ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಇರಾನ್ ಪರಮಾಣು ಬಾಂಬ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ‘ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ’ಯ (IAEA) ಮಹಾನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)ಯ ಬಗ್ಗೆ:
- ಇದನ್ನು 1957ರಲ್ಲಿ ವಿಶ್ವಸಂಸ್ಥೆಯ ಚೌಕಟ್ಟಿನೊಳಗೆ ವಿಶ್ವದ “ಶಾಂತಿಗಾಗಿ ಪರಮಾಣು” ಸಂಘಟನೆಯಾಗಿ ಸ್ಥಾಪಿಸಲಾಯಿತು.
- ಪ್ರಮುಖ ಉದ್ದೇಶ:- ಇದು ವಿಶ್ವಸಂಸ್ಥೆಯ ‘ಪರಮಾಣು ಉಸ್ತುವಾರಿ ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ. ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಉತ್ತೇಜಿಸುವುದು ಮತ್ತು ಅಣ್ವಸ್ತ್ರ ಪ್ರಸರಣದ ವಿರುದ್ಧ ರಕ್ಷಣಾತ್ಮಕ ಮಾನದಂಡಗಳನ್ನು ದೃಢಪಡಿಸುವುದು.
- ಕೇಂದ್ರ ಕಚೇರಿ:- ಆಸ್ಟ್ರಿಯಾದ ವಿಯೆನ್ನಾದಲ್ಲಿದೆ.
- 2005ರಲ್ಲಿ ನೋಬೆಲ್ ಶಾಂತಿ ಪುರಸ್ಕಾರ:- ಅಣ್ವಸ್ತ್ರ ಪ್ರಸರಣ ತಡೆಗೆ ನೀಡಿದ ಅತ್ಯಮೂಲ್ಯ ಕೊಡುಗೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
- ಸದಸ್ಯತ್ವ:- ಪ್ರಸ್ತುತ ಈ ಸಂಸ್ಥೆಯು 178 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಭಾರತವು ಇದರ ಸಂಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ.
‘ಪ್ರಾಜೆಕ್ಟ್ ಹನುಮಾನ್’ (HANUMAN)
ಪರಿಸರ
ಇದೀಗ ಸುದ್ದಿಯಲ್ಲಿದೆ:
- ಆಂಧ್ರಪ್ರದೇಶ ಸರ್ಕಾರವು ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ಸುಧಾರಿತ ರಕ್ಷಣೆ, ಪರಿಶೀಲನೆ ಮತ್ತು ಸಮುದಾಯ ಸಂರಕ್ಷಣಾ ಕ್ರಮಗಳನ್ನು ಒಳಗೊಂಡ ‘ಪ್ರಾಜೆಕ್ಟ್ ಹನುಮಾನ್’ ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ.
ಪ್ರಾಜೆಕ್ಟ್ ಹನುಮಾನ್ (HANUMAN) ಬಗ್ಗೆ:
- HANUMAN ವಿಸ್ತೃತ ರೂಪ:- ಹೀಲಿಂಗ ಅಂಡ್ ನರ್ಚರಿಂಗ್ ಯೂನಿಟ್ಸ್ ಫಾರ್ ಮೋನಿಟರಿಂಗ್, ಏಡ್ ಅಂಡ್ ನರ್ಸಿಂಗ್ ಆಫ್ ವೈಲ್ಡ್ ಲೈಫ್ (ವನ್ಯಜೀವಿಗಳ ಪರಿಶೀಲನೆ, ನೆರವು ಮತ್ತು ಆರೈಕೆಗಾಗಿ ಚಿಕಿತ್ಸೆ ಹಾಗೂ ಪೋಷಣಾ ಘಟಕಗಳು).
- ಪ್ರಮುಖ ಉದ್ದೇಶ:- ಆನೆಗಳ ದಾಳಿ ಮತ್ತು ಹಾವು ಕಡಿತದಂತಹ ಘಟನೆಗಳಿಗೆ ಹೆಚ್ಚಾಗಿ ತುತ್ತಾಗುವ ಅರಣ್ಯದಂಚಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು, ವೈಜ್ಞಾನಿಕ ಉಪಕರಣಗಳು ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವದೊಂದಿಗೆ ಮಾನವ ಮತ್ತು ವನ್ಯಜೀವಿಗಳ ನಡುವಿನ ‘ಸಹಬಾಳ್ವೆ’ಯನ್ನು ಉತ್ತೇಜಿಸುವುದು.
ಈ ಯೋಜನೆಯ ಪ್ರಮುಖ ಅಂಶಗಳು:
- ಕ್ಷಿಪ್ರ ಸ್ಪಂದನಾ ವ್ಯವಸ್ಥೆ:- ತ್ವರಿತ ರಕ್ಷಣೆಗಾಗಿ 100 ಜಿಪಿಎಸ್-ಸುಸಜ್ಜಿತ ವಾಹನಗಳು, 93 ಕ್ಷಿಪ್ರ ಸ್ಪಂದನಾ ಘಟಕಗಳು ಮತ್ತು 7 ವನ್ಯಜೀವಿ ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ.
- ರಕ್ಷಣಾ ಕೇಂದ್ರಗಳು:- ಗಾಯಗೊಂಡ ಪ್ರಾಣಿಗಳ ಚಿಕಿತ್ಸೆಗಾಗಿ ವಿಶಾಖಪಟ್ಟಣಂ, ರಾಜಮಹೇಂದ್ರವರಂ, ತಿರುಪತಿ ಮತ್ತು ಬಿರ್ಲುಟ್ನಲ್ಲಿ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
- ‘ವಜ್ರ’ ಸ್ವಯಂಸೇವಕ ಪಡೆ:- ಹಾವು ಕಡಿತದಂತಹ ತುರ್ತು ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ವಹಿಸಲು ಗ್ರಾಮ ಮಟ್ಟದಲ್ಲಿ ‘ವಜ್ರ’ ಎಂಬ ಸ್ವಯಂಸೇವಕ ತಂಡಗಳನ್ನು ರಚಿಸಲಾಗಿದೆ.
- ತಂತ್ರಜ್ಞಾನದ ಅಳವಡಿಕೆ:- ವನ್ಯಜೀವಿಗಳ ಚಲನವಲನಗಳನ್ನು ಪತ್ತೆಹಚ್ಚಿ ಜನರಿಗೆ ತ್ವರಿತ ‘ಪೂರ್ವ ಮುನ್ನೆಚ್ಚರಿಕೆ’ ರವಾನಿಸಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
- ‘ಹನುಮಾನ್ ಆ್ಯಪ್’:- ಸಂಘರ್ಷದ ಪ್ರಕರಣಗಳನ್ನು ವರದಿ ಮಾಡಲು ಮತ್ತು ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
- ಪರಿಷ್ಕೃತ ಪರಿಹಾರ ಧನ:- ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ₹10 ಲಕ್ಷ, ಗಾಯಗೊಂಡರೆ ₹2 ಲಕ್ಷ ಹಾಗೂ ಜಾನುವಾರು ನಷ್ಟಕ್ಕೆ ಮಾರುಕಟ್ಟೆ ಮೌಲ್ಯದಷ್ಟು ಪರಿಹಾರವನ್ನು ನಿಗದಿಪಡಿಸಲಾಗಿದೆ.
ಸುಂಗುಡಿ ಸೀರೆಗಳು
ಕಲೆ ಮತ್ತು ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:
- ವಿಶಿಷ್ಟ ಮತ್ತು ಪರಿಸರಸ್ನೇಹಿ ಉಡುಗೆಗಳನ್ನು ಬಯಸುವ ಗ್ರಾಹಕರಲ್ಲಿ ಸಾಂಪ್ರದಾಯಿಕ ‘ಸುಂಗುಡಿ ಸೀರೆಗಳು’ ಪ್ರಸ್ತುತ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿವೆ.
ಸುಂಗುಡಿ ಸೀರೆಗಳ ಬಗ್ಗೆ ಪ್ರಮುಖ ಅಂಶಗಳು:
- ಐತಿಹಾಸಿಕ ಹಿನ್ನೆಲೆ:- 17ನೇ ಶತಮಾನದಲ್ಲಿ ಗುಜರಾತಿನಿಂದ ತಮಿಳುನಾಡಿನ ಮಧುರೈಗೆ ವಲಸೆ ಬಂದ ‘ಸೌರಾಷ್ಟ್ರ ಸಮುದಾಯ’ವು ಈ ಸಾಂಪ್ರದಾಯಿಕ ಹತ್ತಿ ಸೀರೆಗಳ ನೇಯ್ಗೆಯನ್ನು ಕರಗತ ಮಾಡಿಕೊಂಡಿದೆ.
- ವಿಶೇಷ ವಿನ್ಯಾಸ:- ನಕ್ಷತ್ರ ಖಚಿತ ರಾತ್ರಿ ಆಕಾಶದಿಂದ ಪ್ರೇರಿತವಾದ, ‘ಬಂಧ ಮತ್ತು ವರ್ಣ’ (Tie-and-dye) ತಂತ್ರದ ಸಂಕೀರ್ಣ ವಿನ್ಯಾಸಗಳನ್ನು ಈ ಸೀರೆಗಳು ಹೊಂದಿವೆ.
- ತಯಾರಿಕಾ ಪ್ರಕ್ರಿಯೆ:- ಕೈಯಿಂದಲೇ ಗಂಟುಹಾಕಿ, ವರ್ಣಲೇಪನ ಮಾಡಿ, ತೊಳೆದು, ಪಿಷ್ಟಲೇಪನ ಮಾಡಿ ಹಾಗೂ ಬಿಸಿಲಿನಲ್ಲಿ ಒಣಗಿಸುವ ಮೂಲಕ ಇವುಗಳನ್ನು ವಿಶಿಷ್ಟವಾಗಿ ತಯಾರಿಸಲಾಗುತ್ತದೆ.
- ವಿಶಿಷ್ಟತೆ:- ಈ ವಿಶಿಷ್ಟ ಕರಕುಶಲ ಪ್ರಕ್ರಿಯೆಯಿಂದಾಗಿ ಸೀರೆಯ ಮೇಲೆ 15,000ಕ್ಕೂ ಹೆಚ್ಚು ಸೂಕ್ಷ್ಮವಾದ ಶ್ವೇತ ಬಿಂದುಗಳು ಅತ್ಯಂತ ಸುಂದರವಾಗಿ ಮೂಡುತ್ತವೆ.
- ಗುಣಮಟ್ಟ:- 15 ದಿನಗಳಿಗಿಂತ ಹೆಚ್ಚು ಕಾಲಾವಧಿ ತಗಲುವ ಈ ಪ್ರಕ್ರಿಯೆಯು, ಹಗುರವಾದ ಹಾಗೂ ಗಾಳಿಯಾಡುವ ಸಾಂಸ್ಕೃತಿಕ ಶ್ರೀಮಂತಿಕೆಯ ಉಡುಗೆಗಳನ್ನು ಸೃಷ್ಟಿಸುತ್ತದೆ.
- ಭೌಗೋಳಿಕ ಸೂಚ್ಯಂಕ ಮಾನ್ಯತೆ:- ಈ ಕಲೆಯ ವಿಶಿಷ್ಟತೆಯನ್ನು ಗುರುತಿಸಿ, ಮಧುರೈ ಸುಂಗುಡಿ ಸೀರೆಗಳಿಗೆ 2005ರ ಡಿಸೆಂಬರ್ನಲ್ಲಿ ಅಧಿಕೃತವಾಗಿ GI Tag ಮಾನ್ಯತೆಯನ್ನು ನೀಡಲಾಗಿದೆ.



ನಿಮ್ಮದೊಂದು ಉತ್ತರ