ಕರಡು ಶ್ರಮ ಶಕ್ತಿ ನೀತಿ, 2025
ಸಾಮಾನ್ಯ ಅಧ್ಯಾಯನ 2/ ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಭಾರತದ ಕಾರ್ಮಿಕ ಸ್ವರೂಪವನ್ನು ಮರುರೂಪಿಸುವ ಗುರಿಯನ್ನು ಹೊಂದಿರುವ ಶ್ರಮ ಶಕ್ತಿ ನೀತಿ 2025 ಎಂಬ ಕರಡು ರಾಷ್ಟ್ರೀಯ ಕಾರ್ಮಿಕ ಮತ್ತು ಉದ್ಯೋಗ ನೀತಿಯನ್ನು ಅನಾವರಣಗೊಳಿಸಿದೆ.
ಶ್ರಮ ಶಕ್ತಿ ನೀತಿ 2025 ಅಥವಾ ರಾಷ್ಟ್ರೀಯ ಕಾರ್ಮಿಕ ಮತ್ತು ಉದ್ಯೋಗ ನೀತಿಯ ಬಗ್ಗೆ:
- ಉದ್ದೇಶ: – ಪ್ರತಿಯೊಬ್ಬ ಕೆಲಸಗಾರನಿಗೂ ಘನತೆ, ರಕ್ಷಣೆ ಮತ್ತು ಅವಕಾಶವನ್ನು ಖಾತ್ರಿಪಡಿಸುವ, ಎಲ್ಲರನ್ನೂ ಒಳಗೊಳ್ಳುವ, ಸಮಾನ ಮತ್ತು ಸ್ಥಿತಿಸ್ಥಾಪಕತ್ವದ ಕಾರ್ಮಿಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಈ ನೀತಿಯ ಪ್ರಮುಖ ಲಕ್ಷಣಗಳು:
- ಸಾರ್ವತ್ರಿಕ ಮತ್ತು ಸುಲಭವಾಗಿ ಸಾಗಿಸಬಹುದಾದ ಸಾಮಾಜಿಕ ಭದ್ರತೆ: ನೀತಿಯು ಎಲ್ಲಾ ಕಾರ್ಮಿಕರಿಗೆ ಸಾರ್ವತ್ರಿಕ ಮತ್ತು ಸುಲಭವಾಗಿ ಸಾಗಿಸಬಹುದಾದ ಸಾಮಾಜಿಕ ಭದ್ರತೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
- ಇದು ಪ್ರಮುಖ ಕಲ್ಯಾಣ ಮತ್ತು ವಿಮಾ ವ್ಯವಸ್ಥೆಗಳನ್ನು ಸಂಯೋಜಿಸುವ ಮೂಲಕ “ಸಾರ್ವತ್ರಿಕ ಸಾಮಾಜಿಕ ಭದ್ರತಾ ಖಾತೆ” (USSA) ರಚನೆಯನ್ನು ಉದ್ದೇಶಿಸಿದೆ ಅವು ಯಾವವೆಂದರೆ:
- ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)
- ನೌಕರರ ರಾಜ್ಯ ವಿಮಾ ನಿಗಮ (ESIC)
- ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY)
- ಇ-ಶ್ರಮ್ ಪೋರ್ಟಲ್
- ರಾಜ್ಯ ಕಲ್ಯಾಣ ಮಂಡಳಿಗಳು.
- ಕೌಶಲ್ಯ ಮತ್ತು ಉದ್ಯೋಗ: – ಈ ನೀತಿಯು ಕೌಶಲ್ಯ ಭಾರತ, ರಾಷ್ಟ್ರೀಯ ಶಿಷ್ಯವೃತ್ತಿ ಉತ್ತೇಜನ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಂತಹ ಕಾರ್ಯಕ್ರಮಗಳ ಸಹಾಯದಿಂದ ಕೌಶಲ್ಯ-ಉದ್ಯೋಗ ಸೃಷ್ಟಿಯನ್ನು ಕಲ್ಪಿಸುತ್ತದೆ.
- ಭಾರತದ ಪಟ್ಟಣಗಳು, ನಗರಗಳು ಮತ್ತು ಎಂ ಎಸ್ ಎಂ ಈ ಸಮೂಹಗಳಾದ್ಯಂತ ಪ್ರತಿಭೆಗಳನ್ನು ಅವಕಾಶದೊಂದಿಗೆ ಸಂಪರ್ಕಿಸಲು ವಿನ್ಯಾಸಗೊಳಿಸಲಾದ ಡಿಜಿಟಲ್ ಆಗಿ ವರ್ಧಿತ “ರಾಷ್ಟ್ರೀಯ ವೃತ್ತಿ ಸೇವೆ-ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ” (NCS-DPI) ಇವುಗಳನ್ನು ಬೆಂಬಲಿಸುತ್ತದೆ.
- ಸಚಿವಾಲಯ: – ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ರಾಷ್ಟ್ರೀಯ ಉದ್ಯೋಗ ಸುಗಮಕಾರ ಮತ್ತು ನಿಯಂತ್ರಕನಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದ್ದು, ಕಾರ್ಮಿಕರು, ಉದ್ಯೋಗದಾತರು ಮತ್ತು ತರಬೇತಿ ಸಂಸ್ಥೆಗಳಲ್ಲಿ ಒಗ್ಗೂಡಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ.
ಆಕ್ರಮಣಕಾರಿ ವಿದೇಶಿ ಪ್ರಭೇದಗಳು (IAS)
ಸಾಮಾನ್ಯ ಅಧ್ಯಾಯನ 3/ಪರಿಸರ ವ್ಯವಸ್ಥೆ
ಇದೀಗ ಸುದ್ದಿಯಲ್ಲಿದೆ:
- ಆಕ್ರಮಣಕಾರಿ ವಿದೇಶಿ ಪ್ರಭೇದಗಳು ಭಾರತದಲ್ಲಿನ ಸ್ಥಳೀಯ ಜೀವವೈವಿಧ್ಯ ಮತ್ತು ಆವಾಸಸ್ಥಾನಗಳನ್ನು ನಾಶಪಡಿಸುತ್ತಿವೆ ಎಂದು ಸಂರಕ್ಷಣಾ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಆಕ್ರಮಣಕಾರಿ ವಿದೇಶಿ ಪ್ರಭೇದಗಳ ಬಗ್ಗೆ:
- ವ್ಯಾಖ್ಯಾನ: ಅವು ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಪರಿಚಯಿಸಲಾದ ಸ್ಥಳೀಯವಲ್ಲದ ಜೀವಿಗಳಾಗಿವೆ (ಉದಾ. ಅಲಂಕಾರಿಕ ಮೀನುಗಳು, ಅಲಂಕಾರಿಕ ಸಸ್ಯಗಳು, ಅಥವಾ ಭೂ ಪುನಃಸ್ಥಾಪನೆಗಾಗಿ).
- ಅವು ಹೆಚ್ಚಾಗಿ ವೇಗವಾಗಿ ಹರಡುತ್ತವೆ, ಸ್ಥಳೀಯ ಪ್ರಭೇದಗಳನ್ನು ಹಿಂದಿಕ್ಕುತ್ತವೆ, ಜೀವವೈವಿಧ್ಯತೆಗೆ ಹಾನಿ ಮಾಡುತ್ತವೆ ಮತ್ತು ಆವಾಸಸ್ಥಾನಗಳಿಗೆ ಹಾನಿ ಮಾಡುತ್ತವೆ.
- ಅವು ಅತಿ ವೇಗವಾಗಿ ಹರಡುತ್ತವೆ, ಸ್ಥಳೀಯ ಪ್ರಭೇದಗಳನ್ನು ಹಿಂದಿಕ್ಕುತ್ತವೆ, ಜೀವವೈವಿಧ್ಯತೆಗೆ ಮತ್ತು ಆವಾಸಸ್ಥಾನಗಳಿಗೆ ಹಾನಿ ಮಾಡುತ್ತವೆ.
ಭಾರತದಲ್ಲಿರುವ ಉದಾಹರಣೆಗಳು:
- ಲಂಟಾನ ಕ್ಯಾಮರಾ: -ಕಾಡುಗಳನ್ನು ಆಕ್ರಮಿಸುತ್ತದೆ, ಸ್ಥಳೀಯ ಸಸ್ಯಗಳನ್ನು ಮೀರಿಸುತ್ತದೆ ಮತ್ತು ಪುನರುತ್ಪಾದನೆಯನ್ನು ತಡೆಯುತ್ತದೆ.
- ಪಾರ್ಥೇನಿಯಮ್ ಹಿಸ್ಟರೊಫೋರಸ್ (ಕಾಂಗ್ರೆಸ್ ಹುಲ್ಲು): – ಕೃಷಿಭೂಮಿಯಲ್ಲಿ ಹರಡುತ್ತದೆ ಮತ್ತು ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ.
- ನೀರಹುಲ್ಲು (ಜಲ ಹಯಸಿಂತ್ /ಐಚೋರ್ನಿಯಾ ಕ್ರಾಸಿಪ್ಸ್): – ಸರೋವರಗಳು ಮತ್ತು ನದಿಗಳನ್ನು ಉಸಿರುಗಟ್ಟಿಸುತ್ತದೆ, ಆಮ್ಲಜನಕವನ್ನು ನಾಶ ಮಾಡುತ್ತದೆ ಮತ್ತು ಮೀನುಗಾರಿಕೆಯ ಮೇಲೆ ಪರಿಣಾಮ ಬೀರುತ್ತದೆ.
- ಆಫ್ರಿಕಾದ ಕ್ಯಾಟ್ಫಿಶ್ (ಕ್ಲಾರಿಯಸ್ ಗ್ಯಾರೀಪಿನಸ್): ಸ್ಥಳೀಯ ಮೀನು ಪ್ರಭೇದಗಳನ್ನು ಹಿಂದಿಕ್ಕಿ, ಜಲಚರ ಜೀವವೈವಿಧ್ಯತೆಗೆ ಅಪಾಯವನ್ನುಂಟುಮಾಡುತ್ತದೆ.
ನಿಯಂತ್ರಣ ಮತ್ತು ನಿರ್ವಹಣಾ ಕ್ರಮಗಳು:
- ಆಮದು, ವ್ಯಾಪಾರ ಮತ್ತು ಸಾಗಣೆಯ ಮೇಲೆ ಕಠಿಣ ದಿಗ್ಬಂಧನ ತಪಾಸಣೆಗಳು.
- ಸಮುದ್ರ ಆಕ್ರಮಣಗಳನ್ನು ತಡೆಗಟ್ಟಲು ಹಡಗುಗಳಲ್ಲಿ ನಿಲುಭಾರದ ನೀರಿನ ನಿರ್ವಹಣೆ.
- ಯಾಂತ್ರಿಕ ನಿಯಂತ್ರಣ: ಕೈಯಿಂದ ತೆಗೆಯುವುದು, ಕತ್ತರಿಸುವುದು, ಹೂಳೆತ್ತುವುದು ಅಥವಾ ಬೇರುಸಹಿತ ಕಿತ್ತುಹಾಕುವುದು.
- ರಾಸಾಯನಿಕ ನಿಯಂತ್ರಣ: ಕಳೆನಾಶಕಗಳು ಅಥವಾ ಕೀಟನಾಶಕಗಳ ಬಳಕೆ – ಪರಿಸರ ಹಾನಿಯನ್ನು ತಪ್ಪಿಸಲು ಎಚ್ಚರಿಕೆಯಿಂದ ಅನ್ವಯಿಸಲಾಗುತ್ತದೆ.
ಏಕೀಕೃತ ಪಾವತಿ ಅಂತರಮುಖ (UPI) ಪಾವತಿಗಳಿಗಾಗಿ ಬಯೋಮೆಟ್ರಿಕ್, ಧರಿಸಬಹುದಾದ ಕಣ್ಣನಡಕದ ದೃಢೀಕರಣ
ಸಾಮಾನ್ಯ ಅಧ್ಯಾಯನ 3/ಆರ್ಥಿಕತೆ

ಸಂದರ್ಭ:
- ಜಾಗತಿಕ ಫಿನ್ಟೆಕ್ ಫೆಸ್ಟ್ 2025 ರಲ್ಲಿ ಯುಪಿಐ ವಹಿವಾಟುಗಳಿಗೆ ಬಯೋಮೆಟ್ರಿಕ್ ಮತ್ತು ಧರಿಸಬಹುದಾದ ಕನ್ನಡಕದ ಗುರುತಿಸುವಿಕೆ ಆಧಾರಿತ ದೃಢೀಕರಣವನ್ನು ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾರಂಭಿಸಿದವು.
ಇದರ ಬಗ್ಗೆ:
- ಮುಖ ಮತ್ತು ಜೈವಮಾಪನ (ಬಯೋಮೆಟ್ರಿಕ್) ಗಳ ದೃಢೀಕರಣ: – ಬಳಕೆದಾರರು ಮುಖ ಗುರುತಿಸುವಿಕೆ ಅಥವಾ ಆಧಾರ್ನಲ್ಲಿ ಸಂಗ್ರಹವಾಗಿರುವ ಬಯೋಮೆಟ್ರಿಕ್ಗಳನ್ನು ಬಳಸಿಕೊಂಡು UPI ಪಾವತಿಗಳನ್ನು ದೃಢೀಕರಿಸಬಹುದು.
- ದೃಢೀಕರಣವು ಸಂಪೂರ್ಣವಾಗಿ ಬಳಕೆದಾರರ ಸಾಧನದಲ್ಲಿ ಸಂಭವಿಸುತ್ತದೆ, ಇದು ದತ್ತಾoಶ ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
ಕೈಗಳ ಸಹಾಯವಿಲ್ಲದೆ, ತಂತ್ರಜ್ಞಾನ ಹೊಂದಿದ ಕಣ್ಣಡಕಗಳ ಮೂಲಕ ಪಾವತಿಗಳು:
- ಧರಿಸಬಹುದಾದ ತಂತ್ರಜ್ಞಾನ ಹೊಂದಿದ ಕಣ್ಣಡಕಗಳ ಧ್ವನಿ ಆಜ್ಞೆಗಳನ್ನು ಬಳಸಿಕೊಂಡು ಸಣ್ಣ-ಮೌಲ್ಯದ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತವೆ.
- ಫೋನ್, ಪಿನ್ ಅಥವಾ ಸ್ಪರ್ಶವನ್ನು ಬಳಸದೆಯೇ ಬಳಕೆದಾರರು ಕ್ಯೂರ್ ಸಂಕೇತವನ್ನು ಕ್ಷಿಪ್ರವಾಗಿ ವೀಕ್ಷಿಸಿ ಪಾವತಿಗಳನ್ನು ಪೂರ್ಣಗೊಳಿಸಬಹುದು.
- ಬಹು-ಸಹಿ UPI ಖಾತೆಗಳು: ಜಂಟಿ ಖಾತೆದಾರರು ಸಾಮೂಹಿಕವಾಗಿ ಪಾವತಿಗಳನ್ನು ಅಧಿಕೃತಗೊಳಿಸಲು ಅನುಮತಿಸುತ್ತದೆ.
- ಕುಟುಂಬ ಅಥವಾ ವ್ಯವಹಾರ ಖಾತೆಗಳಿಗೆ ಅನುಕೂಲತೆ, ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಹೆಚ್ಚಿಸುತ್ತದೆ.
ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ದ ಬಗ್ಗೆ:
- ಇದು ಭಾರತದಲ್ಲಿ ಚಿಲ್ಲರೆ ಪಾವತಿಗಳ ಕಾರ್ಯಾಚರಣೆಗೆ ಒಂದು ಛತ್ರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
- ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಬ್ಯಾಂಕುಗಳ ಸಂಘವು ಸ್ಥಾಪಿಸಿದ ಸಂಸ್ಥೆ.
- ಇದನ್ನು ಪಾವತಿ ಮತ್ತು ನಿವಾರಣಾ ವ್ಯವಸ್ಥೆಗಳ ಕಾಯ್ದೆ, 2007 ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ .
ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ದ ಉತ್ಪನ್ನಗಳು:
- ರುಪೇ
- ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಪಟ್ಟೆ (NCMC)
- ಹಣಕ್ಕಾಗಿ ಭಾರತ ಸಂವಾದ ಅಂತರಮುಖ (BHIM)
- ಏಕೀಕೃತ ಪಾವತಿ ಅಂತರಮುಖ (UPI)
- ಭಾರತ ಬಿಲ್ ಪಾವತಿ ವ್ಯವಸ್ಥೆ (BBPS)
ಕೇಂದ್ರ, ರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಸಾರ್ವಜನಿಕ ತನಿಖಾಧಿಕಾರಿ (ಓಂಬುಡ್ಸ್ಮನ್) ಯೋಜನೆಯ ವ್ಯಾಪ್ತಿಗೆ ತರಲಾಗಿದೆ
ಸಾಮಾನ್ಯ ಅಧ್ಯಾಯನ 3/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಕೇಂದ್ರ ಸಹಕಾರಿ ಬ್ಯಾಂಕುಗಳು ಭಾರತೀಯ “ರಿಸರ್ವ್ ಬ್ಯಾಂಕಿನ ಸಂಯೋಜಿತ ಸಾರ್ವಜನಿಕ ತನಿಖಾಧಿಕಾರಿ (ಓಂಬುಡ್ಸ್ಮನ್) ಯೋಜನೆ, 2021” ರ ವ್ಯಾಪ್ತಿಗೆ ತರಲಾಗಿದೆ.
ರಿಸರ್ವ್ ಬ್ಯಾಂಕಿನ ಸಂಯೋಜಿತ ಸಾರ್ವಜನಿಕ ತನಿಖಾಧಿಕಾರಿ (ಓಂಬುಡ್ಸ್ಮನ್) ಯೋಜನೆ, 2021 ರ (RB-IOS) ಬಗ್ಗೆ:
- ಇದನ್ನು 2021 ರಲ್ಲಿ ಪ್ರಾರಂಭಿಸಲಾಯಿತು.
- ಉದ್ದೇಶ: – ಗ್ರಾಹಕರಿಗೆ ತ್ವರಿತ, ಪರಿಣಾಮಕಾರಿ ವೆಚ್ಚದ ಮತ್ತು ತ್ವರಿತವಾಗಿ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಒದಗಿಸುವುದು.
- RB-IOS ನ ಅಡಿಯಲ್ಲಿ ಬರುವ ಬ್ಯಾಂಕುಗಳು:
- ಎಲ್ಲಾ ವಾಣಿಜ್ಯ ಬ್ಯಾಂಕುಗಳು,
- ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRB),
- ರಾಜ್ಯ ಸಹಕಾರಿ ಬ್ಯಾಂಕುಗಳು,
- ಕೇಂದ್ರ ಸಹಕಾರಿ ಬ್ಯಾಂಕುಗಳು,
- ₹50 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರ ಠೇವಣಿಯನ್ನು ಹೊಂದಿರುವ ಅನುಸೂಚಿತ/ ನಿಗದಿಪಡಿಸದ ಪ್ರಾಥಮಿಕ (ನಗರ) ಸಹಕಾರಿ ಬ್ಯಾಂಕುಗಳು,
- ₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಚಿರಾಸ್ತಿ ಗಾತ್ರ ಹೊಂದಿರುವ ಠೇವಣಿಗಳನ್ನು ಸ್ವೀಕರಿಸುವ ಅಥವಾ ಗ್ರಾಹಕ ಸಂಪರ್ಕವನ್ನು ಹೊಂದಿರುವ ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು (ವಸತಿ ಹಣಕಾಸು ಕಂಪನಿಗಳನ್ನು ಹೊರತುಪಡಿಸಿ).
- ಮಹತ್ವ:
- ಹಣಕಾಸು ವಲಯದಲ್ಲಿ ಗ್ರಾಹಕ ರಕ್ಷಣೆಯನ್ನು ಬಲಪಡಿಸುತ್ತದೆ.
- ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ (NBFC) ನಂಬಿಕೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.
ಪಿಎಂ-ಕುಸುಮ್ ಕಾರ್ಯಕ್ರಮ
ಸಾಮಾನ್ಯ ಅಧ್ಯಾಯನ 3/ಪರಿಸರ ವ್ಯವಸ್ಥೆ
ಇದೀಗ ಸುದ್ದಿಯಲ್ಲಿದೆ:
ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಮೂಲಕ ಆಫ್ರಿಕಾ ಮತ್ತು ದ್ವೀಪ ರಾಷ್ಟ್ರಗಳಲ್ಲಿ ಪಿಎಂ-ಕುಸುಮ್ (PM-KUSUM) ಅನ್ನು ಉತ್ತೇಜಿಸಲು ಯೋಜಿಸುತ್ತಿದೆ.
ಪಿಎಂ-ಕುಸುಮ್ ಯೋಜನೆಯ ಬಗ್ಗೆ:
- ಇದನ್ನು 2019 ರಲ್ಲಿ ಪ್ರಾರಂಭಿಸಲಾಯಿತು.
- ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಅನುಷ್ಠಾನಗೊಳಿಸುತ್ತದೆ.
- ಗುರಿ: –ಸೌರ ಪಂಪುಗಳು ಮತ್ತು ಜಾಲರಿ-ಸಂಪರ್ಕಿತ ಸೌರ ಸ್ಥಾವರಗಳಂತಹ ಸೌರಶಕ್ತಿ ಚಾಲಿತ ನೀರಾವರಿ ವ್ಯವಸ್ಥೆಗಳನ್ನು ಸ್ಥಾಪಿಸಲು ರೈತರಿಗೆ ಆರ್ಥಿಕ ನೆರವು ನೀಡುವುದು.
- ಮಹತ್ವ: -ಕೃಷಿ ವಲಯಕ್ಕೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸೌರಶಕ್ತಿಯನ್ನು ತಲುಪಿಸುವುದು , ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಡೀಸೆಲ್ ಬಳಕೆಯಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವುದು.
- ಗುರಿ: ಈ ಯೋಜನೆಯು ಮಾರ್ಚ್ 2026 ರ ವೇಳೆಗೆ ಸುಮಾರು 34,800 ಮೆಗಾವ್ಯಾಟ್ ಸೌರಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ .
93ನೇ ವಾಯುಪಡೆ ದಿನ
ಸಾಮಾನ್ಯ ಅಧ್ಯಾಯನ 3/ರಕ್ಷಣಾ ವ್ಯವಸ್ಥೆ
ಸಂದರ್ಭ:
- ಭಾರತೀಯ ವಾಯುಪಡೆ (ಐಎಎಫ್) ಯು ತನ್ನ 93 ನೇ ವಾರ್ಷಿಕೋತ್ಸವವನ್ನು ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಸ೦ಪ್ರದಾಯ ಮೆರವಣಿಗೆಯೊಂದಿಗೆ ಆಚರಿಸಿತು .
ಭಾರತೀಯ ವಾಯುಪಡೆ (IAF) ಯ ಬಗ್ಗೆ:
- ಇದು ಭಾರತೀಯ ಸಶಸ್ತ್ರ ಪಡೆಗಳ ಒಂದು ಭಾಗವಾಗಿದ್ದು, ಅಕ್ಟೋಬರ್ 8, 1932 ರಂದು ಸ್ಥಾಪನೆಯಾಯಿತು.
- ಧ್ಯೇಯ – ಭಾರತದ ವಾಯುಪ್ರದೇಶವನ್ನು ರಕ್ಷಿಸುವುದು ಮತ್ತು ವೈಮಾನಿಕ ಯುದ್ಧವನ್ನು ನಡೆಸುವುದು.
-
- ವಿಶಿಷ್ಟತೆ – ಇದು ವಿಶ್ವದ ನಾಲ್ಕನೇ ಅತಿದೊಡ್ಡ ವಾಯುಪಡೆಯಾಗಿದೆ.
- ಧ್ಯೇಯವಾಕ್ಯ: – “ಆಕಾಶವನ್ನು ವೈಭವದಿಂದ ಸ್ಪರ್ಶಿಸಿ” ಎಂಬುದು ಭಗವದ್ಗೀತೆಯಿಂದ ಪ್ರೇರಿತವಾಗಿದೆ.
- 2025 ರ ವಿಷಯ: – ಆಪರೇಷನ್ ಸಿಂಧೂರ್ಗೆ ಭಾರತೀಯ ವಾಯುಪಡೆ ಕೊಡುಗೆಯ ಮೇಲೆ ಕೇಂದ್ರೀಕೃತವಾಗಿದೆ.



ನಿಮ್ಮದೊಂದು ಉತ್ತರ