ವಿಶ್ವ ಏಡ್ಸ್ ದಿನ
ಸಾಮಾನ್ಯ ಅಧ್ಯಯನ -2/ಆರೋಗ್ಯ

ಇದೀಗ ಸುದ್ದಿಯಲ್ಲಿದೆ:
- ಪ್ರತಿ ವರ್ಷ ಡಿಸೆಂಬರ್ 1 ರಂದು ‘ವಿಶ್ವ ಏಡ್ಸ್ ದಿನ’ವನ್ನು ಆಚರಿಸಲಾಗುತ್ತದೆ.
ವಿಶ್ವ ಏಡ್ಸ್ ದಿನದ ಮಹತ್ವ:
- ಎಚ್ಐವಿ/ಏಡ್ಸ್ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
- ಇದನ್ನು ಮೊದಲ ಬಾರಿಗೆ 1988 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿತು.
- 2025ರ ಧ್ಯೇಯವಾಕ್ಯ: “ಅಡಚಣೆಯನ್ನು ದಾಟಿ (ಮೀರಿ), ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು”
ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (AIDS) ನ ಬಗ್ಗೆ:
- ರೋಗಕಾರಕ:- ಇದು ದೀರ್ಘಕಾಲದ, ಸಂಭಾವ್ಯವಾಗಿ ಪ್ರಾಣಾಪಾಯಕಾರಿ ಆರೋಗ್ಯ ಸ್ಥಿತಿಯಾಗಿದ್ದು, “ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್” (HIV) ನಿಂದ ಉಂಟಾಗುತ್ತದೆ. ಇದು ಮಾನವನ ರೋಗನಿರೋಧಕ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
- ಹರಡುವಿಕೆ:- ಸೋಂಕಿತ ವ್ಯಕ್ತಿಯ ದೇಹದ ದ್ರವಗಳಾದ ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವ ಅಥವಾ ಎದೆ ಹಾಲಿನ ನೇರ ಸಂಪರ್ಕದ ಮೂಲಕ ಇದು ಹರಡುತ್ತದೆ.
- ಈ ರೋಗದ ಲಕ್ಷಣಗಳು:
- ಹಂತ 1: ಜ್ವರದಂತಹ ಅನಾರೋಗ್ಯ (ಜ್ವರ, ಚಳಿ, ದದ್ದುಗಳು, ರಾತ್ರಿ ಬೆವರುವಿಕೆ).
- ಹಂತ 2: ವೈದ್ಯಕೀಯ ವಿಳಂಬ (ಯಾವುದೇ ನಿರ್ದಿಷ್ಟ ರೋಗ ಲಕ್ಷಣಗಳಿಲ್ಲ).
- ಹಂತ 3: ಏಡ್ಸ್ (ರೋಗನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುವುದು).
- ತಡೆಗಟ್ಟುವಿಕೆ:- “ಚಿಕಿತ್ಸೆಗಿಂತ ತಡೆಗಟ್ಟುವಿಕೆ ಲೇಸು”. ರಕ್ಷಣಾತ್ಮಕ ತಂತ್ರಗಳನ್ನು ಬಳಸುವುದು, ಕಲುಷಿತವಾಗದ ಸೂಜಿಗಳನ್ನು ಉಪಯೋಗಿಸುವುದು ಮತ್ತು ತಾಯಿಯಿಂದ ಮಗುವಿಗೆ ಹರಡುವುದನ್ನು ತಡೆಯುವುದು ಅತ್ಯಗತ್ಯವಾಗಿದೆ.
- ಚಿಕಿತ್ಸೆ:- ಹೆಚ್ಐವಿ ಸೋಂಕಿಗೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಆದಾಗ್ಯೂ, ಆಂಟಿರೀಟ್ರೋವೈರಲ್ ಔಷಧಿಗಳೊಂದಿಗೆ (ART) ಚಿಕಿತ್ಸೆ ನೀಡಲಾಗುತ್ತದೆ. ಇವು ದೇಹದಲ್ಲಿ ವೈರಸ್ ಸ್ವಪ್ರತೀಕರಣಗೊಳ್ಳುವುದನ್ನು ತಡೆಯುತ್ತವೆ.
|
ಗಮನಿಸಿ: ಚಿಕಿತ್ಸೆ ನೀಡದ ಹೆಚ್ಐವಿ, ಏಡ್ಸ್ ಆಗಿ ಪರಿವರ್ತನೆಗೊಳ್ಳಬಹುದು, ಇದು ಸಾಮಾನ್ಯವಾಗಿ ಹಲವು ವರ್ಷಗಳ ನಂತರ ಸಂಭವಿಸುತ್ತದೆ. |
ಭಾರತ ಸರ್ಕಾರ ಕೈಗೊಂಡ ಕ್ರಮಗಳು
- ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP):- ಇದೊಂದು ಕೇಂದ್ರ ವಲಯದ ಯೋಜನೆಯಾಗಿದೆ.
- ಹೆಚ್ಐವಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಮತ್ತು ಹಿಮ್ಮೆಟ್ಟಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 3 (SDG 3) ಭಾರತ ಸಾಧಿಸಿದೆ.
- ಪಿಪಿಟಿಸಿಟಿ (PPTCT)- ಪೋಷಕರಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಗಟ್ಟುವ ಕಾರ್ಯಕ್ರಮ.
- ಹೆಚ್ಐವಿ /ಏಡ್ಸ್ ಕಾಯ್ದೆ, 2017:– ಹೆಚ್ಐವಿ -ಸೋಂಕಿತ ಜನರ ವಿರುದ್ಧ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.
- UNAIDS- 90:90:90 ಕಾರ್ಯತಂತ್ರ:– ಇದು UNAIDS ಸಂಸ್ಥೆ ಅಳವಡಿಸಿಕೊಂಡಿರುವ ಕಾರ್ಯತಂತ್ರವಾಗಿದೆ. {2020 ರ ವೇಳೆಗೆ 90% ರೋಗನಿರ್ಣಯ, 90% ಚಿಕಿತ್ಸೆ (ಆಂಟಿರೀಟ್ರೋವೈರಲ್ ಚಿಕಿತ್ಸೆಯೊಂದಿಗೆ – ART ಮೂಲಕ) ಮತ್ತು 90% ವೈರಾಣು ನಿಗ್ರಹ} ಇದನ್ನು ಈಗ 95-95-95 ಗುರಿಯೊಂದಿಗೆ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ.
- “ಪ್ರಾಜೆಕ್ಟ್ ಆಕ್ಸಿಲರೇಟ್” (ACCELERATE):– ಇದು ಜಾನ್ ಹಾಕಿನ್ ಮತ್ತು ನ್ಯಾಕೋ (NACO) ಸಂಸ್ಥೆಯ ಉಪಕ್ರಮವಾಗಿದ್ದು, ‘ಸೇಫ್ ಜಿಂದಗಿ’ ಆನ್ಲೈನ್ ಪೋರ್ಟಲ್ ಮೂಲಕ ಹೆಚ್ಐವಿ ಸೇವೆಗಳನ್ನು ಒದಗಿಸುತ್ತದೆ.
- ಮಿಷನ್ ಸಂಪರ್ಕ್:- ಆಂಟಿರೀಟ್ರೋವೈರಲ್ ಥೆರಪಿಯನ್ನು (ART) ಅರ್ಧಕ್ಕೆ ನಿಲ್ಲಿಸಿದ, ಹೆಚ್ಐವಿ ಯೊಂದಿಗೆ ಬದುಕುತ್ತಿರುವ ಜನರನ್ನು (PLHIV) ಮರಳಿ ಚಿಕಿತ್ಸೆಗೆ ತರುವುದು ಇದರ ಉದ್ದೇಶವಾಗಿತ್ತು.
ಭಾರತದ ಪರಮಾಣು ವಲಯದಲ್ಲಿ ಖಾಸಗಿ ವಲಯದ ಪ್ರವೇಶ
ಸಾಮಾನ್ಯ ಅಧ್ಯಯನ -3/ ಇಂಧನ/ಶಕ್ತಿ

ಇದೀಗ ಸುದ್ದಿಯಲ್ಲಿದೆ:
- ಪರಮಾಣು ವಲಯವನ್ನು ಖಾಸಗಿ ಪಾಲುದಾರರಿಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಹೆಜ್ಜೆ ಇಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಭಾರತದ ಪರಮಾಣು ವಲಯ:
- ನಿರ್ವಹಣೆ:- ಪ್ರಸ್ತುತ, ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳು “ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ” (NPCIL) ಒಡೆತನದಲ್ಲಿದ್ದು, ಸಂಪೂರ್ಣವಾಗಿ ಆ ಸಂಸ್ಥೆಯಿಂದಲೇ ನಿರ್ವಹಿಸಲ್ಪಡುತ್ತವೆ.
- ಪ್ರಮುಖ ಕಾನೂನುಗಳು:- ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲು, ಸರ್ಕಾರವು ಈ ಕೆಳಗಿನ ಪ್ರಮುಖ ಕಾನೂನುಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಿದೆ:
- ಪರಮಾಣು ಶಕ್ತಿ ಕಾಯ್ದೆ, 1962: ಇದು ಪರಮಾಣು ಶಕ್ತಿಯ ಅಭಿವೃದ್ಧಿ ಮತ್ತು ನಿಯಂತ್ರಣಕ್ಕೆ ಅಗತ್ಯವಿರುವ ಮೂಲ ಚೌಕಟ್ಟನ್ನು ಒದಗಿಸುತ್ತದೆ.
- ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010: ಪರಮಾಣು ಅವಘಡಗಳು ಸಂಭವಿಸಿದಾಗ ಪರಿಹಾರ ನೀಡುವ ಕಾರ್ಯವಿಧಾನಗಳನ್ನು ಇದು ಖಾತ್ರಿಪಡಿಸುತ್ತದೆ.
ಪರಮಾಣು ಶಕ್ತಿಯ ಬಗ್ಗೆ:
- ವ್ಯಾಖ್ಯಾನ:- ಪರಮಾಣು ಕ್ರಿಯೆಗಳ ಸಮಯದಲ್ಲಿ ಬಿಡುಗಡೆಯಾಗುವ ಶಕ್ತಿಯೇ ‘ಪರಮಾಣು ಶಕ್ತಿ’. ಇದು ವಿದಳನ (ಪರಮಾಣು ನ್ಯೂಕ್ಲಿಯಸ್ಗಳ ವಿಭಜನೆ) ಅಥವಾ ಸಮ್ಮಿಲನ (ಪರಮಾಣು ನ್ಯೂಕ್ಲಿಯಸ್ಗಳ ವಿಲೀನ) ಪ್ರಕ್ರಿಯೆಯ ಮೂಲಕ ಬಿಡುಗಡೆಯಾಗುತ್ತದೆ.
ಭಾರತದಲ್ಲಿ ಪರಮಾಣು ವಿದ್ಯುತ್ ಸಾಮರ್ಥ್ಯದ ಸ್ಥಿತಿಗತಿ:
- ಪ್ರಸ್ತುತ ಸಾಮರ್ಥ್ಯ:- 8,180 ಮೆಗಾವ್ಯಾಟ್ (MW) ಆಗಿದ್ದು, ಇದು 24 ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಹಂಚಿಕೆಯಾಗಿದೆ.
- ಭವಿಷ್ಯದ ಗುರಿ:- 2047 ರ ವೇಳೆಗೆ 100 GW ಪರಮಾಣು ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಗುರಿ.
- ಸಾಮರ್ಥ್ಯ ವಿಸ್ತರಣೆ:- ಗುಜರಾತ್, ರಾಜಸ್ಥಾನ, ತಮಿಳುನಾಡು, ಹರಿಯಾಣ, ಕರ್ನಾಟಕ ಮತ್ತು ಮಧ್ಯಪ್ರದೇಶದಾದ್ಯಂತ 10 ಹೊಸ ಸ್ಥಾವರಗಳು (ಒಟ್ಟು 8 GW ಸಾಮರ್ಥ್ಯ) ನಿರ್ಮಾಣ ಹಂತದಲ್ಲಿವೆ.
ಭಾರತದ ಪ್ರಮುಖ ಪರಮಾಣು ವಿದ್ಯುತ್ ಸ್ಥಾವರಗಳು:
|
ಪರಮಾಣು ವಿದ್ಯುತ್ ಸ್ಥಾವರ |
ರಾಜ್ಯ |
ಒಟ್ಟು ಸಾಮರ್ಥ್ಯ (MW ಗಳಲ್ಲಿ) |
|
ತಾರಾಪುರ |
ಮಹಾರಾಷ್ಟ್ರ |
1,400 |
|
ರಾವತಭಾಟ |
ರಾಜಸ್ಥಾನ |
1,180 |
|
ಕುಂದಕುಳಂ |
ತಮಿಳುನಾಡು |
2,000 |
|
ಕೈಗಾ |
ಕರ್ನಾಟಕ |
880 |
|
ಕಾಕ್ರಪಾರ |
ಗುಜರಾತ್ |
1140 |
|
ಕಲ್ಪಕ್ಕಂ |
ತಮಿಳುನಾಡು |
440 |
|
ನರೋರಾ |
ಉತ್ತರ ಪ್ರದೇಶ |
440 |
ಪ್ರಸ್ತಾಪಿತ/ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಸ್ಥಾವರಗಳು:
|
ವಿದ್ಯುತ್ ಸ್ಥಾವರ |
ನಿರ್ವಹಿಸುವ ಸಂಸ್ಥೆ |
ರಾಜ್ಯ |
ಒಟ್ಟು ಸಾಮರ್ಥ್ಯ (MW ಗಳಲ್ಲಿ) |
|
ಜೈಠಾಪುರ |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ಮಹಾರಾಷ್ಟ್ರ |
9,900 |
|
ಕೊವ್ವಾಡ |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ಆಂಧ್ರ ಪ್ರದೇಶ |
6,600 |
|
ಮಿಥಿ ವಿರ್ಡಿ |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ಗುಜರಾತ |
6,000 |
|
ಹರಿಪುರ |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ಪಶ್ಚಿಮ ಬಂಗಾಳ |
4,000 |
|
ಕುಂದಕುಳಂ (ವಿಸ್ತರಣೆ) |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ತಮಿಳುನಾಡು |
2,800 |
|
ಗೋರಖ್ಪುರ |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ಹರಿಯಾಣ |
2,800 |
|
ಭೀಮ್ಪುರ |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ಮಧ್ಯ ಪ್ರದೇಶ |
2,800 |
|
ಮಹಿ ಬನ್ಸ್ವಾರ |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ರಾಜಸ್ಥಾನ |
1,400 |
|
ಕೈಗಾ (ವಿಸ್ತರಣೆ) |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ಕರ್ನಾಟಕ |
1,400 |
|
ಚುಟ್ಕಾ |
ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) |
ಮಧ್ಯ ಪ್ರದೇಶ |
1,200 |
|
ಮದ್ರಾಸ್ |
ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ನಿಯಮಿತ |
ತಮಿಳುನಾಡು |
300 |
ಎಲ್ಲೋರಾ ಗುಹೆಗಳು
ಸಾಮಾನ್ಯ ಅಧ್ಯಯನ : -1/ ಇತಿಹಾಸ ಮತ್ತು ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:
- ಎಲ್ಲೋರಾ ಗುಹೆಗಳ ಸುತ್ತಮುತ್ತಲಿರುವ, ಕಡಿಮೆ ಪ್ರಚಲಿತದಲ್ಲಿರುವ ಪಾರಂಪರಿಕ ತಾಣಗಳಿಗೆ ಹೆಚ್ಚಿನ ಪ್ರಚಾರ ಮತ್ತು ಮನ್ನಣೆ ನೀಡುವಂತೆ ಪ್ರಸಿದ್ಧ ಸ್ಕಾಟ್ಲೆಂಡಿನ ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಅವರು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಲ್ಲೋರಾ ಗುಹೆಗಳ ಬಗ್ಗೆ:
- ಸ್ಥಳ:- ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಜಿಲ್ಲೆಯಲ್ಲಿರುವ ಎಲ್ಲೋರಾ ಗುಹೆಗಳು, ಭಾರತದ ಪ್ರಪ್ರಥಮ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿವೆ.
- ಕಾಲಘಟ್ಟ:- ಈ ಗುಹೆಗಳ ಸಂಕೀರ್ಣವನ್ನು ಕ್ರಿ.ಶ. 600 ಮತ್ತು ಕ್ರಿ.ಶ.1000 ರ ನಡುವಿನ ಅವಧಿಯಲ್ಲಿ ಕೆತ್ತಲಾಗಿದೆ. ಇದು ಪ್ರಮುಖವಾಗಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಯಾದವರ ಆಳ್ವಿಕೆಯ ಕಾಲಘಟ್ಟವನ್ನು ಪ್ರತಿನಿಧಿಸುತ್ತದೆ.
- ಧಾರ್ಮಿಕ ಬಹುತ್ವ:– ಈ ಸಂಕೀರ್ಣವು ಒಟ್ಟು 34 ಪ್ರಮುಖ ಗುಹೆಗಳನ್ನು ಒಳಗೊಂಡಿದೆ (12 ಬೌದ್ಧ, 17 ಹಿಂದೂ ಮತ್ತು 5 ಜೈನ ಗುಹೆಗಳು). ಇದು ಅಂದಿನ ಕಾಲದ ವಿಶಿಷ್ಟವಾದ ಅಂತರ್ಧರ್ಮೀಯ ಸಾಮರಸ್ಯ ಮತ್ತು ಕಲಾತ್ಮಕ ವಿನಿಮಯಕ್ಕೆ ಸಾಕ್ಷಿಯಾಗಿದೆ.
ಪ್ರಮುಖ ವಾಸ್ತುಶಿಲ್ಪದ ಲಕ್ಷಣಗಳು:
- ಕೈಲಾಸನಾಥ ದೇವಾಲಯ (ಗುಹೆ 16):- ಇದನ್ನು ಬೃಹತ್ ಏಕಶಿಲಾ ಜ್ವಾಲಾಮುಖಿ (ಬಸಾಲ್ಟ್) ಶಿಲೆಯಿಂದ ಕೆತ್ತಲಾಗಿದೆ. ಇದು ಹಿಂದೂಗಳ ದೇವರಾದ ಶಿವನಿಗೆ ಸಮರ್ಪಿತವಾದ ಅದ್ಭುತ ರಚನೆಯಾಗಿದೆ.
- ಬೌದ್ಧ ಗುಹೆಗಳು:- ಇವುಗಳಲ್ಲಿ ಪ್ರಮುಖವಾಗಿ ಬೌದ್ಧ ಸನ್ಯಾಸಿಗಳ ವಸತಿಗಳಾದ ವಿಹಾರಗಳು ಮತ್ತು ಪ್ರಾರ್ಥನಾ ಮಂದಿರಗಳಾದ ಚೈತ್ಯಾಲಯಗಳನ್ನು ಕಾಣಬಹುದು.
- ಜೈನ ಗುಹೆಗಳು:– ಎಲ್ಲೋರಾ ನಿರ್ಮಾಣದ ಅಂತಿಮ ಅಥವಾ ನಂತರದ ಹಂತದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.


ಹಾರ್ನ್ಬಿಲ್ ಉತ್ಸವ
ಸಾಮಾನ್ಯ ಅಧ್ಯಯನ : 1/ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:
- “ಉತ್ಸವಗಳ ಉತ್ಸವ” ಎಂದೇ ಖ್ಯಾತಿಯಾಗಿರುವ ನಾಗಾಲ್ಯಾಂಡ್ನ ಪ್ರಸಿದ್ಧ “ಹಾರ್ನ್ಬಿಲ್” ಉತ್ಸವದ 26ನೇ ಆವೃತ್ತಿಯು, ಕೊಹಿಮಾದ ಕಿಸಾಮಾದಲ್ಲಿರುವ “ನಾಗಾ ಪರಂಪರೆ ಗ್ರಾಮ”ದಲ್ಲಿ ಆರಂಭಗೊಂಡಿದೆ. ಇದು ರಾಜ್ಯದ ‘ರಾಜ್ಯೋತ್ಸವ ದಿನ’ದೊಂದಿಗೆ (ಡಿಸೆಂಬರ್ 1) ಕಾಕತಾಳೀಯವಾಗಿ ಜರುಗುತ್ತದೆ.
ಹಾರ್ನ್ಬಿಲ್ ಉತ್ಸವದ ಬಗ್ಗೆ:
- ಸಮಯ ಮತ್ತು ಸ್ಥಳ:- ಇದು ವಾರ್ಷಿಕವಾಗಿ ಡಿಸೆಂಬರ್ ಮೊದಲ ವಾರದಲ್ಲಿ ಕೊಹಿಮಾ ಸಮೀಪದ ಕಿಸಾಮಾದಲ್ಲಿ ನಡೆಯುತ್ತದೆ.
- ವೈಶಿಷ್ಟ್ಯ:- ಇದು ಎಲ್ಲಾ ನಾಗಾ ಬುಡಕಟ್ಟುಗಳ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನವಾಗಿದೆ.
ಹಾರ್ನ್ಬಿಲ್ ಉತ್ಸವದ ಮಹತ್ವ:
- ಉದ್ದೇಶ:– ಏಕತೆಯನ್ನು ಉತ್ತೇಜಿಸಲು ಮತ್ತು ಜನಾಂಗೀಯ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಇದನ್ನು 2000ನೇ ಇಸವಿಯಲ್ಲಿ ರೂಪಿಸಿ ಆರಂಭಿಸಲಾಯಿತು.
- ಸಂಸ್ಕೃತಿ ಪ್ರದರ್ಶನ:– ಇದು ಸಂಗೀತ, ಕರಕುಶಲ ವಸ್ತುಗಳು, ತಿನಿಸು ಮತ್ತು ಜಾನಪದಗಳ ಮೂಲಕ ಸಾಂಪ್ರದಾಯಿಕ ಮತ್ತು ಸಮಕಾಲೀನ ನಾಗಾ ಸಂಸ್ಕೃತಿ ಎರಡನ್ನೂ ಎತ್ತಿ ತೋರಿಸುತ್ತದೆ.
ಗ್ರೇಟರ್ ಹಾರ್ನ್ಬಿಲ್ ನ ಬಗ್ಗೆ:

- ವೈಜ್ಞಾನಿಕ ಹೆಸರು:- ಬ್ಯುಸೆರೋಸ್ ಬೈಕಾರ್ನಿಸ್
- ಇತರ ಹೆಸರುಗಳು:- ಇದನ್ನು ಕಾನ್ಕೇವ್-ಕ್ಯಾಸ್ಕ್ಡ್ ಹಾರ್ನ್ಬಿಲ್, ಗ್ರೇಟ್ ಇಂಡಿಯನ್ ಹಾರ್ನ್ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ಬಿಲ್ ಎಂತಲೂ ಕರೆಯಲಾಗುತ್ತದೆ.
- ಆವಾಸಸ್ಥಾನ:- ಇದು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ.
- ವೈಶಿಷ್ಟ್ಯ:- ಗ್ರೇಟರ್ ಹಾರ್ನ್ಬಿಲ್ನ ಅತ್ಯಂತ ಪ್ರಮುಖ ಲಕ್ಷಣವೆಂದರೆ ಅದರ ಬೃಹತ್ ಕೊಕ್ಕಿನ ಮೇಲಿರುವ ಪ್ರಕಾಶಮಾನವಾದ ಹಳದಿ ಮತ್ತು ಕಪ್ಪು ಬಣ್ಣದ ಶಿರಸ್ತ್ರಾಣ/ ತಲೆಕವಚ (‘ಕ್ಯಾಸ್ಕ್’- ಕೆಲವು ಪಕ್ಷಿಗಳ ತಲೆಯ ಮೇಲಿರುವ ಗಟ್ಟಿಯಾದ ರಚನೆ).
- ಉತ್ಸವ:- ಹಾರ್ನ್ಬಿಲ್ ಉತ್ಸವವನ್ನು ನಾಗಾಲ್ಯಾಂಡ್ನಲ್ಲಿ ಆಚರಿಸಲಾಗುತ್ತದೆ.
- ರಾಜ್ಯ ಪಕ್ಷಿ:- ಗ್ರೇಟರ್ ಹಾರ್ನ್ಬಿಲ್ ಅರುಣಾಚಲ ಪ್ರದೇಶ ಮತ್ತು ಕೇರಳದ ರಾಜ್ಯ ಪಕ್ಷಿಯಾಗಿದೆ.
ಸಂರಕ್ಷಣಾ ಸ್ಥಿತಿ:
- IUCN ಕೆಂಪುಪಟ್ಟಿಯಲ್ಲಿ ಸ್ಥಿತಿ:- ದುರ್ಬಲ (Vu).
- ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972:- ಅನುಸೂಚಿ I.
ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಭಾರತ ಮರು ಆಯ್ಕೆಯಾಗಿದೆ
ಸಾಮಾನ್ಯ ಅಧ್ಯಯನ : 2/ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಭಾರತವು ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ 2025-29ರ ಅವಧಿಗೆ ಮರು ಆಯ್ಕೆಯಾಗಿದೆ.
ಯುನೆಸ್ಕೋದ ಕಾರ್ಯಕಾರಿ ಮಂಡಳಿಯ ಬಗ್ಗೆ:
- ರಚನೆ:- ಇದು ವಿಶ್ವಸಂಸ್ಥೆಯ ಮೂರು ಸಾಂವಿಧಾನಿಕ ಅಂಗಗಳಲ್ಲಿ ಒಂದಾಗಿದೆ. (ಉಳಿದ ಎರಡು ಅಂಗಗಳೆಂದರೆ ‘ಸಾಮಾನ್ಯ ಸಮ್ಮೇಳನ’ ಮತ್ತು ‘ಸಚಿವಾಲಯ’). ಈ ಮಂಡಳಿಯನ್ನು ಸಾಮಾನ್ಯ ಸಮ್ಮೇಳನವು ಆಯ್ಕೆ ಮಾಡುತ್ತದೆ.
- ಅಧಿಕಾರ:- ಇದು ಸಾಮಾನ್ಯ ಸಮ್ಮೇಳನದ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಕಾರ್ಯಗಳು:- ಇದು ಮಹಾನಿರ್ದೇಶಕರು ಸಲ್ಲಿಸಿದ ಸಂಸ್ಥೆಯ ಕೆಲಸದ ಕಾರ್ಯಕ್ರಮ ಮತ್ತು ಅದಕ್ಕೆ ಸಂಬಂಧಿಸಿದ ಆಯಾವ್ಯಾಯ ಅಂದಾಜುಗಳನ್ನು ಪರಿಶೀಲಿಸುತ್ತದೆ.
- ಸದಸ್ಯತ್ವ:- ಇದು 58 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದ್ದು, ಪ್ರತಿಯೊಂದು ರಾಷ್ಟ್ರವೂ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)
ಸಾಮಾನ್ಯ ಅಧ್ಯಯನ : 3/ಆಂತರಿಕ ಭದ್ರತೆ
ಇದೀಗ ಸುದ್ದಿಯಲ್ಲಿದೆ:
- ಸಂಸತ್ತಿನ ಭದ್ರತಾ ಕರ್ತವ್ಯಗಳಿಗೆ ನಿಯೋಜಿಸಲಾದ ಸಿಬ್ಬಂದಿಗಾಗಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (CISF) ‘ಪರಿಷ್ಕೃತ ನಿಯೋಜನೆ ನೀತಿ’ಯನ್ನು ಪರಿಚಯಿಸಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯ ಕುರಿತು:
- ಸ್ಥಾಪನೆ:- ‘ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾಯ್ದೆ, 1968’ ರ ಅಡಿಯಲ್ಲಿ 1969 ರಲ್ಲಿ ಇದನ್ನು ಸ್ಥಾಪಿಸಲಾಯಿತು. ಇದೊಂದು ಅರೆಸೈನಿಕ ಪಡೆಯಾಗಿದೆ.
- ದಿನಾಚರಣೆ: ಪ್ರತಿ ವರ್ಷ ಮಾರ್ಚ್ 10 ರಂದು ‘CISF ಸಂಸ್ಥಾಪನಾ ದಿನ’ವನ್ನು (Raising Day) ಆಚರಿಸಲಾಗುತ್ತದೆ.
- ನಿಯಂತ್ರಣ: ಇದು ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
CISF ನ ಕಾರ್ಯಗಳು: ಇದು ಈ ಕೆಳಗಿನ ಕಾರ್ಯತಂತ್ರದ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ, ಅವುಗಳೆಂದರೆ:
- ಬಾಹ್ಯಾಕಾಶ ಇಲಾಖೆ.
- ಪರಮಾಣು ಶಕ್ತಿ ಇಲಾಖೆ.
- ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ಬಂದರುಗಳು.
- ಐತಿಹಾಸಿಕ ಸ್ಮಾರಕಗಳು.
- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುತ್, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆಯಂತಹ ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳು.
ಹಂಸ-3 ಎನ್ಜಿ ತರಬೇತಿ ವಿಮಾನ
ಪಠ್ಯಕ್ರಮ: GS3/ ರಕ್ಷಣೆ (Defence)

ಇದೀಗ ಸುದ್ದಿಯಲ್ಲಿದೆ:
- ಬೆಂಗಳೂರಿನ “ಸಿಎಸ್ಐಆರ್-ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ” (CSIR-NAL) ಸಂಸ್ಥೆಯು, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಹಂಸ-3 (ಎನ್ಜಿ)’ ತರಬೇತಿ ವಿಮಾನದ “ಉತ್ಪಾದನಾ ಆವೃತ್ತಿ”ಯನ್ನು ಬಿಡುಗಡೆ ಮಾಡಿದೆ.
ಹಂಸ-3 ರ ಬಗ್ಗೆ:
- ಹಂಸ-3 ಎಂಬುದು CSIR-NAL ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಎರಡು – ಆಸನಗಳುಳ್ಳ ತರಬೇತಿ ವಿಮಾನವಾಗಿದೆ.
- ಇದು ಪ್ರಾಥಮಿಕ ವಿಮಾನ ತರಬೇತಿಗಾಗಿ ವಿನ್ಯಾಸಗೊಳಿಸಲಾದ, ಸಂಕೇತ ಆಧಾರಿತ ಉಪಕರಣಗಳು, ಯಾಂತ್ರಿಕವಾಗಿ ಕಾರ್ಯನಿರ್ವಹಿಸುವ ರೆಕ್ಕೆಗಳು ಮತ್ತು ಪ್ರಮಾಣಿತ ವಿಮಾನ ನಿಯಂತ್ರಣ ಕೊಠಡಿಯನ್ನು ಒಳಗೊಂಡಿದೆ. ಇದು ಮುಖ್ಯವಾಗಿ ವಿಮಾನ ಹಾರಾಟ ಕ್ಲಬ್ಗಳು ಮತ್ತು ವಿಮಾನ ಚಾಲಕ ತರಬೇತಿ ಶಾಲೆಗಳಿಗೆ ಸೇವೆ ಸಲ್ಲಿಸುತ್ತಿತ್ತು.
- ಇದನ್ನು ಸಂಪೂರ್ಣವಾಗಿ ರಬ್ಬರ ಮಿಶ್ರಿತ ಗಾಜು (ಫೈಬರ್ಗ್ಲಾಸ್) ಮತ್ತು ಕಾರ್ಬನ್ ಸಂಯೋಜಿತ ವಸ್ತುಗಳಿಂದ ನಿರ್ಮಿಸಲ್ಪಟ್ಟಿರುವುದರಿಂದ, ಇದು ತುಕ್ಕು ನಿರೋಧಕತೆ, ಹಾನಿ ತಡೆಯುವಂತೆ ಮತ್ತು ದುರಸ್ತಿಯ ಸುಲಭತೆಯಲ್ಲಿ ಅಂತರ್ಗತ ಅನುಕೂಲಗಳನ್ನು ಒದಗಿಸುತ್ತದೆ.
ಹಂಸ-3 ಎನ್ಜಿ (ಹೊಸ ಪೀಳಿಗೆ): ಇದು ಹಂಸ-3 ರ ಸುಧಾರಿತ ಆವೃತ್ತಿಯಾಗಿದ್ದು, ಈ ಕೆಳಗಿನ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ:
- ಡಿಜಿಟಲ್ ಗಾಜಿನ ವಿಮಾನ ನಿಯಂತ್ರಣ ಕೊಠಡಿ: ಉತ್ತಮ ಸಾಂದರ್ಭಿಕ ಅರಿವಿಗಾಗಿ ಹಳೆಯ ಸಂಕೇತ ಆಧಾರಿತ ಉಪಕರಣಗಳನ್ನು ಇದು ಬದಲಾಯಿಸುತ್ತದೆ.
- ಹೆಚ್ಚಿದ ಇಂಧನ ಸಾಮರ್ಥ್ಯ: ಇದು ದೀರ್ಘಾವಧಿಯ ತರಬೇತಿ ಹಾರಾಟಗಳಿಗೆ ಮತ್ತು ಹೆಚ್ಚಿನ ಸಹನೆಗೆ ಅನುವು ಮಾಡಿಕೊಡುತ್ತದೆ.
- ಸ್ಥಿರ ಹಾರಾಟ ನಿರ್ವಹಣೆ: ಕನಿಷ್ಠ ಮಟ್ಟದ ವೇಗ ಮತ್ತು ಊಹಿಸಬಹುದಾದ ನಡವಳಿಕೆಯು ಇದನ್ನು ಆರಂಭಿಕ ಹಂತದ ತರಬೇತಿಗೆ ಸೂಕ್ತವಾಗಿಸುತ್ತದೆ.
ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA)
ಸಾಮಾನ್ಯ ಅಧ್ಯಯನ 3/ ಕೃಷಿ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಪೆರುವಿನ ಲಿಮಾದಲ್ಲಿ ‘ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ’ದ (ITPGRFA) ಆಡಳಿತ ಮಂಡಳಿಯ 11ನೇ ಸಭೆಯು ಮುಕ್ತಾಯಗೊಂಡಿತು. ಆದರೆ, ‘ಪ್ರಮಾಣಿತ ವಸ್ತು ವರ್ಗಾವಣೆ ಒಪ್ಪಂದ’ (SMTA) ದ ಅಡಿಯಲ್ಲಿ ಬರುವ ಬೆಳೆಗಳ ಪಟ್ಟಿಯನ್ನು ವಿಸ್ತರಿಸುವ ವಿಷಯದಲ್ಲಿ ಯಾವುದೇ ಒಮ್ಮತ ಮೂಡಲಿಲ್ಲ.
ಪ್ರಮುಖ ಅಂಶಗಳು:
- ಭಾರತದ ವಿರೋಧ: ‘ಬಹುಪಕ್ಷೀಯ ವ್ಯವಸ್ಥೆ’ಯನ್ನು ಎಲ್ಲಾ ಬೆಳೆಗಳಿಗೆ ವಿಸ್ತರಿಸುವ ಮತ್ತು ಲಾಭ-ಹಂಚಿಕೆ ನಿಯಮಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಭಾರತ ಮತ್ತು ಇತರ ಕೆಲವು ದೇಶಗಳು ಬಲವಾಗಿ ವಿರೋಧಿಸಿದವು. ಈ ಕ್ರಮವು ಬೀಜ ವೈವಿಧ್ಯತೆಯ ಮೇಲಿನ ರಾಷ್ಟ್ರೀಯ ಸಾರ್ವಭೌಮತ್ವವನ್ನು ದುರ್ಬಲಗೊಳಿಸಬಹುದು ಎಂಬುದು ಅವುಗಳ ವಾದವಾಗಿದೆ.
- ಪ್ರಮಾಣಿತ ವಸ್ತು ವರ್ಗಾವಣೆ ಒಪ್ಪಂದ (SMTA) ದ ನಿಯಮಗಳು: ಪ್ರಸ್ತುತ SMTA ಅಡಿಯಲ್ಲಿ, 64 ಬೆಳೆಗಳ ತಳಿ (ಆನುವಂಶಿಕ) ವಸ್ತುವು ಕೇವಲ ಒಪ್ಪಂದದ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಲಭ್ಯವಿರುತ್ತದೆ. ಇದನ್ನು ಪ್ರತ್ಯೇಕವಾಗಿ ಸಂಶೋಧನೆ, ತಳಿ ಅಭಿವೃದ್ಧಿ ಮತ್ತು ತರಬೇತಿಗಾಗಿ ಮಾತ್ರ ಬಳಸಿಕೊಳ್ಳಬಹುದಾಗಿದೆ.
- ಬೌದ್ಧಿಕ ಆಸ್ತಿ ಹಕ್ಕುಗಳ (IPR) ನಿರ್ಬಂಧ: ಆನುವಂಶಿಕ ವಸ್ತುಗಳನ್ನು ಸ್ವೀಕರಿಸುವವರು, ತಾವು ಪಡೆದ ಮೂಲ ರೂಪದ ವಸ್ತುವಿನ ಮೇಲೆ ‘ಬೌದ್ಧಿಕ ಆಸ್ತಿ ಹಕ್ಕುಗಳನ್ನು’ (IPR) ಪ್ರತಿಪಾದಿಸುವಂತಿಲ್ಲ. ಅಲ್ಲದೆ, ಒಪ್ಪಂದದ ನಾಲ್ಕು ಲಾಭ-ಹಂಚಿಕೆ ಕಾರ್ಯವಿಧಾನಗಳ ಮೂಲಕ ಅದರಿಂದ ಬರುವ ಲಾಭಗಳನ್ನು ಕಡ್ಡಾಯವಾಗಿ ಹಂಚಿಕೊಳ್ಳಬೇಕು.
ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA) ದ ಬಗ್ಗೆ:
- ಇದು ಕಾನೂನು ಬದ್ಧವಾಗಿರುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಒಂದು ಒಪ್ಪಂದವಾಗಿದೆ. ಇದನ್ನು 2001 ರಲ್ಲಿ ಅಂಗೀಕರಿಸಲಾಯಿತು ಮತ್ತು 2004 ರಿಂದ ಜಾರಿಗೆ ಬಂದಿತು.
- ಉದ್ದೇಶ: ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ (ಆನುವಂಶಿಕ) ಸಂಪನ್ಮೂಲಗಳ (PGRFA) ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಅವುಗಳ ಬಳಕೆಯಿಂದ ಬರುವ ಲಾಭಗಳ ನ್ಯಾಯಯುತ ಹಂಚಿಕೆ ಇದರ ಪ್ರಮುಖ ಗುರಿಯಾಗಿದೆ.
- ಇದು “ಜೀವ ವೈವಿಧ್ಯತೆ ಸಮಾವೇಶ (CBD) ಮತ್ತು ನಗೋಯಾ ಶಿಷ್ಟಾಚಾರ”ಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.



ನಿಮ್ಮದೊಂದು ಉತ್ತರ