ಸೆಂಕಾಕು ದ್ವೀಪಗಳು | ಸಿಲಿಗುರಿ ಕಾರಿಡಾರ್ | ಸರ್ವೋಚ್ಚ ನ್ಯಾಯಾಲಯವು ಹುಲಿಯ ಮೂಲ ವಾಸಸ್ಥಳಗಳಲ್ಲಿ ಹುಲಿ ಸಫಾರಿ ನಡೆಸುವುದನ್ನು ನಿಷೇಧಿಸಿದೆ

ಸೆಂಕಾಕು ದ್ವೀಪಗಳು

ಸಾಮಾನ್ಯ ಅಧ್ಯಯನ – 1/ ಸುದ್ಧಿಯಲ್ಲಿರುವ  ಸ್ಥಳಗಳು

ಇದೀಗ ಸುದ್ದಿಯಲ್ಲಿದೆ:

  • ಚೀನಾ ಕರಾವಳಿ ರಕ್ಷಕ ಪಡೆಯ ಹಡಗುಗಳ ತುಕಡಿಯು ಸೆಂಕಾಕು/ಡಿಯಾಯು ದ್ವೀಪಗಳ ಬಳಿ “ಹಕ್ಕುಗಳ ಜಾರಿ ಗಸ್ತು” ನಡೆಸಿದ್ದು, ಇದು ಜಪಾನ್‌ನೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಸೆಂಕಾಕು/ಡಿಯಾಯು ದ್ವೀಪಗಳ ಬಗ್ಗೆ:

  • ‘ಸೆಂಕಾಕು ದ್ವೀಪಗಳು’ ಎಂಬುದು ಉಟ್ಸುರಿ, ಕಿತಾಕೋಜಿಮಾ, ಮಿನಾಮಿಕ್ಯೋಜಿಮಾ, ಕುಬಾ, ತೈಶೋ, ಒಕಿನೋಕಿತೈವಾ, ಒಕಿನೋಮಿನಾಮಿವಾ ಮತ್ತು ಟೋಬಿಸ್  ದ್ವೀಪಗಳನ್ನು ಒಳಗೊಂಡಿರುವ ದ್ವೀಪಗಳ ಸಮೂಹವನ್ನು ಸೂಚಿಸುವ ಒಂದು ಸಾಮೂಹಿಕ ಹೆಸರಾಗಿದೆ.
  • ವಿವಾದ : ಸೆಂಕಾಕು ದ್ವೀಪಗಳು ಜಪಾನ್ ಮತ್ತು ಚೀನಾ ದೇಶಗಳ ನಡುವೆ ದೀರ್ಘಕಾಲದಿಂದ ಒಂದು ವಿವಾದಾತ್ಮಕ ವಿಷಯವಾಗಿದೆ.
  • ಪ್ರಸ್ತುತ ಈ ದ್ವೀಪಗಳು ಜಪಾನ್ ದೇಶದ ನಿಯಂತ್ರಣದಲ್ಲಿವೆ.

ಸಿಲಿಗುರಿ ಕಾರಿಡಾರ್

ಸಾಮಾನ್ಯ ಅಧ್ಯಯನ – 3/ ಆಂತರಿಕ ಭದ್ರತೆ

ಇದೀಗ ಸುದ್ದಿಯಲ್ಲಿ 

  • ಭಾರತೀಯ ಸೇನೆಯು ಕಾರ್ಯತಂತ್ರದ ಮಹತ್ವವುಳ್ಳ ‘ಸಿಲಿಗುರಿ ಕಾರಿಡಾರ್’ ಬಳಿ ಮೂರು ಹೊಸ ಸೇನಾ ನೆಲೆಗಳನ್ನು ಸ್ಥಾಪಿಸಿದೆ.

ಸಿಲಿಗುರಿ ಕಾರಿಡಾರ್ ನ ಬಗ್ಗೆ:

  • ಸಿಲಿಗುರಿ ಕಾರಿಡಾರ್ ಅನ್ನು ‘ಚಿಕನ್ಸ್ ನೆಕ್’ (ಕೋಳಿಯ ಕುತ್ತಿಗೆ) ಎಂದೂ ಕೂಡ ಕರೆಯಲಾಗುತ್ತದೆ.
  • ಇದು ಪಶ್ಚಿಮ ಬಂಗಾಳದಲ್ಲಿರುವ ಒಂದು ಕಿರಿದಾದ ಭೂಭಾಗವಾಗಿದ್ದು, ಈಶಾನ್ಯ ಭಾರತದ ರಾಜ್ಯಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.
  • ಇದು ಮಹಾನಂದಾ ಮತ್ತು ತೀಸ್ತಾ ನದಿಗಳ ನಡುವೆ ನೆಲೆಗೊಂಡಿರುವ ಪೂರ್ವ ಭಾರತದ ಅತ್ಯಂತ ಪ್ರಮುಖ ಕಾರ್ಯತಂತ್ರದ ಪ್ರದೇಶವಾಗಿದೆ.

ಸಿಲಿಗುರಿ ಕಾರಿಡಾರ್‌ನ ಮಹತ್ವ:

  • ಕಾರ್ಯತಂತ್ರದ ಸ್ಥಳ : ಒಂದು ವೇಳೆ ಈ ಕಾರಿಡಾರ್‌ನ ಸಂಪರ್ಕ ಕಡಿತಗೊಂಡರೆ, ಅದು ಈಶಾನ್ಯ ರಾಜ್ಯಗಳನ್ನು ಪ್ರತ್ಯೇಕಿಸುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಅಗತ್ಯ ಸರಕುಗಳು, ಸೇವೆಗಳು ಮತ್ತು ಸೇನಾ ಬೆಂಬಲವನ್ನು ಪೂರೈಸುವುದು ಕಷ್ಟಕರವಾಗುತ್ತದೆ.
  • ಸೇನಾ ಮತ್ತು ರಕ್ಷಣಾ ಪರಿಗಣನೆಗಳು : ಇದು ಸೂಕ್ಷ್ಮವಾದ ಅಂತರರಾಷ್ಟ್ರೀಯ ಗಡಿಗಳಿಗೆ, ನಿರ್ದಿಷ್ಟವಾಗಿ ಚೀನಾ, ನೇಪಾಳ ಮತ್ತು ಬಾಂಗ್ಲಾದೇಶದ ಗಡಿಗಳಿಗೆ ಹತ್ತಿರದಲ್ಲಿದೆ.

ಸರ್ವೋಚ್ಚ ನ್ಯಾಯಾಲಯವು ಹುಲಿಯ ಮೂಲ ವಾಸಸ್ಥಳಗಳಲ್ಲಿ ಹುಲಿ ಸಫಾರಿ ನಡೆಸುವುದನ್ನು ನಿಷೇಧಿಸಿದೆ

ಸಾಮಾನ್ಯ ಅಧ್ಯಯನ – 3/ ಪರಿಸರ, ಸಂರಕ್ಷಣೆ

ಇದೀಗ ಸುದ್ಧಿಯಲ್ಲಿದೆ.

  • ಸರ್ವೋಚ್ಚ ನ್ಯಾಯಾಲಯವು ಮೂಲ ಅಥವಾ ನಿರ್ಣಾಯಕ ಹುಲಿ ಆವಾಸಸ್ಥಾನಗಳಲ್ಲಿ ಹುಲಿ ಸಫಾರಿ ನಡೆಸುವುದನ್ನು ನಿಷೇಧಿಸಲು ನಿರ್ದೇಶನಗಳನ್ನು ನೀಡಿದೆ.

ಪರಿಸರ ಸೂಕ್ಷ್ಮ ವಲಯಗಳ ಬಗ್ಗೆ:

  • ಅಧಿಸೂಚನೆ: ಪರಿಸರ ಸೂಕ್ಷ್ಮ ವಲಯಗಳನ್ನು ಪರಿಸರ (ಸಂರಕ್ಷಣಾ) ಕಾಯ್ದೆ, 1986 ರ ಅಡಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅಧಿಸೂಚನೆ ಹೊರಡಿಸುತ್ತದೆ.
  • ವ್ಯಾಖ್ಯಾನ: ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯಗಳ ಗಡಿಯಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಪರಿಸರ ದುರ್ಬಲ ವಲಯಗಳು ಅಥವಾ ಪರಿಸರ ಸೂಕ್ಷ್ಮ ವಲಯಗಳು ಎಂದು ಅಧಿಸೂಚನೆ ಹೊರಡಿಸಲಾಗುತ್ತದೆ. 

ಪರಿಸರ ಸೂಕ್ಷ್ಮ ವಲಯಗಳಲ್ಲಿನ (ESZs) ಚಟುವಟಿಕೆಗಳು:

  • ನಿಷೇಧಿತ ಚಟುವಟಿಕೆಗಳು: ವಾಣಿಜ್ಯ ಗಣಿಗಾರಿಕೆ, ಗರಗಸದ ಕಾರ್ಖಾನೆಗಳು, ಮಾಲಿನ್ಯವನ್ನು (ವಾಯು, ಜಲ, ಮಣ್ಣು, ಶಬ್ದ ಇತ್ಯಾದಿ) ಉಂಟುಮಾಡುವ ಕೈಗಾರಿಕೆಗಳು, ಪ್ರಮುಖ ಜಲವಿದ್ಯುತ್ ಯೋಜನೆಗಳ ಸ್ಥಾಪನೆ, ಮರದ ವಾಣಿಜ್ಯ ಬಳಕೆ ಇತ್ಯಾದಿ. 
  • ನಿಯಂತ್ರಿತ ಚಟುವಟಿಕೆಗಳು : ಮರಗಳನ್ನು ಕಡಿಯುವುದು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಸ್ಥಾಪನೆ, ನೈಸರ್ಗಿಕ ನೀರಿನ ವಾಣಿಜ್ಯ ಬಳಕೆ, ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವುದು, ಕೃಷಿ ಪದ್ಧತಿಯಲ್ಲಿನ ತೀವ್ರ ಬದಲಾವಣೆ ಇತ್ಯಾದಿ.
  • ಅನುಮತಿ ನೀಡಿದ ಚಟುವಟಿಕೆಗಳು : ಪ್ರಸ್ತುತ ನಡೆಯುತ್ತಿರುವ ಕೃಷಿ ಅಥವಾ ತೋಟಗಾರಿಕೆ ಪದ್ಧತಿಗಳು, ಮಳೆನೀರು ಕೊಯ್ಲು, ಸಾವಯವ ಕೃಷಿ ಇತ್ಯಾದಿ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts