ಕರ್ನಾಟಕ ದರ್ಶನ ಮತ್ತು ಇತರೆ : ಬಹು ಆಯ್ಕೆಯ ಪ್ರಶ್ನೋತ್ತರಗಳು

ಕರ್ನಾಟಕ ದರ್ಶನ ಮತ್ತು ಇತರೆ : ಬಹು ಆಯ್ಕೆಯ ಪ್ರಶ್ನೋತ್ತರಗಳು

1). ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗಾಗಿ ರಚಿಸಲಾದ ಉನ್ನತ ಮಟ್ಟದ ಸಮಿತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ನಗರದಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣಾ (SWM) ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತು ತ್ಯಾಜ್ಯ ವಿಲೇವಾರಿ ಸೇವೆಗಳನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲು ಈ ಸಮಿತಿಯನ್ನು ರಚಿಸಲಾಗಿದೆ.
  2. ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
  3. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಈ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ?

    A. 1 ಮತ್ತು 2 ಮಾತ್ರ
    B. 1 ಮತ್ತು 3 ಮಾತ್ರ
    C. 2 ಮತ್ತು 3 ಮಾತ್ರ
    D. 1, 2 ಮತ್ತು 3 ಎಲ್ಲವೂ

 

2). ‘ಫ್ರೆಂಡ್ಸ್ ಆಫ್ ಪೊಲೀಸ್’ ಮಿಷನ್ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. 

  1. ಇದು ಸಮುದಾಯ ಪೊಲೀಸಿಂಗ್ ಮತ್ತು ಅಪರಾಧ ತಡೆಗಟ್ಟುವಿಕೆಯಲ್ಲಿ ಯುವಜನರ ಸಹಭಾಗಿತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
  2. ಪೊಲೀಸರಿಗೆ ನೆರವು ನೀಡಲು ಎರಡು ಲಕ್ಷ ವಿದ್ಯಾರ್ಥಿಗಳನ್ನು ಈ ಉಪಕ್ರಮದ ಅಡಿಯಲ್ಲಿ ನೋಂದಾಯಿಸುವ ಗುರಿ ಹೊಂದಲಾಗಿದೆ.
  3. ಇದು ಕೇವಲ ಜಾಗೃತಿ ಕಾರ್ಯಕ್ರಮವಾಗಿದ್ದು, ಪೊಲೀಸರಿಗೆ ನೆರವು ನೀಡುವಲ್ಲಿ ಯಾವುದೇ ಸಕ್ರಿಯ ಪಾತ್ರವನ್ನು ಹೊಂದಿಲ್ಲ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    A. 1 ಮತ್ತು 2 ಮಾತ್ರ
    B. 1 ಮತ್ತು 3 ಮಾತ್ರ
    C. 2 ಮತ್ತು 3 ಮಾತ್ರ
    D. 1, 2 ಮತ್ತು 3 ಎಲ್ಲವೂ

 

3). ಪ್ರತಿಪಾದನೆ (A): ‘ಇ-ಸ್ವತ್ತು 2.0’ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಪಾರದರ್ಶಕ ಆಸ್ತಿ ತೆರಿಗೆ ಸಂಗ್ರಹವನ್ನು ಬಲಪಡಿಸುತ್ತದೆ.

ಕಾರಣ (R): ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಮತ್ತು ಇ-ಖಾತಾವನ್ನು ವಿತರಿಸುವ ಮೂಲಕ, ಈ ವ್ಯವಸ್ಥೆಯು ವಿವಾದಗಳನ್ನು ಕಡಿಮೆ ಮಾಡುತ್ತದೆ ಮತ್ತು ಆಸ್ತಿಗಳ ಸುಲಭ ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ.

ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. A ಮತ್ತು R ಎರಡೂ ಸರಿ, ಹಾಗೂ R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ.
  2. A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ.
  3. A ಸರಿಯಾಗಿದೆ, ಆದರೆ R ತಪ್ಪಾಗಿದೆ.
  4. A ತಪ್ಪಾಗಿದೆ, ಆದರೆ R ಸರಿಯಾಗಿದೆ.

 

4). ಕರ್ನಾಟಕ ಸರ್ಕಾರವು ರಚಿಸಿರುವ ‘ಮೈಕೆಲ್ ಕುನ್ಹಾ ಆಯೋಗ’ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

  1. ಇದು ‘ವಿಚಾರಣಾ ಆಯೋಗಗಳ ಕಾಯ್ದೆ, 1952’ ರ ಅಡಿಯಲ್ಲಿ ನೇಮಕಗೊಂಡ ನ್ಯಾಯಾಂಗ ತನಿಖಾ ಆಯೋಗವಾಗಿದೆ.
  2. ಇದು ಆರ್‌ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ 2025ರ ಜೂನ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತುಳಿತಕ್ಕೊಳಗಾದ ಘಟನೆಯ ಬಗ್ಗೆ ತನಿಖೆ ನಡೆಸಿತು.
  3. ಈ ಆಯೋಗದ ವರದಿಯು ಭಾರತದ ಸರ್ವೋಚ್ಚ ನ್ಯಾಯಾಲಯದಿಂದ ಕ್ರೀಡಾಂಗಣ ಸಮಿತಿಯನ್ನು ರಚಿಸಬೇಕು ಎಂಬ ಶಿಫಾರಸಿಗೆ ಕಾರಣವಾಯಿತು.

    ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

    A. 1 ಮತ್ತು 3 ಮಾತ್ರ
    B. 2 ಮತ್ತು 3 ಮಾತ್ರ
    C. 1 ಮತ್ತು 2 ಮಾತ್ರ
    D. 1, 2 ಮತ್ತು 3 ಎಲ್ಲವೂ

 

5). ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ೯ಬೆಂಗಳೂರು ಜಲಮಂಡಳಿ)ಯು ಜಲ ನಿರ್ವಹಣೆಗಾಗಿ ‘ಜಿಯೋಸ್ಪೇಷಿಯಲ್ ಎಕ್ಸಲೆನ್ಸ್ ಪ್ರಶಸ್ತಿ’ಗೆ ಭಾಜನವಾಗಿದೆ.
  2. ಈ ಪ್ರಶಸ್ತಿಯನ್ನು ‘ಜಿಯೋಸ್ಮಾರ್ಟ್ ಇಂಡಿಯಾ’ವತಿಯಿಂದ ನೀಡಲಾಗಿದೆ.
  3. ಈ ಪ್ರಶಸ್ತಿಯು ನಗರದ ಘನತ್ಯಾಜ್ಯ ನಿರ್ವಹಣೆಯಲ್ಲಿನ ಅತ್ಯುತ್ತಮ ಉಪಕ್ರಮಗಳನ್ನು ಗುರುತಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    A. 1, 2 ಮತ್ತು 3
    B. 2 ಮತ್ತು 3 ಮಾತ್ರ
    C. 1 ಮತ್ತು 3 ಮಾತ್ರ
    D. 1 ಮತ್ತು 2 ಮಾತ್ರ

 

6). ‘ಹೈಜೀನ್ ಆನ್ ಗೋ’  ಉಪಕ್ರಮದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಬೆಂಗಳೂರು ಪೊಲೀಸ್ ಸಿಬ್ಬಂದಿಗೆ ಮಾತ್ರ ಮೀಸಲಾದ ಸಂಚಾರಿ ನೈರ್ಮಲ್ಯ ವಾಹನವಾಗಿದೆ.
  2. ಇದನ್ನು ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಪ್ರಾರಂಭಿಸಿದೆ.
  3. ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿಯ ಕೆಲಸದ ಸ್ಥಿತಿಗತಿಗಳನ್ನು ಸುಧಾರಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    A. 1 ಮತ್ತು 2 ಮಾತ್ರ
    B. 2 ಮತ್ತು 3 ಮಾತ್ರ
    C. 1 ಮತ್ತು 3 ಮಾತ್ರ
    D. 1, 2 ಮತ್ತು 3 ಎಲ್ಲವೂ

 

7). ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯಕ್ಕೆ (CFTRI) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR)ಯ ಅಡಿಯಲ್ಲಿರುವ ಒಂದು ಪ್ರಯೋಗಾಲಯವಾಗಿದೆ.
  2. ಈ ಸಂಸ್ಥೆಯು ಕರ್ನಾಟಕದ ಮೈಸೂರಿನಲ್ಲಿದೆ.
  3. ಸಿಎಫ್‌ಟಿಆರ್‌ಐ ಇತ್ತೀಚೆಗೆ ಗಗನಯಾತ್ರಿಗಳು, ಕ್ರೀಡಾಪಟುಗಳು ಮತ್ತು ಹಿರಿಯ ನಾಗರೀಕರಿಗಾಗಿ ಸುಧಾರಿತ ಆಹಾರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

A. 1, 2 ಮತ್ತು 3 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1 ಮತ್ತು 2 ಮಾತ್ರ

 

8). ‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’ ಅನ್ನು ಜಂಟಿಯಾಗಿ ಯಾರು ನಿರ್ವಹಿಸುತ್ತಿದ್ದಾರೆ?

  1. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ.
  2. ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯ (ORI) ಮತ್ತು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ.
  3. ಭಾರತದ ರಾಷ್ಟ್ರೀಯ ಪತ್ರಾಗಾರ ಮತ್ತು ಸಾಹಿತ್ಯ ಅಕಾಡೆಮಿ.
  4. ಮೈಸೂರು ವಿಶ್ವವಿದ್ಯಾಲಯ ಮತ್ತು ಸಿಎಸ್ಐಆರ್.

 

9). ಭಾರತದ ಸೆಮಿಕಂಡಕ್ಟರ್ ಮತ್ತು ಇಎಸ್‌ಡಿಎಂ (ESDM) ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕದ ಪಾತ್ರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಭಾರತದ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಕರ್ನಾಟಕವು ಸುಮಾರು 10% ರಷ್ಟು ಕೊಡುಗೆ ನೀಡುತ್ತದೆ.
  2. ರಾಜ್ಯವು 100 ಕ್ಕೂ ಹೆಚ್ಚು ಫ್ಯಾಬ್‌ಲೆಸ್ ಚಿಪ್ ವಿನ್ಯಾಸ ಕೇಂದ್ರಗಳನ್ನು ಹೊಂದಿದೆ.
  3. ಭಾರತದ ಸೆಮಿಕಂಡಕ್ಟರ್ ತಯಾರಿಕೆ ಸ್ಥಾವರಗಳಲ್ಲಿ ಕರ್ನಾಟಕವು ಅತಿ ದೊಡ್ಡ ಪಾಲನ್ನು ಹೊಂದಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    A. 1 ಮತ್ತು 2 ಮಾತ್ರ
    B. 2 ಮತ್ತು 3 ಮಾತ್ರ
    C. 1 ಮಾತ್ರ
    D. 1, 2 ಮತ್ತು 3 ಎಲ್ಲವೂ

 

10). ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025 ಕ್ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಈ ಮಸೂದೆಯು ದ್ವೇಷ ಭಾಷಣದ ಅಪರಾಧ ಮತ್ತು ಅದರ ಪ್ರಯತ್ನ ಇವೆರಡನ್ನೂ ಅಪರಾಧೀಕರಿಸುತ್ತದೆ.
  2. ಈ ಮಸೂದೆಯ ಅಡಿಯಲ್ಲಿ ದ್ವೇಷದ ಅಪರಾಧವು ಕೇವಲ ಜೀವಂತ ವ್ಯಕ್ತಿಗಳ ವಿರುದ್ಧದ ಕೃತ್ಯಗಳಿಗೆ ಮಾತ್ರ ಅನ್ವಯಿಸುತ್ತದೆ.
  3. ಈ ಮಸೂದೆಯು ಮೊದಲ ಬಾರಿಯ ಅಪರಾಧಕ್ಕೆ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    A. 2 ಮತ್ತು 3 ಮಾತ್ರ
    B. 1 ಮಾತ್ರ
    C. 1 ಮತ್ತು 3 ಮಾತ್ರ
    D. 1, 2 ಮತ್ತು 3 ಎಲ್ಲವೂ

 

11). ಕರ್ನಾಟಕದ ಒಟ್ಟು ರಾಜ್ಯ ಮೌಲ್ಯವರ್ಧನೆಗೆ (GSVA) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ರಾಜ್ಯದ ಒಟ್ಟು ರಾಜ್ಯ ಮೌಲ್ಯವರ್ಧನೆಗೆ (GSVA) ಸೇವಾ ವಲಯವು ಮೂರನೇ ಎರಡಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ.
  2. ಒಟ್ಟು ರಾಜ್ಯ ಮೌಲ್ಯವರ್ಧನೆಯಲ್ಲಿ (GSVA) ಕೈಗಾರಿಕಾ ವಲಯಕ್ಕಿಂತ ಕೃಷಿ ವಲಯವು ಹೆಚ್ಚಿನ ಪಾಲನ್ನು ಹೊಂದಿದೆ.
  3. ಕರ್ನಾಟಕದ ಒಟ್ಟು ರಾಜ್ಯ ಆಂತರಿಕ ಉತ್ಪನ್ನಕ್ಕೆ (GSDP) ಬೆಂಗಳೂರು ನಗರ ಜಿಲ್ಲೆಯು ಏಕೈಕ ಅತಿದೊಡ್ಡ ಕೊಡುಗೆದಾರನಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 2 ಮತ್ತು 3 ಮಾತ್ರ
  2. 1 ಮತ್ತು 2 ಮಾತ್ರ
  3. 1 ಮತ್ತು 3 ಮಾತ್ರ
  4. 1, 2 ಮತ್ತು 3

 

12). ಈ ಕೆಳಗಿನವುಗಳಲ್ಲಿ ಯಾವುದು ‘ಶುಚಿ’ ಯೋಜನೆಯ ಫಲಾನುಭವಿಗಳ ವಿವರವನ್ನು ಸರಿಯಾಗಿ ವಿವರಿಸುತ್ತದೆ?

  1. ಕರ್ನಾಟಕದ 10–18 ವರ್ಷ ವಯಸ್ಸಿನ ಎಲ್ಲಾ ಕಿಶೋರಿಯರು.
  2. ಖಾಸಗಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಿಶೋರಿಯರು.
  3. ಋತುಚಕ್ರದ ಆರಂಭದಿಂದ ಮುಟ್ಟು ನಿಲ್ಲುವ ಹಂತದವರೆಗಿನ ಎಲ್ಲಾ ಮಹಿಳೆಯರು.
  4. ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10–18 ವರ್ಷ ವಯಸ್ಸಿನ ಕಿಶೋರಿಯರು.

 

13). ಭಾರತದಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ನಾಯಕತ್ವದ ರಚನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರು ವಹಿಸುತ್ತಾರೆ.
  2. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷತೆಯನ್ನು ರಾಜ್ಯದ ರಾಜ್ಯಪಾಲರು ವಹಿಸುತ್ತಾರೆ.
  3. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಅಧ್ಯಕ್ಷತೆಯನ್ನು ಆಯಾ ಜಿಲ್ಲೆಯ ಚುನಾಯಿತ ಮೇಯರ್ ವಹಿಸುತ್ತಾರೆ.

ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

  1. ಕೇವಲ ಒಂದು ಹೇಳಿಕೆ ಮಾತ್ರ
  2. ಕೇವಲ ಎರಡು ಹೇಳಿಕೆಗಳು ಮಾತ್ರ
  3. ಎಲ್ಲಾ ಮೂರು ಹೇಳಿಕೆಗಳು
  4. ಮೇಲಿನ ಯಾವುದೂ ಅಲ್ಲ

 

14). ‘ಕೆಎಸ್‌ಆರ್‌ಟಿಸಿ’ಯ ‘ಅಪಘಾತ ತುರ್ತು ಸ್ಪಂದನಾ ವಾಹನಗಳ’ ಉಪಕ್ರಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ರಾಜ್ಯ ಸಾರಿಗೆ ಬಸ್‌ಗಳಿಗೆ ಸಂಬಂಧಿಸಿದ ರಸ್ತೆ ಅಪಘಾತಗಳು ಮತ್ತು ವಾಹನಗಳ ಸ್ಥಗಿತದ ಸಮಯದಲ್ಲಿ ಕ್ಷಿಪ್ರ ನೆರವು ನೀಡುವುದು ಈ ಉಪಕ್ರಮದ ಗುರಿಯಾಗಿದೆ.
  2. ತುರ್ತು ಸ್ಪಂದನಾ ವಾಹನಗಳನ್ನು ‘ಸಂಚಾರಿ ಕಾರ್ಯಾಗಾರಗಳಾಗಿ’ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.
  3. ಇದರ ಆರಂಭಿಕ ಹಂತದಲ್ಲಿ, ಈ ಉಪಕ್ರಮವು ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳನ್ನು ಒಳಗೊಂಡಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

    A. 1 ಮತ್ತು 2 ಮಾತ್ರ
    B. 2 ಮತ್ತು 3 ಮಾತ್ರ
    C. 1 ಮತ್ತು 3 ಮಾತ್ರ
    D. 1, 2 ಮತ್ತು 3
     

15). ‘ಟ್ರಾವೆಲರ್ ನೂಕ್ಸ್’ ಯೋಜನೆಗೆ ಸಂಬಂಧಿಸಿದಂತೆ ಯಾವ ಏಜೆನ್ಸಿಯನ್ನು ರಾಜ್ಯ ಅನುಷ್ಠಾನ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ?

  1. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI).
  2. ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಯಮಿತ(KTIL).
  3. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
  4. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ.

 

16). ‘ಟ್ರಾನ್ಸ್‌ಲೇಶನಲ್ ಎಐ ಫಾರ್ ನೆಟ್‌ವರ್ಕ್ಡ್ ಯುನಿವರ್ಸಲ್ ಹೆಲ್ತ್‌ಕೇರ್’  (TANUH) ಫೌಂಡೇಶನ್ ಅನ್ನು ಎಲ್ಲಿ ಸ್ಥಾಪಿಸಲಾಗಿದೆ?

  1. ಐಐಟಿ ,ಮದ್ರಾಸ್
  2. ಏಮ್ಸ್, ದೆಹಲಿ
  3. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
  4. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ

 

17). ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ (KKHRAC) ಸಂಘದಲ್ಲಿನ ಅಕ್ರಮಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ನೇಮಿಸಿದ ತನಿಖಾ ಸಮಿತಿಯ ನೇತೃತ್ವವನ್ನು ಯಾರು ವಹಿಸಿದ್ದರು?

  1. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
  2. ಸುಧೀರ್ ಕುಮಾರ್
  3. ಟಿ.ಎಂ. ವಿಜಯ್ ಭಾಸ್ಕರ್
  4. ಆರ್.ಎಸ್. ಶರ್ಮಾ

 

18). ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಉಪ ಯೋಜನೆ (SCSP) ಮತ್ತು ಪಂಗಡಗಳ ಉಪ ಯೋಜನೆಗಳನ್ನು (TSP) ಯಾವ ಶಾಸನದ ಮೂಲಕ ನಿಯಂತ್ರಿಸಲಾಗುತ್ತದೆ?

  1. ಕರ್ನಾಟಕ ಸಾಮಾಜಿಕ ನ್ಯಾಯ ಕಾಯ್ದೆ, 2010
  2. ಕರ್ನಾಟಕ ಬಜೆಟ್ ಹಂಚಿಕೆ ಕಾಯ್ದೆ, 2017
  3. ರಾಷ್ಟ್ರೀಯ ಎಸ್‌ಸಿ/ಎಸ್‌ಟಿ ಹಣಕಾಸು ಕಾಯ್ದೆ, 2014
  4. ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ ಹಂಚಿಕೆ ಮತ್ತು ಪಂಗಡಗಳ ಉಪ ಹಂಚಿಕೆ ಕಾಯ್ದೆ, 2013

 

19). ಮೇಕೆದಾಟು ಯೋಜನೆಗಾಗಿ ರಚಿಸಲಾದ ತಾಂತ್ರಿಕ ತಂಡದ ಮುಖ್ಯಸ್ಥರಾಗಿ ಯಾರನ್ನು ನೇಮಿಸಲಾಗಿದೆ?

  1. ಕೆ.ಜಿ. ಮಹೇಶ್
  2. ಸುಧೀರ್ ಕುಮಾರ್
  3. ಆರ್.ಎಸ್. ಶರ್ಮಾ
  4. ಎಂ.ಬಿ. ಪಾಟೀಲ್

 

20). ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ಪ್ರತಿಬಂಧ ಮತ್ತು ಪರಿಹಾರ) ಮಸೂದೆ, 2025 ಕ್ಕೆ ಸಂಬಂಧಿಸಿದಂತೆ, ಇದು ಈ ಕೆಳಗಿನ ಯಾವ ಸಾಂವಿಧಾನಿಕ ಮೌಲ್ಯಗಳನ್ನು ಅತ್ಯಂತ ನೇರವಾಗಿ ಎತ್ತಿಹಿಡಿಯಲು ಪ್ರಯತ್ನಿಸುತ್ತದೆ?

  1. ವಿಧಿ 14 – ಕಾನೂನಿನ ಮುಂದೆ ಸಮಾನತೆ.
  2. ವಿಧಿ 17 – ಅಸ್ಪೃಶ್ಯತೆಯ ನಿರ್ಮೂಲನೆ.
  3. ವಿಧಿ 21 – ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು

ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?

  1. ಕೇವಲ ಒಂದು ಹೇಳಿಕೆ ಮಾತ್ರ
  2. ಕೇವಲ ಎರಡು ಹೇಳಿಕೆಗಳು ಮಾತ್ರ
  3. ಎಲ್ಲಾ ಮೂರು ಹೇಳಿಕೆಗಳು
  4. ಮೇಲಿನ ಯಾವುದೂ ಅಲ್ಲ

 

21). ‘ಸೂಪರ್ ಕಂಪ್ಯೂಟಿಂಗ್ ಇಂಡಿಯಾ 2025’ (SCI 2025) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಅನ್ನು ಒಳಗೊಂಡಿರುವ ಭಾರತದ ಮೊದಲ ಸಮಗ್ರ ಸಮ್ಮೇಳನವಾಗಿದೆ.
  2. ಇದರ ಪ್ರಥಮ ಆವೃತ್ತಿಯನ್ನು ಯಲಹಂಕದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಆಯೋಜಿಸಲಾಗಿತ್ತು.
  3. ಈ ಸಮ್ಮೇಳನವನ್ನು ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ ಅಡಿಯಲ್ಲಿ ಸಿ-ಡಾಕ್ (C-DAC) ಸಂಸ್ಥೆಯು ಹಮ್ಮಿಕೊಂಡಿತ್ತು. 

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 1 ಮತ್ತು 3 ಮಾತ್ರ
  3. 1, 2 ಮತ್ತು 3
  4. 2 ಮತ್ತು 3 ಮಾತ್ರ

 

22). ‘ಕರ್ನಾಟಕ ಪ್ಲಾಟ್ ಫಾರ್ಮ್/ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025’ ರ ಅನ್ವಯವಾಗುವ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಈ ಕಾಯ್ದೆಯು ಕರ್ನಾಟಕದೊಳಗೆ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ ಸೇವೆಗಳನ್ನು ಒದಗಿಸುವ ಪ್ರತಿಯೊಬ್ಬ ಅಗ್ರಿಗೇಟರ್ ಅಥವಾ  ಪ್ಲಾಟ್ ಫಾರ್ಮ್ ಗೆ ಅನ್ವಯಿಸುತ್ತದೆ.
  2. ಇದು ನೋಂದಣಿಯನ್ನು ಲೆಕ್ಕಿಸದೆ, ಪ್ಲಾಟ್ ಫಾರ್ಮ್ ಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಗಿಗ್ ಕಾರ್ಮಿಕರಿಗೆ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ.
  3. ಈ ಕಾಯ್ದೆಯ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಕಲ್ಯಾಣ ಮಂಡಳಿಯಲ್ಲಿ ಗಿಗ್ ಕಾರ್ಮಿಕರ ನೋಂದಣಿಯು ಕಡ್ಡಾಯ ಪೂರ್ವಾಪೇಕ್ಷಿತವಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

    A. 1 ಮತ್ತು 2 ಮಾತ್ರ
    B. 1 ಮತ್ತು 3 ಮಾತ್ರ
    C. 2 ಮತ್ತು 3 ಮಾತ್ರ
    D. 1, 2 ಮತ್ತು 3

 

23). 2025 ರ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಧ್ಯೇಯವಾಕ್ಯ ಯಾವುದು?

  1. “ವಾಯು ಮಾಲಿನ್ಯವನ್ನು ಸೋಲಿಸಿ” 
  2. “ಸ್ವಚ್ಛ ಪರಿಸರ, ಆರೋಗ್ಯಕರ ಜೀವನ” 
  3. “ಹಸಿರು ಭವಿಷ್ಯಕ್ಕಾಗಿ ಸುಸ್ಥಿರ ಜೀವನ”
  4. “ಶೂನ್ಯ ಇಂಗಾಲದ ಭಾರತ”

 

24). ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:

ಮಿಲಿಟರಿ ಸಮರಾಭ್ಯಾಸ

ಭಾರತದೊಂದಿಗೆ ಭಾಗವಹಿಸುವ ದೇಶಗಳು

1. ಹರಿಮೌ ಶಕ್ತಿ 

ಮಲೇಷ್ಯಾ

2. ಎಕುವೆರಿನ್ 

ಮಾರಿಷಸ್

3. ಸೂರ್ಯ ಕಿರಣ

ನೇಪಾಳ

4. ಡೆಸರ್ಟ್ ಸೈಕ್ಲೋನ್ 

ಸೌದಿ ಅರೇಬಿಯಾ

5. ಏವಿಯಾ ಇಂದ್ರ 

ರಷ್ಯಾ

ಮೇಲಿನ ಜೋಡಿಗಳಲ್ಲಿ ಎಷ್ಟು ಸರಿಯಾಗಿ ಹೊಂದಿಕೆಯಾಗಿವೆ?

  1. ಕೇವಲ ಎರಡು
  2. ಕೇವಲ ಮೂರು
  3. ಕೇವಲ ನಾಲ್ಕು
  4. ಎಲ್ಲವೂ

 

25). 2025 ರ ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಈ ಪ್ರಶಸ್ತಿಯನ್ನು ಇಂಧನ ಸಚಿವಾಲಯದ ಅಡಿಯಲ್ಲಿನ ಇಂಧನ ದಕ್ಷತೆ ಬ್ಯೂರೋ (BEE) ಪ್ರದಾನ ಮಾಡುತ್ತದೆ.
  2. ಈ ಪ್ರಶಸ್ತಿಯು ಕೇವಲ ಬೃಹತ್ ಪ್ರಮಾಣದ ಕೈಗಾರಿಕಾ ಘಟಕಗಳನ್ನು ಮಾತ್ರ ಗುರುತಿಸುತ್ತದೆ ಮತ್ತು ಸಾರಿಗೆ ಅಥವಾ ರೈಲ್ವೆ ವಲಯಗಳನ್ನು ಒಳಗೊಂಡಿರುವುದಿಲ್ಲ.
  3. ಮಿಯಾನಾ ರೈಲ್ವೆ ನಿಲ್ದಾಣವು ಎಲ್‌ಇಡಿ ದೀಪಗಳು, ಇಂಧನ ದಕ್ಷತೆಯ ಬಿಎಲ್‌ಡಿಸಿ ಫ್ಯಾನ್‌ಗಳು ಮತ್ತು ಸ್ಮಾರ್ಟ್ ಲೈಟಿಂಗ್ ಸರ್ಕ್ಯೂಟ್‌ಗಳನ್ನು ಅಳವಡಿಸುವ ಮೂಲಕ 9,687 ಯುನಿಟ್ ವಿದ್ಯುತ್ ಉಳಿಸಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

    A. 1 ಮತ್ತು 2 ಮಾತ್ರ
    B. 1 ಮತ್ತು 3 ಮಾತ್ರ
    C. 2 ಮತ್ತು 3 ಮಾತ್ರ
    D. 1, 2 ಮತ್ತು 3

 

26). ಜೈವಿಕ ವೈವಿಧ್ಯತೆ ಪರಂಪರೆ ತಾಣಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

  1. ಜೈವಿಕ ವೈವಿಧ್ಯತೆ ಪರಂಪರೆ ತಾಣವನ್ನು ಅಧಿಸೂಚಿಸುವ ಅಧಿಕಾರವು ರಾಜ್ಯ ಸರ್ಕಾರದ ಬಳಿ ಇರುತ್ತದೆ. ಭಾರತದ ಪ್ರಥಮ ಜೈವಿಕ ವೈವಿಧ್ಯತೆ ಪರಂಪರೆ ತಾಣವಾದ ‘ನಲ್ಲೂರು ಹುಣಸೆ ತೋಪು’ ತೆಲಂಗಾಣದಲ್ಲಿದೆ.
  2. ಜೈವಿಕ ವೈವಿಧ್ಯತೆ ಕಾಯ್ದೆ, 2002 ಇವುಗಳ ಘೋಷಣೆಗೆ ಶಾಸನಬದ್ಧ ಆಧಾರವನ್ನು ಒದಗಿಸುತ್ತದೆ. ಇವುಗಳು ಭೂಚರ, ಒಳನಾಡು ಜಲಮೂಲ, ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿರಬಹುದು.
  3. ರಾಷ್ಟ್ರೀಯ ಜೈವಿಕ ವೈವಿಧ್ಯತೆ ಪ್ರಾಧಿಕಾರವು ಎಲ್ಲಾ ಅಧಿಸೂಚಿತ ಜೈವಿಕ ವೈವಿಧ್ಯತೆ ಪರಂಪರೆ ತಾಣಗಳನ್ನು ನೇರವಾಗಿ ನಿರ್ವಹಿಸುತ್ತದೆ.
  4. ಜೈವಿಕ ವೈವಿಧ್ಯತೆ ನಿರ್ವಹಣಾ ಸಮಿತಿಗಳ ಮೂಲಕ ಸಮುದಾಯದ ಭಾಗವಹಿಸುವಿಕೆಯು ಇವುಗಳ ನಿರ್ವಹಣೆಯಲ್ಲಿ ಅವಿಭಾಜ್ಯವಾಗಿದೆ.

ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 3 ಮತ್ತು 4 ಮಾತ್ರ
  4. 2 ಮತ್ತು 4 ಮಾತ್ರ

 

27). ಈ ಕೆಳಗಿನ ಜೈವಿಕ ವೈವಿಧ್ಯತೆ ಪರಂಪರೆ ತಾಣಗಳನ್ನು (BHS) ಅವುಗಳ ಸ್ಥಳ ಮತ್ತು ಮಹತ್ವದೊಂದಿಗೆ ಹೊಂದಿಸಿ:

ಜೈವಿಕ ವೈವಿಧ್ಯತೆ ಪರಂಪರೆ ತಾಣ (BHS)

ಸ್ಥಳ

ಮಹತ್ವ

i. ನಲ್ಲೂರು ಹುಣಸೆ ತೋಪು 

1. ಶಿವಮೊಗ್ಗ

a. ಕುದುರೆಮುಖ ಮತ್ತು ಭದ್ರಾ ನಡುವಿನ ವನ್ಯಜೀವಿ ಕಾರಿಡಾರ್.

ii. ಹೊಗ್ರೆಕಾನ್ ಶೋಲಾ ಅರಣ್ಯ 

2. ಬೆಂಗಳೂರು

b. ಭಾರತದ ಪ್ರಥಮ ಜೈವಿಕ ವೈವಿಧ್ಯತೆ ಪರಂಪರೆ ತಾಣ.

iii. ಅಂಬರಗುಡ್ಡ

3. ಚಿಕ್ಕಮಗಳೂರು

c. ಸ್ಥಳೀಯ ಪ್ರಭೇದಗಳಿಂದ ಸಮೃದ್ಧವಾಗಿರುವ ಶೋಲಾ-ಹುಲ್ಲುಗಾವಲು ಪರಿಸರ ವ್ಯವಸ್ಥೆ.

iv. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (GKVK)

4. ಶಿವಮೊಗ್ಗ

d. ನಗರ ಜೈವಿಕ ವೈವಿಧ್ಯತೆಯ ಬಿಸಿತಾಣ.

ಸರಿಯಾದ ಉತ್ತರವನ್ನು ಆರಿಸಿ:

  1. i-2-b, ii-3-a, iii-1-c, iv-2-d
  2. i-2-b, ii-3-a, iii-4-c, iv-2-d
  3. i-1-b, ii-3-a, iii-4-c, iv-2-d
  4. i-2-d, ii-3-c, iii-4-a, iv-1-b

 

28). ‘ಶುಚಿ-ನನ್ನ ಮೈತ್ರಿ’ ಉಪಕ್ರಮದ ಅಡಿಯಲ್ಲಿ ಈ ಕೆಳಗಿನ ಯಾವ ಮುಟ್ಟಿನ (ಋತುಚಕ್ರದ) ನೈರ್ಮಲ್ಯ ಉತ್ಪನ್ನವನ್ನು ವಿತರಿಸಲಾಗುತ್ತದೆ?

  1. ವಿಲೇವಾರಿ ಮಾಡಬಹುದಾದ ಸ್ಯಾನಿಟರಿ ಪ್ಯಾಡ್‌ಗಳು
  2. ಜೈವಿಕ ವಿಘಟನೀಯ ನ್ಯಾಪ್ಕಿನ್‌ಗಳು
  3. ಮುಟ್ಟಿನ ಕಪ್‌ಗಳು
  4. ಬಟ್ಟೆಯ ಪ್ಯಾಡ್‌ಗಳು

 

29). ‘ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025’ ರ ಅಡಿಯಲ್ಲಿನ ಉಪ-ವರ್ಗೀಕರಣದ ಚೌಕಟ್ಟಿಗೆ ಸಂಬಂಧಿಸಿದಂತೆ ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:

ವರ್ಗ (ಉಪ-ವರ್ಗೀಕರಣ)

ಮೀಸಲಾತಿ ಪಾಲು

1. ಎ (A) – ಮಾದಿಗ ಮತ್ತು ಸಂಬಂಧಿತ ಸಮುದಾಯಗಳು

7%

2. ಬಿ (B) – ಹೊಲೆಯ ಮತ್ತು ಸಂಬಂಧಿತ ಸಮುದಾಯಗಳು

6%

3. ಸಿ (C) – ಸ್ಪೃಶ್ಯರು (Touchables)

5%

ಮೇಲಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ/ಗಿವೆ?

  1. 1 ಮಾತ್ರ
  2. 1 ಮತ್ತು 2 ಮಾತ್ರ
  3. 1, 2 ಮತ್ತು 3
  4. 2 ಮತ್ತು 3 ಮಾತ್ರ

 

30). ‘ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025’ ಕ್ಕೆ ಆಧಾರವಾಗಿರುವ ಶಿಫಾರಸುಗಳನ್ನು ನೀಡಿದ ಸಮಿತಿಯ ನೇತೃತ್ವವನ್ನು ಯಾರು ವಹಿಸಿದ್ದರು?

  1. ಕೆ.ಜಿ. ಬಾಲಕೃಷ್ಣನ್
  2. ಉಷಾ ಮೆಹ್ರಾ
  3. ಎಚ್.ಎನ್. ನಾಗಮೋಹನ್ ದಾಸ್
  4. ಬಿ.ಪಿ. ಜೀವನ್ ರೆಡ್ಡಿ

 

31). ಭಾರತದ ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರ (CAG) ಲೆಕ್ಕಪರಿಶೋಧನಾ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಸಂಸ್ಥೆಗಳನ್ನು ಪರಿಗಣಿಸಿ:

  1. ಕೇಂದ್ರ ಸರ್ಕಾರದ ಇಲಾಖೆಗಳು
  2. ರಾಜ್ಯ ಸರ್ಕಾರದ ಇಲಾಖೆಗಳು
  3. ಸಾರ್ವಜನಿಕ ವಲಯದ ಉದ್ದಿಮೆಗಳು
  4. ಸಾರ್ವಜನಿಕ ಧನಸಹಾಯ ಪಡೆಯುವ ಸರ್ಕಾರೇತರ ಸಂಸ್ಥೆಗಳು

ಮೇಲಿನವುಗಳಲ್ಲಿ ಎಷ್ಟು ಸಂಸ್ಥೆಗಳು ‘ಸಿಎಜಿ’ಯಿಂದ ಲೆಕ್ಕಪರಿಶೋಧನೆಗೆ ಒಳಪಡುತ್ತವೆ?

  1. ಕೇವಲ ಎರಡು ಮಾತ್ರ
  2. ಕೇವಲ ಮೂರು ಮಾತ್ರ
  3. ಮೇಲಿನ ಎಲ್ಲವೂ
  4. ಮೇಲಿನ ಯಾವುದೂ ಅಲ್ಲ

 

32). ತುಂಗಭದ್ರಾ ಆಣೆಕಟ್ಟಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ತುಂಗಭದ್ರಾ ನದಿಯು ಕರ್ನಾಟಕದ ಕೃಷ್ಣಾ ನದಿಯ ಅತಿದೊಡ್ಡ ಉಪನದಿಯಾಗಿದೆ.
  2. ಇದು ಕರ್ನಾಟಕದ ಹೊಸಪೇಟೆ ಮತ್ತು ಕೊಪ್ಪಳ ಜಿಲ್ಲೆಗಳ ಸಂಗಮದಲ್ಲಿ ನೆಲೆಸಿದೆ.
  3. ಈ ಆಣೆಕಟ್ಟಿನಿಂದ ನಿರ್ಮಿಸಲಾದ ಜಲಾಶಯವನ್ನು ‘ಪಂಪಾ ಸಾಗರ’ ಎಂದೂ ಕರೆಯಲಾಗುತ್ತದೆ.
  4. ಈ ಆಣೆಕಟ್ಟು ಭಾರತದ ಅತಿ ಎತ್ತರದ ಕಲ್ಲುಗಾರೆ (ಕಲ್ಲಿನ ಕಟ್ಟಡದ) ಆಣೆಕಟ್ಟಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1, 2 ಮತ್ತು 3 ಮಾತ್ರ
  2. 1, 3 ಮತ್ತು 4 ಮಾತ್ರ
  3. 2 ಮತ್ತು 4 ಮಾತ್ರ
  4. 1, 2, 3 ಮತ್ತು 4

 

33). ಕರ್ನಾಟಕದ ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳ ಉಪಕ್ರಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ದೂರದ, ಅರಣ್ಯ ಮತ್ತು ಬೆಟ್ಟಗಾಡು ಪ್ರದೇಶಗಳಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
  2. ಈ ಉಪಕ್ರಮವನ್ನು ಸಂಪೂರ್ಣವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಜಾರಿಗೊಳಿಸಲಾಗಿದೆ.
  3. ಇದು ಪ್ರಮುಖವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿದೆ.
  4. ಇದು ವಿಕೇಂದ್ರೀಕೃತ, ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಚೌಕಟ್ಟನ್ನು ಅನುಸರಿಸುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1, 2 ಮತ್ತು 3 ಮಾತ್ರ
  2. 1, 3 ಮತ್ತು 4 ಮಾತ್ರ
  3. 2 ಮತ್ತು 4 ಮಾತ್ರ
  4. 1, 2, 3 ಮತ್ತು 4

 

34). ಇತ್ತೀಚೆಗೆ ಸುದ್ದಿಯಲ್ಲಿದ್ದ ‘ವಿಜ್ ಎಐ ಪಥ’ (VijAIpatha) ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಮತ್ತು STEM ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿರುವ ಪ್ರಾಯೋಗಿಕ ಉಪಕ್ರಮವಾಗಿದೆ.
  2. ಈ ಕಾರ್ಯಕ್ರಮವನ್ನು ಕೇವಲ ಕರ್ನಾಟಕದ ಶಿಕ್ಷಣ ಇಲಾಖೆಯು ಜಾರಿಗೊಳಿಸುತ್ತಿದೆ.
  3. ಇದು ರೋಬೋಟಿಕ್ಸ್, ಕೋಡಿಂಗ್ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿ ತರಬೇತಿಯನ್ನು ಒಳಗೊಂಡಿದೆ.
  4. ಇದನ್ನು ಹೊಸಪೇಟೆ ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಲಾಯಿತು.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1, 3 ಮತ್ತು 4 ಮಾತ್ರ
  2. 1 ಮತ್ತು 2 ಮಾತ್ರ
  3. 2 ಮತ್ತು 3 ಮಾತ್ರ
  4. 1, 2, 3 ಮತ್ತು 4

 

35). ಕೆಎಮ್‌ಎಫ್ (KMF) ಪ್ರಸ್ತುತ ತನ್ನ ಪ್ರೀಮಿಯಂ ನಂದಿನಿ ಉತ್ಪನ್ನಗಳನ್ನು ಈ ಕೆಳಗಿನ ಯಾವ ದೇಶಗಳಿಗೆ ರಫ್ತು ಮಾಡುತ್ತಿದೆ?

  1. ಕೆನಡಾ, ಯುಕೆ, ಇಟಲಿ, ಫ್ರಾನ್ಸ್ ಮತ್ತು ಜರ್ಮನಿ.
  2. ಕತಾರ್, ಬ್ರೂನೈ, ಮಾಲ್ಡೀವ್ಸ್, ಸಿಂಗಾಪುರ, ಯುಎಇ, ಯುಎಸ್ಎ ಮತ್ತು ಆಸ್ಟ್ರೇಲಿಯಾ.
  3. ಕತಾರ್, ಬ್ರೂನೈ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಸಿಂಗಾಪುರ.
  4. ಜಪಾನ್, ಚೀನಾ, ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್.

 

36). ಕರ್ನಾಟಕದ “ಗೃಹ ಆರೋಗ್ಯ” ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಅಸಾಂಕ್ರಾಮಿಕ ರೋಗಗಳ (NCDs) ಆರಂಭಿಕ ಪತ್ತೆ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ.
  2. ಇದನ್ನು ಸಂಪೂರ್ಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಂತಹ (CHCs) ಸ್ಥಿರ ಆರೋಗ್ಯ ಸೌಲಭ್ಯಗಳ ಮೂಲಕ ಜಾರಿಗೊಳಿಸಲಾಗುತ್ತದೆ.
  3. ಇದು 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದೆ.
  4. ಇದನ್ನು ಆರಂಭದಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ  ಜಾರಿಗೆ ತರಲಾಯಿತು.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 2, 3 ಮತ್ತು 4 ಮಾತ್ರ
  2. 1 ಮತ್ತು 2 ಮಾತ್ರ
  3. 1, 3 ಮತ್ತು 4 ಮಾತ್ರ
  4. 1, 2, 3 ಮತ್ತು 4

 

37). ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸೇರಿಸಲಾದ ಯಾವುದೇ ಭಾಷೆಗೆ ಕೊಡುಗೆ ನೀಡುವ ಲೇಖಕರಿಗೆ ಇದನ್ನು ನೀಡಲಾಗುತ್ತದೆ.
  2. ಈ ಪ್ರಶಸ್ತಿಯನ್ನು ಪ್ರತಿವರ್ಷ ಕುವೆಂಪು ಅವರ ಜನ್ಮದಿನಾಚರಣೆಯಂದು ಪ್ರದಾನ ಮಾಡಲಾಗುತ್ತದೆ.
  3. ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ಸ್ಥಾಪಿಸಿದೆ ಮತ್ತು ಪ್ರದಾನ ಮಾಡುತ್ತದೆ.
  4. 2025 ರಲ್ಲಿ ಈ ಪ್ರಶಸ್ತಿಯನ್ನು ಕೊಂಕಣಿ ಲೇಖಕ ಮಹಾಬಲೇಶ್ವರ ಸೈಲ್ ಅವರಿಗೆ ನೀಡಲಾಯಿತು; ಇದು 5 ಲಕ್ಷ ರೂಪಾಯಿ ನಗದು ಬಹುಮಾನ, ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1, 2 ಮತ್ತು 4 ಮಾತ್ರ
  2. 2 ಮತ್ತು 3 ಮಾತ್ರ
  3. 1, 3 ಮತ್ತು 4 ಮಾತ್ರ
  4. 1, 2, 3 ಮತ್ತು 4

 

38). ಈ ಕೆಳಗಿನವುಗಳಲ್ಲಿ ಯಾವುದು ಮಹಾಬಲೇಶ್ವರ ಸೈಲ್ ಅವರ ಸಾಹಿತ್ಯ ಕೃತಿಯಾಗಿದೆ?

  1. ಗೋದಾನ
  2. ಹಾವುಥಣ್ 
  3. ಮಾಲ್ಗುಡಿ ಡೇಸ್
  4. ಗೀತಾಂಜಲಿ

 

39). ಡಿಜಿಟಲ್ ಸಂಚಾರಿ ತಾರಾಲಯ ಕಾರ್ಯಕ್ರಮವನ್ನು _______ಕಾರ್ಯಗತಗೊಳಿಸಿದೆ:

  1. ಇಸ್ರೋ (ISRO)
  2. ಎನ್‌ಸಿಇಆರ್‌ಟಿ (NCERT)
  3. ಕೆಎಸ್‌ಟಿಇಪಿಎಸ್ (KSTePS)
  4. ವಿಜ್ಞಾನ ಪ್ರಸಾರ (Vigyan Prasar)

 

40). ಕರ್ನಾಟಕದ ಈ ಕೆಳಗಿನ ಬಂದರುಗಳನ್ನು ಪರಿಗಣಿಸಿ:

  1. ಕಾರವಾರ
  2. ಬೇಲೆಕೇರಿ
  3. ಮಂಗಳೂರು
  4. ತದಡಿ
  5. ಕುಂದಾಪುರ
  6. ಬೈಂದೂರು

ಕರ್ನಾಟಕದ ಕಿರು ಬಂದರುಗಳ ಕಬ್ಬಿಣದ ಅದಿರು ನಿರ್ವಹಣಾ ನೀತಿ, 2025 ರ ಅಡಿಯಲ್ಲಿ ಮೇಲಿನವುಗಳಲ್ಲಿ ಯಾವುವು ಸೇರುತ್ತವೆ?

  1. 1, 2, 4, 5 ಮತ್ತು 6 ಮಾತ್ರ
  2. 1, 2, 3, 4 ಮತ್ತು 5 ಮಾತ್ರ
  3. 2, 3, 4 ಮತ್ತು 6 ಮಾತ್ರ
  4. 1, 2, 3, 4 ಮತ್ತು 6 ಮಾತ್ರ

 

41). ರಾಜ್ಯ ಶಿಕ್ಷಣ ನೀತಿ (SEP) ಆಯೋಗದ ನೇತೃತ್ವವನ್ನು ಯಾರು ವಹಿಸಿದ್ದರು?

  1. ರೋಮಿಲಾ ಥಾಪರ್
  2. ಸುಖದೇವ್ ಥೋರಟ್
  3. ಬಿಬೆಕ್ ಡೆಬ್ರಾಯ್
  4. ಯಶ್ ಪಾಲ್

 

42). ಕರ್ನಾಟಕದಲ್ಲಿ ಜಾರಿಗೆ ತರಲಾದ ಕೃತಕ ಬುದ್ಧಿಮತ್ತೆ (AI) ಆಧಾರಿತ ‘ಸ್ಮಾರ್ಟ್ ಲಾಕ್’ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಚಾಲನಾ ಪರವಾನಗಿ ಅರ್ಜಿದಾರರ ಗುರುತನ್ನು ದೃಢೀಕರಿಸಲು ಕೃತಕ ಬುದ್ಧಿಮತ್ತೆ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸುತ್ತದೆ.
  2. ಇದನ್ನು ಕರ್ನಾಟಕ ಸಾರಿಗೆ ಇಲಾಖೆಯು ತನ್ನ ಆಂತರಿಕ ತಾಂತ್ರಿಕ ಪರಿಹಾರವಾಗಿ ಅಭಿವೃದ್ಧಿಪಡಿಸಿದೆ.
  3. ಇದನ್ನು ಸಾರಥಿ ಪರಿವಾಹನ ಸೇವಾ ಪೋರ್ಟಲ್‌ನಲ್ಲಿ ಹೆಚ್ಚುವರಿ ಭದ್ರತಾ ಹಂತವಾಗಿ ಸಂಯೋಜಿಸಲಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 1 ಮತ್ತು 3 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3

 

43). ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025 ರ ಅಡಿಯಲ್ಲಿನ ಹಣಕಾಸಿನ ಸಂಯುಕ್ತ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಈ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆ (CSS) ಎಂದು ಪ್ರಸ್ತಾಪಿಸಲಾಗಿದೆ.
  2. ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಹೆಚ್ಚಿನ ಪಾಲಿನ ಧನಸಹಾಯವನ್ನು ಭರಿಸುತ್ತದೆ.
  3. ಒಮ್ಮೆ ಕೇಂದ್ರದಿಂದ ನಿಧಿ ಹಂಚಿಕೆಯಾದ ನಂತರ, ರಾಜ್ಯದೊಳಗಿನ ನಿಧಿ ಹಂಚಿಕೆಯಲ್ಲಿ ರಾಜ್ಯಗಳಿಗೆ ಯಾವುದೇ ಪಾತ್ರವಿರುವುದಿಲ್ಲ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮತ್ತು 3 ಮಾತ್ರ
  4. 1, 2 ಮತ್ತು 3

 

44). ಈ ಕೆಳಗಿನ ಪ್ರಮುಖ ದಿನಗಳನ್ನು ಅವುಗಳನ್ನು ಆಚರಿಸುವ ಸಂಸ್ಥೆಗಳು ಮತ್ತು ಧ್ಯೇಯವಾಕ್ಯಗಳೊಂದಿಗೆ ಹೊಂದಿಸಿ:

ಪ್ರಮುಖ ದಿನಗಳು

ಆಚರಿಸುವ ಸಂಸ್ಥೆಗಳು

ಧ್ಯೇಯವಾಕ್ಯ

i. ವಿಶ್ವ ಏಡ್ಸ್ ದಿನ

1. ಎಫ್‌ಎಒ (FAO)

a. “ಸಮರ ಸನ್ನದ್ಧ, ಸುಸಂಘಟಿತ, ಸ್ವಾವಲಂಬಿ”.

ii. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

2. ಡಬ್ಲ್ಯೂಎಚ್‌ಒ / ವಿಶ್ವಸಂಸ್ಥೆ

b. “ಹಸಿರು ಭವಿಷ್ಯಕ್ಕಾಗಿ ಸುಸ್ಥಿರ ಜೀವನ”.

iii. ಅಂತರರಾಷ್ಟ್ರೀಯ ವಿಕಲಚೇತನರ ದಿನ

3. ಭಾರತೀಯ ನೌಕಾಪಡೆ

c. “ಸಾಮಾಜಿಕ ಪ್ರಗತಿಯನ್ನು ಉತ್ತೇಜಿಸಲು ವಿಕಲಚೇತನರ ಒಳಗೊಳ್ಳುವಿಕೆಯ ಸಮಾಜಗಳನ್ನು ಪೋಷಿಸುವುದು”

iv. ಭಾರತೀಯ ನೌಕಾಪಡೆ ದಿನ

4. ಸಿಪಿಸಿಬಿ (CPCB)

d. ಅಡಚಣೆಯನ್ನು ದಾಟಿ (ಮೀರಿ), ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು

v. ವಿಶ್ವ ಮಣ್ಣಿನ ದಿನ

5. ವಿಶ್ವಸಂಸ್ಥೆ

e. “ಆರೋಗ್ಯಕರ ನಗರಗಳಿಗಾಗಿ ಆರೋಗ್ಯಕರ ಮಣ್ಣು”.

ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾದ ಗುಂಪಾಗಿದೆ?

  1. i–2–d, ii–4–b, iii–5–c, iv–3–a, v–1–e
  2. i–5–d, ii–4–e, iii–2–c, iv–3–a, v–1–b
  3. i–2–c, ii–1–b, iii–5–d, iv–3–a, v–4–e
  4. i–2–d, ii–1–b, iii–5–c, iv–4–a, v–3–e

 

45). ಭಾರತದಲ್ಲಿನ ರಾಷ್ಟ್ರೀಯ ಇಂಧನ ಸಂರಕ್ಷಣೆ ದಿನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇಂಧನ ಸಂರಕ್ಷಣೆ ಕಾಯ್ದೆ, 2001 ರ ಜಾರಿಯ ನೆನಪಿಗಾಗಿ ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
  2. ಇಂಧನ ದಕ್ಷತೆ ಬ್ಯೂರೋ (BEE) ವಿದ್ಯುತ್ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
  3. ವಿವಿಧ ವಲಯಗಳಲ್ಲಿ ಬೇಡಿಕೆ-ಪರ ನಿರ್ವಹಣೆ  ಮತ್ತು ಇಂಧನದ ದಕ್ಷ ಬಳಕೆಯನ್ನು ಉತ್ತೇಜಿಸುವುದು ಈ ಆಚರಣೆಯ ಗುರಿಯಾಗಿದೆ.
  4. 2025 ರ ಧ್ಯೇಯವಾಕ್ಯವು ಕೇವಲ ನವೀಕರಿಸಬಹುದಾದ ಇಂಧನ ನಿಯೋಜನೆಯ ಮೂಲಕ ಪಳೆಯುಳಿಕೆ ಇಂಧನ ಬಳಕೆಯ ಕಡಿತಕ್ಕೆ ಒತ್ತು ನೀಡುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1, 2 ಮತ್ತು 3 ಮಾತ್ರ
  2. 2 ಮತ್ತು 3 ಮಾತ್ರ
  3. 1, 3 ಮತ್ತು 4 ಮಾತ್ರ
  4. 2, 3 ಮತ್ತು 4 ಮಾತ್ರ

 

46). 2025 ರ ರಾಷ್ಟ್ರೀಯ ಗಣಿತ ದಿನದ ಧ್ಯೇಯವಾಕ್ಯವು ಪ್ರಮುಖವಾಗಿ ಯಾವುದರ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ?

  1. ಪ್ರಾಚೀನ ಭಾರತೀಯ ಗಣಿತದ ಪಠ್ಯಗಳು
  2. ಬಾಹ್ಯಾಕಾಶ ಪರಿಶೋಧನೆಯಲ್ಲಿ ಗಣಿತ
  3. ನಾವೀನ್ಯತೆ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ ಮತ್ತು ಸಮಸ್ಯೆಗಳ ಪರಿಹಾರದಲ್ಲಿ ಗಣಿತದ ಪಾತ್ರ
  4. ಹಣಕಾಸು ಲೆಕ್ಕಪತ್ರ ನಿರ್ವಹಣೆಯಲ್ಲಿ ಗಣಿತ

 

47). 2025 ರ ಉತ್ತಮ ಆಡಳಿತ ದಿನದ ಧ್ಯೇಯವಾಕ್ಯವಾದ “ಪ್ರಶಾಸನ ಗಾಂವ್ ಕಿ ಓರ್” (ಗ್ರಾಮದೆಡೆಗೆ ಆಡಳಿತ) ಉತ್ತಮ ಆಡಳಿತದ ಯಾವ ತತ್ವಗಳನ್ನು ಪ್ರತಿಬಿಂಬಿಸುತ್ತದೆ?

  1. ವಿಕೇಂದ್ರೀಕರಣ
  2. ಭಾಗವಹಿಸುವಿಕೆಯ ಆಡಳಿತ
  3. ತಳಮಟ್ಟದಲ್ಲಿ ಪಾರದರ್ಶಕತೆ
  4. ಕೇವಲ ಉನ್ನತ ಮಟ್ಟದಿಂದ ಕೆಳಮಟ್ಟದವರೆಗಿನ ಆಡಳಿತ 

ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. 1 ಮತ್ತು 2 ಮಾತ್ರ
  2. 1, 2 ಮತ್ತು 3 ಮಾತ್ರ
  3. 3 ಮತ್ತು 4 ಮಾತ್ರ
  4. 1, 2, 3 ಮತ್ತು 4

 

48). ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ನೆಲ, ಜಲ ಮತ್ತು ವಾಯು ವೇದಿಕೆಗಳಿಂದ ಉಡಾವಣೆ ಮಾಡಬಹುದಾದ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ.
  2. ಇದನ್ನು ಭಾರತದ ಡಿಆರ್‌ಡಿಒ (DRDO) ಮತ್ತು ರಷ್ಯಾದ ಎನ್‌ಪಿಒಎಂ (NPOM) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
  3. ಇದನ್ನು ಕೇವಲ ಭೂ-ದಾಳಿ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
  4. ಇದನ್ನು ಭಾರತೀಯ ಭೂಸೇನೆ ಮತ್ತು ಭಾರತೀಯ ನೌಕಾದಳ ಎರಡರಲ್ಲೂ ಸೇವೆಗೆ ನಿಯೋಜಿಸಿಕೊಳ್ಳಲಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1, 2 ಮತ್ತು 4 ಮಾತ್ರ
  2. 1 ಮತ್ತು 3 ಮಾತ್ರ
  3. 2 ಮತ್ತು 3 ಮಾತ್ರ
  4. 1, 2, 3 ಮತ್ತು 4

 

49). ಐಎನ್‌ಎಸ್ ಅರಿದಮನ್ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಭಾರತದ ಮೂರನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿಯಾಗಿದೆ.
  2. ಇದು ಐಎನ್‌ಎಸ್ ಅರಿಹಂತ್ ಮತ್ತು ಐಎನ್‌ಎಸ್ ಅರಿಘಾಟ್‌ನಂತೆಯೇ ಅದೇ ಹಲ್ (Hull) ವಿನ್ಯಾಸವನ್ನು ಹೊಂದಿದೆ.
  3. ಇದನ್ನು K-4 ಜಲಾಂತರ್ಗಾಮಿ-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಗಳೊಂದಿಗೆ (SLBM ಗಳು) ಶಸ್ತ್ರಸಜ್ಜಿತಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ.
  4. ಇದು ತನ್ನ ಹಿಂದಿನ ಜಲಾಂತರ್ಗಾಮಿಗಳಿಗಿಂತ ದುಪ್ಪಟ್ಟು ಸಾಮರ್ಥ್ಯದ ಅಂದರೆ 8 ಕ್ಷಿಪಣಿ ಉಡಾವಣಾ ಟ್ಯೂಬ್‌ಗಳನ್ನು ಹೊಂದಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

(a) 1, 3 ಮತ್ತು 4 ಮಾತ್ರ

(b) 1 ಮತ್ತು 2 ಮಾತ್ರ

(c) 2, 3 ಮತ್ತು 4 ಮಾತ್ರ

(d) 1, 2, 3 ಮತ್ತು 4

 

50). ಫಿಫಾ ಶಾಂತಿ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದನ್ನು 2025 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದರ ಉದ್ಘಾಟನಾ ಪ್ರಶಸ್ತಿಯನ್ನು ಡಿಸೆಂಬರ್ 5, 2025 ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಲಾಯಿತು.
  2. ಈ ಪ್ರಶಸ್ತಿಯು ಶಾಂತಿ, ಸಂಘರ್ಷದ ಪರಿಹಾರ ಮತ್ತು ಜಾಗತಿಕ ಏಕತೆಗೆ ನೀಡಿದ ಅಸಾಧಾರಣ ಕೊಡುಗೆಗಳನ್ನು ಗುರುತಿಸುತ್ತದೆ.
  3. ಈ ಪ್ರಶಸ್ತಿಯನ್ನು ಫಿಫಾ ಸಹಯೋಗದೊಂದಿಗೆ ವಿಶ್ವಸಂಸ್ಥೆಯ ಅಡಿಯಲ್ಲಿ ನೀಡಲಾಗುತ್ತದೆ.
  4. ಈ ಪ್ರಶಸ್ತಿಯು ಫಿಫಾದ ಘೋಷವಾಕ್ಯವಾದ “ಫುಟ್‌ಬಾಲ್ ಜಗತ್ತನ್ನು ಒಂದುಗೂಡಿಸುತ್ತದೆ” ಎಂಬುದಕ್ಕೆ ಅನುಗುಣವಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 2, 3 ಮತ್ತು 4 ಮಾತ್ರ
  2. 1 ಮತ್ತು 3 ಮಾತ್ರ
  3. 1, 2 ಮತ್ತು 4 ಮಾತ್ರ
  4. 1, 2, 3 ಮತ್ತು 4

 

51). ಅನಂತ್ ಅಂಬಾನಿ ಅವರು ಸ್ವೀಕರಿಸಿದ ‘ಜಾಗತಿಕ ಮಾನವತಾವಾದಿ ಪ್ರಶಸ್ತಿ’ಯನ್ನು ಈ ಕೆಳಗಿನ ಯಾವ ಸಂಸ್ಥೆಯು ನೀಡಿದೆ?   

  1. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)
  2. ವರ್ಲ್ಡ್ ವೈಲ್ಡ್‌ಲೈಫ್ ಫಂಡ್ (WWF) 
  3. ಗ್ರೀನ್‌ಪೀಸ್ ಇಂಟರ್ನ್ಯಾಷನಲ್ 
  4. ಗ್ಲೋಬಲ್ ಹ್ಯೂಮನ್ ಸೊಸೈಟಿ

 

52). 2025 ರ ‘ವಿಶ್ವ ಅಥ್ಲೆಟಿಕ್ಸ್ ವರ್ಷದ ಕ್ರೀಡಾಪಟು’ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:  

  1. ಸಿಡ್ನಿ ಮೆಕ್ಲಾಫ್ಲಿನ್-ಲೆವ್ರೋನ್ ಅವರು ಒಟ್ಟಾರೆ ಮಹಿಳಾ ಪ್ರಶಸ್ತಿ ಮತ್ತು ಮಹಿಳಾ ಟ್ರ್ಯಾಕ್ ವಿಭಾಗ ಎರಡನ್ನೂ ಗೆದ್ದಿದ್ದಾರೆ.
  2. ಮೊಂಡೊ ಡುಪ್ಲಾಂಟಿಸ್ ಅವರು ಒಟ್ಟಾರೆ ಪುರುಷರ ಪ್ರಶಸ್ತಿ ಮತ್ತು ಪುರುಷರ ಫೀಲ್ಡ್ ವಿಭಾಗ ಎರಡನ್ನೂ ಗೆದ್ದಿದ್ದಾರೆ.
  3. ಈ ಪ್ರಶಸ್ತಿ ಪ್ರದಾನ ಸಮಾರಂಭವು ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ನಡೆಯಿತು.
  4. ಈ ಪ್ರಶಸ್ತಿಗಳನ್ನು ಕೇವಲ ಒಲಿಂಪಿಕ್ ಸಾಧನೆಗಳಿಗಾಗಿ ಮಾತ್ರ ನೀಡಲಾಗುತ್ತದೆ.   

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?   

  1. 1 ಮತ್ತು 2 ಮಾತ್ರ 
  2. 1, 2 ಮತ್ತು 3 ಮಾತ್ರ 
  3. 2, 3 ಮತ್ತು 4 ಮಾತ್ರ 
  4. 1, 2, 3 ಮತ್ತು 4

 

53). ಟಿ20 ಕ್ರಿಕೆಟ್‌ನಲ್ಲಿ ಸುನಿಲ್ ನರೈನ್ ಅವರ ಸಾಧನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:  

  1. ಇವರು ಸ್ಪರ್ಧಾತ್ಮಕ ಟಿ20 ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳನ್ನು ಪಡೆದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡರು.
  2. ಇವರು ವಿಶ್ವ ILT20 ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ಪರ ಆಡುವಾಗ ಈ ಮೈಲಿಗಲ್ಲನ್ನು ಸಾಧಿಸಿದರು.
  3. ಇವರಿಗಿಂತ ಮೊದಲು ರಶೀದ್ ಖಾನ್ ಮತ್ತು ಡ್ವೇನ್ ಬ್ರಾವೋ ಮಾತ್ರ 600 ವಿಕೆಟ್‌ಗಳ ಸಾಧನೆ ಮಾಡಿದ ಇತರ ಇಬ್ಬರು ಬೌಲರ್‌ಗಳಾಗಿದ್ದಾರೆ.
  4. ಇವರು ಈ ಮೈಲಿಗಲ್ಲನ್ನು ಡಿಸೆಂಬರ್ 3, 2025 ರಂದು ಸಾಧಿಸಿದರು.  

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?   

  1. 1, 2 ಮತ್ತು 4 ಮಾತ್ರ 
  2. 1, 2 ಮತ್ತು 3 ಮಾತ್ರ 
  3. 1, 2, 3 ಮತ್ತು 4 
  4. 2, 3 ಮತ್ತು 4 ಮಾತ್ರ

 

54). 2025 ರ ಫಾರ್ಮುಲಾ ಒನ್ ಸೀಸನ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:  

  1. ಲ್ಯಾಂಡೋ ನಾರಿಸ್ 2025 ರಲ್ಲಿ ತಮ್ಮ ಚೊಚ್ಚಲ ಚಾಲಕರ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ.
  2. ಮೆಕ್ಲಾರೆನ್ ತಂಡವು 2008 ರ ನಂತರ ತನ್ನ ಮೊದಲ ಚಾಲಕರ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
  3. ಮ್ಯಾಕ್ಸ್ ವರ್ಸ್ಟಪ್ಪೆನ್ ಅವರು ಚಾಲಕರ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್-ಅಪ್ (ಎರಡನೇ ಸ್ಥಾನ) ಆಗಿ ಹೊರಹೊಮ್ಮಿದರು.
  4. ಮೆಕ್ಲಾರೆನ್ ತಂಡವು 2025 ರಲ್ಲಿ ಕನ್ಸ್ಟ್ರಕ್ಟರ್ಸ್ ಚಾಂಪಿಯನ್‌ಶಿಪ್ ಅನ್ನು ಸಹ ಗೆದ್ದುಕೊಂಡಿದೆ.  

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?   

  1. 1, 2 ಮತ್ತು 3 ಮಾತ್ರ 
  2. 1, 2, 3 ಮತ್ತು 4 
  3. 2 ಮತ್ತು 4 ಮಾತ್ರ 
  4. 1 ಮತ್ತು 3 ಮಾತ್ರ

 

55). 2025 ರಲ್ಲಿ ವಿಶ್ವದ ಅತ್ಯಂತ ಕಿರಿಯ ಫಿಡೆ-ರೇಟೆಡ್ (FIDE-rated) ಚೆಸ್ ಆಟಗಾರರಾದವರು ಯಾರು?   

  1. ಅನೀಶ್ ಸರ್ಕಾರ್ 
  2. ರಮೇಶ್‌ಬಾಬು ಪ್ರಜ್ಞಾನಂದ 
  3. ಸರ್ವಜ್ಞ ಸಿಂಗ್ ಕುಶ್ವಾಹ
  4. ನಿಹಾಲ್ ಸರಿನ್

 

56). 2025 ರ ಸ್ಕ್ವಾಷ್ ವಿಶ್ವಕಪ್‌ನಲ್ಲಿ ಭಾರತದ ವಿಜಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:  

  1. ಭಾರತವು ಹಾಂಗ್ ಕಾಂಗ್ ಅನ್ನು 3-0 ಅಂತರದಿಂದ ಸೋಲಿಸುವ ಮೂಲಕ ತನ್ನ ಚೊಚ್ಚಲ ಸ್ಕ್ವಾಷ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
  2. ವಿಶ್ವದ 79ನೇ ಶ್ರೇಯಾಂಕದ ಜೋಶ್ನಾ ಚಿನಪ್ಪ ಅವರು ತಮಗಿಂತ 42 ಸ್ಥಾನಗಳಷ್ಟು ಮುಂದಿದ್ದ ಕಾ ಯಿ ಲೀ ಅವರ ವಿರುದ್ಧದ ಪಂದ್ಯವನ್ನು ಗೆದ್ದರು.
  3. ಈ ಫೈನಲ್ ಪಂದ್ಯವು ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಹಾಂಗ್ ಕಾಂಗ್ ನಡುವಿನ ಮೊದಲ ಮುಖಾಮುಖಿಯಾಗಿತ್ತು.
  4. ಭಾರತವು 2025 ರಲ್ಲಿ ಮೊದಲ ಬಾರಿಗೆ ಸ್ಕ್ವಾಷ್ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು.  

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?   

  1. 1, 2 ಮತ್ತು 3 ಮಾತ್ರ 
  2. 1 ಮತ್ತು 4 ಮಾತ್ರ 
  3. 1, 2, 3 ಮತ್ತು 4 
  4. 2 ಮತ್ತು 3 ಮಾತ್ರ

 

57). 2025 ರ ಫಿಡೆ (FIDE) ಸರ್ಕ್ಯೂಟ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:  

  1. ಇದು 2026 ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ  ಫಿಡೆ ಪರಿಚಯಿಸಿದ ಕಾರ್ಯಕ್ಷಮತೆ ಆಧಾರಿತ ಅರ್ಹತಾ ಮಾರ್ಗವಾಗಿದೆ.
  2. ಆರ್. ಪ್ರಜ್ಞಾನಂದ ಅವರು 2025 ರ ಫಿಡೆ ಸರ್ಕ್ಯೂಟ್ ಮೂಲಕ ಅರ್ಹತೆ ಪಡೆದ ಏಕೈಕ ಪುರುಷ ಆಟಗಾರರಾಗಿದ್ದಾರೆ.
  3. ಈ ಸರ್ಕ್ಯೂಟ್ ಫಿಡೆ ಮುಂಚಿತವಾಗಿ ಅಧಿಸೂಚಿಸಿದ ಸ್ಥಿರವಾದ ಪಂದ್ಯಾವಳಿಗಳ ಗುಂಪನ್ನು ಒಳಗೊಂಡಿರುತ್ತದೆ.
  4. ಈ ಸರ್ಕ್ಯೂಟ್ ಕ್ಯಾಲೆಂಡರ್ ವರ್ಷದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.   

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?   

  1. 1 ಮತ್ತು 2 ಮಾತ್ರ 
  2. 1, 2 ಮತ್ತು 4 ಮಾತ್ರ 
  3. 2, 3 ಮತ್ತು 4 ಮಾತ್ರ 
  4. 1, 2 ಮತ್ತು 3 ಮಾತ್ರ

 

58). ತಮಿಳುನಾಡಿನಲ್ಲಿ ನಡೆದ 2025 ರ ಎಫ್‌ಐಎಚ್ (FIH) ಪುರುಷರ ಜೂನಿಯರ್ ಹಾಕಿ ವಿಶ್ವಕಪ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:  

  1. ಸ್ಪೇನ್ ತಂಡವನ್ನು ಸೋಲಿಸುವ ಮೂಲಕ ಜರ್ಮನಿ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಜರ್ಮನಿಯು ತನ್ನ ಹಿಂದಿನ ಆವೃತ್ತಿಯಲ್ಲಿ ಗೆದ್ದಿದ್ದ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ.
  2. ಇದು ಪಂದ್ಯಾವಳಿಯ ಫೈನಲ್‌ನಲ್ಲಿ ಜರ್ಮನಿಯ 10ನೇ ಪ್ರವೇಶವಾಗಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ತನ್ನ ದಾಖಲೆಯ 10ನೇ ಪ್ರಶಸ್ತಿಯನ್ನು ಗೆದ್ದಿದೆ.
  3. ಚೆನ್ನೈ ಮತ್ತು ಮಧುರೈ ಜಂಟಿಯಾಗಿ ಈ ಪಂದ್ಯಾವಳಿಗೆ ಆತಿಥ್ಯ ವಹಿಸಿದ್ದವು.
  4. ಭಾರತವು ಅರ್ಜೆಂಟೀನಾವನ್ನು ಸೋಲಿಸಿ ಮೂರನೇ ಸ್ಥಾನವನ್ನು ಪಡೆದುಕೊಂಡಿತು ಮತ್ತು ಜೂನಿಯರ್ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ವೇದಿಕೆ ಏರಿದ ಸಾಧನೆ ಮಾಡಿತು.   

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ?   

  1. 1 ಮತ್ತು 2 ಮಾತ್ರ 
  2. 2 ಮತ್ತು 4 ಮಾತ್ರ 
  3. 1 ಮತ್ತು 3 ಮಾತ್ರ 
  4. 1 ಮತ್ತು 4 ಮಾತ್ರ

 

59). 2025 ರ ಫಿಫಾ (FIFA) ಅತ್ಯುತ್ತಮ ಫುಟ್‌ಬಾಲ್ ಪ್ರಶಸ್ತಿಗಳು ಮತ್ತು ಅದರ ವಿಜೇತರ ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:  

  1. ಫಿಫಾ ವರ್ಷದ ಪುರುಷ ಆಟಗಾರ – ಔಸ್ಮಾನೆ ಡೆಂಬೆಲೆ
  2. ಫಿಫಾ ವರ್ಷದ ಮಹಿಳಾ ಆಟಗಾರ್ತಿ – ಐಟಾನಾ ಬೊನ್ಮಾಟಿ
  3. ಪುಸ್ಕಾಸ್ ಪ್ರಶಸ್ತಿ – ಸ್ಯಾಂಟಿಯಾಗೊ ಮೊಂಟಿಯಲ್
  4. ಫಿಫಾ ಅಭಿಮಾನಿಗಳ ಪ್ರಶಸ್ತಿ – ಜಖೋ ಎಸ್‌ಸಿ ಬೆಂಬಲಿಗರು   

ಮೇಲಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ/ಗಿವೆ?   

  1. 1 ಮತ್ತು 2 ಮಾತ್ರ 
  2. 1, 2 ಮತ್ತು 3 ಮಾತ್ರ
  3. 1, 2, 3 ಮತ್ತು 4 
  4. 2 ಮತ್ತು 4 ಮಾತ್ರ

 

60). 2025 ರ ಫಿಫಾ (FIFA) ಅತ್ಯುತ್ತಮ ಫುಟ್‌ಬಾಲ್ ಪ್ರಶಸ್ತಿ ವಿಭಾಗಗಳು ಮತ್ತು ಅದರ ವಿಜೇತರ ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:  

  1. ಪುರುಷರ ಗೋಲ್‌ಕೀಪರ್ – ಜಿಯಾನ್ಲುಯಿಗಿ ಡೊನ್ನಾರುಮ್ಮಾ
  2. ಮಹಿಳಾ ಗೋಲ್‌ಕೀಪರ್ – ಹನ್ನಾ ಹ್ಯಾಂಪ್ಟನ್
  3. ಪುರುಷರ ತರಬೇತುದಾರ – ಲೂಯಿಸ್ ಎನ್ರಿಕ್
  4. ಮಹಿಳಾ ತರಬೇತುದಾರ – ಐಟಾನಾ ಬೊನ್ಮಾಟಿ  

ಮೇಲಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ/ಗಿವೆ?  

  1. 1, 2 ಮತ್ತು 3 ಮಾತ್ರ 
  2. 1 ಮತ್ತು 2 ಮಾತ್ರ 
  3. 2, 3 ಮತ್ತು 4 ಮಾತ್ರ 
  4. 1, 2, 3 ಮತ್ತು 4

 

61). ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) 2025–26 ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಹರಿಯಾಣ ತಂಡವನ್ನು ಸೋಲಿಸುವ ಮೂಲಕ ಜಾರ್ಖಂಡ್ ತನ್ನ ಚೊಚ್ಚಲ SMAT ಪ್ರಶಸ್ತಿಯನ್ನು ಗೆದ್ದುಕೊಂಡಿತು.
  2. ಅನುಕುಲ್ ರಾಯ್ ಅವರು ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು; ಅವರು ಈ ಪಂದ್ಯಾವಳಿಯಲ್ಲಿ ಒಟ್ಟು 303 ರನ್ ಗಳಿಸಿದರು ಮತ್ತು 18 ವಿಕೆಟ್ ಪಡೆದರು.
  3. ಇಶಾನ್ ಕಿಶನ್ ಅವರನ್ನು ‘ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು; ಇವರು ಫೈನಲ್ ಪಂದ್ಯದಲ್ಲಿ 49 ಎಸೆತಗಳಲ್ಲಿ 101 ರನ್ ಗಳಿಸಿದರು.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮಾತ್ರ
  4. 1, 2 ಮತ್ತು 3

 

62). 2030 ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಅಹಮದಾಬಾದ್ ಕಾಮನ್‌ವೆಲ್ತ್ ಕ್ರೀಡಾಕೂಟದ ಶತಮಾನೋತ್ಸವದ ಆವೃತ್ತಿಯನ್ನು ಆಯೋಜಿಸಲಿದೆ. ಈ ಕ್ರೀಡಾಕೂಟವು 20 ವರ್ಷಗಳ ಸುದೀರ್ಘ ಅವಧಿಯ ನಂತರ ಭಾರತಕ್ಕೆ ಮರಳಲಿದೆ.
  2. ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟವು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆಯಿತು ಮತ್ತು ಇದನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ.
  3. ಭಾರತವು ಕೊನೆಯದಾಗಿ 2010 ರಲ್ಲಿ ನವದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು ಮತ್ತು ಈ ಹಿಂದೆ ಒಂದಕ್ಕಿಂತ ಹೆಚ್ಚು ಬಾರಿ ಇದನ್ನು ಆಯೋಜಿಸಿದೆ.
  4. ಕಾಮನ್‌ವೆಲ್ತ್ ಕ್ರೀಡಾಕೂಟದ ಕೊನೆಯ ಆವೃತ್ತಿಯು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿತ್ತು ಮತ್ತು ಇದು ಒಲಿಂಪಿಕ್ ಹಾಗೂ ಒಲಿಂಪಿಕ್ ಅಲ್ಲದ ಕ್ರೀಡೆಗಳೆರಡನ್ನೂ ಒಳಗೊಂಡಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 4 ಮಾತ್ರ
  2. 2 ಮತ್ತು 4 ಮಾತ್ರ
  3. 3 ಮತ್ತು 4 ಮಾತ್ರ
  4. 1, 2 ಮತ್ತು 3 ಮಾತ್ರ

 

ಕರ್ನಾಟಕ ದರ್ಶನ ಮತ್ತು ಇತರೆ

ಉತ್ತರಗಳು 

1) B

2) A

3) A

4) C

5) D

6) D

7) A

8) B

9) A

10) C

11) C

12) D

13) A

14) A

15) B

16) C

17) B

18) D

19) A

20) C

21) C

22) B

23) C

24) B

25) B

26) D

27) B

28) C

29) D

30) C

31) C

32) A

33) B

34) A

35) B

36) C

37) A

38) B

39) C

40) A

41) B

42) B

43) A

44) A

45) B

46) C

47) B

48) A

49) A

50) C

51) D

52) A

53) C

54) B

55) C

56) A

57) B

58) B

59) C

60) A

61) C

62) A

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts