ವರದಕ್ಷಿಣೆ ವಿರೋಧಿ ಕಾನೂನುಗಳು
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ವರದಕ್ಷಿಣೆ ವಿರೋಧಿ ಕಾನೂನುಗಳ ಜಾರಿಯನ್ನು ಬಲಪಡಿಸಲು ಸರ್ವೋಚ್ಚ ನ್ಯಾಯಾಲಯವು ವ್ಯವಸ್ಥಿತ ನಿರ್ದೇಶನಗಳನ್ನು ನೀಡಿದೆ.
ಭಾರತದಲ್ಲಿ ವರದಕ್ಷಿಣೆ ಪ್ರಕರಣಗಳು:
- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ “ಭಾರತದಲ್ಲಿ ಅಪರಾಧಗಳು, 2023” ವರದಿಯು, 2022 ರಲ್ಲಿ ದಾಖಲಾಗಿದ್ದ 13,479 ಪ್ರಕರಣಗಳಿಗೆ ಹೋಲಿಸಿದರೆ 2023 ರಲ್ಲಿ ‘ವರದಕ್ಷಿಣೆ ನಿಷೇಧ ಕಾಯ್ದೆ,1961’ ರ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ 14% ರಷ್ಟು ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 15,489 ಕ್ಕೆ ತಲುಪಿದೆ ಎಂದು ದೃಢಪಡಿಸಿದೆ. ಇದರೊಂದಿಗೆ ದೇಶದಾದ್ಯಂತ 6,156 ವರದಕ್ಷಿಣೆ ಸಂಬಂಧಿತ ಸಾವುಗಳು ಸಂಭವಿಸಿವೆ.
- ಉತ್ತರ ಪ್ರದೇಶವು 7,151 ಪ್ರಕರಣಗಳು ಮತ್ತು 2,122 ಸಾವುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಬಿಹಾರ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳಿವೆ.
ಭಾರತದಲ್ಲಿ ಕಾನೂನು ಸ್ಥಿತಿಗತಿ:
- ಭಾರತದ ಕಾನೂನುಗಳ ಅಡಿಯಲ್ಲಿ ವರದಕ್ಷಿಣೆ ಪದ್ಧತಿಯನ್ನು ದೀರ್ಘಕಾಲದಿಂದ ನಿಷೇಧಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವು:
ವರದಕ್ಷಿಣೆ ನಿಷೇಧ ಕಾಯ್ದೆ, 1961
- ಉದ್ದೇಶ:- ವರದಕ್ಷಿಣೆ ನೀಡುವುದನ್ನು ಅಥವಾ ಪಡೆಯುವುದನ್ನು ನಿಷೇಧಿಸುವುದು.
- ಜೈಲು ಶಿಕ್ಷೆ:– ಈ ಕಾನೂನನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂ.ಗಳಿಗಿಂತ ಕಡಿಮೆಯಿಲ್ಲದ ದಂಡವನ್ನು ವಿಧಿಸಲು ಅವಕಾಶವಿದೆ.
ಪರಿಶೀಲನೆಯ ನಂತರವಷ್ಟೇ ಸಿಎಎ (CAA) ಅಡಿಯಲ್ಲಿ ಪೌರತ್ವ: ಸರ್ವೋಚ್ಚ ನ್ಯಾಯಾಲಯ
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಪೌರತ್ವ (ತಿದ್ದುಪಡಿ) ಕಾಯ್ದೆ, 2019ರ ಅಡಿಯಲ್ಲಿ ಪೌರತ್ವವು ‘ಸ್ವಯಂಚಾಲಿತ’ ಪ್ರಕ್ರಿಯೆಯಲ್ಲ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಸ್ಪಷ್ಟಪಡಿಸಿದೆ.
- ಅರ್ಜಿದಾರರು ನಾಗರಿಕತೀಕರಣದ ಎಲ್ಲಾ ಶಾಸನಬದ್ಧ ಷರತ್ತುಗಳನ್ನು ಕಡ್ಡಾಯವಾಗಿ ಪೂರೈಸಬೇಕು ಮತ್ತು ಕೇಂದ್ರ ಸರ್ಕಾರವು ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು ಎಂದು ಘನ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆ, 2019ರ ಪ್ರಮುಖ ಲಕ್ಷಣಗಳು:
- ಉದ್ದೇಶ ಮತ್ತು ಗುರಿ:- ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಂತಹ ನೆರೆಯ ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದಿರುವ ನಿರ್ದಿಷ್ಟ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ಕಲ್ಪಿಸಲು ಈ ಕಾಯ್ದೆಯು 1955ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತದೆ.
- ಅರ್ಹ ಸಮುದಾಯಗಳು:- ಈ ಕಾಯ್ದೆಯು ನಿರ್ದಿಷ್ಟವಾಗಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಎಂಬ ಆರು ಮುಸ್ಲಿಮೇತರ ಧಾರ್ಮಿಕ ಸಮುದಾಯಗಳನ್ನು ಒಳಗೊಂಡಿದೆ.
- ಈ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳು ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಮಾನ್ಯತೆ ನೀಡಿದ ಪ್ರಯಾಣ ದಾಖಲೆಗಳಿಲ್ಲದೆ ಅಥವಾ ಅವಧಿ ಮುಗಿದ ದಾಖಲೆಗಳೊಂದಿಗೆ ಭಾರತಕ್ಕೆ ಪ್ರವೇಶಿಸಿದ್ದರೆ, ಅಂತಹವರು ಪೌರತ್ವಕ್ಕೆ ಅರ್ಹರಾಗಿರುತ್ತಾರೆ.
- ‘ಅಕ್ರಮ ವಲಸಿಗ’ ಸ್ಥಾನಮಾನದಿಂದ ವಿನಾಯಿತಿ: ಇಂತಹ ವ್ಯಕ್ತಿಗಳನ್ನು ಈ ಕಾಯ್ದೆಯಡಿ ‘ಅಕ್ರಮ ವಲಸಿಗರು’ ಎಂದು ಪರಿಗಣಿಸಲಾಗುವುದಿಲ್ಲ. ಇದು ಅವರು ನಾಗರಿಕತೀಕರಣದ ಮೂಲಕ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.
- ಈ ಗುಂಪುಗಳಿಗೆ ನಾಗರಿಕತೀಕರಣದ ಮೂಲಕ ಪೌರತ್ವ ಪಡೆಯಲು ಭಾರತದಲ್ಲಿ ವಾಸಿಸಬೇಕಾದ ಅಗತ್ಯ ಅವಧಿಯನ್ನು 11 ವರ್ಷಗಳಿಂದ 5 ವರ್ಷಗಳಿಗೆ ಇಳಿಸಲಾಗಿದೆ.
ಅನ್ವಯವಾಗದ ಪ್ರದೇಶಗಳು (ವಿನಾಯಿತಿಗಳು):
ಈ ಕಾಯ್ದೆಯು ಈ ಕೆಳಗಿನ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ:
- ಸಂವಿಧಾನದ 6ನೇ ಅನುಸೂಚಿಯಲ್ಲಿ ಸೇರಿಸಲ್ಪಟ್ಟ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದ ಬುಡಕಟ್ಟು ಪ್ರದೇಶಗಳು.
- “ಆಂತರಿಕ ಪ್ರವೇಶ ಅನುಮತಿ” (ILP- ಇನ್ನರ್ ಲೈನ್ ಪರ್ಮಿಟ್) ವ್ಯವಸ್ಥೆಯಡಿ ಬರುವ ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮಣಿಪುರ ರಾಜ್ಯಗಳ ಪ್ರದೇಶಗಳು.
ಭಾರತೀಯ ಪೌರತ್ವ ಪಡೆಯುವ ಮಾರ್ಗಗಳು:
ಸಾಂವಿಧಾನಿಕ ಅಡಿಪಾಯ:- ಭಾರತೀಯ ಸಂವಿಧಾನದ 2ನೇ ಭಾಗದ 5 ರಿಂದ 11 ನೇ ವಿಧಿಗಳು ಸಂವಿಧಾನ ಜಾರಿಗೆ ಬಂದ ಸಮಯದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಆರಂಭಿಕ ಚೌಕಟ್ಟನ್ನು ರೂಪಿಸುತ್ತವೆ:
- ವಿಧಿ 5:- ಸಂವಿಧಾನ ಜಾರಿಗೆ ಬಂದ ಸಮಯದಲ್ಲಿ ಭಾರತದಲ್ಲಿ ಶಾಶ್ವತವಾಗಿ ವಾಸಸ್ಥಳ (Domicile) ಹೊಂದಿದ್ದ ವ್ಯಕ್ತಿಗಳಿಗೆ ಪೌರತ್ವವನ್ನು ನೀಡುತ್ತದೆ.
- ವಿಧಿ 6:- ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರಿಗೆ ಕೆಲವು ಷರತ್ತುಗಳ ಅಡಿಯಲ್ಲಿ ಪೌರತ್ವವನ್ನು ಕಲ್ಪಿಸುತ್ತದೆ.
- ವಿಧಿ 7:- ಪಾಕಿಸ್ತಾನಕ್ಕೆ ವಲಸೆ ಹೋಗಿ ನಂತರ ಭಾರತಕ್ಕೆ ಮರಳಿದವರ ಪೌರತ್ವದ ಬಗ್ಗೆ ತಿಳಿಸುತ್ತದೆ.
- ವಿಧಿ 8:- ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳ ಪೌರತ್ವದ ಹಕ್ಕುಗಳನ್ನು ಒದಗಿಸುತ್ತದೆ.
- ವಿಧಿ 9:- ದ್ವಿಪೌರತ್ವವನ್ನು ನಿಷೇಧಿಸುತ್ತದೆ; ಒಬ್ಬ ವ್ಯಕ್ತಿಯು ಸ್ವಯಂಪ್ರೇರಿತವಾಗಿ ಬೇರೆ ದೇಶದ ಪೌರತ್ವವನ್ನು ಪಡೆದರೆ, ಅವರು ಭಾರತೀಯ ಪೌರತ್ವವನ್ನು ಕಳೆದುಕೊಳ್ಳುತ್ತಾರೆ.
- ವಿಧಿ 10:- ಕಾನೂನಿನ ಅಡಿಯಲ್ಲಿ ರದ್ದುಗೊಳಿಸದ ಹೊರತು ಅಸ್ತಿತ್ವದಲ್ಲಿರುವ ಪೌರರು ಪೌರತ್ವದ ಹಕ್ಕುಗಳನ್ನು ಮುಂದುವರಿಸುವುದನ್ನು ಖಚಿತಪಡಿಸುತ್ತದೆ.
- ವಿಧಿ 11:- ಪೌರತ್ವದ ಹಕ್ಕನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸಂಸತ್ತಿಗೆ ಅಧಿಕಾರ ನೀಡುತ್ತದೆ.
ಶಾಸನಬದ್ಧ ನಿಬಂಧನೆಗಳು: ಪೌರತ್ವ ಕಾಯ್ದೆ, 1955
ಇದು ಭಾರತೀಯ ಪೌರತ್ವವನ್ನು ಪಡೆಯುವ ಮತ್ತು ರದ್ದುಗೊಳಿಸುವ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಪೌರತ್ವ ಪಡೆಯುವ ಪ್ರಮುಖ ವಿಧಾನಗಳು:
- ಜನನದ ಮೂಲಕ (ವಿಭಾಗ 3)
- ವಂಶಪಾರಂಪರ್ಯವಾಗಿ (ವಿಭಾಗ 4)
- ನೋಂದಣಿ ಮೂಲಕ (ವಿಭಾಗ 5)
- ನಾಗರಿಕತೀಕರಣದ ಮೂಲಕ (ವಿಭಾಗ 6)
- ಪ್ರದೇಶಗಳ ಸೇರ್ಪಡೆಯ ಮೂಲಕ (ವಿಭಾಗ 7)
ಪಕ್ಷಾಂತರ ನಿಷೇಧ ಕಾಯ್ದೆ
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಲೋಕಸಭೆಯಲ್ಲಿ “ಸಂವಿಧಾನ (ತಿದ್ದುಪಡಿ) ಮಸೂದೆ, 2025 (10ನೇ ಅನುಸೂಚಿಯ ತಿದ್ದುಪಡಿ)” ಎಂಬ ಶೀರ್ಷಿಕೆಯ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಲಾಗಿದೆ.
- ಸಾಮಾನ್ಯವಾಗಿ ಕರೆಯಲ್ಪಡುವ ‘ಪಕ್ಷಾಂತರ ನಿಷೇಧ ಕಾಯ್ದೆ’ಯು ಸಂವಿಧಾನದ 10ನೇ ಅನುಸೂಚಿಯನ್ನು, 52ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1985 ರ ಮೂಲಕ ಭಾರತದ ಸಂವಿಧಾನಕ್ಕೆ ಸೇರಿಸಲಾಯಿತು.
ವಿಪ್ (Whip) ನ ಬಗ್ಗೆ:
- ‘ವಿಪ್’ ಅಥವಾ ‘ಸಚೇತಕ’ ಎನ್ನುವುದು ಸದನದಲ್ಲಿರುವ ರಾಜಕೀಯ ಪಕ್ಷದ ಸದಸ್ಯರು ಪಕ್ಷದ ನಿರ್ದಿಷ್ಟ ನಿರ್ದೇಶನಕ್ಕೆ ಬದ್ಧವಾಗಿರಲು ಹೊರಡಿಸುವ ಆದೇಶವಾಗಿದೆ.
- ರಾಜಕೀಯ ಪಕ್ಷಗಳು ತಮ್ಮ ಸಂಸದರಿಗೆ ಆಯಾ ಪಕ್ಷದ ನಿಲುವಿಗೆ ಅನುಗುಣವಾಗಿ ಮಸೂದೆಯ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಲು ವಿಪ್ ಜಾರಿಗೊಳಿಸುತ್ತವೆ.
- ಒಮ್ಮೆ ವಿಪ್ ಜಾರಿಯಾದ ನಂತರ, ಪ್ರತಿ ಪಕ್ಷದ ಸಂಸದರು ಕಡ್ಡಾಯವಾಗಿ ಅದನ್ನು ಪಾಲಿಸಬೇಕು; ತಪ್ಪಿದಲ್ಲಿ ಅವರು ಸಂಸತ್ತಿನಲ್ಲಿ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ.
- ವಿಪ್ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ, ಆದರೆ ಇದನ್ನು ಒಂದು ಸಂಸದೀಯ ಸಂಪ್ರದಾಯವೆಂದು ಪರಿಗಣಿಸಲಾಗುತ್ತದೆ.
- ರಾಜಕೀಯ ಪಕ್ಷಗಳು ವಿಪ್ ಜಾರಿಗೊಳಿಸಲು ಸದನದ ಸದಸ್ಯರ ಪೈಕಿ ಒಬ್ಬ ಹಿರಿಯ ಸದಸ್ಯರನ್ನು ನೇಮಿಸುತ್ತವೆ ಈ ಸದಸ್ಯರನ್ನು ‘ಮುಖ್ಯ ಸಚೇತಕ’ (Chief Whip) ಎಂದು ಕರೆಯಲಾಗುತ್ತದೆ ಮತ್ತು ಇವರಿಗೆ ಹೆಚ್ಚುವರಿ ಸಚೇತಕರು ನೆರವಾಗುತ್ತಾರೆ.
ಪಕ್ಷಾಂತರ ನಿಷೇಧ ಕಾಯ್ದೆಯ ಬಗ್ಗೆ:
- ರಾಜಕೀಯ ಪಕ್ಷಾಂತರಗಳನ್ನು ತಡೆಗಟ್ಟುವ ಉದ್ದೇಶದಿಂದ ಸಂವಿಧಾನದ 10ನೇ ಅನುಸೂಚಿಯನ್ನು ಅಳವಡಿಸಿಕೊಳ್ಳಲಾಗಿದೆ.
- ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ:- ರಾಜಕೀಯ ಪಕ್ಷವೊಂದಕ್ಕೆ ಸೇರಿದ ಸಂಸದರು/ಶಾಸಕರು ಈ ಕೆಳಗಿನ ಸಂದರ್ಭಗಳಲ್ಲಿ ಅನರ್ಹಗೊಳ್ಳುತ್ತಾರೆ:
- ತಮ್ಮ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದರೆ.
- ತಮ್ಮ ರಾಜಕೀಯ ಪಕ್ಷವು ನೀಡಿದ ನಿರ್ದೇಶನಕ್ಕೆ ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ ಅಥವಾ ಮತದಾನದಿಂದ ದೂರವುಳಿದರೆ ಅನರ್ಹಗೊಳ್ಳುತ್ತಾರೆ.
- ಪಕ್ಷೇತರ ಸದಸ್ಯರು ಸದನಕ್ಕೆ ಚುನಾಯಿತರಾದ ನಂತರ ಯಾವುದಾದರೂ ರಾಜಕೀಯ ಪಕ್ಷವನ್ನು ಸೇರಿದರೆ ಅವರು ಅನರ್ಹಗೊಳ್ಳುತ್ತಾರೆ.
- ನಾಮನಿರ್ದೇಶಿತ ಸದಸ್ಯರು ನಾಮನಿರ್ದೇಶನಗೊಂಡ ಆರು ತಿಂಗಳ ನಂತರ ಯಾವುದೇ ರಾಜಕೀಯ ಪಕ್ಷವನ್ನು ಸೇರಿದರೆ ಅನರ್ಹಗೊಳ್ಳುತ್ತಾರೆ.
- ಸದಸ್ಯರು ತಮ್ಮ ಪಕ್ಷದಿಂದ ಮುಂಚಿತವಾಗಿ ಅನುಮತಿ ಪಡೆದಿದ್ದರೆ ಅಥವಾ ಮತದಾನದ ನಿಯಮ ಉಲ್ಲಂಘನೆ ಅಥವಾ ಗೈರುಹಾಜರಿಯನ್ನು ಪಕ್ಷವು 15 ದಿನಗಳೊಳಗೆ ಕ್ಷಮಿಸಿದರೆ, ಅವರು ಅನರ್ಹಗೊಳ್ಳುವುದಿಲ್ಲ.
- ವಿಲೀನದ ಸಂದರ್ಭಗಳಲ್ಲಿ ವಿನಾಯಿತಿಗಳು:- ಮೂಲ ರಾಜಕೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರು ಮತ್ತೊಂದು ರಾಜಕೀಯ ಪಕ್ಷದೊಂದಿಗೆ ವಿಲೀನಗೊಂಡಾಗ ಅಂತಹ ಸದಸ್ಯರಿಗೆ ಅನರ್ಹತೆಯಿಂದ ವಿನಾಯಿತಿ ನೀಡಲಾಗುತ್ತದೆ.
- ಈ ಸದಸ್ಯರು ತಾವು ವಿಲೀನಗೊಂಡ ಪಕ್ಷದ ಸದಸ್ಯರಾಗಿರಬೇಕು, ಅಥವಾ
- ಅವರು ಅಂತಹ ವಿಲೀನವನ್ನು ಒಪ್ಪಿಕೊಳ್ಳದೆ ಪ್ರತ್ಯೇಕ ಗುಂಪಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿರಬೇಕು.
- ತೀರ್ಪು ನೀಡುವ ಅಧಿಕಾರ:- ಸದಸ್ಯರನ್ನು ಸದನದಿಂದ ಅನರ್ಹಗೊಳಿಸುವ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವು ಆಯಾ ಸದನದ ಸಭಾಪತಿ ಅಥವಾ ಸಭಾಧ್ಯಕ್ಷರಿಗೆ ಇರುತ್ತದೆ.



ನಿಮ್ಮದೊಂದು ಉತ್ತರ