪ್ರಕಾರ:- ಇದು ವಾರ್ಷಿಕ ದ್ವಿಪಕ್ಷೀಯ ಸಮುದ್ರ ಸಂಭಂದಿತ ಸಮರಾಭ್ಯಾಸವಾಗಿದೆ.
ಭಾರತ – ಯುನೈಟೆಡ್ ಕಿಂಗ್ಡಮ್ ನಡುವಿನ ಇತರ ದ್ವಿಪಕ್ಷೀಯ ಸಮರಾಭ್ಯಾಸಗಳು:
- ಅಜೇಯ ವಾರಿಯರ್ ಸಮರಾಭ್ಯಾಸ (ಸೇನೆ)
- ಇಂದ್ರಧನುಷ್ ಸಮರಾಭ್ಯಾಸ (ವಾಯುಪಡೆ)
- ಕೋಬ್ರಾ ವಾರಿಯರ್ ಸಮರಾಭ್ಯಾಸ (ಯುನೈಟೆಡ್ ಕಿಂಗ್ಡಮ್ ಆಯೋಜಿಸಿದ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸ).



ನಿಮ್ಮದೊಂದು ಉತ್ತರ