16ನೇ ಹಣಕಾಸು ಆಯೋಗ
ರಾಜಕೀಯ
ಇದೀಗ ಸುದ್ದಿಯಲ್ಲಿದೆ:
- ಡಾ. ಅರವಿಂದ್ ಪನಗರಿಯಾ ಅವರ ಅಧ್ಯಕ್ಷತೆಯಲ್ಲಿ 2023 ರಲ್ಲಿ ರಚಿಸಲಾದ 16ನೇ ಹಣಕಾಸು ಆಯೋಗದ ಪ್ರಮುಖ ಶಿಫಾರಸುಗಳನ್ನು, 2026–27 ರಿಂದ 2030–31 ರ ಅವಧಿಯ ಅನುಷ್ಠಾನಕ್ಕಾಗಿ ಸರ್ಕಾರವು ಅಂಗೀಕರಿಸಿದೆ.
ಹಣಕಾಸು ಆಯೋಗದ ಬಗ್ಗೆ:
- ಸಂವಿಧಾನಾತ್ಮಕ ಸಂಸ್ಥೆ:- ಇದನ್ನು ಭಾರತ ಸಂವಿಧಾನದ 280ನೇ ವಿಧಿಯ ಅಡಿಯಲ್ಲಿ ಸ್ಥಾಪಿಸಲಾಗಿದೆ.
- ಭಾರತದ ರಾಷ್ಟ್ರಪತಿಗಳಿಂದ ರಚನೆ:- ಪ್ರತಿ 5 ವರ್ಷಗಳಿಗೊಮ್ಮೆ (ಅಥವಾ ಅದಕ್ಕಿಂತ ಮುಂಚಿತವಾಗಿ) ಭಾರತದ ರಾಷ್ಟ್ರಪತಿಗಳಿಂದ ಇದು ತಿ ರಚಿಸಲ್ಪಡುತ್ತದೆ.
- ಸಂಯೋಜನೆ:- ಇದು ಒಬ್ಬ ಅಧ್ಯಕ್ಷರು ಮತ್ತು ಇತರ ನಾಲ್ವರು ಸದಸ್ಯರನ್ನು ಒಳಗೊಂಡಿರುತ್ತದೆ.
- ಪ್ರಮುಖ ಕಾರ್ಯ:- ಇದು ಈ ಕೆಳಗಿನವುಗಳನ್ನು ಶಿಫಾರಸು ಮಾಡುವ ಮೂಲಕ ‘ವಿತ್ತೀಯ (ಹಣಕಾಸು) ಒಕ್ಕೂಟ ವ್ಯವಸ್ಥೆಯ ಸಮತೋಲನ ಚಕ್ರ‘ವಾಗಿ ಕಾರ್ಯನಿರ್ವಹಿಸುತ್ತದೆ:
- ಲಂಬ ಹಂಚಿಕೆ (Vertical Devolution):– ಕೇಂದ್ರ ಮತ್ತು ರಾಜ್ಯಗಳ ನಡುವೆ ನಿವ್ವಳ ತೆರಿಗೆ ಆದಾಯದ ಹಂಚಿಕೆ.
- ಸಮಾನಾಂತರ ಹಂಚಿಕೆ (Horizontal Devolution):- ರಾಜ್ಯ ರಾಜ್ಯಗಳ ನಡುವೆಯೇ ನಿವ್ವಳ ತೆರಿಗೆ ಆದಾಯದ ಹಂಚಿಕೆ.
- ಸಹಾಯಾನುದಾನ (Grants-in-Aid):- ಭಾರತದ ಸಂಚಿತ ನಿಧಿಯಿಂದ (ವಿಧಿ 275) ರಾಜ್ಯಗಳಿಗೆ ನೀಡುವ ಆರ್ಥಿಕ ಸಹಾಯವನ್ನು ನಿಯಂತ್ರಿಸುವ ತತ್ವಗಳು.
- ಸ್ಥಳೀಯ ಸಂಸ್ಥೆಗಳು:- ಪಂಚಾಯತಿಗಳು ಮತ್ತು ಪುರಸಭೆಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ರಾಜ್ಯದ ಸಂಚಿತ ನಿಧಿಯನ್ನು ಬಲಪಡಿಸಲು ಅಗತ್ಯವಾದ ಕ್ರಮಗಳು.
- ಶಿಫಾರಸುಗಳ ಸ್ವರೂಪ:- ಇವು ಸಲಹಾತ್ಮಕ ಸ್ವರೂಪದ್ದಾಗಿರುತ್ತವೆ (ಕಾನೂನುಬದ್ಧವಾಗಿ ಬದ್ಧವಲ್ಲ). ಆದಾಗ್ಯೂ, ಸಾಂಪ್ರದಾಯಿಕವಾಗಿ ಸರ್ಕಾರವು ಇವುಗಳನ್ನು ಒಪ್ಪಿಕೊಳ್ಳುತ್ತದೆ.
ಸಂತ ಗುರು ರವಿದಾಸ
ಇತಿಹಾಸ
ಇದೀಗ ಸುದ್ದಿಯಲ್ಲಿದ್ದಾರೆ:
- ಸಂತ ಗುರು ರವಿದಾಸ ಅವರ 649ನೇ ಜನ್ಮದಿನದ ಸ್ಮರಣಾರ್ಥವಾಗಿ, ಆದಂಪುರ ವಿಮಾನ ನಿಲ್ದಾಣವನ್ನು ‘ಶ್ರೀ ಗುರು ರವಿದಾಸ ಜೀ ವಿಮಾನ ನಿಲ್ದಾಣ, ಆದಂಪುರ’ ಎಂದು ಮರುನಾಮಕರಣ ಮಾಡಲಾಗಿದೆ.
‘ಸಂತ ರವಿದಾಸ’ರ ಬಗ್ಗೆ:
- ಇವರು 14ನೇ ಶತಮಾನದಲ್ಲಿ ಜನಿಸಿದರು.
- ಭಾರತದಲ್ಲಿ 14 ಮತ್ತು 17ನೇ ಶತಮಾನಗಳ ನಡುವೆ ನಡೆದ ಸಾಮಾಜಿಕ-ಧಾರ್ಮಿಕ ಕ್ರಾಂತಿಯಾದ ‘ಭಕ್ತಿ ಚಳವಳಿ’ಯ ಪ್ರಮುಖ ಸಂತರಲ್ಲಿ ಇವರು ಒಬ್ಬರಾಗಿದ್ದರು.
- ಇವರು ಸಂತ ಕಬೀರರ ಶಿಷ್ಯರಾಗಿದ್ದರು ಮತ್ತು ‘ರವಿದಾಸಿಯಾ’ ಧರ್ಮದ ಸ್ಥಾಪಕರಾಗಿದ್ದರು. ಮೀರಾಬಾಯಿ ಇವರ ಶಿಷ್ಯೆಯಾಗಿದ್ದರು.
ಇವರ ಜೀವನ ಮತ್ತು ಬೋಧನೆಗಳು:
- ಇವರು ಒಬ್ಬ ಮಹಾನ್ ಸಮಾಜ ಸುಧಾರಕರಾಗಿದ್ದರು ಹಾಗೂ ಶಾಂತಿ, ಪ್ರೀತಿ ಮತ್ತು ಭ್ರಾತೃತ್ವದ ಹರಿಕಾರರಾಗಿದ್ದರು.
- ಜಾತಿ ಮತ್ತು ಧರ್ಮ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು ಇವರು ಅವಿರತವಾಗಿ ಶ್ರಮಿಸಿದರು ಮತ್ತು ತುಳಿತಕ್ಕೊಳಗಾದವರ ಏಳಿಗೆಗಾಗಿ ದುಡಿದರು.
- ಇವರ ಜೀವನವು ತ್ಯಾಗ ಮತ್ತು ತಪಸ್ಸಿನ ಒಂದು ಅನನ್ಯ ಉದಾಹರಣೆಯಾಗಿದೆ. ಇವರು ವಿವಿಧ ಸಾಮಾಜಿಕ ವಿಷಯಗಳ ಕುರಿತು ಅನೇಕ ಕೃತಿಗಳನ್ನು ರಚಿಸಿದರು.
- ‘ಮನ್ ಚಂಗಾ ತೋ ಕಥೌಟಿ ಮೇ ಗಂಗಾ’ (ಮನಸ್ಸು ಶುದ್ಧವಾಗಿದ್ದರೆ ಗಂಗೆಯು ಪಾತ್ರೆಯಲ್ಲೇ ಇರುತ್ತಾಳೆ) ಎಂಬ ಜನಪ್ರಿಯ ಹಿಂದಿ ಹೇಳಿಕೆಯನ್ನು ನೀಡುವ ಮೂಲಕ, ಇವರು ಸಮಾಜಕ್ಕೆ ‘ಕರ್ಮ’ದ ಸಿದ್ಧಾಂತದ ಬಗ್ಗೆ ಬಹಳ ವಿಶಾಲವಾದ ಸಂದೇಶವನ್ನು ನೀಡಿದರು.
ಪರಂಪರೆ:
- ಸಿಖ್ಖರ ಪವಿತ್ರ ಗ್ರಂಥವಾದ ‘ಗುರು ಗ್ರಂಥ ಸಾಹೇಬ’, ಇವರ 41 ಭಕ್ತಿಗೀತೆಗಳು ಮತ್ತು ಪದ್ಯಗಳನ್ನು ಒಳಗೊಂಡಿದೆ.
- ನಮ್ಮ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು, ಗುರು ರವಿದಾಸ ಜೀ ಅವರು ವ್ಯಕ್ತಪಡಿಸಿದ ಮೌಲ್ಯಗಳ ಸುತ್ತ ಸಂವಿಧಾನಾತ್ಮಕ ತತ್ವಗಳನ್ನು ಅಳವಡಿಸಿಕೊಂಡಿದ್ದರು.
ಬೌದ್ಧ ತೀರ್ಥಯಾತ್ರಾ ಮಾರ್ಗಗಳು
ಇತಿಹಾಸ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಮುಂಗಡಪತ್ರದಲ್ಲಿ, 20 ಪ್ರತಿಷ್ಠಿತ ಪ್ರವಾಸಿ ತಾಣಗಳಲ್ಲಿನ 10,000 ಪ್ರವಾಸಿ ಮಾರ್ಗದರ್ಶಿಗಳ ಕೌಶಲ್ಯಾಭಿವೃದ್ಧಿಗಾಗಿ ಒಂದು ಪ್ರಾಯೋಗಿಕ ಯೋಜನೆಯನ್ನು ಹಾಗೂ ಈ ವಲಯದ ವೃತ್ತಿಪರರಿಗೆ ತರಬೇತಿ ನೀಡಲು ‘ರಾಷ್ಟ್ರೀಯ ಆತಿಥ್ಯ ಸಂಸ್ಥೆ‘ಯನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.
ಈ ಉಪಕ್ರಮದ ಬಗ್ಗೆ:
- ರಾಷ್ಟ್ರೀಯ ತಾಣಗಳ ಡಿಜಿಟಲ್ ಜ್ಞಾನ ಜಾಲ:- ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವದ ಎಲ್ಲಾ ತಾಣಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ಈ ಜಾಲವನ್ನು ಸ್ಥಾಪಿಸಲಾಗುವುದು.
- ಸರ್ಕಾರವು ಈ ಪ್ರದೇಶದಲ್ಲಿ ‘ಬೌದ್ಧ ತೀರ್ಥಯಾತ್ರಾ ಮಾರ್ಗ’ಗಳ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ಪ್ರಸ್ತಾಪಿಸಿದೆ.
- ಈ ರಾಜ್ಯಗಳಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಸೇರಿವೆ.
ಬೌದ್ಧ ತೀರ್ಥಯಾತ್ರಾ ಮಾರ್ಗಗಳು ಬಗ್ಗೆ:
- ಘೋಷಣೆ:- 2016ರಲ್ಲಿ, ಪ್ರವಾಸೋದ್ಯಮ ಸಚಿವಾಲಯವು ‘ಬೌದ್ಧ ತೀರ್ಥಯಾತ್ರಾ ಮಾರ್ಗ’ಗಳನ್ನು ದೇಶದ ಮೊದಲ ‘ಅಂತರರಾಷ್ಟ್ರೀಯ ಪ್ರವಾಸಿ ಪಥ’ ಎಂದು ಘೋಷಿಸಿತು. ಇದು ಭಾರತದಲ್ಲಿನ ತಾಣಗಳ ಜೊತೆಗೆ ನೇಪಾಳ ಮತ್ತು ಶ್ರೀಲಂಕಾದ ತಾಣಗಳನ್ನೂ ಒಳಗೊಂಡಿದೆ.
- ಉದ್ದೇಶ:- ಪ್ರವಾಸಿಗರಿಗೆ ಮತ್ತು ಯಾತ್ರಾರ್ಥಿಗಳಿಗೆ ಭಗವಾನ್ ಬುದ್ಧನ ಬೋಧನೆಗಳನ್ನು ಪ್ರತ್ಯಕ್ಷವಾಗಿ ಅನುಭವಿಸಲು ಮತ್ತು ಬುದ್ಧನ ಹೆಜ್ಜೆಯ ಜಾಡುಗಳನ್ನು ಅನ್ವೇಷಿಸಲು ನೆರವಾಗುವುದು.
- ಈ ಪಥದ ಅಡಿಯಲ್ಲಿ ಬರುವ ಪ್ರಮುಖ ತಾಣಗಳು:- ಬುದ್ಧನ ಜನನದಿಂದ ಹಿಡಿದು ಅವರ ಪರಿನಿರ್ವಾಣದವರೆಗಿನ ಜೀವನಘಟ್ಟಗಳನ್ನು ಒಳಗೊಂಡಿವೆ. ಇವುಗಳಲ್ಲಿ ಬೋಧಗಯಾ, ವೈಶಾಲಿ, ರಾಜಗೀರ್, ಕುಶಿನಗರ, ಸಾರನಾಥ ಮತ್ತು ಶ್ರಾವಸ್ತಿ ಹಾಗೂ ಕಪಿಲವಸ್ತು ಮತ್ತು ಲುಂಬಿನಿ ಸೇರಿವೆ.
4 ಪವಿತ್ರ ಬೌದ್ಧ ತೀರ್ಥಯಾತ್ರಾ ತಾಣಗಳು (ಚತುರ್ಮಹಾಸ್ಥಾನ):
- ಲುಂಬಿನಿ (ನೇಪಾಳ):- ಗೌತಮ ಬುದ್ಧನ ಜನ್ಮಸ್ಥಳ.
- ಬೋಧಗಯಾ (ಬಿಹಾರ):- ಬೋಧಿ ವೃಕ್ಷದ ಅಡಿಯಲ್ಲಿ ಜ್ಞಾನೋದಯ ಪಡೆದ ಸ್ಥಳ.
- ಸಾರನಾಥ (ಉತ್ತರ ಪ್ರದೇಶ):- ಮೊದಲ ಬೋಧನೆ ಅಥವಾ ಧರ್ಮಚಕ್ರ ಪ್ರವರ್ತನ.
ಕುಶಿನಗರ (ಉತ್ತರ ಪ್ರದೇಶ):- ಮಹಾಪರಿನಿರ್ವಾಣ (ಮರಣ).
ಕೇಂದ್ರ ಮುಂಗಡ ಪತ್ರ, 2026-27: ತೆಂಗು, ಕೋಕೋ, ಗೋಡಂಬಿಗೆ ಆದ್ಯತೆ
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- 2026-27ರ ಕೇಂದ್ರ ಮುಂಗಡಪತ್ರವು, ರೈತರ ಆದಾಯ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೆಂಗು, ಗೋಡಂಬಿ, ಕೋಕೋ, ಶ್ರೀಗಂಧ ಮತ್ತು ಆಯ್ದ ಕಾಯಿ ಬೆಳೆಗಳಿಗೆ ನಿರ್ದಿಷ್ಟ ಬೆಂಬಲವನ್ನು ನೀಡುವ ಮೂಲಕ, ‘ಅಧಿಕ ಮೌಲ್ಯದ ಕೃಷಿ’ಗೆ ವಿಶೇಷ ಒತ್ತು ನೀಡಿದೆ.
ತೆಂಗು ಉತ್ಪಾದನೆ:
- ಬಹುವಾರ್ಷಿಕ ತೋಟಗಾರಿಕೆ ಬೆಳೆ:- ತೆಂಗು ‘ಅರೆಕೇಸಿ’ ಕುಟುಂಬಕ್ಕೆ ಸೇರಿದ ಹಾಗೂ ಏಕದಳ (ಮೊನೋಕಟಿಲೆಡೊನೌಸ್) ತಾಳೆ ಜಾತಿಗೆ ಸೇರಿದ ಸಸ್ಯವಾಗಿದೆ.
- ಇಂಡೋ-ಪೆಸಿಫಿಕ್ ಪ್ರದೇಶದ ಸ್ಥಳೀಯ ಸಸ್ಯ:- ಇದರ ಮೂಲವನ್ನು ಸಾಮಾನ್ಯವಾಗಿ ಆಗ್ನೇಯ ಏಷ್ಯಾದಲ್ಲಿ ಗುರುತಿಸಲಾಗುತ್ತದೆ.
- ವಾಯುಗುಣ:- ತೆಂಗಿನ ಅತ್ಯುತ್ತಮ ಬೆಳವಣಿಗೆಗೆ,
- ಬೆಚ್ಚಗಿನ ಮತ್ತು ತೇವಾಂಶಯುಕ್ತ ಉಷ್ಣವಲಯದ ವಾತಾವರಣ.
- ತಾಪಮಾನ:- 25°C ನಿಂದ 30°ಸಿ
- ಮಳೆ:- ಸಮನಾಗಿ ಹಂಚಿಕೆಯಾದ ಅಧಿಕ ಮಳೆಯಾಗುವ ಪ್ರದೇಶ, ಅವಶ್ಯಕವಾಗಿದೆ.
- ಮಣ್ಣು:- ತೆಂಗು ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು, ಮೆಕ್ಕಲು ಮಣ್ಣು, ಜಂಬಿಟ್ಟಿಗೆ ಮತ್ತು ಕರಾವಳಿ ಮಣ್ಣಿನಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ.
- ಪ್ರಮುಖ ಉತ್ಪಾದಕ ರಾಜ್ಯಗಳು:- ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಗೋವಾ ಮತ್ತು ಪಶ್ಚಿಮ ಬಂಗಾಳ.
- ಭಾರತವು ವಿಶ್ವದ ಅತಿದೊಡ್ಡ ತೆಂಗು ಉತ್ಪಾದಕ ರಾಷ್ಟ್ರವಾಗಿದ್ದು, ಸುಮಾರು 10 ದಶಲಕ್ಷ ರೈತರು ಸೇರಿದಂತೆ ಸುಮಾರು 30 ದಶಲಕ್ಷ ಜನರ ಜೀವನೋಪಾಯವನ್ನು ಇದು ಬೆಂಬಲಿಸುತ್ತದೆ.
ಕೋಕೋ ಉತ್ಪಾದನೆ:
- ನಿತ್ಯಹರಿದ್ವರ್ಣ ಬಹುವಾರ್ಷಿಕ ಮರ:- ಕೋಕೋ ‘ಮಾಲ್ವೇಸಿ’ ಕುಟುಂಬಕ್ಕೆ ಸೇರಿದೆ.
- ದಕ್ಷಿಣ ಅಮೆರಿಕದ ಅಮೆಜಾನ್ ಮೇಲ್ದಂಡೆ ಜಲಾನಯನ ಪ್ರದೇಶದ ಸ್ಥಳೀಯ ಸಸ್ಯ:- ವಾಣಿಜ್ಯ ಕೃಷಿಗಾಗಿ ವಸಾಹತುಶಾಹಿ ಕಾಲದಲ್ಲಿ ಇದನ್ನು ಏಷ್ಯಾ ಮತ್ತು ಆಫ್ರಿಕಾಕ್ಕೆ ಪರಿಚಯಿಸಲಾಯಿತು.
- ವಾಯುಗುಣ:- ಕೋಕೋ ಅತ್ಯುತ್ತಮ ಬೆಳವಣಿಗೆಗೆ,
- ಬೆಚ್ಚಗಿನ, ಆರ್ದ್ರ ಮತ್ತು ಸಮಭಾಜಕ ಮಾದರಿಯ ವಾತಾವರಣ.
- ತಾಪಮಾನ:- 21°C ನಿಂದ 32°C
- ಮಳೆ:- ವರ್ಷವಿಡೀ ಉತ್ತಮವಾಗಿ ಹಂಚಿಕೆಯಾದ ಮಳೆಯಾಗುವ ಪ್ರದೇಶ, ಅವಶ್ಯಕವಾಗಿದೆ.
- ಮಣ್ಣು:- ಸಾವಯವ ವಸ್ತುಗಳಿಂದ ಸಮೃದ್ಧವಾಗಿರುವ ಆಳವಾದ, ಫಲವತ್ತಾದ ಮತ್ತು ನೀರು ಬಸಿದು ಹೋಗುವ ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
- ಪ್ರಮುಖ ಉತ್ಪಾದಕ ರಾಜ್ಯಗಳು:- ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ.
ಗೋಡಂಬಿ ಉತ್ಪಾದನೆ:
- ನಿತ್ಯಹರಿದ್ವರ್ಣ ಉಷ್ಣವಲಯದ ಮರ:- ಗೋಡಂಬಿಯು ‘ಅನಕಾರ್ಡಿಯೇಸಿ’ ಕುಟುಂಬಕ್ಕೆ ಸೇರಿದೆ.
- ದಕ್ಷಿಣ ಅಮೆರಿಕದ ಈಶಾನ್ಯ ಬ್ರೆಜಿಲ್ನ ಕರಾವಳಿ ಪ್ರದೇಶಗಳ ಸ್ಥಳೀಯ ಸಸ್ಯ:- ಗೋಡಂಬಿ ಮರವು (ಅನಕಾರ್ಡಿಯಮ್ ಆಕ್ಸಿಡೆಂಟೇಲ್) ದಕ್ಷಿಣ ಅಮೆರಿಕದ ಸ್ಥಳೀಯ ಸಸ್ಯವಾಗಿದೆ.
- ‘ಪೋರ್ಚುಗೀಸ್’ನ ಸಾಹಸಿ ಪ್ರವಾಸಿಗರು 16ನೇ ಶತಮಾನದಲ್ಲಿ ಇದನ್ನು ಭಾರತ ಮತ್ತು ಆಫ್ರಿಕಾಕ್ಕೆ ಪರಿಚಯಿಸಿದರು.
- ವಾಯುಗುಣ:- ಗೋಡಂಬಿಗೆ,
- ನಿರ್ದಿಷ್ಟವಾದ ಒಣ ಋತುವಿನೊಂದಿಗೆ ಕೂಡಿದ ಉಷ್ಣವಲಯದ ವಾತಾವರಣ.
- ತಾಪಮಾನ:- 20°C ನಿಂದ 35°C
- ಮಳೆ:- ಸಾಧಾರಣದಿಂದ ಹೆಚ್ಚಿನ ಮಳೆ ಬೀಳುವ ಪ್ರದೇಶ, ಅವಶ್ಯಕವಾಗಿದೆ.
- ಮಣ್ಣು:- ಜಂಬಿಟ್ಟಿಗೆ, ಕೆಂಪು ಮರಳು ಮತ್ತು ಕರಾವಳಿ ಮಣ್ಣಿನಲ್ಲಿ ಬೆಳೆಯುತ್ತದೆ ಹಾಗೂ ಕಳಪೆ ಮತ್ತು ಸಾರಹೀನ ಭೂಮಿಯಲ್ಲೂ ಉತ್ತಮ ಇಳುವರಿ ನೀಡುತ್ತದೆ.
- ಪ್ರಮುಖ ಉತ್ಪಾದಕ ರಾಜ್ಯಗಳು:- ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ, ಕೇರಳ, ಕರ್ನಾಟಕ, ಗೋವಾ ಮತ್ತು ತಮಿಳುನಾಡು.



ನಿಮ್ಮದೊಂದು ಉತ್ತರ