ಅತಿ ದೊಡ್ಡ ಅನಿಲ ವಾಹಕ (VLGC) ಶಿವಾಲಿಕ್ | ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY) | ರಾಷ್ಟ್ರೀಯ ಹಾಡು “ವಂದೇ ಮಾತರಂ” ಗೆ 150ನೇ ವಾರ್ಷಿಕೋತ್ಸವ | ಭಾರತದಲ್ಲಿ ಕುಷ್ಠರೋಗ | ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕ | ಭಾರತದ ಒಂಟೆಗಳ ಸಂಖ್ಯೆಯಲ್ಲಿ ನಿರಂತರ ಕುಸಿತ | ಕೊಂಕಣ -25  ಸಮಾರಾಭ್ಯಾಸ

ಅತಿ ದೊಡ್ಡ ಅನಿಲ ವಾಹಕ (VLGC) ಶಿವಾಲಿಕ್

ಸಾಮಾನ್ಯ ಅಧ್ಯಯನ 3/ಆರ್ಥಿಕತೆ

ಸಂದರ್ಭ:

  • ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವರು (MoPSW), ಭಾರತದ ಮೂರನೇ ಅತಿ ದೊಡ್ಡ ಅನಿಲ ವಾಹಕ (VLGC) ಶಿವಾಲಿಕ್ ಅವರನ್ನು ಸ್ವೀಕರಿಸಿದರು.

ಅತಿ ದೊಡ್ಡ ಅನಿಲ ವಾಹಕ (VLGC), ಶಿವಾಲಿಕ್ ನ ಕುರಿತು:

    • ಇದನ್ನು ದಕ್ಷಿಣ ಕೊರಿಯಾದಲ್ಲಿ ನಿರ್ಮಿಸಲಾಗಿದ್ದು, ಹಿಮಾಲಯದ ಶ್ರೇಣಿಯ ಹೆಸರನ್ನು ಇಡಲಾಗಿದೆ.
  • ಇದು 82,000 ಘನ ಮೀಟರ್ LPG ವಾಹಕವಾಗಿದ್ದು, ಸುಧಾರಿತ ಸುರಕ್ಷತೆ, ತಾಪಮಾನ ನಿಯಂತ್ರಣ ಮತ್ತು ಕಾರ್ಯಾಚರಣಾ ವ್ಯವಸ್ಥೆಗಳನ್ನು ಹೊಂದಿದೆ.
  • ಈ ವಾಹಕ ಭಾರತದ ಶಿಪ್ಪಿಂಗ್ ನಿಗಮ ನಿಯಮಿತ  (SCI)‌ ದ ಈಗಿರುವ ಎರಡು ಅತಿ ದೊಡ್ಡ ಅನಿಲ ವಾಹಕಗಳಾದ ಸಾಹ್ಯಾದ್ರಿ ಮತ್ತು ಆನಂದಮಯಿ ವಾಹಕಗಳ ಜೊತೆ ಸೇರುತ್ತದೆ.
  • ಮಹತ್ವ:- ಶಿವಾಲಿಕ್ ಆಗಮನವು ಭಾರತದ ಸಮುದ್ರ ಸ್ವಾವಲಂಬನೆಯತ್ತ ಸಾಗುವಿಕೆಯನ್ನು ಸಂಕೇತಿಸುತ್ತದೆ.

ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY)

ಸಾಮಾನ್ಯ ಅಧ್ಯಯನ 3/ ಕೃಷಿ, (ಸಾಮಾನ್ಯ ಅಧ್ಯಯನ-3/ ಪರಿಸರ

ಸಂದರ್ಭ:

  • ಭಾರತದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು 2015 ರಲ್ಲಿ ರಾಷ್ಟ್ರೀಯ ಸುಸ್ಥಿರ ಕೃಷಿಯ ಗುರಿ ಅಡಿಯಲ್ಲಿ ಪ್ರಾರಂಭಿಸಲಾದ ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY) ಒಂದು ಪ್ರಮುಖ ಉಪಕ್ರಮವಾಗಿ ಹೊರಹೊಮ್ಮಿದೆ.

ಸಾವಯವ ಕೃಷಿಯ ಕುರಿತಾದ ಮೂಲಭೂತ ಅಂಶಗಳು:

  • ಸಾವಯವ ಕೃಷಿಯು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಂತಹ ಸಂಶ್ಲೇಷಿತ ಒಳಹರಿವುಗಳನ್ನು ಹೊರತುಪಡಿಸಿದ ಸುಸ್ಥಿರ ಕೃಷಿ ವ್ಯವಸ್ಥೆಯಾಗಿದೆ.
  • ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೀಟ ಮತ್ತು ರೋಗಗಳನ್ನು ನಿರ್ವಹಿಸಲು ಇದು ಬೆಳೆ ಉಳಿಕೆಗಳು, ತೋಟದ ಗೊಬ್ಬರ ಮತ್ತು ಮಿಶ್ರಗೊಬ್ಬರದಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಅವಲಂಬಿಸಿದೆ.

ಭಾರತದಲ್ಲಿ ಸಾವಯವ ಕೃಷಿ:

  • ವಿಸ್ತೀರ್ಣದ ದೃಷ್ಟಿಯಿಂದ ಭಾರತವು ಜಾಗತಿಕವಾಗಿ ಸಾವಯವ ಕೃಷಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
  • ಮಧ್ಯಪ್ರದೇಶವು ಸಾವಯವ ಪ್ರಮಾಣೀಕರಣದ ಅಡಿಯಲ್ಲಿ ಅತಿ ಹೆಚ್ಚು ಪ್ರದೇಶವನ್ನು ಹೊಂದಿದೆ, ನಂತರ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಮತ್ತು ಕರ್ನಾಟಕ ಇವೆ.
  • ಸಿಕ್ಕಿಂ ಭಾರತದ ಮೊದಲ ಸಂಪೂರ್ಣ ಸಾವಯವ ರಾಜ್ಯ.
  • ಸಾವಯವ ಕೃಷಿಯನ್ನು ಅನುಸರಿಸುವ ರೈತರ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.

ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY)ಯ ಬಗ್ಗೆ:

  • ಇದನ್ನು 2015 ರಲ್ಲಿ ರಾಷ್ಟ್ರೀಯ ಸುಸ್ಥಿರ ಕೃಷಿಯ ಗುರಿ ಅಡಿಯಲ್ಲಿ ಪ್ರಾರಂಭಿಸಲಾಯಿತು.
  • ಗುರಿ:- ಸಾವಯವ ಕೃಷಿಯಲ್ಲಿ ತೊಡಗಿರುವ ರೈತರಿಗೆ ಉತ್ಪಾದನೆಯಿಂದ ಸಂಸ್ಕರಣೆ, ಪ್ರಮಾಣೀಕರಣ ಮತ್ತು ಮಾರುಕಟ್ಟೆ ಮತ್ತು ಕೊಯ್ಲಿನ ನಂತರದ ನಿರ್ವಹಣೆಯವರೆಗೆ ಸಂಪೂರ್ಣ ಬೆಂಬಲವನ್ನು ನೀಡುವುದು. 
  • ಉದ್ದೇಶ:- ಕಡಿಮೆ-ವೆಚ್ಚದ, ರಾಸಾಯನಿಕ-ಮುಕ್ತ ತಂತ್ರಗಳನ್ನು ಸಂಯೋಜಿಸುವ ಪರಿಸರ-ಕೃಷಿಯ ಮಾಪನ  ಮಾದರಿಯನ್ನು ಮುನ್ನಡೆಸುವುದು.
  • ಮಹತ್ವ:- ಆಹಾರ ಸುರಕ್ಷತೆ, ಆದಾಯ ಗಳಿಕೆ ಮತ್ತು ಪರಿಸರ ಸುಸ್ಥಿರತೆಯನ್ನು ಹೆಚ್ಚಿಸುವುದು.

ರಾಷ್ಟ್ರೀಯ ಹಾಡು “ವಂದೇ ಮಾತರಂ” ಗೆ 150ನೇ ವಾರ್ಷಿಕೋತ್ಸವ

ಸಾಮಾನ್ಯ ಅಧ್ಯಯನ 1/ ಸಂಸ್ಕೃತಿ

ಸಂದರ್ಭ:

  • ರಾಷ್ಟ್ರೀಯ ಹಾಡು  ‘ವಂದೇ ಮಾತರಂ’ ನ 150 ನೇ ವಾರ್ಷಿಕೋತ್ಸವವನ್ನು ದೇಶದಾದ್ಯಂತ ಆಚರಿಸುವುದಾಗಿ ಕೇಂದ್ರ ಸಚಿವ ಸಂಪುಟ ಘೋಷಿಸಿದೆ.

ವಂದೇ ಮಾತರಂ ನ ಕುರಿತು:

  • ವಂದೇ ಮಾತರಂ ಅನ್ನು ಬಂಕಿಮ ಚಂದ್ರ ಚಟರ್ಜಿ ಸಂಸ್ಕೃತದಲ್ಲಿ ರಚಿಸಿದರು ಮತ್ತು ಮೊದಲ ಬಾರಿಗೆ ಆನಂದಮಠ (1882) ಕಾದಂಬರಿಯಲ್ಲಿ ಕಾಣಿಸಿಕೊಂಡಿತು.
  • ಕಲ್ಕತ್ತಾ ದಲ್ಲಿ ನಡೆದ 1896 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಮೊದಲ ಸಾರ್ವಜನಿಕ ವಾಚನವು ಇದಕ್ಕೆ ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತು.
  • 1950 ರ ರಾಷ್ಟ್ರಪತಿ ಆದೇಶದ ಪ್ರಕಾರ ರಾಷ್ಟ್ರ ಗೀತೆ ಜನ ಗಣ ಮನಕ್ಕೆ ಸಮಾನವಾದ ಸ್ಥಾನಮಾನವನ್ನು ರಾಷ್ಟ್ರೀಯ ಹಾಡು  ‘ವಂದೇ ಮಾತರಂ’ ಹೊಂದಿದೆ.
  • 51A(a) ವಿಧಿಯು ರಾಷ್ಟ್ರಗೀತೆಗೆ  ಗೌರವವನ್ನು ಕಡ್ಡಾಯಗೊಳಿಸುತ್ತದೆ ಆದರೆ ರಾಷ್ಟ್ರೀಯ ಹಾಡಿಗೆ  ಅಲ್ಲ, ಇದು ಸೂಕ್ಷ್ಮ ಸಮತೋಲನವನ್ನು ಸೂಚಿಸುತ್ತದೆ.
  • ಈ ಹಾಡು ವಸಾಹತುಶಾಹಿ ವಿರೋಧಿ ಕ್ರಾಂತಿಕಾರಿಗಳ ಒಗ್ಗಟ್ಟಿನ ಕೂಗಾಗಿತ್ತು ಮತ್ತು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಸಾಮೂಹಿಕ ಸಂಕಲ್ಪದ ಸಂಕೇತವಾಗಿತ್ತು.

ಭಾರತದಲ್ಲಿ ಕುಷ್ಠರೋಗ

ಸಾಮಾನ್ಯ ಅಧ್ಯಯನ- 2/ ಆರೋಗ್ಯ

ಸಂದರ್ಭ:

  • ಭಾರತದಲ್ಲಿ ಕುಷ್ಠರೋಗ ಹರಡುವಿಕೆಯ ಪ್ರಮಾಣವು 1981 ರಲ್ಲಿ 10,000 ಜನಸಂಖ್ಯೆಗೆ 57.2 ರಿಂದ 2025 ರಲ್ಲಿ ಕೇವಲ 0.57 ಕ್ಕೆ ಇಳಿದಿದೆ.

ಕುಷ್ಠರೋಗದ ಬಗ್ಗೆ:

  • ಇದನ್ನು ಹ್ಯಾನ್ಸೆನ್ ಕಾಯಿಲೆ ಎಂತಲು ಕರೆಯುತ್ತಾರೆ.
  • ಇದು ದೀರ್ಘಕಾಲದ ನರಸ್ನಾಯುಕ ಅಸ್ವಸ್ಥತೆಯಾಗಿದೆ. ಇದು ಮೈಕೋಬ್ಯಾಕ್ಟೀರಿಯಂ ಲೆಪ್ರೇಯ ಹಲವಾರು ತಳಿಗಳಿಂದ ಉಂಟಾಗುತ್ತದೆ.
  • ಕುಷ್ಠರೋಗವನ್ನು ಬಹೌಷಧ ಚಿಕಿತ್ಸೆ (ಮಲ್ಟಿ-ಡ್ರಗ್ ಥೆರಪಿ) ಯ ಮೂಲಕ ಗುಣಪಡಿಸಬಹುದು.

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮ (NLEP):

    • ಇದು ರಾಷ್ಟ್ರೀಯ ಆರೋಗ್ಯ ಗುರಿ (NHM) ಅಡಿಯಲ್ಲಿನ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
  • ಉದ್ದೇಶ:- 2030 ರ ವೇಳೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಕುಷ್ಠರೋಗವನ್ನು ನಿರ್ಮೂಲನೆ ಮಾಡುವುದು.
  • ನಿಕುಸ್ತ್ (NIKUSTH) – ಭಾರತದಾದ್ಯಂತ ಅಳವಡಿಸಲಾದ ನೈಜ-ಸಮಯದ ಕುಷ್ಠರೋಗ ವರದಿ ಮಾಡುವ ಸಾಫ್ಟ್‌ವೇರ್.

ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕ

ಸಾಮಾನ್ಯ ಅಧ್ಯಾಯನ 3 / ಪರಿಸರ ಅಧ್ಯಾಯನ

ಇದೀಗ ಸುದ್ದಿಯಲ್ಲಿದೆ:

  • ಅರುಣಾಚಲ ಪ್ರದೇಶವು ತನ್ನ ಮೊದಲ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯನ್ನು ಚಾಂಗ್ಲಾಂಗ್ ಜಿಲ್ಲೆಯ ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕದಲ್ಲಿ ಪ್ರಾರಂಭಿಸಿದೆ.

ನಾಮ್ಚಿಕ್ – ನಾಮ್ ಫುಕ್ ಕಲ್ಲಿದ್ದಲು ಘಟಕದ ಬಗ್ಗೆ:

  • ಸ್ಥಳ: ಮೇಲಿನ ಅಸ್ಸಾಂ ಕಲ್ಲಿದ್ದಲು ಪಟ್ಟಿ ಪ್ರದೇಶದ ಭಾಗವಾದ ಅರುಣಾಚಲ ಪ್ರದೇಶ ರಾಜ್ಯದ ಚಾಂಗ್ಲಾಂಗ್ ಜಿಲ್ಲೆಯಲ್ಲಿದೆ.
  • ಮೀಸಲು: ಅಂದಾಜು 1.5 ಕೋಟಿ ಟನ್ ನಷ್ಟು ಕಲ್ಲಿದ್ದಲು, ದೀರ್ಘಾವಧಿಯ ಉತ್ಪಾದನಾ ಕಾರ್ಯಸಾಧ್ಯತೆಯನ್ನು ಸಕ್ರಿಯಗೊಳಿಸುತ್ತದೆ.
  • ಆರ್ಥಿಕ ಪರಿಣಾಮ: ರಾಜ್ಯಕ್ಕೆ ವಾರ್ಷಿಕ ₹100 ಕೋಟಿ ಆದಾಯ ಬರುವ ನಿರೀಕ್ಷೆ.
  • ಪರಿಸರ ವೈಶಿಷ್ಟ್ಯಗಳು: ಭೂ ಸುಧಾರಣೆ, ಅರಣ್ಯೀಕರಣ ಮತ್ತು ಪರಿಸರ-ಜವಾಬ್ದಾರಿಯುತ ಗಣಿಗಾರಿಕೆಯ ಮೇಲೆ ಕೇಂದ್ರೀಕರಿಸುವ “ಗುರಿ ಹಸಿರು ಕಲ್ಲಿದ್ದಲು ಪ್ರದೇಶಗಳ” ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • ಸಾಮಾಜಿಕ ಪರಿಣಾಮ: ಸ್ಥಳೀಯ ಉದ್ಯೋಗ ಸೃಷ್ಟಿ; ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಕಡಿತ.
  • ಕಾರ್ಯತಂತ್ರದ ಜೋಡಣೆ : ಸಮತೋಲಿತ ಈಶಾನ್ಯ ಅಭಿವೃದ್ಧಿ ಕಾರ್ಯತಂತ್ರವಾದ PM EAST (ಅಧಿಕಾರ ನೀಡಿ, ಕಾರ್ಯನಿರ್ವಹಿಸಿ, ಬಲಪಡಿಸಿ, ಪರಿವರ್ತಿಸಿ) ದೃಷ್ಟಿಕೋನವನ್ನು ಬೆಂಬಲಿಸುತ್ತದೆ.

ಭಾರತದ ಒಂಟೆಗಳ ಸಂಖ್ಯೆಯಲ್ಲಿ ನಿರಂತರ ಕುಸಿತ

ಸಾಮಾನ್ಯ ಅಧ್ಯಯನ 3/ಸುದ್ದಿಯಲ್ಲಿರುವ ಪ್ರಭೇದ ಗಳು

ಸಂದರ್ಭ:

  • ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು, ಭಾರತದ ಒಂಟೆಗಳ ಸಂಖ್ಯೆಯಲ್ಲಿನ ಸ್ಥಿರ ಕುಸಿತವನ್ನು ಹಿಮ್ಮೆಟ್ಟಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಧ್ಯೇಯವಾದ ರಾಷ್ಟ್ರೀಯ ಒಂಟೆ ಸುಸ್ಥಿರತಾ ಉಪಕ್ರಮ (NCSI) ವನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

ಪ್ರಮುಖ ಸಂಶೋಧನೆಗಳು:-

  • ಭಾರತವು ತನ್ನ ಒಂಟೆಗಳ ಸಂಖ್ಯೆಯಲ್ಲಿ, ವಿಶೇಷವಾಗಿ ಸಾಂಪ್ರದಾಯಿಕವಾಗಿ ಒಂಟೆಗಳನ್ನು ಸಾಕುತ್ತಿರುವ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ತ್ವರಿತ ಮತ್ತು ಆತಂಕಕಾರಿ ಕುಸಿತವನ್ನು ಕಾಣುತ್ತಿದೆ.
  • 20 ನೇ ಜಾನುವಾರು ಗಣತಿಯ ಪ್ರಕಾರ, 2019 ರಲ್ಲಿ ಭಾರತದಲ್ಲಿರುವ ಒಂಟೆಗಳ ಸಂಖ್ಯೆ 2.52 ಲಕ್ಷಕ್ಕೆ ಇಳಿದಿದೆ, ಇದು 1977 ರಲ್ಲಿ ಸುಮಾರು 11 ಲಕ್ಷ ವಿತ್ತು ಮತ್ತು 2013 ರಲ್ಲಿ 4 ಲಕ್ಷಕ್ಕೆ ಇಳಿದಿದೆ.
  • ಸುಮಾರು 90%ರಷ್ಟು ಒಂಟೆಗಳು  ರಾಜಸ್ಥಾನ ಮತ್ತು ಗುಜರಾತಗಳಲ್ಲಿವೆ.

ಭಾರತದಲ್ಲಿರುವ ಒಂಟಿ ಗೂನುಳ್ಳ ಒಂಟೆಗಳು/ ಡ್ರೊಮೆಡರಿ ಕ್ಯಾಮೆಲ್ (ಕ್ಯಾಮೆಲಸ್ ಡ್ರೊಮೆಡೇರಿಯಸ್):  

  • ಭಾರತದಲ್ಲಿ ಮುಖ್ಯವಾಗಿ ಒಂದು ಪ್ರಭೇದದ ಒಂಟೆ ಇದೆ. ಇದು ಒಂಟಿ ಗೂನುಳ್ಳ ಒಂಟೆಯಾಗಿದ್ದು, ಮರುಭೂಮಿಯ ಪರಿಸ್ಥಿತಿಗಳಿಗೆ ಹೊಂದಿಕೊಂಡಿದೆ.
  • ಚಿಂಕಾರ ಮತ್ತು ಒಂಟೆ ರಾಜಸ್ಥಾನದ ಎರಡು ರಾಜ್ಯ ಪ್ರಾಣಿಗಳು.

ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ:

  • ಸಾರಿಗೆ ಮತ್ತು ಕಾರ್ಮಿಕ: ಸಾಂಪ್ರದಾಯಿಕವಾಗಿ ಮರುಭೂಮಿ ಪ್ರದೇಶಗಳಲ್ಲಿ ಸರಕುಗಳನ್ನು ಸಾಗಿಸಲು, ಉಳುಮೆ ಮಾಡಲು ಮತ್ತು ಸಾಗಣೆಗೆ ಒಂಟೆಗಳನ್ನು ಬಳಸಲಾಗುತ್ತದೆ.
  • ಹಾಲು ಉತ್ಪಾದನೆ: ಒಂಟೆ ಹಾಲು ಪೌಷ್ಟಿಕವಾಗಿದ್ದು ಬೇಡಿಕೆಯಲ್ಲಿದೆ.
  • ಪ್ರವಾಸೋದ್ಯಮ: ರಾಜಸ್ಥಾನದಲ್ಲಿ ಒಂಟೆ ಪ್ರವಾಸಗಳು ಜನಪ್ರಿಯವಾಗಿವೆ.
  • ಸಾಂಸ್ಕೃತಿಕ ಉತ್ಸವಗಳು: ಒಂಟೆ ಮೇಳಗಳು, ವಿಶೇಷವಾಗಿ ಬಿಕಾನೆರ್ ಒಂಟೆ ಉತ್ಸವ ಆಚರಿಸುತ್ತಾರೆ.
  • ರಕ್ಷಣಾ ಬಳಕೆ: ಗಡಿ ಭದ್ರತಾ ಪಡೆ (BSF) ಮರುಭೂಮಿ ಗಸ್ತುಗಳಲ್ಲಿ ಒಂಟೆಗಳನ್ನು ಬಳಸುತ್ತದೆ.

ಕೊಂಕಣ -25  ಸಮಾರಾಭ್ಯಾಸ

ಸಾಮಾನ್ಯ ಅಧ್ಯಯನ-  3/ರಕ್ಷಣಾ

ಸಂದರ್ಭ:

  • ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ 2025ರ ಕೊಂಕಣ ಸಮರಾಭ್ಯಾಸ ಎಂಬ ವಾರ್ಷಿಕ ದ್ವಿಪಕ್ಷೀಯ ಸಮುದ್ರಯಾನ ಅಭ್ಯಾಸವನ್ನು ನಡೆಸಿವೆ. ಈ ಅಭ್ಯಾಸವು ಮೊಟ್ಟಮೊದಲ ಬಾರಿ 2004ರಲ್ಲಿ ಆರಂಭವಾಯಿತು.

ಕೊಂಕಣ-25 ಸಮರಾಭ್ಯಾಸದ ಬಗ್ಗೆ: 

  • ಭಾಗವಹಿಸುವ ದೇಶಗಳು:- ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್
  • ಪ್ರಕಾರ:- ಇದು ವಾರ್ಷಿಕ ದ್ವಿಪಕ್ಷೀಯ  ಸಮುದ್ರ ಸಂಭಂದಿತ ಸಮರಾಭ್ಯಾಸವಾಗಿದೆ.

ಭಾರತ – ಯುನೈಟೆಡ್ ಕಿಂಗ್‌ಡಮ್ ನಡುವಿನ ಇತರ ದ್ವಿಪಕ್ಷೀಯ ಸಮರಾಭ್ಯಾಸಗಳು:

  • ಅಜೇಯ ವಾರಿಯರ್ ಸಮರಾಭ್ಯಾಸ (ಸೇನೆ)
  • ಇಂದ್ರಧನುಷ್ ಸಮರಾಭ್ಯಾಸ (ವಾಯುಪಡೆ)
  • ಕೋಬ್ರಾ ವಾರಿಯರ್ ಸಮರಾಭ್ಯಾಸ  (ಯುನೈಟೆಡ್ ಕಿಂಗ್‌ಡಮ್ ಆಯೋಜಿಸಿದ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸ).

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts