ಚಾಬಹಾರ್ ಬಂದರು
ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಅಮೆರಿಕದ ನವೀಕರಿಸಿದ ನಿರ್ಬಂಧಗಳ ಕಾರಣದಿಂದಾಗಿ ಭಾರತವು ಚಾಬಹಾರ್ ಬಂದರಿನಿಂದ ಹೊರಬರಲು ಯೋಜಿಸುತ್ತಿದೆ ಎಂಬ ವರದಿಗಳನ್ನು ಭಾರತವು ಅಲ್ಲಗಳೆದಿದೆ.
- ಕಾರ್ಯತಂತ್ರದ ಚಾಬಹಾರ್ ಬಂದರಿನಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಲು, ಭಾರತವು ಅಮೆರಿಕ ಮತ್ತು ಇರಾನ್ ಎರಡೂ ದೇಶಗಳೊಂದಿಗೂ ಸಂಪರ್ಕದಲ್ಲಿದೆ ಎಂದು ಪುನರುಚ್ಚರಿಸಿದೆ.
ಚಾಬಹಾರ್ ಸಮುದ್ರ ಬಂದರಿನ ಬಗ್ಗೆ:
- ಸ್ಥಳ:- ಇದು ಆಗ್ನೇಯ ಇರಾನ್ನ ಓಮನ್ ಕೊಲ್ಲಿಯ ತೀರದಲ್ಲಿದೆ.
- ಈ ಬಂದರು 2 ಪ್ರತ್ಯೇಕ ಬಂದರುಗಳನ್ನು ಒಳಗೊಂಡಿದೆ. ಅವುಗಳೆಂದರೆ,
- ಶಾಹಿದ್ ಕಲಂತರಿ
- ಶಾಹಿದ್ ಬೆಹೆಸ್ಟಿ
- ಈ ಬಂದರು ಪಾಕಿಸ್ತಾನದ ಗ್ವಾದರ್ ಬಂದರಿನಿಂದ ಪಶ್ಚಿಮಕ್ಕೆ ಕೇವಲ 170 ಕಿಲೋಮೀಟರ್ ದೂರದಲ್ಲಿದೆ.
- ಕಾರ್ಯತಂತ್ರದ ಸ್ಥಳ:- ಅಫ್ಘಾನಿಸ್ತಾನದ ಹಾಜಿಗಾಕ್ ಗಣಿಯಿಂದ ಕಬ್ಬಿಣ ಮತ್ತು ಕಜಕಿಸ್ತಾನ್, ತುರ್ಕಮೆನಿಸ್ತಾನ್ ಹಾಗೂ ಉಜ್ಬೇಕಿಸ್ತಾನ್ನಂತಹ ಮಧ್ಯ ಏಷ್ಯಾದ ದೇಶಗಳಿಂದ ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಪಡೆಯಲು ಭಾರತಕ್ಕೆ ಪ್ರವೇಶದ ಅಗತ್ಯವಿದೆ. ಚಾಬಹಾರ್ ಬಂದರು ಈ ಸಂಪನ್ಮೂಲಗಳ ಪ್ರವೇಶವನ್ನು ಸಾಧ್ಯವಾಗಿಸುತ್ತದೆ.
- ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಸಂಪರ್ಕ ಮಾರ್ಗ (INSTC):- ಈ ಬಂದರು INSTC ನ ಭಾಗವಾಗಿದೆ. ಇದು ಹಿಂದೂ ಮಹಾಸಾಗರವನ್ನು ಉತ್ತರ ಯುರೋಪ್ಗೆ ಸಂಪರ್ಕಿಸುವ ಬಹು-ಮಾದರಿ ಸಾರಿಗೆ ಯೋಜನೆಯಾಗಿದೆ.
ಕೇಂದ್ರ ಜಾಗೃತ ಆಯೋಗ
ಸಾಮಾನ್ಯ ಅಧ್ಯಯನ-2/ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಭಾರತದ ರಾಷ್ಟ್ರಪತಿಗಳು, ‘ಪ್ರವೀಣ್ ವಶಿಷ್ಟ’ ಅವರನ್ನು ಕೇಂದ್ರ ಜಾಗೃತ ಆಯೋಗದಲ್ಲಿ ‘ಜಾಗೃತ ಆಯುಕ್ತರನ್ನಾಗಿ’ ನೇಮಕ ಮಾಡಿದ್ದಾರೆ.
ಕೇಂದ್ರ ಜಾಗೃತ ಆಯೋಗ (CVC)ದ ಬಗ್ಗೆ:
- ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ, 1946 ರ ಅಡಿಯಲ್ಲಿ 1964 ರಲ್ಲಿ ಸ್ಥಾಪಿಸಲಾಯಿತು.
- ಸಂತಾನಂ ಸಮಿತಿಯ ಶಿಫಾರಸು:- ಭ್ರಷ್ಟಾಚಾರ ತಡೆಗಟ್ಟುವಿಕೆ ಕುರಿತ ಈ ಸಮಿತಿಯ ಶಿಫಾರಸುಗಳ ಮೇರೆಗೆ ಸ್ಥಾಪಿಸಲಾಯಿತು.
- ಕೇಂದ್ರ ಜಾಗೃತ ಆಯೋಗ ಕಾಯ್ದೆ (CVC), 2003 ರ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಯಿತು:- ಇದು ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಹೊತ್ತಿರುವ ಭಾರತದ ಅತ್ಯುನ್ನತ ಶಾಸನಬದ್ಧ ಸಂಸ್ಥೆಯಾಗಿದೆ.
ಕೇಂದ್ರ ಜಾಗೃತ ಆಯೋಗ ಕಾಯ್ದೆ, 2003 ರ ಅನ್ವಯ,
ಕೇಂದ್ರ ಜಾಗೃತ ಆಯೋಗದ ಸಂರಚನೆ:-
- ಒಬ್ಬರು ಕೇಂದ್ರ ಜಾಗೃತ ಆಯುಕ್ತರು ಮತ್ತು
- ಇಬ್ಬರು ಜಾಗೃತ ಆಯುಕ್ತರ ನೇಮಕಕ್ಕೆ ಅವಕಾಶವಿದೆ.
ನೇಮಕಾತಿ:- ಭಾರತದ ರಾಷ್ಟ್ರಪತಿಗಳು ಕೇಂದ್ರ ಜಾಗೃತ ಆಯುಕ್ತರು ಮತ್ತು ಜಾಗೃತ ಆಯುಕ್ತರನ್ನು ನೇಮಕ ಮಾಡುತ್ತಾರೆ.
ಉನ್ನತಾಧಿಕಾರ ಸಮಿತಿಯ ಶಿಫಾರಸುಗಳ ಮೇರೆಗೆ ನೇಮಕಾತಿ:-
- ಪ್ರಧಾನಮಂತ್ರಿ
- ಕೇಂದ್ರ ಗೃಹ ಸಚಿವರು
- ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿದೆ
ಅಧಿಕಾರಾವಧಿ:- ಜಾಗೃತ ಆಯುಕ್ತರ 4 ವರ್ಷಗಳು ಅಥವಾ ಅಧಿಕಾರದಲ್ಲಿರುವವರು 65 ವರ್ಷ ವಯಸ್ಸನ್ನು ತಲುಪುವವರೆಗೆ (ಯಾವುದು ಮೊದಲೋ ಅದು) ಅಧಿಕಾರದಲ್ಲಿ ಇರುತ್ತಾರೆ.
ಕೇಂದ್ರ ಜಾಗೃತ ಆಯೋಗದ ಅಧಿಕಾರ ಮತ್ತು ಕಾರ್ಯಗಳು:
-
- ಭ್ರಷ್ಟಾಚಾರವನ್ನು ನಿಯಂತ್ರಿಸುತ್ತದೆ:- CVC ಕಾಯ್ದೆ, 2003 ರ ಅನ್ವಯ, ಭ್ರಷ್ಟಾಚಾರವನ್ನು ಎದುರಿಸಲು ಮತ್ತು ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಅಧಿಕಾರ ಮತ್ತು ಜವಾಬ್ದಾರಿಯನ್ನು ಕೇಂದ್ರ ಜಾಗೃತ ಆಯೋಗವು (CVC) ಹೊಂದಿದೆ.
- ಜಾಗೃತ ಆಡಳಿತ ವ್ಯವಸ್ಥೆಯ ಮೇಲೆ ಮೇಲ್ವಿಚಾರಣೆ:- ಈ ಆಯೋಗವು ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ಜಾಗೃತ ಆಡಳಿತ ವ್ಯವಸ್ಥೆಯ ಮೇಲೆ ಮೇಲ್ವಿಚಾರಣೆಯನ್ನು ನಡೆಸುತ್ತದೆ.
- ಅತ್ಯುನ್ನತ ಜಾಗೃತ ಸಂಸ್ಥೆ:- ಇದು ಲೋಕಪಾಲ್ ಶಿಫಾರಸು ಮಾಡಿದ ಪ್ರಕರಣಗಳು ಮತ್ತು PIDPI ಚೌಕಟ್ಟಿನ ಅಡಿಯಲ್ಲಿ ಬರುವ ಮಾಹಿತಿದಾರರ ದೂರುಗಳನ್ನು ಒಳಗೊಂಡಂತೆ, ಭ್ರಷ್ಟಾಚಾರ-ವಿರೋಧಿ ವಿಚಾರಣೆಗಳ ಮೇಲೆ ಮೇಲ್ವಿಚಾರಣೆ ಮಾಡುವುದು ಹಾಗೂ ಮಾರ್ಗದರ್ಶನ ನೀಡುತ್ತದೆ.
- ಕೇಂದ್ರೀಯ ತನಿಖಾ ದಳದ (CBI) ಕಾರ್ಯನಿರ್ವಹಣೆಯ ಮೇಲ್ವಿಚಾರಣೆ:- ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಇದು ಮೇಲ್ವಿಚಾರಣೆ ಮಾಡುತ್ತದೆ.
- ಉನ್ನತ ಅಧಿಕಾರಿಗಳ ನೇಮಕಾತಿಯನ್ನು ಶಿಫಾರಸು ಮಾಡುವ ಸಮಿತಿಗಳ ಅಧ್ಯಕ್ಷತೆ:- ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐನಲ್ಲಿ (ಸಿಬಿಐ ನಿರ್ದೇಶಕರನ್ನು ಹೊರತುಪಡಿಸಿ, ಎಸ್ಪಿ ಮಟ್ಟ ಮತ್ತು ಅದಕ್ಕಿಂತ ಮೇಲಿನ ಹಂತದ) ಉನ್ನತ ಅಧಿಕಾರಿಗಳ ನೇಮಕಾತಿಯಲ್ಲಿ ಇದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.
ಬೇರು ಒಣಗುವ (ಬಾಡುವ) ರೋಗ
ಸಾಮಾನ್ಯ ಅಧ್ಯಯನ-3/ ಕೃಷಿ
ಇದೀಗ ಸುದ್ದಿಯಲ್ಲಿದೆ:
- ಭಾರತದ ಪರ್ಯಾಯ ದ್ವೀಪದಲ್ಲಿ ತೆಂಗಿನ ಕೃಷಿಯು, ಫೈಟೊಪ್ಲಾಸ್ಮಾ ಪ್ರೇರಿತ ಬೇರು ಒಣಗುವ (ರೂಟ್ ವಿಲ್ಟ್) ರೋಗದ ಕಾರಣದಿಂದಾಗಿ ಗಂಭೀರ ಅಪಾಯಗಳನ್ನು ಎದುರಿಸುತ್ತಿದೆ.
ಬೇರು ಒಣಗುವ (ರೂಟ್ ವಿಲ್ಟ್) ರೋಗದ ಬಗ್ಗೆ:
-
- ಫೈಟೊಪ್ಲಾಸ್ಮಾ ಪ್ರೇರಿತ:- ತೆಂಗಿನ ಬೇರು ಒಣಗುವ ರೋಗವು ‘ಫೈಟೊಪ್ಲಾಸ್ಮಾ’ ಎಂಬ ಕೋಶ ಭಿತ್ತಿ ರಹಿತ ಬ್ಯಾಕ್ಟೀರಿಯಾದ ರೋಗಕಾರಕದಿಂದ ಉಂಟಾಗುತ್ತದೆ.
- ಮಾರಣಾಂತಿಕವಲ್ಲದ, ಗಿಡವನ್ನು ತೀವ್ರವಾಗಿ ದುರ್ಬಲಗೊಳಿಸುವ ರೋಗ:- ಎಂದು ವರ್ಗೀಕರಿಸಲಾಗಿದೆ.
- ಕೇರಳದ ಎರಟ್ಟುಪೆಟ್ಟಾದಲ್ಲಿ ಮೊದಲ ವರದಿ:- ಈ ರೋಗವು 150 ವರ್ಷಗಳ ಹಿಂದೆ ಕೇರಳದಲ್ಲಿ ವರದಿಯಾಯಿತು.
- ನಿರ್ದಿಷ್ಟವಾಗಿ ಗುಣಪಡಿಸುವ ಚಿಕಿತ್ಸೆ ಇಲ್ಲ:- ದೀರ್ಘಕಾಲದ ಸಂಶೋಧನಾ ಪ್ರಯತ್ನಗಳ ಹೊರತಾಗಿಯೂ, ಇಲ್ಲಿಯವರೆಗೆ ಇದಕ್ಕೆ ಯಾವುದೇ ನಿರ್ದಿಷ್ಟ ಗುಣಪಡಿಸುವ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ.
- ಈ ರೋಗದ ಪ್ರಮುಖ ಲಕ್ಷಣಗಳು:-
- ಎಲೆಗಳು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ಬಾಡುವುದು,
- ನಂತರ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗುವುದು,
- ಅಂತಿಮವಾಗಿ ಎಲ್ಲಾ ಕಾಯಿಗಳು ಉದುರುವುದು.
- ರಸ ಹೀರುವ ಕೀಟಗಳ ಮೂಲಕ ಹರಡುತ್ತದೆ:- ಬೇರು ಒಣಗುವ ರೋಗವು ಕೀಟ ವಾಹಕಗಳ ಮೂಲಕ ಹರಡುತ್ತದೆ. ಗಾಳಿಯ ಚಲನೆ ಮತ್ತು ದೊಡ್ಡ, ತಡೆರಹಿತ ತೆಂಗಿನ ತೋಟಗಳು ಈ ರೋಗದ ಹರಡುವಿಕೆಗೆ ಮತ್ತಷ್ಟು ಸಹಕಾರಿಯಾಗಿವೆ.
ತೆಂಗು (ಕೊಕೊಸ್ ನುಸಿಫೆರಾ) ಬೆಳೆಯ ಬಗ್ಗೆ:
- ಭಾರತದ ಪ್ರಮುಖ ಬಹುವಾರ್ಷಿಕ ತೋಟಗಾರಿಕಾ ಬೆಳೆ:- ಇದನ್ನು ಅತೀ ಹೆಚ್ಚಾಗಿ ತೇವಾಂಶವುಳ್ಳ ಉಷ್ಣವಲಯ ಮತ್ತು ಕರಾವಳಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
- ಮಣ್ಣು:- ನೀರು ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕಡುಮಣ್ಣು (ಲೋಮ್ ಮಣ್ಣು).
- ಹೆಚ್ಚಿನ ಆರ್ದ್ರತೆಯ ಅವಶ್ಯಕತೆ ಇದೆ.
- ತಾಪಮಾನ:- 27 ರಿಂದ 32 ಡಿಗ್ರಿ ಸೆಲ್ಸಿಯಸ್ . ಇದಕ್ಕೆ ಸಾಕಷ್ಟು ಸೂರ್ಯನ ಬೆಳಕು ಅತ್ಯಗತ್ಯವಿರುತ್ತದೆ
- ಭಾರತವು ಪ್ರಪಂಚದಲ್ಲೇ ತೆಂಗು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ದೇಶಗಳಲ್ಲಿ ಒಂದಾಗಿದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಸೇರಿ ಭಾರತದ ಒಟ್ಟು ತೆಂಗು ಉತ್ಪಾದನೆಗೆ ಸುಮಾರು 82–83% ರಷ್ಟು ಕೊಡುಗೆ ನೀಡುತ್ತವೆ.
ಕಾಜೀರಂಗದಲ್ಲಿ ಎತ್ತರದ ವನ್ಯಜೀವಿ ಸಂಚಾರ ಮಾರ್ಗ
ಸಾಮಾನ್ಯ ಅಧ್ಯಯನ-3/ಪರಿಸರ
ಇದೀಗ ಸುದ್ದಿಯಲ್ಲಿದೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಸ್ಸಾಂನ ಕಾಜೀರಂಗದಲ್ಲಿ 34.5 ಕಿಲೋಮೀಟರ್ ಉದ್ದದ ಎತ್ತರದ ವನ್ಯಜೀವಿ ಸಂಚಾರ ಮಾರ್ಗವನ್ನು ಉದ್ಘಾಟಿಸಲು ಸಜ್ಜಾಗಿದ್ದಾರೆ.
ಕಾಜೀರಂಗದ ಎತ್ತರದ ವನ್ಯಜೀವಿ ಸಂಚಾರ ಮಾರ್ಗದ ಬಗ್ಗೆ:
- ಉದ್ದೇಶ:- ವಿಶೇಷವಾಗಿ ವಾರ್ಷಿಕ ಪ್ರವಾಹದ ಸಮಯದಲ್ಲಿ, ಪ್ರಾಣಿಗಳ ಸುರಕ್ಷಿತ ಚಲನವಲನಕ್ಕೆ ಅನುವು ಮಾಡಿಕೊಡುವುದು.
- ಸಂಪರ್ಕ ಸುಧಾರಣೆ:- ಇದು ಗುವಾಹಟಿ, ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ನುಮಾಲಿಘರ್ಗಳ ನಡುವಿನ ಸಂಪರ್ಕವನ್ನು ಸಹ ಸುಧಾರಿಸುತ್ತದೆ.
‘ಕಾಜಿರಂಗ ರಾಷ್ಟ್ರೀಯ ಉದ್ಯಾನವನ’ದ ಬಗ್ಗೆ:
- ಇದು ಬ್ರಹ್ಮಪುತ್ರ ಕಣಿವೆಯ ಪ್ರವಾಹದ ಬಯಲು ಸೀಮೆಯ ಹುಲ್ಲುಗಾವಲುಗಳನ್ನು ಪ್ರತಿನಿಧಿಸುವ, ಅತ್ಯಂತ ದೊಡ್ಡ ಹಾಗೂ ಅಖಂಡವಾದ ಪ್ರದೇಶವಾಗಿದೆ.
- ‘ಜೈವಿಕ ಅನುಕ್ರಮಣಿಕೆ’ಯ ವಿವಿಧ ಹಂತ:- ಇಲ್ಲಿನ ಹುಲ್ಲುಗಾವಲುಗಳ ಪರಿಸರ ವ್ಯವಸ್ಥೆಯಲ್ಲಿ, ಸ್ಪಷ್ಟವಾಗಿ ಕಾಣಬಹುದು.
- ಒಂದು ಕೊಂಬಿನ ಖಡ್ಗಮೃಗಗಳಿಗೆ ಹೆಸರುವಾಸಿ:- ವಿಶ್ವದ 70% ಕ್ಕಿಂತ ಹೆಚ್ಚು ‘ಒಂದು ಕೊಂಬಿನ ಖಡ್ಗಮೃಗ’ಗಳಿಗೆ ಈ ಉದ್ಯಾನವನವು ಆವಾಸಸ್ಥಾನವಾಗಿದೆ.
- ಇದನ್ನು 1950 ರಲ್ಲಿ ‘ವನ್ಯಜೀವಿ ಅಭಯಾರಣ್ಯ’ವನ್ನಾಗಿ ಘೋಷಿಸಲಾಯಿತು.
- 1974 ರಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನ:- ‘ವನ್ಯಜೀವಿ (ರಕ್ಷಣೆ) ಕಾಯ್ದೆ, 1972’ ರ ಅಡಿಯಲ್ಲಿ ಅಧಿಸೂಚಿಸಲಾಯಿತು.
- ವಿಶ್ವ ಪರಂಪರೆಯ ತಾಣ:- ಇದನ್ನು 1985 ರಲ್ಲಿ ಘೋಷಿಸಲಾಯಿತು.
- ಪ್ರಮುಖ ಪಕ್ಷಿ ಪ್ರದೇಶ:- ಬರ್ಡ್ಲೈಫ್ ಇಂಟರ್ನ್ಯಾಶನಲ್ ಸಂಸ್ಥೆಯು ಇದನ್ನು ‘ಪ್ರಮುಖ ಪಕ್ಷಿ ಪ್ರದೇಶ’ ಎಂದು ಗುರುತಿಸಿದೆ.



ನಿಮ್ಮದೊಂದು ಉತ್ತರ