ಎಪಿಎಂಸಿಯಿಂದ ಅತ್ಯಾಧುನಿಕ ಹಣ್ಣು ಮತ್ತು ತರಕಾರಿ ಮಾರುಕಟ್ಟೆ
ಇದೀಗ ಸುದ್ದಿಯಲ್ಲಿದೆ:
- ನಗರದ ಜನದಟ್ಟಣೆಯ ಮಾರುಕಟ್ಟೆಗಳನ್ನು ಸ್ಥಳಾಂತರಿಸಲು ಮತ್ತು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ, ಕರ್ನಾಟಕ ಕೃಷಿ ಮಾರುಕಟ್ಟೆ ಇಲಾಖೆಯು ಅತ್ಯಾಧುನಿಕ ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆಯನ್ನು ನಿರ್ಮಿಸಲು ಮುಂದಾಗಿದೆ.
ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ಬಗ್ಗೆ:
- ಪ್ರಮುಖ ಉದ್ದೇಶ:- ರೈತರು ಮತ್ತು ವ್ಯಾಪಾರಿಗಳಿಬ್ಬರಿಗೂ ಅನುಕೂಲವಾಗುವಂತೆ ಶೈತ್ಯಾಗಾರದಂತಹ ಆಧುನಿಕ ಸೌಲಭ್ಯಗಳೊಂದಿಗೆ ವಿಶಾಲವಾದ, ನೈರ್ಮಲ್ಯಯುತವಾದ ಮತ್ತು ಸುಸಜ್ಜಿತವಾದ ವ್ಯಾಪಾರ ಕೇಂದ್ರವನ್ನು ನಿರ್ಮಿಸುವುದು.
- ಸ್ಥಳ:- ಹೊಸೂರು ರಸ್ತೆಯ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ 42 ಎಕರೆ 12 ಗುಂಟೆ ಜಮೀನಿನಲ್ಲಿ ನೆಲೆಗೊಂಡಿದ್ದು, ಆಯಕಟ್ಟಿನ ಪರಿಧಿ ವರ್ತುಲ ರಸ್ತೆಯ ಸಮೀಪದಲ್ಲಿದೆ.
- ಸಂಚಾರ ದಟ್ಟಣೆ ನಿವಾರಣಾ ಯೋಜನೆ:- ಸಗಟು ವ್ಯಾಪಾರ ಕಾರ್ಯಾಚರಣೆಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವ ಮೂಲಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಬರುವ ಬೃಹತ್ ಸರಕು ಸಾಗಣೆ ಲಾರಿಗಳು ನಗರದೊಳಗೆ ಪ್ರವೇಶಿಸುವುದನ್ನು ತಡೆಗಟ್ಟಿ, ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.



ನಿಮ್ಮದೊಂದು ಉತ್ತರ