ಸೇವಂತಿಗೆ ಹೂವುಗಳು ಅಥವಾ ಗುಲ್-ಎ-ದಾವೂದ್ | ಕ್ರೀಡೆಯಲ್ಲಿ ಮದ್ದಿನ ದುರುಪಯೋಗದ (ಉದ್ದೀಪನ ಮದ್ದು/ಡೋಪಿಂಗ್ ) ವಿರುದ್ಧದ ಅಂತರರಾಷ್ಟ್ರೀಯ ಒಪ್ಪಂದ | ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ಆಡಳಿತವನ್ನು ಬಲಪಡಿಸುವುದು | ಮಖಾನಾನೋಮಿಕ್ಸ್ | ಮೋಡ ಬಿತ್ತನೆ | ಶ್ರೀ ನಾರಾಯಣ ಗುರು | ಜ್ಞಾನ ಭಾರತಂ ಗುರಿ

ಸೇವಂತಿಗೆ ಹೂವುಗಳು ಅಥವಾ ಗುಲ್-ಎ-ದಾವೂದ್

ಸಾಮಾನ್ಯ ಅಧ್ಯಾಯನ -3/ಪರಿಸರ ಅಧ್ಯಾಯನ

ಇದೀಗ ಸುದ್ದಿಯಲ್ಲಿದೆ:

  • ಕಾಶ್ಮೀರದ ಹೊಸ ಸೇವಂತಿಗೆ ಉದ್ಯಾನವನ, ಬಾಗ್-ಎ-ಗುಲ್-ಎ-ದಾವೂದ್ ಜಬರ್ವಾನ್ ಶ್ರೇಣಿಯ ಬಳಿ ತೆರೆಯಲಿದ್ದು, ಇದರಲ್ಲಿ 50+ ಪ್ರಭೇದಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಒಳಗೊಂಡಿದೆ.

ಸೇವಂತಿಗೆ ಹೂವುಗಳು ಬಗ್ಗೆ:

  • ಇದು ಆಸ್ಟರೇಸಿ ಕುಟುಂಬದಿಂದ ಬಂದ ದೀರ್ಘಕಾಲಿಕ ಹೂಬಿಡುವ ಸಸ್ಯವಾಗಿದೆ.
  • ಇದರ ಔಷಧೀಯ ಗುಣಗಳು ಮತ್ತು ಸುಗಂಧಭರಿತ ಪಾನೀಯಗಳ ಬಳಕೆಗಾಗಿ ಇದನ್ನು ಚೀನಾ, ಜಪಾನ್, ಯುರೋಪ್ ಮತ್ತು ಅಮೆರಿಕದಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ.
  • ವಿಶಿಷ್ಟತೆ:- ಇದು ಫೀನಾಲಿಕ್ ಸಂಯುಕ್ತಗಳಿಂದ ಸಮೃದ್ಧವಾಗಿದೆ ಮತ್ತು ಪ್ರಬಲವಾದ ಆಮ್ಲಜನಕ ವಿರೋಧಕ, ಸೂಕ್ಷ್ಮಾಣು ವಿರೋಧಕ, ಉರಿಯೂತ ವಿರೋಧಕ, ಕ್ಯಾನ್ಸರ್ ವಿರೋಧಕ ಮತ್ತು ಇತರ ಚಿಕಿತ್ಸಕ ಚಟುವಟಿಕೆಗಳನ್ನು ಪ್ರದರ್ಶಿಸುತ್ತದೆ .

ಕ್ರೀಡೆಯಲ್ಲಿ ಮದ್ದಿನ ದುರುಪಯೋಗದ (ಉದ್ದೀಪನ ಮದ್ದು/ಡೋಪಿಂಗ್ ) ವಿರುದ್ಧದ ಅಂತರರಾಷ್ಟ್ರೀಯ ಒಪ್ಪಂದ

ಇತರೆ

ಇದೀಗ ಸುದ್ದಿಯಲ್ಲಿದೆ:

  • ಪ್ಯಾರಿಸ್‌ನಲ್ಲಿ ನಡೆದ ಕ್ರೀಡೆಯಲ್ಲಿ ಮದ್ದಿನ ದುರುಪಯೋಗದ ವಿರುದ್ಧದ ಯುನೆಸ್ಕೋದ ಅಂತರರಾಷ್ಟ್ರೀಯ ಸಮಾವೇಶದ 10 ನೇ ಅಧಿವೇಶನದಲ್ಲಿ ಭಾರತವನ್ನು ಏಷ್ಯಾ-ಪೆಸಿಫಿಕ್ ಪ್ರತಿನಿಧಿಸುವ ಸಂಸ್ಥೆಯ ಉಪಾಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಲಾಯಿತು.

ಉದ್ದೀಪನ ಮದ್ದು  ಮತ್ತು ಅದರ ಕಾಳಜಿಗಳ ಬಗ್ಗೆ: 

  • ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯವನ್ನು ಕೃತಕವಾಗಿ ಹೆಚ್ಚಿಸಲು ನಿಷೇಧಿತ ರಾಸಾಯನಿಕ ಪದಾರ್ಥಗಳನ್ನು ಬಳಸುವ ಪದ್ಧತಿ. ಇದನ್ನು ಕಾರ್ಯಕ್ಷಮತೆ ಹೆಚ್ಚಿಸುವ ಔಷಧಗಳು (PEDs) ಎಂದು ಕರೆಯಲಾಗುತ್ತದೆ.

ಉದ್ದೀಪನ ಮದ್ದಿನ ವಿರೋಧಿಗೆ ಸಂಬಂಧಿಸಿದ ಮುಖ್ಯ ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಘೋಷಣೆಗಳು:

ಕೋಪನ್ ಹ್ಯಾಗನ್ ಘೋಷಣೆ:

  • 2003 ರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಎರಡನೇ ವಿಶ್ವ ಕ್ರೀಡೆಯಲ್ಲಿ ಉದ್ದೀಪನ ಮದ್ದಿನ ಕುರಿತ ಸಮ್ಮೇಳನದಲ್ಲಿ ಸರ್ಕಾರಗಳು ಕ್ರೀಡೆಯಲ್ಲಿ ಉದ್ದೀಪನ ಮದ್ದಿನ ವಿರೋಧಿ ಘೋಷಣೆಯನ್ನು ಕೋಪನ್‌ಹೇಗನ್‌ನಲ್ಲಿ ನಡೆಸಲಾಯಿತು .
  • ಉದ್ದೇಶ:- ಈ ಘೋಷಣೆಯು ಸರ್ಕಾರಗಳು ವಿಶ್ವ ಉದ್ದೀಪನ ಮದ್ದಿನ ವಿರೋಧಿ ಸಂಹಿತೆಯನ್ನು ಔಪಚಾರಿಕವಾಗಿ ಗುರುತಿಸುವ ಮತ್ತು ಕಾರ್ಯಗತಗೊಳಿಸುವ ಉದ್ದೇಶವನ್ನು ಸೂಚಿಸುವ ರಾಜಕೀಯ ದಾಖಲೆಯಾಗಿತ್ತು .
  • ಮಹತ್ವ:- “ಕ್ರೀಡೆಗಳಲ್ಲಿ ಉದ್ದೀಪನ ಮದ್ದಿನ ವಿರುದ್ಧ ಯುನೆಸ್ಕೋ ಅಂತರರಾಷ್ಟ್ರೀಯ ಸಮಾವೇಶ” ವನ್ನು ಸಿದ್ಧಪಡಿಸುವತ್ತ ಈ ಘೋಷಣೆಯು ಮೊದಲ ಹೆಜ್ಜೆಯಾಗಿತ್ತು.
  • 2003 ರಲ್ಲಿ ಭಾರತವು ಈ ಘೋಷಣೆಯನ್ನು ಒಪ್ಪಿಕೊಂಡಿತು.

ಕ್ರೀಡೆಯಲ್ಲಿ ಉದ್ದೀಪನ ಮದ್ದಿನ ವಿರುದ್ಧ ಅಂತರರಾಷ್ಟ್ರೀಯ ಸಮಾವೇಶ:

  • ಇದನ್ನು ‘ಯುನೆಸ್ಕೋ ಉದ್ದೀಪನ ಮದ್ದಿನ ವಿರುದ್ಧ ಸಮಾವೇಶ’ ಎಂತಲು ಕರೆಯುತ್ತಾರೆ.
  • ಇದನ್ನು 2005 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೋದ ಸಾಮಾನ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು. ಇದು 2007 ರಲ್ಲಿ ಜಾರಿಗೆ ಬಂದಿತು.
  • ಉದ್ದೇಶ:- ಕ್ರೀಡೆಗಳಲ್ಲಿ ಉದ್ದೀಪನ ಮದ್ದು ತಡೆಗಟ್ಟುವಿಕೆ ಮತ್ತು ಅದರ ವಿರುದ್ಧದ ಹೋರಾಟವನ್ನು ಉತ್ತೇಜಿಸಲು, ಅದರ ನಿರ್ಮೂಲನೆ.
  • 2007 ರಲ್ಲಿ ಭಾರತವು ಈ ಸಮಾವೇಶವನ್ನು ಅಂಗೀಕರಿಸಿತು.
  • ಗಮನಿಸಿ:- ಯುವ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆಯು ಭಾರತದಲ್ಲಿ ಉದ್ದೀಪನ ಮದ್ದು ವಿರೋಧಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ, ಅನುಷ್ಠಾನಗೊಳಿಸುವ ಮತ್ತು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.

ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ಆಡಳಿತವನ್ನು ಬಲಪಡಿಸುವುದು

ಸಾಮಾನ್ಯ ಅಧ್ಯಾಯನ 2/ ಆಡಳಿತ. ಸಾಮಾನ್ಯ ಅಧ್ಯಾಯನ 3/ ವಿಜ್ಞಾನ ಮತ್ತು ತಂತ್ರಜ್ಞಾನ

ಸಂದರ್ಭ:

  • ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟಿ (NBF) ನ ಮೂಲಕ ಆಡಳಿತವನ್ನು ಪರಿವರ್ತಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಡಿಜಿಟಲ್ ವಿಶ್ವಾಸವನ್ನು ಬಲಪಡಿಸಲು ಭಾರತವು ಬ್ಲಾಕ್‌ಚೈನ್ ತಂತ್ರಜ್ಞಾನದ ಅಳವಡಿಕೆಯನ್ನು ವೇಗಗೊಳಿಸುತ್ತಿದೆ.

ಬ್ಲಾಕ್‌ಚೈನ್ ತಂತ್ರಜ್ಞಾನದ ಬಗ್ಗೆ:

  • ಬ್ಲಾಕ್‌ಚೈನ್ ಎನ್ನುವುದು ವಿತರಿತ, ಪಾರದರ್ಶಕ, ಸುರಕ್ಷಿತ ಮತ್ತು ಅಮಾರ್ಜನೀಯ ದತ್ತಾoಶವಾಗಿದ್ದು, ಇದು ದಾಖಲೆ ಅಥವಾ ವ್ಯವಹಾರಗಳ ಡಿಜಿಟಲ್ ದಾಖಲೆ (ಲೆಡ್ಜರ್‌) ಯಂತೆ ಕಾರ್ಯನಿರ್ವಹಿಸುತ್ತದೆ, ತಿದ್ದುಪಡಿ ನಿರೋಧಕವಾಗಿದೆ ಮತ್ತು ಕಂಪ್ಯೂಟರ್‌ಗಳ ನೆಟ್‌ವರ್ಕ್‌ನಲ್ಲಿ ಪ್ರವೇಶಿಸಬಹುದು.

ಬ್ಲಾಕ್‌ಚೈನ್ ತಂತ್ರಜ್ಞಾನದ ಅನ್ವಯಗಳು: ಬ್ಲಾಕ್‌ಚೈನ್ ತಂತ್ರಜ್ಞಾನವು ಅದರ ಸುರಕ್ಷಿತ, ಪಾರದರ್ಶಕ ಮತ್ತು ವಿಕೇಂದ್ರೀಕೃತ ಸ್ವಭಾವದಿಂದಾಗಿ ವಿವಿಧ ಕೈಗಾರಿಕೆಗಳಲ್ಲಿ ಹಲವಾರು ಅನ್ವಯಿಕೆಗಳನ್ನು ಹೊಂದಿದೆ.

  1. ಕ್ರಿಪ್ಟೋಕರೆನ್ಸಿಗಳು (ಸಂಕೇತಿತ ಡಿಜಿಟಲ್ ಕರೆನ್ಸಿ):- ಬಿಟ್‌ಕಾಯಿನ್ ಮತ್ತು ಇಥೀರಿಯಂ ನಂತಹ ಸುರಕ್ಷಿತ ಡಿಜಿಟಲ್ ಕರೆನ್ಸಿಗಳನ್ನು ಸಕ್ರಿಯಗೊಳಿಸುವುದು.
  2. ಸ್ಮಾರ್ಟ್ ಒಪ್ಪಂದಗಳು:- ಮಧ್ಯವರ್ತಿಗಳಿಲ್ಲದೆ ಒಪ್ಪಂದಗಳನ್ನು ಸ್ವಯಂಚಾಲಿತಗೊಳಿಸುವುದು.
  3. ಪೂರೈಕೆ ಸರಪಳಿ ನಿರ್ವಹಣೆ:– ಪಾರದರ್ಶಕತೆ ಮತ್ತು ಪತ್ತೆಹಚ್ಚುವಿಕೆಯನ್ನು ಹೆಚ್ಚಿಸುವುದು.
  4. ಆರೋಗ್ಯ ರಕ್ಷಣೆ:- ರೋಗಿಗಳ ದಾಖಲೆಗಳನ್ನು ಸುರಕ್ಷಿತಗೊಳಿಸುವುದು ಮತ್ತು ದತ್ತಾಂಶ ಹಂಚಿಕೆಯನ್ನು ಸುಧಾರಿಸುವುದು.
  5. ಬ್ಯಾಂಕಿಂಗ್ ಮತ್ತು ಹಣಕಾಸು:- ಗಡಿಯಾಚೆಗಿನ ಪಾವತಿಗಳನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ವಂಚನೆ ಪತ್ತೆ.
  6. ಮತದಾನ ವ್ಯವಸ್ಥೆ:- ಪಾರದರ್ಶಕ ಮತ್ತು ಅಕ್ರಮ-ನಿರೋಧಕ ಚುನಾವಣೆಗಳನ್ನು ಖಚಿತಪಡಿಸುವುದು.
  7. ಗುರುತಿನ ನಿರ್ವಹಣೆ:- ಸುರಕ್ಷಿತ, ಪರಿಶೀಲಿಸಬಹುದಾದ ಡಿಜಿಟಲ್ ಗುರುತುಗಳನ್ನು ನೀಡುವುದು.
  8. ಸ್ಥಿರಾಸ್ತಿ (ರಿಯಲ್ ಎಸ್ಟೇಟ್):- ಟೋಕನ್ ಮಾಡಿದ ಸ್ವತ್ತುಗಳೊಂದಿಗೆ ಆಸ್ತಿ ವರ್ಗಾವಣೆಯನ್ನು ಸರಳಿಕರಣ ಗೊಳಿಸುವುದು.
  9. ಗೇಮಿಂಗ್:– ಆಟದಲ್ಲಿನ ಸ್ವತ್ತುಗಳು ಮತ್ತು ಅಪ್ರತಿವಿನಿಮಯ ಟೋಕನ್ (NFT) ಗಳ ಮಾಲೀಕತ್ವವನ್ನು ಸಕ್ರಿಯಗೊಳಿಸುವುದು.
  10. ಇಂಧನ ವಲಯ:- ಸಹಭಾಗಿಗಳಿಂದ ಸಹಭಾಗಿಗಳಿಗೆ ಇಂಧನ ವ್ಯಾಪಾರವನ್ನು ಬೆಂಬಲಿಸುವುದು.

ರಾಷ್ಟ್ರೀಯ ಬ್ಲಾಕ್‌ಚೈನ್ ಚೌಕಟ್ಟಿ (NBF) ನ ಬಗ್ಗೆ:

  • ಇದು 2024 ರಲ್ಲಿ ಪ್ರಾರಂಭವಾಯಿತು.
  • ಅಭಿವೃದ್ಧಿಪಡಿಸಿದವರು – ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY).
  • ಉದ್ದೇಶ:- ಅನುಮತಿಸಲಾದ ಬ್ಲಾಕ್‌ಚೈನ್ ಆಧಾರಿತ ಬಳಕೆಯ ಅಭಿವೃದ್ಧಿ ಮತ್ತು ನಿಯೋಜನೆಯನ್ನು ವೇಗಗೊಳಿಸುವುದು.

ಮಖಾನಾನೋಮಿಕ್ಸ್

ಸಾಮಾನ್ಯ ಅಧ್ಯಾಯನ 3/ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:

  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಸದಾಗಿ ಪ್ರಾರಂಭಿಸಲಾದ ರಾಷ್ಟ್ರೀಯ ಮಖಾನಾ ಮಂಡಳಿಯನ್ನು ಈ ವಲಯಕ್ಕೆ ಒಂದು ಪರಿವರ್ತನಾತ್ಮಕ “ಕ್ರಾಂತಿ” ಎಂದು ಬಣ್ಣಿಸಿದರು.

ಮಖಾನ (ಯೂರ್ಯೇಲ್ ಫೆರಾಕ್ಸ್) ಕುರಿತು:

  • ಇದು “ಜಲಪದ್ಮ ಕುಲ” (ನಿಂಫೇಸಿಯೇ) ಕ್ಕೇ ಸೇರಿರುವ ಒಂದು ಹೂ ಬೀರುವ ಸಸ್ಯವಾಗಿದೆ.
  • ಹವಾಮಾನ ಪರಿಸ್ಥಿತಿ:- ತಾಪಮಾನ 20-35°C ಮತ್ತು ವಾರ್ಷಿಕ 100-250 ಸೆಂ.ಮೀ. ಮಳೆಯ ಅಗತ್ಯವಿರುತ್ತದೆ.
  • ಇದು ಸಂಪೂರ್ಣವಾಗಿ ಸಾವಯವ ಧಾನ್ಯೇತರ ಆಹಾರವಾಗಿದ್ದು, ಮುಖ್ಯವಾಗಿ ಭಾರತದಲ್ಲಿ ಮಾತ್ರವಲ್ಲದೆ ಕೊರಿಯಾ, ಜಪಾನ್ ಮತ್ತು ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ.
  • ಭಾರತದ ಮಖಾನಾ ಉತ್ಪಾದನೆಯಲ್ಲಿ ಬಿಹಾರವು ~90% ರಷ್ಟು ಪಾಲನ್ನು ಹೊಂದಿದೆ.
  • ಭೌಗೋಳಿಕ ಸೂಚ್ಯಂಕ (GI) ಪಟ್ಟಿ:- 2022 ರಲ್ಲಿ, “ಮಿಥಿಲಾ ಮಖಾನಾ” ಗೆ GI ಟ್ಯಾಗ್ ನೀಡಲಾಯಿತು.

ಮೋಡ ಬಿತ್ತನೆ

ಸಾಮಾನ್ಯ ಅಧ್ಯಾಯನ 3/ಪರಿಸರ ಅಧ್ಯಾಯನ

ಇದೀಗ ಸುದ್ದಿಯಲ್ಲಿದೆ:

  • ಚಳಿಗಾಲದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಯಂತ್ರಿಸುವಲ್ಲಿ ಮೋಡ ಬಿತ್ತನೆ ಪ್ರಮುಖ ಪಾತ್ರ ವಹಿಸುವುದರಿಂದ ರಾಷ್ಟ್ರ ರಾಜಧಾನಿಗೆ ಅದು ಅತ್ಯಗತ್ಯ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.

ಮೋಡ ಬಿತ್ತನೆ ಅಥವಾ ಕೃತಕ ಮಳೆಯ ಬಗ್ಗೆ:

  • ವ್ಯಾಖ್ಯಾನ:- ಕೃತಕ ಮಳೆ ಎಂದರೆ ಮಳೆಹನಿಗಳ ರಚನೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಮೋಡಗಳಿಗೆ ಕೆಲವು ರಾಸಾಯನಿಕಗಳನ್ನು ಒಳಸೇರಿಸುವುದರ ಮೂಲಕ ಮಳೆಯನ್ನು ಪ್ರೇರೇಪಿಸುವುದು.
  • ಮೋಡ ಬಿತ್ತನೆಯು ಈ ಕೆಳಗಿನ ವಸ್ತುಗಳನ್ನು ಚದುರಿಸುವುದನ್ನು ಒಳಗೊಂಡಿರುತ್ತದೆ:
  • ಸಿಲ್ವರ್ ಅಯೋಡೈಡ್ (AgI)
  • ಪೊಟ್ಯಾಸಿಯಮ್ ಅಯೋಡೈಡ್
  • ಸೋಡಿಯಂ ಕ್ಲೋರೈಡ್
  • ಡ್ರೈ ಐಸ್ (CO₂)
  • ಅಗತ್ಯವಿರುವ ಷರತ್ತುಗಳು:- ಮಳೆ ತರಿಸುವ ಮೋಡಗಳು, ಸಾಕಷ್ಟು ಆರ್ದ್ರತೆ, ವಾತಾವರಣದ ಅಸ್ಥಿರತೆ, ಅನುಕೂಲಕರ ಗಾಳಿ ಮತ್ತು ತಾಪಮಾನದ ಪರಿಸ್ಥಿತಿಗಳನ್ನು ಒಳಗೊಂಡಿದೆ.

ಮೋಡ ಬಿತ್ತನೆಯ ಪ್ರಯೋಜನಗಳು:

  • ವಾಯು ಮಾಲಿನ್ಯ ತಗ್ಗಿಸುವಿಕೆ:- ದೆಹಲಿಯಂತಹ ನಗರಗಳಲ್ಲಿ, ಕೃತಕ ಮಳೆಯು ಕಣಗಳು ಮತ್ತು ಇತರ ಮಾಲಿನ್ಯಕಾರಕಗಳನ್ನು ತೊಳೆಯಬಹುದು, ಇದು ತೀವ್ರ ವಾಯು ಮಾಲಿನ್ಯದಿಂದ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ.
  • ಬರ ನಿವಾರಣೆ ಮತ್ತು ಜಲ ಸಂಪನ್ಮೂಲ ವೃದ್ಧಿ:ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳು ನೀರಿನ ಕೊರತೆಯನ್ನು ನಿಗಿಸಲು ಮೋಡ ಬಿತ್ತನೆಯನ್ನು ಬಳಸಿಕೊಂಡಿವೆ (ಉದಾ, “ಮೇಘದೂತ್ ಯೋಜನೆ” ಮತ್ತು “ವರ್ಷಧಾರಿ”).
  • ಕಾಡಿನ ಬೆಂಕಿ ನಿಯಂತ್ರಣ:- ತೇವಾಂಶದ ಮಟ್ಟವನ್ನು ಹೆಚ್ಚಿಸುವ ಮೂಲಕ, ಮೋಡ ಬಿತ್ತನೆಯು ಕಾಡ್ಗಿಚ್ಚಿನ ಅಪಾಯ ಮತ್ತು ತೀವ್ರತೆಯನ್ನು ಕಡಿಮೆ ಮಾಡುತ್ತದೆ.

ಶ್ರೀ ನಾರಾಯಣ ಗುರು

ಸಾಮಾನ್ಯ ಅಧ್ಯಾಯನ 1/ ಆಧುನಿಕ ಇತಿಹಾಸ

ಸಂದರ್ಭ:

  • ಕೇರಳದ ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ಶತಮಾನೋತ್ಸವದ ಆಚರಣೆಯನ್ನು ಭಾರತದ ರಾಷ್ಟ್ರಪತಿಗಳು ಉದ್ಘಾಟಿಸಿದರು.

ಶ್ರೀ ನಾರಾಯಣ ಗುರು (1856–1928) ಗಳ ಬಗ್ಗೆ:

  • ಇವರು 1856 ರಲ್ಲಿ ಕೇರಳದ ಈಳವ (ಈಜ್ಹವ) ಸಮುದಾಯದಲ್ಲಿ ಜನಿಸಿದರು, ಈ ಸಮುದಾಯವು ತೀವ್ರ ಜಾತಿ ತಾರತಮ್ಯವನ್ನು ಎದುರಿಸಿತು.
  • ಇವರು ಸಂತರು, ತತ್ವಜ್ಞಾನಿಗಳು ಮತ್ತು ಆಧುನಿಕ ಭಾರತದ ಪ್ರಮುಖ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದರು, ಅವರು ಜಾತಿ ದಬ್ಬಾಳಿಕೆಯನ್ನು ಪ್ರಶ್ನಿಸಿದರು ಮತ್ತು ಸಾಮಾಜಿಕ ಸುಧಾರಣೆಗೆ ಆಧ್ಯಾತ್ಮಿಕ ಸುಧಾರಣೆಯೇ ಮಾರ್ಗವೆಂದು ಒತ್ತಿ ಹೇಳಿದರು.
  • ಶ್ರೀ ನಾರಾಯಣ ಗುರುಗಳು ಅದ್ವೈತ ವೇದಾಂತವನ್ನು ಸಾಮಾಜಿಕ ನ್ಯಾಯದ ಕರೆಯೊಂದಿಗೆ ಸಮಿಕರಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಪ್ರಮುಖ ಕೊಡುಗೆಗಳು:

  • ಸಾಮಾಜಿಕ ತತ್ವಶಾಸ್ತ್ರ:- “ಮನುಷ್ಯನಿಗೆ ಒಂದು ಜಾತಿ, ಒಂದು ಧರ್ಮ, ಒಬ್ಬನೇ ದೇವರು” ಎಂಬ ಮೂಲಭೂತ ಸಂದೇಶವನ್ನು ಪ್ರಚಾರ ಮಾಡಿದರು.
  • ಜನ್ಮ ಆಧಾರಿತ ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿದರು ಮತ್ತು ಶ್ರಮ ಜೀವಿಗಳ ಘನತೆಯನ್ನು ಉತ್ತೇಜಿಸಿದರು.
  • ಸಂಸ್ಥೆ ನಿರ್ಮಾಣ:- ಶಿಕ್ಷಣ, ಸಾಮಾಜಿಕ ಸಬಲೀಕರಣ ಮತ್ತು ಸುಧಾರಣೆಯನ್ನು ಮುನ್ನಡೆಸಲು “ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಮ್” (SNDP) ಅನ್ನು 1903 ರಲ್ಲಿ ಸ್ಥಾಪಿಸಿದರು.
  • ಅರುವಿಪುರಂ ಚಳುವಳಿ (1888):- ದೇವಾಲಯದ ಆಚರಣೆಗಳ ಮೇಲಿನ ಬ್ರಾಹ್ಮಣರ ಏಕಸ್ವಾಮ್ಯವನ್ನು ಕೊನೆಗೊಳಿಸಿ ಸ್ವತಃ ಶಿವನ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಸಮಾನತೆಯ ಪ್ರವೇಶದೊಂದಿಗೆ ಸಾಮಾನ್ಯ ಜನರಿಗೆ ದೇವಾಲಯಗಳು, ಶಾಲೆಗಳು ಮತ್ತು ಆಶ್ರಮಗಳನ್ನು ನಿರ್ಮಿಸಿದರು .
  • ರಾಜಕೀಯ ಮತ್ತು ಸಾಮಾಜಿಕ ಚಳುವಳಿಗಳು:- ಕೆಳಜಾತಿಗಳ ದೇವಾಲಯ ಪ್ರವೇಶ ಹಕ್ಕುಗಳಿಗಾಗಿ ನಡೆದ ವೈಕo ಸತ್ಯಾಗ್ರಹಕ್ಕೆ (1924–25) ವಿಸ್ತೃತ ನೈತಿಕ ಮತ್ತು ಸೈದ್ಧಾಂತಿಕ ಬೆಂಬಲವಾಗಿತ್ತು .
  • ಶೈಕ್ಷಣಿಕ ಉನ್ನತಿ:– ಸಬಲೀಕರಣ ಮತ್ತು ಉನ್ನತಿಯ ಅಡಿಪಾಯವಾಗಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.

ಜ್ಞಾನ ಭಾರತಂ ಗುರಿ

ಸಾಮಾನ್ಯ ಅಧ್ಯಾಯನ 1/-ಸಂಸ್ಕೃತಿ

ಸಂದರ್ಭ:

  • ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಬರುವ ಹಸ್ತಪ್ರತಿಗಳ ಕುರಿತಾದ ಜ್ಞಾನ ಭಾರತಂ ಗುರಿ, ಹಸ್ತಪ್ರತಿಗಳ ಸಂರಕ್ಷಣೆ, ನಿರ್ವಹಣೆ ಮತ್ತು ಡಿಜಿಟಲೀಕರಣಕ್ಕಾಗಿ ಸುಮಾರು 20 ಸಂಸ್ಥೆಗಳೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

ಜ್ಞಾನ ಭಾರತಂ ಗುರಿಯ ಬಗ್ಗೆ:

  • ಗುರಿ:- ದೇಶಾದ್ಯಂತ ಕಂಡುಬರುವ ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಮತ್ತು ರಕ್ಷಿಸುವುದು.
  • ಉದ್ದೇಶ:- ಶೈಕ್ಷಣಿಕ ಸಂಸ್ಥೆಗಳು, ವಸ್ತು ಸಂಗ್ರಹಾಲಯಗಳು, ಗ್ರಂಥಾಲಯಗಳು ಇತ್ಯಾದಿಗಳಲ್ಲಿರುವ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿ ಪರಂಪರೆಯ “ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆ”ಯನ್ನು ಕೈಗೊಳ್ಳುವುದು.
  •  ಮಹತ್ವ:- ಐತಿಹಾಸಿಕ ಮೌಲ್ಯವನ್ನು ಸಂರಕ್ಷಿಸುವುದು , ಪ್ರಾಚೀನ ಭಾರತದ ಜ್ಞಾನವನ್ನು ಜಗತ್ತಿಗೆ ಅನಾವರಣಗೊಳಿಸುವುದು, ದೀರ್ಘಾಯುಷ್ಯವನ್ನು ಖಚಿತಪಡಿಸುವುದು ಮತ್ತು ಹಸ್ತಪ್ರತಿಗಳಿಗೆ ದಿನದ 24 ಗಂಟೆಗಳ ಪ್ರವೇಶ ಇತ್ಯಾದಿ.

ಹಸ್ತಪ್ರತಿಗಳ ಬಗ್ಗೆ:

  • ಹಸ್ತಪ್ರತಿಗಳು ಅಂದರೆ, ಕಾಗದ, ತೊಗಟೆ, ತಾಳೆ ಎಲೆ ಮುಂತಾದ ವಸ್ತುಗಳ ಮೇಲೆ ಕೈಯಿಂದ ಬರೆಯಲ್ಪಟ್ಟ ಬರಹಗಳು, ಇವು ಕನಿಷ್ಠ 75 ವರ್ಷ ಹಳೆಯದು ಆಗಿರುತ್ತವೆ ಹಾಗೂ ವೈಜ್ಞಾನಿಕ, ಐತಿಹಾಸಿಕ ಅಥವಾ ಸೌಂದರ್ಯಾತ್ಮಕ ಮಹತ್ವ ಹೊಂದಿರುತ್ತವೆ.
  • ಉದಾಹರಣೆಗೆ:- ಬಕ್ಷಾಲಿ ಹಸ್ತಪ್ರತಿ (ಕ್ರಿ.ಶ. 3ನೇ ಅಥವಾ 4ನೇ ಶತಮಾನ), ಇದು ಪ್ರಾಚೀನ ಭಾರತದ ಗಣಿತ ಗ್ರಂಥವಾಗಿದ್ದು, “ಭೋಜಪತ್ರ” ದ ಮೇಲೆ ಬರೆಯಲ್ಪಟ್ಟಿದೆ. ಇದು ಶೂನ್ಯದ ಬಳಕೆಯ ಅತ್ಯಂತ ಪ್ರಾಚೀನ ದಾಖಲಾಗಿರುವ ಉದಾಹರಣೆ ಎಂದು ಪರಿಗಣಿಸಲಾಗುತ್ತದೆ.
  • ಭಾರತವು ಬ್ರಾಹ್ಮಿ, ಕುಶಾನ, ಗೌಡಿ, ಲೆಪ್ಚಾ ಮತ್ತು ಮೈಥಿಲಿ ಮುಂತಾದ 80 ಪ್ರಾಚೀನ ಲಿಪಿಗಳಲ್ಲಿ ಅಂದಾಜು 1 ಕೋಟಿ ಹಸ್ತಪ್ರತಿಗಳನ್ನು ಹೊಂದಿದೆ.

ಭಾರತದಲ್ಲಿ ಹಸ್ತಪ್ರತಿ ಸಂರಕ್ಷಣೆಗಾಗಿ ಇತರ ಉಪಕ್ರಮಗಳು:

  • ರಾಷ್ಟ್ರೀಯ ಹಸ್ತಪ್ರತಿ ಗುರಿ (NMM):- ಹಸ್ತಪ್ರತಿಗಳನ್ನು ಪತ್ತೆಹಚ್ಚಲು ಮತ್ತು ಸಂರಕ್ಷಿಸಲು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2003 ರಲ್ಲಿ ಪ್ರಾರಂಭಿಸಿತು.
  • ಕೋಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯ:– ಇದು ಸುಮಾರು 3600 ಅಪರೂಪದ ಮತ್ತು ಐತಿಹಾಸಿಕವಾಗಿ ಪ್ರಮುಖವಾದ ಹಸ್ತಪ್ರತಿಗಳನ್ನು ಹೊಂದಿದೆ.
  • ಬಂಗಾಳದ ಏಷ್ಯಾಟಿಕ್ ಸೊಸೈಟಿ: ಇದನ್ನು ಜನವರಿ 15, 1784 ರಂದು ಸರ್ ವಿಲಿಯಂ ಜೋನ್ಸ್ ಸ್ಥಾಪಿಸಿದರು. ಇದು ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣವನ್ನು ಕೈಗೊಳ್ಳುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts