ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ

ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ

ಇದೀಗ ಸುದ್ದಿಯಲ್ಲಿದೆ:

  • ₹10,000 ಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ (ನೀರನ್ನೆತ್ತಿ ಸಂಗ್ರಹಿಸುವ) ಜಲವಿದ್ಯುತ್ ಯೋಜನೆಗೆ ವನ್ಯಜೀವಿ ಮಂಡಳಿಗಳು ನೀಡಿರುವ ಅನುಮೋದನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
  • ಮುಂದಿನ ಆದೇಶದವರೆಗೆ ಶರಾವತಿ ಕಣಿವೆ ಸಿಂಹಬಾಲದ ಸಿಂಗಳೀಕ (LTM) ವನ್ಯಜೀವಿ ಅಭಯಾರಣ್ಯ ಮತ್ತು ಅದರ ಪರಿಸರ ಸೂಕ್ಷ್ಮ ವಲಯದ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಎಲ್ಲಾ ಭೂಮಟ್ಟದ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ (KPCL) ನಿರ್ದೇಶನ ನೀಡಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಬಗ್ಗೆ:

  • ಸ್ಥಳ:- ಇದು ಕರ್ನಾಟಕದ ಶರಾವತಿ ನದಿಯ ಮೇಲಿರುವ ಒಂದು ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಯಾಗಿದೆ.
  • ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ:- 2000 MW (ಮೆಗಾವ್ಯಾಟ್).
  • ವಿಶೇಷತೆ:- ಇದು ದೇಶದ ಅತಿದೊಡ್ಡ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಘಟಕವಾಗಿ ಹೊರಹೊಮ್ಮಲಿದೆ.
  • ಇದನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಎರಡು ಜಲಾಶಯಗಳ ನಡುವೆ ನಿರ್ಮಿಸಲಾಗುತ್ತದೆ.
  • 62.48 ಮೀಟರ್ ಎತ್ತರವಿರುವ ತಳಕಳಲೆ ಅಣೆಕಟ್ಟು ಈ ಯೋಜನೆಯ ಮೇಲ್ಭಾಗದ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ. 
  • ಈ ಅಣೆಕಟ್ಟು ಪ್ರಸ್ತುತ ಅಸ್ತಿತ್ವದಲ್ಲಿರುವ ಶರಾವತಿ ಜಲವಿದ್ಯುತ್ ಯೋಜನೆಗೆ ನೀರಿನ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
  • ಸುಮಾರು 64 ಮೀಟರ್ ಎತ್ತರವಿರುವ ಗೇರುಸೊಪ್ಪ ಅಣೆಕಟ್ಟು ಈ ಯೋಜನೆಯ ಕೆಳಭಾಗದ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ.
  • ವಿದ್ಯುತ್ ಬೇಡಿಕೆ ಕಡಿಮೆ ಇರುವ ಸಮಯದಲ್ಲಿ ಗ್ರಿಡ್ ವಿದ್ಯುತ್ ಬಳಸಿ ನೀರನ್ನು ಮೇಲ್ಭಾಗದ ಜಲಾಶಯಕ್ಕೆ ಕಳುಹಿಸಲಾಗುತ್ತದೆ ಮತ್ತು ವಿದ್ಯುತ್ ಬೇಡಿಕೆ ಗರಿಷ್ಠ ಮಟ್ಟದಲ್ಲಿರುವಾಗ ವಿದ್ಯುತ್ ಉತ್ಪಾದಿಸಲು ಆ ನೀರನ್ನು ಕೆಳಮುಖವಾಗಿ ಹರಿಸಲಾಗುತ್ತದೆ.
  • ತೆಲಂಗಾಣದ ಕಾಳೇಶ್ವರಂ ಯೋಜನೆಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಈ ಯೋಜನೆಯು, ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನೂ ಸಹ ಹೊಂದಿದೆ.
  • ಕಳವಳಗಳು:- ಈ ಯೋಜನೆಯು ರಾಣಿ ಚೆನ್ನಭೈರಾದೇವಿಯವರ ಪರಂಪರೆಯಾಗಿರುವ 16ನೇ ಶತಮಾನದ ಪ್ರಾಚೀನ ಸ್ಮಾರಕಗಳನ್ನು ನಾಶಪಡಿಸುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.

ಶರಾವತಿ ನದಿಯ ಬಗ್ಗೆ:

  • ಇದು ಕರ್ನಾಟಕದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಅತ್ಯಂತ ಉದ್ದವಾದ ನದಿಯಾಗಿದೆ.
  • ಈ ನದಿ ಜಲಾನಯನ ಪ್ರದೇಶದ ಬಹುಪಾಲು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ.
  • ನದಿಪಾತ್ರ:- ಪಶ್ಚಿಮ ಘಟ್ಟಗಳಲ್ಲಿ ಉಗಮಿಸುವ ಈ ನದಿಯು, ವಾಯುವ್ಯ ದಿಕ್ಕಿನಲ್ಲಿ ಹರಿದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
  • ಉದ್ದ:- ಈ ನದಿಯ ಒಟ್ಟು ಉದ್ದ 128 ಕಿ.ಮೀ, ಮತ್ತು ಇದರ ಜಲಾನಯನ ಪ್ರದೇಶವು 2,985 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.
  • ಜಲಪಾತಗಳು:- ಶರಾವತಿ ನದಿಯು ತನ್ನ ನದಿಪಾತ್ರದಲ್ಲಿ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗ ಜಲಪಾತವನ್ನು ಸೃಷ್ಟಿಸುತ್ತದೆ. ಇಲ್ಲಿ ನದಿಯು 253 ಮೀಟರ್ ಎತ್ತರದಿಂದ ಧುಮುಕುತ್ತದೆ.
  • ಪ್ರಮುಖ ಉಪನದಿಗಳು:- ನಂದಿಹೊಳೆ, ಹರಿದ್ರಾವತಿ, ಮಾವಿನಹೊಳೆ, ಹಿಲ್ಕುಂಜಿ, ಎಣ್ಣೆಹೊಳೆ, ಹುರ್ಲಿಹೊಳೆ ಮತ್ತು ನಾಗೋಡಿಹೊಳೆ.

ರಾಣಿ ಚೆನ್ನಭೈರಾದೇವಿ ಅವರ ಬಗ್ಗೆ:

  • ಇವರು ಕ್ರಿ. ಶ. 1552 ರಿಂದ 1606 ರವರೆಗೆ ತಮ್ಮ ರಾಜಧಾನಿ ಗೇರುಸೊಪ್ಪದಿಂದ ಆಡಳಿತ ನಡೆಸಿದರು.
  • ಇವರು ಭಾರತೀಯ ಇತಿಹಾಸದಲ್ಲೇ ಅತಿ ದೀರ್ಘಕಾಲ ಆಡಳಿತ ನಡೆಸಿದ ರಾಣಿಯಾಗಿದ್ದಾರೆ.
  • ಇವರು ಪೋರ್ಚುಗೀಸರ ವಿರುದ್ಧ ಹೋರಾಡಿದರು. ಇವರ ಸಾಮ್ರಾಜ್ಯದಲ್ಲಿ ಮೆಣಸು ಹೆಚ್ಚಾಗಿ ಬೆಳೆಯುತ್ತಿದ್ದರಿಂದ ಪೋರ್ಚುಗೀಸರು ಇವರಿಗೆ ‘ರೈನಾ ಡಿ ಪಿಮೆಂಟಾ’ ಅಂದರೆ ‘ಕಾಳುಮೆಣಸಿನ ರಾಣಿ’ ಎಂಬ ಬಿರುದನ್ನು ನೀಡಿದ್ದರು.
  • ಇವರು ಐರೋಪ್ಯ ಮತ್ತು ಅರಬ್ ದೇಶಗಳಿಗೆ ಮಸಾಲೆ ಪದಾರ್ಥಗಳನ್ನು ರಫ್ತು ಮಾಡಲು ಹೆಸರುವಾಸಿಯಾಗಿದ್ದರು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts