‘ಆಭಾರ್’ ಆನ್‌ಲೈನ್ ಮಳಿಗೆ | ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025 | ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ

‘ಆಭಾರ್’ ಆನ್‌ಲೈನ್ ಮಳಿಗೆ

ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ

ಇದೀಗ ಸುದ್ಧಿಯಲ್ಲಿದೆ:

    • ಭಾರತೀಯ ರೈಲ್ವೆಯು ಹೊಸ ‘ಆಭಾರ್’ ಆನ್‌ಲೈನ್ ಮಳಿಗೆಗೆ ಪ್ರೋತ್ಸಾಹ ಮತ್ತು ಸಹಾಯ ಒದಗಿಸುತ್ತಿದೆ.
  • ಆಯೋಜಕರು:- ಸರ್ಕಾರಿ ಇ-ಮಾರುಕಟ್ಟೆ ವೇದಿಕೆ (GeM).
  • ಉದ್ದೇಶ:- ಈ ಆನ್‌ಲೈನ್ ಮಳಿಗೆಯು ಪ್ರಧಾನವಾಗಿ ಈ ಕೆಳಗಿನ ವರ್ಗದ ತಯಾರಕರಿಂದ ಸಿದ್ಧಪಡಿಸಿದ ಉಡುಗೊರೆ ವಸ್ತುಗಳನ್ನು ಪ್ರದರ್ಶಿಸುತ್ತದೆ:
  1. ಸ್ಥಳೀಯ ಬುಡಕಟ್ಟು ಜನಾಂಗದವರು ಮತ್ತು ಕೈಮಗ್ಗ ನೇಕಾರರು.
  2. “ಒಂದು ಜಿಲ್ಲೆ ಒಂದು ಉತ್ಪನ್ನ” (ODOP) ಯೋಜನೆಯ ತಯಾರಕರು.
  3. ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಹೊಂದಿರುವ ಉತ್ಪನ್ನಗಳ ತಯಾರಕರು.
  4. ಕೇಂದ್ರ ಗುಡಿ ಕೈಗಾರಿಕೆಗಳ ಮಳಿಗೆ (CCIE).
  5. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC).

ಮಹತ್ವ:

  • ಇದನ್ನು ‘ವೋಕಲ್ ಫಾರ್ ಲೋಕಲ್’ (‘ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ’) ಅಭಿಯಾನದೊಂದಿಗೆ ಉತ್ತೇಜಿಸಲಾಗಿದೆ.
  • ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಮತ್ತು ಗ್ರಾಮೀಣ ಕುಶಲಕರ್ಮಿಗಳು, ಮಹಿಳಾ ನೇತೃತ್ವದ ಉದ್ದಿಮೆಗಳು ಹಾಗೂ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಬೆಂಬಲ ನೀಡುವುದು ಇದರ ಪ್ರಮುಖ ಗುರಿಯಾಗಿದೆ.

ನಿಮಗಿದು ಗೊತ್ತೇ ?

  • ಭಾರತೀಯ ರೈಲ್ವೇ ಇಲಾಖೆಯು ಸ್ಥಳೀಯ ಮತ್ತು ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಒದಗಿಸಲು “ಒಂದು ನಿಲ್ದಾಣ ಒಂದು ಉತ್ಪನ್ನ” (OSOP) ಯೋಜನೆಯನ್ನು ಪ್ರಾರಂಭಿಸಿದೆ. 

ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025

ರಾಜಕೀಯ ಮತ್ತು ಆಡಳಿತ

ಇದೀಗ ಸುದ್ಧಿಯಲ್ಲಿದೆ:

  • ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು “ವ್ಯಾಸ್-ನಾವ್ (VYAS –NAV), ವ್ಯಾಸ್-ಭಾರತ್ (VYAS – BHARAT) ಮತ್ತು ವ್ಯಾಸ್-ಸೂತ್ರ (VYAS- SUTRA)” ಆ್ಯಪ್‌ಗಳನ್ನು ಬಳಸುವ ಮೂಲಕ ‘ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025’ ಕ್ಕೆ ಚಾಲನೆ ನೀಡಿತು.

ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025 ರ ಬಗ್ಗೆ:

  • ಡಿಜಿಟಲ್ ರಚನೆ:- ಈ ಡಿಜಿಟಲ್ ಪ್ರಕ್ರಿಯೆಯು ಐಸಿಎಆರ್-ಕೇಂದ್ರ ಸಾಗರಿಕ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ICAR-CMFRI) ಅಭಿವೃದ್ಧಿಪಡಿಸಿದ 3 ಬಹುಭಾಷಾ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ:
  1. ವ್ಯಾಸ್-ನಾವ್ : ಇದನ್ನು ಮೀನುಗಾರಿಕಾ ಗ್ರಾಮಗಳು ಮತ್ತು ಬಂದರುಗಳ ದೃಢೀಕರಣಕ್ಕಾಗಿ ಬಳಸಲಾಗುತ್ತದೆ. 
  2. ವ್ಯಾಸ್-ಭಾರತ್: ಇದನ್ನು ಕುಟುಂಬಗಳು ಮತ್ತು ಮೂಲಸೌಕರ್ಯಗಳ ಗಣತಿಗಾಗಿ ಬಳಸಲಾಗುತ್ತದೆ.

ವ್ಯಾಸ್-ಸೂತ್ರ : ಇದನ್ನು ದತ್ತಾಂಶ ಸಂಗ್ರಹಣೆಯ ನೈಜ ಸಮಯದ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ಬಳಸಲಾಗುತ್ತದೆ.

ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ

ಇತರೆ

ಇದೀಗ ಸುದ್ಧಿಯಲ್ಲಿದೆ: 

  • 2025ನೇ ಸಾಲಿನ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ವನ್ನು 1,466 ಸಿಬ್ಬಂದಿಗೆ ಪ್ರದಾನ ಮಾಡಲಾಗಿದೆ.

ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕದ ಬಗ್ಗೆ:

  • ಸ್ಥಾಪನೆ: ಕೇಂದ್ರ ಗೃಹ ಸಚಿವಾಲಯ (MHA).
  • ಗುರುತಿಸುವ ಪ್ರಮುಖ ಕ್ಷೇತ್ರಗಳು: ಇದು ವಿಶೇಷ ಕಾರ್ಯಾಚರಣೆಗಳು, ತನಿಖೆ, ಗುಪ್ತಚರ ಮತ್ತು ವಿಧಿ ವಿಜ್ಞಾನ ಕ್ಷೇತ್ರಗಳಲ್ಲಿನ ಅತ್ಯುನ್ನತ ಸೇವೆಯನ್ನು ಗುರುತಿಸುತ್ತದೆ.
  • ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ, ಪ್ರತಿ ವರ್ಷ ಅಕ್ಟೋಬರ್ 31 ರಂದು ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.
  • ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಂತದ ಪೊಲೀಸ್ ಪಡೆಗಳು, ಭದ್ರತಾ ಸಂಸ್ಥೆಗಳು, ಗುಪ್ತಚರ ವಿಭಾಗಗಳು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPFs), ಕೇಂದ್ರೀಯ ಪೊಲೀಸ್ ಸಂಸ್ಥೆಗಳು (CPOs) ಮತ್ತು ವಿಧಿ ವಿಜ್ಞಾನ ಘಟಕಗಳ ಸದಸ್ಯರಿಗೆ ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts