23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ | 70ನೇ ಮಹಾಪರಿನಿರ್ವಾಣ ದಿವಸ | ಭಾರತದ ಅಂತರ್ಜಲ ಮಾಲಿನ್ಯ ಬಿಕ್ಕಟ್ಟು

23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ

ಸಾಮಾನ್ಯ ಅಧ್ಯಯನ -2/ ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:

  • ಭಾರತ ಮತ್ತು ರಷ್ಯಾ ತಮ್ಮ 23ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯನ್ನು ನಡೆಸಿದವು. ಇದು 2000ನೇ ಇಸವಿಯ ‘ಕಾರ್ಯತಂತ್ರದ  ಪಾಲುದಾರಿಕೆಯ ಮೇಲೆ ಘೋಷಣೆ’ಯ 25 ವರ್ಷಗಳ ಆಚರಣೆಯನ್ನು ಗುರುತಿಸುವ ಪ್ರಮುಖ ಮೈಲಿಗಲ್ಲಾಗಿದೆ.

ಭಾರತ -ರಷ್ಯಾ ಭೇಟಿಯ ಪ್ರಮುಖ ಫಲಿತಾಂಶಗಳು:

  • ಆರ್ಥಿಕ ಕಾರ್ಯಕ್ರಮ 2030: 2030 ರವರೆಗಿನ ಭಾರತ-ರಷ್ಯಾ ಆರ್ಥಿಕ ಸಹಕಾರದ ಕಾರ್ಯತಂತ್ರದ ಕ್ಷೇತ್ರಗಳ ಅಭಿವೃದ್ಧಿಗಾಗಿನ ಕಾರ್ಯಕ್ರಮದ (‘ಕಾರ್ಯಕ್ರಮ 2030’) ಅಳವಡಿಕೆಯನ್ನು ಉಭಯ ನಾಯಕರು ಸ್ವಾಗತಿಸಿದರು.
  • ವ್ಯಾಪಾರ ಗುರಿ, 2030: 2030 ರ ವೇಳೆಗೆ 100 ಶತಕೋಟಿ ಅಮೆರಿಕನ್ ಡಾಲರ್‌ಗಳ ಪರಿಷ್ಕೃತ ದ್ವಿಪಕ್ಷೀಯ ವ್ಯಾಪಾರ ಗುರಿಯನ್ನು ನಿಗದಿತ ಅವಧಿಯೊಳಗೆ ಸಾಧಿಸುವುದು.
  • ಸಹಿ ಹಾಕಲಾದ ಕಾರ್ಯತಂತ್ರದ ಒಪ್ಪಂದಗಳು: ರಕ್ಷಣೆ, ವ್ಯಾಪಾರ, ಆರ್ಥಿಕತೆ, ಆರೋಗ್ಯ ಸೇವೆ, ಶಿಕ್ಷಣ, ಸಂಸ್ಕೃತಿ ಮತ್ತು ಮಾಧ್ಯಮಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಭಾರತ ಮತ್ತು ರಷ್ಯಾ 16 ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡವು.
  • ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಒತ್ತು: ‘ಯುರೇಷಿಯನ್ ಆರ್ಥಿಕ ಒಕ್ಕೂಟ’ದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎರಡೂ ಕಡೆಯವರು ಕಾರ್ಯನಿರತರಾಗಿದ್ದಾರೆ.
  • ವಲಸೆ ಸಹಕಾರ: ರಷ್ಯಾದ ನಾಗರಿಕರಿಗಾಗಿ ಭಾರತವು ಶೀಘ್ರದಲ್ಲೇ ಉಚಿತ 30 ದಿನಗಳ ಇ-ಪ್ರವಾಸಿ ವೀಸಾ ಮತ್ತು 30 ದಿನಗಳ ‘ಗುಂಪು ಪ್ರವಾಸಿ ವೀಸಾ’ವನ್ನು ಜಾರಿಗೆ ತರಲಿದೆ.
  • ಜಾಗತಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ: ರಷ್ಯಾವು “ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ” (IBCA) ಕ್ಕೆ ಸೇರಲು ನಿರ್ಧರಿಸಿದೆ.

70ನೇ ಮಹಾಪರಿನಿರ್ವಾಣ ದಿವಸ

ಸಾಮಾನ್ಯ ಅಧ್ಯಯನ -1/ ಇತಿಹಾಸ

ಇದೀಗ ಸುದ್ದಿಯಲ್ಲಿದೆ:

  • ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಸಂಸತ್ತಿನ ಆವರಣದಲ್ಲಿ, ಮಹಾಪರಿನಿರ್ವಾಣ  ದಿವಸ’ದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಮಹಾಪರಿನಿರ್ವಾಣ ದಿವಸದ ಬಗ್ಗೆ:

  • ಅರ್ಥ: “ಪರಿನಿರ್ವಾಣ” ಎಂಬ ಪದವು ಬೌದ್ಧ ಧರ್ಮದ ಪ್ರಮುಖ ತತ್ವ ಹಾಗೂ ಗುರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಸಂಸ್ಕೃತ ಮೂಲದ ಪದವಾಗಿದ್ದು, ಇದು ಮರಣಾನಂತರದ ವಿಮೋಚನೆ ಅಥವಾ ಮುಕ್ತಿಯನ್ನು ಸೂಚಿಸುತ್ತದೆ.
  • ಬೌದ್ಧರ ಗ್ರಂಥವಾದ ಮಹಾಪರಿನಿಬ್ಬಾಣ ಸುತ್ತ’ ದ ಪ್ರಕಾರ, 80ನೇ ವಯಸ್ಸಿನಲ್ಲಿ ಸಂಭವಿಸಿದ ಭಗವಾನ್ ಗೌತಮ ಬುದ್ಧನ ಮರಣವನ್ನು ಮೂಲ ‘ಮಹಾಪರಿನಿರ್ವಾಣ’ ಎಂದು ಪರಿಗಣಿಸಲಾಗುತ್ತದೆ.
  • ಆಚರಣೆ: ಡಾ. ಭೀಮರಾವ್ ಅಂಬೇಡ್ಕರ್ ಅವರು ಸಮಾಜಕ್ಕೆ ಸಲ್ಲಿಸಿದ ಅನನ್ಯ ಸೇವೆ ಮತ್ತು ಅವರ ಸಾಧನೆಗಳನ್ನು ಸ್ಮರಿಸಲು ಪ್ರತಿವರ್ಷ ಡಿಸೆಂಬರ್ 6 ರಂದು ಈ ದಿನವನ್ನು ಆಚರಿಸಲಾಗುತ್ತದೆ.
  • ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮದ ಅಗ್ರಗಣ್ಯ ನಾಯಕರಾಗಿದ್ದರಿಂದ, ಅವರ ಪುಣ್ಯತಿಥಿಯನ್ನು ‘ಮಹಾಪರಿನಿರ್ವಾಣ ದಿವಸ’ ಎಂದು ಕರೆಯಲಾಗುತ್ತದೆ.

ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ಅವರ ಕುರಿತು: 

  • ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಶ್ರೇಷ್ಠ ಸಮಾಜ ಸುಧಾರಕ, ಕಾನೂನು ತಜ್ಞ, ಅರ್ಥಶಾಸ್ತ್ರಜ್ಞ, ಲೇಖಕ, ಬಹುಭಾಷಾ ಪಂಡಿತ, ವಾಗ್ಮಿ, ವಿದ್ವಾಂಸ ಮತ್ತು ಧಾರ್ಮಿಕ ಚಿಂತಕರಾಗಿದ್ದರು.
  • ಜನನ: ಇವರು 1891 ರಲ್ಲಿ ಸೆಂಟ್ರಲ್ ಪ್ರಾವಿನ್ಸ್‌ (ಪ್ರಸ್ತುತ  ಮಧ್ಯಪ್ರದೇಶ) ನ ಮಹೂವಿನಲ್ಲಿ (Mhow) ಜನಿಸಿದರು.
  • ಇವರನ್ನು ‘ಭಾರತೀಯ ಸಂವಿಧಾನದ ಪಿತಾಮಹ’ ಎಂದು ಕರೆಯಲಾಗುತ್ತದೆ. ಇವರು ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾಗಿದ್ದರು.
  • ಇವರು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು.
  • ಇವರು ದಲಿತರು ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಪ್ರಖ್ಯಾತ ಮುತ್ಸದ್ದಿಯಾಗಿದ್ದರು.

ಪ್ರಮುಖ ಕೊಡುಗೆಗಳು:

  • ಮಹಾಡ್ ಸತ್ಯಾಗ್ರಹ, 1927: ಅಸ್ಪೃಶ್ಯರಿಗೆ ಮಹಾಡ್ ನಲ್ಲಿರುವ ಚೌಡರ ಕೆರೆಯ ನೀರನ್ನು ಬಳಸಲು ನಿರಾಕರಿಸಿದ ಮುನ್ಸಿಪಲ್ ಬೋರ್ಡ್‌ನ ಕ್ರಮ ಮತ್ತು ಅದನ್ನು ಬೆಂಬಲಿಸಿದ ಸವರ್ಣೀಯರ ವಿರುದ್ಧ, ಮಾರ್ಚ್ 1927 ರಲ್ಲಿ ಇವರು ‘ಮಹಾಡ್ ಸತ್ಯಾಗ್ರಹ’ದ ನೇತೃತ್ವ ವಹಿಸಿದರು. (1926 ರಲ್ಲೇ ಮಹಾಡ್ ಮುನ್ಸಿಪಲ್ ಬೋರ್ಡ್ ಕೆರೆಯನ್ನು ಎಲ್ಲರಿಗೂ ಮುಕ್ತಗೊಳಿಸಲು ಆದೇಶಿಸಿತ್ತು).
  • ಇವರು ಮೂರೂ ದುಂಡು ಮೇಜಿನ ಸಮ್ಮೇಳನಗಳಲ್ಲಿಭಾಗವಹಿಸಿದರು.
  • ಪೂನಾ ಒಪ್ಪಂದ, 1932: ಡಾ. ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿಯವರೊಂದಿಗೆ “ಪೂನಾ ಒಪ್ಪಂದ”ಕ್ಕೆ ಸಹಿ ಹಾಕಿದರು. ಇದರ ಅನ್ವಯ ಶೋಷಿತ ವರ್ಗಗಳಿಗೆ ನೀಡಲಾದ ಪ್ರತ್ಯೇಕ ಮತಕ್ಷೇತ್ರಗಳ (ಕೋಮು ತೀರ್ಪು) ಕಲ್ಪನೆಯನ್ನು ಕೈಬಿಡಲಾಯಿತು.
  • ಬದಲಾಗಿ, ಪ್ರಾಂತೀಯ ಶಾಸಕಾಂಗಗಳಲ್ಲಿ ಶೋಷಿತ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳನ್ನು 71 ರಿಂದ 147 ಕ್ಕೆ ಮತ್ತು ಕೇಂದ್ರ ಶಾಸಕಾಂಗದಲ್ಲಿ ಒಟ್ಟು ಸ್ಥಾನಗಳ 18% ಕ್ಕೆ ಹೆಚ್ಚಿಸಲಾಯಿತು.
  • ಆರ್‌ಬಿಐ ಸ್ಥಾಪನೆ: ಹಿಲ್ಟನ್ ಯಂಗ್ ಆಯೋಗದ ಮುಂದೆ ಇವರು ಮಂಡಿಸಿದ ಆರ್ಥಿಕ ಪರಿಕಲ್ಪನೆಗಳು ‘ಭಾರತೀಯ ರಿಸರ್ವ್ ಬ್ಯಾಂಕ್’ ನ ಸ್ಥಾಪನೆಗೆ ಬುನಾದಿಯಾದವು. ಈ ಬ್ಯಾಂಕ್ “ದಿ ಪ್ರಾಬ್ಲಮ್ ಆಫ್ ದಿ ರುಪೀ: ಇಟ್ಸ್ ಒರಿಜಿನ್ ಅಂಡ್ ಇಟ್ಸ್ ಸೊಲ್ಯೂಷನ್” ಎಂಬ ಅವರ ಪ್ರಬಂಧದ ಆಧಾರದ ಮೇರೆಗೆ ಸ್ಥಾಪನೆಯಾಯಿತು.

ಚುನಾವಣೆ ಮತ್ತು ಹುದ್ದೆ:

  • 1937 ರಲ್ಲಿ, ಇವರು ಬಾಂಬೆ ಶಾಸನ ಸಭೆಗೆ ಶಾಸಕರಾಗಿ ಆಯ್ಕೆಯಾದರು.
  • 1942 ರಲ್ಲಿ ವೈಸ್‌ರಾಯ್ ಅವರ ಕಾರ್ಯಕಾರಿ ಮಂಡಳಿಗೆ ಕಾರ್ಮಿಕ ಸದಸ್ಯರಾಗಿ ನೇಮಕಗೊಂಡರು.
  • 1947 ರಲ್ಲಿ, ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಲು ಪ್ರಧಾನಿ ನೆಹರು ನೀಡಿದ ಆಹ್ವಾನವನ್ನು ಡಾ. ಅಂಬೇಡ್ಕರ್ ಒಪ್ಪಿಕೊಂಡರು.

ಬೌದ್ಧ ಧರ್ಮಕ್ಕೆ ಮತಾಂತರ:

  • ‘ಹಿಂದೂ ಕೋಡ್ ಬಿಲ್’ ಮೇಲಿನ ಭಿನ್ನಾಭಿಪ್ರಾಯಗಳಿಂದಾಗಿ 1951 ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. 1956 ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
  • 1990 ರಲ್ಲಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ವನ್ನು (ಮರಣೋತ್ತರವಾಗಿ) ನೀಡಲಾಯಿತು.

ಪ್ರಮುಖ ಪತ್ರಿಕೆಗಳು ಮತ್ತು ಕೃತಿಗಳು:

    • ಪತ್ರಿಕೆಗಳು: ಮೂಕನಾಯಕ (1920), ಬಹಿಷ್ಕೃತ ಭಾರತ (1927), ಸಮತಾ (1929), ಜನತಾ (1930).
    • ಕೃತಿಗಳು:
  • ಅನಿಹಿಲೇಷನ್ ಆಫ್ ಕಾಸ್ಟ್
      • ಬುದ್ಧ ಆರ್ ಕಾರ್ಲ್ ಮಾರ್ಕ್ಸ್
      • ದಿ ಅನ್ ಟಚೇಬಲ್ಸ್ : ಹೂ ಆರ್ ದೇ ಅಂಡ್ ವೈ ದೇ ಹ್ಯಾವ್ ಬಿಕಮ್ ಅನ್ ಟಚೇಬಲ್ಸ್ 
  • ಬುದ್ಧ ಅಂಡ್ ಹಿಸ್ ಧಮ್ಮ 
    • ದಿ ರೈಸ್ ಅಂಡ್ ಫಾಲ್ ಆಫ್ ಹಿಂದೂ ವುಮೆನ್

ಸಂಘಟನೆಗಳು:

  • ಬಹಿಷ್ಕೃತ ಹಿತಕಾರಿಣಿ ಸಭೆ (1923)
  • ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಸ್ವತಂತ್ರ ಕಾರ್ಮಿಕ ಪಕ್ಷ – 1936)
  • ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್ (ಪರಿಶಿಷ್ಟ ಜಾತಿಗಳ ಒಕ್ಕೂಟ – 1942)

ನಿಧನ:

  • ಡಾ. ಅಂಬೇಡ್ಕರ್ ಅವರು ಡಿಸೆಂಬರ್ 6, 1956 ರಂದು ನಿಧನರಾದರು.
  • ಮುಂಬೈನಲ್ಲಿರುವ ‘ಚೈತ್ಯ ಭೂಮಿ’ ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕವಾಗಿದೆ.

ಪ್ರಸ್ತುತ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರ ಪ್ರಸ್ತುತತೆ: 

  • ಭಾರತದಲ್ಲಿ ಜಾತಿ ಆಧಾರಿತ ಅಸಮಾನತೆ ಇನ್ನೂ ಜೀವಂತವಾಗಿದೆ. ಮೀಸಲಾತಿ ಮತ್ತು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ಸಂಘಟಿಸಿಕೊಳ್ಳುವ ಮೂಲಕ ದಲಿತರು ರಾಜಕೀಯ ಅಸ್ಮಿತೆಯನ್ನು ಕಂಡುಕೊಂಡಿದ್ದರೂ, ಸಾಮಾಜಿಕ (ಆರೋಗ್ಯ ಮತ್ತು ಶಿಕ್ಷಣ) ಮತ್ತು ಆರ್ಥಿಕ ಆಯಾಮಗಳಲ್ಲಿ ಅವರು ಇನ್ನೂ ಹಿಂದುಳಿದಿದ್ದಾರೆ.

ಭಾರತದ ಅಂತರ್ಜಲ ಮಾಲಿನ್ಯ ಬಿಕ್ಕಟ್ಟು

ಸಾಮಾನ್ಯ ಅಧ್ಯಯನ -3/ ಪರಿಸರ

ಇದೀಗ ಸುದ್ದಿಯಲ್ಲಿದೆ:

  • ಭಾರತದ ಜಲಧಾರಗಳಲ್ಲಿ ವಿಷಕಾರಿ ಮಾಲಿನ್ಯಕಾರಕಗಳ ಪ್ರಮಾಣವು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದನ್ನು ‘ಕೇಂದ್ರ ಅಂತರ್ಜಲ ಮಂಡಳಿ’ (CGWB) ಎತ್ತಿ ತೋರಿಸಿದೆ.

ಭಾರತದ ಅಂತರ್ಜಲ ಮಾಲಿನ್ಯ ಬಿಕ್ಕಟ್ಟಿನ ಬಗ್ಗೆ:

  • ಭಾರತವು ವಿಶ್ವದ ಜನಸಂಖ್ಯೆಯ 18% ರಷ್ಟನ್ನು ಹೊಂದಿದ್ದರೂ, ಕೇವಲ 4% ರಷ್ಟು ಸಿಹಿನೀರಿನ ಸಂಪನ್ಮೂಲಗಳನ್ನು ಹೊಂದಿದೆ. ಇದು ಲಭ್ಯವಿರುವ ನೀರಿನ ವ್ಯವಸ್ಥೆಗಳ ಮೇಲೆ ಭಾರೀ ಒತ್ತಡವನ್ನು ಹೇರುತ್ತಿದೆ.
  • ಭಾರತವು ತನ್ನ ಗ್ರಾಮೀಣ ಕುಡಿಯುವ ನೀರಿನ ಅಗತ್ಯಗಳಿಗಾಗಿ ಸುಮಾರು 85% ರಷ್ಟು ಮತ್ತು ನೀರಾವರಿಗಾಗಿ ಸುಮಾರು 60% ರಷ್ಟು ಅಂತರ್ಜಲವನ್ನೇ ಅವಲಂಬಿಸಿದೆ.
  • ಭಾರತದ ಜಲಧಾರಗಳು ಆರ್ಸೆನಿಕ್, ಫ್ಲೋರೈಡ್, ನೈಟ್ರೇಟ್, ಯುರೇನಿಯಂ, ಲವಣಾಂಶ ಮತ್ತು ಭಾರ ಲೋಹಗಳಿಂದ ಏಕಕಾಲದಲ್ಲಿ ಕಲುಷಿತಗೊಳ್ಳುತ್ತಿವೆ.

ಸರ್ಕಾರಿ ಉಪಕ್ರಮಗಳು:

  • ಜಲ ಶಕ್ತಿ ಅಭಿಯಾನ, 2019:- ಇದು ನೀರಿನ ಸಂರಕ್ಷಣೆ ಮತ್ತು ನೀರಿನ ಅಭಾವವಿರುವ ಜಿಲ್ಲೆಗಳಲ್ಲಿ ಅಂತರ್ಜಲ ಮರುಪೂರಣದ/ ಪುನರ್‌ಭರ್ತಿ ಮೇಲೆ ಕೇಂದ್ರೀಕರಿಸುತ್ತದೆ.
  • ಅಮೃತ್ ಸರೋವರ್ ಮಿಷನ್: ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.
  • ರಾಷ್ಟ್ರೀಯ ಜಲಧಾರ ನಕ್ಷೆ ತಯಾರಿಕೆ ಮತ್ತು ನಿರ್ವಹಣಾ ಕಾರ್ಯಕ್ರಮ (NAQUIM): ಸುಸ್ಥಿರ ನಿರ್ವಹಣೆಗಾಗಿ ಜಲಧರಗಳ ವ್ಯಾಪ್ತಿಯನ್ನು ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
  • ಅಟಲ್ ಭೂಜಲ್ ಯೋಜನೆ: ನಿರ್ಣಾಯಕ ಮತ್ತು ಅತಿಯಾಗಿ ಬಳಸಿಕೊಂಡ ವಲಯಗಳನ್ನು ಹೊಂದಿರುವ ಆದ್ಯತೆಯ ಪ್ರದೇಶಗಳಲ್ಲಿ, ಅಂತರ್ಜಲ ನಿರ್ವಹಣೆಯನ್ನು ಸುಧಾರಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts