ನೈಋತ್ಯ ರೈಲ್ವೆ (SWR) ಯಿಂದ ‘ಮಟ್ಸ್ ಸಹಾಯಕ್’ ಟಿಕೆಟ್ ವಿತರಣಾ ಯೋಜನೆ ಪ್ರಾರಂಭ

ಇದೀಗ ಸುದ್ದಿಯಲ್ಲಿದೆ:
- ಟಿಕೆಟ್ ವಿತರಣಾ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆಯು (SWR) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಬೆಂಗಳೂರು ನಿಲ್ದಾಣದಲ್ಲಿ ‘ಮೊಬೈಲ್ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ’ (MUTS) ಸಹಾಯಕ್ ಯೋಜನೆ‘ಗೆ ಚಾಲನೆ ನೀಡಿದೆ.
- ಈ ಮೂಲಕ, ಇಂತಹ ಉಪಕ್ರಮವನ್ನು ಪರಿಚಯಿಸಿದ ದೇಶದ ಮೊದಲ ರೈಲ್ವೆ ವಲಯ ಎಂಬ ಹೆಗ್ಗಳಿಕೆಗೆ ನೈಋತ್ಯ ರೈಲ್ವೆ ಪಾತ್ರವಾಗಿದೆ.
ಮೊಬೈಲ್ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (MUTS) ಸಹಾಯಕ್ ಯೋಜನೆಯ ಬಗ್ಗೆ:
- ಈ ಯೋಜನೆಯಡಿಯಲ್ಲಿ, ತರಬೇತಿ ಪಡೆದ MUTS ಸಹಾಯಕರರು MUTS ಕೈಯಲ್ಲಿ ಹಿಡಿಯುವ ಸಾಧನಗಳನ್ನು ಬಳಸಿ ಪ್ರಯಾಣಿಕರಿಗೆ ಕಾಯ್ದಿರಿಸದ ಟಿಕೆಟ್ಗಳನ್ನು ವಿತರಿಸುತ್ತಾರೆ.
- ಟಿಕೆಟ್ ಕೌಂಟರ್ಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಪ್ರಯಾಣಿಕರಿಗೆ ತ್ವರಿತವಾಗಿ ಹಾಗೂ ತೊಂದರೆರಹಿತವಾಗಿ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸುವುದು ಇದರ ಗುರಿಯಾಗಿದೆ.
ಹೊನ್ನಾವರ ಬಂದರು ಯೋಜನೆ
ಇದೀಗ ಸುದ್ದಿಯಲ್ಲಿದೆ:
- ಹೊನ್ನಾವರ ಬಂದರು ಯೋಜನೆಗೆ ನೀಡಲಾದ ಪರಿಸರ ಅನುಮತಿಯನ್ನು ತಕ್ಷಣವೇ ಹಿಂಪಡೆಯುವಂತೆ ‘ವಾಸ್ತವ ಪರಿಶೋಧನಾ ವರದಿ’ಯೊಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಹೊನ್ನಾವರ ಬಂದರು ಯೋಜನೆಯ ಬಗ್ಗೆ:
- ಸ್ಥಳ:- ಈ ಯೋಜನೆಯನ್ನು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ, ನಿರ್ದಿಷ್ಟವಾಗಿ ಶರಾವತಿ ನದಿಯ ಮುಖಜ ಭೂಮಿ ಪ್ರದೇಶದಲ್ಲಿ ಗುರುತಿಸಲಾಗಿದೆ.
- ಯೋಜನೆಯ ಪ್ರಕಾರ:- ಇದೊಂದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಪ್ರಮುಖ ಆಳ ನೀರಿನ ಬಂದರು ಯೋಜನೆಯಾಗಿದೆ. ಈ ಯೋಜನೆಯನ್ನು ಕರ್ನಾಟಕ ಜಲಸಾರಿಗೆ ಮಂಡಳಿಯ ಸಹಯೋಗದೊಂದಿಗೆ “ಹೊನ್ನಾವರ ಬಂದರು ಖಾಸಗಿ ನಿಯಮಿತ” (HPPL) ನಿರ್ವಹಿಸುತ್ತಿದೆ.
- ಯೋಜನೆಯ ವೆಚ್ಚ:- ಸರಿಸುಮಾರು ₹607 ಕೋಟಿ.
- ಸರಕು ನಿರ್ವಹಣೆ:- ಆರಂಭಿಕ ಸಾಮರ್ಥ್ಯ ವಾರ್ಷಿಕ 4.9 ಮಿಲಿಯನ್ ಟನ್ ಆಗಿದ್ದು, ಇದು ಪ್ರಾದೇಶಿಕ ಜಲಸಾರಿಗೆ ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
- ವಿರೋಧ : ಶರಾವತಿ ಅಳಿವೆಯ ಜೀವಿ ಪರಿಸರ ಕಾಳಜಿಗಳು ಮತ್ತು ಜೀವನೋಪಾಯಕ್ಕೆ ಉಂಟಾಗುವ ಬೆದರಿಕೆಗಳಿಂದಾಗಿ ಐದು ಹಳ್ಳಿಗಳ ಸ್ಥಳೀಯ ಮೀನುಗಾರ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.



ನಿಮ್ಮದೊಂದು ಉತ್ತರ