ವಿಶ್ವ ಏಡ್ಸ್ ದಿನ | ಭಾರತದ ಪರಮಾಣು ವಲಯದಲ್ಲಿ ಖಾಸಗಿ ವಲಯದ ಪ್ರವೇಶ | ಎಲ್ಲೋರಾ ಗುಹೆಗಳು | ಹಾರ್ನ್‌ಬಿಲ್ ಉತ್ಸವ | ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಭಾರತ ಮರು ಆಯ್ಕೆಯಾಗಿದೆ | ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) | ಹಂಸ-3 ಎನ್‌ಜಿ ತರಬೇತಿ ವಿಮಾನ | ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA)

ವಿಶ್ವ ಏಡ್ಸ್ ದಿನ

ಸಾಮಾನ್ಯ ಅಧ್ಯಯನ -2/ಆರೋಗ್ಯ

ಇದೀಗ ಸುದ್ದಿಯಲ್ಲಿದೆ:

  • ಪ್ರತಿ ವರ್ಷ ಡಿಸೆಂಬರ್ 1 ರಂದು ‘ವಿಶ್ವ ಏಡ್ಸ್ ದಿನ’ವನ್ನು ಆಚರಿಸಲಾಗುತ್ತದೆ.

ವಿಶ್ವ ಏಡ್ಸ್ ದಿನದ ಮಹತ್ವ:

  • ಎಚ್‌ಐವಿ/ಏಡ್ಸ್ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
  • ಇದನ್ನು ಮೊದಲ ಬಾರಿಗೆ 1988 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿತು.
  • 2025ರ ಧ್ಯೇಯವಾಕ್ಯ: “ಅಡಚಣೆಯನ್ನು ದಾಟಿ (ಮೀರಿ), ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು” 

ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (AIDS) ನ ಬಗ್ಗೆ:

  • ರೋಗಕಾರಕ:- ಇದು ದೀರ್ಘಕಾಲದ, ಸಂಭಾವ್ಯವಾಗಿ ಪ್ರಾಣಾಪಾಯಕಾರಿ ಆರೋಗ್ಯ ಸ್ಥಿತಿಯಾಗಿದ್ದು, “ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್” (HIV) ನಿಂದ ಉಂಟಾಗುತ್ತದೆ. ಇದು ಮಾನವನ ರೋಗನಿರೋಧಕ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
  • ಹರಡುವಿಕೆ:- ಸೋಂಕಿತ ವ್ಯಕ್ತಿಯ ದೇಹದ ದ್ರವಗಳಾದ ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವ ಅಥವಾ ಎದೆ ಹಾಲಿನ ನೇರ ಸಂಪರ್ಕದ ಮೂಲಕ ಇದು ಹರಡುತ್ತದೆ.
  • ಈ ರೋಗದ ಲಕ್ಷಣಗಳು:
    • ಹಂತ 1: ಜ್ವರದಂತಹ ಅನಾರೋಗ್ಯ (ಜ್ವರ, ಚಳಿ, ದದ್ದುಗಳು, ರಾತ್ರಿ ಬೆವರುವಿಕೆ).
    • ಹಂತ 2: ವೈದ್ಯಕೀಯ ವಿಳಂಬ (ಯಾವುದೇ ನಿರ್ದಿಷ್ಟ ರೋಗ ಲಕ್ಷಣಗಳಿಲ್ಲ).
    • ಹಂತ 3: ಏಡ್ಸ್ (ರೋಗನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುವುದು).
  • ತಡೆಗಟ್ಟುವಿಕೆ:- “ಚಿಕಿತ್ಸೆಗಿಂತ ತಡೆಗಟ್ಟುವಿಕೆ ಲೇಸು”. ರಕ್ಷಣಾತ್ಮಕ ತಂತ್ರಗಳನ್ನು ಬಳಸುವುದು, ಕಲುಷಿತವಾಗದ ಸೂಜಿಗಳನ್ನು ಉಪಯೋಗಿಸುವುದು ಮತ್ತು ತಾಯಿಯಿಂದ ಮಗುವಿಗೆ ಹರಡುವುದನ್ನು ತಡೆಯುವುದು ಅತ್ಯಗತ್ಯವಾಗಿದೆ.
  • ಚಿಕಿತ್ಸೆ:- ಹೆಚ್ಐವಿ ಸೋಂಕಿಗೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಆದಾಗ್ಯೂ, ಆಂಟಿರೀಟ್ರೋವೈರಲ್ ಔಷಧಿಗಳೊಂದಿಗೆ (ART) ಚಿಕಿತ್ಸೆ ನೀಡಲಾಗುತ್ತದೆ. ಇವು ದೇಹದಲ್ಲಿ ವೈರಸ್ ಸ್ವಪ್ರತೀಕರಣಗೊಳ್ಳುವುದನ್ನು ತಡೆಯುತ್ತವೆ.

ಗಮನಿಸಿ: ಚಿಕಿತ್ಸೆ ನೀಡದ ಹೆಚ್ಐವಿ, ಏಡ್ಸ್ ಆಗಿ ಪರಿವರ್ತನೆಗೊಳ್ಳಬಹುದು, ಇದು ಸಾಮಾನ್ಯವಾಗಿ ಹಲವು ವರ್ಷಗಳ ನಂತರ ಸಂಭವಿಸುತ್ತದೆ.

ಭಾರತ ಸರ್ಕಾರ ಕೈಗೊಂಡ ಕ್ರಮಗಳು

  • ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP):- ಇದೊಂದು ಕೇಂದ್ರ ವಲಯದ ಯೋಜನೆಯಾಗಿದೆ.
  • ಹೆಚ್ಐವಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಮತ್ತು ಹಿಮ್ಮೆಟ್ಟಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 3 (SDG 3) ಭಾರತ ಸಾಧಿಸಿದೆ.
  • ಪಿಪಿಟಿಸಿಟಿ (PPTCT)- ಪೋಷಕರಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಗಟ್ಟುವ ಕಾರ್ಯಕ್ರಮ.
  • ಹೆಚ್ಐವಿ /ಏಡ್ಸ್ ಕಾಯ್ದೆ, 2017: ಹೆಚ್ಐವಿ -ಸೋಂಕಿತ ಜನರ ವಿರುದ್ಧ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.
  • UNAIDS- 90:90:90 ಕಾರ್ಯತಂತ್ರ: ಇದು UNAIDS ಸಂಸ್ಥೆ ಅಳವಡಿಸಿಕೊಂಡಿರುವ ಕಾರ್ಯತಂತ್ರವಾಗಿದೆ. {2020 ರ ವೇಳೆಗೆ 90% ರೋಗನಿರ್ಣಯ, 90% ಚಿಕಿತ್ಸೆ (ಆಂಟಿರೀಟ್ರೋವೈರಲ್ ಚಿಕಿತ್ಸೆಯೊಂದಿಗೆ – ART ಮೂಲಕ) ಮತ್ತು 90% ವೈರಾಣು ನಿಗ್ರಹ} ಇದನ್ನು ಈಗ 95-95-95 ಗುರಿಯೊಂದಿಗೆ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ.
  • “ಪ್ರಾಜೆಕ್ಟ್ ಆಕ್ಸಿಲರೇಟ್” (ACCELERATE): ಇದು ಜಾನ್ ಹಾಕಿನ್ ಮತ್ತು ನ್ಯಾಕೋ (NACO) ಸಂಸ್ಥೆಯ  ಉಪಕ್ರಮವಾಗಿದ್ದು, ‘ಸೇಫ್ ಜಿಂದಗಿ’ ಆನ್‌ಲೈನ್ ಪೋರ್ಟಲ್ ಮೂಲಕ ಹೆಚ್ಐವಿ ಸೇವೆಗಳನ್ನು ಒದಗಿಸುತ್ತದೆ.
  • ಮಿಷನ್ ಸಂಪರ್ಕ್:- ಆಂಟಿರೀಟ್ರೋವೈರಲ್ ಥೆರಪಿಯನ್ನು (ART) ಅರ್ಧಕ್ಕೆ ನಿಲ್ಲಿಸಿದ, ಹೆಚ್ಐವಿ ಯೊಂದಿಗೆ ಬದುಕುತ್ತಿರುವ ಜನರನ್ನು (PLHIV) ಮರಳಿ ಚಿಕಿತ್ಸೆಗೆ ತರುವುದು ಇದರ ಉದ್ದೇಶವಾಗಿತ್ತು.

ಭಾರತದ ಪರಮಾಣು ವಲಯದಲ್ಲಿ ಖಾಸಗಿ ವಲಯದ ಪ್ರವೇಶ

ಸಾಮಾನ್ಯ ಅಧ್ಯಯನ -3/ ಇಂಧನ/ಶಕ್ತಿ

ಇದೀಗ ಸುದ್ದಿಯಲ್ಲಿದೆ:

  • ಪರಮಾಣು ವಲಯವನ್ನು ಖಾಸಗಿ ಪಾಲುದಾರರಿಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಹೆಜ್ಜೆ ಇಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಭಾರತದ ಪರಮಾಣು ವಲಯ: 

  • ನಿರ್ವಹಣೆ:- ಪ್ರಸ್ತುತ, ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳು “ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ” (NPCIL) ಒಡೆತನದಲ್ಲಿದ್ದು, ಸಂಪೂರ್ಣವಾಗಿ ಆ ಸಂಸ್ಥೆಯಿಂದಲೇ ನಿರ್ವಹಿಸಲ್ಪಡುತ್ತವೆ.
  • ಪ್ರಮುಖ ಕಾನೂನುಗಳು:- ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲು, ಸರ್ಕಾರವು ಈ ಕೆಳಗಿನ ಪ್ರಮುಖ ಕಾನೂನುಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಿದೆ:
    1. ಪರಮಾಣು ಶಕ್ತಿ ಕಾಯ್ದೆ, 1962: ಇದು ಪರಮಾಣು ಶಕ್ತಿಯ ಅಭಿವೃದ್ಧಿ ಮತ್ತು ನಿಯಂತ್ರಣಕ್ಕೆ ಅಗತ್ಯವಿರುವ ಮೂಲ ಚೌಕಟ್ಟನ್ನು ಒದಗಿಸುತ್ತದೆ.
    2. ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010: ಪರಮಾಣು ಅವಘಡಗಳು ಸಂಭವಿಸಿದಾಗ ಪರಿಹಾರ ನೀಡುವ ಕಾರ್ಯವಿಧಾನಗಳನ್ನು ಇದು ಖಾತ್ರಿಪಡಿಸುತ್ತದೆ.

ಪರಮಾಣು ಶಕ್ತಿಯ ಬಗ್ಗೆ:

  • ವ್ಯಾಖ್ಯಾನ:- ಪರಮಾಣು ಕ್ರಿಯೆಗಳ ಸಮಯದಲ್ಲಿ ಬಿಡುಗಡೆಯಾಗುವ ಶಕ್ತಿಯೇ ‘ಪರಮಾಣು ಶಕ್ತಿ’. ಇದು ವಿದಳನ (ಪರಮಾಣು ನ್ಯೂಕ್ಲಿಯಸ್‌ಗಳ ವಿಭಜನೆ) ಅಥವಾ ಸಮ್ಮಿಲನ (ಪರಮಾಣು ನ್ಯೂಕ್ಲಿಯಸ್‌ಗಳ ವಿಲೀನ) ಪ್ರಕ್ರಿಯೆಯ ಮೂಲಕ ಬಿಡುಗಡೆಯಾಗುತ್ತದೆ.

ಭಾರತದಲ್ಲಿ ಪರಮಾಣು ವಿದ್ಯುತ್ ಸಾಮರ್ಥ್ಯದ ಸ್ಥಿತಿಗತಿ:

  • ಪ್ರಸ್ತುತ ಸಾಮರ್ಥ್ಯ:- 8,180 ಮೆಗಾವ್ಯಾಟ್ (MW) ಆಗಿದ್ದು, ಇದು 24 ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಹಂಚಿಕೆಯಾಗಿದೆ.
  • ಭವಿಷ್ಯದ ಗುರಿ:- 2047 ರ ವೇಳೆಗೆ 100 GW ಪರಮಾಣು ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಗುರಿ.
  • ಸಾಮರ್ಥ್ಯ ವಿಸ್ತರಣೆ:- ಗುಜರಾತ್, ರಾಜಸ್ಥಾನ, ತಮಿಳುನಾಡು, ಹರಿಯಾಣ, ಕರ್ನಾಟಕ ಮತ್ತು ಮಧ್ಯಪ್ರದೇಶದಾದ್ಯಂತ 10 ಹೊಸ ಸ್ಥಾವರಗಳು (ಒಟ್ಟು 8 GW ಸಾಮರ್ಥ್ಯ) ನಿರ್ಮಾಣ ಹಂತದಲ್ಲಿವೆ.

ಭಾರತದ ಪ್ರಮುಖ ಪರಮಾಣು ವಿದ್ಯುತ್ ಸ್ಥಾವರಗಳು:

ಪರಮಾಣು ವಿದ್ಯುತ್ ಸ್ಥಾವರ 

ರಾಜ್ಯ

ಒಟ್ಟು ಸಾಮರ್ಥ್ಯ (MW ಗಳಲ್ಲಿ)

ತಾರಾಪುರ

ಮಹಾರಾಷ್ಟ್ರ

1,400

ರಾವತಭಾಟ

ರಾಜಸ್ಥಾನ

1,180

ಕುಂದಕುಳಂ

ತಮಿಳುನಾಡು

2,000

ಕೈಗಾ

ಕರ್ನಾಟಕ

880

ಕಾಕ್ರಪಾರ

ಗುಜರಾತ್

1140

ಕಲ್ಪಕ್ಕಂ

ತಮಿಳುನಾಡು

440

ನರೋರಾ

ಉತ್ತರ ಪ್ರದೇಶ

440

ಪ್ರಸ್ತಾಪಿತ/ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಸ್ಥಾವರಗಳು:

ವಿದ್ಯುತ್ ಸ್ಥಾವರ

ನಿರ್ವಹಿಸುವ ಸಂಸ್ಥೆ

ರಾಜ್ಯ

ಒಟ್ಟು ಸಾಮರ್ಥ್ಯ (MW ಗಳಲ್ಲಿ)

ಜೈಠಾಪುರ

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ಮಹಾರಾಷ್ಟ್ರ

9,900

ಕೊವ್ವಾಡ

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ಆಂಧ್ರ ಪ್ರದೇಶ

6,600

ಮಿಥಿ ವಿರ್ಡಿ

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ಗುಜರಾತ

6,000

ಹರಿಪುರ

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ಪಶ್ಚಿಮ ಬಂಗಾಳ

4,000

ಕುಂದಕುಳಂ (ವಿಸ್ತರಣೆ)

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ತಮಿಳುನಾಡು

2,800

ಗೋರಖ್‌ಪುರ

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ಹರಿಯಾಣ

2,800

ಭೀಮ್‌ಪುರ

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ಮಧ್ಯ ಪ್ರದೇಶ

2,800

ಮಹಿ ಬನ್ಸ್ವಾರ

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ರಾಜಸ್ಥಾನ

1,400

ಕೈಗಾ (ವಿಸ್ತರಣೆ)

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ಕರ್ನಾಟಕ

1,400

ಚುಟ್ಕಾ

ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

ಮಧ್ಯ ಪ್ರದೇಶ

1,200

ಮದ್ರಾಸ್

ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ನಿಯಮಿತ

ತಮಿಳುನಾಡು

300

ಎಲ್ಲೋರಾ ಗುಹೆಗಳು

ಸಾಮಾನ್ಯ ಅಧ್ಯಯನ : -1/ ಇತಿಹಾಸ ಮತ್ತು ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:

  • ಎಲ್ಲೋರಾ ಗುಹೆಗಳ ಸುತ್ತಮುತ್ತಲಿರುವ, ಕಡಿಮೆ ಪ್ರಚಲಿತದಲ್ಲಿರುವ ಪಾರಂಪರಿಕ ತಾಣಗಳಿಗೆ ಹೆಚ್ಚಿನ ಪ್ರಚಾರ ಮತ್ತು ಮನ್ನಣೆ ನೀಡುವಂತೆ ಪ್ರಸಿದ್ಧ ಸ್ಕಾಟ್ಲೆಂಡಿನ ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಅವರು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಎಲ್ಲೋರಾ ಗುಹೆಗಳ ಬಗ್ಗೆ:

  • ಸ್ಥಳ:- ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಜಿಲ್ಲೆಯಲ್ಲಿರುವ ಎಲ್ಲೋರಾ ಗುಹೆಗಳು, ಭಾರತದ ಪ್ರಪ್ರಥಮ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿವೆ.
  • ಕಾಲಘಟ್ಟ:- ಈ ಗುಹೆಗಳ ಸಂಕೀರ್ಣವನ್ನು ಕ್ರಿ.ಶ. 600 ಮತ್ತು ಕ್ರಿ.ಶ.1000 ರ ನಡುವಿನ ಅವಧಿಯಲ್ಲಿ ಕೆತ್ತಲಾಗಿದೆ. ಇದು ಪ್ರಮುಖವಾಗಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಯಾದವರ ಆಳ್ವಿಕೆಯ ಕಾಲಘಟ್ಟವನ್ನು ಪ್ರತಿನಿಧಿಸುತ್ತದೆ.
  • ಧಾರ್ಮಿಕ ಬಹುತ್ವ: ಈ ಸಂಕೀರ್ಣವು ಒಟ್ಟು 34 ಪ್ರಮುಖ ಗುಹೆಗಳನ್ನು ಒಳಗೊಂಡಿದೆ (12 ಬೌದ್ಧ, 17 ಹಿಂದೂ ಮತ್ತು 5 ಜೈನ ಗುಹೆಗಳು). ಇದು ಅಂದಿನ ಕಾಲದ ವಿಶಿಷ್ಟವಾದ ಅಂತರ್‌ಧರ್ಮೀಯ ಸಾಮರಸ್ಯ ಮತ್ತು ಕಲಾತ್ಮಕ ವಿನಿಮಯಕ್ಕೆ ಸಾಕ್ಷಿಯಾಗಿದೆ.

ಪ್ರಮುಖ ವಾಸ್ತುಶಿಲ್ಪದ ಲಕ್ಷಣಗಳು:

  • ಕೈಲಾಸನಾಥ ದೇವಾಲಯ (ಗುಹೆ 16):- ಇದನ್ನು ಬೃಹತ್ ಏಕಶಿಲಾ ಜ್ವಾಲಾಮುಖಿ (ಬಸಾಲ್ಟ್) ಶಿಲೆಯಿಂದ ಕೆತ್ತಲಾಗಿದೆ. ಇದು ಹಿಂದೂಗಳ ದೇವರಾದ ಶಿವನಿಗೆ ಸಮರ್ಪಿತವಾದ ಅದ್ಭುತ ರಚನೆಯಾಗಿದೆ.
  • ಬೌದ್ಧ ಗುಹೆಗಳು:- ಇವುಗಳಲ್ಲಿ ಪ್ರಮುಖವಾಗಿ ಬೌದ್ಧ ಸನ್ಯಾಸಿಗಳ ವಸತಿಗಳಾದ ವಿಹಾರಗಳು ಮತ್ತು ಪ್ರಾರ್ಥನಾ ಮಂದಿರಗಳಾದ ಚೈತ್ಯಾಲಯಗಳನ್ನು ಕಾಣಬಹುದು.
  • ಜೈನ ಗುಹೆಗಳು: ಎಲ್ಲೋರಾ ನಿರ್ಮಾಣದ ಅಂತಿಮ ಅಥವಾ ನಂತರದ ಹಂತದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.

ಹಾರ್ನ್‌ಬಿಲ್ ಉತ್ಸವ

ಸಾಮಾನ್ಯ ಅಧ್ಯಯನ : 1/ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:

  • “ಉತ್ಸವಗಳ ಉತ್ಸವ” ಎಂದೇ ಖ್ಯಾತಿಯಾಗಿರುವ ನಾಗಾಲ್ಯಾಂಡ್‌ನ ಪ್ರಸಿದ್ಧ “ಹಾರ್ನ್‌ಬಿಲ್” ಉತ್ಸವದ 26ನೇ ಆವೃತ್ತಿಯು, ಕೊಹಿಮಾದ ಕಿಸಾಮಾದಲ್ಲಿರುವ “ನಾಗಾ ಪರಂಪರೆ ಗ್ರಾಮ”ದಲ್ಲಿ ಆರಂಭಗೊಂಡಿದೆ. ಇದು ರಾಜ್ಯದ ‘ರಾಜ್ಯೋತ್ಸವ ದಿನ’ದೊಂದಿಗೆ (ಡಿಸೆಂಬರ್ 1) ಕಾಕತಾಳೀಯವಾಗಿ ಜರುಗುತ್ತದೆ.

ಹಾರ್ನ್‌ಬಿಲ್ ಉತ್ಸವದ ಬಗ್ಗೆ:

  • ಸಮಯ ಮತ್ತು ಸ್ಥಳ:- ಇದು ವಾರ್ಷಿಕವಾಗಿ ಡಿಸೆಂಬರ್ ಮೊದಲ ವಾರದಲ್ಲಿ ಕೊಹಿಮಾ ಸಮೀಪದ ಕಿಸಾಮಾದಲ್ಲಿ ನಡೆಯುತ್ತದೆ.
  • ವೈಶಿಷ್ಟ್ಯ:- ಇದು ಎಲ್ಲಾ ನಾಗಾ ಬುಡಕಟ್ಟುಗಳ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನವಾಗಿದೆ.

ಹಾರ್ನ್‌ಬಿಲ್ ಉತ್ಸವದ ಮಹತ್ವ:

  • ಉದ್ದೇಶ: ಏಕತೆಯನ್ನು ಉತ್ತೇಜಿಸಲು ಮತ್ತು ಜನಾಂಗೀಯ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಇದನ್ನು 2000ನೇ ಇಸವಿಯಲ್ಲಿ ರೂಪಿಸಿ ಆರಂಭಿಸಲಾಯಿತು.
  • ಸಂಸ್ಕೃತಿ ಪ್ರದರ್ಶನ: ಇದು ಸಂಗೀತ, ಕರಕುಶಲ ವಸ್ತುಗಳು, ತಿನಿಸು ಮತ್ತು ಜಾನಪದಗಳ ಮೂಲಕ ಸಾಂಪ್ರದಾಯಿಕ ಮತ್ತು ಸಮಕಾಲೀನ ನಾಗಾ ಸಂಸ್ಕೃತಿ ಎರಡನ್ನೂ ಎತ್ತಿ ತೋರಿಸುತ್ತದೆ.

ಗ್ರೇಟರ್ ಹಾರ್ನ್‌ಬಿಲ್ ನ ಬಗ್ಗೆ:

  • ವೈಜ್ಞಾನಿಕ ಹೆಸರು:- ಬ್ಯುಸೆರೋಸ್ ಬೈಕಾರ್ನಿಸ್ 
  • ಇತರ ಹೆಸರುಗಳು:- ಇದನ್ನು ಕಾನ್ಕೇವ್-ಕ್ಯಾಸ್ಕ್ಡ್ ಹಾರ್ನ್‌ಬಿಲ್, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್‌ಬಿಲ್ ಎಂತಲೂ ಕರೆಯಲಾಗುತ್ತದೆ.
  • ಆವಾಸಸ್ಥಾನ:- ಇದು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ.
  • ವೈಶಿಷ್ಟ್ಯ:- ಗ್ರೇಟರ್ ಹಾರ್ನ್‌ಬಿಲ್‌ನ ಅತ್ಯಂತ ಪ್ರಮುಖ ಲಕ್ಷಣವೆಂದರೆ ಅದರ ಬೃಹತ್ ಕೊಕ್ಕಿನ ಮೇಲಿರುವ ಪ್ರಕಾಶಮಾನವಾದ ಹಳದಿ ಮತ್ತು ಕಪ್ಪು ಬಣ್ಣದ ಶಿರಸ್ತ್ರಾಣ/ ತಲೆಕವಚ (‘ಕ್ಯಾಸ್ಕ್’- ಕೆಲವು ಪಕ್ಷಿಗಳ ತಲೆಯ ಮೇಲಿರುವ ಗಟ್ಟಿಯಾದ ರಚನೆ).
  • ಉತ್ಸವ:- ಹಾರ್ನ್‌ಬಿಲ್ ಉತ್ಸವವನ್ನು ನಾಗಾಲ್ಯಾಂಡ್‌ನಲ್ಲಿ ಆಚರಿಸಲಾಗುತ್ತದೆ.
  • ರಾಜ್ಯ ಪಕ್ಷಿ:- ಗ್ರೇಟರ್ ಹಾರ್ನ್‌ಬಿಲ್ ಅರುಣಾಚಲ ಪ್ರದೇಶ ಮತ್ತು ಕೇರಳದ ರಾಜ್ಯ ಪಕ್ಷಿಯಾಗಿದೆ.

ಸಂರಕ್ಷಣಾ ಸ್ಥಿತಿ:

  • IUCN ಕೆಂಪುಪಟ್ಟಿಯಲ್ಲಿ ಸ್ಥಿತಿ:- ದುರ್ಬಲ (Vu).
  • ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972:- ಅನುಸೂಚಿ I.

ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಭಾರತ ಮರು ಆಯ್ಕೆಯಾಗಿದೆ

ಸಾಮಾನ್ಯ ಅಧ್ಯಯನ : 2/ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ: 

  • ಭಾರತವು ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ  2025-29ರ ಅವಧಿಗೆ ಮರು ಆಯ್ಕೆಯಾಗಿದೆ.

ಯುನೆಸ್ಕೋದ ಕಾರ್ಯಕಾರಿ ಮಂಡಳಿಯ ಬಗ್ಗೆ:

  • ರಚನೆ:- ಇದು ವಿಶ್ವಸಂಸ್ಥೆಯ ಮೂರು ಸಾಂವಿಧಾನಿಕ ಅಂಗಗಳಲ್ಲಿ ಒಂದಾಗಿದೆ. (ಉಳಿದ ಎರಡು ಅಂಗಗಳೆಂದರೆ ‘ಸಾಮಾನ್ಯ ಸಮ್ಮೇಳನ’ ಮತ್ತು ‘ಸಚಿವಾಲಯ’). ಈ ಮಂಡಳಿಯನ್ನು ಸಾಮಾನ್ಯ ಸಮ್ಮೇಳನವು ಆಯ್ಕೆ ಮಾಡುತ್ತದೆ.
  • ಅಧಿಕಾರ:- ಇದು ಸಾಮಾನ್ಯ ಸಮ್ಮೇಳನದ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • ಕಾರ್ಯಗಳು:- ಇದು ಮಹಾನಿರ್ದೇಶಕರು ಸಲ್ಲಿಸಿದ ಸಂಸ್ಥೆಯ ಕೆಲಸದ ಕಾರ್ಯಕ್ರಮ ಮತ್ತು ಅದಕ್ಕೆ ಸಂಬಂಧಿಸಿದ ಆಯಾವ್ಯಾಯ ಅಂದಾಜುಗಳನ್ನು ಪರಿಶೀಲಿಸುತ್ತದೆ.
  • ಸದಸ್ಯತ್ವ:- ಇದು 58 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದ್ದು, ಪ್ರತಿಯೊಂದು ರಾಷ್ಟ್ರವೂ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)

ಸಾಮಾನ್ಯ ಅಧ್ಯಯನ : 3/ಆಂತರಿಕ ಭದ್ರತೆ

ಇದೀಗ ಸುದ್ದಿಯಲ್ಲಿದೆ:

  • ಸಂಸತ್ತಿನ ಭದ್ರತಾ ಕರ್ತವ್ಯಗಳಿಗೆ ನಿಯೋಜಿಸಲಾದ ಸಿಬ್ಬಂದಿಗಾಗಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (CISF) ‘ಪರಿಷ್ಕೃತ ನಿಯೋಜನೆ ನೀತಿ’ಯನ್ನು ಪರಿಚಯಿಸಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯ ಕುರಿತು:

  • ಸ್ಥಾಪನೆ:- ‘ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾಯ್ದೆ, 1968’ ರ ಅಡಿಯಲ್ಲಿ 1969 ರಲ್ಲಿ ಇದನ್ನು ಸ್ಥಾಪಿಸಲಾಯಿತು. ಇದೊಂದು ಅರೆಸೈನಿಕ ಪಡೆಯಾಗಿದೆ. 
  • ದಿನಾಚರಣೆ: ಪ್ರತಿ ವರ್ಷ ಮಾರ್ಚ್ 10 ರಂದು ‘CISF ಸಂಸ್ಥಾಪನಾ ದಿನ’ವನ್ನು (Raising Day) ಆಚರಿಸಲಾಗುತ್ತದೆ.
  • ನಿಯಂತ್ರಣ: ಇದು ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

CISF ನ ಕಾರ್ಯಗಳು: ಇದು ಈ ಕೆಳಗಿನ ಕಾರ್ಯತಂತ್ರದ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ, ಅವುಗಳೆಂದರೆ:

  • ಬಾಹ್ಯಾಕಾಶ ಇಲಾಖೆ.
  • ಪರಮಾಣು ಶಕ್ತಿ ಇಲಾಖೆ.
  • ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ಬಂದರುಗಳು.
  • ಐತಿಹಾಸಿಕ ಸ್ಮಾರಕಗಳು.
  • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುತ್, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆಯಂತಹ ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳು.

ಹಂಸ-3 ಎನ್‌ಜಿ ತರಬೇತಿ ವಿಮಾನ

ಪಠ್ಯಕ್ರಮ: GS3/ ರಕ್ಷಣೆ (Defence)

ಇದೀಗ ಸುದ್ದಿಯಲ್ಲಿದೆ:

  • ಬೆಂಗಳೂರಿನ “ಸಿಎಸ್‌ಐಆರ್-ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ” (CSIR-NAL) ಸಂಸ್ಥೆಯು, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಹಂಸ-3 (ಎನ್‌ಜಿ)’ ತರಬೇತಿ ವಿಮಾನದ “ಉತ್ಪಾದನಾ ಆವೃತ್ತಿ”ಯನ್ನು ಬಿಡುಗಡೆ ಮಾಡಿದೆ.

ಹಂಸ-3 ರ ಬಗ್ಗೆ:

  • ಹಂಸ-3 ಎಂಬುದು CSIR-NAL ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಎರಡು – ಆಸನಗಳುಳ್ಳ ತರಬೇತಿ ವಿಮಾನವಾಗಿದೆ.
  • ಇದು ಪ್ರಾಥಮಿಕ ವಿಮಾನ ತರಬೇತಿಗಾಗಿ ವಿನ್ಯಾಸಗೊಳಿಸಲಾದ, ಸಂಕೇತ ಆಧಾರಿತ ಉಪಕರಣಗಳು, ಯಾಂತ್ರಿಕವಾಗಿ ಕಾರ್ಯನಿರ್ವಹಿಸುವ ರೆಕ್ಕೆಗಳು ಮತ್ತು ಪ್ರಮಾಣಿತ ವಿಮಾನ ನಿಯಂತ್ರಣ ಕೊಠಡಿಯನ್ನು ಒಳಗೊಂಡಿದೆ. ಇದು ಮುಖ್ಯವಾಗಿ ವಿಮಾನ ಹಾರಾಟ ಕ್ಲಬ್‌ಗಳು ಮತ್ತು ವಿಮಾನ ಚಾಲಕ ತರಬೇತಿ ಶಾಲೆಗಳಿಗೆ ಸೇವೆ ಸಲ್ಲಿಸುತ್ತಿತ್ತು.
  • ಇದನ್ನು ಸಂಪೂರ್ಣವಾಗಿ ರಬ್ಬರ ಮಿಶ್ರಿತ ಗಾಜು (ಫೈಬರ್‌ಗ್ಲಾಸ್) ಮತ್ತು ಕಾರ್ಬನ್ ಸಂಯೋಜಿತ ವಸ್ತುಗಳಿಂದ ನಿರ್ಮಿಸಲ್ಪಟ್ಟಿರುವುದರಿಂದ, ಇದು ತುಕ್ಕು ನಿರೋಧಕತೆ, ಹಾನಿ ತಡೆಯುವಂತೆ ಮತ್ತು ದುರಸ್ತಿಯ ಸುಲಭತೆಯಲ್ಲಿ ಅಂತರ್ಗತ ಅನುಕೂಲಗಳನ್ನು ಒದಗಿಸುತ್ತದೆ.

ಹಂಸ-3 ಎನ್‌ಜಿ (ಹೊಸ ಪೀಳಿಗೆ): ಇದು ಹಂಸ-3 ರ ಸುಧಾರಿತ ಆವೃತ್ತಿಯಾಗಿದ್ದು, ಈ ಕೆಳಗಿನ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ:

  1. ಡಿಜಿಟಲ್ ಗಾಜಿನ ವಿಮಾನ ನಿಯಂತ್ರಣ ಕೊಠಡಿ: ಉತ್ತಮ ಸಾಂದರ್ಭಿಕ ಅರಿವಿಗಾಗಿ ಹಳೆಯ ಸಂಕೇತ ಆಧಾರಿತ ಉಪಕರಣಗಳನ್ನು ಇದು ಬದಲಾಯಿಸುತ್ತದೆ.
  2. ಹೆಚ್ಚಿದ ಇಂಧನ ಸಾಮರ್ಥ್ಯ: ಇದು ದೀರ್ಘಾವಧಿಯ ತರಬೇತಿ ಹಾರಾಟಗಳಿಗೆ ಮತ್ತು ಹೆಚ್ಚಿನ ಸಹನೆಗೆ ಅನುವು ಮಾಡಿಕೊಡುತ್ತದೆ.
  3. ಸ್ಥಿರ ಹಾರಾಟ ನಿರ್ವಹಣೆ: ಕನಿಷ್ಠ ಮಟ್ಟದ ವೇಗ  ಮತ್ತು ಊಹಿಸಬಹುದಾದ ನಡವಳಿಕೆಯು ಇದನ್ನು ಆರಂಭಿಕ ಹಂತದ ತರಬೇತಿಗೆ ಸೂಕ್ತವಾಗಿಸುತ್ತದೆ.

ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA)

ಸಾಮಾನ್ಯ ಅಧ್ಯಯನ 3/ ಕೃಷಿ

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚೆಗೆ, ಪೆರುವಿನ ಲಿಮಾದಲ್ಲಿ ‘ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ’ದ (ITPGRFA) ಆಡಳಿತ ಮಂಡಳಿಯ 11ನೇ ಸಭೆಯು ಮುಕ್ತಾಯಗೊಂಡಿತು. ಆದರೆ, ‘ಪ್ರಮಾಣಿತ ವಸ್ತು ವರ್ಗಾವಣೆ ಒಪ್ಪಂದ’ (SMTA) ದ ಅಡಿಯಲ್ಲಿ ಬರುವ ಬೆಳೆಗಳ ಪಟ್ಟಿಯನ್ನು ವಿಸ್ತರಿಸುವ ವಿಷಯದಲ್ಲಿ ಯಾವುದೇ ಒಮ್ಮತ ಮೂಡಲಿಲ್ಲ.

ಪ್ರಮುಖ ಅಂಶಗಳು:

  • ಭಾರತದ ವಿರೋಧ: ‘ಬಹುಪಕ್ಷೀಯ ವ್ಯವಸ್ಥೆ’ಯನ್ನು ಎಲ್ಲಾ ಬೆಳೆಗಳಿಗೆ ವಿಸ್ತರಿಸುವ ಮತ್ತು ಲಾಭ-ಹಂಚಿಕೆ ನಿಯಮಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಭಾರತ ಮತ್ತು ಇತರ ಕೆಲವು ದೇಶಗಳು ಬಲವಾಗಿ ವಿರೋಧಿಸಿದವು. ಈ ಕ್ರಮವು ಬೀಜ ವೈವಿಧ್ಯತೆಯ ಮೇಲಿನ ರಾಷ್ಟ್ರೀಯ ಸಾರ್ವಭೌಮತ್ವವನ್ನು ದುರ್ಬಲಗೊಳಿಸಬಹುದು ಎಂಬುದು ಅವುಗಳ ವಾದವಾಗಿದೆ.
  • ಪ್ರಮಾಣಿತ ವಸ್ತು ವರ್ಗಾವಣೆ ಒಪ್ಪಂದ (SMTA) ದ ನಿಯಮಗಳು: ಪ್ರಸ್ತುತ SMTA ಅಡಿಯಲ್ಲಿ, 64 ಬೆಳೆಗಳ ತಳಿ  (ಆನುವಂಶಿಕ) ವಸ್ತುವು ಕೇವಲ ಒಪ್ಪಂದದ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಲಭ್ಯವಿರುತ್ತದೆ. ಇದನ್ನು ಪ್ರತ್ಯೇಕವಾಗಿ ಸಂಶೋಧನೆ, ತಳಿ ಅಭಿವೃದ್ಧಿ ಮತ್ತು ತರಬೇತಿಗಾಗಿ ಮಾತ್ರ ಬಳಸಿಕೊಳ್ಳಬಹುದಾಗಿದೆ.
  • ಬೌದ್ಧಿಕ ಆಸ್ತಿ ಹಕ್ಕುಗಳ (IPR) ನಿರ್ಬಂಧ: ಆನುವಂಶಿಕ ವಸ್ತುಗಳನ್ನು ಸ್ವೀಕರಿಸುವವರು, ತಾವು ಪಡೆದ ಮೂಲ ರೂಪದ ವಸ್ತುವಿನ ಮೇಲೆ ‘ಬೌದ್ಧಿಕ ಆಸ್ತಿ ಹಕ್ಕುಗಳನ್ನು’ (IPR) ಪ್ರತಿಪಾದಿಸುವಂತಿಲ್ಲ. ಅಲ್ಲದೆ, ಒಪ್ಪಂದದ ನಾಲ್ಕು ಲಾಭ-ಹಂಚಿಕೆ ಕಾರ್ಯವಿಧಾನಗಳ ಮೂಲಕ ಅದರಿಂದ ಬರುವ ಲಾಭಗಳನ್ನು ಕಡ್ಡಾಯವಾಗಿ ಹಂಚಿಕೊಳ್ಳಬೇಕು.

ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA) ದ ಬಗ್ಗೆ:

  • ಇದು ಕಾನೂನು ಬದ್ಧವಾಗಿರುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಒಂದು ಒಪ್ಪಂದವಾಗಿದೆ. ಇದನ್ನು 2001 ರಲ್ಲಿ ಅಂಗೀಕರಿಸಲಾಯಿತು ಮತ್ತು 2004 ರಿಂದ ಜಾರಿಗೆ ಬಂದಿತು.
  • ಉದ್ದೇಶ: ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ (ಆನುವಂಶಿಕ) ಸಂಪನ್ಮೂಲಗಳ (PGRFA) ಸಂರಕ್ಷಣೆ, ಸುಸ್ಥಿರ ಬಳಕೆ  ಮತ್ತು ಅವುಗಳ ಬಳಕೆಯಿಂದ ಬರುವ ಲಾಭಗಳ ನ್ಯಾಯಯುತ ಹಂಚಿಕೆ ಇದರ ಪ್ರಮುಖ ಗುರಿಯಾಗಿದೆ.
  • ಇದು “ಜೀವ ವೈವಿಧ್ಯತೆ ಸಮಾವೇಶ (CBD) ಮತ್ತು ನಗೋಯಾ ಶಿಷ್ಟಾಚಾರ”ಗಳಿಗೆ  ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts