ಬೆಂಗಳೂರು ಕೌಶಲ್ಯ ಶೃಂಗಸಭೆ 2025 | ಕಬ್ಬಿಗೆ – ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP)

ಬೆಂಗಳೂರು ಕೌಶಲ್ಯ ಶೃಂಗಸಭೆ 2025

ಇದೀಗ ಸುದ್ದಿಯಲ್ಲಿ

  • ‘ಬೆಂಗಳೂರು ಕೌಶಲ್ಯ ಶೃಂಗಸಭೆ 2025’ನ್ನು ನವೆಂಬರ್ 4 ರಿಂದ 6, 2025 ರವರೆಗೆ ಆಯೋಜಿಸಲಾಗಿತ್ತು.
  • ಧ್ಯೇಯವಾಕ್ಯ: “ಕಾರ್ಯಪಡೆ 2030: ವಿಸ್ತರಣೆ, ವ್ಯವಸ್ಥೆಗಳು, ಸಮನ್ವಯ”

ಆಯೋಜಕರು ಮತ್ತು ಪಾಲುದಾರರು: 

  • ಈ ಶೃಂಗಸಭೆಯನ್ನು ಕರ್ನಾಟಕ ಸರ್ಕಾರದ ‘ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ಯು (SDEL), ‘ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ’ (KSDC), ‘ಕರ್ನಾಟಕ ರಾಜ್ಯ ಕೃಷಿ ಇಲಾಖೆ’ ಮತ್ತು ‘ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್’ ಸಹಯೋಗದೊಂದಿಗೆ ಆಯೋಜಿಸಿತ್ತು.

ಉದ್ದೇಶಗಳು ಮತ್ತು ದೃಷ್ಟಿಕೋನ

  • ಸಾಂಸ್ಥಿಕ ಬಲವರ್ಧನೆ: ಸಂಸ್ಥೆಗಳನ್ನು ಬಲಪಡಿಸುವುದು, ಸಾಂಪ್ರದಾಯಿಕ ಮತ್ತು ಉದಯೋನ್ಮುಖ ಕೌಶಲ್ಯಗಳಿಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು, ಕೌಶಲ್ಯ ತರಬೇತಿಯ ಗುಣಮಟ್ಟ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಜೊತೆಗೆ, ನಾವೀನ್ಯತೆ ಮತ್ತು ಜಾಗತಿಕ ಕಾರ್ಯಪಡೆ ಚಲನಶೀಲತೆಯನ್ನು ಉತ್ತೇಜಿಸುವುದನ್ನು ಇದು ಒಳಗೊಂಡಿದೆ.
  • ಜಾಗತಿಕ ಮನ್ನಣೆ: ಅಂತರರಾಷ್ಟ್ರೀಯ ಪ್ರಮಾಣೀಕರಣ ಮಾನದಂಡಗಳು ಮತ್ತು ವೃತ್ತಿಪರ ಶಿಕ್ಷಣದ ಚೌಕಟ್ಟುಗಳೊಂದಿಗೆ ಹೊಂದಾಣಿಕೆ ಸಾಧಿಸುವ ಮೂಲಕ, ಕರ್ನಾಟಕವನ್ನು “ವಿಶ್ವಕ್ಕೆ ಕೌಶಲ್ಯದ ಹೆಬ್ಬಾಗಿಲು” ಆಗಿ ರೂಪಿಸುವ ಗುರಿಯನ್ನು ಹೊಂದಿದೆ.

ಕಬ್ಬಿಗೆ – ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP)

ಇದೀಗ ಸುದ್ದಿಯಲ್ಲಿದೆ:

  • ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಯ ಕಳವಳಗಳನ್ನು ಪರಿಹರಿಸಲು ಸಭೆಯನ್ನು ಸೇರುವಂತೆ ಕೋರಿ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಭಾರತದಲ್ಲಿ ಸಕ್ಕರೆ ಉತ್ಪಾದನೆಯ ಬಗ್ಗೆ:

  • 2021-2022 ರಲ್ಲಿ ಬ್ರೆಜಿಲ್ ಅನ್ನು ಹಿಂದಿಕ್ಕಿ ಭಾರತ ವಿಶ್ವದಲ್ಲೇ ಅತೀ ಹೆಚ್ಚು ಸಕ್ಕರೆ ಉತ್ಪಾದಕ ರಾಷ್ಟ್ರವಾಯಿತು.
  • ಭಾರತದಲ್ಲಿ ಸಕ್ಕರೆ ಉದ್ಯಮದ ಸ್ಥಳಗಳು: ಸಕ್ಕರೆ ಉದ್ಯಮವು ಉತ್ಪಾದನೆಯ ಎರಡು ಪ್ರಮುಖ ಪ್ರದೇಶಗಳಲ್ಲಿ ಹಂಚಿಕೆಯಾಗಿದೆ:
    • ಉತ್ತರದಲ್ಲಿ – ಉತ್ತರ ಪ್ರದೇಶ, ಬಿಹಾರ, ಹರಿಯಾಣ ಮತ್ತು ಪಂಜಾಬ್.
    • ದಕ್ಷಿಣದಲ್ಲಿ – ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ.

ಕಬ್ಬು ಬೆಳೆಯ ಉಪಯೋಗಗಳು:

  • ಇದು ಬಿದಿರು ಸಸ್ಯ ಕುಟುಂಬಕ್ಕೆ ಸೇರಿದೆ ಮತ್ತು ಭಾರತಕ್ಕೆ ಸ್ಥಳೀಯವಾಗಿದೆ.
  • ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಕಬ್ಬಿನ ಸುಮಾರು ಮೂರನೇ ಎರಡರಷ್ಟು ಭಾಗ ಬೆಲ್ಲ ಮತ್ತು ಖಂಡಸಾರಿ ತಯಾರಿಕೆಗೆ ಬಳಕೆಯಾದರೆ, ಕೇವಲ ಮೂರನೇ ಒಂದರಷ್ಟು ಭಾಗ ಮಾತ್ರ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜಾಗುತ್ತದೆ.
  • ಇದು ಮದ್ಯದ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುವನ್ನಾಗಿ ಬಳಸಲಾಗುತ್ತದೆ.
  • ಕಬ್ಬಿನ ರಸ ತೆಗೆದ ನಂತರ ಉಳಿಯುವ ಸಿಪ್ಪೆ (ಬಗಾಸ್) ಯನ್ನು ಕಾಗದ ತಯಾರಿಕಾ ಕೈಗಾರಿಕೆಯಲ್ಲಿ ಹೆಚ್ಚು ಲಾಭದಾಯಕವಾಗಿ ಬಳಸಬಹುದಾಗಿದೆ.
  • ಇಥೆನಾಲ್ ಉತ್ಪಾದನೆ: ಇದು ಪೆಟ್ರೋಲಿಯಂ ಉತ್ಪನ್ನಗಳಿಗೆ ಮತ್ತು ಇತರ ಹಲವಾರು ರಾಸಾಯನಿಕ ಉತ್ಪನ್ನಗಳಿಗೆ ಒಂದು ಸಮರ್ಥ ಪರ್ಯಾಯವಾಗಿದೆ.
  • ಇಥೆನಾಲ್ ಉತ್ಪಾದನೆಯಲ್ಲಿ ಅಮೆರಿಕ ಮತ್ತು ಬ್ರೆಜಿಲ್ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.

ಕಬ್ಬು ಬೆಳೆಯಲು ಅಗತ್ಯವಾದ ಭೌಗೋಳಿಕ ಪರಿಸ್ಥಿತಿಗಳು:

    • ಬೆಳೆಯ ಅವಧಿ: ಭೌಗೋಳಿಕ ಪರಿಸ್ಥಿತಿಗಳನ್ನು ಅವಲಂಬಿಸಿ ಪಕ್ವವಾಗಲು 10-15 ತಿಂಗಳುಗಳು, ಅಥವಾ 18 ತಿಂಗಳುಗಳೂ ಬೇಕಾಗಬಹುದು.
    • ಮಣ್ಣು: ತೇವಾಂಶವನ್ನು ಉಳಿಸಿಕೊಳ್ಳಬಲ್ಲ ಯಾವುದೇ ರೀತಿಯ ಮಣ್ಣಿನಲ್ಲಾದರೂ ಕಬ್ಬನ್ನು ಬೆಳೆಯಬಹುದು.
  • ಉದಾಹರಣೆಗೆ – ಮೆಕ್ಕಲು ಮಣ್ಣು, ಜೇಡಿಮಣ್ಣು, ಕಪ್ಪು ಹತ್ತಿ ಮಣ್ಣು, ಕಂದು ಅಥವಾ ಕೆಂಪು ಮೆಕ್ಕಲು ಮಣ್ಣು ಮತ್ತು ಜಂಬಿಟ್ಟಿಗೆ ಮಣ್ಣು.
  • ಈ ಮಣ್ಣು ಸಾರಜನಕ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು.
  • ವಾಯುಗುಣ: ಈ ಬೆಳೆಗೆ ಉಷ್ಣ ಮತ್ತು ತೇವಾಂಶಭರಿತ ವಾಯುಗುಣದ ಅಗತ್ಯವಿದ್ದು, 21°C ನಿಂದ 27°C ತಾಪಮಾನ ಹಾಗೂ 75 ರಿಂದ 150 ಸೆಂ.ಮೀ ಮಳೆಯ ಅವಶ್ಯಕತೆ ಇರುತ್ತದೆ.

ಸರ್ಕಾರದ ಕ್ರಮಗಳು:

ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ ಬಗ್ಗೆ:

  • ಶಿಫಾರಸು ಮಾಡುವವರು:- ಈ ಬೆಲೆಯನ್ನು ‘ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ’ದ (CACP) ಶಿಫಾರಸಿನ ಮೇರೆಗೆ ನಿರ್ಧರಿಸಲಾಗುತ್ತದೆ.
  • ಉದ್ದೇಶ: ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸದೆ, ರೈತರಿಗೆ ಅವರ ಶ್ರಮಕ್ಕೆ ತಕ್ಕ ಲಾಭ ಹಾಗೂ ಕೃಷಿಯಲ್ಲಿನ ಅಪಾಯವನ್ನು ಸರಿದೂಗಿಸುವಂತಹ ನಿಶ್ಚಿತ ಲಾಭಾಂಶವನ್ನು ಖಾತ್ರಿಪಡಿಸುವುದು ಇದರ ಉದ್ದೇಶವಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts