ಜಪಾನ್ ದೇಶ ಮೊದಲ ಮಹಿಳಾ ಪ್ರಧಾನಿಯನ್ನು ಆಯ್ಕೆ ಮಾಡಿದೆ | ಚಂದ್ರಯಾನ-2 ಮಿಷನ್ | ವಾಯು ಗುಣಮಟ್ಟ ನಿರ್ವಹಣಾ ಆಯೋಗವು (CAQM) ಇಡೀ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ ಹಂತ -II ಅನ್ನು ಜಾರಿಗೆ ತಂದಿದೆ | “ಮಲೇರಿಯಾ ವಿರುದ್ಧ ಹೊಸ ಏಕಕೋಶಿಯ (ಮೋನೋಕ್ಲೋನಲ್) ಪ್ರತಿಕಾಯ ಪ್ರಾರಂಭಿಕ ಹಂತದಲ್ಲಿ ಭರವಸೆ ತೋರಿಸಿದೆ” | ಉಡಾನ್ (UDAN) ಯೋಜನೆ

ಜಪಾನ್ ದೇಶ ಮೊದಲ ಮಹಿಳಾ ಪ್ರಧಾನಿಯನ್ನು ಆಯ್ಕೆ ಮಾಡಿದೆ

ಸಾಮಾನ್ಯ ಅಧ್ಯಯನ  2/ಅಂತರರಾಷ್ಟ್ರೀಯ ಸಂಬಂಧಗಳು

ಸಂದರ್ಭ:

  • ಜಪಾನ್‌ನ ಹೊಸದಾಗಿ ಆಯ್ಕೆಯಾದ ಮತ್ತು ಮೊದಲ ಮಹಿಳಾ ಪ್ರಧಾನಿ ಸನೇ ತಕೈಚಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ ಸಲ್ಲಿಸಿದರು. 
  • ಇಂಡೋ-ಪೆಸಿಫಿಕ್ ಪ್ರದೇಶದಾದ್ಯಂತ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳುವಲ್ಲಿ ಭಾರತ ಮತ್ತು ಜಪಾನ್ ನಡುವಿನ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಚಂದ್ರಯಾನ-2 ಮಿಷನ್

ಸಾಮಾನ್ಯ ಅಧ್ಯಯನ  3 / ವಿಜ್ಞಾನ ಮತ್ತು ತಂತ್ರಜ್ಞಾನ

ಸಂದರ್ಭ:

  • ಚಂದ್ರಯಾನ-2 ಮಿಷನ್ ತನ್ನ ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ಚಂದ್ರನ ಮೇಲೆ ಸೂರ್ಯನ ಸೌರಮಂಡಲದ ದ್ರವ್ಯ ಉತ್ಸರ್ಗ (ಕರೋನಲ್ ಮಾಸ್ ಎಜೆಕ್ಷನ್-CME) ನ ಮೊದಲ ವೀಕ್ಷಣೆಯನ್ನು ಮಾಡಿದೆ.

ಚಂದ್ರಯಾನ-1 ರ ಬಗ್ಗೆ:

  • ಇದನ್ನು 2008 ರಲ್ಲಿ ಪ್ರಾರಂಭಿಸಲಾಯಿತು.
  • ಇದು ಭಾರತದ ಮೊದಲ ಚಂದ್ರಯಾನವಾಗಿತ್ತು.
  • ಇದು ಭಾರತವನ್ನು ಚಂದ್ರನನ್ನು ತಲುಪಿದ ಐದನೇ ರಾಷ್ಟ್ರವನ್ನಾಗಿ ಮಾಡಿತು.
  • ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಉಪಸ್ಥಿತಿಯು ಈ ಕಾರ್ಯಾಚರಣೆಯ ಅತ್ಯಂತ ಮಹತ್ವದ ಆವಿಷ್ಕಾರವಾಗಿತ್ತು , ಇದನ್ನು ನಾಸಾ ದೃಢಪಡಿಸಿದೆ.

ಚಂದ್ರಯಾನ-2 ರ ಬಗ್ಗೆ:

  • ಇದನ್ನು 2019 ರಲ್ಲಿ ಪರಿಕ್ರಮಕ ಯಂತ್ರ (ಆರ್ಬಿಟರ್), ಇಳಿಯುವ ಯಂತ್ರ (ಲ್ಯಾಂಡರ್ ವಿಕ್ರಮ್) ಮತ್ತು ಸಂಚಾರಿ ಯಂತ್ರ (ರೋವರ್ ಪ್ರಜ್ಞಾನ್) ನೊಂದಿಗೆ ಉಡಾವಣೆ ಮಾಡಲಾಯಿತು.
  • ಉದ್ದೇಶ:- ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಇಳಿಯುವಿಕೆಯನ್ನು ಸಾಧಿಸುವುದು, ಆದರೆ ಇಸ್ರೋ ಲ್ಯಾಂಡರ್‌ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು, ಇದರ ಪರಿಣಾಮವಾಗಿ ಕ್ರ್ಯಾಶ್ ಲ್ಯಾಂಡಿಂಗ್ (ಅಪಘಾತಮಯ ಭೂ ಸ್ಪರ್ಶ) ಸಂಭವಿಸಿತು.
  • ಈ ಹಿನ್ನಡೆಯ ಹೊರತಾಗಿಯೂ, ಆರ್ಬಿಟರ್ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿತು ಮತ್ತು ಚಂದ್ರನ ಮೇಲ್ಮೈ ಮತ್ತು ವಾತಾವರಣದ ಬಗ್ಗೆ ನಿರ್ಣಾಯಕ ದತ್ತಾಂಶವನ್ನು ಒದಗಿಸಿತು.

ಚಂದ್ರಯಾನ-3 ರ ಬಗ್ಗೆ:

  • ಇದು ಚಂದ್ರಯಾನ -2 ರ ನಂತರದ ಕಾರ್ಯಾಚರಣೆಯಾಗಿದ್ದು, 2023 ರಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಮೃದುವಾದ ಇಳಿಯುವಿಕೆಯನ್ನು ಯಶಸ್ವಿಯಾಗಿ ಸಾಧಿಸಿತು.

ಇಳಿಯುವ ಯಂತ್ರ (ಲ್ಯಾಂಡರ್) ದ ಕಾರ್ಯನಿರ್ವಹಣಾ ಉಪಕರಣಗಳು:

  • ಚಂದ್ರನ ಮೇಲ್ಮೈ ತಾಪಭೌತಿಕ ಪ್ರಯೋಗ (ChaSTE):– ಚಂದ್ರನ ಮೇಲ್ಮೈಯ ತಾಪಮಾನ, ಉಷ್ಣವಾಹಕತೆ, ಮತ್ತು ಉಷ್ಣಗುಣಗಳನ್ನು ಅಳೆಯುವುದು. ಇದು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮಣ್ಣಿನ ಉಷ್ಣಸ್ವಭಾವವನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ.
  • ಚಂದ್ರನ ಭೂಕಂಪ ಚಟುವಟಿಕೆ ಅಳೆಯುವ ಉಪಕರಣ ಅಥವಾ ಚಂದ್ರನ ಕಂಪನ ಮಾಪಕ ಯಂತ್ರ (ILSA):- ಚಂದ್ರನ ಮೇಲ್ಮೈಯಲ್ಲಿ ಸಂಭವಿಸುವ ಭೂಕಂಪನ ಮತ್ತು ಇತರೆ ಕಂಪನ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಮತ್ತು ದಾಖಲು ಮಾಡುವುದು. ಇದರಿಂದ ಚಂದ್ರನ ಒಳಗಿನ ರಚನೆ ಮತ್ತು ಸಂಯೋಜನೆ ಕುರಿತು ಮಾಹಿತಿಯನ್ನು ಪಡೆಯಬಹುದು.

ಸಂಚಾರಿ ಯಂತ್ರ (ರೋವರ್) ಕಾರ್ಯನಿರ್ವಹಣಾ ಉಪಕರಣಗಳು:

  • ಆಲ್ಫಾ ಕಣ ಎಕ್ಸ್-ಕಿರಣ ವಿಕಿರಣಮಾಪಕ (APXS) ಉಪಕರಣವು ಚಂದ್ರನ ಮೇಲ್ಮೈಯ ರಾಸಾಯನಿಕ ಸಂಯೋಜನೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಮತ್ತು  ಲೇಸರ್ ಪ್ರೇರಿತ ವಿಚ್ಛೇದನ ವಿಕಿರಣದರ್ಶಕ (LIBS) ಉಪಕರಣವು ಚಂದ್ರನ ಮೇಲ್ಮೈಯಲ್ಲಿರುವ ಮ್ಯಾಗ್ನೀಶಿಯಂ, ಅಲ್ಯೂಮಿನಿಯಂ, ಸಿಲಿಕಾನ್ ಮತ್ತು ಕಬ್ಬಿಣ ಮುಂತಾದ ಮೂಲಧಾತುಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ವಾಯು ಗುಣಮಟ್ಟ ನಿರ್ವಹಣಾ ಆಯೋಗವು (CAQM) ಇಡೀ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ ಹಂತ -II ಅನ್ನು ಜಾರಿಗೆ ತಂದಿದೆ

ಸಾಮಾನ್ಯ ಅಧ್ಯಯನ  – 3 / ಪರಿಸರ ಅಧ್ಯಯನ

ಇದೀಗ ಸುದ್ದಿಯಲ್ಲಿದೆ:

  • ವಾಯು ಗುಣಮಟ್ಟ ನಿರ್ವಹಣಾ ಆಯೋಗವು (CAQM) ವು ಇಡೀ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (GRAP) ಹಂತ-II ಅನ್ನು ಜಾರಿಗೆ ತಂದಿದೆ.

ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (GRAP) ಯ ಬಗ್ಗೆ:

  • ಉದ್ದೇಶ:- ಇದು ವಾಯು ಗುಣಮಟ್ಟ ಸೂಚ್ಯಂಕ (AQI) ದ ಮಟ್ಟವನ್ನು ಆಧರಿಸಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ- ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಜಾರಿಗೆ ತರಲಾದ ತುರ್ತು ಕ್ರಮಗಳ ಒಂದು ಗುಂಪಾಗಿದೆ.
  • ಅನುಷ್ಠಾನಗೊಳಿಸುವವರು:- ಇದನ್ನು ಪರಿಸರ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರ (EPCA) ರೂಪಿಸಿದೆ ಮತ್ತು 2021 ರಿಂದ ವಾಯು ಗುಣಮಟ್ಟ ನಿರ್ವಹಣಾ ಆಯೋಗದಿಂದ ಜಾರಿಗೊಳಿಸಲಾಗಿದೆ.

ವಾಯು ಗುಣಮಟ್ಟ ಸೂಚ್ಯಂಕ (AQI) ಮಟ್ಟಗಳಿಗೆ ಅನುಗುಣವಾಗಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ:

  • ಹಂತ I – ಕಳಪೆ (AQI 201–300)
  • ಹಂತ II – ತುಂಬಾ ಕಳಪೆ (AQI 301–400)
  • ಹಂತ III – ತೀವ್ರ ಕಳಪೆ (AQI 401–450)
  • ಹಂತ IV – ಅತೀ ತೀವ್ರ ಕಳಪೆ (AQI >450)

ಚಳಿಗಾಲದಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಏಕೆ ಹದಗೆಡುತ್ತದೆ?

  • ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಕೂಳೆ ಸುಡುವಿಕೆ.
  • ಕಡಿಮೆ ಗಾಳಿಯ ವೇಗ ಮತ್ತು ತಾಪಮಾನ ವಿಲೋಮವು ಮಾಲಿನ್ಯಕಾರಕಗಳನ್ನು ಬಲೆಗೆ ಬೀಳಿಸುತ್ತದೆ.
  • ವಾಹನಗಳಿಂದ ಹೊರಸೂಸುವ ಹೊಗೆ, ನಿರ್ಮಾಣ ಕಾರ್ಯದ ಧೂಳು ಮತ್ತು ದೀಪಾವಳಿ ಪಟಾಕಿಗಳು ಹೊರೆಯನ್ನು ಹೆಚ್ಚಿಸುತ್ತವೆ.
  • ನಗರ ಉಷ್ಣ ದ್ವೀಪ ಪರಿಣಾಮ ಮತ್ತು ಪ್ರಾದೇಶಿಕ ಸ್ಥಳಾಕೃತಿ ಮಾಲಿನ್ಯಕಾರಕಗಳ ನಿಶ್ಚಲತೆಯನ್ನು ಉಲ್ಬಣಗೊಳಿಸುತ್ತವೆ.

ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಬಗ್ಗೆ:

  • ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಕಾಯ್ದೆ , 2021 ರ ಅಡಿಯಲ್ಲಿ ರಚಿಸಲಾಗಿದೆ.
  • ವ್ಯಾಪ್ತಿ:- ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶ.
  • ಉದ್ದೇಶ:- ಹಿಂದಿನ ಪರಿಸರ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರದ ಬದಲಿಗೆ, ಗಾಳಿಯ ಗುಣಮಟ್ಟ ಸುಧಾರಣೆಗಾಗಿ ಪ್ರಾದೇಶಿಕ-ವ್ಯಾಪಿ ಕ್ರಮಗಳನ್ನು ಸಂಘಟಿಸಲು ಮತ್ತು ಕಾರ್ಯಗತಗೊಳಿಸಲು.

“ಮಲೇರಿಯಾ ವಿರುದ್ಧ ಹೊಸ ಏಕಕೋಶಿಯ (ಮೋನೋಕ್ಲೋನಲ್) ಪ್ರತಿಕಾಯ ಪ್ರಾರಂಭಿಕ ಹಂತದಲ್ಲಿ ಭರವಸೆ ತೋರಿಸಿದೆ”

ಸಾಮಾನ್ಯ ಅಧ್ಯಯನ – 2/ ಆರೋಗ್ಯ, ಸಾಮಾನ್ಯ ಅಧ್ಯಯನ  -3/ ವಿಜ್ಞಾನ ಮತ್ತು ತಂತ್ರಜ್ಞಾನ

ಸಂದರ್ಭ:

  • MAM01 ಎಂಬ ಹೆಸರಿನ ಒಂದು ನವೀನ ಏಕ ಕೋಶಿಯ ಪ್ರತಿಕಾಯ (mAb), ಆರಂಭಿಕ ವೈದ್ಯಕೀಯ ಪ್ರಯೋಗದಲ್ಲಿ ಮಲೇರಿಯಾ ವಿರುದ್ಧ ಬಲವಾದ, ಔಷಧದ ಪ್ರಮಾಣ-ಅವಲಂಬಿತ ರಕ್ಷಣೆಯನ್ನು ಪ್ರದರ್ಶಿಸಿದೆ.

ಏಕ ಕೋಶಿಯ ಪ್ರತಿಕಾಯಗಳ (mAbs) ಬಗ್ಗೆ:

  • ಏಕ ಕೋಶಿಯ ಪ್ರತಿಕಾಯಗಳು (mAbs) ಪ್ರಯೋಗಾಲಯದಲ್ಲಿ ರಚಿಸಲಾದ ಪ್ರೋಟೀನ್‌ಗಳಾಗಿವೆ, ಅದು ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಕ್ಯಾನ್ಸರ್ ಕೋಶಗಳಂತಹ ನಿರ್ದಿಷ್ಟವಾಗಿ ದೇಹಕ್ಕೆ ಹೊರಗಿನಿಂದ ಪ್ರವೇಶಿಸುವ ಹಾನಿಕಾರಕ ಕಣಗಳ ವಿರುದ್ಧ ಹೋರಾಡಲು ನಮ್ಮ ದೇಹದ ನೈಸರ್ಗಿಕ ಪ್ರತಿಕಾಯಗಳನ್ನು ಅನುಕರಿಸುತ್ತದೆ.
  • ಅವು ಒಂದೇ ನಿರ್ದಿಷ್ಟ ಗುರಿಗೆ ಮಾತ್ರ ಬಂಧಿಸಲು ವಿನ್ಯಾಸಗೊಳಿಸಲಾಗಿರುವುದರಿಂದ, ನಿಖರ ಗುರಿಯನ್ನು ಹೊಂದಿರುವ ಬಲವಾದ ಚಿಕಿತ್ಸೆಯ ರೂಪ.

ಮಲೇರಿಯಾ ರೋಗದ ಬಗ್ಗೆ:

  • ಜವಾಬ್ದಾರಿಯುತ ರೋಗಕಾರಕ:- ಮಲೇರಿಯಾವು ಪ್ಲಾಸ್ಮೋಡಿಯಂ ಪರಾವಲಂಬಿಗಳಿಂದ ಉಂಟಾಗುವ ತೀವ್ರವಾದ ಜ್ವರದ ಕಾಯಿಲೆಯಾಗಿದೆ.
  • ವಾಹಕ:- ಇದು ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಗಳ ಕಡಿತದ ಮೂಲಕ ಜನರಿಂದ ಜನರಿಗೆ ಹರಡುತ್ತದೆ. ಇದನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದಾಗಿದೆ.
  • ಹರಡುವಿಕೆ:- ಮಲೇರಿಯಾ ಸಾಂಕ್ರಾಮಿಕವಲ್ಲ ಮತ್ತು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವುದಿಲ್ಲ; ಈ ರೋಗವು ಹೆಣ್ಣು ಅನಾಫಿಲಿಸ್ ಸೊಳ್ಳೆಗಳ ಕಡಿತದ ಮೂಲಕ ಹರಡುತ್ತದೆ.
  • ಐದು ಜಾತಿಯ ಪರಾವಲಂಬಿಗಳು ಮಾನವರಲ್ಲಿ ಮಲೇರಿಯಾವನ್ನು ಉಂಟುಮಾಡಬಹುದು ಮತ್ತು ಅವುಗಳಲ್ಲಿ ಎರಡು ಜಾತಿಗಳು ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಮತ್ತು ಪ್ಲಾಸ್ಮೋಡಿಯಂ ವೈವ್ಯಾಕ್ಸ್ ಅತ್ಯಂತ ದೊಡ್ಡ ಅಪಾಯವನ್ನುಂಟುಮಾಡುತ್ತವೆ.

ಮಲೇರಿಯಾ ರೋಗದ ಲಕ್ಷಣಗಳು:

  • ಶಿಶುಗಳು, 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಪ್ರಯಾಣಿಕರು ಮತ್ತು ಹೆಚ್ಐವಿ ಅಥವಾ ಏಡ್ಸ್ ಪೀಡಿತರು ಹೆಚ್ಚಿನ ಅಪಾಯದಲ್ಲಿರುತ್ತಾರೆ. ತೀವ್ರವಾದ ಲಕ್ಷಣಗಳು:
  • ತೀವ್ರ ಆಯಾಸ ಮತ್ತು ನಿಶ್ಯಕ್ತಿ
  • ಪ್ರಜ್ಞೆ ತಪ್ಪುವುದು 
  • ಬಹು ಸೆಳೆತಗಳು
  • ಉಸಿರಾಟದ ತೊಂದರೆ 
  • ಗಾಢ ಅಥವಾ ರಕ್ತಸಿಕ್ತ ಮೂತ್ರ 
  • ಕಾಮಾಲೆ (ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು) 
  • ಅಸಹಜ ರಕ್ತಸ್ರಾವ

ಮಲೇರಿಯಾ ನಿಯಂತ್ರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಉಪಕ್ರಮಗಳು:

  • ಮಲೇರಿಯಾ ಜಾಗತಿಕ ತಾಂತ್ರಿಕ ಕಾರ್ಯತಂತ್ರ, 2016–2030:- 2015 ರ ದತ್ತಾoಶಕ್ಕೆ ಹೋಲಿಸಿದರೆ 2020 ರ ವೇಳೆಗೆ ಮಲೇರಿಯಾ ಪ್ರಕರಣಗಳು ಮತ್ತು ಮರಣ ಪ್ರಮಾಣವನ್ನು ಕನಿಷ್ಠ 40%, 2025 ರ ವೇಳೆಗೆ ಕನಿಷ್ಠ 75% ಮತ್ತು 2030 ರ ವೇಳೆಗೆ ಕನಿಷ್ಠ 90% ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
  • “E -2025 ಉಪಕ್ರಮ”:- 2025 ರ ವೇಳೆಗೆ ಮಲೇರಿಯಾ ನಿರ್ಮೂಲನೆ ಮಾಡಲು ಸಾಮರ್ಥ್ಯವಿರುವ 25 ದೇಶಗಳನ್ನು WHO ಗುರುತಿಸಿದೆ.
  • ಹೆಚ್ಚಿನ ಹೊರೆಯಿಂದ ಹೆಚ್ಚಿನ ಪರಿಣಾಮ (HBHI) ಉಪಕ್ರಮ:ಭಾರತ ಸೇರಿದಂತೆ 11 ಹೆಚ್ಚಿನ ಮಲೇರಿಯಾ ಹೊರೆ ಹೊಂದಿರುವ ದೇಶಗಳಲ್ಲಿ ಪ್ರಾರಂಭಿಸಿದೆ.

ಮಲೇರಿಯಾ ನಿಯಂತ್ರಣಕ್ಕೆ ಭಾರತ ಸರ್ಕಾರದ ಉಪಕ್ರಮಗಳು:

  • ರಾಷ್ಟ್ರೀಯ ಗುರಿ:- ಭಾರತ ಸರ್ಕಾರವು 2027 ರ ವೇಳೆಗೆ ಭಾರತದಲ್ಲಿ ಮಲೇರಿಯಾವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ.
  • ಮಲೇರಿಯಾ ನಿರ್ಮೂಲನೆಗಾಗಿ ರಾಷ್ಟ್ರೀಯ ಚೌಕಟ್ಟು (NFME):- ಇದನ್ನು 2016-2030 ರ ಮಲೇರಿಯಾ ನಿರ್ಮೂಲನೆಗಾಗಿ ಜಾಗತಿಕ ತಾಂತ್ರಿಕ ಕಾರ್ಯತಂತ್ರದೊಂದಿಗೆ  (GTS) ಸಂಯೋಜಿಸಿ 2016 ರಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಪ್ರಾರಂಭಿಸಲಾಗಿದೆ.
  • ಮಲೇರಿಯಾ ನಿರ್ಮೂಲನ ಸಂಶೋಧನಾ ಒಕ್ಕೂಟ-ಭಾರತ (MERA-ಭಾರತ):- ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಲೇರಿಯಾ ನಿಯಂತ್ರಣದಲ್ಲಿ ಕೆಲಸ ಮಾಡುವ ಪಾಲುದಾರರ ಸಂಘಟನೆಯಾಗಿ ಸ್ಥಾಪಿಸಿತು.

ಉಡಾನ್ (UDAN) ಯೋಜನೆ

ಸಾಮಾನ್ಯ ಅಧ್ಯಯನ  3/ಮೂಲಸೌಕರ್ಯ

ಸಂದರ್ಭ:

  • ಉಡೇ  ದೇಶ್ ಕಾ ಆಮ್ ನಾಗರಿಕ್  (UDAN) ಯೋಜನೆಯು 9 ವರ್ಷಗಳನ್ನು ಪೂರೈಸಿದೆ.

ಉಡಾನ್ ಯೋಜನೆಯ ಬಗ್ಗೆ:

  • ಇದು 2016 ರಲ್ಲಿ ಪ್ರಾರಂಭಿಸಲಾದ ಪ್ರಾದೇಶಿಕ ಸಂಪರ್ಕ ಯೋಜನೆಯಾಗಿದೆ.
  • ಮೊದಲ ಉಡಾನ್ ವಿಮಾನವು 2017 ರಲ್ಲಿ ಶಿಮ್ಲಾ ಮತ್ತು ದೆಹಲಿ ನಡುವೆ ಕಾರ್ಯನಿರ್ವಹಿಸಿತು.
  • ಸಚಿವಾಲಯ: ನಾಗರಿಕ ವಿಮಾನಯಾನ ಸಚಿವಾಲಯ.
  • ಗುರಿ:- 2ನೇ ಮತ್ತು 3ನೇ ದರ್ಜೆಯ ನಗರಗಳನ್ನು ಪ್ರಮುಖ ಕೇಂದ್ರಗಳಿಗೆ ಸಂಪರ್ಕಿಸುವ ಮೂಲಕ ವಿಮಾನ ಪ್ರಯಾಣವನ್ನು ಕೈಗೆಟುಕುವ ಮತ್ತು ಸಾಮಾನ್ಯ ನಾಗರಿಕರಿಗೆ ಸುಲಭಸಾಧ್ಯವಾಗುವಂತೆ ಮಾಡುವುದು.

ಅನುಷ್ಠಾನ:

  • ಕಾರ್ಯಸಾಧ್ಯತಾ ಅಂತರ ನಿಧಿ (VGF):- ಕೈಗೆಟುಕುವ ದರಗಳನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ನೆರವು.
  • ವಿಮಾನ ಪ್ರಯಾಣ ದರದ ಮಿತಿ:- ಪ್ರಯಾಣದ ವೆಚ್ಚವನ್ನು ಕೈಗೆಟುಕುವಂತೆ ಮಾಡುವುದು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts