ರಾಷ್ಟ್ರೀಯ ಗುಪ್ತಚರ ಜಾಲ (NATGRID) | 11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF) | ಸರಸ್ ಆಹಾರ ಮೇಳ, 2025

ರಾಷ್ಟ್ರೀಯ ಗುಪ್ತಚರ ಜಾಲ (NATGRID)

ರಕ್ಷಣೆ

ಇದೀಗ ಸುದ್ದಿಯಲ್ಲಿದೆ: 

  • ಇತ್ತೀಚಿಗೆ, ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್) ಪ್ರತಿ ತಿಂಗಳು ಸುಮಾರು 45,000 ವಿನಂತಿಗಳನ್ನು ಸ್ವೀಕರಿಸುತ್ತಿದ್ದು, ಇದು ಕೇಂದ್ರ ಮತ್ತು ರಾಜ್ಯ ಭದ್ರತಾ ಸಂಸ್ಥೆಗಳಿಂದ ಈ ವ್ಯವಸ್ಥೆಯ ಬಳಕೆಯು ಗಮನಾರ್ಹವಾಗಿ ಏರಿಕೆಯಾಗಿರುವುದನ್ನು ಪ್ರತಿಬಿಂಬಿಸುತ್ತದೆ.

ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್‌)ದ ಬಗ್ಗೆ:

  • ಇದು 2008ರ 26/11ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಅಭಿವೃದ್ಧಿಪಡಿಸಲಾದ ನೈಜ-ಸಮಯದ ಗುಪ್ತಚರ ಮಾಹಿತಿ ಮತ್ತು ದತ್ತಾಂಶ ಪ್ರವೇಶ ವೇದಿಕೆಯಾಗಿದೆ.
  • ಉದ್ದೇಶ:- ವಿವಿಧ ಭದ್ರತಾ ಮತ್ತು ತನಿಖಾ ಸಂಸ್ಥೆಗಳ ನಡುವೆ ತಡೆರಹಿತ ಮಾಹಿತಿ ಹಂಚಿಕೆಯನ್ನು ಸುಗಮಗೊಳಿಸುವುದು.
  • ಆಡಳಿತಾತ್ಮಕ ನಿಯಂತ್ರಣ:- ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • ದತ್ತಾಂಶಗಳ ಕ್ರೂಢೀಕರಣ:- ಇದು ಬ್ಯಾಂಕ್ ವಹಿವಾಟುಗಳು, ಟೆಲಿಕಾಂ ಬಳಕೆ, ಪಾಸ್‌ಪೋರ್ಟ್/ವಲಸೆ ದಾಖಲೆಗಳು, ತೆರಿಗೆ ಗುರುತಿನ ಸಂಖ್ಯೆಗಳು (PAN), ಪೊಲೀಸ್ ಪ್ರಥಮ ಮಾಹಿತಿ ವರದಿಗಳು (CCTNS/FIRs) ಮತ್ತು ಇತರ ಇ-ಆಡಳಿತ ಮೂಲಗಳನ್ನೊಳಗೊಂಡ 20ಕ್ಕೂ ಹೆಚ್ಚು ವಿಭಾಗಗಳ ನಾಗರಿಕ ಹಾಗೂ ವಾಣಿಜ್ಯ ದತ್ತಾಂಶಗಳನ್ನು ಕ್ರೂಢೀಕರಿಸುತ್ತದೆ.
  • ದತ್ತಾಂಶ ಪ್ರವೇಶಾವಕಾಶ:- ಆರಂಭದಲ್ಲಿ ಪ್ರವೇಶವನ್ನು 
  1. ಗುಪ್ತಚರ ಕಚೇರಿ (IB), 
  2. ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW), 
  3. ರಾಷ್ಟ್ರೀಯ ತನಿಖಾ ಸಂಸ್ಥೆ (NIA), 
  4. ಜಾರಿ ನಿರ್ದೇಶನಾಲಯ (ED), 
  5. ಹಣಕಾಸು ಗುಪ್ತಚರ ಘಟಕ (FIU), 
  6. ಮಾದಕ ದ್ರವ್ಯ ನಿಯಂತ್ರಣ ಕಚೇರಿ (NCB),
  7. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮುಂತಾದ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿತ್ತು.
  • ಪ್ರಸ್ತುತ, ನ್ಯಾಟ್‌ಗ್ರಿಡ್ ದತ್ತಾಂಶಗಳ ಪ್ರವೇಶಾವಕಾಶವನ್ನು ಪೊಲೀಸ್ ಅಧೀಕ್ಷಕರ (SP) ಶ್ರೇಣಿಯ ಅಧಿಕಾರಿಗಳಿಗೂ ವಿಸ್ತರಿಸಲಾಗಿದೆ.

ನ್ಯಾಟ್‌ಗ್ರಿಡ್‌ನ ಮಹತ್ವ:

  • ಭಯೋತ್ಪಾದನಾ ನಿಗ್ರಹ:- ವ್ಯಕ್ತಿಗಳ ಪ್ರಯಾಣದ ಮಾದರಿ, ಹಣಕಾಸು ವಹಿವಾಟು, ಟೆಲಿಕಾಂ ದತ್ತಾಂಶ ಮತ್ತು ಸಾಮಾಜಿಕ ಸಂಪರ್ಕಗಳನ್ನು ಪರಸ್ಪರ ವಿಶ್ಲೇಷಿಸುವ ಮೂಲಕ ಭಯೋತ್ಪಾದಕ ಜಾಲಗಳನ್ನು ಪತ್ತೆಹಚ್ಚುವ ಹಾಗೂ ಹತ್ತಿಕ್ಕುವ ಸಾಮರ್ಥ್ಯವನ್ನು ನ್ಯಾಟ್‌ಗ್ರಿಡ್ ವೃದ್ಧಿಸುತ್ತದೆ.
  • ಅಪರಾಧ ಪತ್ತೆ ಹಚ್ಚುವಿಕೆಯಲ್ಲಿ ಸುಧಾರಣೆ: ಸಂಘಟಿತ ಅಪರಾಧ, ಮಾದಕ ದ್ರವ್ಯ ಜಾಲಗಳು, ಮಾನವ ಅಕ್ರಮ ಸಾಗಣೆ, ಸೈಬರ್ ಅಪರಾಧ, ನಕಲಿ ನೋಟಿನ ಜಾಲ ಮತ್ತು ಗಡಿಯಾಚೆಗಿನ ಅಕ್ರಮ ಸಾಗಣೆಗೆ ಸಂಬಂಧಿಸಿದ ತನಿಖೆಗಳಿಗೆ ಈ ವೇದಿಕೆಯು ವ್ಯವಸ್ಥಿತ ನೆರವು ನೀಡುತ್ತದೆ.

11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)

ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:

  • ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)ದ 11ನೇ ಆವೃತ್ತಿಯು ಹರಿಯಾಣದ ಪಂಚಕುಳದಲ್ಲಿ ಆರಂಭವಾಯಿತು.

ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬದ ಬಗ್ಗೆ:

  • ಪ್ರಾರಂಭ:- ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
  • ಇದು ವೈಜ್ಞಾನಿಕ ವಿನಿಮಯ, ನಾವೀನ್ಯತೆ, ಜನಸಂಪರ್ಕ ಮತ್ತು ಸಾರ್ವಜನಿಕ ಸಹಭಾಗಿತ್ವಕ್ಕೆ ಒಂದು ಪ್ರಮುಖ ವೇದಿಕೆಯಾಗಿದೆ.
  • 2025ರ ಧ್ಯೇಯವಾಕ್ಯ:- “ವಿಜ್ಞಾನದಿಂದ ಸಮೃದ್ಧಿ: ಆತ್ಮನಿರ್ಭರ ಭಾರತಕ್ಕಾಗಿ”

IISF, 2025 ಐದು ಪ್ರಮುಖ ಧ್ಯೇಯಗಳ ಮೇಲೆ ಕೇಂದ್ರೀಕರಿಸುತ್ತದೆ:

  • ವಾಯುವ್ಯ ಭಾರತ ಮತ್ತು ಹಿಮಾಲಯ ಪ್ರದೇಶದ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ವಿಜ್ಞಾನ;
  • ಸಮಾಜ ಮತ್ತು ಶಿಕ್ಷಣಕ್ಕಾಗಿ ವಿಜ್ಞಾನ;
  • ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಆತ್ಮನಿರ್ಭರ ಭಾರತ;
  • ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಿಕತೆ;
  • ಆಧುನಿಕ ವಿಜ್ಞಾನದೊಂದಿಗೆ ಸಾಂಪ್ರದಾಯಿಕ ಜ್ಞಾನದ ಸಂಯೋಜನೆ.

ಸರಸ್ ಆಹಾರ ಮೇಳ, 2025

ಇತರೆ

ಇದೀಗ ಸುದ್ದಿಯಲ್ಲಿದೆ:

  • ದೆಹಲಿಯ ಸುಂದರ್ ನರ್ಸರಿಯಲ್ಲಿ ಆಯೋಜಿಸಲಾದ ‘ಸರಸ್ ಆಹಾರ ಮೇಳ, 2025’, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (NRLM)ಯ ಅಡಿಯಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ ಒಂದು ಉಜ್ವಲ ಪ್ರದರ್ಶನವಾಗಿ ಮೂಡಿಬಂದಿದೆ.

ಸರಸ್ ಆಹಾರ ಮೇಳ, 2025 ರ ಬಗ್ಗೆ:

  • ಈ ಮೇಳವು ಹರಿಯಾಣ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಕೇರಳ, ಅಸ್ಸಾಂ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 62 ಮಳಿಗೆಗಳಲ್ಲಿ 500 ಕ್ಕೂ ಹೆಚ್ಚು ಸಾಂಪ್ರದಾಯಿಕ ಖಾದ್ಯಗಳನ್ನು ಒಳಗೊಂಡಿತ್ತು.
  • ಇದು ಮಹಿಳಾ ಉದ್ಯಮಶೀಲತೆ ಮತ್ತು ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತಿದ್ದು, ಭಾರತದಾದ್ಯಂತ ಇರುವ ಸ್ವಸಹಾಯ ಸಂಘಗಳ ಸುಮಾರು 300 “ಲಖ್ಪತಿ ದೀದಿಯರು” ಈ ಮೇಳದಲ್ಲಿ ವಿವಿಧ ಆಹಾರ ಪದಾರ್ಥ ಮತ್ತು ಗ್ರಾಮೀಣ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ.

ಸರಸ್ ಅಜೀವಿಕ ಮೇಳದ ಬಗ್ಗೆ:

  • ಆಯೋಜಕರು:- ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಅಡಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇದನ್ನು ಆಯೋಜಿಸುತ್ತದೆ.
  • ಇದು ಗ್ರಾಮೀಣ ಮಹಿಳೆಯರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಪ್ರಮುಖ ಮಾರುಕಟ್ಟೆ ಮಾನ್ಯತೆಯನ್ನು ಪಡೆಯಲು ಒಂದು ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ.
  • ಮುಚ್ಚಳಿಕರಣ (ಪ್ಯಾಕೇಜಿಂಗ್), ವಿನ್ಯಾಸ, ಸಂವಹನ ಮತ್ತು ಮಾರುಕಟ್ಟೆ ಪ್ರಕ್ರಿಯೆಗಳ ಕುರಿತಾದ ಕಾರ್ಯಾಗಾರಗಳ ಮೂಲಕ ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸಲು, ಆದಾಯವನ್ನು ಹೆಚ್ಚಿಸಲು ಮತ್ತು ದೇಶ-ವಿದೇಶಗಳ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಾದ ಕೌಶಲಗಳನ್ನು ಈ ಮೇಳಗಳು ಅವರಿಗೆ ಒದಗಿಸುತ್ತವೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts