ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025

ಇದೀಗ ಸುದ್ದಿಯಲ್ಲಿದೆ:

  • ರಾಜ್ಯ ಸಚಿವ ಸಂಪುಟವು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025’ ಕ್ಕೆ ಅನುಮೋದನೆ ನೀಡಿದೆ.

ಈ ಮಸೂದೆಯ ಪ್ರಮುಖ ಲಕ್ಷಣಗಳು:

  • ಉದ್ದೇಶ:- ಸಮಾಜದಲ್ಲಿ ಅಸಾಮರಸ್ಯ ಮತ್ತು ದ್ವೇಷಕ್ಕೆ ಕಾರಣವಾಗುವ ದ್ವೇಷ ಭಾಷಣ ಹಾಗೂ ದ್ವೇಷದ ಅಪರಾಧಗಳ ಪ್ರಸಾರ, ಪ್ರಕಟಣೆ ಅಥವಾ ಪ್ರೋತ್ಸಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದು ಮತ್ತು ನಿಯಂತ್ರಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.
  • ಗುರಿ:- ವ್ಯಕ್ತಿಗಳು, ಗುಂಪುಗಳು ಅಥವಾ ಸಂಸ್ಥೆಗಳ ವಿರುದ್ಧ ಹಾನಿ, ಅಸಾಮರಸ್ಯ, ಹಗೆತನ ಅಥವಾ ದ್ವೇಷವನ್ನು ಉಂಟುಮಾಡುವ ಕೃತ್ಯಗಳನ್ನು ನಿಯಂತ್ರಿಸುವ ಗುರಿಯನ್ನು ಇದು ಹೊಂದಿದೆ.
  • ಅನ್ವಯ:- ಇದು ವ್ಯಕ್ತಿಗಳು ಮತ್ತು ಸಂಸ್ಥೆಗಳೆರಡಕ್ಕೂ ಅನ್ವಯಿಸುತ್ತದೆ.
  • ದ್ವೇಷ ಭಾಷಣದ ವ್ಯಾಖ್ಯಾನ: ಪೂರ್ವಾಗ್ರಹ ಪೀಡಿತ ಹಿತಾಸಕ್ತಿಯನ್ನು ಪೂರೈಸಲು, ಜೀವಂತವಾಗಿರುವ ಅಥವಾ ಮೃತರಾದ ವ್ಯಕ್ತಿ, ವ್ಯಕ್ತಿಗಳ ವರ್ಗ ಅಥವಾ ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ಹಗೆತನದ ಭಾವನೆಗಳು ಅಥವಾ ದ್ವೇಷ ಅಥವಾ ಅಸೂಯೆಯನ್ನು ಉಂಟುಮಾಡುವ ಉದ್ದೇಶದಿಂದ, ಸಾರ್ವಜನಿಕವಾಗಿ ಆಡಿದ ಅಥವಾ ಬರೆದ ಪದಗಳು, ಚಿಹ್ನೆಗಳು ಅಥವಾ ದೃಶ್ಯ ಪ್ರಾತಿನಿಧ್ಯಗಳ ಮೂಲಕ ಅಥವಾ ಎಲೆಕ್ಟ್ರಾನಿಕ್ ಸಂವಹನದ ಮೂಲಕ ವ್ಯಕ್ತಪಡಿಸುವ, ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಯಾವುದೇ ಅಭಿವ್ಯಕ್ತಿಯನ್ನು ಇದು ಒಳಗೊಂಡಿದೆ.
  • ಪೂರ್ವಾಗ್ರಹ ಪೀಡಿತ ಹಿತಾಸಕ್ತಿ:- ಇದು ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ನಿವಾಸ, ಭಾಷೆ, ಅಂಗವೈಕಲ್ಯ ಅಥವಾ ಬುಡಕಟ್ಟನ್ನು ಒಳಗೊಂಡಿರುತ್ತದೆ.
  • ಶಿಕ್ಷೆ ಮತ್ತು ದಂಡ:- 1 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡವನ್ನು ಒಳಗೊಂಡಿರುತ್ತದೆ.
  • ಸಂಜ್ಞೇಯ ಮತ್ತು ಜಾಮೀನುರಹಿತ:- ಈ ಅಪರಾಧಗಳು ಸಂಜ್ಞೇಯ (Cognisable) ಮತ್ತು ಜಾಮೀನುರಹಿತವಾಗಿದ್ದು, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಂದ ವಿಚಾರಣೆಗೆ ಒಳಪಡುತ್ತವೆ.
  • ಕೇಂದ್ರ ಕಾನೂನುಗಳೊಂದಿಗೆ ಸಮನ್ವಯ:- ಕಾರ್ಯವಿಧಾನದ ಏಕರೂಪತೆಗಾಗಿ ಈ ಮಸೂದೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ರ ನಿಬಂಧನೆಗಳನ್ನು ಒಳಗೊಂಡಿದೆ.

ಸಾಂವಿಧಾನಿಕ ನಿಬಂಧನೆಗಳು:

  • ವಿಧಿ 19(2):- ಇದು ವಿಧಿ 19(1)(a) ಅಡಿಯಲ್ಲಿ ಲಭ್ಯವಿರುವ ಮೂಲಭೂತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ವಿಧಿಸಬಹುದಾದ ಸಮಂಜಸವಾದ ನಿರ್ಬಂಧಗಳ ಬಗ್ಗೆ ವ್ಯವಹರಿಸುತ್ತದೆ.
  • ರಾಜ್ಯವು ಭಾಷಣವನ್ನು ನಿರ್ಬಂಧಿಸಬಹುದಾದ ಸಂದರ್ಭಗಳು:- ರಾಜ್ಯದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆ, ನ್ಯಾಯಾಲಯದ ನಿಂದನೆ, ಮಾನಹಾನಿ ಮತ್ತು ಅಪರಾಧಕ್ಕೆ ಪ್ರಚೋದನೆ.

ದ್ವೇಷ ಭಾಷಣವನ್ನು ಎದುರಿಸಲು ಕೈಗೊಂಡ ಕ್ರಮಗಳು:

  • ಭಾರತೀಯ ದಂಡ ಸಂಹಿತೆ (IPC) / ಭಾರತೀಯ ನ್ಯಾಯ ಸಂಹಿತೆ (BNS), 2023:- ದಂಡ ಸಂಹಿತೆಗಳ ಸೆಕ್ಷನ್ 153A, ಸೆಕ್ಷನ್ 295A ನಂತಹ ನಿರ್ದಿಷ್ಟ ಸೆಕ್ಷನ್‌ಗಳು ಗುಂಪುಗಳ ನಡುವೆ (ಧರ್ಮ, ಜನಾಂಗ, ಭಾಷೆ) ಹಗೆತನವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಅಥವಾ ಸಾರ್ವಜನಿಕರಲ್ಲಿ ಭೀತಿ/ಅಶಾಂತಿಯನ್ನು ಪ್ರಚೋದಿಸುವುದನ್ನು ಅಪರಾಧೀಕರಿಸುತ್ತವೆ.
  • ಜನಪ್ರತಿನಿಧಿ ಕಾಯ್ದೆ, 1951:- ಸೆಕ್ಷನ್ 123(3), 123(3A): ಚುನಾವಣೆಯ ಸಮಯದಲ್ಲಿ ದ್ವೇಷವನ್ನು ಪ್ರಚೋದಿಸುವ ಅಥವಾ ಧರ್ಮ, ಜಾತಿ, ಸಮುದಾಯದ ಹೆಸರಿನಲ್ಲಿ ಮನವಿ ಮಾಡುವ ರಾಜಕೀಯ ಭಾಷಣಗಳನ್ನು ನಿಷೇಧಿಸುತ್ತವೆ.
  • ಪ್ರವಾಸಿ ಭಲೈ ಸಂಘಟನ್ ವಿರುದ್ಧ ಭಾರತ ಒಕ್ಕೂಟ, 2014:- ಸರ್ವೋಚ್ಚ ನ್ಯಾಯಾಲಯವು ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾನೂನಿನ ಕೊರತೆಯನ್ನು ಒಪ್ಪಿಕೊಂಡಿತು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಕಾನೂನನ್ನು ರೂಪಿಸುವಂತೆ ಸಂಸತ್ತಿಗೆ ಶಿಫಾರಸು ಮಾಡಿತು.
  • ಅಮಿಶ್ ದೇವಗನ್ ವಿರುದ್ಧ ಭಾರತ ಒಕ್ಕೂಟ, 2020:- ಸರ್ವೋಚ್ಚ ನ್ಯಾಯಾಲಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ (ವಿಧಿ 19) ಮತ್ತು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಲು ದ್ವೇಷ ಭಾಷಣವನ್ನು ನಿರ್ಬಂಧಿಸುವ ಅಗತ್ಯತೆಯ ನಡುವಿನ ಸಮತೋಲನದ ಬಗ್ಗೆ ವಿವರಿಸಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts