ಮೇಕೆದಾಟು ಯೋಜನೆ

ಮೇಕೆದಾಟು ಯೋಜನೆ

ಇದೀಗ ಸುದ್ದಿಯಲ್ಲಿದೆ:

  • ಸರ್ವೋಚ್ಚ ನ್ಯಾಯಾಲಯದ ಅನುಕೂಲಕರ ಆದೇಶದ ಹಿನ್ನೆಲೆಯಲ್ಲಿ, ಮೇಕೆದಾಟು ಯೋಜನೆಯನ್ನು ತ್ವರಿತಗೊಳಿಸಲು ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದ (KERS) ನಿರ್ದೇಶಕ ಕೆ.ಜಿ. ಮಹೇಶ್ ಅವರ ನೇತೃತ್ವದಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಲು ಕರ್ನಾಟಕ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

ಸುದ್ದಿಯ ಕುರಿತು ಇನ್ನಷ್ಟು ಮಾಹಿತಿ:

  • ಸಮಿತಿಯ ರಚನೆ:- ಕೆಇಆರ್‌ಎಸ್ ನಿರ್ದೇಶಕರ ನೇತೃತ್ವದ ಈ ತಂಡವು ಒಬ್ಬರು ಕಾರ್ಯಪಾಲಕ ಎಂಜಿನಿಯರ್, ಮೂವರು ತಾಂತ್ರಿಕ ಸಹಾಯಕರು, ಆರು ಜನ ಸಹಾಯಕ ಎಂಜಿನಿಯರ್‌ಗಳು, ಒಬ್ಬರು ಲೆಕ್ಕಿಗರು, ಒಬ್ಬರು ಅಧೀಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ.
  • ಯೋಜನಾ ಕಚೇರಿ:- ಮೇಕೆದಾಟು ಯೋಜನೆಯ ಯೋಜನಾ ಕಚೇರಿಯನ್ನು ರಾಮನಗರದಲ್ಲಿ ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ಘೋಷಿಸಿದ್ದಾರೆ. 
  • ಕಾವೇರಿ ನೀರಾವರಿ ನಿಗಮ ನಿಯಮಿತವು (CNNL) ಈ ಯೋಜನಾ ಕಚೇರಿಯನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

ಕಾವೇರಿ ನದಿ ವ್ಯವಸ್ಥೆಯ ಬಗ್ಗೆ:

  • ಮೂಲ:- ತಲಕಾವೇರಿ
  • ನದಿಯ ಒಟ್ಟು ಉದ್ದ:- 805 ಕಿ.ಮೀ
  • ಹರಿಯುವ ದಿಕ್ಕು:- ಪೂರ್ವಕ್ಕೆ
  • ಹರಿಯುವ ರಾಜ್ಯಗಳು:- ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿ.
  • ಉಪನದಿಗಳು:- ಅರ್ಕಾವತಿ, ಶಿಂಷಾ, ಹೇಮಾವತಿ, ಕಪಿಲಾ, ಹೊನ್ನುಹೊಳೆ, ಅಮರಾವತಿ, ಲಕ್ಷ್ಮಣ ತೀರ್ಥ, ಕಬಿನಿ, ಲೋಕಪಾವನಿ, ಭವಾನಿ ಮತ್ತು ನೊಯ್ಯಾಲ್.

ಮೇಕೆದಾಟು ಯೋಜನೆಯ ಬಗ್ಗೆ:

  • ಮೇಕೆದಾಟು ಯೋಜನೆಯು ಒಂದು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯಾಗಿದೆ.
  • ನಿರ್ಮಾಣ:- ಇದನ್ನು ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಲ್ಲಿ ಕರ್ನಾಟಕ ಸರ್ಕಾರವು ನಿರ್ಮಿಸಲಿದೆ.
  • ಉದ್ದೇಶ:- ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
  • ಪ್ರಾಮುಖ್ಯತೆ:- ಇದು 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ.
  • ಯೋಜನೆಯ ಕುರಿತಾದ ಕಳವಳಗಳು:- ಈ ಯೋಜನೆಯಿಂದಾಗಿ ಕಾವೇರಿ ವನ್ಯಜೀವಿ ಅಭಯಾರಣ್ಯದ ಸುಮಾರು 63% ಅರಣ್ಯ ಪ್ರದೇಶವು ಮುಳುಗಡೆಯಾಗಲಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts