ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ, 2025 | ದೀಪಾವಳಿ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ | ವಿಶ್ವ ಅಸಮಾನತೆ ವರದಿ, 2026 | ಸೌರ ಬಿರುಗಾಳಿಯನ್ನು ಅಧ್ಯಯನ ಮಾಡಲು ಜಾಗತಿಕ ಪ್ರಯತ್ನಕ್ಕೆ ಕೈಜೋಡಿಸಿದ ಆದಿತ್ಯ-L1 | ಜಾಗತಿಕ ಪರಿಸರ ಮುನ್ನೋಟ (Global Environment Outlook)

ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ, 2025

ಪರಿಸರ

ಇದೀಗ ಸುದ್ದಿಯಲ್ಲಿದೆ: 

  • ತಮಿಳುನಾಡಿನ ಐಎಎಸ್ ಅಧಿಕಾರಿಯಾದ ಸುಪ್ರಿಯಾ ಸಾಹು ಅವರಿಗೆ ಸ್ಫೂರ್ತಿ ಮತ್ತು ಕ್ರಿಯೆ ವಿಭಾಗದಲ್ಲಿ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ‘2025 ರ ಸಾಲಿನ “ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗಿದೆ.

ಸುಪ್ರಿಯಾ ಸಾಹು ಅವರು ಪರಿಸರಕ್ಕೇ ನೀಡಿದ ಕೊಡುಗೆಗಳು:

  • 2000ನೇ ಇಸವಿಯಲ್ಲಿ, ನೀಲಗಿರಿಯಲ್ಲಿ ‘ಏಕ-ಬಳಕೆಯ ಪ್ಲಾಸ್ಟಿಕ್’ ನಿರ್ಮೂಲನೆಗಾಗಿ ಸುಪ್ರಿಯಾ ಸಾಹು ಅವರು ‘ಆಪರೇಷನ್ ಬ್ಲೂ ಮೌಂಟೇನ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದರು.
  • “ಕೂಲ್ ರೂಫ್ ಪ್ರಾಜೆಕ್ಟ್” ಅಡಿಯಲ್ಲಿ ಶಾಲಾ ಕಟ್ಟಡಗಳ ಮೇಲ್ಛಾವಣಿಗಳಿಗೆ ಬಿಳಿ ಬಣ್ಣ ಬಳಿಯುವುದರಿಂದ ಹಿಡಿದು, ಮ್ಯಾಂಗ್ರೋವ್‌ಗಳು (ಕಾಂಡ್ಲಾ ಕಾಡುಗಳು) ಮತ್ತು ಜೌಗು ಪ್ರದೇಶಗಳನ್ನು ಪುನಃಸ್ಥಾಪಿಸುವವರೆಗೆ ಹಾಗೂ 65 ಹೊಸ ಮೀಸಲು ಅರಣ್ಯಗಳನ್ನು ರಚಿಸುವವರೆಗೆ, ಅವರು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಡಿಮೆ ವೆಚ್ಚದ ಪರಿಹಾರಗಳನ್ನು ಪರಿಚಯಿಸಿದರು.
  • ಅವರ ‘ಪ್ರಕೃತಿ-ಮೊದಲು’ ಎಂಬ ವಿಧಾನವು 2.5 ದಶಲಕ್ಷ ‘ಹಸಿರು ಉದ್ಯೋಗ’ಗಳನ್ನು ಸೃಷ್ಟಿಸಿದೆ ಮತ್ತು ಭಾರತದ ರಾಷ್ಟ್ರೀಯ ಇಂಗಾಲದ ಹೊರಸೂಸುವಿಕೆ ಕಡಿತದ ಗುರಿಗಳಿಗೆ ಗಮನಾರ್ಹ ಕೊಡುಗೆ ನೀಡಿದೆ.

ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಯ ಬಗ್ಗೆ:

    • ಈ ಪ್ರಶಸ್ತಿಯನ್ನು 2005 ರಲ್ಲಿ ಪ್ರಾರಂಭಿಸಲಾಯಿತು.
    • ಈ ಪ್ರಶಸ್ತಿಯು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ.
    • ಪರಿಸರದ ಮೇಲೆ ಸಕಾರಾತ್ಮಕ ಪ್ರಭಾವ ಮತ್ತು ಪರಿವರ್ತನೆಯನ್ನು ಉಂಟುಮಾಡಿದ ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಹಾಗೂ ನಾಗರಿಕ ಸಮಾಜದ ಗಣ್ಯ ವ್ಯಕ್ತಿಗಳನ್ನು ಇದು ಗುರುತಿಸುತ್ತದೆ.
    • ಈ ಪ್ರಶಸ್ತಿಯನ್ನು ಐದು ವಿಭಾಗಗಳಲ್ಲಿ ನೀಡಲಾಗುತ್ತದೆ:
  • ನೀತಿ ನಾಯಕತ್ವ 
  • ಉದ್ಯಮಶೀಲತಾ ದೃಷ್ಟಿಕೋನ
  • ವಿಜ್ಞಾನ ಮತ್ತು ನಾವೀನ್ಯತೆ
  • ಜೀವಮಾನದ ಸಾಧನೆ
  • ಸ್ಫೂರ್ತಿ ಮತ್ತು ಕ್ರಿಯೆ – (ಸುಪ್ರಿಯಾ ಸಾಹು ಅವರಿಗೆ ಈ ವಿಭಾಗದಲ್ಲಿ ಗೌರವಿಸಲಾಗಿದೆ).
  • ಈ ಹಿಂದೆ ಪ್ರಶಸ್ತಿ ಪಡೆದ ಭಾರತೀಯರು: ಮಾಧವ್ ಗಾಡ್ಗೀಳ್ (2024), ನರೇಂದ್ರ ಮೋದಿ (2018), ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (2018) ಮತ್ತು ಅಫ್ರೋಜ್ ಶಾ (2016).

ದೀಪಾವಳಿ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ

ಸಾಮಾನ್ಯ ಅಧ್ಯಯನ -1/ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:

  • ನವದೆಹಲಿಯಲ್ಲಿ ನಡೆದ ಯುನೆಸ್ಕೋದ ಅಂತರ-ಸರ್ಕಾರಿ ಸಮಿತಿಯ 20ನೇ ಅಧಿವೇಶನದಲ್ಲಿ, ದೀಪಾವಳಿ ಹಬ್ಬವನ್ನು ಯುನೆಸ್ಕೋದ ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿ’ಗೆ ಸೇರ್ಪಡೆಗೊಳಿಸಲಾಗಿದೆ.
  • ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಯುನೆಸ್ಕೋ ಅಂತರ-ಸರ್ಕಾರಿ ಸಮಿತಿಯ 20ನೇ ಅಧಿವೇಶನವನ್ನು (2025), ಭಾರತವು ನವದೆಹಲಿಯ ಕೆಂಪು ಕೋಟೆ ಸಂಕೀರ್ಣದಲ್ಲಿ ಇತ್ತೀಚಿಗೆ ಆಯೋಜಿಸಿತ್ತು. 

ದೀಪಾವಳಿ ಹಬ್ಬದ ಬಗ್ಗೆ:

  • ದೀಪಾವಳಿ ಹಬ್ಬವನ್ನು “ದೀವಾಳಿ” ಎಂತಲೂ ಕರೆಯುತ್ತಾರೆ. ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ; ಇದು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬರುತ್ತದೆ.
  • ಇದರ ಆಚರಣೆಯ ನಂತರ ನರಕ ಚತುರ್ದಶಿಯೂ ಬರುತ್ತದೆ.
  • ದೀಪಾವಳಿಯ ಮೂರನೇ ದಿನ ಹಬ್ಬದ ಪ್ರಮುಖ ದಿನವಾಗಿದ್ದು, ಅಂದು ಪವಿತ್ರ ಲಕ್ಷ್ಮಿ-ಗಣೇಶ ಪೂಜೆಯನ್ನು ನೆರವೇರಿಸಲಾಗುತ್ತದೆ.

ದೀಪಾವಳಿ ಹಬ್ಬದ ಜನಪ್ರಿಯ ಪೌರಾಣಿಕ ಕಥೆಗಳು:

  • ರಾಮಾಯಣದಲ್ಲಿ:– ದೀಪಾವಳಿಯು 14 ವರ್ಷಗಳ ವನವಾಸದ ನಂತರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಮರಳಿದ ಮತ್ತು ರಾವಣನ ಮೇಲೆ ಅವರು ಸಾಧಿಸಿದ ವಿಜಯದ ಸಂಕೇತವಾಗಿದೆ; ದೀಪಗಳನ್ನು ಹಚ್ಚುವ ಮೂಲಕ ಅವರ ಹಾದಿಯನ್ನು ಬೆಳಗಿಸಿ ಇದನ್ನು ಆಚರಿಸಲಾಗುತ್ತದೆ.
  • ಮಹಾಭಾರತದಲ್ಲಿ:- ಪಾಂಡವರು ತಮ್ಮ ವನವಾಸದ ನಂತರ ಮರಳಿದ ಪೌರಾಣಿಕ ಕಥೆ.
  • ನರಕ ಚತುರ್ದಶಿ:– ದುಷ್ಟಶಕ್ತಿಯ ಅಂತ್ಯದ ಸಂಕೇತವಾಗಿ, ನರಕಾಸುರನ ಮೇಲೆ ಶ್ರೀಕೃಷ್ಣನು ಸಾಧಿಸಿದ ವಿಜಯವನ್ನು ಇದು ಸ್ಮರಿಸುತ್ತದೆ.
  • ಭಗವಾನ್ ಮಹಾವೀರನ ನಿರ್ವಾಣ:- 24ನೇ ತೀರ್ಥಂಕರರಾದ ಭಗವಾನ್ ಮಹಾವೀರನು ದೀಪಾವಳಿ ಹಬ್ಬದಂದು ಪಾವಾಪುರಿಯಲ್ಲಿ ನಿರ್ವಾಣ ಹೊಂದಿದನು. ಜೈನ ಧರ್ಮದ ಭಕ್ತರು ಈ ಹಬ್ಬವನ್ನು ‘ನಿರ್ವಾಣ ದಿನ’ವನ್ನಾಗಿ ಆಚರಿಸುತ್ತಾರೆ.
  • ಬಲಿ ಚಕ್ರವರ್ತಿಯ ಪುನರಾಗಮನ:- ಮಹಾರಾಷ್ಟ್ರದಲ್ಲಿ, ದೀಪಾವಳಿಯು ಬಲಿ ಚಕ್ರವರ್ತಿಯ ಭೇಟಿಯನ್ನು ಸೂಚಿಸುತ್ತದೆ; ಇದು ನ್ಯಾಯ ಮತ್ತು ಔದಾರ್ಯವನ್ನು ಸಂಕೇತಿಸುತ್ತದೆ.
  • ಕಾಳಿ ಪೂಜೆ:- ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ, ದೀಪಾವಳಿಯು ರಕ್ಷಣೆ ಮತ್ತು ಆಂತರಿಕ ಶಕ್ತಿಗಾಗಿ ಕಾಳಿ ದೇವಿಯ ಆರಾಧನೆಯೊಂದಿಗೆ ಏಕಕಾಲದಲ್ಲಿ ಆಚರಿಸಲ್ಪಡುತ್ತದೆ.
  • ಲಕ್ಷ್ಮೀ ದೇವಿಯ ಅವತರಣ:- ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತ.

ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ತಾಣಗಳ ಕುರಿತು:

ಯುನೆಸ್ಕೋ “ಅಮೂರ್ತ” ಎಂಬ ಪದವನ್ನು ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿರುವ ಅಭಿವ್ಯಕ್ತಿಗಳೆಂದು ವ್ಯಾಖ್ಯಾನಿಸುತ್ತದೆ:

    • ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿದುಬಂದ ಸಂಪ್ರದಾಯಗಳು.
    • ತಮ್ಮ ಪರಿಸರಕ್ಕೆ ಪ್ರತಿಕ್ರಿಯೆಯಾಗಿ ವಿಕಸನಗೊಂಡ ಸಂಪ್ರದಾಯಗಳು. 
  • ನಮಗೆ ಅಸ್ಮಿತೆ ಮತ್ತು ನಿರಂತರತೆಯ ಪ್ರಜ್ಞೆಯನ್ನು ಒದಗಿಸುವಲ್ಲಿ ಕೊಡುಗೆ ನೀಡಿರುವ ಸಂಪ್ರದಾಯಗಳು. 

ಯುನೆಸ್ಕೋದ ಅಧಿಕೃತ ದಾಖಲೆಯನ್ವಯ, ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ಯು ಈ ಕೆಳಗಿನವುಗಳನ್ನು ಒಳಗೊಂಡಿದೆ: “ಮೌಖಿಕ ಸಂಪ್ರದಾಯಗಳು, ಪ್ರದರ್ಶನ ಕಲೆಗಳು, ಸಾಮಾಜಿಕ ಆಚರಣೆಗಳು, ವಿಧಿವಿಧಾನಗಳು, ಹಬ್ಬದ ಸಂದರ್ಭಗಳು, ಪ್ರಕೃತಿ ಮತ್ತು ವಿಶ್ವಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಆಚರಣೆಗಳು ಅಥವಾ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಉತ್ಪಾದಿಸುವ ಜ್ಞಾನ ಮತ್ತು ಕೌಶಲಗಳು.”

ಯುನೆಸ್ಕೋ ಪ್ರತಿನಿಧಿ ಪಟ್ಟಿಯಲ್ಲಿರುವ ಭಾರತದ 16 ಅಮೂರ್ತ ಸಾಂಸ್ಕೃತಿಕ ಪರಂಪರೆಗಳು:

  • ದೀಪಾವಳಿ (2025)
  1. ಗುಜರಾತಿನ ಗರ್ಬಾ (2023)
  2. ಕೋಲ್ಕತ್ತಾದ ದುರ್ಗಾ ಪೂಜೆ (2021)
  3. ಕುಂಭ ಮೇಳ (2017)
  4. ನವರೋಜ್ (2016)
  5. ಯೋಗ (2016)
  6. ಪಂಜಾಬ್‌ನ ಜಂಡಿಯಾಲ ಗುರುವಿನ ‘ತಾಥೇರ’ರ ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಪಾತ್ರೆ ತಯಾರಿಕೆ ಕಲೆ (2014)
  7. ಮಣಿಪುರದ ಸಂಕೀರ್ತನೆ (2013)
  8. ಲಡಾಖ್‌ನ ಬೌದ್ಧ ಮಂತ್ರ ಪಠಣ: ಜಮ್ಮು ಮತ್ತು ಕಾಶ್ಮೀರದ ಹಿಮಾಲಯದಾಚೆಗಿನ ಲಡಾಖ್ ಪ್ರದೇಶದಲ್ಲಿ ಪವಿತ್ರ ಬೌದ್ಧ ಗ್ರಂಥಗಳ ಪಠಣ (2012)
  9. ಪಶ್ಚಿಮ ಬಂಗಾಳದ ಛೌ ನೃತ್ಯ (2010)
  10. ರಾಜಸ್ಥಾನದ “ಕಾಲ್ಬೆಲಿಯಾ” ಜಾನಪದ ಹಾಡುಗಳು ಮತ್ತು ನೃತ್ಯಗಳು (2010)
  11. ಕೇರಳದ ಮುಡಿಯೆಟ್ಟು, ಧಾರ್ಮಿಕ ರಂಗಭೂಮಿ ಮತ್ತು ನೃತ್ಯ ನಾಟಕ (2010)
  12. ಗರ್ವಾಲ್ ಹಿಮಾಲಯದ ರಮ್ಮಾನ್, ಧಾರ್ಮಿಕ ಹಬ್ಬ ಮತ್ತು ಧಾರ್ಮಿಕ ರಂಗಭೂಮಿ (2009)
  13. ಕೇರಳದ ಕೂಡಿಯಟ್ಟಂ, ಸಂಸ್ಕೃತ ರಂಗಭೂಮಿ (2008)
  14. ವೇದ ಮಂತ್ರ ಪಠಣ ಸಂಪ್ರದಾಯ (2008)
  15. ಉತ್ತರ ಪ್ರದೇಶದ ರಾಮಲೀಲಾ, ರಾಮಾಯಣದ ಸಾಂಪ್ರದಾಯಿಕ ಪ್ರದರ್ಶನ (2008)

ವಿಶ್ವ ಅಸಮಾನತೆ ವರದಿ, 2026

ಸಾಮಾನ್ಯ ಅಧ್ಯಯನ- 2/ಸಾಮಾಜಿಕ ವಿಷಯಗಳು; ಸಾಮಾನ್ಯ ಅಧ್ಯಯನ- 3/ಒಳಗೊಳ್ಳುವ ಬೆಳವಣಿಗೆ

ಇದೀಗ ಸುದ್ದಿಯಲ್ಲಿದೆ:

  • ವಿಶ್ವ ಅಸಮಾನತೆ ಲ್ಯಾಬ್’, ವಿಶ್ವ ಅಸಮಾನತೆ ವರದಿಯ 3ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ವಿಶ್ವ ಅಸಮಾನತೆ ವರದಿ, 2026 ರ ಪ್ರಮುಖ ಅಂಶಗಳು:

  • ಸಂಪತ್ತಿನ ಕೇಂದ್ರೀಕರಣ:- ಜಾಗತಿಕ ಜನಸಂಖ್ಯೆಯ ಅತ್ಯಂತ ಶ್ರೀಮಂತ 10% ಜನರು, ವಿಶ್ವದ ಒಟ್ಟು ಸಂಪತ್ತಿನ ಸರಿಸುಮಾರು 75% ರಷ್ಟು ಪಾಲನ್ನು ಹೊಂದಿದ್ದಾರೆ.

ಭಾರತದ ಕುರಿತ ವರದಿಯಲ್ಲಿರುವ ಪ್ರಮುಖ ಅಂಶಗಳು:

  • ಜಾಗತಿಕವಾಗಿ ಅತಿ ಹೆಚ್ಚು ಅಸಮಾನತೆಯನ್ನು ಹೊಂದಿರುವ ಅತೀ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿ ಭಾರತವನ್ನು ಗುರುತಿಸಲಾಗಿದೆ.
  • ಆದಾಯ:– ಅತಿ ಹೆಚ್ಚು ಆದಾಯ ಗಳಿಸುವ ಅಗ್ರ 10% ರಷ್ಟು ಜನರು ರಾಷ್ಟ್ರೀಯ ಆದಾಯದ 58% ರಷ್ಟನ್ನು ತಮ್ಮದಾಗಿಸಿಕೊಂಡಿದ್ದರೆ, ಕೆಳಸ್ತರದ 50% ಜನರು ಕೇವಲ 15% ರಾಷ್ಟ್ರೀಯ ಆದಾಯವನ್ನು ಮಾತ್ರ ಪಡೆಯುತ್ತಾರೆ.
  • ಸಂಪತ್ತು:- ಭಾರತದ ಒಟ್ಟು ಸಂಪತ್ತಿನ ಪೈಕಿ ಸುಮಾರು 65% ರಷ್ಟು ಪಾಲನ್ನು ಅತ್ಯಂತ ಶ್ರೀಮಂತ 10% ಜನರು ಹೊಂದಿದ್ದಾರೆ; ಕೇವಲ ಅಗ್ರ 1% ರಷ್ಟು ಜನರು ಸುಮಾರು 40% ರಷ್ಟು ಸಂಪತ್ತನ್ನು ಹೊಂದಿದ್ದಾರೆ.
  • ಲಿಂಗ:– ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು ಅತ್ಯಂತ ಕಡಿಮೆಯಿದ್ದು, 15.7% ರ ಮಟ್ಟದಲ್ಲಿಯೇ ನಿಶ್ಚಲವಾಗಿದೆ.

ಸೌರ ಬಿರುಗಾಳಿಯನ್ನು ಅಧ್ಯಯನ ಮಾಡಲು ಜಾಗತಿಕ ಪ್ರಯತ್ನಕ್ಕೆ ಕೈಜೋಡಿಸಿದ ಆದಿತ್ಯ-L1

ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ : 

  • ಭಾರತದ ಸೌರ ವೀಕ್ಷಣಾಲಯವಾದ ಆದಿತ್ಯ-L1, ಮೇ 2024ರಲ್ಲಿ ಸಂಭವಿಸಿದ “ಗ್ಯಾನನ್‌ನ ಸ್ಟಾರ್ಮ್ (Gannon’s storm)” ಎಂದು ಕರೆಯಲ್ಪಡುವ ಸೌರ ಬಿರುಗಾಳಿಯ ಅಸಾಮಾನ್ಯ ವರ್ತನೆಯನ್ನು ಬಹಿರಂಗಪಡಿಸಿದೆ.
  • ಈ ಬಿರುಗಾಳಿ ಸೂರ್ಯನಲ್ಲಿ ಸಂಭವಿಸಿದ “ಕೊರೊನಲ್ ಮಾಸ್ ಇಜೆಕ್ಷನ್‌ಗಳು” (Coronal Mass Ejections – CMEs) ಎನ್ನುವ ದೈತ್ಯ ಪ್ರಮಾಣದ ಸ್ಫೋಟಗಳ ಸರಣಿಯಿಂದ ಉಂಟಾಗಿದೆ.

‘ಸೌರ ಬಿರುಗಾಳಿ’ಯ ಬಗ್ಗೆ:

  • ಸೌರ ಬಿರುಗಾಳಿಯು ಸೂರ್ಯನ ಮೇಲೆ ಸಂಭವಿಸುವ ‘ಕರೋನಲ್ ಮಾಸ್ ಇಜೆಕ್ಷನ್‌ಗಳು’ (CMEs) ಎಂದು ಕರೆಯಲ್ಪಡುವ ದೈತ್ಯ ಸ್ಫೋಟಗಳ ಸರಣಿಯಿಂದ ಕೂಡಿದೆ.
  • ಒಂದು ಕರೋನಲ್ ಮಾಸ್ ಇಜೆಕ್ಷನ್‌ ಎಂದರೆ ಸೂರ್ಯನಿಂದ ಬಾಹ್ಯಾಕಾಶಕ್ಕೆ ಉಗುಳಲ್ಪಡುವ ಬಿಸಿಯಾದ ಅನಿಲ ಮತ್ತು ಕಾಂತೀಯ ಶಕ್ತಿಯ ಬೃಹತ್ ಗುಳ್ಳೆಯಾಗಿದೆ.
  • ಭೂಮಿಯ ಮೇಲೆ ಬಿರುವ ಪರಿಣಾಮ:- ಈ ಗುಳ್ಳೆಗಳು ಭೂಮಿಗೆ ಅಪ್ಪಳಿಸಿದಾಗ, ಇವು ಭೂಮಿಯ ಕಾಂತೀಯ ಕವಚವನ್ನು ಅಸ್ಥಿರಗೊಳಿಸಬಹುದು. ಇದರಿಂದಾಗಿ ಉಪಗ್ರಹ, ಸಂಪರ್ಕ ವ್ಯವಸ್ಥೆ, ಜಿಪಿಎಸ್ ಹಾಗೂ ವಿದ್ಯುತ್ ಜಾಲಗಳಿಗೆ ಗಂಭೀರ ತೊಂದರೆ ಉಂಟಾಗಬಹುದು.

ಆದಿತ್ಯ-L1 ಯೋಜನೆಯ ಬಗ್ಗೆ:

  • ವಿಶಿಷ್ಟತೆ: ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ. ಇದನ್ನು PSLV-C57 ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತದೆ.
  • ಈ ಸೌರ ಯೋಜನೆಯು ಬಾಹ್ಯಾಕಾಶ ನೌಕೆಯನ್ನು ನೇರವಾಗಿ ಸೂರ್ಯನ ಬಳಿಗೆ ಕಳುಹಿಸುವುದಿಲ್ಲ; ಬದಲಿಗೆ, ಗ್ರಹಣದ ಸಮಯದಲ್ಲೂ ಸೂರ್ಯನನ್ನು ತಡೆರಹಿತವಾಗಿ ವೀಕ್ಷಿಸಲು ಸಾಧ್ಯವಾಗುವಂತಹ ಬಾಹ್ಯಾಕಾಶ ವೀಕ್ಷಣಾಲಯವನ್ನು ಇದು ಸೃಷ್ಟಿಸುತ್ತದೆ.
  • ಭೂಮಿ-ಸೂರ್ಯ ವ್ಯವಸ್ಥೆಯ, ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ‘ಲ್ಯಾಗ್ರೇಂಜ್ ಬಿಂದು 1’ರ (L1) ಸುತ್ತಲಿನ ಹ್ಯಾಲೋ ಕಕ್ಷೆಯಲ್ಲಿ ಈ ಬಾಹ್ಯಾಕಾಶ ನೌಕೆಯನ್ನು ಇರಿಸಲು ಯೋಜಿಸಲಾಗಿದೆ.

ಯೋಜನೆಯ ಪ್ರಮುಖ ಉದ್ದೇಶಗಳು:

  • ಈ ಯೋಜನೆಯು ಸೂರ್ಯನ ಮೇಲ್ಮೈ ವಾತಾವರಣದ (ವರ್ಣಗೋಳ ಮತ್ತು ಕರೋನಾ) ಚಲನಶೀಲತೆಯ ಅಧ್ಯಯನದ ಮೇಲೆ ಗಮನಹರಿಸುತ್ತದೆ.
  • ಇದು ಬಾಹ್ಯಾಕಾಶ ಹವಾಮಾನಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸುವುದರ ಜೊತೆಗೆ, ಸೌರ ಮಾರುತದ ಮೂಲ, ಸಂಯೋಜನೆ ಮತ್ತು ಚಲನಶೀಲತೆಯನ್ನು ಗುರುತಿಸುತ್ತದೆ.

ಸೂರ್ಯನಿಗೆ ಸಂಬಂಧಿಸಿದ ಇತರ ಪ್ರಮುಖ ಯೋಜನೆಗಳು:

  • 2018 ರಲ್ಲಿ ಉಡಾವಣೆಯಾದ ನಾಸಾದ (NASA) ‘ಪಾರ್ಕರ್ ಸೋಲಾರ್ ಪ್ರೋಬ್’ ಈಗಾಗಲೇ ಸೂರ್ಯನಿಗೆ ಸಾಕಷ್ಟು ಹತ್ತಿರ ಹೋಗಿದೆ – ಆದರೆ ಅದು ಸೂರ್ಯನಿಂದಾಚೆಗೆ ಹೋಗುವ ಗುರಿಯನ್ನು ಇಟ್ಟುಕೊಂಡಿದೆ..
  • ಸೂರ್ಯನ ಮೇಲ್ಮೈ ಪ್ರಕ್ರಿಯೆಗಳನ್ನು ತನಿಖೆ ಮಾಡಲು ನಾಸಾ ಮತ್ತು ಅಂದಿನ ಪಶ್ಚಿಮ ಜರ್ಮನಿಯ ಬಾಹ್ಯಾಕಾಶ ಸಂಸ್ಥೆಯ ಜಂಟಿ ಯೋಜನೆಯಾದ ‘ಹೆಲಿಯೋಸ್ 2’ ಸೌರ ಪ್ರೋಬ್ ಅನ್ನು 1976 ರಲ್ಲಿ ಉಡಾವಣೆ ಮಾಡಲಾಯಿತು.

ಜಾಗತಿಕ ಪರಿಸರ ಮುನ್ನೋಟ (Global Environment Outlook)

ಸಾಮಾನ್ಯ ಅಧ್ಯಯನ-3/ ಪರಿಸರ

ಇದೀಗ ಸುದ್ದಿಯಲ್ಲಿದೆ: 

  • ಕೀನ್ಯಾದ ನೈರೋಬಿಯಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಸಭೆಯ 7ನೇ ಅಧಿವೇಶನದಲ್ಲಿ, ‘ಜಾಗತಿಕ ಪರಿಸರ ಮುನ್ನೋಟ, 7ನೇ ಆವೃತ್ತಿ: ಎ ಫ್ಯೂಚರ್ ವೀ ಚೂಸ್/ನಾವು ಆರಿಸಿಕೊಳ್ಳುವ ಭವಿಷ್ಯ (GEO-7) ದ ವರದಿಯನ್ನು ಬಿಡುಗಡೆ ಮಾಡಲಾಯಿತು.

ಜಾಗತಿಕ ಪರಿಸರ ಮುನ್ನೋಟ (GEO) ವರದಿಯ ಬಗ್ಗೆ:

  • ಪ್ರಕಟಿಸಿದವರು:- ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP).
  • ಉದ್ದೇಶ:- ಭೂಗ್ರಹದ ಪರಿಸರ ಆರೋಗ್ಯದ ಕುರಿತು ಸಮಗ್ರ ಮೌಲ್ಯಮಾಪನವನ್ನು ಒದಗಿಸುವುದು.
  • ಮಹತ್ವ:– ಸುಸ್ಥಿರ ಅಭಿವೃದ್ಧಿಯೆಡೆಗಿನ ಜಾಗತಿಕ ಕ್ರಮಗಳಿಗೆ ಮಾರ್ಗದರ್ಶನ ನೀಡಲು, ದತ್ತಾಂಶ-ಆಧಾರಿತ ಒಳನೋಟಗಳು ಮತ್ತು ನೀತಿ ಆಯ್ಕೆಗಳನ್ನು ಒದಗಿಸುವ ಮೂಲಕ ವಿಜ್ಞಾನ ಮತ್ತು ನೀತಿಯ ನಡುವಿನ ಅಂತರವನ್ನು ಕಡಿಮೆ ಮಾಡುವುದು.
  • ಇತ್ತೀಚಿನ ಆವೃತ್ತಿ: ಡಿಸೆಂಬರ್ 2025 ರಲ್ಲಿ, “ಎ ಫ್ಯೂಚರ್ ವೀ ಚೂಸ್” (ನಾವು ಆರಿಸಿಕೊಳ್ಳುವ ಭವಿಷ್ಯ) ಎಂಬ ಶೀರ್ಷಿಕೆಯಡಿ GEO ನ 7ನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

2025 ರ GEO-7 ವರದಿಯ ಪ್ರಮುಖ ಅಂಶಗಳು:

  • ಹವಾಮಾನ ಬದಲಾವಣೆ ಮತ್ತು ನಿರ್ಣಾಯಕ ಹಂತಗಳು: ಜಾಗತಿಕ ತಾಪಮಾನ ಏರಿಕೆಯು ವೇಗಗೊಳ್ಳುತ್ತಿದೆ; ವಿಶ್ವವು ಈಗಾಗಲೇ ಸರಿಸುಮಾರು 1.3°C ನಷ್ಟು ತಾಪಮಾನ ಏರಿಕೆಯನ್ನು ಕಂಡಿದೆ.
  • ಮಾಲಿನ್ಯ ಮತ್ತು ಆರೋಗ್ಯ: ವಾಯು, ಜಲ ಮತ್ತು ಮಣ್ಣಿನ ಮಾಲಿನ್ಯವು ಜಾಗತಿಕವಾಗಿ ಪ್ರತಿ ವರ್ಷ ಸುಮಾರು 90 ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ. ಕೇವಲ ವಾಯು ಮಾಲಿನ್ಯವೊಂದೇ ಪ್ರತಿ ವರ್ಷ ಲಕ್ಷಾಂತರ ಅಕಾಲಿಕ ಮರಣಗಳಿಗೆ ಕಾರಣವಾಗುತ್ತಿದೆ.
  • ಜೀವವೈವಿಧ್ಯತೆಯ ನಷ್ಟ ಮತ್ತು ಭೂಮಿಯ ಅವನತಿ: ಸುಮಾರು 10 ಲಕ್ಷ ಪ್ರಭೇದಗಳು ಅಳಿವಿನಂಚಿನಲ್ಲಿವೆ ಮತ್ತು 20-40% ರಷ್ಟು ಭೂಮಿ ಅವನತಿ ಹೊಂದಿದ್ದು, ಇದು 3 ಬಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts