ಭಾರತ – ಅಮೇರಿಕಾ ನಡುವೆ ರಕ್ಷಣಾ ಒಪ್ಪಂದ | ತಪ್ಪು ದಾರಿಗೆ ಎಳೆಯುವ ಒಆರ್‌ಎಸ್ (ORS) ಗುರುತು ಪಟ್ಟಿ ಹೊಂದಿರುವ ಪಾನೀಯಗಳನ್ನು ತಕ್ಷಣವೇ ತೆಗೆದುಹಾಕುವಂತೆ FSSAI ಆದೇಶಿಸಿದೆ | ಜಂಟಿ ಸಾಲದ ಕಾರ್ಯವಿಧಾನ (JCM) | ಅಕಾಂಥೋಸಿಸ್ ನಿಗ್ರಿಕಾನ್ಸ್ (Acanthosis Nigricans) | ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (IITF) | ಜಾಗತಿಕ ಮೀಥೇನ್ ಸ್ಥಿತಿಗತಿ ವರದಿ, 2025

ಭಾರತ – ಅಮೇರಿಕಾ ನಡುವೆ ರಕ್ಷಣಾ ಒಪ್ಪಂದ

ಜಿ.ಎಸ್-2/ಅಂತರರಾಷ್ಟ್ರೀಯ ಸಂಬಂಧಗಳು

ಸಂದರ್ಭ:

  • ಅಮೇರಿಕಾದ ರಾಜ್ಯ ಇಲಾಖೆಯು ಭಾರತಕ್ಕೆ 93 ದಶಲಕ್ಷ ಡಾಲರ್ ಮೌಲ್ಯದ ಎಫ್‌ಜಿಎಂ-148 ಜಾವೆಲಿನ್ ಟ್ಯಾಂಕ್ ವಿರೋಧಿ ಕ್ಷಿಪಣಿ ವ್ಯವಸ್ಥೆಯ ಮಾರಾಟಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದೆ.

ಎಫ್‌ಜಿಎಂ-148 ಜಾವೆಲಿನ್ ಟ್ಯಾಂಕ್ ವಿರೋಧಿ ಕ್ಷಿಪಣಿ ವ್ಯವಸ್ಥೆಯ ಬಗ್ಗೆ: 

  • ಇದು ಅತ್ಯಾಧುನಿಕ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ವ್ಯವಸ್ಥೆಯಾಗಿದೆ (ATGM).
  • ಇದು ಒಬ್ಬನೇ ಸೈನಿಕನಿಂದ ಹೊತ್ತೋಯ್ಯಬಲ್ಲ ಮಧ್ಯಮ ಶ್ರೇಣಿಯ, “ಪ್ರಯೋಗಿಸಿ ಮತ್ತು ಮರೆತುಬಿಡಿ” ತತ್ವದ ಮೇಲೆ ಕಾರ್ಯನಿರ್ವಹಿಸುವ (ಅಂದರೆ, ಒಮ್ಮೆ ಗುರಿ ಇಟ್ಟು ಉಡಾಯಿಸಿದ ನಂತರ, ಅದು ತನ್ನಷ್ಟಕ್ಕೇ ಗುರಿಯನ್ನು ತಲುಪುತ್ತದೆ) ಅಸ್ತ್ರವಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಎಲ್ಲಾ ಬಗೆಯ ರಕ್ಷಾ ಕವಚಗಳನ್ನು ಭೇದಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಸೇನಾ ಸಮರಾಭ್ಯಾಸಗಳ ಬಗ್ಗೆ: 

  • ಯುದ್ಧ ಅಭ್ಯಾಸ: ಭೂಸೇನೆಗಳ ನಡುವಿನ ಸಮರಾಭ್ಯಾಸ.
  • ಮಲಬಾರ್: ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನೊಳಗೊಂಡ ನೌಕಾಪಡೆಯ ಕ್ವಾಡ್ ಒಕ್ಕೂಟದ ಸಮರಾಭ್ಯಾಸ.
  • ಕೋಪ್ ಇಂಡಿಯಾ: ವಾಯುಪಡೆಯ ಸಮರಾಭ್ಯಾಸ.
  • ಟೈಗರ್ ಟ್ರಯಂಫ್: ಮೂರು ಸೇನೆ (ಭೂ, ಜಲ, ವಾಯು) ಗಳ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಸಮರಾಭ್ಯಾಸ.
  • ವಜ್ರ ಪ್ರಹಾರ: ವಿಶೇಷ ಪಡೆಗಳ ಸಮರಾಭ್ಯಾಸ.

ತಪ್ಪು ದಾರಿಗೆ ಎಳೆಯುವ ಒಆರ್‌ಎಸ್ (ORS) ಗುರುತು ಪಟ್ಟಿ ಹೊಂದಿರುವ ಪಾನೀಯಗಳನ್ನು ತಕ್ಷಣವೇ ತೆಗೆದುಹಾಕುವಂತೆ FSSAI ಆದೇಶಿಸಿದೆ

ಪಠ್ಯಕ್ರಮ: ಜಿ.ಎಸ್-2/ ಆರೋಗ್ಯ

ಇದೀಗ ಸುದ್ದಿಯಲ್ಲಿದೆ: 

  • ಹಣ್ಣಿನ ಆಧಾರಿತ ಪಾನೀಯಗಳು, ಕುಡಿಯಲು ಸಿದ್ಧವಿರುವ ಪಾನೀಯಗಳು, ಶಕ್ತಿವರ್ಧಕ ಪಾನೀಯಗಳು, ವಿದ್ಯುತ್ಲವಣ (ಎಲೆಕ್ಟ್ರೋಲೈಟ್) ಪಾನೀಯಗಳು ಮತ್ತು ಇದೇ ಮಾದರಿಯ ಇತರೆ ಉತ್ಪನ್ನಗಳನ್ನು ‘ಒಆರ್‌ಎಸ್’ (ORS) ಎಂಬ ಹೆಸರಿನಲ್ಲಿ ತಪ್ಪಾಗಿ ಮಾರಾಟ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಅಂತಹ ಸರಕುಗಳನ್ನು ಮಾರುಕಟ್ಟೆಯಿಂದ ತೆರವುಗೊಳಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರವು (FSSAI) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಮೌಖಿಕ ಪುನರ್ಜಲೀಕರಣ ಲವಣ (ORS – Oral Rehydration Salts) ದ ಬಗ್ಗೆ: 

  • ಇದನ್ನು “ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಸಂಸ್ಥೆಯ ಮಕ್ಕಳ ನಿಧಿ” (UNICEF) ಶಿಫಾರಸು ಮಾಡಿದ ಲವಣಗಳ ಮಿಶ್ರಣದ ಪ್ಯಾಕೆಟ್‌ಗಳಾಗಿವೆ. ಇವುಗಳನ್ನು ಶುದ್ಧ ನೀರಿನಲ್ಲಿ ಕರಗಿಸಿ “ಮೌಖಿಕ ಪುನರ್ಜಲೀಕರಣ ದ್ರಾವಣ” (ORS) ವನ್ನಾಗಿ ತಯಾರಿಸಲಾಗುತ್ತದೆ.
  • ಉದ್ದೇಶ:- ಎಲ್ಲಾ ವಯಸ್ಸಿನವರಲ್ಲಿ ಕಾಲರಾ ಸೇರಿದಂತೆ, ತೀವ್ರ ಅತಿಸಾರದಿಂದ ಉಂಟಾಗುವ ನಿರ್ಜಲೀಕರಣವನ್ನು (ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು) ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
  • ಒಆರ್‌ಎಸ್ ಸಂಯೋಜನೆಯು ನಿರ್ದಿಷ್ಟ ಪ್ರಮಾಣದಲ್ಲಿ ಸೋಡಿಯಂ ಕ್ಲೋರೈಡ್, ನಿರ್ಜಲೀಕೃತ ಗ್ಲೂಕೋಸ್, ಪೊಟ್ಯಾಸಿಯಮ್ ಕ್ಲೋರೈಡ್ ಮತ್ತು ಟ್ರೈಸೋಡಿಯಂ ಸಿಟ್ರೇಟ್ ಡೈಹೈಡ್ರೇಟ್‌ಗಳನ್ನು ಒಳಗೊಂಡಿರುತ್ತದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ದ ಕುರಿತು:

  • ಸ್ಥಾಪನೆ: 2006ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಅಡಿಯಲ್ಲಿ 2011ರಲ್ಲಿ ಸ್ಥಾಪಿಸಲಾದ ಸ್ವಾಯತ್ತ ಸಂಸ್ಥೆಯಾಗಿದೆ.
  • ಕಾರ್ಯವ್ಯಾಪ್ತಿ: ಇದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • ಉದ್ದೇಶ: ಭಾರತದಲ್ಲಿ ಆಹಾರ ಸುರಕ್ಷತೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಶಾಸನಬದ್ಧ ಸಂಸ್ಥೆಯಾಗಿದೆ.
  • ಪ್ರಧಾನ ಕಚೇರಿ: ನವದೆಹಲಿ.

FSSAI ನ ಪ್ರಮುಖ ಉಪಕ್ರಮಗಳು:

  • ಈಟ್ ರೈಟ್ ಮೂವ್‌ಮೆಂಟ್ ಅಭಿಯಾನ: ಎಲ್ಲಾ ಭಾರತೀಯರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಸುಸ್ಥಿರ ಆಹಾರವನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ.
  • ಕ್ಲೀನ್ ಸ್ಟ್ರೀಟ್ ಫುಡ್: ಬೀದಿ ಬದಿಯ ಆಹಾರ ಮಾರಾಟಗಾರರಿಗೆ ತರಬೇತಿ ನೀಡುವುದು ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಉಲ್ಲಂಘನೆಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು.
  • ಡಯಟ್ ಫಾರ್ ಲೈಫ್ (Diet4Life): ವಿವಿಧ ರೀತಿಯ ಚಯಾಪಚಯ ಅಸ್ವಸ್ಥತೆ ಮತ್ತು ಅವುಗಳನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸುವುದು.
  • ಆಹಾರ ಉಳಿಸಿ, ಆಹಾರ ಹಂಚಿ, ಸಂತೋಷ ಹಂಚಿ (Save Food, Share Food, Share Joy): ಆಹಾರ ವ್ಯರ್ಥವಾಗುವುದನ್ನು ತಡೆಯಲು ಮತ್ತು ಆಹಾರ ದಾನವನ್ನು ಉತ್ತೇಜಿಸಲು ಜನರನ್ನು ಪ್ರೇರೇಪಿಸುವುದು.
  • ಹಾರ್ಟ್ ಅಟ್ಯಾಕ್ ರಿವೈಂಡ್: ಇದು 2022ರ ವೇಳೆಗೆ ಭಾರತದಲ್ಲಿ ಟ್ರಾನ್ಸ್ ಫ್ಯಾಟ್ (ಕೆಟ್ಟ ಕೊಬ್ಬು) ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ಬೆಂಬಲಿಸಲು ನಡೆಸಿದ ಸಮೂಹ ಮಾಧ್ಯಮ ಅಭಿಯಾನವಾಗಿದೆ.

ಜಂಟಿ ಸಾಲದ ಕಾರ್ಯವಿಧಾನ (JCM)

ಪಠ್ಯಕ್ರಮ: ಜಿ.ಎಸ್-3/ ಪರಿಸರ ಅಧ್ಯಾಯನ

ಸಂದರ್ಭ

  • ‘ಬ್ರೆಜಿಲ್‌’ನ ‘ಬೆಲೆಮ್‌’ನಲ್ಲಿ ನಡೆಯಲಿರುವ COP30 ಶೃಂಗಸಭೆಯಲ್ಲಿ, ನ್ಯಾಯಯುತ ಮತ್ತು ತಂತ್ರಜ್ಞಾನ ಚಾಲಿತ ಹವಾಮಾನ ಪ್ರಕ್ರಿಯೆಯನ್ನು ವಿಸ್ತರಿಸಲು “ಜಂಟಿ ಸಾಲದ ಕಾರ್ಯವಿಧಾನ” (JCM) ಪ್ರಮುಖ ಸಾಧನವಾಗಿದೆ ಎಂದು ಭಾರತ ಬಣ್ಣಿಸಿದೆ.

ಜಂಟಿ ಸಾಲದ ಕಾರ್ಯವಿಧಾನ (ಜಾಯಿಂಟ್ ಕ್ರೆಡಿಟಿಂಗ್ ಮೆಕ್ಯಾನಿಸಮ್ – JCM) ಯ ಬಗ್ಗೆ:

  • ಇದು ಒಂದು ದ್ವಿಪಕ್ಷೀಯ ಉಪಕ್ರಮವಾಗಿದ್ದು, ಇದರ ಅಡಿಯಲ್ಲಿ ಭಾರತದಂತಹ ಪಾಲುದಾರ ರಾಷ್ಟ್ರವು ಜಪಾನ್‌ನೊಂದಿಗೆ ಸಹಕರಿಸಿ ಕಡಿಮೆ ಇಂಗಾಲದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಅದಕ್ಕೆ ಪ್ರತಿಯಾಗಿ ಇಂಗಾಲದ ಕ್ರೆಡಿಟ್‌ಗಳನ್ನು (ಕಾರ್ಬನ್ ಕ್ರೆಡಿಟ್ಸ್) ಪಡೆಯಲು ಅವಕಾಶವಿದೆ.
  • ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಯೋಜನೆಗಳಿಂದ ಉತ್ಪತ್ತಿಯಾಗುವ ಈ ‘ಕ್ರೆಡಿಟ್‌’ಗಳನ್ನು (ಸಾಲದ ಅಂಕಗಳನ್ನು), ಎರಡೂ ದೇಶಗಳು ತಮ್ಮ ರಾಷ್ಟ್ರೀಯ ಹವಾಮಾನ ಗುರಿಗಳನ್ನು ತಲುಪಲು ಬಳಸಿಕೊಳ್ಳಬಹುದು.
  • ಇದು, ತಂತ್ರಜ್ಞಾನ ವರ್ಗಾವಣೆ ಮತ್ತು ಹಸಿರು ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನು ಸುಗಮಗೊಳಿಸುತ್ತದೆ ಹಾಗೂ ಪಾಲುದಾರ ರಾಷ್ಟ್ರದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಅಕಾಂಥೋಸಿಸ್ ನಿಗ್ರಿಕಾನ್ಸ್ (Acanthosis Nigricans)

ಪಠ್ಯಕ್ರಮ: ಜಿ.ಎಸ್-2/ ಆರೋಗ್ಯ

ಸಂದರ್ಭ:

  • ಅಕಾಂಥೋಸಿಸ್ ನಿಗ್ರಿಕಾನ್ಸ್‌ ತ್ವಚೆಯ (ಚರ್ಮದ) ಮಡಿಚುಗಳ ಮತ್ತು ಮುದುಡಿನ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಇದು ಇನ್ಸುಲಿನ್ ಪ್ರತಿರೋಧದೊಂದಿಗೆ ನಿಕಟವಾಗಿ ಸಂಬಂಧಿಸಿದೆ ಎಂದು ಇತ್ತೀಚಿನ ಅಧ್ಯಯನವೊಂದರಿಂದ ತಿಳಿದುಬಂದಿದೆ. 

ಅಕಾಂಥೋಸಿಸ್ ನಿಗ್ರಿಕಾನ್ಸ್ (AN) ನ ಬಗ್ಗೆ:

  • ಇದು ಚರ್ಮದ ಒಂದು ಸ್ಥಿತಿಯಾಗಿದ್ದು, ಚರ್ಮದ ಮಡಿಚುಗಳ ಮೇಲೆ ಕಪ್ಪಾದ, ನಯವಾದ ಕಲೆಗಳು ಕಾಣಿಸಿಕೊಳ್ಳುವುದು ಇದರ ಲಕ್ಷಣವಾಗಿದೆ.
  • ಚರ್ಮದಲ್ಲಿನ ಈ ಬದಲಾವಣೆಗಳು ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ, ಬದಲಿಗೆ ಕೆಲವು ತಿಂಗಳುಗಳ ಅವಧಿಯಲ್ಲಿ ನಿಧಾನವಾಗಿ ಬೆಳೆಯುತ್ತವೆ.
  • ಇದು ಇನ್ಸುಲಿನ್ ಪ್ರತಿರೋಧದೊಂದಿಗೆ ಬಲವಾದ ನಂಟನ್ನು ಹೊಂದಿದೆ. ಆದ್ದರಿಂದ, ಇದು ಮಧುಮೇಹಪೂರ್ವ ಮತ್ತು ಮಧುಮೇಹದ  ಪ್ರಮುಖ ಮುನ್ಸೂಚನೆಯಾಗಿದೆ.
  • ಕಾರಣಗಳು:- ಸ್ಥೂಲಕಾಯತೆ (ಬೊಜ್ಜು), ಇನ್ಸುಲಿನ್ ಪ್ರತಿರೋಧ, ಚಯಾಪಚಯ ಲಕ್ಷಣ, ಮಧುಮೇಹ ಮತ್ತು ಬಹಳ ಅಪರೂಪವಾಗಿ ಮೆಲನೋಮಾಗಳು, ಹೊಟ್ಟೆ ಅಥವಾ ಯಕೃತ್ತಿನ ಕ್ಯಾನ್ಸರ್ ನಿಂದಲೂ ಇದು ಉಂಟಾಗಬಹುದು.
  • ಚಿಕಿತ್ಸೆ: ಬೊಜ್ಜಿಗೆ ಅಥವಾ ಇನ್ಸುಲಿನ್ ಪ್ರತಿರೋಧಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ, ಚಯಾಪಚಯ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಮೂಲಕ ಚರ್ಮದ ಬಣ್ಣವನ್ನು ತಿಳಿಯಾಗಿಸಲು ಸಹಾಯವಾಗುತ್ತದೆ.

ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (IITF)

ಪಠ್ಯಕ್ರಮ: ಜಿ.ಎಸ್-3/ ಆರ್ಥಿಕತೆ

ಸಂದರ್ಭ:

  • ದೆಹಲಿಯ ಭಾರತ ಮಂಟಪದಲ್ಲಿ  ನಡೆದ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳವು (IITF), ಭಾರತದ ಅತೀ ದೊಡ್ಡ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದರ್ಶನಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (IITF) ದ ಬಗ್ಗೆ:

  • ಆಯೋಜಕರು: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ.
  • ಉದ್ದೇಶ: ಈ ವಾರ್ಷಿಕ ಮೇಳವು ತಯಾರಕರಿಗೆ, ವ್ಯಾಪಾರಿಗಳಿಗೆ, ರಫ್ತುದಾರರಿಗೆ ಮತ್ತು ಆಮದುದಾರರಿಗೆ ಒಂದೇ ಸೂರಿನಡಿ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ.
  • ಇದನ್ನು ಪ್ರತಿ ವರ್ಷ ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗುತ್ತದೆ.
  • ಇದು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸಮಗ್ರ ವ್ಯಾಪಾರ ಮೇಳಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.
  • ಇದನ್ನು ಮೊದಲ ಬಾರಿಗೆ 1980ರಲ್ಲಿ ಆಯೋಜಿಸಲಾಗಿತ್ತು.
  • ಘೋಷವಾಕ್ಯ: ‘ಏಕ್ ಭಾರತ್ ಶ್ರೇಷ್ಠ ಭಾರತ್’ (ಒಂದೇ ಭಾರತ, ಶ್ರೇಷ್ಠ ಭಾರತ).

ಜಾಗತಿಕ ಮೀಥೇನ್ ಸ್ಥಿತಿಗತಿ ವರದಿ, 2025

ಪಠ್ಯಕ್ರಮ: ಜಿ.ಎಸ್-3/ ಪರಿಸರ

ಸಂದರ್ಭ:

  • ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ವು ಇತ್ತೀಚಿಗೆ ಬ್ರೆಜಿಲ್ ನ ಬೆಲೆಮ್‌ನಲ್ಲಿ ನಡೆದ COP30 ಶೃಂಗಸಭೆಯಲ್ಲಿ ಜಾಗತಿಕ ಮೀಥೇನ್ ಸ್ಥಿತಿಗತಿ ವರದಿಯನ್ನು ಬಿಡುಗಡೆ ಮಾಡಿದೆ.

ವರದಿಯ ಮುಖ್ಯಾಂಶಗಳು:

  • ಮೀಥೇನ್ ಹೊರಸೂಸುವಿಕೆಯಲ್ಲಿ ಏರಿಕೆ: ಕಠಿಣ ತ್ಯಾಜ್ಯ ನಿಯಂತ್ರಣ ಮತ್ತು ಸುಧಾರಿತ ಕಣ್ಗಾವಲು ವ್ಯವಸ್ಥೆಗಳ ಹೊರತಾಗಿಯೂ, 2030ರ ವೇಳೆಗೆ ಮೀಥೇನ್ ಪ್ರಮಾಣವನ್ನು 30% ರಷ್ಟು ಕಡಿಮೆ ಮಾಡುವ ಗುರಿಯನ್ನು ತಲುಪುವಲ್ಲಿ ಜಾಗತಿಕ ಪ್ರಯತ್ನಗಳು ಇನ್ನೂ ಹಿಂದುಳಿದಿವೆ.
  • ತೀವ್ರತೆ ಮತ್ತು ಪರಿಣಾಮ: 20 ವರ್ಷಗಳ ಅವಧಿಯಲ್ಲಿ ಮೀಥೇನ್, ಇಂಗಾಲದ ಡೈ ಆಕ್ಸೈಡ್‌ (CO₂) ಗಿಂತ ಸುಮಾರು 80 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಪ್ರಸ್ತುತ ಸುಮಾರು ಮೂರನೇ ಒಂದರಷ್ಟು ಭಾಗ ಜಾಗತಿಕ ತಾಪಮಾನ ಏರಿಕೆಯಲ್ಲಿ ಇದು ಕಾರಣವಾಗಿದೆ.
  • ಮೀಥೇನ್ ಹೊರಸೂಸುವಿಕೆಯಲ್ಲಿ ಭಾರತದ ಪಾಲು: 2020ರಲ್ಲಿ ಸುಮಾರು 31 ಮಿಲಿಯನ್ ಟನ್ ಮೀಥೇನ್ ಅನ್ನು ಹೊರಸೂಸಿದೆ, ಇದು ಜಾಗತಿಕ ಹೊರಸೂಸುವಿಕೆಯ 9% ರಷ್ಟಿದೆ. ಜಾಗತಿಕ ಕೃಷಿ ಆಧಾರಿತ ಮೀಥೇನ್ ಹೊರಸೂಸುವಿಕೆಯಲ್ಲಿ ಭಾರತದ ಪಾಲು 12% ರಷ್ಟಿದ್ದು, ಇದು ಪ್ರಪಂಚದಲ್ಲೇ ಅತ್ಯಧಿಕವಾಗಿದೆ.
  • ಕೃಷಿ ವಲಯದ ವಿವರಣೆ: ಜಾನುವಾರುಗಳು (ಜಾನುವಾರುಗಳ ಜೀರ್ಣಕ್ರಿಯೆ) ಮೀಥೇನ್‌ನ ಅತೀ ದೊಡ್ಡ ಮೂಲವಾಗಿದೆ. ಇದರ ನಂತರದ ಸ್ಥಾನದಲ್ಲಿ ಭತ್ತದ ಕೃಷಿ ಇದ್ದು, 2030ರ ವೇಳೆಗೆ ಇದರಿಂದಾಗುವ ಹೊರಸೂಸುವಿಕೆ 8% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಬೆಳೆ ತ್ಯಾಜ್ಯ ಸುಡುವುದೂ ಕೂಡ ಹೆಚ್ಚುತ್ತಿದ್ದು, ಇವೆಲ್ಲವೂ ಕೂಡ ಹೊರಸೂಸುವಿಕೆಯಲ್ಲಿ ಭಾರತವನ್ನು ಜಾಗತಿಕವಾಗಿ ಪ್ರಮುಖ ಕೇಂದ್ರವನ್ನಾಗಿಸಿವೆ.

ಮೀಥೇನ್ ನ ಬಗ್ಗೆ:

  • ಇದು ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕವಾಗಿದೆ (ವಾತಾವರಣದಲ್ಲಿ ಇದರ ಜೀವಿತಾವಧಿ 12 ವರ್ಷಗಳು).
  • 20 ವರ್ಷಗಳ ಅವಧಿಯಲ್ಲಿ ಇದು ಇಂಗಾಲದ ಡೈ ಆಕ್ಸೈಡ್‌ (CO₂) ಗಿಂತ 80–84 ಪಟ್ಟು ಹೆಚ್ಚು ಪ್ರಬಲವಾಗಿರುತ್ತದೆ.
  • ಜಾಗತಿಕ ಪ್ರಮುಖ ಮೂಲಗಳು: ಕೃಷಿ (40%), ಇಂಧನ (35%), ಮತ್ತು ತ್ಯಾಜ್ಯ (20%).

ಮೀಥೇನ್ ಮಾಲಿನ್ಯವನ್ನು ತಡೆಗಟ್ಟಲು ಜಾಗತಿಕ ಉಪಕ್ರಮಗಳು: 

ಜಾಗತಿಕ ಮೀಥೇನ್ ಪ್ರತಿಜ್ಞೆ (Global Methane Pledge), 2021: 

  • ಇದು 2030ರ ವೇಳೆಗೆ ಮೀಥೇನ್ ಹೊರಸೂಸುವಿಕೆಯನ್ನು 2020ರ ಮಟ್ಟಕ್ಕಿಂತ 30% ರಷ್ಟು ಕಡಿಮೆ ಮಾಡುವ ಸ್ವಯಂಪ್ರೇರಿತ ಅಂತರರಾಷ್ಟ್ರೀಯ ಚೌಕಟ್ಟಾಗಿದೆ. 
  • ಇದನ್ನು COP26 ರಲ್ಲಿ ಅಮೆರಿಕ, ಯುರೋಪಿಯನ್ ಒಕ್ಕೂಟ ಮತ್ತು ಹವಾಮಾನ ಮತ್ತು ಶುದ್ಧ ವಾಯು ಒಕ್ಕೂಟ (CCAC) ಜಂಟಿಯಾಗಿ ಪ್ರಾರಂಭಿಸಿದವು.
  • ಗಮನಿಸಿ: ಭಾರತವು ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ.

ಭಾರತದ ಉಪಕ್ರಮಗಳು:

ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಗುರಿ (NMSA): 

  • ಇದು ಹವಾಮಾನ-ಸ್ಥಿತಿಸ್ಥಾಪಕ ಮತ್ತು ಕಡಿಮೆ ಹೊರಸೂಸುವಿಕೆಯ ಕೃಷಿಯನ್ನು ಉತ್ತೇಜಿಸುತ್ತದೆ.
  • ಮಣ್ಣಿನ ಆರೋಗ್ಯ, ನೀರಿನ ದಕ್ಷತೆ ಮತ್ತು ಬೆಳೆ ವೈವಿಧ್ಯೀಕರಣದ ಮೇಲೆ ಗಮನಹರಿಸುವ ಮೂಲಕ ಪರೋಕ್ಷವಾಗಿ ಮೀಥೇನ್ ಅನ್ನು ಕಡಿಮೆ ಮಾಡುತ್ತದೆ.
  • ಭತ್ತದ ಕೃಷಿಯಿಂದ ಮೀಥೇನ್ ಹೊರಸೂಸಿಕೆಯನ್ನು ಕಡಿಮೆ ಮಾಡಲು ಆಧುನಿಕ ತಂತ್ರಜ್ಞಾನ ಮತ್ತು ಕೃಷಿ ಪದ್ಧತಿಗಳ ಬಳಕೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts