ಆಗುಂಬೆಯಲ್ಲಿ ಹೆಲ್ತ್ (HEALTH) ಉಪಕ್ರಮದ ಉತ್ತೇಜನ | “ಫ್ಲೈಬಸ್” ಸೇವೆ

ಆಗುಂಬೆಯಲ್ಲಿ ಹೆಲ್ತ್ (HEALTH) ಉಪಕ್ರಮದ ಉತ್ತೇಜನ

ಇದೀಗ ಸುದ್ದಿಯಲ್ಲಿ

  • ಸುರತ್ಕಲ್‌ನ NITK ತಂಡವು, ‘ಆಗುಂಬೆಯಲ್ಲಿ ಹೆಲ್ತ್ (HEALTH) ಉತ್ತೇಜನ’ ಯೋಜನೆಯ ಅಡಿಯಲ್ಲಿ ನವೆಂಬರ್ 8 ರಂದು ಆಗುಂಬೆ ಭಾಗದಲ್ಲಿ 100 ಇಂಟರ್ನೆಟ್ ಸಂಪರ್ಕಗಳನ್ನು ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಹೆಲ್ತ್ (HEALTH) ಉಪಕ್ರಮದ ಉತ್ತೇಜನ ಕುರಿತು: 

  • ಇದು ಎನ್‌ಐಟಿಕೆ ಸುರತ್ಕಲ್‌ನ ಡಾ. ಮೋಹಿತ್ ಪಿ. ತಹಿಲಿಯಾನಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ.
  • HEALTH ಎಂದರೆ:- ಆರೋಗ್ಯ ರಕ್ಷಣೆ (H), ಶಿಕ್ಷಣ (E), ಕೃಷಿ (A), ಜೀವನೋಪಾಯ (L), ತಂತ್ರಜ್ಞಾನ (T) ಮತ್ತು ಪರಂಪರೆ (H).
  • ಉದ್ದೇಶ:- ಪಶ್ಚಿಮ ಘಟ್ಟಗಳಂತಹ ದೂರದ ಮತ್ತು ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಸ್ಥಳೀಯ ಸಂಸ್ಥೆಗಳು, ಉದ್ದಿಮೆಗಳು ಮತ್ತು ಮನೆಗಳಿಗೆ ಡಿಜಿಟಲ್ ಪ್ರವೇಶವನ್ನು ಕಲ್ಪಿಸುವುದು ಇದರ ಮೂಲ ಉದ್ದೇಶವಾಗಿದೆ. ಆಗುಂಬೆಯ 100 ತಾಣಗಳಿಗೆ ವಿಶ್ವಾಸಾರ್ಹ ಅಂತರ್ಜಾಲ ಸಂಪರ್ಕವನ್ನು ಒದಗಿಸಿರುವುದು ಯೋಜನೆಯ ಇತ್ತೀಚಿನ ಮೈಲಿಗಲ್ಲಾಗಿದೆ..

HEALTH ಉಪಕ್ರಮದ ಆಧಾರಸ್ತಂಭಗಳು

  1. ಆರೋಗ್ಯ ರಕ್ಷಣೆ (H): ಗ್ರಾಮೀಣ ಜನರಿಗೆ ಆನ್‌ಲೈನ್ ಮೂಲಕ ಆರೋಗ್ಯ ಮಾಹಿತಿ ಮತ್ತು ವೈದ್ಯಕೀಯ ಸೇವೆಗಳ ಲಭ್ಯತೆಯನ್ನು ಸುಗಮಗೊಳಿಸುವುದು.
  2. ಶಿಕ್ಷಣ (E): ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆನ್‌ಲೈನ್ ಸಂಪನ್ಮೂಲಗಳು ಹಾಗೂ ಡಿಜಿಟಲ್ ಕಲಿಕಾ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುವುದು.
  3. ಕೃಷಿ (A): ಕೃಷಿ ಸಮುದಾಯಕ್ಕೆ ಅಗತ್ಯ ಮಾಹಿತಿ ಮತ್ತು ಉತ್ತಮ ಸಂವಹನ ವ್ಯವಸ್ಥೆಯನ್ನು ಒದಗಿಸುವುದು.
  4. ಜೀವನೋಪಾಯ (L): ಆನ್‌ಲೈನ್ ಪ್ರಚಾರ, ಕಾಯ್ದಿರಿಸುವಿಕೆ ವ್ಯವಸ್ಥೆಗಳು ಮತ್ತು ತಂಗುಮನೆ (ಹೋಮ್‌ಸ್ಟೇ) ಗಳಂತಹ ಸ್ಥಳೀಯ ಉದ್ಯಮಗಳಿಗೆ ತಾಂತ್ರಿಕ ಬೆಂಬಲ ನೀಡುವ ಮೂಲಕ ಸ್ಥಳೀಯ ವಾಣಿಜ್ಯ ವಹಿವಾಟನ್ನು ಸುಧಾರಿಸುವುದು.
  5. ತಂತ್ರಜ್ಞಾನ (T): ವಿದ್ಯುತ್ ವ್ಯತ್ಯಯ ಮತ್ತು ಕಠಿಣ ಭೌಗೋಳಿಕ ಸವಾಲುಗಳಿರುವ ಪ್ರದೇಶಕ್ಕೂ ವಿಶ್ವಾಸಾರ್ಹ ಅಂತರ್ಜಾಲ ಸೇವೆಯನ್ನು ತಲುಪಿಸುವುದು.
  6. ಪರಂಪರೆ (H): ಆಗುಂಬೆಯ ಪ್ರಮುಖ ಜೀವವೈವಿಧ್ಯ ಪ್ರಭೇದವಾದ ಕಾಳಿಂಗ ಸರ್ಪಗಳ ಸಂರಕ್ಷಣೆ ಮತ್ತು ಸಂಶೋಧನಾ ಪ್ರಯತ್ನಗಳಿಗೆ ಬೆಂಬಲ ನೀಡುವುದು.

“ಫ್ಲೈಬಸ್” ಸೇವೆ

ಇದೀಗ ಸುದ್ದಿಯಲ್ಲಿದೆ:

  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC), ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ದಾವಣಗೆರೆ ನಗರದ ನಡುವೆ ನೇರವಾದ ನೂತನ ‘ಫ್ಲೈಬಸ್’ (ವೋಲ್ವೋ ಮಲ್ಟಿ-ಆಕ್ಸಲ್) ಸೇವೆಯನ್ನು ಪ್ರಾರಂಭಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಗ್ಗೆ:

  • ಮಾಲೀಕತ್ವ:- ಈ ನಿಗಮವು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ.
  • ಸಾರಿಗೆ ಸೇವೆಗಳು:- ಕೆಎಸ್‌ಆರ್‌ಟಿಸಿಯು ಸಾಮಾನ್ಯ ದರ್ಜೆಯ “ಕರ್ನಾಟಕ ಸಾರಿಗೆ” ಮತ್ತು “ಗ್ರಾಮಾಂತರ ಸಾರಿಗೆ” (ಹವಾನಿಯಂತ್ರಣ ರಹಿತ) ಬಸ್‌ಗಳಿಂದ ಹಿಡಿದು, ಐಷಾರಾಮಿ ದರ್ಜೆಯ “ಐರಾವತ ಕ್ಲಬ್ ಕ್ಲಾಸ್,” “ಅಂಬಾರಿ ಡ್ರೀಮ್ ಕ್ಲಾಸ್” ಮತ್ತು ಪರಿಸರ ಸ್ನೇಹಿ ವಿದ್ಯುತ್ ಚಾಲಿತ “ಇವಿ- ಪವರ್ ಪ್ಲಸ್+” ಬಸ್‌ಗಳವರೆಗೆ ವೈವಿಧ್ಯಮಯ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ.
  • ಕಾರ್ಯವ್ಯಾಪ್ತಿ:- ಇದು ದಕ್ಷಿಣ ಕರ್ನಾಟಕದ 17 ಜಿಲ್ಲೆಗಳಿಗೆ ಸಾರಿಗೆ ಸೇವೆ ಒದಗಿಸುವುದಲ್ಲದೆ, ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುತ್ತದೆ.
  • ಆಡಳಿತಾತ್ಮಕ ವಿಭಜನೆ : ಆಡಳಿತಾತ್ಮಕ ದಕ್ಷತೆ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ, ಕೆಎಸ್‌ಆರ್‌ಟಿಸಿಯನ್ನು ಕಾಲಕ್ರಮೇಣ ವಿಭಜಿಸಿ ಸ್ವತಂತ್ರ ಪ್ರಾದೇಶಿಕ ಸಾರಿಗೆ ನಿಗಮಗಳನ್ನು ರಚಿಸಲಾಗಿದೆ. ಅವುಗಳೆಂದರೆ:
    1. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC): ಬೆಂಗಳೂರು ಮಹಾನಗರ ಪ್ರದೇಶಕ್ಕಾಗಿ.
    2. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC): ವಾಯುವ್ಯ ಕರ್ನಾಟಕದ ಜಿಲ್ಲೆಗಳಿಗಾಗಿ.
    3. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC): ಈಶಾನ್ಯ ಕರ್ನಾಟಕದ (ಕಲ್ಯಾಣ ಕರ್ನಾಟಕ) ಜಿಲ್ಲೆಗಳಿಗಾಗಿ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts